ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ › Sampada Blogs › srinivasps ರವರ ಬ್ಲಾಗ್

ಆ ರಾತ್ರಿ...(ನೈಜ ಘಟನೆ ಆಧಾರಿತ ಕಥೆ)

August 7, 2008 - 3:11pm — srinivasps

"ಬೇಡಾ ಅಂದ್ರೆ ಬೇಡ!!! ನಾಳೆ ಬೆಳಗ್ಗೆ ಎದ್ದು ಬಾ ಪರವಾಗಿಲ್ಲ..."
"ಹೋಗಮ್ಮ...ನಿಂದು ಒಂದು ಯಾವಾಗ್ಲೂ ಗೋಳು..."
"ನಾನು ಎಷ್ಟು ಸರತಿ ಹೇಳಿದ್ರೂ ಕೇಳಲ್ಲ...ಅಮ್ಮನ ಮಾತು ನಿಮಗೆಲ್ಲಿ ಪಥ್ಯ? ಏನಾದ್ರೂ ಮಾಡ್ಕೊ ಹೋಗು"
ಫೊನ್ ಕುಕ್ಕಿದರು ಅಮ್ಮ...

"ಯಾಕಮ್ಮ ಯೋಚನೆ ಮಾಡ್ತೀಯ???...ಎಷ್ಟೋ ಸರತಿ ಪುಟ್ಟಿ ಹೀಗೆ ಬರಲ್ವಾ?"
ಎಂದು ಹತ್ತೊಂಬತ್ತು ವರ್ಷದ ರಾಜ ಹೇಳಿದ ಮಾತು ಅಮ್ಮನ ಕಿವಿಗೆ ಬೀಳಲಿಲ್ಲ...

ಅಮ್ಮನ ಮೂಡ್ ಯಾಕೊ ಸರಿ ಇರಲಿಲ್ಲ...ಎಷ್ಟೊ ಸರತಿ ಪುಟ್ಟಿ ಮಧ್ಯ ರಾತ್ರಿ ಬಂದದ್ದುಂಟು...
ಆದರೂ ಅಮ್ಮನಿಗೆ ಯಾಕೋ ಆತಂಕವಾಗಿತ್ತು ಇಂದು...

ಮನಸ್ಸಲ್ಲೇ ಕೊರಗಿದರು ಅಮ್ಮ
"ಇವರಿಗೇನು ಗೊತ್ತಾಗತ್ತೆ...ಹುಡುಗ್ ಬುದ್ದಿ! ಕಾಲ ಸರಿ ಇಲ್ಲ...ದೇವರು ಇವರಿಗೆ ಯಾವಾಗ ಬುದ್ಧಿ ಕೊಡ್ತಾನೋ???"

***

"ಛೆ! ಅಮ್ಮನ ಮಾತು ಕೇಳಬೇಕಿತ್ತು! ಇವತ್ತು ಯಾಕೋ ಅಮ್ಮ ಸ್ವಲ್ಪ ಜಾಸ್ತಿನೇ ಗಲಾಟೆ ಮಾಡಿದ್ರು...
ಆಫೀಸ್ನಿಂದ ಸ್ವಲ್ಪ ಬೇಗ ಹೊರಡಬೇಕಿತ್ತು...ಇಲ್ಲ ಅಮ್ಮ ಹೇಳಿದ್ ಹಾಗೆ ಬೆಳಗ್ಗೆ ಎದ್ದು ಮನೆಗೆ ಹೋಗಬೇಕಿತ್ತು!
ಎಲ್ಲಿ ಬಂದು ಸಿಕ್ಕಿ ಹಾಕಿ ಕೊಂಡಿದ್ದೀನಿ ನಾನು!"...ಸುತ್ತ ಕಣ್ಣು ಹಾಯಿಸಿದಳು ಪುಟ್ಟಿ...
ಹತ್ತಿರ ಯಾರು ಕಣ್ಣಿಗೆ ಬೀಳಲಿಲ್ಲ...

ನಡು ರಾತ್ರಿ ಆಫೀಸಿಂದ ಹೊರಟಿದ್ದಳು ಪುಟ್ಟಿ...
ಸಮಯ ೨.೩೦ ಆಗಿತ್ತು...ಎಂದೂ ಇಲ್ಲದ್ದು ಇಂದು ಕೆಂಪೇಗೌಡ ರಸ್ತೆಯಲ್ಲೂ ಇಂದು ಯಾರೂ ಕಾಣುತ್ತಿಲ್ಲ..!

"ಛೇ! ಗಾಡಿ ಇಲ್ಲೇ ಕೆಡಬೇಕಾ?" ಮನಸಲ್ಲೇ ಶಪಿಸಿದಳು ಪುಟ್ಟಿ...
ಪುಟ್ಟಿ ಆ ರೀತಿ ಶಪಿಸಲು ಕಾರಣವಿತ್ತು...
ಹೇಳಿ ಕೇಳಿ ಅದು ಕಾರ್ಪೊರೇಶನ್ ಜಾಗ! ನಿರ್ಜನ ಪ್ರದೇಶ ಅನ್ನುವದಕ್ಕೆ ಆಗುವುದೇ ಇಲ್ಲ...
ಆದ್ರೆ ಕ್ಯಾಬ್ ಕೆಟ್ಟ ಜಾಗದಲ್ಲಿ ಯಾರೂ ಕಾಣುತ್ತಿರಲಿಲ್ಲ!

ಇನ್ನು ಒಂದು ಫ಼ರ್ಲಾಂಗ್ ಮುಂಚೆಯಾಗಿದ್ದರೆ ಅಲಸೂರು ಗೇಟ್ ಪೋಲೀಸ್ ಸ್ಟೇಶನ್ ಇದೆ!
ಇನ್ನೆರಡು ಫ಼ರ್ಲಾಂಗ್ ಆ ಕಡೆ ಮೈಸೂರು ಬ್ಯಾಂಕ್! ಅಲ್ಲಿ ಹತ್ತಿರ ಹೆಚ್ಚು ಜನರಿರುತ್ತಾರೆ...
ಎರಡರ ಮಧ್ಯೆ ವಿಶಾಲ ರಸ್ತೆಯಲ್ಲಿ ಕಾರು ಕೆಟ್ಟು ನಿಂತಿತ್ತು!

ಪುಟ್ಟಿ ಅಂದಿನ ದಿನದ ಬಗ್ಗೆ ಮೆಲಕು ಹಾಕಿದಳು...

ಪುಟ್ಟಿಗೆ ಅಂದಿನ ದಿನವೇ ಕೆಟ್ಟದಾಗಿತ್ತು...
ಬೆಳಗ್ಗೆಯಿಂದ ಮಾಡಿದ ಕೆಲಸವೆಲ್ಲ ತಪ್ಪಾಗಿತ್ತು...ಇದನ್ನು ತಿಳಿದ ಮಾನೇಜರ್ ಹರಿಹಾಯ್ದಿದ್ದ...
ಮಾರನೇಯ ದಿನವೇ ಮಾನೇಜರ್ ಕ್ಲೈಂಟ್'ಗೆ ಡೆಮೋ ತೋರಿಸಬೇಕು ಅಂತ ಪುಟ್ಟಿಯ ತಲೆ ಮೇಲೆ ಕೂತಿದ್ದ!
ಪಾಪ ಪುಟ್ಟಿ! ತಪ್ಪನ್ನೆಲ್ಲ ಸರಿ ಪಡಿಸಲು ಆಫೀಸಿನಲ್ಲೆ ರಾತ್ರಿಯೇ ಕೂತಿದ್ದಳು!
ಮನೆಗೆ ಹೊರಡಲು ಕ್ಯಾಬ್ ಬಾಗಿಲು ತೆರೆದಾಗ
"ಬನ್ನಿ ಮೇಡಮ್!" ಅಂತ ಎಂದಿಗಿಂತ ಹೆಚ್ಚಿಗೆ ಅಕ್ಕರೆಯಿಂದ ಕರೆದಿದ್ದ ಆ ಕ್ಯಾಬ್ ಡ್ರೈವರ್!
ಆ ಕ್ಯಾಬ್ ಡ್ರೈವರ್ ಕರಿಯನನ್ನು ಕಂಡರೆ ಪುಟ್ಟಿಗೆ ಆಗದು ...
ಅವನ ಗಡಸು ಧ್ವನಿ, ದಪ್ಪ ಮೀಸೆ, ಓಮ್ ಪುರಿ ಕೆನ್ನೆ ಯಾವುದೂ ಹಿಡಿಸುವುದಿಲ್ಲ...
"ಥಥ್! ಇಂದು ಇವನೇ ಬರಬೇಕೆ!" ಎನ್ನುತ್ತಾ ಕಾರಿನಲ್ಲಿ ಕುಳಿತಿದ್ದಳು ಪುಟ್ಟಿ...
ದಾರಿಯಲ್ಲಿ ಬರುವಾಗ ಕಾರ್ಪೊರ್‍ಏಶನ್ ಬಳಿ ಕಾರಿನ ಗ್ಯಾಸ್ ಖಾಲಿ ಆಗಿದೆ...

"ಮೇಡಮ್! ನನ್ ಕಂಪನೀದೇ ಇನ್ನೊಂದ್ ಕ್ಯಾಬಿದೇ ಈ ಕಡೇನೇ ಹೋಗ್ತಾ ಇದ್ಯಂತೆ...
ಒಂದ್ ಐದು ನಿಮಿಷ ಅಷ್ಟೇ ಸಿಲಿಂಡರ್ ಬರತ್ತೆ! ಪ್ಲೀಸ್ ವೈಟ್ ಮಾಡಿ"

ಹಾಗೆ ಆ ಕರಿಯ ಹೇಳಿ ಸುಮಾರು ಹದಿನೈದು ನಿಮಿಷಕ್ಕೂ ಮೇಲಾಗಿತ್ತು...
ಅಮ್ಮನ ಬೈಗುಳ ಮತ್ತೆ ಜ್ಞಾಪಕಕ್ಕೆ ಬಂತು...

ಕರಿಯ ಫೋನ್ ಮಾಡುವಾಗ ಗಮನಿಸಿದ್ದಳು ಪುಟ್ಟಿ...
ಅವನು ಮಾತಾಡುವುದು ಏನೂ ಅರ್ಥ ಆಗಲಿಲ್ಲ...ತುಳುವೋ ಕೊಂಕಣಿಯೋ ಇರಬೇಕು...
ನಗ್ತಾ ನಗ್ತಾ ಮಾತಾಡುತ್ತಿದ್ದ ಆ ಕಡೆಯವನ ಜೊತೆ...

"ಸಿಲಿಂಡರ್ ಖಾಲಿ ಆದ್ರೆ ನಗೋದು ಏನಿದೆ???"
ಮನಸ್ಸಲ್ಲೇ ರೇಗಿದಳು ಪುಟ್ಟಿ...

ಎರಡು ದಿನದ ಹಿಂದೆಯಷ್ಟೇ ಪ್ರತಿಭಾ ಎಂಬ ಕಾಲ್ ಸೆಂಟರ್ ಹುಡುಗಿಯ ಪ್ರಕರಣ ನಡೆದಿತ್ತು...!
ಎಂದೂ ಭಯಪಡದ ಪುಟ್ಟಿಯ ಮನಸಲ್ಲೂ ಈ ಯೋಚನೆ ಹಾಯದಿರಲಿಲ್ಲ...
ಮತ್ತೊಮ್ಮೆ ನೋಡಿದಳು ಡ್ರೈವರ್ ಕಡೆಗೆ...ಅವನು ನಸು ನಕ್ಕ "ಇನ್ನೇನ್ ಬರತ್ತೆ ಮೇಡಮ್!"...
ಅವನ ಆ ನಗೆ ಪುಟ್ಟಿಗೆ ಹಿಡಿಸದು...
"ಕಾರಿನಲ್ಲಿ ಇನ್ನೋಂದು ಸಿಲಿಂಡರ್ ಇದ್ದಂತಿತ್ತು...ಈ ಕರಿಯ ಸುಳ್ಳು ಹೇಳುತ್ತಿದ್ದಾನಾ?"
"ಯಾರಿಗೋ ಫೋನ್ ಮಾಡಿ ನಗ್ ನಗ್ತಾ ಮಾತಾಡ್'ದ! ಈಡಿಯಟ್!"

ಪ್ರತಿಭಾ ಬಗ್ಗೆ ಯೋಚಿಸುತ್ತ ಪುಟ್ಟಿಗೆ ಸ್ವಲ್ಪ ದಿಗಿಲೇ ಆಯಿತು...
ತಮ್ಮ ಆ ಪ್ರಕರಣವಾದ ಮಾರನೇ ದಿನವೇ ಹೇಳಿದ್ದ...ಖಾರದ ಪುಡಿ ಪರ್ಸ್'ನಲ್ಲಿ ಇಟ್ಟುಕೋ ಎಂದು...
ಇಟ್ಟುಕೊಂಡಿಲ್ಲ!.."ಇವತ್ತು ಪಾರಾದರೆ ನಾಳೆಯಿಂದ ತಪ್ಪದೇ ಇಡಬೇಕು..."
ಕರ್ಮಕ್ಕೆ ಮೊಬೈಲ್ ಬ್ಯಾಟರೀ ಬೇರೆ ಮುಗಿದಿತ್ತು, ತಮ್ಮನನ್ನು ಗಾಡಿಯಲ್ಲಿ ಬರಹೇಳಲೂ ಆಗುವುದಿಲ್ಲ!
ಪುಟ್ಟಿ ಸಮಯಕ್ಕೆ ಚಾರ್ಜ್ ಮಾಡುವುದಿಲ್ಲವೆಂದು ಯಾವಾಗಲೂ ಬಯ್ಸಿಕೊಳ್ಳುವವಳೇ!
ಇಂದು ಈ ರೀತಿ ಕೈ ಕೊಟ್ಟಿತ್ತು...!
ಸುತ್ತಲೂ ಒಂದು ಕಾಯಿನ್ ಬೂತ್ ಕೂಡ ಕಾಣಲಿಲ್ಲ...!

ಮತ್ತೊಮ್ಮೆ ಸುತ್ತ ನೋಡಿದಳು ಪುಟ್ಟಿ...ಸುಮಾರು ದೂರದಲ್ಲಿ ಯಾರೋ ಮುಸುಕು ಹೊದ್ದಂತೆ ಕಂಡಿತು...
ಏನಾದ್ರೂ ಹೆಚ್ಚು ಕಡಿಮೆ ಆದ್ರೆ ಅವನನ್ನ ಸಹಾಯಕ್ಕೆ ಕರೆಯಬಹುದೇ ಎಂಬ ಯೋಚನೆ ಪುಟ್ಟಿಯ ಮನಸಲ್ಲಿ ಹರಿಯಿತು...
ಅಷ್ಟರಲ್ಲೆ ಪಕ್ಕದ ಮೈದಾನದ ಕಾಂಪೌಂಡ್ ಮೇಲಿಂದ ಒಂದು ನಾಯಿ ಎಗರಿತು...
ಇದನ್ನು ನಿರೀಕ್ಷಿಸದ ಪುಟ್ಟಿ ಥರಗುಟ್ಟಿದಳು!

ಕೊನೆಗೂ ಇನ್ನೊಂದು ಕ್ಯಾಬ್ ಬಂತು...ಮತ್ತೆ ಅರ್ಥವಾಗದ ಭಾಷೆಯಲ್ಲಿ ಮಾತಾಡುತ್ತಿದ್ದರೆ!
ಇಬ್ಬರೂ ನಗುತ್ತಿದ್ದಾರೆ...! ಸಿಲಿಂಡರ್ ಅಳವಡಿಸಿದ್ದಾಯಿತು...
"ಬನ್ನಿ ಮೇಡಮ್ ಆಗ್ಲೆ ತುಂಬಾ ಲೇಟ್ ಆಗಿದೆ" ಅಂತ ಕರೆದ...
ನಮ್ಮ ಕ್ಯಾಬ್ ಹೊರಟಿತು...ಇನ್ನು ಹೊರಟು ಸ್ವಲ್ಪ ದೂರವೂ ಹೊಗಿರಲಿಲ್ಲ!
ಮತ್ತೆ ಕಾರನ್ನು ಪಕ್ಕಕ್ಕೆ ನಿಲ್ಲಿಸಿದ ಕರಿಯ!
"ಮತ್ತೆ ಏನಾಯ್ತು???" "ಥೂ! ಕ್ಲಚ್ ವೈರ್ ಕಟ್ ಆಯ್ತು ಅಂತ ಕಾಣತ್ತೆ - ಯಾಕೊ ಟೈಮ್ ಸರಿ ಇಲ್ಲ"
ಮತ್ತೆ ಕರೆ ಮಾಡಿದ, ಮತ್ತದೇ ಭಾಷೆ!
ಹೆಚ್ಚು ದೂರ ಹೋಗಿರಲಿಲ್ಲವಾದ್ದರಿಂದ, ಇನ್ನೊಬ್ಬ ಡ್ರೈವರ್ ಎರಡು ನಿಮಿಷದಲ್ಲೇ ಬಂದ...
"ಮೇಡಮ್! ಒಂದು ಕೆಲಸ ಮಾಡೋಣ...ನಾವು ನನ್ ಫ್ರೆಂಡ್ ಕಾರಲ್ಲೇ ನಿಮ್ಮನ್ನ ಡ್ರಾಪ್ ಮಾಡಿ ಮತ್ತೆ ಬಂದು ರಿಪೇರಿ ಮಾಡ್ತೀವಿ"
ಇದನ್ನು ಕೇಳುತ್ತಿದ್ದಂತೆ ಪುಟ್ಟಿಯ ಮೈ ತುಸು ಕಂಪಿಸಿತು!

ಏನು ಮಾಡುವುದು ಎಂದು ತಿಳಿಯಲಿಲ್ಲ...ಬೇರೆ ದಾರಿ ತೋಚಲಿಲ್ಲ...
ಒಂದು ಕಡೆ ಭಯ...ಇನ್ನೊಂದು ಕಡೆ ಮೊಂಡು ಧೈರ್ಯ ಏನು ಆಗುವುದಿಲ್ಲ ಎಂದು...
"ಆಗಲಿ ಏನಾಗುವುದೋ ನೋಡೇ ಬಿಡೋಣ! ಕೃಷ್ಣ ಎಂದೂ ಕೈ ಬಿಡುವಿದಿಲ್ಲ ನನ್ನನ್ನು ಕಾಯುತ್ತಾನೆ" ಎಂದು ಹೊರಟಳು...

ಮತ್ತೊಂದು ಕ್ಯಾಬ್'ನಲ್ಲಿ ಅವರಿಬ್ಬರು ಮತ್ತು ಪುಟ್ಟಿ...ಏನಾಗುವುದೋ ಎಂಬ ಹಿಂಜರಿಕೆಯಲ್ಲೆ ಹಿಂದೆ ಕುಳಿತಳು ಪುಟ್ಟಿ!
ಅವರಿಬ್ಬರೂ ಮುಂದಿನ ಸೀಟಿನಲ್ಲಿ ಕುಳಿತಿದ್ದಾರೆ...
ಹಿಂದೆ ಕುಳಿತು ಕಾರು ಹೊರಟ ಮೇಲೆ ಪುಟ್ಟಿಯ ಗಮನಕ್ಕೆ ಬಂದದ್ದು...
ಈ ಕಾರಿನಲ್ಲಿ ಸೆಂಟ್ರಲ್ ಲಾಕ್ ಇದೆ! ನನ್ನನ್ನು ಹೆಚ್ಚು ಕಡಿಮೆ ಇವರು ತಮ್ಮ ಬಲೆಗೆ ಹಾಕಿಕೊಂಡಿದ್ದಾರೆ...

"ಹೀಗೆ ಇವರ ಜೊತೆ ಬರಲು ಒಪ್ಪಲೇ ಬಾರದಿತ್ತು...ಛೇ! ಆ ಕರಿಯನದೂ ಬರೀ ನಾಟಕ...ಸಿಲಿಂಡರ್ ಇದ್ದಂತಿತ್ತು...ಆಮೇಲೆ ಅವನು ಬಂದಮೇಲೆ ಕ್ಲಚ್ ನಾಟಕ!" ಎದೆ ಢವಗುಟ್ಟಿತು!

"ಮೆಲ್ಲನೆ ಕಾರಿನಿಂದ ಜಿಗಿಯಲೇ?" ನಡು ರಾತ್ರಿಯಲ್ಲಿ ಕಾರು ತುಂಬಾ ವೇಗದಿಂದ ಹೋಗುತ್ತಿದ್ದರಿಂದ ಆ ಯೋಚನೆ ಥಟ್ಟನೇ ಬಿಟ್ಟಳು ಪುಟ್ಟಿ...
ಆದರು ಮೆಲ್ಲನೆ ಲಾಕ್ ತೆಗೆಯುವ ಪ್ರಯತ್ನ ಮಾಡೋಣ ಎಂದೆನಿಸಿ ಪ್ರಯತ್ನಿಸಿದಾಗ ತಿಳಿಯಿತು ಇದಕ್ಕೆ ಚೈಲ್ಡ್ ಲಾಕ್ ಮಾಡಿದ್ದಾರೆ ಎಂದು!
ತನ್ನ ಸ್ಥಿತಿ-ಅಸಹಾಯಕತೆ ತಿಳಿದ ಪುಟ್ಟಿಯ ಕಣ್ಣುಗಳು ನೀರೂರಿದವು...

ಕಾರ್ ರೊಯ್ಯನೆ ಹೋಗುತ್ತಿತ್ತು...ಅವರಿಬ್ಬರು ಅವರ ಪಾಟಿಗೆ ಮಾತನಾಡುತ್ತಿದ್ದರು...
ಜೋರಾಗಿ ನಗುತ್ತಿದ್ದರು...
ಪುಟ್ಟಿ ಊರಗಲ ಕಣ್ಣ ಬಿಟ್ಟು ಗಮನಿಸುತ್ತಿದ್ದಳು ಎಲ್ಲಿ ಬೇರೆ ಕಡೆಗೆ ಕರೆದೊಯ್ಯುವರೋ!
ಮನಸಿನಲ್ಲಿ ನೂರಾರು ಯೋಚನೆಗಳು...
"ಇವರಿಬ್ಬರೂ ಎನಾದರೂ ಮಾಡಿದರೆ ಏನು ಮಾಡುವುದು?ಕಿರುಚಬೇಕೆ? ನನ್ನ ಬಳಿ ಚಾಕು ಅಥವಾ ಯಾವುದೇ ಆಯುಧ ಇಲ್ಲ? ಎನು ಮಾಡುವುದು?
ಪರ್ಸ್ ಬಿಟ್ಟರೆ ಏನು ಇಲ್ಲ...ಇವರಿಬ್ಬರೂ ಧಾಂಡಿಗರಂತಿದ್ದಾರೆ!"

ಅಷ್ಟರಲ್ಲೆ ಕಾರು ಗಕ್ಕನೆ ನಿಂತಿತು...
ಯೋಚನೆಗಳಲ್ಲಿ ಮುಳುಗಿದ್ದ ಪುಟ್ಟಿಯನ್ನು ಎಚ್ಚರಿಸಿತು ಅದೇ ಗಡಸು ಧ್ವನಿ
"ಇಲ್ಲಿ ಸೈನ್ ಮಾಡಿ ಮೇಡಮ್! ತುಂಬಾ ಸಾರಿ! ನಿಮಗೆ ತುಂಬಾ ಕಷ್ಟ ಆಯ್ತು"
ಪುಟ್ಟಿ ಕಿಟಕಿ ಆಚೆ ನೋಡಿದಳು...ಅರೆ! ಮನೆ ಬಂದಿದೆ!
ಅಷ್ಟರಲ್ಲೆ ಕಾರ್ ಶಬ್ದ ಕೇಳಿ ಅಮ್ಮ, ತಮ್ಮ ಹೊರಬಂದರು!
ಡ್ರೈವರ್ ಹೇಳುತ್ತಿದ್ದ..."ಇಷ್ಟು ಕಷ್ಟ ಆದ್ರು ಈ ಅವಾಂತರದಿಂದ ಒಂದ್ ಉಪಯೋಗ ಆಯ್ತು ಮೇಡಮ್!
ನೋಡಿ...ಇವನು ನನ್ ಚಡ್ಡಿ ದೋಸ್ತ್! ಇದೇ ಊರಲ್ಲಿದ್ರೂ ಇಬ್ರೂ ಡ್ರೈವಿಂಗ್ ಕೆಲಸದಲ್ಲಿದ್ರೂ ೫ ವರ್ಷದಿಂದ ಸಿಕ್ಕಿರಲಿಲ್ಲ!
ನಿಮ್ಮಿಂದ ಭೇಟಿ ಮಾಡಿದ ಹಾಗಾಯ್ತು - ಥ್ಯಾಂಕ್ಸ್ ಮೇಡಮ್! ಗೂಡ್ ನೈಟ್!"

ಇಳಿದ ಪುಟ್ಟಿ ಮನೆ ಒಳಗೆ ಓಡಿದಳು...
"ನಿನ್ ಫೋನ್ ಬ್ಯಾಟರಿ ಕೆಟ್ಟು ಹೋದರೆ ಏನಾಯ್ತು, ಡ್ರೈವರ್ ಫೋನ್ ತೊಗೊಂಡ್ ಒಂದ್ ಫೋನ್ ಮಾಡಕ್ಕೆ ಆಗ್ತ ಇರಲಿಲ್ವ? ಅಮ್ಮ ಪಾಪ ಎಷ್ಟು ಒದ್ದಾಡಿಬಿಟ್ಟರು ಗೊತ್ತಾ??? ಈಗ ಸರಿಯಾಗಿ ಬೈಸ್ಕೊಳಕ್ಕೆ ರೆಡಿ ಆಗಿರು" ಅಂತ ತಮ್ಮ ಹೇಳಿದಾಗಲೆ ಪುಟ್ಟಿಗೆ ಹೊಳೆದಿದ್ದು ಹಾಗೆ ಕರೆ ಮಾಡಬಹುದಿತ್ತೆಂದು...!!
"ಅಮ್ಮ ಎಷ್ಟೆ ಬಯ್ಯಲಿ ಪರವಾಗಿಲ್ಲ! ಬದುಕಿದೆಯಾ ಬಡ ಜೀವ!" ಎಂದು ನೆಮ್ಮದಿಯಿಂದ ಮುಖ ತೊಳೆದಲು ಪುಟ್ಟಿ...

--ಶ್ರೀನಿವಾಸ ಪ. ಶೇ.

  • ಕಥೆ
  • ನೈಜ ಘಟನೆ
~.~
  • srinivasps ರವರ ಬ್ಲಾಗ್
  • Login or register to post comments
  • 441 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 7, 2008 - 3:34pm — Sunil Jayaprakash

ಉ: ಆ ರಾತ್ರಿ...(ನೈಜ ಘಟನೆ ಆಧಾರಿತ ಕಥೆ)

Sunil Jayaprakash's picture

ಶ್ರೀನಿವಾಸ ಪ.ಶೇ. ಒಳ್ಳೆಯ ವಿಷಯ ಆಯ್ಕೆ ಮಾಡಿಕೊಂಡಿದ್ದೀರಿ. ಇದರ ಬಗ್ಗೆ ತಿಳಿವಳಿಕೆ ಹೆಚ್ಚಬೇಕು, ಜಾಗೃತಿ ಮೂಡಬೇಕು. ನಮ್ಮ ಕಂಪನಿಯಲ್ಲಿ, ಹೆಣ್-ಕಲಿಗಳಿಗೆ ಪೆಪ್ಪರ್ ಸ್ಪ್ರೇ ಕೊಟ್ಟಿದ್ದಾರೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 7, 2008 - 5:00pm — srinivasps

ಉ: ಆ ರಾತ್ರಿ...(ನೈಜ ಘಟನೆ ಆಧಾರಿತ ಕಥೆ)

srinivasps's picture

ಧನ್ಯವಾದಗಳು ಸುನೀಲ್!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 7, 2008 - 3:46pm — anil.ramesh

ಉ: ಆ ರಾತ್ರಿ...(ನೈಜ ಘಟನೆ ಆಧಾರಿತ ಕಥೆ)

anil.ramesh's picture

ಶ್ರೀನಿವಾಸ್ ಅವರೆ,
ಚೆನ್ನಾಗಿದೆ... ಒಳ್ಳೇ ವಿಷಯ ಆಯ್ಕೆ ಮಾಡಿಕೊಂಡಿದ್ದೀರಿ...
ಸಕ್ಕತ್ ಥ್ರಿಲ್ಲಿಂಗ್ ಆಗಿದೆ... ಕೊನೆ ಕ್ಷಣದವರೆಗೂ ಪುಟ್ಟಿಗೆ ಎನಾಗುತ್ತೋ ಎಂಬ ಆತಂಕ ಇತ್ತು...
ಪ್ರತಿಭಾ ಘಟನೆ ಆದಮೇಲೆ ನಮ್ಮ ಆಫೀಸ್ ನಲ್ಲಿ ಕೆಲಸ ಮಾಡುವ ಹೆಣ್ಣು ಮಕ್ಕಳನ್ನು ಸಂಜೆ ೬ ಘಂಟೆ ಆಗುತ್ತಿದ್ದಂತೆಯೇ ಮನೆಗೆ ಕಳಿಸಿಬಿಡುತ್ತೇವೆ...

ಅನಿಲ್ ರಮೇಶ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 7, 2008 - 5:01pm — srinivasps

ಉ: ಆ ರಾತ್ರಿ...(ನೈಜ ಘಟನೆ ಆಧಾರಿತ ಕಥೆ)

srinivasps's picture

ಧನ್ಯವಾದಗಳು ಅನಿಲ್ ರಮೇಶ್ ಅವರೇ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 7, 2008 - 9:56pm — hamsanandi

ಉ: ಆ ರಾತ್ರಿ...(ನೈಜ ಘಟನೆ ಆಧಾರಿತ ಕಥೆ)

hamsanandi's picture

ಶ್ರೀನಿವಾಸರೆ,

ಕಥೆಯನ್ನು ಚೆನ್ನಾಗಿ ಹೇಳಿದ್ದೀರ!

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 8, 2008 - 1:19pm — Arunahmgowda

ಉ: ಆ ರಾತ್ರಿ...(ನೈಜ ಘಟನೆ ಆಧಾರಿತ ಕಥೆ)

Arunahmgowda's picture

ಶ್ರೀನಿವಾಸ್ ರವರೆ,

ನೀವು ಕತೆಯನ್ನು ಹೇಳಿರುವ ರೀತಿ ಕೊನೆಯವರೆಗು ಓದುಗರ ಸ್ಮ್ರುತಿಪಟಲದ ಮೇಲೆ ತನ್ ತಾನಗೆ ಚಿತ್ರಣ ಮೊಡಿಬರುತ್ತದೆ ಮುಂದೇನಾಗುವುದು ಎಂಬ ಆತಂಕದಿಂದ.ಮತ್ತೆ ರಾತ್ರಿಯ ಪಾಳೆಯದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಜಾಗ್ರುತಿ ಮೊಡಿಸಲು ತುಂಬ ಸಹಕಾರಿಯಾಗುತ್ತೆ. ಧನ್ಯವಾದಗಳು ನಿಮ್ಮ ಈ ಬರಹಕ್ಕೆ...!!!

Thanks & Regards,
Aruna Kumara H Mallegowda
“When you want something, the entire world conspires in helping you to achieve it.”

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 8, 2008 - 1:54pm — srinivasps

ಉ: ಆ ರಾತ್ರಿ...(ನೈಜ ಘಟನೆ ಆಧಾರಿತ ಕಥೆ)

srinivasps's picture

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು!
ಸಂಪದ ಬಳಗದ ಆಶೀರ್ವಾದವಿರಲಿ Smiling

--ಶ್ರೀ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪುಟ್ಟಿಯ ಜೊತೆ ಸಂಭಾಷಣೆ
  • ಪುಟ್ಟಾ ಪುಟ್ಟಿ ಜೋಕು
  • ಪುಟ್ಟನ ಪುಟ್ಟಿ Dell Vostro 1500 -> ಪುಟ್ಟನ ಪ್ಯಾಕೆಟ್ ನಲ್ಲಿ
  • ನಕ್ಕುಬಿಡಿ
  • ಕೆಂಪಿಕಣ್ಣು
Syndicate content

ಲೇಖಕರು

srinivasps's picture

ಪೂರ್ಣ ಹೆಸರು
ಶ್ರೀನಿವಾಸ್ .ಪ. ಶೇ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಸಾಂಗರ್, ರಾಜಸ್ಥಾನ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಸ್ನೇಹ ಬ೦ಧನ
  • ಓದಿದ್ದು ಕೇಳಿದ್ದು ನೋಡಿದ್ದು-51 (kann)ADIGA
  • "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
  • ದೊಡ್ಡವರ ದೊಡ್ಡತನ
  • ಕೈ ಕೊಟ್ಟ ಜೆಟ್ ಏರ್
  • ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
  • ಈ ರೀತಿ ನಿಮ್ಮ ಮನೇಲಿ ಆದರೆ ನೀವು ಏನು ಮಾಡ್ತೀರಿ?
  • ನೂರು ಕನ್ನಡಿಗಳ ದೇಗುಲ
  • ಇವತ್ತು ಕೈ ತೊಳೆಯುವ ದಿನವಂತೇ...!!!
  • ನಿಮ್ಮ ಬ್ರೌಸರ್‌ನಲ್ಲಿಯೇ ಬಿಸಿ ಬಿಸಿ ಸುದ್ದಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • mowna
    ಉ: ಕನ್ನಡಿಗ ಅರವಿಂದ ಅಡಿಗಗೆ ಬೂಕರ್ ಗರಿ
    October 16, 2008 - 12:10pm
  • ASHOKKUMAR
    ಉ: ಸೈಕಲ್ ರಿಕ್ಷಾಗೆ ಸೌರಶಕ್ತಿ
    October 16, 2008 - 12:05pm
  • gurubaliga
    ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
    October 16, 2008 - 12:05pm
  • mahesha
    ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
    October 16, 2008 - 12:01pm
  • savithasr
    ಉ: 'ಸಂಪದಿಗ' ಪುಲ್ಲಿಂಗ ಆದರೆ..ಸ್ತ್ರೀಲಿಂಗ ಏನಾಗುತ್ತೆ?
    October 16, 2008 - 12:00pm
  • gurubaliga
    ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
    October 16, 2008 - 11:57am
  • ರಾಮಕುಮಾರ್
    ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
    October 16, 2008 - 11:54am
  • shylaswamy
    ಉ: ನಾನು ಯಾವ ಕಾಲದಲ್ಲಿ ಇದ್ದೇನೆ...!?
    October 16, 2008 - 11:51am
  • savithasr
    ಉ: 'ಸಂಪದಿಗ' ಪುಲ್ಲಿಂಗ ಆದರೆ..ಸ್ತ್ರೀಲಿಂಗ ಏನಾಗುತ್ತೆ?
    October 16, 2008 - 11:51am
  • mahesha
    ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
    October 16, 2008 - 11:48am
ಇನ್ನಷ್ಟು
ಈಗಿನಂತೆ 18 ಸದಸ್ಯರು ಮತ್ತು 171 ಅತಿಥಿಗಳು ಆನ್ಲೈನ್ ಇರುವರು.


ಮೂರಿಟ್ಟರಾರಕ್ಕು | ಆರು ಹನ್ನೆರಡಕ್ಕು |
ಹೇರುವ ಗೊಡ್ಡು ಹಯನಕ್ಕು ಗುರುಕರುಣ |
ತೋರುವ ದಿನಕೆ ಸರ್ವಜ್ಞ

— ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator