ಸೇತುವೆ ಇತ್ತಂತೆ ರಾಮನೇ ಒಡದನಂತೆ....!
ಮೊದಲು ರಾಮ ಇಲ್ಲ ಅಂದ್ರು.... ಆಮೇಲೆ ರಾಮ ಬಂದ...!
ಆಮೇಲೆ ರಾಮ ಇದ್ದ ಸೇತುವೆ ಇಲ್ಲ ಅಂದ್ರು... ಈಗ ನೋಡ್ರಿ ವರಸೆ...
ಸೇತುವೆ ಇತ್ತಂತೆ ರಾಮನೇ ಒಡದನಂತೆ....!
ಅದು ಕಂಬ ರಾಮಾಯಣದಲ್ಲಿ ಬರೆದಿದೆಯಂತೆ...!

- srinivasps ರವರ ಬ್ಲಾಗ್
- Login or register to post comments
- 447 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
ಒಡೆದದ್ದಾದ ಮೇಲೆ ಬೆಲೆ ಇಲ್ಲ ಅಂದ್ರೆ ನಂ ಹಂಪಿಗೂ ಏನು ಬೆಲೆ ಇಲ್ಲಪ್ಪೋ !
ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
ಏನ್ರೀ ಇದು ರಾಮಾಯಣಾ!
ಹ ಹ
ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
ಇಲ್ಲಿ ನೋಡಿ..
http://www.rediff.com/news/2008/jul/23sethu1.htm
ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
ತಮಾಷೆ ಅಂದ್ರೆ ಈಗ ಮಾಯಾ ಬಾಣದ ಬಗ್ಗೆ ಕೂಡ ನಂಬ್ತಾರೆ ಕಾಂಗ್ರೆಸ್ಸ್/ಡಿ ಎಂ ಕೆ ನವರು...!
ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
ಕರುಣಾನಿಧಿ ಮೊದಲೇ ಕ್ರಿಶ್ಚಿಯನ್ನು...ಇನ್ನೇನು ತಾನೆ ಹೇಳಲಿಕ್ಕೆ ಸಾಧ್ಯ....
ನಿಮ್ಮವ,
ಗಿರೀಶ ರಾಜನಾಳ
ಉಡಾಳ ಓಣಿ ಕೆಡಸಿದರ...ಸಂಭಾವಿತ ಊರನ್ನೇ ಕೆಡಸಿದನಂತೆ....!!!
ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
ಕ್ರಿಶ್ಚಿಯನ್ನರು ದೇವರನ್ನ ನಮ್ಬುತ್ತಾರ್ರೀ !
ಡೀ ಎಂ ಕೆ ನವರ ಮೂಲ ಸಿದ್ಧಾಂತ ದೇವರಿಲ್ಲ ಅಂತ...
ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
ಸಿದ್ದಾಂತ ಮಾತ್ರ ದೇವಸ್ಥಾನದವರು ಶಾಲು ಹೊದೆಸಿ ಹಣ ಕೈನಲ್ಲಿ ಇಟ್ಟರೆ ಜೇಬಿಗಿಳಿಸ್ತಾರೆ..
ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
ದೇವಸ್ಥಾನ ಅಲ್ಲ...ಬರಿ ಚರ್ಚ್ ಗಳಸ್ತೆ ದುಡ್ಡು ಕೊಡ್ತಾ ಇದೆ ಅಂತ ಸುದ್ದಿ
ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
‘ಸತ್ಯಶೋಧನೆ’ ಎನ್ನುವ ಜನರಿಗೆ ನಿಜವಾದ ಸಂಶೋಧನೆಯಿಂದ ಹೊರಬಂದ ಸತ್ಯವನ್ನು ಒಪ್ಪಿಕೊಳ್ಳುವ ಎದೆಗಾರಿಕೆ ಇದೆಯೇ? ಇದನ್ನು ನಾವು ಪ್ರಶ್ನಿಸಿಕೊಳ್ಳಬೇಕು...
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
ಏನು ಹಾಗೆಂದರೆ ?
ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
ಶ್ರೀರಾಮನು ಐತಿಹಾಸಿಕ ವ್ಯಕ್ತಿಯೇ ಅಥವಾ ಆತ ಪುರಾಣ ಪುರುಷನೇ ಎಂಬ ಬಗ್ಗೆ ವಸ್ತುನಿಷ್ಠವಾದ ಸಂಶೋಧನೆ ನಡೆಯಲು ನಾವು ಒಪ್ಪಿಗೆ ಕೊಡುವ ಮಟ್ಟಿಗೆ ಪ್ರಬುದ್ಧರಾಗಿದ್ದೇವೆಯೇ?
ರಾಮಾಯಣ ಕಾವ್ಯವೇ , ಇತಿಹಾಸವೇ ಎಂಬ ಬಗ್ಗೆ ಸಂಶೋಧನೆ ನಡೆಯಲಿ ಎಂದು ಹೇಳುವ ಸತ್ಯವನ್ನರಸುವ ಮನಸ್ಥಿತಿ ನಮ್ಮಲ್ಲಿದೆಯೇ?
ಈ ಪ್ರಶ್ನೆಗಳು ನಮ್ಮನ್ನು ಕಾಡಬೇಕು ಎಂದೆನಿಸುತ್ತದೆ ನನಗೆ, ಒಬ್ಬ ಹಿಂದುವಾಗಿ!
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
ಇಲ್ಲವೆಂದೂ ಯಾಕೆ ಎಂದುಕೊಳ್ಳುತ್ತೀರಿ...ನಾನಂತೂ ರೆಡಿ!
ಇತಿಹಾಸವೋ/ಕಾವ್ಯವೋ ಎಂಬುದನ್ನೂ ನಿಖರವಾಗಿ ತಿಳಿಸಲಿ...ಆಮೇಲೆ ನೋಡೋಣ..
ಎಲ್ಲ ಧರ್ಮಗಳಲ್ಲೂ ಈ ರೀತಿ ಗೊಂದಲಗಳಿರುತ್ತವೆ ಎಂದು ನನ್ನ ಅನಿಸಿಕೆ..
ಏಸು ಶಿಲುಬೆಗೇರಿಸಿದ ಮೇಲೆ ಬದುಕುಳಿದನೆ? ಇದು ನಿಜವೇ?


ಪವಾಡವೇ? ಅದು ಹೇಗೆ?
ಸಾಯಿ ಬಾಬ ಚಮತ್ಕಾರ ಪುರುಷರೇ? ಅಥವಾ ಬರೀ ಜಾದುಗಾರನೆ ?
ನಮ್ಮ ನಿಮ್ಮಂಥವರು ಯಾಕೆ ನಂಬ ಬೇಕು...
ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
ನೀವು ಸಿದ್ಧರಾಗಿದ್ದೀರಿ ಎಂಬುದು ಸಂತೋಷದ ಸಂಗತಿ.
ಒಬ್ಬ ಹಿಂದೂವಾಗಿ ನನಗೆ ಯೇಸುಕ್ರಿಸ್ತನನ್ನು ಶಿಲುಬೇಗೇರಿಸಿದ ಸಂಗತಿಯ ಬಗ್ಗೆ ಆಸಕ್ತಿಯಿಲ್ಲ. ಅದನ್ನು ಸುಳ್ಳೆಂದು ಸಾಬೀತು ಪಡಿಸುವುದರಿಂದ ನನ್ನ ಧಾರ್ಮಿಕ ನಂಬಿಕೆ ಮೇಲೆ ಯಾವ ಪರಿಣಾಮವೂ ಆಗದು. ನನ್ನ ಧಾರ್ಮಿಕ ನಂಬಿಕೆ ಇತರ ಧರ್ಮಗಳ ಮೇಲೆ ಅವಲಂಬಿತವಾಗಿಲ್ಲ. ಸಾಯಿ ಬಾಬಾರ ಪವಾಡ ಯಾವ ಧರ್ಮದ ನಂಬಿಕೆ ಎಂಬುದು ನನಗೆ ತಿಳಿದಿಲ್ಲ.
ಈಗ ಪ್ರಶ್ನೆಯಿರುವುದು, ಶ್ರೀರಾಮ ಐತಿಹಾಸಿಕ ಪುರುಷನೇ ಅಥವಾ ಪುರಾಣ ಪುರುಷನೇ ಎಂಬುದರಲ್ಲಿ. ಇದರ ಬಗ್ಗೆ ನನಗೆ ಸ್ಪಷ್ಟತೆ ಬೇಕು. ಬೇರೆ ಅಸ್ಪಷ್ಟ ಸಂಗತಿಗಳನ್ನು ಒಟ್ಟು ಸೇರಿಸಿದ ತಕ್ಷಣ ನನ್ನ ಪ್ರಶ್ನೆಯ ತೀವ್ರತೆ ಕಡಿಮೆಯಾಗುವುದಿಲ್ಲ.
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
>>ಈಗ ಪ್ರಶ್ನೆಯಿರುವುದು, ಶ್ರೀರಾಮ ಐತಿಹಾಸಿಕ ಪುರುಷನೇ ಅಥವಾ ಪುರಾಣ ಪುರುಷನೇ ಎಂಬುದರಲ್ಲಿ. ಇದರ ಬಗ್ಗೆ ನನಗೆ ಸ್ಪಷ್ಟತೆ ಬೇಕು
ಅಲ್ಲವಾ ಮತ್ತೆ!?
ಇದು ಪೂರ್ತಿ ತಿಳ್ಕೊಲ್ಲೋ ವರ್ಗು ಸರಕಾರ ಸುಮ್ಕಿರ್ಬೇಕಪ್ಪ !
ಸೇತುವೆ ಮುಟ್ಟೋದು ಯಾಕೆ
ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
ಹ್ಹ...ಹ್ಹ... ಲಾಜಿಕ್!
ತಿಳಿಯ ಬೇಕಾದ್ದು ಸರಕಾರ ಮಾತ್ರವಲ್ಲ, ನಾವು ನೀವುಗಳು ಸಹ... ನನ್ನ ಪ್ರಶ್ನೆಯಿರುವುದು ನಾವು ಆ ಸತ್ಯಶೋಧನೆಗೆ ಸಿದ್ಧರಿದ್ದೇವಾ?
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
ಅಲ್ಲವಾ...
ಈಗಲೇ ಇದೆಯೋ ಇಲ್ಲವೊ ಗೊತ್ತಿಲ್ಲ..ಇರೋದನ್ನೂ ಒಡೆದು ಹಾಕಿದ್ರೆ ನಾಳೆ ಇತ್ತು ಅಂಥ ಹೇಳಕ್ಕೆ ಆಗತ್ತಾ ?
ಅಕಸ್ಮಾತ್, ಈಗ ಒಡೆದು ನಾಳೆ ಸೇತುವೆ ಇದ್ದಿದ್ದು ನಿಜ ಅಂತ ತಿಳಿಯತ್ತೆ ಅಂದು ಕೊಳ್ಳೋಣ...ಆವಾಗ ಏನು ಮಾಡೋದು..?
ಈಗ ಸದ್ಯಕ್ಕೆ ಸರಕಾರಕ್ಕೆ/ನಮಗೆ ಇಳಿದಿಲ್ಲ ಅಂತಾನೆ ಅಂದು ಕೊಳ್ಳೋಣ..ತಿಳ್ಕೊಲ್ಲೋವರಗು ಸುಮ್ಕಿರ್ ಬೇಕು ತಾನೆ?
ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
ಸರಕಾರ ತನ್ನ ಕಡೆಯಿಂದ ಸಾಕ್ಷ್ಯಗಳನ್ನು ಒದಗಿಸ್ತಾ ಇದೆ. ಇದು ಐತಿಹಾಸಿಕ ನಿರ್ಮಾಣ ಅಲ್ಲ ಅಂತ. ಆ ಸಾಕ್ಷ್ಯಕ್ಕೆ ತಕ್ಕ ಪ್ರತಿ ಸಾಕ್ಷ್ಯ ಒದಗಿಸಬೇಕು, ಕೋರ್ಟಿನಲ್ಲಿ ವಾದಿಸಬೇಕು. ಅದು ಬಿಟ್ಟು ಕೇವಲ ಭಾವುಕ ನೆಲೆಯಲ್ಲಿ ಬಾಯಿ ಮಾಡುವುದು ನಮ್ಮ ‘ಸತ್ಯ ಶೋಧನೆ’ಯ ಹಾದಿಯಲ್ಲಿ ಸಾಗುವ ಕ್ರಮವಲ್ಲ.
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
ಕಂಬ ರಾಮಾಯಣ ಪುರಾವೆ ಅನ್ನೋದು ಸರಿಯಾ??
ಮೊದಲು ರಾಮನೇ ಇಲ್ಲ ಅಂದಿದ್ರು ಈ ಘನ ಸರಕಾರ..
ಯಾವ ಪುರಾವೆ ಸಿಕ್ಕಿದೆ ಸರಕಾರಕ್ಕೆ ಈಗ, ರಾಮ ಇದ್ದಾ ಅನ್ನಕ್ಕೆ?
ಅದನ್ನು ಬಯಲು ಮಾಡಿದ್ದಾರಾ?
ಭಾವುಕತೆನೂ ಇಲ್ಲ ಯಾವ ಕಥೆ ನೂ ಇಲ್ಲ
ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
> ಸರಕಾರ ತನ್ನ ಕಡೆಯಿಂದ ಸಾಕ್ಷ್ಯಗಳನ್ನು ಒದಗಿಸ್ತಾ ಇದೆ.
ಏನು ಸಾಕ್ಷ್ಯ ಒದಗಿಸಿದ್ದಾರೆ?
ಅಂದ ಹಾಗೆ ರಾಮ ಇದ್ದ ಅಂತ ಸರಕಾರ ಒಪ್ಪಿದೆ ಅನ್ಸತ್ತೆ ಇತ್ತೀಚಿನ ವಾದಗಳಲ್ಲಿ...
ಏನಿದೆ ಪುರಾವೆ ರಾಮ ಇದ್ದ ಅಂತ? ಏನು ಸಾಕ್ಷ್ಯ ಒದಗಿಸಿದ್ದಾರೆ?
ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
ಸರ್, ಆ ವಿಚಾರ ಸುಪ್ರೀಂ ಕೋರ್ಟಿನ ಎದುರು ಇದೆ. ಸರಕಾರದ ಪರವಾಗಿ ನಾರಿಮನ್ ಸೇತು ಸಮುದ್ರಂ ಯೋಜನೆ ಅನುಷ್ಠಾನವಾಗಬೇಕು ಎಂದು ವಾದ ಮಾಡುತ್ತಿದ್ದಾರೆ. ಪ್ರತಿವಾದದಲ್ಲಿ ರಾಮ ಇದ್ದ ಆತನೇ ಸೇತುವೆಯನ್ನು ಕಟ್ಟಿಸಿದ್ದು ಹಾಗಾಗಿ ಅದಕ್ಕೆ ಧಾರ್ಮಿಕವಷ್ಟೇ ಅಲ್ಲದೆ ಐತಿಹಾಸಿಕ ಮಹತ್ವವಿದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟರೆ ಕೋರ್ಟಿನ ತೀರ್ಪು ನಮ್ಮ ಪರವಾಗಿರ್ತದೆ. ಇದಕ್ಕೆಲ್ಲಾ ಬೀದಿಯಲ್ಲಿ ಗಲಾಟೆ ಮಾಡುವುದು, ಮುಖ್ಯಮಂತ್ರಿಯ ಮಗಳ ಮನೆಗೆ ಕಲ್ಲು ಎಸೆಯುವುದು, ಬಸ್ಸಿಗೆ ಬೆಂಕಿ ಕೊಡುವುದು ಬೇಕೆ?
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
> ಆ ವಿಚಾರ ಸುಪ್ರೀಂ ಕೋರ್ಟಿನ ಎದುರು ಇದೆ. ಸರಕಾರದ ಪರವಾಗಿ ನಾರಿಮನ್ ಸೇತು ಸಮುದ್ರಂ ಯೋಜನೆ ಅನುಷ್ಠಾನವಾಗಬೇಕು ಎಂದು ವಾದ ಮಾಡುತ್ತಿದ್ದಾರೆ.
> ಪ್ರತಿವಾದದಲ್ಲಿ ರಾಮ ಇದ್ದ ಆತನೇ ಸೇತುವೆಯನ್ನು ಕಟ್ಟಿಸಿದ್ದು ಹಾಗಾಗಿ...
ಸ್ವಲ್ಪ ನಿಲ್ಲಿ...
ನಾರಿಮನ್ ಈಗಿನ ವಾದದಲ್ಲಿ ರಾಮನ ಸೇತುವೆ ಇದ್ದಿದ್ದು ನಿಜ ಎಂಬಂತೆ ಕಂಬ ರಾಮಾಯಣ ವನ್ನು ಉದಾಹರಿಸಿದ್ದಾರೆ...
ಹಾಗಾದ್ರೆ ರಾಮ ಇದ್ದಾನ? ಏನು ಪುರಾವೆ?
ನಿಮಗೆ ಗೊತ್ತಾಯ್ತ ಏನು ಪುರಾವೆ ಸಿಕ್ಕಿತು ಅಂತಾ ?
ಬರಿ ಸುಪ್ರೀಂ ಕೋರ್ಟ್ ಗೆ ಉತ್ತರ ಕೊಟ್ಟರೆ ಸಾಕ ನಿಮಗೆ?
ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
ಇಲ್ಲಿ ನೋಡಿ..ತಾಜಾ ಸುದ್ದಿ
http://www.kannadaprabha.com/NewsItems.asp?ID=KPH20080724131035&Title=He...
ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
ಇಷ್ಟೆಲ್ಲಾ ವಾದ ಮಾಡುವವರು ಈ ಹೊಗೇನಕಲ್ ಮತ್ತು ಹೊಸೂರು ಕರ್ಣಾಟಕದ್ದೆಂದರೆ ಕೊಟ್ಟು ಬಿಟ್ಟಾರಾ? ಹೊಗೇನಕಲ್ ಹೆಸರೇ ಕನ್ನಡದ್ದಿರುವಾಗ ಅಲ್ಲಿ ತಮ್ಮ ಯೋಜನೆ ಕೈಬಿಟ್ಟಾರಾ? ಹಾಗೆಯೇ ಈ ಹೊಸೂರನ್ನು ನಮಗೆ ಕೊಟ್ಟುಬಿಟ್ಟಾರಾ ಈ ತಮಿೞರು. ಹಾಗೆಲ್ಲಾ ಆಗೋಲ್ಲ ಸ್ವಾಮಿ. ಈ ಕರುಣಾನಿಧಿ ತನಗೆ ಬೇಕಾದ ಹಾಗೆ ಮಾತಾಡೋ ’ಪೆರಿಯ ಕಲೈಞರ್’ ಹಿರಿಯ ಕಲಾಕಾರ.