ಕರ್ಮಯೋಗದಲ್ಲಿ ಒಂದು ಸಂಜೆ
ಸಂಜೆ, ಭಗವದ್ಗೀತೆಯ ಬಗ್ಗೆ ಶತಾವಧಾನಿ ಡಾ.ಆರ್. ಗಣೇಶರ ಒಂದು ಉಪನ್ಯಾಸ ಇದೆ ಎಂಬುದು ತಿಳಿದಿತ್ತಷ್ಟೇ. ಕಛೇರಿಯ ನಂತರ ಸಂಜೆ ನೇರವಾಗಿ ಮನೆಗೆ ತೆರಳುವ ಬದಲು, ಗೋಖಲೆ ಸಾರ್ವಜನಿಕ ವಿಚಾರ ಸಂಕೀರ್ಣದೆಡೆಗೆ ಗಾಡಿ ತಿರುಗಿಸಿದೆ. ಹೋಗಿ ನೋಡಿದರೆ ಇದ್ದವರಲ್ಲಿ ೯೯% ಬರೀ ವಯಸ್ಸಾದವರೇ. ಕಡೆ ಕಡೆಯಲ್ಲಿ, ನಾನೂ ಸೇರಿದಂತೆ ೪ ಮಂದಿ ಯುವಕರು ಇದ್ದೆವೋ ಏನೋ ?
* ನೆನ್ನೆ ಭಗವದ್ಗೀತೆಯಲ್ಲಿನ ಕರ್ಮಯೋಗದ ಬಗೆಗೆ ಉಪನ್ಯಾಸವಿತ್ತು. ಜ್ಞಾನಮಾರ್ಗದ ಮತ್ತು ಕರ್ಮಮಾರ್ಗದ ವಿಷಯವಾಗಿ ಕೆಲವು ವಿಚಾರವಿನಿಮಯವಾಯಿತು. ಶಂಕರಾಚಾರ್ಯರ ಹಾಗೆಯೇ ಡಿವಿಜಿಯವರ ಮಂಕುತಿಮ್ಮನ ಕಗ್ಗದಿಂದ ಕೆಲವು ಪದ್ಯಗಳು ಅಲ್ಲಲ್ಲಿ ಪ್ರಸ್ತಾಪವಾಗುತ್ತಿತ್ತು.
* "ಈ ವಯಸ್ಸಿನಲ್ಲಿ ಸಂಸ್ಕೃತದ ಮೇಲೆ ಅಭಿಮಾನ ಬಂದು, ಸಂಸ್ಕೃತ ಕಲೀತೀನಿ ಅಂತ ಹೋದ್ರೆ ಆಗಲ್ಲ, ಬದಲಾಗಿ ಸಂಸ್ಕೃತದ ಪ್ರಚಾರ ಮಾಡುತ್ತಿರವ ಸಂಸ್ಥೆಗಳಿಗೆ ಸಹಾಯ ಮಾಡಿ, ಹಾಗೆಯೇ ಸಂಸ್ಕೃತದ ಬಗ್ಗೆ ತಪ್ಪು ಹೇಳುವವರನ್ನು ತಪ್ಪು ಎಂದು ಹೇಳಿ" ಅಂತ ಒಂದು ಕಡೆ ಹೇಳಿದರು.
* ಉಪನ್ಯಾಸದಲ್ಲಿ "ಸ್ವಧರ್ಮೇ ನಿಧನಂ ಶ್ರೇಯಂ" ವಾಕ್ಯ ಪ್ರಸ್ತಾಪವಾಯಿತು.
* ಕೊನೆಯಲ್ಲಿ ಡಿವಿಜಿಯವರ ಒಂದು ವಿವಾದಾತ್ಮಕ ಕತೆಯಲ್ಲಿ ಬರುವ "ಮಡಿವಾಳ ಮಾಚಯ್ಯನ ಮಗ ಸಂಗೀತ ಕಲಿಯುವ ವಿಷಯ" ಬಂದು, ಅವರವರ ಅಂತರಂಗದ ನೀತಿಗೆ ಬದ್ಧರಾಗಿರಬೇಕು ಎಂದು ಹೇಳಿದರು.
ಉಪನ್ಯಾಸದ ಕೊನೆಯಲ್ಲಿ, ಡಿವಿಜಿಯವರ "ಅಂತಃಪುರ ಗೀತೆಗಳು" ಹಾಗು ಶತಾವಧಾನಿ ಡಾ. ಗಣೇಶರೇ ೨ ವರ್ಷದ ಹಿಂದೆ ನಡೆಸಿಕೊಟ್ಟಿದ್ದ "ಕಾಳಿದಾಸನ ಮೇಘದೂತದ" ಸಿಡಿಗಳನ್ನು ಕೊಂಡು ಮನೆಗೆ ನಡೆಯುತ್ತಿದ್ದಾಗ, ಈ ದಿನ ಜ್ಞಾನಯೋಗದ ಬಗ್ಗೆ ಲೆಕ್ಚರ್ ಇದು ಎಂಬುದು ತಿಳಿಯಿತು.

- Sunil Jayaprakash ರವರ ಬ್ಲಾಗ್
- Login or register to post comments
- 260 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಕರ್ಮಯೋಗದಲ್ಲಿ ಒಂದು ಸಂಜೆ
"ಈ ವಯಸ್ಸಿನಲ್ಲಿ ಸಂಸ್ಕೃತದ ಮೇಲೆ ಅಭಿಮಾನ ಬಂದು, ಸಂಸ್ಕೃತ ಕಲೀತೀನಿ ಅಂತ ಹೋದ್ರೆ ಆಗಲ್ಲ, ಬದಲಾಗಿ ಸಂಸ್ಕೃತದ ಪ್ರಚಾರ ಮಾಡುತ್ತಿರವ ಸಂಸ್ಥೆಗಳಿಗೆ ಸಹಾಯ ಮಾಡಿ, ಹಾಗೆಯೇ ಸಂಸ್ಕೃತದ ಬಗ್ಗೆ ತಪ್ಪು ಹೇಳುವವರನ್ನು ತಪ್ಪು ಎಂದು ಹೇಳಿ" ಅಂತ ಒಂದು ಕಡೆ ಹೇಳಿದರು."
ಸಂಸ್ಕೃತ ಬರದವರಿಂದ ಊರೂರಲ್ಲಿ ಸಂಸ್ಕೃತ ಸಮ್ಮೇಳಣದಂತೆ!
ಲೇ ನನ್.ಟಟನೇ
ಕರ್ಮಯೋಗದ ಬಗ್ಗೆ ಬರೆದಿರ್ತೀಯ ಅಂತ ನೋಡಿದ್ರೆ.. ಏನಿಲ್ಲ ಮಣ್ಣಂಗಟ್ಟಿ!
ಕರ್ಮಯೋಗ ಅಂದ್ರೇನೋ? ಈ ಕಡೆ ಬೆಂಗ್ಳೂರಿಂದ ಅಲ್ಲಿಗೆ ಬರಕ್ಕೆ ಆಗಲ್ಲ.. ಕೇಳಿದನ್ನ ಸರಿಯಾಗಿ ಬರೆಯೋ! ತಿರುಳು ಬಿಟ್ಟು ಸಿಪ್ಪೆ ತಿನ್ನಿಸ್ಬೇಡ!
"ಸುನಿಲಂಗೆ ಸಿಟ್ಟು ಬರತ್ತೀಗ"
ಉ: ಕರ್ಮಯೋಗದಲ್ಲಿ ಒಂದು ಸಂಜೆ
ಸುನೀಲರೇ, ಈ ವಿಚಾರದಲ್ಲಿ ನಿಮಗೆ ಆಸಕ್ತಿಯಿದ್ದಲ್ಲಿ ಖ್ಯಾತ ಪ್ರವಚನಕಾರ ಡಾ|| ವ್ಯಾಸನ ಕೆರೆ ಪ್ರಭಂಜನಾಚಾರ್ಯರ ಪ್ರವಚನಗಳನ್ನು ಕೇಳಿ. ಬಹಳ ವಿದ್ವತ್ಪೂರ್ಣವಾಗಿರುತ್ತವೆ ಅವರು ಮಂಡಿಸುವ ವಿಷಯಗಳು. ಕೆಲದಿನಗಳ ಹಿಂದೆ ಅವರು ನಡೆಸಿಕೊಟ್ಟ ’ದೇವರು’ ಎಂಬ ವಿಷಯದಬಗ್ಗೆ ಪ್ರವಚನವನ್ನು ಕೇಳಿದ್ದೆ. ಉತ್ತಮವಾಗಿತ್ತು.