ಜನರು ಮತ್ತು ಜನಪ್ರತಿನಿಧಿಗಳು
ಅಲ್ಲ ಕಣ್ರಯ್ಯಾ, ಹೇಳಿ ಕೇಳಿ ಇದು ಸೆಪ್ಟೆಂಬರ್-ನವೆಂಬರ್ ಕಾಲ. ಕನ್ನಡಿಗರು ಆಚರಿಸುವ ಎರಡು ದೊಡ್ಡ ಹಬ್ಬಗಳ ತಿಂಗಳು. ೧. ನಾಡಹಬ್ಬ ದಸರಾ, ೨. ಕನ್ನಡ(=ಕೇವಲ ನುಡಿಯಲ್ಲ ಕಣ್ರಯ್ಯಾ, ನಾಡು, ಅದರಲ್ಲಿ ಬದುಕು ಕಾಣುತ್ತಿರುವ ಜನರು) ರಾಜ್ಯೋತ್ಸವ. ಇದೇ ಸಂದರ್ಭದಲ್ಲಿ ಹಂಪಿ ಉತ್ಸವವೂ ನಡೆಯುತ್ತಿದೆ. ರಾಜಕೀಯವಾಗಿ ಏನೆಲ್ಲಾ ತಿಪ್ಪರಲಾಗ ಆದರೂ, ಸಾಂಸ್ಕೃತಿಕವಾಗಿ ನಾವುಗಳು ಎಂತಹ ಉದಾತ್ತ ಆದರ್ಶಗಳನ್ನು ಇಟ್ಟುಕೊಂಡಿದ್ದೇವೆ, ಅಲ್ಲವೇ, ಖುಷಿಯಾಗುತ್ತದೆ. ನಮ್ಮ ಸಾಂಸ್ಕೃತಿಕ ಉದಾತ್ತತೆಯ ನಡುವೆಯೇ ರಾಜಕೀಯವಾಗಿ ಏನೇನೆಲ್ಲಾ ಕಸರತ್ತು ನಡೆದು ಹೋಯಿತು. ನಾವುಗಳು ಅತ್ತ ಸಾಂಸ್ಕೃತಿಕ ಹಿರಿಮೆ, ಗರಿಮೆಯನ್ನು ಜಗತ್ತಿಗೆ ತೋರಿಸುತ್ತಿದ್ದರೆ, ಇತ್ತ ಕಡೆ ರಾಜಕೀಯವಾಗಿ ಏನೇನಾಯಿತು ಎಂಬುದನ್ನು ವಿವರವಾಗಿ ತಿಳಿಸಬೇಕಿಲ್ಲವಷ್ಟೇ. ಈ ದಿನ ಕನ್ನಡಪ್ರಭ ಓದುವಾಗ ಎರಡು ಸುದ್ಧಿಗಳು ಕಣ್ಣಿಗೆ ರಾಚಿಯೇ ರಾಚಿದವು. ಬಹುಶಃ ಈ ಎರಡು ಸುದ್ಧಿಗಳನ್ನು ನಿಮ್ಮೊಡನೆ ಹಂಚಿಕೊಳ್ಳುವುದಕ್ಕಿಂತ ಹೆಚ್ಚು ಮಾರ್ಮಿಕವಾಗಿ ಎದೆಯ ಭಾವನೆಗಳನ್ನು ಹೇಗೆ ಹರಿಯಬಿಡಬೇಕು ತಿಳಿಯಲಿಲ್ಲ ![]()

- Sunil Jayaprakash ರವರ ಬ್ಲಾಗ್
- Login or register to post comments
- 506 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಜನರು ಮತ್ತು ಜನಪ್ರತಿನಿಧಿಗಳು
ಸದ್ಯ , ನಮ್ಮಲ್ಲಿ ಗೋದ್ರಾ ,ನಂದಿಗ್ರಾಮ , ಬಾಗಲ್ಪುರ , ಪ್ರತ್ಯೇಕತೆಯ ಬೇಡಿಕೆ , ಇಂಥವು ಆಗುವದಿಲ್ಲ ; ಜನರ ಬೆಂಬಲವೂ ಅಂಥದಕ್ಕೆಲ್ಲ ಇಲ್ಲ ;
ಭ್ರಷ್ಟಾಚಾರದಲ್ಲಿ ನಂಬರ್ ಒನ್ ಇರಬಹುದು ; ರಾಜಕಾರಣಿಗಳು ನಮ್ಮನ್ನು ತಲೆ ತಗ್ಗಿಸೋ ತರ ಮಾಡಿರಬಹುದು ; ಆದರೆ ಇವು ಮೇಲಿನವಕ್ಕೆ ಹೋಲಿಸಿದರೆ ಕಡಿಮೆ ಕೇಡು ;
ಜನ ಬಹುತೇಕ ಸಾಮರಸ್ಯದಿಂದ ಬಾಳುತ್ತಿದ್ದಾರೆ ;
ಇದೇ ನಮ್ಮ ಹಿರಿಮೆ ;
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಜನರು ಮತ್ತು ಜನಪ್ರತಿನಿಧಿಗಳು
ನಮ್ಮ ಬಿಟ್ಟಾಕ್ ದೋರಣೆಯೆ ನಮಗೆ ಸ್ರೀರಕ್ಸೆ!!
"ಎಮ್ಮೆ ನಿನಗೆ ಸಾಟಿಯಿಲ್ಲ.. " ಇದು ನಾವ್ ಕನ್ನಡೊರಿಗೆ ಹೇಳಿ ಮಾಡಿಸಿದಂಗೆ...
ಯಾರ್ ಯೆಂಗಾರ ಹಾಳಾಗ್ಲಿ, ಉದ್ದಾರವಾಗ್ಲಿ.. ನಮ್ದು ನಮ್ಗೆ.
ಉ: ಜನರು ಮತ್ತು ಜನಪ್ರತಿನಿಧಿಗಳು
ನಮ್ಮ ಸರ್ಕಾರದ ಹತ್ತಿರ ಹಣವಿದೆ.ಯಾವುದೇ ಹಬ್ಬವನ್ನು ಆಚರಿಸಬಹುದು. ಹಂಪಿ ಹಬ್ಬ ಎಲ್ಲಾ ಟೀವಿಯಲ್ಲಿ ನೋಡುವಾಗ, ಈ ಹಣವನ್ನು ನಮ್ಮೂರಿನ(ದಕ್ಷಿಣ ಕನ್ನಡ) ರಸ್ತೆಗಾದ್ರು ಹಾಕಿದ್ರೆ ಎಂದು ಅನಿಸೋದಂತು ಸತ್ಯ!