ಕುಮಾರವ್ಯಾಸ ಭಾರತದ ಕಾವ್ಯ ವಾಚನ
ಗೋಖಲೆ ಸಾರ್ವಜನಿಕ ವಿಚಾರ ಸಂಕೀರ್ಣದಲ್ಲಿ ಇದೇ ಏಪ್ರಿಲ್ ೧೩ರಿಂದ ಏಪ್ರಿಲ್ ೧೭ರವರೆಗೆ ಕುಮಾರವ್ಯಾಸ ಭಾರತದ, ಅಕ್ಷಯವಸ್ತ್ರ ಪ್ರಸಂಗದ ಕಾವ್ಯ ವಾಚನ (ಗಮಕ) ಹಾಗು ನಿರೂಪಣೆ ಕಾರ್ಯಕ್ರಮವಿದೆ. ಆಸಕ್ತಿಯದ್ದವರು ಭಾಗವಹಿಸಿ. ಇಲ್ಲಿಯವರೆಗಿನ ಚುಟುಕಗಳು.
ದಿನಾಂಕ - ಚುಟುಕ
೧೩ - ಯುಧಿಷ್ಠಿರ ಎಲ್ಲವನ್ನೂ ಸೋತಾಗಿದೆ. ದ್ರೌಪದಿಯನ್ನು ಕರೆದುಕೊಂಡು ಬರಲು ಸೇವಕ ಬಂದಿದ್ದಾನೆ. ದ್ರೌಪದಿ ಆತನಿಗೆ ಧರ್ಮಸೂಕ್ಷ್ಮದ ಒಂದು ಪ್ರಶ್ನೆ ಕೇಳಹೇಳಿ, ಅದಕ್ಕೆ ಉತ್ತರ ಸಿಕ್ಕರೆ ಉತ್ತರ ಬರುವೆನೆಂದು ಹೇಳಿಕಳಿಸುತ್ತಾಳೆ.
೧೪ - ರಾಜಸಭೆಗೆ ದ್ರೌಪದಿಯನ್ನು ಎಳೆದುಕೊಂಡು ಬರಲಾಗಿದೆ. ಈ ಪ್ರಕರಣದ ನಿರೂಪಣೆಯಲ್ಲಿ, "ದ್ರೌಪದಿಯ ಶ್ರೀಮುಡಿಯ" ಬಗ್ಗೆ ಪ್ರೋ.ಎಸ್.ವಿ.ರಂಗಣ್ಣನವರು, ಕುಮಾರವ್ಯಾಸನು "ಸಂಸ್ಕೃತ-ಕನ್ನಡ" ಬಳಕೆಯಲ್ಲಿ ಮಾಡುತ್ತಿದ್ದ ಪಾರ್ಶಿಯಾಲಿಟಿಯ(ತಾರತಮ್ಯದ) ಬಗ್ಗೆ, ಎತ್ತಿದ್ದ ಆಕ್ಷೇಪ ಮತ್ತು ಆ ಆಕ್ಷೇಪಕ್ಕೆ ಕುವೆಂಪು ಅವರ ಧೋರಣೆ ಏನಾಗಿತ್ತು ಇವುಗಳನ್ನು ನಿರೂಪಣಾಕಾರರು ತಿಳಿಸಿಕೊಟ್ಟರು.
ಮುಂದೇನಾಗುವದು, ಕಾಯುತ್ತಿರಿ.

- Sunil Jayaprakash ರವರ ಬ್ಲಾಗ್
- Login or register to post comments
- 194 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS: