ಕರ್ನಾಟಕ ಮತ್ತು ತಮಿಳನಾಡು ನಡುವಣ ರಣಜಿ ಪಂದ್ಯದ updateಗಳು
ಈ ಬಾರಿ ರಣಜಿ ಅತ್ಯಂತ ಕುತೂಹಲಕಾರಿಯಾಗಿ ಮುಂದುವರಿಯುತ್ತಿದೆ. ಅದರಲ್ಲೂ ಕರ್ನಾಟಕವಂತೂ ಸ್ಥಿರವಾದ ಪ್ರದರ್ಶನ ನೀಡುತ್ತಿದೆ ಎನ್ನುವಾಗಲೇ ಕೆಲವು ವೇಳೆ ಎಡವುತ್ತಾ ಮುನ್ನಡೆದಿದೆ.
ಅಂದ ಹಾಗೆ ನಿಮಗೆ ತಿಳಿದಿರಬಹುದು. ರಣಜಿಯಲ್ಲಿ ಒಂದು ಪಂದ್ಯ ಗೆದ್ದರೆ ೪ ಅಂಕಗಳು ನೀಡಲಾಗುತ್ತದೆ. ಹಾಗೆಯೇ, ಪಂದ್ಯ ಡ್ರಾ ಆದಾಗ ಇನ್ನಿಂಗ್ಸ್ ಮುನ್ನಡೆ ಪಡೆದಿದ್ದ ತಂಡಕ್ಕೆ ೨ ಅಂಕಗಳನ್ನು ನೀಡಲಾಗುತ್ತದೆ.
೨೦೦೬-೦೭ರ ಋತುವಿನ ಮೊದಲ ಪಂದ್ಯ ಸೋತಾಗ ನನಗೆ ತುಂಬಾ ಬೇಸರವಾಗಿತ್ತು, ಹಾಗೆಯೇ ಕೋಪವೂ ಬಂದಿತ್ತು ಎನ್ನಿ
. ಆದರೆ ಆ ಪಂದ್ಯದ ನಂತರ ಸುಧಾರಿಸಿದ ನಮ್ಮವರು, ಎರಡು ಪಂದ್ಯಗಳನ್ನು ಗೆದ್ದು ಪೂರ್ಣ ಎಂಟು ಪಾಂಟುಗಳನ್ನು ಸಂಪಾದಿಸಿದರು. 
ಮುಂದಿನ ಪಂದ್ಯದಲ್ಲಿ ಇನ್ನಿಂಗ್ಸ್ ಮುನ್ನಡೆಯಿಂದ ೨ ಪಾಯಿಂಟ್ ಪಡೆದರು. ತುಂಬಾ ಕುತೂಹಲ ಸೃಷ್ಟಿಸಿದ್ದ ಆಂಧ್ರದ ವಿರುದ್ಧದ ನಾಲ್ಕನೆಯ ಪಂದ್ಯದಲ್ಲಿ ನಮ್ಮವರು ಸ್ವಲ್ಪ ಎಡವಿದರು. ಎದುರಾಳಿಗಳಿಗೆ ೨ ಪಾಯಿಂಟ್ ಬಿಟ್ಟುಕೊಟ್ಟರು. ![]()
ಅದೆಲ್ಲ ಇರಲಿ, ಈಗ ಬಂದಿರುವ ಸುದ್ಧಿಯೆಂದರೆ, ಕರ್ನಾಟಕದವರು ತಮಿಳುನಾಡು ವಿರುದ್ಧದ ರಣಜಿ ಪಂದ್ಯದಲ್ಲಿ ೨೦೯ ರನ್ನುಗಳ ಮೊದಲ ಇನ್ನಿಂಗ್ಸ್ನಲ್ಲಿ ಮುನ್ನಡೆ ಪಡೆದಿದ್ದಾರೆ.
ಸಂತೋಷಕರವಾದ ವಿಷಯ. ಇಂದು ಪಂದ್ಯದ ಮೂರನೆಯ ದಿನ.
ಅಂಕಪಟ್ಟಿಯಲ್ಲಿ ಕರ್ನಾಟಕ ಸದ್ಯಕ್ಕೆ ಮೂರನೆಯ ಸ್ಧಾನದಲ್ಲಿದೆ. ಅಂಕಪಟ್ಟಿಯನ್ನು ನೋಡಲು ಇಲ್ಲಿ ಎಡತಾಕಿ. ಈ ಬಾರಿ ಕರ್ನಾಟಕಕ್ಕೆ ಪ್ರಬಲ ಪೈಪೋಟಿ ನೀಡುತ್ತಿರುವವರೆಂದರೆ ಆಂಧ್ರ ಮತ್ತು ಬರೋಡ.
ಬನ್ನಿ, ಎಲ್ಲರೂ ಸೇರಿ ಕರ್ನಾಟಕ ರಣಜಿ ತಂಡಕ್ಕೆ ಶುಭವನ್ನು ಹಾರೈಸೋಣ. ![]()

- Sunil Jayaprakash ರವರ ಬ್ಲಾಗ್
- Login or register to post comments
- 515 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






RSS:
ಪ್ರತಿಕ್ರಿಯೆಗಳು
ಇತ್ತೀಚಿನ ಸುದ್ಧಿ: ರಣಜಿ ಪಂದ್ಯದ updateಗಳು
ಕರ್ನಾಟಕ ತಂಡವು ತಮಿಳುನಾಡಿನ ಮೇಲೆ ಮಿಕ್ಕನ್ನು(ಫಾಲೋ ಆನ್-reminents) ಹೇರಿದೆ. ಎರಡನೆಯ ಇನ್ನಿಂಗ್ಸ್ನಲ್ಲಿ ಈಗಾಗಲೇ ನಮ್ಮವರು ತಮಿಳುನಾಡಿನ ೨ ವಿಕೇಟುಗಳನ್ನು ಉದುರಿಸಿದ್ದಾರೆ. ಆದರೆ ಈಗಲೇ ತುಂಬಾ ಹೊಗಳುವುದು ಬೇಡ. ಹೊನ್ನಶೂಲಕ್ಕೇರಿ ಬಿಟ್ಟಾರು ನಮ್ಮವರು.
Re: ಇತ್ತೀಚಿನ ಸುದ್ಧಿ: ರಣಜಿ ಪಂದ್ಯದ updateಗಳು
ನೀವು ಪರ್ವಾಗಿಲ್ಲ ಸಾರ್, ರಣಜಿ ಮ್ಯಾಚ್ಗಳನ್ನು ಇಷ್ಟೊಂದು ಕುತೂಹಲದಿಂದ ಫಾಲೋ ಮಾಡುತ್ತಿದ್ದೀರ!
ಕರ್ನಾಟಕ ಈ ಮ್ಯಾಚನ್ನು ಗೆಲ್ಲಬಹುದು..ಯಾವುದೋ ಕ್ರಿಕೆಟ್ (domestic)ರೇಟಿಂಗ್ನಲ್ಲಿ ರಾಬಿನ್ ಉತ್ತಪ್ಪ ಮೊದಲ ಸ್ಥಾನದಲ್ಲಿದ್ದಾನೆ ಅಂತೆ..
ಅಯ್ಯೋ, ದೃಷ್ಟಿ ಆಗಿಹೋಯ್ತು, ನೀವಾಳಿಸುವವರು ಯಾರಿಲ್ಲವೇ
೨೨ಕ್ಕೇ ೨ ವಿಕೇಟುಗಳನ್ನು ಎಗರಿಸಿದ್ದ ಕರ್ನಾಟಕದವರು, ೩ನೇ ವಿಕೇಟನ್ನು ಉದುರಿಸಲು ಬಹಳ ಸಮಯ ತೆಗೆದುಕೊಂಡರು.
ದೃಷ್ಟಿ ಆಯ್ತೋ ಏನೋ ?
ಮೂರನೆಯ ದಿನದಾಟದ ಅಂತ್ಯಕ್ಕೆ ತಮಿಳುವಾಡು ತನ್ನ ೨ನೆಯ ಇನ್ನಿಂಗ್ಸಿನಲ್ಲಿ ೧೩೦ರನ್ನುಗಳನ್ನು ಗಳಿಸಿ ೩ ವಿಕೇಟನ್ನು ಕಳೆದುಕೊಂಡಿದೆ. ಇನ್ನೂ ೮೯ರನ್ನುಗಳ ಬಾಕಿ ತೀರಿಸಬೇಕಿದೆ.
ರಣಜಿ: ನಾಲ್ಕನೆಯ ದಿನದಾಟದ ಊಟದವೇಳೆ
ಕರ್ನಾಟಕದ ಮುನ್ನಡೆಗೆ ಹೇಮಂಗ್ ಬದಾನಿ ತಡೆಯೊಡ್ಡಿದ್ದಾರೆ. ತಮಿಳುನಾಡು ೨೦೪ ರನ್ನುಗಳನ್ನು ಕಲೆಹಾಕಿ ೪ ವಿಕೇಟುಗಳನ್ನು ಒಪ್ಪಿಸಿದೆ. ಇನ್ನೂ ೧೫ ರನ್ನುಗಳ ಬಾಕಿ ತೀರಿಸಬೇಕಿದೆ.
ನಮ್ಮವರಿಗೆ ದೃಷ್ಟಿಯಾಗದಿರಲಿ ಎಂಬ ಎಚ್ಚರಿಕೆಯನ್ನು ನೀಡುತ್ತಾ ಶುಭ ಹಾರೈಸೋಣ.
ರಣಜಿ: ನಾಲ್ಕನೆಯ ದಿನದಾಟದ ಚಹಾವಿರಾಮದ ವೇಳೆಗೆ
ತಮಿಳುನಾಡು ೨೩೯ರನ್ನುಗಳನ್ನು ಗಳಿಸಿ ೮ ವಿಕೇಟುಗಳನ್ನು ಕಳೆದುಕೊಂಡಿದೆ. ಒಟ್ಟು ೨೦ ರನ್ನುಗಳ ಮುನ್ನಡೆ ಸಾಧಿಸಿದೆ. ಕೊನೆಯ ದಿನವಾದ ಇಂದು ಇನ್ನೂ ೨೦ ಓವರುಗಳು ಬಾಕಿಯಿದೆ. ಏನಾಗುತ್ತದೆಯೋ, ಬಹಳ ಕುತೂಹಲಕಾರಿಯಾಗಿದೆ.
ನಮ್ಮವರಿಗೆ ದೃಷ್ಟಿಯಾಗದಿರಲಿ ಎಂಬ ಎಚ್ಚರಿಕೆಯನ್ನು ನೀಡುತ್ತಾ ಶುಭ ಹಾರೈಸೋಣ.
ರಣಜಿ: ತಮಿಳುನಾಡು ವಿರುದ್ಧ ಗೆದ್ದ ಕರ್ನಾಟಕ
ನಮ್ಮವರು ಗೆದ್ದೇ ಬಿಟ್ಟರು. ಎರಡನೆಯ ಇನ್ನಿಂಗ್ಸಿನಲ್ಲಿ ಕರ್ನಾಟಕದವರು ೨೮ರನ್ನುಗಳನ್ನು ಗಳಿಸಬೇಕಿತ್ತು. ಒಂದೂ ವಿಕೇಟನ್ನು ಒಪ್ಪಿಸದೇ ೩.೫ ಓವರುಗಳಲ್ಲಿ ಗುರಿಯನ್ನು ತಲುಪಿದರು.
ದೃಷ್ಟಿಯಾಗದ ರೀತಿಯಲ್ಲಿ ಶುಭಾಶಯ ಹೇಳಿರಿ. ಗೆಲುವಿನಲ್ಲಿ ಭಾಗವಹಿಸಿದೆ ಎಲ್ಲರಿಗೂ ಶುಭವಾಗಲಿ, ಈ ಹುರುಪು ಮುಂದಿನ ಎಲ್ಲ ಪಂದ್ಯಗಳಲ್ಲಿಯೂ ಇರಲಿ ಎಂದು ಶುಭ ಕೋರೋಣ.