Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › Sunil Jayaprakash ರವರ ಬ್ಲಾಗ್

ಸಾಹಿತ್ಯ ವಿಚಾರ ಸಂಕೀರಣದಲ್ಲಾದ ಅಭಾಸಗಳು.

December 8, 2005 - 8:43pm — Sunil Jayaprakash

ಇದು ಹೋದ ಶನಿವಾರ ನಡೆದದ್ದು. ೪/೧೨/೨೦೦೫

ಅಂದು ಒಂದು ಕಾದಂಬರಿ ಬಿಡುಗಡೆ ಸಮಾರಂಭಕ್ಕೆ ಹೋಗಿದ್ದೆ.
ಮೊದಲು ಸೋಮಶೇಖರ ರಾವ್ ರವರ "ಭ್ರಮಣ" ಕಾದಂಬರಿ ಬಿಡುಗಡೆ, ನಂತರ ಡಾ||ಸುಮತೀಂದ್ರ ನಾಡಿಗರ ವಿಚಾರ ಸಂಕೀರ್ಣ ಇತ್ತು. ಸೋಮಶೇಖರ ರಾವ್ ಯಾರೆಂದರೆ ಅದೆ  ಮಾಯಾಮೃಗದ ಶಾಸ್ತ್ರಿ ಗಳ ಪಾತ್ರ ಮಾಡಿದ ದತ್ತಣ್ಣ ಅವರ ಅಣ್ಣ."ಭ್ರಮಣ" ಅವರ ಮೊದಲ ಕಾದಂಬರಿ.ಕಾದಂಬರಿ ಪ್ರಕಟಿಸಿದವರು ಸುಂದರ ಪ್ರಕಾಶನ.
ಹಾಗೆಯೇ ನಾನು, ಇಗೊ ಕನ್ನಡದ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರನ್ನ ನೊಡಿದೆ. ಚುಟುಕಾಗಿ ಮಾತನಾಡಿಸಿದೆ ಕೂಡ. ನನಗಂತೂ ಅತೀವ ಸಂತೋಷ ಆಯಿತು.

ಸೋಮಶೇಖರ ರಾವ್ ರವರು ಮಾತನಾಡಿ, ಕಾದಂಬರಿ ಬರೆಯಲು ಪ್ರೇರೇಪಿಸಿದ, ಛೇಡಿಸಿದ, ಕಾಡಿಸಿದ, ಬೈದ  ಡಾ||ಸುಮತೀಂದ್ರ ನಾಡಿಗರಿಗೆ, ಸುಂದರ ಪ್ರಕಾಶನದ ಗೌರಿ ಸುಂದರ ರವರಿಗೆ, ಹಾಗು ತಮ್ಮ ಸಹೊದ್ಯೋಗಿ ಯಾಗಿದ್ದ ಮೂರ್ತಿ ರವರಿಗೆ ತಮ್ಮ ಕೃತಜ್ಞತೆ ಸಲ್ಲಿಸಿದರು.

ನಾನು ಹೋಗಿದ್ದಕ್ಕೆ ನನಗಾದ ಲಾಭ, ಕಾದಂಬರಿ, ೫೦% ರಿಯಾಯಿತಿ ದರದಲ್ಲಿ ಸಿಕ್ತು. ಕಾದಂಬರಿ ಅಂದೇ ಓದಿ ಮುಗಿಸಿಯಾಗಿದೆ.

ಆ ದಿನ, ಸರಿ ಕಾದಂಬರಿ ಬಿಡುಗಡೆಯಾಯ್ತು. ನಂತರ ಇತ್ತು  ಡಾ||ಸುಮತೀಂದ್ರ ನಾಡಿಗರ ವಿಚಾರ ಸಂಕೀರ್ಣ. ನಾಲ್ಕು ವಿದ್ವಾಂಸರು ತಮ್ಮ ವಿಚಾರ ಮಂಡಿಸಿದರು. ಇದರಲ್ಲಿ ಭಾಗವಸಿದ ನಂತರ ನನ್ನಲ್ಲಿ ಹುಟ್ಟಿರುವ ಆಸೆಯೆಂದರೆ ಡಾ||ಸುಮತೀಂದ್ರ ನಾಡಿಗರ  ಕಾವ್ಯ, ಪಂಚಭೂತ ವನ್ನ ಓದಬೇಕು ಅಂತ.

ಅಂದು ನಡೆದ ಸಮಾರಂಭದಲ್ಲಿ ಕೆಲವು ಅಭಾಸಗಳು ನೇರಿದ್ದವು.

೧. ಕಾರ್ಯಕ್ರಮದ ಪ್ರಾರಂಭದಲ್ಲಿ, ಸೋಮಶೇಖರರಾಯ ಮೊಮ್ಮಕ್ಕಳು ವಿಷ್ಣುಸಹಸ್ರನಾಮದ ಕೆಲವು ಶ್ಲೋಕಗಳನ್ನ ಹಾಡಿದರು. ಆದರೆ ಇದನ್ನು ನಾಲ್ಕು ಬಾರಿ ಭಗವದ್ಗೀತೆ ಅಂತ ಕಾರ್ಯಕ್ರಮದ ಉದ್ದಕ್ಕೂ ನಿರೂಪಕರು ಹೇಳುತ್ತಿದ್ದರು. ಇದರಿಂದ ರೋಸಿಹೋದ ಸಹೃದಯ ಕೇಳುಗರೊಬ್ಬರು , ಜೋರಾಗಿ ಹೇಳಿಯೆ ಬಿಟ್ಟರು. ಎಲ್ಲರಿಗೂ ಗೋಳ್ಳೆಂದು ನಗು.

೨. ವಿಚಾರ ಸಂಕೀರ್ಣ ದಲ್ಲಿ  ವಿದ್ವಾಂಸರುಗಳು ವಿಚಾರ ಮಂಡಿಸುತ್ತಿದ್ದಾಗ, ಆಗಾಗ್ಗೆ ಸಭಿಕರ ಮೊಬೈಲು ರಿಂಗಣಿಸುತ್ತಿತ್ತು. ಅದೇನು ಮೋಹನೋ ಗೋತ್ತಿಲ್ಲ. ಸ್ತಬ್ದ ಸ್ತರದಲ್ಲಿ ತಮ್ಮ ಮೊಬೈಲು ಇಡಬಹುದು ಎಂಬುದು ಎಷ್ಟೋ ಜನಕ್ಕೆ ಗೋತ್ತಿಲ್ಲ ಅನ್ನಿಸುತ್ತೆ. ಒಂದು ಸಂಧರ್ಭದಲ್ಲಿ, ಸಭಿಕರು ಮೊಬೈಲಿನಲ್ಲಿ ಮಾತನಾಡುತ್ತಿ ಧ್ವನಿ,ಮೈಕಿನೊಂದಿಗೆ ಮಾತನಾಡುತ್ತಿದ್ದ ವಿಧ್ವಾಂಸರ ಧ್ವನಿಗಿಂತ  ಜೋರಾಗಿತ್ತು. ಸಿಟ್ಟಿಗೆದ್ದ ವಿದ್ವಾಂಸರು ಆಚೆ ಹೋಗಿ ಎಂದು ಹೇಳಿದ ಘಟನೆ ಬಹಳ ಘಾಸಿಯಾಗುವಂತಿತ್ತು.

Ornamental seperator
  • Sunil Jayaprakash ರವರ ಬ್ಲಾಗ್
  • Login or register to post comments
  • 744 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 12, 2005 - 4:53pm — pavanaja

ನಿಜ ಹೇಳಬೇಕೆಂದರೆ ಮತ್ತು ಇಷ್ಟಪಡುತ್ತೇನೆ

pavanaja's picture

ಬಹುಪಾಲು ಭಾಷಣಗಾರರು ಬಹಳವಾಗಿ ಬಳಸುವ ಎರಡು ಮಾತುಗಳು ಎಂದರೆ "ನಿಜ ಹೇಳಬೇಕೆಂದರೆ" ಮತ್ತು "ಇಷ್ಟಪಡುತ್ತೇನೆ". ನಿಜ ಹೇಳಬೇಕೆಂದರೆ ಬಗ್ಗೆ ನಾನು ಈಗಾಗಲೇ ಬರೆದಿದ್ದೇನೆ (ಅಲ್ಲ, ಕುಟ್ಟಿದ್ದೇನೆ). ಯಾವುದೇ ಭಾಷಣ ಕೇಳಿ. ಭಾಷಣಗಾರರು ಆಗಾಗ "ನಾನು ಹೇಳಲು ಇಷ್ಪಡುತ್ತೇನೆ" ಅಥವಾ "ಇಲ್ಲಿ ತಿಳಿಸಲು ಇಷ್ಟಪಡುತ್ತೇನೆ" ಎಂದು ಹೇಳುತ್ತಿರುತ್ತಾರೆ. ಇಷ್ಟಪಡದ್ದನ್ನು ಯಾರಾದರೂ ಯಾಕೆ ಹೇಳುತ್ತಾರೆ? ಅಥವಾ ಇಷ್ಟಪಡದ್ದನ್ನು ಇಷ್ಟು ಹೊತ್ತು (ಅಂದರೆ ವೇದಿಕೆಯಲ್ಲಿದ್ದವರನ್ನು ಮತ್ತು ಕಾರ್ಯಕ್ರಮದ ಆಯೋಜಕರನ್ನು ಹೊಗಳಿದ್ದು) ಹೇಳಿದೆ. ಇನ್ನು ಇಷ್ಟಪಟ್ಟಿದ್ದನ್ನು ಹೇಳುತ್ತೇನೆ ಎಂದಿರಬಹುದೇ?

ಸಿಗೋಣ,
ಪವನಜ
-----------
Vishva Kannada
Think globally, Act locally

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸಂಗೀತ ಪಾಠದ ಮೊದಲ ಗೀತೆ
  • ಪುಸ್ತಕಗಳು
  • ಸಂಸಾರವೇ ಮೊಬೈಲು!!
  • ಮಹಾಭಾರತ
  • ಕನ್ನಡತಿ, ಪ್ರೊ. ಮಾಲತಿರಾವ್ ರವರಿಗೆ ಅಭಿನಂದನೆಗಳು.
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಒಂದು affair
  • ಅಕ್ಷರೋದಿ ಸೂತ್ರ
  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 14 ಅತಿಥಿಗಳು ಆನ್ಲೈನ್ ಇರುವರು.

ಅನುಭವದ ಪಾಲೊಳು ವಿಚಾರ ಮಂಥನವಾಗೆ |
ಜನಯಿಕುಂ ಜ್ಞಾನನವನೀತವೆ ಸುಖದಂ ||
ಗಿಣಿಯೋದು ಪುಸ್ತಕಜ್ಞಾನ; ನಿನ್ನನುಭವವೆ |
ನಿನಗೆ ಧರುಮದ ದೀಪ -- ಮಂಕುತಿಮ್ಮ ||

— ಡಿ ವಿ ಜಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator