ಈ ಪರ್ವ ಭಾವಸಾಗರ
ನೆನ್ನೆಯಷ್ಟೇ, ಎಸ್.ಎಲ್.ಭೈರಪ್ಪನವರ ಪರ್ವ ಕಾದಂಬರಿಯನ್ನು ಓದಿ ಮುಗಿಸಿದೆ.
ಮಹಾಭಾರಾತವನ್ನು ಆದರ್ಶದ ರೀತಿ ತಿಳಿದಿರುವವರು ಒಂದುವೇಳೆ ಈ ಕಾದಂಬರಿಯನ್ನು ಓದಿದರೆ ಕೆಲಹೊತ್ತು ತಳಮಳಗೊಂಡು ಕಳವಳಪಡುವುದು ಸಹಜವೆ.
ಎಂತೆಂಥ ನಿಕೃಷ್ಟವಾದ ಮಾತುಗಳಿವೆ ಅದರಲ್ಲಿ. ಯಪ್ಪಾ, ಮಜಾ ಅಂದರೆ ಈ ಪರ್ವವನ್ನು ಓದುವಾಗ ನಮ್ಮ ಅರಿವಿಗೆ ಬರುವುದೇನಪ್ಪಾ ಎಂದರೆ ಯಾರಿಗೂ ಯಾರನ್ನು ಕಂಡರೂ ಆಗದು. ಇದ್ದುದರಲ್ಲಿ ಕೃಷ್ಣ -ಅರ್ಜನ ಹಾಗು ದ್ರೌಪದಿ- ಭೀಮ ಇಬ್ಬರೇ ಪರವಾಗಿಲ್ಲ. ಇಡೀ ಕಾದಂಬರಿಯಲ್ಲಿ ಪದೇ ಪದೇ ಕಾಣಲು ಸಿಗುವ ಪದಗಳೆಂದರೆ ದಾಸಿ, ಆರ್ಯ, ಮತ್ಸರ, ಸುರೆ, ಧರ್ಮ, ವೇದ, ಯಾರು ಯಾರಿಗೆ ಎಷ್ಟೆಷ್ಟು ಮಕ್ಕಳು ಹೀಗೆ.
ಕಾದಂಬರಿ ಓದುತ್ತಿದ್ದಾಗ ನನಗೆ ತುಂಬಾ ನಗು ಬಂದು ಕೆಲವು ಸನ್ನಿವೇಶಗಳೆಂದರೆ,
೧. ದ್ರೌಪದಿ, ಮಕ್ಕಳೊಡನೆ ಮಾತನ್ನಾಡುವಾಗ, "ಆರ್ಯ ಧರ್ಮ ಎಂದರೇನು" ಎನ್ನುವ ಮಾತು ಬಂದಾಗ ಅವಳು ನೀಡುವ ಉತ್ತರ, ಸಖತ್ತಾಗಿದೆ, ಓದಿ ನೋಡಿ. ಅವಳ ಉತ್ತರ ಕೇಳಿದೊಡನೆ ಎಲ್ಲರೂ ಗಂಭೀರವದನರಾಗುತ್ತಾರೆ.
೨. ಧೃತರಾಷ್ಟ್ರ ತನ್ನ ದಾಸಿಗೆ ಎಷ್ಟು ವಯಸ್ಸು ಎಂದು ಕೇಳಿದಾಗ, ಅವಳು ಅರವತ್ತೈದು ಎನ್ನುವುದು.
೩. ದ್ರೋಣನು ಭೀಷ್ಮನನ್ನು, ಮನಸ್ಸಿನೊಳಗೇ, ಪದೇ ಪದೇ ಹಳಿಯುವುದು .
೪. ಭೀಷ್ಮನನ್ನು ಮುದುಕ ಮುದುಕ ಅಂತ ಕೆಲವರು ಕರೆಯುವುದು.
೫. ----ಮಗನೆ ಅಂತ ಮಹಾಭಾರತದ ಒಂದು ಆದರ್ಶ ಪಾತ್ರ ಮತ್ತೊಂದು ಆದರ್ಶ ಪಾತ್ರಕ್ಕೆ ಬಯ್ಯುವದು.
ನಾನು ಈ ಹಿಂದೆ, ಮಹಾಭಾರತದ ಮಹಾ ಪಾತ್ರಗಳು ಎಂಬ ಕಥೆ ಪುಸ್ತಕವನ್ನು ಓದಿದ್ದೆ. ಅಲ್ಲಿ ಪಾತ್ರಗಳನ್ನು ಕೇವಲ ಆದರ್ಶಗಳನ್ನಾಗಿ ನೋಡಲು ಮಾತ್ರ ಸಾಧ್ಯವಾಗಿತ್ತು. ಆದರೆ ಇಲ್ಲಿ ಅವುಗಳ ಆದರ್ಶದ ಜೊತೆಗೆ ಅವರ ಕಲ್ಯಾಣ ಗುಣಗಳನ್ನೂ
ನೋಡಲು(ಓದಲು) ಸಾಧ್ಯವಾಯಿತು.
ಇಡೀ ಪುಸ್ತಕದಲ್ಲಿ ಬಹುಶಃ ಬೈಸಿಕೊಳ್ಳದೆ, ಇರುವವನು ಭೀಮನು ಮಾತ್ರವೇ ಅನ್ನಿಸುತ್ತೆ.

- Sunil Jayaprakash ರವರ ಬ್ಲಾಗ್
- Login or register to post comments
- 629 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ರಾಮಾಯಣದ ರಸ್ಯರಹಸ್ಯಾರ್ಥಗಳು
ಕಾಕತಾಳೀಯವೋ ಏನೋ, ನೆನ್ನೆ ಹೀಗೊಂದು ಪ್ರಸಂಗ ನಡೆಯಿತು. ನೆನ್ನೆ "ಗೋಖಲೆ ಸಾರ್ವಜನಿಕ ವಿಚಾರಣ ಸಂಕೀರ್ಣದಲ್ಲಿ" ಕಾಯುತ್ತಿದ್ದಾಗ, ಅಲ್ಲಿ, "ರಾಮಾಯಣದ ರಸ್ಯ ರಹಸ್ಯಾರ್ಥಗಳು" ಎಂಬುದರ ವಿಚಾರವಾಗಿ ಪ್ರವಚನ ನಡೆಯುತ್ತಿತ್ತು (ನಿಜಹೇಳಬೇಕೆಂದರೆ ೦೩ ಡಿಸೆಂಬರ್ ೨೦೦೬ರವರೆಗೆ ಈ ಪ್ರವಚನ ಮಾಲೆಯಿದೆ).
ಅಲ್ಲಿ, "ಅಧಿಕಾರ ಎನ್ನುವುದು ಮನುಷ್ಯನನ್ನು ಏನು ಮಾಡಲು ಬೇಕಾದರೂ ಪ್ರಚೋದಿಸುತ್ತದೆ" ಎಂಬುದಕ್ಕೆ ಕೈಕೇಯಿ ದಶರಥನನ್ನು ಉದಾಹರಣೆಯಾಗಿ ನೀಡುತ್ತಾ ಪ್ರವಚನ ಮಾಡುವವರು ನೆರೆದಿದ್ದವರಿಗೆ ಹೇಳುತ್ತಿದ್ದರು. ಕೈಕೇಯಿಗೂ, ದಶರಥನಿಗೂ ೪೦ ವರ್ಷಗಳ ಅಂತರವಂತೆ.
ಹೀಗೆ ಮುಂತಾಗಿ ಮಾತನಾಡುವಾಗ, ಮಹಾಭಾರತದ ಗಾಂಧಾರಿ ಮತ್ತು ಧೃತರಾಷ್ಟ್ರನ ಪ್ರಸ್ತಾಪವೂ ಬಂತು.
ಪರ್ವ ಕಾದಂಬರಿಯಲ್ಲಿ, ಗಾಂಧಾರಿಯು ತಾನು ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿದ್ದಕ್ಕೆ ನೀಡುವ ಕಾರಣವನ್ನು, ಪ್ರವಚನಕಾರರು ತಪ್ಪು ಎಂದು ಹೇಳಿದರು. ಮಹಾಭಾರತದಲ್ಲಿ ಗಾಂಧಾರಿಯು ಧೃತರಾಷ್ಟ್ರನನ್ನು ಮದುವೆಯಾಗುವಾಗ ತಾನು ಸ್ವ-ಇಚ್ಚೆಯಿಂದ ಕಣ್ಣಿಗೆ ಬಟ್ಟೆ ಕಟ್ಟಿಕೊಳ್ಳತ್ತೇನೆ ಅಂತ ನುಡಿಯುವಳಂತೆ. ಆದರೆ ಪರ್ವದಲ್ಲಿ ಗಾಂಧಾರಿಯು ಏನು ಹೇಳುತ್ತಾಳೆ ಎಂಬುದನ್ನು ನೀವೇ ಓದಿನೋಡಿ.
ಕಾಕತಾಳೀಯವೆಂದರೆ ಮೊನ್ನೆಯಷ್ಟೇ ಪರ್ವ ಕಾದಂಬರಿಯನ್ನು ಓದಿ ಮುಗಿಸಿದ್ದೆ. ನೆನ್ನೆ ಪರ್ವವನ್ನು ಉದಾಹರಿಸುತ್ತಾ ಪ್ರವಚನಕಾರರು ಇದನ್ನು ತಪ್ಪು ಎಂದರು