ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › Sunil Jayaprakash ರವರ ಬ್ಲಾಗ್

ತಪ್ಪುಗಳು ಹೀಗೂ ಸಂಭವಿಸಬಹುದು

January 15, 2006 - 11:49am — Sunil Jayaprakash

ಇತ್ತೀಚಿಗೆ ಸಂಪದದಲ್ಲಿ, ವಿರಹಗೀತೆಯನ್ನೋದುವಾಗೊಂದು ತಪ್ಪು ಸಂಭವಿಸಿತು. ಹಾಗೆ ನೋಡಿದರೆ ತಪ್ಪುಗಳೇನು ಹೊಸತಲ್ಲ, ಕಾಗುಣಿತದಲ್ಲೊ, ಪದ ಜೋಡಣೆಯಲ್ಲೊ, ಹೇಗೊ ಏನೋ ತಪ್ಪುಗಳು ನಡೆಯುತ್ತವೆ. ಆದರೆ ಈ ಎಳೆಯಲ್ಲಿ ಸಂಭವಿಸಿದ ತಪ್ಪು ಸ್ವಲ್ಪ ವಿಶೇಷವಾಗಿದೆ.
http://sampada.net/ninilladiddaga#comment-1248
ಇದೇಕೆ ಹೀಗಾಯಿತು ಎಂದು ಯೋಚಿಸುವಾಗ ಹೊಳೆಯಿತು ನನಗೆ ಯಾಕೆ ಹೀಗಾಯಿತೆಂದು. ಈಗ್ಗೆ ಸುಮಾರು ತಿಂಗಳ ಹಿಂದೆ ಅಂಕಿತ ಪುಸ್ತಕದಲ್ಲಿ ಕಾಳಿದಾಸನ ಮೇಘದೂತ ಮಾಹಾಕಾವ್ಯದ ಕನ್ನಡ ಅನುವಾದ ಖರೀದಿಸಿದ್ದೆ. ಅದೂ ಕೂಡ ವಿರಹ ಗೀತೆ. ಈಗ ಸುಧಾ ವಾರಪತ್ರಿಕೆಯಲ್ಲಿ ನಳ ದಮಯಂತಿಯ ಕಥೆ ಪ್ರಕಟವಾಗುತ್ತಿದೆ. ಅದೂ ಕೂಡ ವಿರಹ ಗೀತೆಯೇ. ಕಳೆದ ವಾರದ ಸಂಚಿಕೆಯಲ್ಲಿ, ಎಷ್ಟೋ ದಿನಗಳ ನಂತರ ದಮಯಂತಿಗೆ ನಳ ಸಿಕ್ಕಿರುತ್ತಾನೆ. ದಮಯಂತಿ ನಳನನ್ನು ಸಿಕ್ಕಾಪಟ್ಟೆ ಬೈದು ಕಳುಹಿಸುತ್ತಾಳೆ. ಆದರೆ ಸುಧಾಗಿಂತ ಮುಂಚೆ ಎಲ್ಲೋ ಓದಿದ ನೆನಪು. ಇದು ನಿಜವಲ್ಲಿದಿರಬಹುದು ಆದರೆ ನಾನು ತಿಳಿದುಕೊಂಡಿರುವ ಕಥೆ ಇದು. ನಳನಿಗೆ ಅದ್ಯಾವುದೋ ಸರ್ಪ ಕಚ್ಚಿ (ಸರ್ಪವೂ ಅದ್ಯಾವುದೋ ಶಾಪಗ್ರಸ್ತವಾಗಿರುತ್ತೆ.) ಅವನು ಬಹಳ ಕುರೂಪಿಯಾಗಿರುತ್ತಾನೆ. ಕುರೂಪಿಯೆಂದು ಅವನನ್ನು ಬೈಯ್ಯುವುದಿಲ್ಲ. ಮೊದಲು ರಾಜ್ಯವನ್ನು ಸಂಪಾದಿಸು. ಜನಾನುರಾಗಿಯಾಗು. ನಂತರ ನಮ್ಮಿಬ್ಬರ ಸಮಾಗಮ ಎಂದು ಹೇಳುತ್ತಾಳೆ. ಇದನ್ನೋದುವಾಗ ನನ್ನ ಮನಸ್ಸಿಗೆ ಹೊಳೆದದ್ದು ಮೇಘದೂತದಲ್ಲಿ ಯಕ್ಷ ಯಕ್ಷಿಣಿ(ಅಥವಾ ಪ್ರೇಯಸಿ ಎನ್ನೋಣ) ಯರ ಸಮಾಗಮವಾದಾಗ, ಅವರ ಪ್ರತಿಕ್ರಿಯೆಗಳು ಹೇಗಿದ್ದಿರಬಹುದು ಎಂದು. ಆಗ ನನ್ನ ಸಹಾಯಕ್ಕೆ ಬಂದವನೇ ಆಪ್ತಮಿತ್ರ. ಇದೇನು ಎಲ್ಲೆಲ್ಲೂ ಹೋಗ್ತಾ ಇದೆ, ಈ ಬ್ಲಾಗು ಅಂದುಕೊಂಡ್ರ. ಏನು ಮಾಡುವುದು, ಈ ಮನಸ್ಸೇ ಹಾಗೆ, ಏನೇನೋ ಓದಿ, ಏನೇನೋ ಕಲ್ಪಿಸಿಕೊಂಡು ಏನೇನೋ ನಿರ್ಧಾರಕ್ಕೆಬಂದು ಥರಾವರಿ ಮಜಾ ತೊಗೊಳ್ಳುತ್ತೆ. ಬ್ಲಾಗಿಗೆ ಹಿಂದಿರುಗೋಣ. ಹಾ, ಆಪ್ತಮಿತ್ರ. ಆಪ್ತಮಿತ್ರದಲ್ಲಿರುವ ತಿರುಳೇನು. ಒಬ್ಬರೆ ತಾನ್ನನ್ನು ಇಬ್ಬರಾಗಿ ಕಲ್ಪಿಸಿಕೊಳ್ಳುವುದು. ಇಲ್ಲೇ ಇದ್ದದ್ದು ಸಮಸ್ಯೆ, ನಾನೂ ಯೋಚಿಸಿದೆ, ಈ ಮೇಘದೂತ ಮತ್ತು ನಳ ದಮಯಂತಿ ಯಾಕೆ ಒಂದೇ ಕಥೆಯಾಗಿರಬಾರದು. ಈ ನಮ್ಮ ಕವಿಗಳು, ಕಥಗಾರರು, ಲೇಖಕರು, ಒಂದು ಎಳೆ ಸಿಕ್ಕರೆ ಸಾಕು ಅದನ್ನು ಹಿಗ್ಗಾ ಮುಗ್ಗಾ ಎಳೆದಾಡಿ, ಒಂದು ಸುಂದರ ರೂಪ ಕೊಟ್ಟುಬಿಡುತ್ತಾರೆ. ಇಲ್ಲಿಯೂ ಏಕೆ ಹೀಗಾಗಿರಬಾರದು. ನಳ ದಮಯಂತಿಯರು ಒಂದು ಕಡೆ, ಯಕ್ಷ ಮತ್ತವನ ಪ್ರೇಯಸಿ ಮತ್ತೊಂದು ಕಡೆ. ಇವರಿಬ್ಬರೂ ಒಬ್ಬರೇ ಯಾಕಾಗಿರಬಾರದು ಎಂಬ ಅನುಮಾನ ಕಾಡಹತ್ತಿತು. ಈ ಅನುಮಾನವೇ ಇಷ್ಟೆಲ್ಲಾ ಅವಘಡಕ್ಕೆ ಕಾರಣ. ಅನುಮಾನ ತಿಳಿಯಾಗುವ ಮುಂಚೆಯೇ ನೀನಿಲ್ಲದಿದ್ದಾಗ ಪದ್ಯ ಓದಿದೆ. ಎಲ್ಲೆಲ್ಲೂ ವಿರಹ ಗೀತೆಗಳೇ ಮನಹೊಕ್ಕು ತೊಂದರೆ ತಮ್ಮ ವಿನೋದ ಆಚರಿಸಿದವು ಎಂಬಲ್ಲಿಗೆ ಈ ಬ್ಲಾಗ ಪುರಾಣವು ಮುಗಿಯಿತು ಅಥವಾ ಪ್ರಾರಂಭವಾಯಿತು ಎನ್ನೋಣವೆ.

~.~
  • Sunil Jayaprakash ರವರ ಬ್ಲಾಗ್
  • Login or register to post comments
  • 713 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 16, 2006 - 1:15am — ಶ್ರೀನಿಧಿ

ಉ:ತಪ್ಪುಗಳು ಹೀಗೂ ಸಂಭವಿಸಬಹುದು..

ಶ್ರೀನಿಧಿ's picture

ನಿಮ್ಮ ವಾದ ಸರಿಯಾಗಿದೆ. ನಳ-ದಮಯಂತಿಯ ಕಥೆಯಲ್ಲಿ ನಳ ಹಾಗೂ ದಮಯಂತಿಯರ ನಡುವೆ ಒಂದು ರಾಜಹಂಸ ರಾಯಭಾರಿಯಾಗಿ ವರ್ತಿಸುತ್ತದೆ. ಮೇಘದೂತದಲ್ಲಿ ಮೇಘ.. ಕೆಲವು ಸಮಾನತೆಗಳಿವೆ. ಸ್ಪಷ್ಟತೆಗಾಗಿ ನಳ-ದಮಂತಿಯ ಕಥೆಯನ್ನು ಸಂಕ್ಷಿಪ್ತವಾಗಿ ಕೊಡುತ್ತಿದ್ದೇನೆ.

ನಳ-ದಮಯಂತಿಯರ ನಡುವೆ ವಿರಹ ಏರ್ಪಡುವುದು ಅವರ ಮದುವೆಯಾದ ನಂತರ. ನಳ ಶನಿಯ ಶಾಪಕ್ಕೆ ಒಳಗಾಗುತ್ತಾನೆ. ದಾಯಾದಿ ಪುಷ್ಕರನೊಂದಿಗೆ ಜೂಜಾಡಿ ರಾಜ್ಯ ಕಳೆದುಕೊಳ್ಳುತ್ತಾನೆ. ದಮಯಂತಿಯನ್ನು ಕಾಡಿನಲ್ಲೆ ಬಿಟ್ಟು ಹೋಗುತ್ತಾನೆ ( ಅವಳು ತನ್ನ ತಂದೆಯ ಮನೆಗೆ ಹೋಗುತ್ತಾಳೆ ಎಂಬ ನಂಬಿಕೆಯೊಂದಿಗೆ.). ಮಾರ್ಗ ಮಧ್ಯದಲ್ಲಿ ಕಾರ್ಕೊಟಕ(???)ವೆಂಬ ಸರ್ಪವನ್ನು ಅಗ್ನಿಯಿಂದ ರಕ್ಷಿಸುತ್ತಾನೆ. ಆದರೆ ಅದು ಅನನ್ನು ಕಚ್ಚಿ ಕುರೂಪಿಯಾಗಿಸುತ್ತದೆ. ಆದರೆ ಅದು ಅವನಿಗೆ ಉಪಕಾರವಾಗುವುದೆಂದೂ ತಿಳಿಸುತ್ತದೆ. ದಮಯಂತಿ ತನ್ನ ತಂದೆ ಭೀಮನ(ಪಾಂಡವರ ಭೀಮ ಅಲ್ಲ) ಮನೆ ತಲುಪುತ್ತಾಳೆ. ನಳ ತನ್ನ ಅಶ್ವಹೃದಯದ ಬಲದಿಂದ ರಿತುಪರ್ಣನ ಆಸ್ಥಾನದಲ್ಲಿ ಸೂತನಾಗಿ ಸೇರುತ್ತಾನೆ. ರಿತುಪರ್ಣನಿಂದ ಅಕ್ಷಹೃದಯ ಕಲಿಯುತ್ತಾನೆ(ಕಥೆ ಬಹಳ ದೊಡ್ಡದಾಗಿತ್ತಿದೆ.....ಮುಗಿಸುತ್ತೇನೆ) ಕೊನೆಗೆ ದಮಯಂತಿಯ ಜಾಣ್ಮೆಯಿಂದ ಇಬ್ಬರೂ ಒಂದುಗೂದುತ್ತಾರೆ.... ನಳ ಕಲಿತ ಅಕ್ಷಹೃದಯದಿಂದ ಪುಷ್ಕರನೊಂದಿಗೆ ಜೂಜಾಡಿ ರಾಜ್ಯ ಮರಳಿ ಪಡೆಯುತ್ತಾನೆ.

ಒಮ್ಮೆ ಸಮಯ ಸಿಕ್ಕಾಗ ಸಂಪೂರ್ಣ ಕಥೆ ತಿಳಿಸುವ ಆಶಯವಿದೆ.. ಸುನಿಲ್ ಅವರಿಂದ ಮರೆತ ಕಥೆ ನೆನೆಪಿಗೆ ಬಂದಿದೆ.. ಧನ್ಯವಾದಗಳು..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸ್ಕಲ್ ಮಂತ್ರ ಮತ್ತು ಜುಗಾರಿ ಕ್ರಾಸ್
  • ಯಕ್ಷ ಪ್ರಶ್ನೆ
  • ತಪ್ಪು ಒಪ್ಪುಗಳು
  • ಚುಟುಕಗಳು
  • ನೆನ್ನೆ ಕಂಡ ಕನಸು
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • IT - ಸಿಂಪ್ಟಮ್ಸ
  • ಬಿಟ್ಟು ಹೋದವಳಿಗಾಗಿ
  • ಶಾಲೆಗಳು, ಸ್ಪರ್ಧಾತ್ಮಕ ಜಗತ್ತು..
  • ನೀರವತೆ!
  • ಓದಿದ್ದು ಕೇಳಿದ್ದು ನೋಡಿದ್ದು-9
  • ಓ, ಬನ್ನಿ, ಸೋದರರೆ, ಬೇಗ ಬನ್ನಿ!
  • ನನ್ನ ನೆನಪು ನಿನಗೆ ಬರೋದೇ ಇಲ್ಲವಾ ?
  • ನಿನ್ನ ಕನಸಿನ ಸಿನೆಮಾದಲ್ಲಿ ಹಾರ ಹಾಕಿಸಿಕೊಂಡ ಫೋಟೋವಿನ ಪಾತ್ರ..!
  • ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
  • ಲಿನಕ್ಸಾಯಣ - ೧೭- ಫೇಸ್ಟ್ ಬಿನ್ (pastebin) ಬಗ್ಗೆ ಗೊತ್ತಾ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • savithasr
    ಉ: ನೀರವತೆ!
    September 5, 2008 - 3:57pm
  • vikashegde
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 5, 2008 - 3:52pm
  • gururajkodkani
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 5, 2008 - 3:48pm
  • veeravenki
    ಉ: ಬಿಟ್ಟು ಹೋದವಳಿಗಾಗಿ
    September 5, 2008 - 2:54pm
  • yogeshkrbhat1
    ಉ: ಬಿಟ್ಟು ಹೋದವಳಿಗಾಗಿ
    September 5, 2008 - 2:41pm
  • savithru
    ಉ: ಮಾರತ್ತಳ್ಳಿ ಸೇತುವೆಯ ಮೇಲೆ ಅನಿವಾಸಿಯ ಪೋನು
    September 5, 2008 - 2:30pm
  • yogeshkrbhat1
    ಉ: ಪದಬೆಳಗು: ೩: ಸಜ್ಜನ
    September 5, 2008 - 2:28pm
  • anil.ramesh
    ಉ: ಬಿಟ್ಟು ಹೋದವಳಿಗಾಗಿ
    September 5, 2008 - 2:27pm
  • ASHMYA
    ಉ: ನೀರವತೆ!
    September 5, 2008 - 2:17pm
  • savithru
    ಉ: ನೀರವತೆ!
    September 5, 2008 - 2:08pm
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 57 ಅತಿಥಿಗಳು ಆನ್ಲೈನ್ ಇರುವರು.


ಪ್ರೀತಿಯು ಮನುಷ್ಯನನ್ನು ಹುಚ್ಚನನ್ನಾಗಿಸುತ್ತದೆ.

— ಸಿಗ್ಮಂಡ್ ಫ್ರಾಯ್ಡ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator