ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › Sunil Jayaprakash ರವರ ಬ್ಲಾಗ್

ಸಾಹಿತ್ಯ ಸಮ್ಮೇಳನದ ವಿವರಗಳು ಬೇಕಾಗಿದೆ

January 18, 2006 - 12:03pm — Sunil Jayaprakash

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಹೋಗಲಿಚ್ಛಿಸುವ ಸಹೃದಯರು ಯಾರಾದರು ಇದ್ದಾರೆಯೇ ಸಂಪದದಲ್ಲಿ. ಯಾರಿಗಾದರು, ಕೆಳಕಂಡ ವಿವರಗಳು ಗೊತ್ತಿದ್ದರೆ, ತಿಳಿಸಬೇಕೆಂದು ಸವಿನಯ ಪ್ರಾರ್ಥನೆ.
೧. ಬೆಂಗಳೂರಿನಿಂದ ಸಮ್ಮೇಳನಕ್ಕೆ ಯಾವುದಾದರು ಸಾರಿಗೆ ವ್ಯವಸ್ಥೆ ಯಾಗಿದೆಯೇ.
೨. ಬೀದರಿನಲ್ಲಿ ಉಳಿದುಕೊಳ್ಳುವ ವ್ಯವಸ್ಥೆಯ ವಿವರಗಳು.
ಇಷ್ಚೇ ಅಲ್ಲದೆ, ಸಾಮಾನ್ಯ ಜನರಿಗೆ ಉಪಯುಕ್ತವಾಗಬಹುದಾದ ಮತ್ತಿತರ ವಿವರಗಳಿದ್ದಲ್ಲಿ, ದೂರವಾಣಿ ಸಂಪರ್ಕಗಳು, ವಸತಿ ಸಮುಚ್ಳಯ, ಛತ್ರಗಳು, ಉದಾರಿಗಳು , ಇತ್ಯಾದಿ ದಯವಿಟ್ಟು ತಿಳಿಸಿ.

~.~
  • Sunil Jayaprakash ರವರ ಬ್ಲಾಗ್
  • Login or register to post comments
  • 837 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 18, 2006 - 3:30pm — pavanaja

Re: ಸಾಹಿತ್ಯ ಸಮ್ಮೇಳನದ ವಿವರಗಳು ಬೇಕಾಗಿದೆ

pavanaja's picture

Sunil Jayaprakash wrote:
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಹೋಗಲಿಚ್ಛಿಸುವ ಸಹೃದಯರು ಯಾರಾದರು ಇದ್ದಾರೆಯೇ ಸಂಪದದಲ್ಲಿ. ... ಇತ್ಯಾದಿ ದಯವಿಟ್ಟು ತಿಳಿಸಿ.

ನಾನು ಸಾಹಿತ್ಯ ಸಮ್ಮೇಳನದ ವಿವರ ಕೊಡುತ್ತಿಲ್ಲ. ಬದಲಿಗೆ ನನ್ನ ಬ್ಲಾಗ್ ಓದಿ ಎಂದು ಹೇಳುತ್ತಿದ್ದೇನೆ. ವಿವರ ಕೇಳಿದರೆ, ಗೊತ್ತಿದ್ದರೆ ಕೊಡುವುದು ಬಿಟ್ಟು ಇನ್ನೇನೋ ಬರೆದಿದ್ದಾನೆ ಎಂದು ಬೇಸರಿಸಬೇಡಿ.

ಸಿಗೋಣ,
ಪವನಜ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
January 19, 2006 - 3:21pm — Sunil Jayaprakash

ವಿಷಯ ಸಾಹಿತ್ಯ

Sunil Jayaprakash's picture

pavanaja wrote:
ನಾನು ಸಾಹಿತ್ಯ ಸಮ್ಮೇಳನದ ವಿವರ ಕೊಡುತ್ತಿಲ್ಲ. ಬದಲಿಗೆ ನನ್ನ ಬ್ಲಾಗ್ ಓದಿ ಎಂದು ಹೇಳುತ್ತಿದ್ದೇನೆ. ವಿವರ ಕೇಳಿದರೆ, ಗೊತ್ತಿದ್ದರೆ ಕೊಡುವುದು ಬಿಟ್ಟು ಇನ್ನೇನೋ ಬರೆದಿದ್ದಾನೆ ಎಂದು ಬೇಸರಿಸಬೇಡಿ. ಸಿಗೋಣ, ಪವನಜ

ನೀವು ಆ ಎಳೆಯನ್ನು ಓದಲು ಹೇಳಿದ್ದರಿಂದ ಖಂಡಿತ ಬೇಸರಿಸಿಕೊಳ್ಳಲಿಲ್ಲ. ನೀವು ವಿಷಯ ಸಾಹಿತ್ಯದ ಬಗ್ಗೆ ಬರೆದಿರುವುದು ಅತ್ಯಂತ ಸಮಂಜಸವಾಗಿದೆ. ನಾನು ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಇಲ್ಲಿಯವರೆಗೆ ಭಾಗವಹಿಸಿದವನಲ್ಲ. ೨(ಅಥವಾ ೩ ಗೊತ್ತಿಲ್ಲ) ನೇ ತರಗತಿಯಲ್ಲಿದ್ದಾಗ ದಾವಣಗೆರೆಯಲ್ಲಿ ನಡೆದ ಸಮ್ಮೇಳನದಲ್ಲಿ (ನಮ್ಮ ಮನೆಗೆ ಹತ್ತಿರವಿತ್ತು ಆ ಮೈದಾನ) ದಿನಕ್ಕೊಂದು ಮಕ್ಕಳ ಕಥೆ ಕೊಂಡು ಕೊಳ್ಳಲು ಹೋಗಿದ್ದೆ ತಂದಯೊಡನೆ ಅಷ್ಟೆ. ಆದರೆ ಇಂತಹ ಸಮ್ಮೇಳನಗಳು ಹೇಗಿರುತ್ತವೆ ಎಂದು ಸ್ವತಃ ತಿಳಿದುಕೊಳ್ಳುವ ಇಚ್ಛೆ ನನಗೆ. ಮುಂದೆ ನಾನು ಯಾವುದಾದರು ವಾದ ಮುಂದಿಟ್ಟರೆ ಅದಕ್ಕೆ ಸ್ವಲ್ಪ ತೂಕವಿರಬೇಕಲ್ಲ. ಸಾರ್ಥ ಕಾದಂಬರಿಯಲ್ಲಿ ವೈದಿಕ ಹಾಗು ಬೌದ್ಧ ಧರ್ಮಗಳ ವಾಗ್ವಾದದಲ್ಲಿ ಈ ಸ್ವಾನುಭವದ ಬಗ್ಗೆ ಸ್ವಾರಸ್ಯಕರ ಕಥಾನಕವಿದೆ. ಹಾಗೆಯೆ ಸ್ವತಂತ್ರನಾಗಿ ಬೀದರ್ ಹೇಗಿದೆ ಎಂದು ನೋಡುವಾಸೆ. ಈ ಸ್ವಾನುಭವಕ್ಕಾಗಿ ವಿವರಗಳನ್ನು ಕೇಳಿದೆ. ನೀವು ನಿಮ್ಮ ಲೇಖನದಲ್ಲಿ ಹೇಳಿರುವಂತೆ, ವೃತ್ತಿಯಿಂದ ಸಾಹಿತಿಗಳಲ್ಲದವರು ಸಾಹಿತ್ಯ ರಚನೆಗೆ ಮುಂದಾಗಬೇಕು ಎಂಬ ಕರೆಗೆ ನಾನು ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತೇನೆ.  ಶಾಲೆಯಲ್ಲಿ ಸಂದರ್ಭ ವಿವರಸಿ, ಗಾದೆ ವಿಸ್ತರಿಸಿ, ಪ್ರಬಂಧ ಬರೆಯಿರಿ, ಇತ್ಯಾದಿಗಳು ನನಗೆ ಅತ್ಯಂತ ಖುಷಿ ಕೊಡುತ್ತಿದ್ದ ಅಭ್ಯಾಸಗಳು. ಹಾ, ಅಂದ ಹಾಗೆ ನಾನೇನು ಯಾವುದೋ ವಿಷಯದಲ್ಲಿ ಪಾಂಡಿತ್ಯ ಪಡೆದಿಲ್ಲ. ಆದರೆ ಮುಂದೆ ಯಾವುದಾದರು ಕ್ಷೇತ್ರದಲ್ಲಿ ಪ್ರಬುದ್ಧನಾಗಬಹುದಲ್ಲ. ಆದ್ದರಿಂದ ಗೊತ್ತಿರುವ ವಿಷಯದ ಬಗ್ಗೆ ಬರೆಯುವ ಪ್ರಯತ್ನ ಮಾಡಲು ಹೊರಟಿರುವವನು. ಅಂದ ಹಾಗೆ ಇನ್ನು ಖಡಾ ಖಂಡಿತವಾಗಿ ಹೋಗೇ ಹೋಗುತ್ತೇನೆ ಎಂಬ ಭರವಸೆಯೂ ನನ್ನಲಿಲ್ಲ. ಹೋದರೂ ಹೋಗಬಹುದು ಇಲ್ಲಿದಿದ್ದರೆ ಇಲ್ಲ.

ಮುಂದೆ ಗುರಿಯಿರಲು ಹಿಂದೆ ಗುರುವಿರಲು,
ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆಮುಂದೆ,
ಹಿಗ್ಗದೆಯೆ ಕುಗ್ಗುದೆಯೆ ನುಗ್ಗಿ ನಡಮುಂದೆ.

ಅಂದಹಾಗೆ ಇಲ್ಲಿ ಯಾರೋ ಹೇಳುತ್ತಿದ್ದಾರೆ.
ಅರಿವೇ ಗುರು ಎಂದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
January 18, 2006 - 6:21pm — Rohit

ನಾ ಹೋಗುತ್ತಿದ್ದೇನೆ.

Rohit's picture

ನಾನು ಮುಂಬಯಿಯಿಂದ ಸಾಹಿತ್ಯ ಸಮ್ಮೇಳನಕ್ಕೆ ಹೋಗುತ್ತಿದ್ದೇನೆ. ಸಾಮಾನ್ಯವಾಗಿ ಸಾಹಿತ್ಯ ಪರಿಷತ್ತಿನವರುಸಮ್ಮೇಳನದಲ್ಲಿ ಪ್ರತಿನಿಧಿಗಳಾಗಿ ಭಾಗವಹಿಸಲಿಚ್ಛಿಸುವವರಿಗಾಗಿ ವಸತಿ ಹಾಗೂ ಊಟದ ವ್ಯವಸ್ಥೆ ಮಾಡುತ್ತದೆ. ಇದಕ್ಕೆ ಮೊದಲೇ ರೂ. 150 ರ ಪ್ರತಿನಿಧಿ ಶುಲ್ಕ ಪಾವತಿಸಿ ನೋಂದಾಯಿಸಿಕೊಳ್ಳಬೇಕಾಗುತ್ತದೆ. ಈಗಾಗಲೇ ಇದಕ್ಕೆ ಸಮಯ ಮೀರಿದೆ ಎಂದು ನನ್ನ ನಂಬಿಕೆ. ಕಾರಣ, ಹಿಂದೆ ನವೆಂಬರಿನಲ್ಲಿ ನಡೆಸಲು ತೀರ್ಮಾನಿಸಿದ್ದಾಗ, ಸೆಪ್ಟಂಬರಿನಲ್ಲಿ ಪ್ರಕಟಣೆ ಹೊರಡಿಸಿ, ಅಕ್ಟೋಬರ 20 ರ ವರೆಗೆ ಕಾಲಾವಕಾಶ ನೀಡಿದ್ದರು. ಆದರೆ ಸಮ್ಮೇಳನವನ್ನು ಮುಂದೂಡಿದ ನಂತರ ಹೊಸದಾಗಿ ಪ್ರಕಟಣೆ ಹೊರಡಿಸಿದ ಬಗ್ಗೆ ನನಗೆ ಮಾಹಿತಿಯಿಲ್ಲ. ಹೀಗಾಗಿ ನಾನು ನೋಂದಾಯಿಸಿಕೊಳ್ಳದೆಯೇ ಹೋಗುತ್ತಿದ್ದೇನೆ. ಬೆಂಗಳೂರಿನಿಂದ ಇಲ್ಲಿನ ಯಾರಾದರೂ ಬರುವುದಾದರೆ ನನಗೋ ಸ್ನೇಹಿತರೊಬ್ಬರು ಜೊತೆ ಸಿಕ್ಕಂತಾಗುವುದು. ಬೆಂಗಳೂರಿನಿಂದ ಬೀದರ್ ಗೆ ನೇರ ರೈಲು ಇಲ್ಲ. ಗುಲ್ಬರ್ಗಾಕ್ಕೆ ಹೋಗಿ ಅಲ್ಲಿಂದ 90 ಕಿಮೀ ಬಸ್ಸಿನಲ್ಲಿ ಪ್ರಯಾಣಿಸಬೇಕು, ಅಥವಾ ಹೈದರಾಬಾದಿಗೆ ಹೋಗಿ ಅಲ್ಲಿಂದ 150 ಕಿಮೀ ಬಸ್ಸು/ರೈಲು ಪ್ರಯಾಣ ಮಾಡಬೇಕಾಗುವುದು. ಬೀದರ್ ಗೆ ರಾಜ್ಯ ಸಾರಿಗೆಯ ವೇಗದೂತ/ಡೀಲಕ್ಸ್/ರಾಜಹಂಸ ಸೇವೆಗಳಿವೆ. ಬೆಂಗಳೂರಿನಿಂದ ಪ್ರಯಾಣದ ಅವಧಿ 12 ಗಂಟೆಗಳಿಗಿಂತ ಕಡಿಮೆಯಾಗಲಾರದು. ಇದಕ್ಕಿಂತ ಬೊಂಬಾಯಿಯಿಂದ ಬರುವುದೇ ಸುಲಭ. ಗುಲ್ಲಬರ್ಗಾಕ್ಕೆ 10 ಗಂಟೆ ರೈಲು ಪ್ರಯಾಣ ಮಾಡಿದರೆ ಅಲ್ಲಿಂದ ಬಸ್ಸು ಹಿಡಿಯ ಬಹುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
January 22, 2006 - 2:49am — hpn

ಜೊತೆ

hpn's picture

ಪ್ರಸನ್ನ ರೇವಣ್ಣ ಕೂಡ ಸಮ್ಮೇಳನ attend ಮಾಡ್ತಿದ್ದಾರಂತೆ.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅ೦ತರ
  • ವಿಮರ್ಶೆ ಮತ್ತು ಮೀಮಾಂಸೆ
  • ಕಾಲಚಕ್ರ - ಕನ್ನಡ ಬ್ಲಾಗ್
  • ತರಲೆ ಬ್ರೌಸರ್
  • ದುರ್ಗದ ಸೂರ್ಯಾಸ್ತಮಾನ
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-12
  • ನೀನು ನಾನು ಜೋಡಿ
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
  • ಜೋಯೀಸರ ಮಗಳು
  • 1700 11th AVE NE ಅಪಾರ್ಟ್ ಮೆಂಟ್ - 6
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
  • ಓದಿದ್ದು ಕೇಳಿದ್ದು ನೋಡಿದ್ದು-11
  • ಶಿವರಾಜ್ ಕುಮಾರ ಅಭಿಮಾನಿಗಳಿಗೆ ಮತ್ತೇರಿಸುವ ಚಿತ್ರ " ಮಾದೇಶ "
  • ಹಬ್ಬ ತಂದ ನೆನಪು...
  • ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • madhava_hs
    ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
    September 8, 2008 - 10:00am
  • kannadakanda
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 9:54am
  • madhava_hs
    ಉ: ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
    September 8, 2008 - 9:54am
  • kannadakanda
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:51am
  • anil.ramesh
    ಉ: ಮೊದಲ ಚಿತ್ರ
    September 8, 2008 - 9:43am
  • Sunil Jayaprakash
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:28am
  • Sunil Jayaprakash
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:15am
  • Sunil Jayaprakash
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:05am
  • Sunil Jayaprakash
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 8:40am
  • srinivasps
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 8:38am
ಇನ್ನಷ್ಟು
ಈಗಿನಂತೆ 10 ಸದಸ್ಯರು ಮತ್ತು 204 ಅತಿಥಿಗಳು ಆನ್ಲೈನ್ ಇರುವರು.


"ಕನ್ನಡ ಭಾಷೆ ಮಾತನಾಡುವ ಜನರ ನಡುವೆಯೇ ಬಾಳಿ ಬದುಕಿ ಅನ್ನ ಸಂಪಾದನೆ ಮಾಡುತ್ತಾ ಜ್ಞಾನ, ಆಲೋಚನೆ, ವಿಚಾರಗಳನ್ನೆಲ್ಲಾ ಬೇರೊಂದು ಭಾಷೆಯಲ್ಲೇ ಇಡಲೆತ್ನಿಸುವವನು ನೀಗ್ರೋ ಗುಲಾಮರಿಂದ ದುಡಿಸಿಕೊಂಡು ದೊಡ್ಡವರಾದ ಅಮೆರಿಕನ್ ಶೋಷಕರಿಗಿಂತ ಕೆಟ್ಟ ಹಾಗೂ ಅತಿ ಸೂಕ್ಷ್ಮ ಶೋಷಕ"

— ಕುವೆಂಪು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator