ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › Sunil Jayaprakash ರವರ ಬ್ಲಾಗ್

I ate nothing for 6 ಘಂಟೆ ಕಾಲ

May 31, 2006 - 10:42am — Sunil Jayaprakash

ನಾವು ಪ್ರೀತಿಸುತ್ತಿದ್ದೇವೆ ಎನ್ನುವುದಕ್ಕಿಂತ ಪ್ರೀತಿಸುತ್ತಿೆದ್ದೇವೆ ಎನ್ನುವ ಭಾವನೆ ಹೆಚ್ಚು ಸಂತೋಷ ಕೊಡುತ್ತದೆ - ಬೆಳದಿಂಗಳ ಬಾಲೆ.

ಎಷ್ಟೋ ಸಿನಿಮಾಗಳನ್ನು ನೋಡಿರುತ್ತೇವೆ, ನೋಡುತ್ತಿರುತ್ತೇವೆ. ಆದರೆ ಪ್ರೇಕ್ಷಕ, ತನ್ನ ಭಾವನೆಗಳೊಡಗೂಡಿ ಸಿನಿಮಾದಲ್ಲಿ ತಲ್ಲೀನನಾಗುವಂತೆ ಮಾಡಿದ ಪ್ರಯತ್ನಗಳು ಕಡಿಮೆ. ಬೆಳದಿಂಗಳ ಬಾಲೆ ಕನ್ನಡದ ಒಂದು ಸರಳ ಸಿನಿಮಾ. ಏಕೆ ಸರಳವೆಂದರೆ ಇಲ್ಲಿ ಎಲ್ಲಿಯೂ ಕೂಡ ಅದ್ದೂರಿ ಆಡಂಬರವಿಲ್ಲ, ಮಧುರ ಭಾವನೆಗಳನ್ನು, ಸ್ನೇಹವಾಗಿ ಪರಿವರ್ತಿಸಿ, ಸ್ನೇಹವನ್ನು ಪ್ರೇಮದಲ್ಲಿ ಕೂಡಿಸಿ ನಂತರ "ನಿನಗಾಗಿ ಕಾಯುತ್ತಿರುತ್ತೇನೆ" ಎಂಬ ನಾಯಕಿ ಹೇಳುವ ಭಾವದಲ್ಲಿ ಚಿತ್ರ ಕೊನೆಗೊಳ್ಳುತ್ತದೆ.

ಇಲ್ಲಿ ಸ್ವಾರಸ್ಯಕರ ವಿಷಯವೆಂದರೆ ಸಿನಿಮಾದ ಕೊನೆಯಲ್ಲಿ ನಾಯಕ, ನಾಯಕಿಯ ಮಧುರ ಭಾವನೆಯ ನೆನಪೇ ಸಾಕು, ಅವಳನ್ನು ನೋಡುವುದಿಲ್ಲ ಎಂದು ಹೇಳಿ ಹೊರಟುಹೋಗುವುದು. ಇಡೀ ಸಿನಿಮಾದಲ್ಲಿ ನಾಯಕಿ ಎಲ್ಲಿಯೂ ಕಾಣಿಸುವುದಿಲ್ಲ. ಕೇವಲ ಬೆಳದಿಂಗಳ ಬಾಲೆಯಾಗಿ ಆಕೆಯ ಮಾತುಗಳಷ್ಟೇ ನಾಯಕ ಹಾಗು ಪ್ರೇಕ್ಷಕನಿಗೆ ಕೇಳಿಸುವುದು.

ಅಲ್ಲಿ ಬರುವ ಫೋನ್ ಗೆಳತಿ, ತಿಳಿದೊ ತಿಳಿಯದೇನೊ ನಾಯಕನಲ್ಲಿ ಅರಳಿಸುವ ಮಧುರ ಭಾವನೆಗಳು, ನಾಯಕನಿಗೆ ತುಂಬುವ ಆತ್ಮಸ್ಥೈರ್ಯ, ನಾಯಕನ ತುಡಿತ ಪ್ರೇಕ್ಷಕನನ್ನು ಖಂಡಿತ ನಿರಾಸೆ ಮಾಡುವುದಿಲ್ಲ. ಕನಿಷ್ಟಪಕ್ಷ ಚಣಕಾಲವಾದರೂ ಮನಸ್ಸಿಗೆ ಸಮಾಧಾನ, ಸಂತೋಷ ಕೊಡುತ್ತದೆ.

ಏಕೆ ಈ ಸಿನಿಮಾ ಜ್ಞಾಪಕಕ್ಕೆ ಬಂತೆಂದರೆ, ಕಳೆದ ಶನಿವಾರ ಚಂದನದಲ್ಲಿ ಈ ಸಿನಿಮಾ ಬರುತ್ತಿತ್ತು. ಅಲ್ಲಿ ನಾಯಕ ತನ್ನ ಗೆಳೆಯನ ಹೆಂಡತಿಗೆ ಹೇಳುವ ಮಾತು ನಿಜಕ್ಕೂ ಅರ್ಥಪೂರ್ಣವೆನಿಸಿ, ನಿಮ್ಮೊಡನೆ ಆ ಮಾತನ್ನು ಹಂಚಿಕೊಳ್ಳಲು ಸುಮ್ಮನೆ ಬ್ಲಾಗಿದೆ.

ಆ ಮಾತೆಂದರೆ,

ಮನುಷ್ಯ ತನ್ನ ಜೀವನದಲ್ಲಿ ನಾಲ್ಕು ಹಂತಗಳನ್ನು ದಾಟುತ್ತಾನೆ. ನೀನು(ಗೆಳೆಯನ ಹೆಂಡತಿ) Jamesಅನ್ನು (ನಾಯಕನ ಗೆಳೆಯ) ನಾಲ್ಕನೆಯ ಹಂತಕ್ಕೆ ಕರೆದೊಯ್ಯಬೇಕು ಎಂದು ನಾಯಕ ಹೇಳುವುದು. ಆ ನಾಲ್ಕು ಹಂತಗಳೆಂದರೆ.
೧. ನಾನೂ ಚೆೆನ್ನಾಗಿಲ್ಲ, ಜಗತ್ತೂ ಚೆನ್ನಾಗಿಲ್ಲ (ಎಲ್ಲರೂ ಲಂಚ ತಿನ್ನುವವರೇ, ನಾನು ಲಂಚ ತಿಂದರೆ ಏನು ತಪ್ಪು ಎನ್ನುವಂತಹ ಭಾವನೆ)
೨. ನಾನು ಚೆನ್ನಾಗಿಲ್ಲ, ಜಗತ್ತು ಚೆನ್ನಾಗಿದೆ (ಕೀಳರಿಮೆ ಇರಬಹುದೇ).
೩. ನಾನು ಚೆನ್ನಾಗಿದ್ದೇನೆ, ಜಗತ್ತು ಚೆನ್ನಾಗಿಲ್ಲ (ನಾವೇ great, others are stupid ಎನ್ನುವಂತಹ ನಮ್ಮ ಧಾಟಿ, ನಾವು ದಿನನಿತ್ಯ ಕೇಳುವ, ಲಂಚ, ಕಳ್ಳತನ, ದರೋಡೆ, ಇತ್ಯಾದಿ ಜಗತ್ತು ಚೆನ್ನಾಗಿಲ್ಲ ಎಂಬುದನ್ನು ಹೇಳುತ್ತದೇನೋ? ಆದರೆ ನಾನು ಲಂಚ ತೆಗೆದುಕೊಳ್ಳುವುದಿಲ್ಲ, ಹಾಗಾಗಿ ನಾನು great).
೪. ನಾನೂ ಚೆನ್ನಾಗಿದ್ದೇನೆ, ಜಗತ್ತೂ ಚೆನ್ನಾಗಿದೆ. (ಅಂದರೆ ನಾನು great, ಹಾಗೆಯೇ ನನ್ನಂತಹ ಉತ್ಕೃಷ್ಟ ಮನೋಭಾವದವರು ಬಹಳಷ್ಟು ಜನರಿದ್ದಾರೆ ಈ ಜಗತ್ತಿನಲ್ಲಿ ಎನ್ನುವಂತಹ ಭಾವನೆ).

ಅಂದಹಾಗೆ, ಬ್ಲಾಗಿನ ಶೀರ್ಷಿಕೆ ಅರ್ಥವಾಗಲಿಲ್ಲವೇ. ಇಡೀ ಸಿನಿಮಾ ಇರುವುದೇ ಅಲ್ಲಿ, ನಿಮಗೆ ಸಾಧ್ಯವಾದಲ್ಲಿ ಆ ಸಿನಿಮಾ ಒಮ್ಮೆ ತಪ್ಪದೇ ನೋಡಿ. ಖಂಡಿತ ನಿಮಗೆ ನಿರಾಸೆಯಾಗುುವುದಿಲ್ಲ.

ಅದ್ಸರಿ, ಈ ನಾಲ್ಕು ಹಂತದಲ್ಲಿ ನೀವು ಯಾವ ಹಂತದಲ್ಲಿದ್ದೀರಪ್ಪಾ...? ತುಸು ಯೋಚಿಸಿ ಉತ್ತರ ನೀಡಿ.

ಸವಿಯೊದಗು

~.~
  • Sunil Jayaprakash ರವರ ಬ್ಲಾಗ್
  • Login or register to post comments
  • 830 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 31, 2006 - 2:22pm — Sunil Jayaprakash

ಬೆಳದಿಂಗಳ ಬಾಲೆಯ ಹೆಸರು

Sunil Jayaprakash's picture

ಚಿತ್ರದಲ್ಲಿ ನಾಯಕನ ಹೆಸರು - ರೇವಂತ
ನಾಯಕಿ, ಕ್ಷಮಿಸಿ, ಬೆಳದಿಂಗಳ ಬಾಲೆಯ ಹೆಸರು - ರಮ್ಯ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 31, 2006 - 4:28pm — BogaleRagale

ಯೋಚಿಸುವಂತೆ ಮಾಡಿದ್ರಲ್ಲಾ....?

BogaleRagale's picture

ಈ ಪ್ರಶ್ನೆ ಕೇಳಿ ಯೋಚಿಸುವಂತೆ ಮಾಡಿದ್ರಲ್ಲಾ...? ಬಹುಶಃ ನನ್ನದು ಎರಡನೇ ಹಂತವಿರಬಹುದು. ಮೂರನೇ ಹಂತಕ್ಕೆ ಹೋಗುವುದು ಕಷ್ಟ. ನಾಲ್ಕಕ್ಕೆ ನೇರವಾಗಿ ನೆಗೆಯಬಹುದೆಂದು ತೋರುತ್ತದೆ.
-ಅಸತ್ಯಾನ್ವೇಷಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 31, 2006 - 5:17pm — Sunil Jayaprakash

ನಿಜಹೇಳಬೇಕೆಂದರೆ

Sunil Jayaprakash's picture

"ನಿಜಹೇಳಬೇಕೆಂದರೆ" (ಹಾಗೆಂದ ಮಾತ್ರಕ್ಕೆ ಇಲ್ಲಿಯ ತನಕ ಹೇಳಿದ್ದು ಸುಳ್ಳೆಂದಲ್ಲ) ಮೂರನೆ ಹಂತದಲ್ಲಿಯೇ ನಾವು ಬಹಳವಾಗಿ ಬೆಸೆದು ಹೋಗಿರುತ್ತೇವೆ ಮತ್ತು ದಿನನಿತ್ಯವೂ ಹೆಣಗುತ್ತಿರುತ್ತೇವೆ. ಅದುವೇ ಅಹಂಕಾರದ ಸ್ಥಿತಿ.

೧. ನಾನು traffic rules ಎಷ್ಟು ಚೆನ್ನಾಗಿ ಪಾಲಿಸುತ್ತೇನೆ, ಬೇರೆಯವರು ಏಕೆ ಪಾಲಿಸುವುದಿಲ್ಲವೋ ನಾ ಕಾಣೆ.
೨. ನಾನು ಯಾರೋಡನೆಯೂ ವೃಥಾ ಜಗಳವಾಡುವುದಿಲ್ಲ. ಆದರೆ ಬೇರೆಯವರಿಗೆ ಮೂಗಿನ ತುದಿಯಲ್ಲೇ ಕೋಪವಿರುತ್ತದೆ.
೩. ನಾನು ಕೆಟ್ಟ ಮಾತುಗಳನ್ನಾಡುವುದಿಲ್ಲ. ಆದರೆ ಬೇರೆಯವರು ಬರೇ ಹೊಲಸು ಮಾತುಗಳನ್ನೇ ಆಡುತ್ತಾರೆ.
೪. ನಾನು ಎಷ್ಟು ಕಷ್ಟ ಪಡುತ್ತೇನೆ. ಬೇರೆಯವರು ಏನೂ ಕೆಲಸ ಮಾಡದಿದ್ದರೂ ದುಡ್ಡು ಸಂಪಾದಿಸುತ್ತಾರೆ.
೫. engg students - ನಾನೊಬ್ನೆೆ project ಸ್ವಂತವಾಗಿ ಮಾಡಿದೆ ಬೇರೆಯವರೆಲ್ಲರೂ ಎಲ್ಲಿಂದಲೋ ಎತ್ತಿದರು.
೬. ನಾನು ಮಾಡಿದ project ಎಷ್ಟು ಚೆನ್ನಾಗಿತ್ತು, ಆದರೆ ಬೇರೆಯವರ project ಒಂಚೂರೂ ಚೆನ್ನಾಗಿರಲಿಲ್ಲ.

ಹೀಗೆ..ಅಂತ್ಯವಿಲ್ಲದ ಪಟ್ಟಿ. ಒಟ್ಟಿನಲ್ಲಿ ನಾನು ನೋಡಿರುವುದೇ, ಕಂಡಿರವುದೇ, ಕೇಳಿರುವುದೇ ಸತ್ಯ. ಬೇರೆಯವರ ಅಭಿಪ್ರಾಯಗಳು ನಗಣ್ಯ ಎನ್ನುವಂತಹ ಮನಃಸ್ಥಿತಿ.
ಈ ರೀತಿಯ ಅಭಿಪ್ರಾಯಗಳನ್ನು ನಾವು ಒಂದಲ್ಲ ಒಂದು ದಿನ ನಮಗೆ ನಾವೇ ಹೇಳಿಕೊಂಡು ಜಗತ್ತನ್ನು ಬೈದಿರುತ್ತೇವೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
January 7, 2008 - 1:49pm — girish.rajanal

ಉ: ನಿಜಹೇಳಬೇಕೆಂದರೆ

girish.rajanal's picture

ಯಾವುದೋ ಚಿತ್ರದಲ್ಲಿ ಉಪೇಂದ್ರ ಈ ಮೇಲಿನ ಸಂಭಾಷಣೆಯನ್ನು ಹೇಳಿದ್ದಾನೆ ಅನ್ನಿಸುತ್ತೆ..

ನಿಮ್ಮವ,
ಗಿರೀಶ ರಾಜನಾಳ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ೪ ಹಂತಗಳು
  • ಕೇಳ್ರಪ್ಪೋ ಕೇಳಿ - ಊರ್ವಶಿ ಪುರಾಣ
  • ಸಿನಿಮಾ ಕತೆ ಕೇಳಿ- ಸತ್ಯಕಾಮ -೨
  • ಮುಂಗಾರು ಮಳೆ...
  • ಮುಂಗಾರು ಮಳೆ - ವಿಮರ್ಶೆಗಳು ಮತ್ತು ಭಾವನೆಗಳು
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಬರಾಕ್ ಒಬಾಮ ಮತ್ತು ಜಾನ್ ಮೆಕೈನ್: ಯಾರು ಸರಿ?
  • ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
  • ಪುರಂದರದಾಸರ ಎರಡು ಪದಗಳು
  • IT - ಸಿಂಪ್ಟಮ್ಸ
  • ಬಿಟ್ಟು ಹೋದವಳಿಗಾಗಿ
  • ಶಾಲೆಗಳು, ಸ್ಪರ್ಧಾತ್ಮಕ ಜಗತ್ತು..
  • ನೀರವತೆ!
  • ಓದಿದ್ದು ಕೇಳಿದ್ದು ನೋಡಿದ್ದು-9
  • ಓ, ಬನ್ನಿ, ಸೋದರರೆ, ಬೇಗ ಬನ್ನಿ!
  • ನನ್ನ ನೆನಪು ನಿನಗೆ ಬರೋದೇ ಇಲ್ಲವಾ ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಗಣೇಶ
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 6, 2008 - 12:15am
  • ಗಣೇಶ
    ಉ: IT - ಸಿಂಪ್ಟಮ್ಸ
    September 5, 2008 - 11:34pm
  • yuvapremi
    ಉ: ಯುವ ಬ್ಲಾಗಿಗನ ಸಂದರ್ಶನ
    September 5, 2008 - 11:22pm
  • yuvapremi
    ಉ: Splendours of Royal Mysore
    September 5, 2008 - 11:03pm
  • hamsanandi
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:13pm
  • Sunil Jayaprakash
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:01pm
  • Sunil Jayaprakash
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:00pm
  • raghud
    ಉ: ಕನ್ನಡ ಮತ್ತು ಸ್ಟ್ಯಾಂಡರ್ಡ್ ಚಾರ್ಟೆಡ್ ಬ್ಯಾಂಕ್!
    September 5, 2008 - 9:58pm
  • kalpana
    ಉ: ಶಾಲೆಗಳು, ಸ್ಪರ್ಧಾತ್ಮಕ ಜಗತ್ತು..
    September 5, 2008 - 9:58pm
  • hamsanandi
    ಉ: ಚಂದಿರನ ನೋಡಿದವ
    September 5, 2008 - 9:55pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 312 ಅತಿಥಿಗಳು ಆನ್ಲೈನ್ ಇರುವರು.


ಕ್ರಾಂತಿಕಾರಿಯಾಗುವುದಕ್ಕಿಂದ ಮೊದಲು ನೀನು ಒಬ್ಬ ಮನುಷ್ಯನಾಗಬೇಕು, ದುರ್ಬಲರು ಯಾರೇ ಅಗಲಿ ಅವರಿಗಾಗಿ ಶ್ರಮಿಸಬೇಕು.

— ಜೇನ್ ಫೊಂಡಾ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator