ಧರ್ಮ ಮತ್ತು ಸಮರ - ಒಂದು ಅಲೋಚನೆ.
ಅಮೆರಿಕಾ ಹಾಗು ಭಯೋತ್ಪಾದಕ ಸಂಘಟನೆ ತಾಲಿಬಾನ್ ನಡುವಣ ಕದನ ಅಂತಿಮ ಹಂತದಲ್ಲಿದ್ದು , ವಿಶ್ವ ಸಂಸ್ಥೆ ಹಾಗು ಇತರ ರಾಷ್ಟ್ರಗಳ ಸಭೆಯ ಪರಿಣಾಮವಗಿ ತಾಲಿಬಾನ್ ತದನಂತರದ ಸರ್ಕಾರದ ನಿರ್ವಹಣೆಗಾಗಿ ಪಶ್ತೂನ್ ಸಂಘಟನೆಯ ನಾಯಕ ಹಮೀದ್ ಕರ್ಜೈ ಅವರನ್ನು ನೇಮಿಸಲಾಗಿದೆ . ಈ ಮೇಲಿನ ಸಂಗತಿಗೆ ಅಮೆರಿಕಾದಲ್ಲಿ ನಡೆದ ಭಯೋತ್ಪಾದಕ ದಾಳಿಯೇ ಕಾರಣ . ಸೆಪ್ಟೆಂಬರ್ ೧೧ ನೇ ತಾರೀಖಿನ ಭಯೋತ್ಪಾದಕ ಕೃತ್ಯ , ಸುಮಾರು ೧೨ ವರ್ಷಗಳಿಂದ ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರ - ಇವೆಲ್ಲವೂ ಒಬ್ಬರಿಂದಲೇ ಮಾಡಲು ಅಸಾಧ್ಯ . ಹಾಗದರೆ ಯಾರು ಮಾಡುತ್ತಿದ್ದಾರೆ ? ಏಕೆ ಮಾಡುತ್ತಿದ್ದಾರೆ ? ಮುಗ್ಧ ಜನ ಏಕೆ ಬಲಿಯಾಗುತ್ತಿದ್ದಾರೆ ? ಜನರನ್ನು ಹೇಗೆ ಕೆರಳಿಸಲಾಗುತ್ತಿದೆ ?
ಈ ಮೇಲಿನ ಪ್ರಶ್ನೆಗಳು ಬರುವುದು ಸಹಜ . ಭಾರತದಲ್ಲಿನ ಎರಡು ಶ್ರೇಷ್ಠ ಗ್ರಂಥಗಳೆಂದರೆ "ಮಹಾಭಾರತ" ಹಾಗು "ರಾಮಾಯಣ" . ಈ ಎರಡೂ ಗ್ರಂಥಗಳಲ್ಲಿ "ಧರ್ಮಯುದ್ಧ" ಎಂಬ ಪದಗಳು ಕಾಣಸಿಗುತ್ತವೆ . ಪಾಂಡವರು ಕೌರವರ ವಿರುದ್ಧವೂ ರಾಮನು ರಾವಣನ ವಿರುದ್ಧವೂ ಧರ್ಮ ಯುದ್ಧದಲ್ಲಿ ಜಯಗಳಿಸುತ್ತಾರೆ . ಇದನ್ನು ಸತ್ಯ ಅಸತ್ಯಗಳ ನಡುವೆ ನಡೆಯುವ ಯುದ್ಧವೆಂದು ಬಣ್ಣಿಸುತ್ತಾರೆ . ಈ ಮೇಲಿನ ಧೀಮಂತರು ಹಾಗು ವೀರರು "ಧರ್ಮೋ ರಕ್ಷತಿ ರಕ್ಷಿತಃ" ಎಂದು ನಂಬಿದ್ದರು . ಅದರೆ ಈಗಿನ ಕಲಿಯುಗದಲ್ಲಿ ಧರ್ಮ ಯುದ್ಧದ ಹೆಸರಿನಲ್ಲಿ ಅಮಾಯಕರು ಕೊಲ್ಲಲ್ಪಡುತಿದ್ದಾರೆ. ಧರ್ಮ ರಕ್ಷಣೆಯ ನೆಪದಲ್ಲಿ ತಮ್ಮ ಸ್ವಾರ್ಥವನ್ನು ಪೂರೈಸಲು ಅನೇಕ ಯುವಕರನ್ನು "ಭಯೋತ್ಪಾದನೆ" ಎಂಬ ಕರಾಳ ಜಗತ್ತಿಗೆ ತಳ್ಳಲ್ಲಪಡುತ್ತಿದ್ದಾರೆ . "ಜಿಹಾದ್" ಎಂಬ ಹೆಸರಿನಲ್ಲಿ ಕೊಲೆ , ಅನ್ಯಾಯ ,ಅಪಚಾರ ನಡೆಯುತ್ತಲಿದೆ . ಹಿರಿಯರೊಬ್ಬರಿಂದ ದೊರೆತ ಮಾಹಿತಿಯಂತೆ "ಜಿಹಾದ್" ಎಂಬ ಪದದ ಅರ್ಥ ಶತ್ರುವನ್ನು ಶಿಕ್ಷಿಸುವುದು . ಆ ಶಿಕ್ಷೆಯನ್ನು ಮಾತಿನಿಂದಲಾದರು , ಹೃದಯದಿಂದ , ಕೈಗಳಿಂದ ಅಥವಾ ಖಡ್ಗದಿಂದ ನೀಡಬಹುದು ಎಂಬುದಾಗಿ ತಿಳಿದು ಬರುತ್ತದೆ . ಈ ಮಾತಿನ ಅಂತರಾರ್ಥವನ್ನು ಅರಿಯದ ಮೂಢರು ಕ್ರೂರವಾಗಿ ಜನರನ್ನು ವಿಶ್ವದೆಲ್ಲೆಡೆ ಕೊಲ್ಲುತ್ತಾರೆ . ಅಲ್ಖೈದ - ಅಂತರಾಷ್ಟ್ರೀಯ ಭಯೊತ್ಪಾದಕರ ಮುಖ್ಯಸ್ಥನು ನ್ಯೂಯಾರ್ಕ್ ಮೇಲೆ ನಡೆಸುವ ದಾಳಿಕೊರರಿಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಹಾಗು ಅವರು ಮಾಡುತ್ತಿರುವ ಕೆಲೆಸ ದೇವರ ಕೆಲಸ ಎಂದು ಬರೆದಿದ್ದನಂತೆ ! ಅಮಾಯಕರ ರಕ್ತದ ಮಡುವಿನಲ್ಲಿ ಒದ್ದಾಡುವುದರಿಂದ ಅದೆಂಥ ಸ್ವರ್ಗ ಪ್ರಾಪ್ತಿಯೋ , ದೇವರ ಕೆಲಸವೋ ನಾನು ಅರಿಯೆ . ಇದು ಧರ್ಮ ಸಮ್ಮತವಲ್ಲ ಎಂಬುದಾಗಿ ಖಡಾಖಂಡಿತವಾಗಿ ಹೇಳಬಹುದು.
ಇಂತಹ ಸಂಕಷ್ಟದ ಸ್ಥಿತಿಯಲ್ಲಿ ಎಲ್ಲಾ ದೇಶಗಳು ಒಗ್ಗೂಡಿ ಅತ್ಮೀಯತೆಯನ್ನು ಬೆಳೆಸಿಕೊಳ್ಳುತ್ತಿರುವುದು ಶುಭ ಸೂಚನೆಯಾಗಿದೆ. ಧರ್ಮಯುದ್ಧವೆಂಬ ಮೊಡದ ಮುಸುಕಿನಲ್ಲಿ ಭಯೊತ್ಪಾದನೆಯನ್ನು ಸಕಾಲದಲ್ಲಿ ಅರಿತಿರುವ ದೇಶಗಳು ಅನೇಕ ಕ್ರಮಗಳ್ಳನ್ನು ಕೈಗೊಳ್ಳುತ್ತಿದ್ದಾರೆ . ಈ ಕ್ರಮಗಳ್ಳಲ್ಲಿ ಸತ್ಯ - ಅಸತ್ಯತೆಗಳ ಅರ್ಥವನ್ನು ದಾರಿ ತಪ್ಪಿರುವ ಯುವಕರಿಗೆ ನೀಡುವುದು ಸೇರಿದರೆ ಸರಿ ಎಂದು ನನ್ನ ಅನಿಸಿಕೆ . ಹೀಗೆ ದೇಶಗಳ ನಡುವೆ ಇರುವ ತೊಡಕುಗಳು ನಿವಾರಣೆಯಾಗಿ ಎಲ್ಲರೂ ಒಗ್ಗೂಡಿ ಸಹಬಾಳ್ವೆ ನಡೆಸಿದರೆ ಎಲ್ಲೆಡೆ "ವಿಶ್ವಶಾಂತಿ" ಸ್ಥಾಪನೆ ಆಗುವುದರಲ್ಲಿ ಸಂದೇಹವೇ ಇಲ್ಲ.

- supreethjburji ರವರ ಬ್ಲಾಗ್
- Login or register to post comments
- 471 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಧರ್ಮ ಮತ್ತು ಸಮರ - ಒಂದು ಅಲೋಚನೆ.
ಭಾರತದಲ್ಲಿ ಇಸ್ಲಾಂ ಬೆಳೆದು ಬಂದ ರೀತಿಯೇ ಹಾಗಿದೆ. ಭಾರತಕ್ಕೆ ಬಂದ್ರು ಕಾಶ್ಮೀರದಿಂದ ಕನ್ಯಾಕುಮಾರಿತನಕ ಅವರು ಮಾಡಿದ್ದು ಹಿಂದು ಸಂಸೃತಿಯ ನಾಶ! ಭಗ್ನಗೊಂಡ ದೇವಾಲಯಗಳನ್ನು ನಾವು ಇವತ್ತಿಗೂ ಕಾಣುತ್ತಾಇದ್ದೇವೆ. ಭಯೋತ್ಪಾದನೆ ಅನ್ನೋ ಹಾಗಿದ್ರೆ ಮಸೀದಿ ಮೇಲೂ ಬಾಬ್ ಬೀಳಬೇಕಲ್ವಾ ಯಾಕೆ ಬೀಳಲ್ಲ ಸಂಕಟಮೋಚನ ದೇವಾಲಯಕ್ಕೇ ಬೀಳಬೇಕೆ? ದೀಪಾವಳಿ ದಿನಾನೇ ಸ್ಫೋಟ ಆಗಬೇಕೆ? ಇಲ್ಲ ಧರ್ಮಗಳನ್ನು ಆದರಿಸಿ ಅಪ್ಪಿದ ನಮಗೇಕೆ ಈ ಶಿಕ್ಷೆ?
ವಿವೇಕಾನಂದರು ಹೇಳಿದಂತೆ..
HINDUISM IS NOT A RELIGION ITS A WAY OF LIFE