ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › supreethjburji ರವರ ಬ್ಲಾಗ್

ಧರ್ಮ ಮತ್ತು ಸಮರ - ಒಂದು ಅಲೋಚನೆ.

June 23, 2006 - 9:57pm — supreethjburji

ಅಮೆರಿಕಾ ಹಾಗು ಭಯೋತ್ಪಾದಕ ಸಂಘಟನೆ ತಾಲಿಬಾನ್ ನಡುವಣ ಕದನ ಅಂತಿಮ ಹಂತದಲ್ಲಿದ್ದು , ವಿಶ್ವ ಸಂಸ್ಥೆ ಹಾಗು ಇತರ ರಾಷ್ಟ್ರಗಳ ಸಭೆಯ ಪರಿಣಾಮವಗಿ ತಾಲಿಬಾನ್ ತದನಂತರದ ಸರ್ಕಾರದ ನಿರ್ವಹಣೆಗಾಗಿ ಪಶ್ತೂನ್ ಸಂಘಟನೆಯ ನಾಯಕ ಹಮೀದ್ ಕರ್ಜೈ ಅವರನ್ನು ನೇಮಿಸಲಾಗಿದೆ . ಈ ಮೇಲಿನ ಸಂಗತಿಗೆ ಅಮೆರಿಕಾದಲ್ಲಿ ನಡೆದ ಭಯೋತ್ಪಾದಕ ದಾಳಿಯೇ ಕಾರಣ . ಸೆಪ್ಟೆಂಬರ್ ೧೧ ನೇ ತಾರೀಖಿನ ಭಯೋತ್ಪಾದಕ ಕೃತ್ಯ , ಸುಮಾರು ೧೨ ವರ್ಷಗಳಿಂದ ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರ - ಇವೆಲ್ಲವೂ ಒಬ್ಬರಿಂದಲೇ ಮಾಡಲು ಅಸಾಧ್ಯ . ಹಾಗದರೆ ಯಾರು ಮಾಡುತ್ತಿದ್ದಾರೆ ? ಏಕೆ ಮಾಡುತ್ತಿದ್ದಾರೆ ? ಮುಗ್ಧ ಜನ ಏಕೆ ಬಲಿಯಾಗುತ್ತಿದ್ದಾರೆ ? ಜನರನ್ನು ಹೇಗೆ ಕೆರಳಿಸಲಾಗುತ್ತಿದೆ ?

ಈ ಮೇಲಿನ ಪ್ರಶ್ನೆಗಳು ಬರುವುದು ಸಹಜ . ಭಾರತದಲ್ಲಿನ ಎರಡು ಶ್ರೇಷ್ಠ ಗ್ರಂಥಗಳೆಂದರೆ "ಮಹಾಭಾರತ" ಹಾಗು "ರಾಮಾಯಣ" . ಈ ಎರಡೂ ಗ್ರಂಥಗಳಲ್ಲಿ "ಧರ್ಮಯುದ್ಧ" ಎಂಬ ಪದಗಳು ಕಾಣಸಿಗುತ್ತವೆ . ಪಾಂಡವರು ಕೌರವರ ವಿರುದ್ಧವೂ ರಾಮನು ರಾವಣನ ವಿರುದ್ಧವೂ ಧರ್ಮ ಯುದ್ಧದಲ್ಲಿ ಜಯಗಳಿಸುತ್ತಾರೆ . ಇದನ್ನು ಸತ್ಯ ಅಸತ್ಯಗಳ ನಡುವೆ ನಡೆಯುವ ಯುದ್ಧವೆಂದು ಬಣ್ಣಿಸುತ್ತಾರೆ . ಈ ಮೇಲಿನ ಧೀಮಂತರು ಹಾಗು ವೀರರು "ಧರ್ಮೋ ರಕ್ಷತಿ ರಕ್ಷಿತಃ" ಎಂದು ನಂಬಿದ್ದರು . ಅದರೆ ಈಗಿನ ಕಲಿಯುಗದಲ್ಲಿ ಧರ್ಮ ಯುದ್ಧದ ಹೆಸರಿನಲ್ಲಿ ಅಮಾಯಕರು ಕೊಲ್ಲಲ್ಪಡುತಿದ್ದಾರೆ. ಧರ್ಮ ರಕ್ಷಣೆಯ ನೆಪದಲ್ಲಿ ತಮ್ಮ ಸ್ವಾರ್ಥವನ್ನು ಪೂರೈಸಲು ಅನೇಕ ಯುವಕರನ್ನು "ಭಯೋತ್ಪಾದನೆ" ಎಂಬ ಕರಾಳ ಜಗತ್ತಿಗೆ ತಳ್ಳಲ್ಲಪಡುತ್ತಿದ್ದಾರೆ . "ಜಿಹಾದ್" ಎಂಬ ಹೆಸರಿನಲ್ಲಿ ಕೊಲೆ , ಅನ್ಯಾಯ ,ಅಪಚಾರ ನಡೆಯುತ್ತಲಿದೆ . ಹಿರಿಯರೊಬ್ಬರಿಂದ ದೊರೆತ ಮಾಹಿತಿಯಂತೆ "ಜಿಹಾದ್" ಎಂಬ ಪದದ ಅರ್ಥ ಶತ್ರುವನ್ನು ಶಿಕ್ಷಿಸುವುದು . ಆ ಶಿಕ್ಷೆಯನ್ನು ಮಾತಿನಿಂದಲಾದರು , ಹೃದಯದಿಂದ , ಕೈಗಳಿಂದ ಅಥವಾ ಖಡ್ಗದಿಂದ ನೀಡಬಹುದು ಎಂಬುದಾಗಿ ತಿಳಿದು ಬರುತ್ತದೆ . ಈ ಮಾತಿನ ಅಂತರಾರ್ಥವನ್ನು ಅರಿಯದ ಮೂಢರು ಕ್ರೂರವಾಗಿ ಜನರನ್ನು ವಿಶ್ವದೆಲ್ಲೆಡೆ ಕೊಲ್ಲುತ್ತಾರೆ . ಅಲ್ಖೈದ - ಅಂತರಾಷ್ಟ್ರೀಯ ಭಯೊತ್ಪಾದಕರ ಮುಖ್ಯಸ್ಥನು ನ್ಯೂಯಾರ್ಕ್ ಮೇಲೆ ನಡೆಸುವ ದಾಳಿಕೊರರಿಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಹಾಗು ಅವರು ಮಾಡುತ್ತಿರುವ ಕೆಲೆಸ ದೇವರ ಕೆಲಸ ಎಂದು ಬರೆದಿದ್ದನಂತೆ ! ಅಮಾಯಕರ ರಕ್ತದ ಮಡುವಿನಲ್ಲಿ ಒದ್ದಾಡುವುದರಿಂದ ಅದೆಂಥ ಸ್ವರ್ಗ ಪ್ರಾಪ್ತಿಯೋ , ದೇವರ ಕೆಲಸವೋ ನಾನು ಅರಿಯೆ . ಇದು ಧರ್ಮ ಸಮ್ಮತವಲ್ಲ ಎಂಬುದಾಗಿ ಖಡಾಖಂಡಿತವಾಗಿ ಹೇಳಬಹುದು.

ಇಂತಹ ಸಂಕಷ್ಟದ ಸ್ಥಿತಿಯಲ್ಲಿ ಎಲ್ಲಾ ದೇಶಗಳು ಒಗ್ಗೂಡಿ ಅತ್ಮೀಯತೆಯನ್ನು ಬೆಳೆಸಿಕೊಳ್ಳುತ್ತಿರುವುದು ಶುಭ ಸೂಚನೆಯಾಗಿದೆ. ಧರ್ಮಯುದ್ಧವೆಂಬ ಮೊಡದ ಮುಸುಕಿನಲ್ಲಿ ಭಯೊತ್ಪಾದನೆಯನ್ನು ಸಕಾಲದಲ್ಲಿ ಅರಿತಿರುವ ದೇಶಗಳು ಅನೇಕ ಕ್ರಮಗಳ್ಳನ್ನು ಕೈಗೊಳ್ಳುತ್ತಿದ್ದಾರೆ . ಈ ಕ್ರಮಗಳ್ಳಲ್ಲಿ ಸತ್ಯ - ಅಸತ್ಯತೆಗಳ ಅರ್ಥವನ್ನು ದಾರಿ ತಪ್ಪಿರುವ ಯುವಕರಿಗೆ ನೀಡುವುದು ಸೇರಿದರೆ ಸರಿ ಎಂದು ನನ್ನ ಅನಿಸಿಕೆ . ಹೀಗೆ ದೇಶಗಳ ನಡುವೆ ಇರುವ ತೊಡಕುಗಳು ನಿವಾರಣೆಯಾಗಿ ಎಲ್ಲರೂ ಒಗ್ಗೂಡಿ ಸಹಬಾಳ್ವೆ ನಡೆಸಿದರೆ ಎಲ್ಲೆಡೆ "ವಿಶ್ವಶಾಂತಿ" ಸ್ಥಾಪನೆ ಆಗುವುದರಲ್ಲಿ ಸಂದೇಹವೇ ಇಲ್ಲ.

~.~
  • supreethjburji ರವರ ಬ್ಲಾಗ್
  • Login or register to post comments
  • 471 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 5, 2007 - 3:23pm — girish.rajanal

ಉ: ಧರ್ಮ ಮತ್ತು ಸಮರ - ಒಂದು ಅಲೋಚನೆ.

girish.rajanal's picture

ಭಾರತದಲ್ಲಿ ಇಸ್ಲಾಂ ಬೆಳೆದು ಬಂದ ರೀತಿಯೇ ಹಾಗಿದೆ. ಭಾರತಕ್ಕೆ ಬಂದ್ರು ಕಾಶ್ಮೀರದಿಂದ ಕನ್ಯಾಕುಮಾರಿತನಕ ಅವರು ಮಾಡಿದ್ದು ಹಿಂದು ಸಂಸೃತಿಯ ನಾಶ! ಭಗ್ನಗೊಂಡ ದೇವಾಲಯಗಳನ್ನು ನಾವು ಇವತ್ತಿಗೂ ಕಾಣುತ್ತಾಇದ್ದೇವೆ. ಭಯೋತ್ಪಾದನೆ ಅನ್ನೋ ಹಾಗಿದ್ರೆ ಮಸೀದಿ ಮೇಲೂ ಬಾಬ್ ಬೀಳಬೇಕಲ್ವಾ ಯಾಕೆ ಬೀಳಲ್ಲ ಸಂಕಟಮೋಚನ ದೇವಾಲಯಕ್ಕೇ ಬೀಳಬೇಕೆ? ದೀಪಾವಳಿ ದಿನಾನೇ ಸ್ಫೋಟ ಆಗಬೇಕೆ? ಇಲ್ಲ ಧರ್ಮಗಳನ್ನು ಆದರಿಸಿ ಅಪ್ಪಿದ ನಮಗೇಕೆ ಈ ಶಿಕ್ಷೆ?
ವಿವೇಕಾನಂದರು ಹೇಳಿದಂತೆ..
HINDUISM IS NOT A RELIGION ITS A WAY OF LIFE

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮುಕ್ತಾಯ
  • ನೀಳ್ಗತೆ
  • ಇಸ್ತ್ರೀ
  • ನಾಳೆ ನೀವೂ ಮಾಯ.............
  • "ಮಗ"
Syndicate content

ಲೇಖಕರು

supreethjburji's picture

ಪರಿಚಯ

trying to find out the real me ...!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಸರಳ ಜೀವನ
  • ಚುಕ್ಕಿಗಳಂತ ಹಲ್ಲು
  • ಹಗಲು-ಇರುಳು
  • ನಿನ್ನ ಪೂಜೆಗೆ ಬಂದ ಮಹದೇಸ್ವರಾ
  • ನುಡಿ ಚಿತ್ರ ಬರೆಯಲು ಕಲಿತಿದ್ದು
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೧)
  • ನೆನೆವುದೆನ್ನ ಮನ ಕರ್ನಾಟಕ ದೇಶವಮ್
  • ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
  • ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • madhava_hs
    ಉ: ನಿನ್ನ ಪೂಜೆಗೆ ಬಂದ ಮಹದೇಸ್ವರಾ
    July 9, 2008 - 6:40pm
  • madhava_hs
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 6:36pm
  • ನೀತಾ
    ಉ: ಹಗಲು-ಇರುಳು
    July 9, 2008 - 6:33pm
  • ಸಂಗನಗೌಡ
    ಉ: ‘ಕಿವಿ’ ಕಡೆ ಗಮನ ಕೊಡಿ; ಇಲ್ಲದಿರೆ ಎಲ್ಲರಿಗೂ ‘ಕೈ’ ಕೊಡಬೇಕು!
    July 9, 2008 - 6:28pm
  • ನೀತಾ
    ಉ: Abroad ಅನ್ನೋ ಮಾಯೆ...
    July 9, 2008 - 6:21pm
  • Deeparavishankar
    ಉ: ಬೈಟೊ ಕಾಫಿ !!! - ೧
    July 9, 2008 - 6:10pm
  • ಸಂಗನಗೌಡ
    ಉ: ಅಬ್ಬಾ!
    July 9, 2008 - 6:01pm
  • yuvapremi
    ಉ: ವರದಕ್ಷಿಣೆ;/ಪ್ರದಕ್ಷಿಣೆ;
    July 9, 2008 - 5:55pm
  • ನೀತಾ
    ಉ: Abroad ಅನ್ನೋ ಮಾಯೆ...
    July 9, 2008 - 5:53pm
  • yuvapremi
    ಉ: ಮುಕ್ತ...ಮುಕ್ತ...ಸಾಹಿತ್ಯ ಬೇಕು...
    July 9, 2008 - 5:46pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 43 ಅತಿಥಿಗಳು ಆನ್ಲೈನ್ ಇರುವರು.


ಅಗ್ನಿ, ವಾಯು, ಯಮ ಇವೆಲ್ಲ ಒಂದೇ ಪರಮೇಶ್ವರನ ಭಿನ್ನ ಭಿನ್ನ ಗುಣ ವಿಶೇಷಗಳ ಭಿನ್ನ ಭಿನ್ನ ಹೆಸರುಗಳು. ಪರಮೇಶ್ವರ ಪರಿಶುದ್ಧ ನಿರ್ಗುಣನು, ಎಂದರೆ ಅನಂತ ಗುಣವಂತನು.

— ಋಗ್ವೇದ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator