ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › sushil ರವರ ಬ್ಲಾಗ್

ಆ ಚಿಕ್ಕ ಹುಡುಗಿ..

June 24, 2008 - 1:42pm — sushil

ಚಿಕ್ಕಂದಿನಲ್ಲಿ ಒಮ್ಮೆ ಅಮ್ಮ ಹಬ್ಬಕ್ಕೆ ತರ ಹೇಳಿದ ಎಣ್ಣೆ,ತರಕಾರಿ ತರಲು ಅಂಗಡಿಯೊಂದಕ್ಕೆ ಹೋಗಿದ್ದೆ. ಖರೀದಿಸುತ್ತಿರುವಾಗ ಒಬ್ಬ ಹುಡುಗಿ ಕಂಕುಳಲ್ಲಿ ಹಸುಳೆಯೊಂದನ್ನು ಹಿಡಿದುಕೊಂಡು ಬಂದಳು. ಬಡವರೆಂದು ನೋಡಿದೊಡನೆ ತಿಳಿಯುತ್ತಿತ್ತು.

ಬಂದವಳೇ "ಅರ್ಧ ಕಾಲು ಕೆಜಿ ಕಡ್ಲೆಹಿಟ್ಟು ಕೊಡಿ" ಎಂದಳು.
ಅಂಗಡಿಯಾತನಿಗೆ ಅರ್ಥವಾಗಲಿಲ್ಲ.
ಅವಳನ್ನು ಅಸಡ್ಡೆಯಿಂದ ನೋಡಿದವನೇ "ಕಾಲು ಕೆಜಿನಾ?" ಎಂದು ಕೇಳಿದ.
"ಇಲ್ಲ ಕಾಲು ಕೆಜಿಯಲ್ಲಿ ಅರ್ಧ" ಹುಡುಗಿ ಹೇಳಿದಳು.
ಕಟ್ಟಿಕೊಟ್ಟ ನಂತರ ಐವತ್ತು ಪೈಸೆ ಕರಿಬೇವು,ಒಂದಷ್ಟು ಹಳ್ಳುಪ್ಪು,ಚಿಕ್ಕ ಸೋಪು ಎಲ್ಲವನ್ನು ಅದರ ಬೆಲೆ ವಿಚಾರಿಸಿ ತೆಗೆದುಕೊಂಡಿದ್ದಳು ಹುಡುಗಿ. ಪ್ರತಿ ವಸ್ತು ತೆಗೆದುಕೊಳ್ಳುವಾಗಲೂ ಕೈಯಲ್ಲಿದ್ದ ಹಣ ಸರಿ ಹೊಂದುವುದೊ ಇಲ್ಲವೊ ಎಣಿಸುತ್ತಿದ್ದಳು.ಎಲ್ಲವೂ ಸೇರಿ ಆರು ರೂಪಾಯಿಯಾಯಿತು.

ಹುಡುಗಿಯ ಹತ್ತಿರ ಇದ್ದದ್ದು ಐದುವರೆ ಮಾತ್ರ.ಎಲ್ಲವನ್ನು ಅಂಗಡಿಯಾತನ ಕೈಗಿಟ್ಟಳು.
"ಇನ್ನು ಐವತ್ತು ಪೈಸೆ?" ಕೇಳಿದನವ.
"ಇಷ್ಟೇ ಅಣ್ಣಾ ಇರೋದು ಮತ್ತೆ ಬಂದಾಗ ಕೊಡ್ತೀನಣ್ಣಾ" ಅಂಗಲಾಚಿತು ಹುಡುಗಿ.
"ಪ್ರತಿ ಬಾರಿ ಬಂದಾಗಲೂ ಹೀಗೇ ಆಟ ಆಡ್ತಿಯಾ? ಏನು ಕೊಡೊದಿಲ್ಲ ಹೋಗು" ಎಂದ.
"ಅಣ್ಣ ನಿಜವಾಗ್ಲೂ ಕೊಡ್ತೀನಣ್ಣ ಒಯ್ಯಲಿಲ್ಲ ಅಂದ್ರೆ ಮನೇಲಿ ಬಡಿತಾರಣ್ಣಾ.." ಪರಿಪರಿಯಾಗಿ ಬೇಡುತ್ತಿದ್ದಳು ಹುಡುಗಿ.
"ನಾನು ಕೊಡ್ತೀನಿ ತಗೊಳ್ಳಿ" ನಾನೆಂದೆ.
"ಇರ್ಲಿ ಬಿಡಪ್ಪಾ ಇವಳು ಪ್ರತಿ ಬಾರಿ ಇದೇ ಆಟ ಆಡೋದು ಅದಕ್ಕೆ ಬುದ್ಧಿ ಬರಲಿ ಅಂತ ಹೇಳಿದ್ದು"ಎಂದು ಮರುಮಾತಾಡದೆ ಎಲ್ಲವನ್ನು ಚಿಕ್ಕ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಕೊಟ್ಟ.ಜೋಪಾನವಾಗಿ ತೆಗೆದುಕೊಂಡು ಹೋಯ್ತು ಹುಡುಗಿ.
ನಾನಿನ್ನೂ ಅವಳು ಹೋದ ದಿಕ್ಕಿನತ್ತಲೇ ನೋಡುತ್ತಿದ್ದೆ.ಮನಸ್ಸಿಗೆ ಕಸಿವಿಸಿಯಾಗಿತ್ತು ಕೇವಲ ಅಷ್ಟರಲ್ಲೆ ಈ ಜನ ಅದು ಹೇಗೆ ಬದುಕುತ್ತಿದ್ದಾರೋ ಎಂದು.ಮನೆಗೆ ಬಂದವನ ತಲೆಯಲ್ಲಿ ನೂರಾರು ವಿಚಾರಗಳು ಪ್ರಶ್ನೆಗಳು ಓಡಾಡುತ್ತಿದ್ದವು..ನಾವಿಲ್ಲಿ ತಿಂದು ಉಂಡು ಹಾಯಾಗಿರುತ್ತೇವೆ....ಅಲ್ಲಿ ಇನ್ನೊಂದು ಕಡೆ ಆ ದಿನದ ಊಟಕ್ಕೆ ಅವರು ಪಾಡು ಪಡುತ್ತಿರುತ್ತಾರೆ.ಕೆಲಸ ಸಿಗದಿದ್ದರೆ ಉಪವಾಸ! ಅವರ ನೋವು ಸುಲಭವಾಗಿ ಬಾಯಲ್ಲಿ ಹೇಳುವಂಥದ್ದಲ್ಲ.ಒಂದು ರಾತ್ರಿ ಉಪವಾಸವಿದ್ದರೆ ಜಗತ್ತೇ ಮುಳುಗಿ ಹೋದಂತೆ ಆಡುತ್ತೇವೆ..ಅಂಥಾದ್ರಲ್ಲಿ ಇವರು ದಿನವೂ ಹೋರಾಡಬೇಕಾದ ಪರಿಸ್ಥಿತಿ.
ಅದರ ಬಗ್ಗೆ ಎಲ್ಲಾದರೂ ಯಾರಾದರೂ ಬರೆದಿದ್ದಾರ ಅಂತ ಅಪ್ಪಾಜಿಯವರ ಕಪಾಟಿನೆಡೆಗೆ ಓಡಿದೆ.
ಇಷ್ಟೆಲ್ಲ ನೆನಪಾಗಿದ್ದು ಇತ್ತೀಚಿನ ಬೆಲೆ ಏರಿಕೆಯನ್ನು ನೋಡಿದಾಗ.ಇಲ್ಲಿ ತಣ್ಣಗೆ AC ರೂಮಲ್ಲಿ ಕೂತು ಕೆಲಸ ಮಾಡುವ ನಮ್ಮಂಥವರಿಗೇ ಇದರ ಬಿಸಿ ಹತ್ತಿರುವಾಗ ಇನ್ನು ಪಾಪ ಬಡವರ ಪಾಡೇನು?
ಯಾಕೋ ಐವತ್ತು ಪೈಸೆಗೆ ಆಗ ಅಷ್ಟೂ ಪಾಡು ಪಟ್ಟ ಆ ಹುಡುಗಿಯ ಚಿತ್ರ ಅಸ್ಪಷ್ಟವಾಗಿ ಮನದಲಿ ಸರಿದಾಡಿತು.

  • ಸಮಷ್ಠಿ
~.~
  • sushil ರವರ ಬ್ಲಾಗ್
  • Login or register to post comments
  • 242 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 26, 2008 - 2:21pm — yuvapremi

ಉ: ಆ ಚಿಕ್ಕ ಹುಡುಗಿ..

yuvapremi's picture

ಹೌದು ಸುಶೀಲ್ ರವರೆ,

ಹೆಚ್ಚುತ್ತಿರುವ ಆಹಾರ ಬೆಲೆಯಿಂದ ನಮ್ಮ ನಡುವಿರುವ ಕಡು ಬಡವರು ಅದು ಹೇಗೆ ಬದುಕು ಸಾಗಿಸುತ್ತಿದ್ದಾರೊ ನನಗು ತಿಳಿಯದಾಗಿದೆ...! Sad

-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 26, 2008 - 3:39pm — lgnandan

ಉ: ಆ ಚಿಕ್ಕ ಹುಡುಗಿ..

lgnandan's picture

ಬಡ ದೇಶಗಳ ಪಾಡು ಇಷ್ಟೇ. ಮೊದಲೇ ಬಡತನದಲ್ಲಿಯೇ ಮುಂದುವರಿಯುತ್ತಿರುವ ನಮ್ಮ ದೇಶದಲ್ಲಿ ಬೇಲೆಯೆರಿಕೆಯಂತಹ ಸಮಸ್ಯೆಗಳು ಮುಂದುವರಿದ ದೇಶಗಳು ತಂದು ಇಡುತ್ತಿರುವ ಕೊಡುಗೆಗಳು. ಮೊದಲು ನಮ್ಮ ದೇಶ ಎಲ್ಲ ರಂಗದಲ್ಲು ಸ್ವಸಾಮರ್ಥ್ಯ ಬೆಳೆಸಿಕೊಳ್ಳಬೇಕು.

-ನಂದನ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 26, 2008 - 4:23pm — yuvapremi

ಉ: ಆ ಚಿಕ್ಕ ಹುಡುಗಿ..

yuvapremi's picture

ಹೌದು ನಂದನ್ ರವರು ಹೇಳಿದ್ದು ಅಕ್ಷರ ಸಹಿತ ನಿಜ..!!

ವರ್ಷಗಳಿಂದ ನಮ್ಮ ದೇಶ ಪರರ ಬುಜಕ್ಕೆ ಒತ್ತಿಕೊಂಡು ನಿಂತು ನಿಂತು ಈಗ ಸ್ವಂತವಾಗಿ ನಿಂತುಕೊಳ್ಳುವ ಶಕ್ತಿ ಕಳೆದುಕೊಂಡಿದೆ..! Sad

-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 26, 2008 - 9:30pm — sushil

ಉ: ಆ ಚಿಕ್ಕ ಹುಡುಗಿ..

sushil's picture

ನಿಮ್ಮ ಅಭಿಪ್ರಾಯ ಸರಿಯಾಗಿದೆ.ಎಷ್ಟೋ ಸಲ ಅನಿಸಿದೆ ಈ ಐಟಿ ಬಿಟಿ ಬಿಟ್ಟು ಬದುಕೋಕೆ ಆಗಲ್ಲ ಅನ್ನೋ ಥರ ಆಡ್ತಾರಲ್ಲಾ ಅಂತ.
ಮೂಲ ಬೆನ್ನೆಲುಬಾದ ರೈತನಿಗೆ,ಮಕ್ಕಳ ವಿದ್ಯಾಭ್ಯಾಸಕ್ಕೆ,ಮೂಲ ಸೌಕರ್ಯಗಳಿಗೆ ಮೊದಲು ಆದ್ಯತೆ ನೀಡಬೇಕು ಅನ್ನಿಸಿದೆ.
ಜನಸಂಖ್ಯೆಯ ಬಹು ಪಾಲು ಇನ್ನೂ ಮೂಲ ಸೌಕರ್ಯಗಳಿಲ್ಲದೆ ನರಳುತ್ತಿದ್ದಾರೆ..ಅವರನ್ನು ಬಿಟ್ಟು ಶ್ರೀಮಂತ ಶ್ರೀಮಂತನಾಗುತ್ತಲೇ ಹೋಗುವ..ಬಡವ ಬಡವನಾಗಿಯೇ ಇರುವ ಈ ಸ್ಥಿತಿ ಮೊದಲು ನಿಲ್ಲಬೇಕು.

-ಸುಶೀಲ್.
ಕನ್ನಡಕಡಲಲಿ ಪುಟ್ಟ ಮೀನು ನಾ..!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 27, 2008 - 8:50pm — Rajeshwari

ಉ: ಆ ಚಿಕ್ಕ ಹುಡುಗಿ..

Rajeshwari's picture

ಗಾಯದ ಮೇಲೆ ಬರ್ರೆ ಎನ್ನುವಂತಾಗಿದೆ ನಮ್ಮ ಬಡವರ ಜೀವನ ಸ್ಥಿತಿ. ಮೊದ್ಲೆ ಮಳೆ ಇರೋಲ್ಲ, ಇಲ್ಲ ಅಂದ್ರೆ ಬೆಳೆ ಇರೋಲ್ಲ. ಹೀಗೆ ಪದಾರ್ಥಗಳ ಬೆಲೆ ಗಗನಕ್ಕೆ ಏರುತ್ತಿದ್ದರೆ ನಮ್ಮಂತಹ ಸಾಮಾನ್ಯರ (ಮಧ್ಯಮ ವರ್ಗ) ಸ್ಥಿತಿಯ ಹದಗೆಡುತ್ತದೆ. ಇನ್ನು ಅವರ ಸ್ಥಿತಿ ಹೇಳುವಂತಿರುವುದಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕಲ್ಪನೆಯ ಹುಡುಗಿ
  • ಹುಡುಗಿ
  • ಆಣೆ ಯಾಕೋ ನಾಕಾಣೆ
  • ಪರಿಶುದ್ಧ ಚರಿತ್ರ
  • ಹೂವಿನ ಹುಡುಗಿ....
Syndicate content

ಲೇಖಕರು

sushil's picture

ಪೂರ್ಣ ಹೆಸರು
ಸುಶೀಲ್ ಕುಮಾರ್

ಪರಿಚಯ

ಪುಸ್ತಕ,ಚಿತ್ರಕಲೆ,ಸಂಗೀತ ನನ್ನ ಸ್ನೇಹಿತರು.ತಾಯಿಗೆ ತಾಯ್ನಾಡಿಗೆ ಒಳ್ಳೆ ಮಗನಾಗೋ ಆಸೆ Sticking out tongue

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಜೋಯೀಸರ ಮಗಳು
  • 1700 11th AVE NE ಅಪಾರ್ಟ್ ಮೆಂಟ್ - 6
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
  • ಓದಿದ್ದು ಕೇಳಿದ್ದು ನೋಡಿದ್ದು-11
  • ಶಿವರಾಜ್ ಕುಮಾರ ಅಭಿಮಾನಿಗಳಿಗೆ ಮತ್ತೇರಿಸುವ ಚಿತ್ರ " ಮಾದೇಶ "
  • ಹಬ್ಬ ತಂದ ನೆನಪು...
  • ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
  • ಆಧುನಿಕ "ಬೇಡರ ಕಣ್ಣಪ್ಪ"..
  • ವೃತ್ತಿಜೀವನದ ಹಂತಗಳು...
  • ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • cmariejoseph
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 1:16pm
  • Sunil Jayaprakash
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:07pm
  • ಶ್ರೀನಿಧಿ
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:02pm
  • cmariejoseph
    ಉ: Splendours of Royal Mysore
    September 7, 2008 - 12:59pm
  • ASHOKKUMAR
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 12:27pm
  • Chamaraj
    ಉ: ಜೀವ ಕಾಯುವುದೇತಕೆ?
    September 7, 2008 - 10:27am
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 6:48am
  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 159 ಅತಿಥಿಗಳು ಆನ್ಲೈನ್ ಇರುವರು.


ನೀತಿ ವಿಚಾರವಿಲ್ಲದಿದ್ದರೆ ಸಮಾಜ ತಪ್ಪು ದಾರಿಯನ್ನು ಹಿಡಿಯುವುದು. ಆದ್ದರಿಂದ ಸರ್ವ ಸಾಮನ್ಯರ ನಿಯಂತ್ರಣಕ್ಕಾಗಿ ನೀತಿ ವಿಚಾರದ ಇತಿ ಮಿತಿ ಇರಬೇಕು.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator