Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › tvsrinivas41 ರವರ ಬ್ಲಾಗ್

ತಂತ್ರಾಂಶಿಗಳು ಎದುರಿಸುತ್ತಿರುವ ತೊಂದರೆಗಳು

May 4, 2006 - 6:30am — tvsrinivas41

ಕೆಲಸ ಮಾಡದೇ ದುಡಿಮೆ ಇಲ್ಲ. ದುಡಿಮೆ ಇಲ್ಲದೇ ಬಾಳಿಲ್ಲ. ದೈಹಿಕವಾಗಿ ಕೆಲಸ ಮಾಡಿ ದುಡಿಯುವವರೂ ಇದ್ದಾರೆ ಮತ್ತು ಮಾನಸಿಕವಾಗಿ ಕೆಲಸ ಮಾಡಿ ದುಡಿಯುವವರು ಇದ್ದಾರೆ. ದೈಹಿಕವಾಗಿ ಕೆಲಸ ಮಾಡುವವರನ್ನು ಸಾಮಾನ್ಯ ಭಾಷೆಯಲ್ಲಿ ಕೂಲಿಗಳೆಂದು ಕರೆಯುವುದು ವಾಡಿಕೆ. ಅವರ ಕೆಲಸ ನಿರ್ವಹಣೆಯಲ್ಲಿ ಬುದ್ಧಿಯ ಉಪಯುಕ್ತತೆ ಅಷ್ಟಾಗಿ ಬೇಕಿಲ್ಲ. ಆದರೆ ಮಾನಸಿಕವಾಗಿ ದುಡಿಯುವವರಿಗೆ ಬುದ್ಧಿಯ ಉಪಯೋಗವೇ ಪ್ರಧಾನವಾದದ್ದು.

ತಂತ್ರಾಂಶ ಅಭಿಯಂತರ ಕೆಲಸವು ಪೂರ್ತಿಯಾಗಿ ಬುದ್ಧಿ ಶಕ್ತಿ ಉಪಯೋಗದಿಂದಲೇ ಆಗುವುದು. ಪ್ರೋಗ್ರಾಮಿಂಗ್, ಕೋಡಿಂಗ್, ಟೆಸ್ಟಿಂಗ್ ಎಂದು ನೂರಾರು ವಿಭಾಗಗಳನ್ನು ಹೊಂದಿರುವ ಗಣಕಯಂತ್ರದ ಸಹಾಯದಿಂದ ಕೆಲಸ ಮಾಡುವ ಉದ್ದಿಮೆ ಈಗ ಹೆಚ್ಚಿನ ಬೇಡಿಕೆಯಲ್ಲಿದೆ. ಈಗೊಂದು ೨೦ ವರ್ಷಗಳ ಹಿಂದೆ ಹೆಚ್ಚಿನ ಕೆಲಸಗಳನ್ನು ಗಣಕಯಂತ್ರದ ಸಹಾಯವಿಲ್ಲದೆಯೇ ಮಾಡುತ್ತಿದ್ದರು. ನಂತರದ ದಿನಗಳಲ್ಲಿ ಎಲ್ಲ ಕ್ಷೇತ್ರಗಳಲ್ಲೂ ನಿಧಾನವಾಗಿ ಗಣಕಯಂತ್ರದ ಉಪಯೋಗ ಬಳಕೆಗೆ ಬಂದಿತು. ಹಣವಂತ ರಾಷ್ಟ್ರಗಳಾದ ಅಮೆರಿಕ, ಇಂಗ್ಲೇಂಡ್, ಜರ್ಮನಿ, ಜಪಾನ್ ಇತ್ಯಾದಿಗಳಲ್ಲಿ ಕ್ಷಿಪ್ರ ಗತಿಯಲ್ಲಿ ಗಣಕಯಂತ್ರದ ಬಳಕೆಯಾಯಿತು. ಈ ಕ್ಷೇತ್ರದಲ್ಲಿ ಹೆಚ್ಚಿನ ಶ್ರಮ ವಹಿಸಿದವರು ಭಾರತೀಯರೇ. ಭಾರತೀಯ ತಂತ್ರಾಂಶ ಪರಿಣತರು ಇತರ ದೇಶಗಳಿಗೆ ಹೋಗಿ ಕೆಲಸ ಮಾಡುತ್ತಿದ್ದರು, ಮಾಡುತ್ತಿದ್ದಾರೆ. ಆದರೂ, ನಮ್ಮ ದೇಶದಲ್ಲಿ ಇಷ್ಟು ಕ್ಷಿಪ್ರ ಗತಿಯಲ್ಲಿ ಬೆಳವಣಿಗೆ ಆಗಲಿಲ್ಲ. ಇದಕ್ಕೆ ಮುಖ್ಯ ಕಾರಣವೇನೆಂದರೆ, ಅಲ್ಲಿ ಮಾನವ ಸಂಪನ್ಮೂಲ ಕಡಿಮೆ ದರದಲ್ಲಿ ಸಿಕ್ಕುತ್ತಿದ್ದು (ನಮ್ಮ ದೇಶದವರೇ) ಮತ್ತು ಮೂಲ ಬಂಡವಾಳವನ್ನು ಹೆಚ್ಚಿನ ಮೊತ್ತದಲ್ಲಿ ತೊಡಗಿಸಿದ್ದರು. ಈಗೀಗ ನಮ್ಮ ದೇಶದಲ್ಲಿಯೂ ಎಲ್ಲ ಕ್ಷೇತ್ರಗಳಲ್ಲಿಯೂ ಗಣಕಯಂತ್ರದ ಉಪಯೋಗ ಅಧಿಕವಾಗಿದೆ. ಹಾಗಾಗಿ ಗಣಕಯಂತ್ರದ ಸಹಾಯದಿಂದ ಸುಲಭವಾಗಿ ಕೆಲಸ ಮಾಡಲು ಬೇಕಿರುವ ತಂತ್ರಾಂಶವನ್ನು ಅಭಿಯಂತರರು ಒದಗಿಸುವರು. ಈ ಕ್ಷೇತ್ರದಲ್ಲಿ ಖಾಸಗೀ ಬಂಡವಾಳುದಾರರ ಪಾಲು ಹೆಚ್ಚಾಗಿ, ಲಾಭ ಮಾಡುವುದೇ ಗುರಿಯಾಗಿದೆ. ಕೆಲಸ ಮಾಡುವ ಆಭಿಯಂತರರಿಗೆ ಉಳಿದ ಕ್ಷೇತ್ರಗಳಿಗಿಂತಲೂ ಹೆಚ್ಚಿನ ಸಂಬಳವನ್ನು ಕೊಡುವರು. ಅವರು ಮಾಡುವ ಖರ್ಚಿಗಿಂತಲೂ ಹೆಚ್ಚಿನ ವರಮಾನ ಗಳಿಸುವುದೇ ಬಂಡವಾಳದಾರರ ಉದ್ದೇಶ. ಹಾಗಾಗಿ ಅಭಿಯಂತರರು ಹೆಚ್ಚಿನ ಪರಿಶ್ರಮ ವಹಿಸಿ ಕೆಲಸ ಮಾಡಬೇಕಾಗಿದೆ. ಇಂತಹ ಸಂದರ್ಭಗಳಲ್ಲಿ ಅವರಿಗೆ ಒದಗಬಹುದಾದ ಕೆಲವು ತೊಂದರೆಗಳ ಬಗ್ಗೆ ನನಗೆ ತಿಳಿದ ಮಟ್ಟಿಗೆ ಎರಡು ಸಾಲುಗಳನ್ನು ಬರೆದು ತಿಳಿಸಿರುವೆ.

ಇಂದಿನ ಪರಿಸ್ಥಿತಿಯಲ್ಲಿ ಎಲ್ಲರಿಗೂ ತಿಳಿದಿರುವಂತೆ ತಂತ್ರಾಂಶ ಅಭಿಯಂತರುಗಳ ಕಾರ್ಯ ವೈಖರಿಯಲ್ಲಿ ಬಹಳ ಒತ್ತಡವಿದೆ. ಇದಕ್ಕೆ ಕಾರಣವೇನು?
ಮೊದಲಿಗೆ ಈ ಕ್ಷೇತ್ರದಲ್ಲಿ ಈಗ ಇರುವ ಬೇಡಿಕೆ ಮೊದಲಿಗಿಂತ ಹೆಚ್ಚಾಗಿದೆ. ಎಲ್ಲ ಕ್ಷೇತ್ರಗಳನ್ನೂ ಗಣಕೀಕರಣಗೊಳಿಸುತ್ತಿರುವರು. ಕೆಲಸ ಮಾಡುತ್ತಿರುವವರು ಕೆಲಸಕ್ಕೆ ಇರುವ ಬೇಡಿಕೆಗಿಂತ ಕಡಿಮೆಯಾಗಿ ಇದ್ದು, ಕೆಲಸಿಗರ ಮೇಲೆ ಒತ್ತಡ ಜಾಸ್ತಿಯಾಗುತ್ತಿದೆ. ಅದಲ್ಲದೇ ಹೆಚ್ಚಿನ ಸಮಯವೆಲ್ಲಾ ಮಿದುಳಿಗೇ ಹೆಚ್ಚಿನ ಕೆಲಸ. ಹಾಗಾಗಿ ಮಾನಸಿಕ ಶ್ರಮ ಹೆಚ್ಚಾಗಿರುವುದು. ದಿನಕ್ಕೆ ೧೦ ರಿಂದ ೧೨ ಘಂಟೆಗಳ ಕಾಲ ಒಂದೇ ಸಮನೆ ಕೆಲಸ ಮಾಡಬೇಕಾಗಬಹುದು.
ಇನ್ನು ಸತತವಾಗಿ ಒಂದೇ ಕಡೆ ಕುಳಿತು ಕೆಲಸ ಮಾಡುವುದರಿಂದ ಬೆನ್ನಿಗೆ, ಪೃಷ್ಠಕ್ಕೆ ತೊಂದರೆ, ಮತ್ತು ಸದಾ ಕಾಲ ಮಾನಿಟರ್ ನೋಡುವುದರಿಂದ ಕಣ್ಣಿಗೆ ತೊಂದರೆ ಬರುವ ಸಾಧ್ಯತೆಗಳಿವೆ. ಭೌತಿಕ ಶರೀರಕ್ಕೆ ಕೆಲಸ ಕಡಿಮೆಯಾಗಿ ತಲೆಗೆ ಕೆಲಸ ಜಾಸ್ತಿಯಾಗುವುದು. ಇದರಿಂದ ಬೊಜ್ಜು ಬರುವುದು, ಜೀರ್ಣಶಕ್ತಿ ಕಡಿಮೆ ಆಗುವುದು. ಮುಂದೆ ಇದರಿಂದ ಹೊಟ್ಟೆಗೆ ಸಂಬಂಧಪಟ್ಟ ಕಾಯಿಲೆಗಳು, ಮಿದುಳಿಗೆ ಸಂಬಂಧಪಟ್ಟ ಕಾಯಿಲೆಗಳು ಮತ್ತು ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚು. ಅಷ್ಟೇ ಅಲ್ಲ, ಮನಸ್ಸಿಗೆ ನೆಮ್ಮದಿಗೊಳಿಸಿ ಉತ್ತೇಜಿಸುವ ಸುಲಭೋಪಾಯವಾದ ಸಿಗರೇಟ್, ಕಾಫೀ, ಚಹಾಗಳ ಸೇವನೆ ಹೆಚ್ಚಾಗಿ ಅಂತಹ ದುಶ್ಚಟಗಳಿಗೆ ಬಲಿಯಾಗಿ ವ್ಯಸನಿಗಳಾಗಬಹುದು. ಒಂದರಿಂದ ಹಿಂದೆ ಒಂದರಂತೆ ಸಿಗರೇಟ್ ಸೇವನೆಯಿಂದ ಹೃದಯ ರೋಗಗಳೂ, ಚಹ - ಕಾಫಿಗಳ ಸೇವನೆಯಿಂದ ವಾಯು ಪಿತ್ತಕ್ಕೆ ಸಂಬಂಧಿಸಿದ ರೋಗಗಳೂ ಬರುವುವು. ಇಷ್ಟೆಲ್ಲಾ ಹೆಚ್ಚಿನ ಸಮಯ ಕೆಲಸ ಮಾಡುವುದರಿಂದ ಸರಿಯಾಗಿ ನಿದ್ರೆ ಬರುವುದಿಲ್ಲ. ಅಂತಹ ಸಮಯಗಳಲ್ಲಿ ಮದ್ಯಪಾನದ ಸೇವನೆಯ ಮೊರೆ ಹೋಗುವುದೂ ಉಂಟು. ಕುಡಿತ ಹೆಚ್ಚಾಗಿ ಅದರಿಂದ ನರ ದೌರ್ಬಲ್ಯ, ಕರುಳು ಬೇನೆ, ಹೃದ್ರೋಗ ಇತ್ಯಾದಿಗಳಿಗೂ ತುತ್ತಾಗಬೇಕಾದೀತು.

ಇವುಗಳಿಂದ ಸ್ವಲ್ಪ ಶಮನ ದೊರೆಯಲು, ಯೋಗಾಸನ ಸ್ಥಿತಿಯಲ್ಲಿ ಕುಳಿತು ಕೆಲಸ ಮಾಡುವುದನ್ನು ಅಳವಡಿಸಿಕೊಳ್ಳಬಹುದು. ಕುಳಿತಲ್ಲಿಯೇ ಮಾಡುವ ಆಸನಗಳಿಂದ, ಕುತ್ತಿಗೆ, ಕಣ್ಣಿಗೆ ಸಂಬಂಧಪಟ್ಟ ಆಸನಗಳಿಂದ ತೊಂದರೆಗಳನ್ನು ನಿವಾರಿಸಿಕೊಳ್ಳಬಹುದು. ಅಲ್ಲಿ ಇಲ್ಲಿ ಓಡಾಡುವಾಗಲೂ ಇಂತಹ ಆಸನಗಳನ್ನು ಮಾಡಿ, ಅವುಗಳನ್ನು ಜೀವನ ಶೈಲಿಯಲ್ಲಿ ಅಳವಡಿಸಿಕೊಂಡು ಪ್ರತಿಫಲ ಪಡೇಯಬಹುದು.

ಇನ್ನು ಮಿದುಳಿಗೆ ಶಮನಕಾರಿಯಾಗಲು ಅಧ್ಯಾತ್ಮ ಚಿಂತನೆ, ಕೆಲಸ ಮಾಡುವಾಗಲೇ ಒಳ್ಳೊಳ್ಳೆಯ ಹಾಡು ಸಂಗೀತವನ್ನು ಆಲಿಸುವುದು ಒಳ್ಳೆಯದು. ಒಂದೇ ಸಮನೇ ಒಂದೇ ದಿಕ್ಕಿನಲ್ಲಿ ಚಿಂತಿಸುವ ಮನಸ್ಸಿಗೆ ವಿರಾಮ ಕೊಡಲು ಸಾಹಿತ್ಯ ಕೃಷಿಯೂ ಫಲಕಾರಿ. ಕವನ, ಕಥೆ, ಲೇಖನಗಳನ್ನು ಬರೆಯುವುದರಿಂದ ಮನಸ್ಸಿಗೆ ಸ್ವಲ್ಪ ಹಿತವೆನಿಸುವುದು.

ಅಧ್ಯಾತ್ಮ ಎಂದರೇನು? ಅದರ ಚಿಂತನೆ ಎಂದರೇನು? ಅದರ ಅವಶ್ಯಕತೆ ಇದೆಯೇ (ಸರ್ವಕಾಲಕ್ಕೂ)? ಪ್ರಸ್ತುತ ಜೀವನದಲ್ಲಿ ಪರಿಸ್ಥಿತಿ ಹೇಗಿದೆ? ಅದರಲ್ಲಿ ಅಧ್ಯಾತ್ಮದ ಪಾತ್ರದಿಂದ ಏನಾದರೂ ಸಹಾಯವಾಗಬಹುದೇ?
ಸದ್ಯದ ಪರಿಸ್ಥಿತಿಯಲ್ಲಿ ಹೆಚ್ಚಿನ ಒತ್ತಡ ಯಾವ ಉದ್ಯೋಗದಲ್ಲಿದೆ?
ತಂತ್ರಾಂಶ ಅಭಿಯಂತರುಗಳ ಕಾರ್ಯವೈಖರಿ? ಮಾನಸಿಕ ಒತ್ತಡ, ಅಸಂತುಲತೆ.
ಇದರಿಂದ ಕುಟುಂಬದ ಮೇಲೆ ಆಗಬಹುದಾದ ದುಷ್ಪರಿಣಾಮ, ಸಮಾಜಕ್ಕೆ ಹೇಗೆ ಒಳಿತಾಗದು?
ಅಧ್ಯಾತ್ಮ ಬಾಳಿನಲ್ಲಿ ಅಳವಡಿಸಿಕೊಂಡರೆ ಹೇಗೆ ಬದುಕಿನ ವೈಖರಿ ಉತ್ತಮ ರೀತಿಯದ್ದಾಗಬಹುದು? ಅಧ್ಯಾತ್ಮದ ಜೊತೆ ಜೊತೆಗೆ ಯೋಗಾಸನ ಇನ್ನಿತರೇ ಕ್ಷೀಣಿಸುತ್ತಿರುವ ಶಾಸ್ತ್ರಗಳ ಅಭ್ಯಾಸದ ಅವಶ್ಯಕತೆ.

ಹೆಚ್ಚಿನ ಯೋಚನೆಯಿಂದಾಗಿ ಮಿದುಳಿಗೆ ವಿಶ್ರಾಮ ಬೇಕಿದ್ದಲ್ಲಿ ಅಧ್ಯಾತ್ಮ ಚಿಂತನೆಯನ್ನು (ಮೇಲೆ ಹೇಳಿದ ನಿಟ್ಟಿನಲ್ಲಿ) ಮಾಡಬಹುದು. ಏಕಾಗ್ರಚಿತ್ತತೆಯನ್ನೂ ಸಾಧಿಸಬಹುದು ಮತ್ತು ಅದರಿಂದ ಕೆಲಸದಲ್ಲಿ ಬೇಗ ಪ್ರತಿಫಲ ಅಥವಾ ಉತ್ತರಗಳನ್ನು ಕಂಡುಕೊಂಡು ಹೆಚ್ಚಿನ ಉತ್ಪತ್ತಿಗೆ ಕಾರಣವಾಗಬಹುದು. ಹಾಗೆಯೇ ಹೆಚ್ಚಿನ ಸಮಯವನ್ನು ಉಳಿಸಬಹುದು. ಬೇರೆ ದುಶ್ಚಟಗಳಿಂದಲೂ ಹೀಗೆಯೇ ದೂರವಿರಬಹುದು.
ಇನ್ನೂ ಕುಟುಂಬದಿಂದ ದೂರವಿರುವ ಏಕಾಂಗಿಗಳಲ್ಲಿ ಕೆಲಸವಿಲ್ಲದ ವೇಳೆಯಲ್ಲಿ ಏಕಾಂಗಿತನ ಕಾಡುವುದು. ಇದಕ್ಕಾಗಿ ಸತ್ಸಂಗಗಳನ್ನು ನಡೆಸಬಹುದು, ಅಧ್ಯಾತ್ಮದ ಕಡೆ ಒಲವು ತೊಡಗಿಸಿಕೊಳ್ಳಬಹುದು, ಅಥವಾ ಸಮಾನ ಚಿಂತಕರಿರುವಂತಹ ವೇದಿಕೆಗಳಲ್ಲಿ ಸಮಯವನ್ನು ತೊಡಗಿಸಿಕೊಳ್ಳಬಹುದು. ಒಳ್ಳೆಯ ಸಂಗೀತ ಕೇಳುವುದರಿಂದಲೂ ಮನ ಉಲ್ಲಾಸಗೊಳ್ಳುವುದು. ಹಾಗೇ ದೈಹಿಕವಾಗಿ ಸು:ಸ್ಥಿತಿಯಲ್ಲಿರಲು ಬ್ಯಾಸ್ಕೆಟ್‍ಬಾಲ್, ಬೇಸ್‍ಬಾಲ್, ಕ್ರಿಕೆಟ್ ಮುಂತಾದ ಆಟಗಳನ್ನೂ, ಮನಸ್ಸನ್ನು ಚುರುಕುಗೊಳಿಸುವಂತಹ ಚೆಸ್ ಆಟಗಳನ್ನೂ ಆಡುವುದು ಒಳಿತು.

Ornamental seperator
  • tvsrinivas41 ರವರ ಬ್ಲಾಗ್
  • Login or register to post comments
  • 868 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 4, 2006 - 9:43am — ಮಹೇಶ ಭೋಗಾದಿ

ಚೆನ್ನಾಗಿದ

ಮಹೇಶ ಭೋಗಾದಿ's picture

ಚೆನ್ನಾಗಿದೆ

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕೆಲಸ
  • ಬರಹ ಕ್ರಾಂತಿ!
  • ಧೂಮಪಾನದಲ್ಲಿ ಸಂಪ್ರದಾಯ?
  • ದೂರ ಕಾಲ
  • ಕೆಲಸ ಬಿಟ್ಟೆ
Syndicate content

ಲೇಖಕರು

tvsrinivas41's picture

ಪರಿಚಯ

ಸಾಹಿತ್ಯಾಭಿಲಾಷಿ, ಕವನ ರಚಿಸುವ ಹುಚ್ಚು, ಕೆಲವು ಲೇಖನಗಳನ್ನೂ ಬರೆದಿರುವೆ, ಬರೆಯುತ್ತಿರುವೆ.
ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ ಅಸಿಸ್ಟೆಂಟ್ ಜನರಲ್ ಮ್ಯಾನೆಜರ್ ಆಗಿರುವೆ. ಬೆಂಗಳೂರು ಶಾಖೆಯನ್ನು ೧೯೮೨ ರಲ್ಲಿ ಸೇರಿ ೧೯೮೯ರಲ್ಲಿ ಮುಂಬಯಿಗೆ ಬಂದಿರುವೆ.

ನನ್ನ ಅಂತರ್ಜಾಲ ತಾಣ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಒಂದು affair
  • ಅಕ್ಷರೋದಿ ಸೂತ್ರ
  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
  • vikashegde
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 2:37pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 2:30pm
  • madhava_hs
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 2:29pm
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 9 ಅತಿಥಿಗಳು ಆನ್ಲೈನ್ ಇರುವರು.

ಕುಲಗೆಟ್ಟವರ ಚಿಂತೆ | ಒಳಗಿರ್ಪರಂತಲ್ಲ |
ಕುಲಗೆಟ್ಟು ಶಿವನ ಮರೆಹೊಕ್ಕು ಋಷಿಗಳು |
ಕುಲವಾದರಯ್ಯ ಸರ್ವಜ್ಞ ||

— ಸರ್ವಜ್ಞ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator