ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ › Sampada Blogs › tvsrinivas41 ರವರ ಬ್ಲಾಗ್

ಭಾವೂಬೀದ್

November 3, 2005 - 10:04pm — tvsrinivas41

ಇಂದು ಮಾಮೂಲಿನಂತೆ ಬೆಳಗ್ಗೆ ಲೋಕಲ್ ಟ್ರೈನ್ ಹತ್ತಿದೆ. ನೋಡಿದ್ರೆ ಆಶ್ಚರ್ಯ, ಪರಮಾಶ್ಚರ್ಯ - ಗಾಡಿ ಪೂರ್ಣವಾಗಿ ಖಾಲಿಯಾಗಿದೆ. ಇದೇನು ಕನಸೇ ಅಥವಾ ಇಂದು ಭಾನುವಾರವೇ ಎಂದು ಕೈ ಚಿವುಟಿಕೊಂಡೆ, ಮೊಬೈಲ್ ನಲ್ಲಿ ದಿನವನ್ನು ಪರೀಕ್ಷಿಸಿದೆ. ಇಲ್ಲ! ಎಲ್ಲ ಸರಿಯಾಗಿಯೇ ಇದೆ.
ಅಲ್ಲೇ ಮೂಲೆಯಲ್ಲಿ ಕುಳಿತಿದ್ದವನೊಬ್ಬನನ್ನು ಕೇಳಿದೆ, ಇವತ್ತೇನು ಸ್ಟ್ರೈಕೇ, ಮುಂಬೈ ಬಂದ್ ಅಥವಾ ಇನ್ನೇನಾದರೂ ಹೆಚ್ಚು ಕಡಿಮೆ ಆಗಿದ್ಯಾ?
ಅವನು ಹೇಳಿದ, ' ಇಲ್ಲ ಸಾರ್, ಇವತ್ತು ಬಾವ್‍ಬೀಜ್, ಅಲ್ವಾ, ಅದಕ್ಕೇ ಜನಗಳು ರಜೆ ಹಾಕಿರ್ತಾರೆ'

ಈ ಬಾವ್‍ಬೀಜ್ ಅಂದ್ರೇನು? ಹೊಸ ಪದವೊಂದು ನನ್ನ ತಲೆಯೊಳಗೆ ಹುಳುವಿನಂತೆ ಸೇರಿ ಕೊರೆಯಹತ್ತಿತ್ತು. ತಕ್ಷಣ ನನ್ನ ಮರಾಠೀ ಸ್ನೇಹಿತರಾದ ಕಮಲಾಕರ ಹಸಬ್‍ನೀಸರಿಗೆ ಮೊಬೈಲ್‍ನಲ್ಲಿ ಮಾತನಾಡಿ ವಿಷಯ ಕೇಳಿದೆ. ಅವರು ಹೇಳಿದ ಪ್ರಕಾರ ಇಂದು ಭಾವೂ ಬೀಝ್. ಇದರರ್ಥ - ಭಾವೂ - ಸಹೋದರ, ಬೀಝ್ ಎಂದರೆ ಬಿದಿಗೆ ಎಂದರು. ಅವರಿಗೂ ಬೀಝ್ ಎನ್ನುವ ಪದದ ಅರ್ಥ ಸರಿಯಾಗಿ ಗೊತ್ತಿಲ್ಲವಂತೆ. ಕೆಲವರು ಇದನ್ನು ಭಾವುದೂಜ್ ಎಂತಲೂ ಕರೆಯುವರು. ಇಲ್ಲಿ ದೂಜ್ ಎಂದರೆ ಎರಡನೆಯ ದಿನ ಎಂದರ್ಥ. ಯಾರಿಂದಲೂ ನನಗೆ ಇದಕ್ಕೆ ಸರಿಯಾದ ಅರ್ಥ ಸಿಕ್ಕಿಲ್ಲ. ಈ ದಿನ ಬಲಿ ಪಾಡ್ಯಮಿಯ ನಂತರದ ದಿನ ಬರುವುದರಿಂದ ಬಿದಿಗೆ ಇರಬಹುದು ಎಂದು ನಾನು ತಿಳಿದಿರುವೆ.

ಇಂದಿನ ದಿನದ ವಿಶೇಷವೇನೆಂದರೆ ಸಹೋದರರು ಮದುವೆಯಾದ ಸಹೋದರಿಯರ ಮನೆಗೆ ಔತಣಕ್ಕಾಗಿ ಹೋಗುವರು. ಸಹೋದರಿ ಅವರಿಗೆ ಆರತಿಯನ್ನು ಮಾಡಿ ಎದುರುಗೊಂಡು ಪೂಜಿಸುವರು. ಆರತಿ ತಟ್ಟೆಯಲ್ಲಿ ದೀಪವಿರಿಸಿರುವರು. ಸಹೋದರನ ಹಣೆಗೆ ಕುಂಕುಮವನ್ನಿಡುವರು. ನಂತರ ಅಕ್ಷತೆ ಕಾಳನ್ನು ಸಹೋದರನಿಗಿತ್ತು ನಮಸ್ಕರಿಸುವರು. ನಂತರ ಸಹೋದರರ ಏಳ್ಗೆ ಮತ್ತು ದೀರ್ಘಾಯಸ್ಸಿಗಾಗಿ ದೇವರಲ್ಲಿ ಪ್ರಾರ್ಥಿಸುವರು. ನಂತರ ಸಹೋದರರು ಸಹೋದರಿಗೆ ಉಡುಗೊರೆಯನ್ನು ಕೊಡುವರು. ಇದು ಸಂಪ್ರದಾಯ. ಆ ಸಮಯದಲ್ಲಿ ಸಹೋದರರು ತೊಡುವ ಪಣವೇನೆಂದರೆ ಎಂಥಹ ಕಷ್ಟ ಕಾಲದಲ್ಲೂ ಸಹೋದರಿಯನ್ನು ಸಂರಕ್ಷಿಸುವೆ ಎಂದು. ಆ ದಿನದ ವಿಶೇಷ ತಿನಿಸು ಎಂದರೆ ಪೂರಿ ಮತ್ತು ಶ್ರೀಖಂಡ. ಈ ದಿನಕ್ಕೂ ಮತ್ತು ರಕ್ಷಾಬಂಧನದ ದಿನಕ್ಕೂ ಸ್ವಲ್ಪ ತಾಳೆ ಆಗ್ತಿದೆ ಅಲ್ಲವೇ?

ಕಛೇರಿಗೆ ಹೋದ ಮೇಲೆ ನೋಡಿದರೆ ಹೆಚ್ಚಿನ ಮರಾಠಿಗರು ರಜೆ ಹಾಕಿದ್ದಾರೆ. ನಾವು ಕೆಲವರೇ ಅವರೆಲ್ಲರ ಕೆಲಸವನ್ನೂ ಮಾಡಬೇಕಾಯ್ತು. ಹಾಗೇಯೆ ಸಂಜೆ ಎರಡು ಘಂಟೆಗಳು ಮುಂಚಿತವಾಗಿ ಕಛೇರಿ ಮುಚ್ಚುವರು ಎಂದೂ ತಿಳಿಯಿತು. ೪.೩೦ಕ್ಕೆ ಸ್ಟೇಷನ್‍ಗೆ ಬಂದರೆ ಎಲ್ಲೆಲ್ಲಿ ನೋಡಿದರೂ ಕುಟುಂಬಗಳೇ ಮತ್ತು ಕುಯ್ಯೋಂ ಮರ್ರೋ ಅನ್ನುವ ಮಕ್ಕಳುಗಳ ಅರಚಾಟ. ಟ್ರೈನ್‍ನಲ್ಲಿ ಜಾಗ ಸಿಕ್ಕರೂ ಕುಳಿತುಕೊಳ್ಳಲಾಗಲಿಲ್ಲ. ಪ್ರತಿ ಸ್ಟೇಷನ್‍ಗಳಲ್ಲೂ ಮಕ್ಕಳೊಂದಿಗರು ಹತ್ತುವರು ಇಳಿಯುವರು, ಅವರು ಬಂದು ನಿಂತಾಗ ನಾನು ಕುಳಿತಿರುವುದು ಸರಿಯಲ್ಲವೆಂದು ನನ್ನ ಸ್ಥಾನಕ ಬರುವವರೆವಿಗೂ ನಿಂತೇ ಇದ್ದೆ.

~.~
  • tvsrinivas41 ರವರ ಬ್ಲಾಗ್
  • Login or register to post comments
  • 605 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
November 3, 2005 - 10:32pm — pavanaja

ಭೈಯಾ ದೂಜ್

pavanaja's picture

ಈ ತಾಣ ನೋಡಿ. ಕೊನೆಯ ಪಾರಾಗ್ರಾಫ್ ಓದಿ. ಹೆಚ್ಚಿನ ವಿವರಗಳು ಅಲ್ಲಿವೆ.

ವಿಶೇಷವೆಂದರೆ ಈ ಸಂಪ್ರದಾಯ ಮರಾಠಿಗರಲ್ಲಿ ಮಾತ್ರ ಇರುವುದು.

ಸಿಗೋಣ,
ಪವನಜ
-----------
Think globally, Act locally

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ೧೯ ಆಗಸ್ಟ್ ೨೦೦೫
  • ವಿಚಿತ್ರವಾದರೂ ನಿಜ
  • ಹೃದಯವಂತಿಕೆ
  • ಬಿಲ್ ಮತ್ತು ನನ್ನ ಭೇಟಿ
  • ಇಂದಿನ ಡೈರಿಯಿಂದ
Syndicate content

ಲೇಖಕರು

tvsrinivas41's picture

ಪರಿಚಯ

ಸಾಹಿತ್ಯಾಭಿಲಾಷಿ, ಕವನ ರಚಿಸುವ ಹುಚ್ಚು, ಕೆಲವು ಲೇಖನಗಳನ್ನೂ ಬರೆದಿರುವೆ, ಬರೆಯುತ್ತಿರುವೆ.
ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ ಅಸಿಸ್ಟೆಂಟ್ ಜನರಲ್ ಮ್ಯಾನೆಜರ್ ಆಗಿರುವೆ. ಬೆಂಗಳೂರು ಶಾಖೆಯನ್ನು ೧೯೮೨ ರಲ್ಲಿ ಸೇರಿ ೧೯೮೯ರಲ್ಲಿ ಮುಂಬಯಿಗೆ ಬಂದಿರುವೆ.

ನನ್ನ ಅಂತರ್ಜಾಲ ತಾಣ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಅಕ್ಕಾ..ಅಕ್ಕಾ..ನಾನೂ ಬತ್ತೀನಿ...
  • ಮಳೆಯ ಮೇಲೇಕೆ ದೂರು?
  • ಎಲ್ಲ ತುಸುಹೊತ್ತು...
  • ಕನ್ನಡ ತಾಯಿಗೆ ನಮನ
  • ನೋಡಿ ಕಂಡದ್ದು
  • ನನ್ನಲ್ಲಿ ಒಬ್ಬ ಕವಿ ಹುಟ್ಟಿದ್ದು ಹೀಗೆ....
  • ‘............’
  • ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
  • ಇನಿಯ
  • ಮಾಯಾಂಗಿನಿ ಮೋಡಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 1:04am
  • omshivaprakash
    ಉ: ಲಿನಕ್ಸಾಯಣ ೧೫ - ಲಿನಕ್ಸ್ ಬೂಟಿಂಗ್ - ಭಾಗ ೧
    August 22, 2008 - 12:41am
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 12:20am
  • ಸಂಗನಗೌಡ
    ಉ: ಕನ್ನಡ ಬರ್ದೋನು ಕೋಡಂಗಿ
    August 22, 2008 - 12:06am
  • bhargava_nudi
    ಉ: ಮತ್ತೆ ಮಳೆ ಹುಯ್ಯುತಿದೆ
    August 22, 2008 - 12:02am
  • hamsanandi
    ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
    August 21, 2008 - 11:57pm
  • Sunil Jayaprakash
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:44pm
  • ಸಂಗನಗೌಡ
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 21, 2008 - 11:15pm
  • ಸಂಗನಗೌಡ
    ಉ: ನೋಡಿ ಕಂಡದ್ದು
    August 21, 2008 - 11:11pm
  • hamsanandi
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:07pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 23 ಅತಿಥಿಗಳು ಆನ್ಲೈನ್ ಇರುವರು.


ಭಾರತ ದಾತ್ಮ೦ ಕ೦ಗೆಡುತಿದೆ ಪರ
ಸಾರಸ್ವತ ಸ೦ಪದ ಭರದಿ೦
ತಾರಿ ಹೋಗಿತಿದೆ ತಾಯ್ನಾಡಿನ ಮನ
ಏರುವಿದೇ ಸ್ವಪ್ರತ್ಯಯದಿ೦

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator