ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಸಂಪದ ಫೌಂಡೇಶನ್ನಿಗೆ ನೆರವಾಗಿ

ಸಂಪದ › Sampada Blogs › tvsrinivas41 ರವರ ಬ್ಲಾಗ್

೧೯ ಆಗಸ್ಟ್ ೨೦೦೫

August 20, 2005 - 6:57am — tvsrinivas41

ನಿನ್ನೆಯ ದಿನ ವರಮಹಾಲಕ್ಷಿ ವ್ರತ, ರಕ್ಷಾ ಬಂಧನ ಮತ್ತು ಯಜುರುಪಾಕರ್ಮ. ಮುಂಬೈನಲ್ಲಿ ರಕ್ಷಾ ಬಂಧನಕ್ಕಾಗಿ ಇಂದು ಶನಿವಾರ ರಜೆ ಘೋಷಿಸಿದ್ದಾರೆ. ಆದರೇ ರಜೆ ಇರಲಿ ಇಲ್ಲದಿರಲಿ ಮುಂಬೈವಾಸಿಗಳು ಹಬ್ಬವನ್ನಂತೂ ಆಚರಿಸಿಯೇ ಆಚರಿಸುತ್ತಾರೆ. ಶುಕ್ರವಾರ ರಕ್ಷಾಬಂಧನವಾದ್ದರಿಂದ ಅಂದು ರಜೆ ಇಲ್ಲದಿದ್ದರೂ ಹೆಚ್ಚಿನ ಜನರು ಕಛೇರಿ ಕಾರ್ಯಾಲಯಗಳಿಗೆ ರಜೆ ಹಾಕಿದ್ದರು. ಬೆಳಗ್ಗೆ ಕೆಲಸಕ್ಕೆಂದು ಹೊರಟಾಗ ಲೋಕಲ್ ಟ್ರಿನ್ ನಲ್ಲಿ ಸಾಮಾನ್ಯದ ಜನಜಂಗುಳಿ ಇರಲೇ ಇಲ್ಲ. ಎಲ್ಲೆಲ್ಲೂ ಸ್ಮಶಾನದ ವಾತಾವರಣ. ಇದೇನಪ್ಪ ನಾನು ಗೊತ್ತಿಲ್ಲದೇ ರಜೆಯ ದಿನ ಬ್ಯಾಂಕಿಗೆ ಹೋಗುತ್ತಿದ್ದೇನಾ ಅಂತ ಸ್ವಲ್ಪ ಯೋಚಿಸುವಂತಾಯ್ತು. ಸ್ನೇಹಿತರುಗಳನ್ನು ಕಂಡ ಮೇಲೆ ಆ ಸಂಶಯ ನಿವಾರಣೆ ಆಯ್ತು. ಗಂಡಸರು ತಮ್ಮ ತಮ್ಮ ಅಕ್ಕ ತಂಗಿಯರ ಮನೆಗೆ ರಾಖಿಯನ್ನು ಕಟ್ಟಿಸಿಕೊಳ್ಳಲು ಹೋಗುವರು. ಹೋಗುವಾಗ ತಮ್ಮ ಸಂಸಾರ ಸಮೇತರಾಗಿ ಹೋಗುವರು. ಆದ್ದರಿಂದ ಬೆಳಗ್ಗೆ ಅಷ್ಟು ಬೇಗ ಜನಜಂಗುಳಿ ಇರಲಿಲ್ಲ. ಈ ವಿಷಯ ನನಗೆ ಸಂಜೆ ಮನೆಗೆ ಮರುಳುವ ಸಮಯದಲ್ಲಿ ಅರಿವಾಯಿತು. ಸಂಜೆ ಬರುವಾಗ ಎಲ್ಲೆಲ್ಲಿ ನೋಡಿದರೂ ಮಕ್ಕಳ ಅರಚಾಟ ಕಿರುಚಾಟ. ಪುಟ್ಟ ಪುಟ್ಟ ಮಕ್ಕಳ ದಂಡೇ ಎಲ್ಲೆಲ್ಲಿಯೂ ಕಾಣುತ್ತಿತ್ತು. ಲೋಕಲ್ ಒಳಗೆ ಮಕ್ಕಳೊಡನೆ ತಂದೆ ತಾಯಿಗಳು ಬಂದರೆ ಇದ್ದ ಪ್ರಯಾಣಿಕರೆಲ್ಲಾ ಎದ್ದು ನಿಲ್ಲಬೇಕಾಯ್ತು. ಪಾಪ ಮಕ್ಕಳನ್ನು ಎತ್ತಿಕೊಂಡ ತಾಯಿಯನ್ನು ನಿಲ್ಲಲು ಬಿಡುವುದೇ - ಕೂತುಕೊಳ್ಳಲು ಜಾಗ ಕೊಡಬೇಕು. ಲೋಕಲ್ ಚರ್ಚ್ ಗೇಟ್ ನಿಂದ ದಾದರಿಗೆ ಬರುವುದರೊಳಗೆ ಮುಂದೆ ಬರುವ ಮಗು ತಾಯಂದಿರುಗಳಿಗೆ ಕೂತುಕೊಳ್ಳಲಲ್ಲ, ನಿಲ್ಲಲೇ ಸ್ಥಳವಿಲ್ಲ. ಆದರೂ ಇಲ್ಲಿಯ ಜನರು ಸ್ವಲ್ಪ ಬೇಜಾರಿಲ್ಲದೇ, ಇರುಸು ಮುರುಸುಗಳಿಲ್ಲದೇ ಅವರುಗಳಿಗೆ ಹೇಗೋ ಜಾಗ ಮಾಡಿಕೊಡುವರು. ಅವರುಗಳೂ ಅಷ್ಟೇ, ಹೆಂಗಸರ ಕಂಪಾರ್ಟ್ ಮೆಂಟ್ ಬಿಟ್ಟು ಗಂಡಸರ ಕಂಪಾರ್ಟ್ ಮೆಂಟಿಗೇ ಬರುವರು. ಇದಕ್ಕೆ ಕಾರಣವೇನೆಂದರೆ, ಮೊದಲನೆಯದಾಗಿ, ಗಂಡಸರು ತಮ್ಮೊಂದಿಗಿರುವುದು, ಎರಡನೆಯದಾಗಿ, ಇದು ಸುರಕ್ಷಿತ ಸ್ಥಳ. (ಹೆಂಗಸರ ಡಬ್ಬಿಯಲ್ಲೇ ಕಳ್ಳತನಗಳು ಜಾಸ್ತಿ ಆಗುವುದು). ಮತ್ತು ಮೂರನೆಯದಾಗಿ ಹೆಚ್ಚಿನದಾಗಿ ಮಾನವಂತಿಕೆ ತೋರುವುದು ಇಲ್ಲಿಯೇ.

ಪ್ರತಿ ಹಬ್ಬಗಳಲ್ಲೂ ಇಂತಹ ವಾತಾವರಣ ನೋಡುವುದು ಸರ್ವೇ ಸಾಮಾನ್ಯ.

~.~
  • tvsrinivas41 ರವರ ಬ್ಲಾಗ್
  • Login or register to post comments
  • 850 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 20, 2005 - 11:15pm — pavanaja

ಹೆಂಗಸರಿಗೆ ಸಹಾಯ ಮಾಡುವವರು ಗಂಡಸರು!

pavanaja's picture

ನಾನು ಮುಂಬಯಿಯ ಲೋಕಲ್ ರೈಲಿನಲ್ಲಿ ಮತ್ತು ಎಲ್ಲ ಕಡೆ ಬಸ್ಸುಗಳಲ್ಲಿ ಗಮನಿಸಿದ ಒಂದು ಸಂಗತಿ. ಮಗು ಸಹಿತ ಪ್ರಯಾಣಿಸುತ್ತಿರುವ ಹೆಂಗಸರಿಗೆ ಎದ್ದು ನಿಂತು ಸೀಟು ಕೊಡುವವರು ಗಂಡಸರು. ಹೆಂಗಸರು ಸೀಟು ಕೊಟ್ಟಿದ್ದನ್ನು ನಾನು ಕಂಡೇ ಇಲ್ಲ.

ಸಿಗೋಣ,
ಪವನಜ
-----------
Think globally, Act locally

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 15, 2007 - 6:05pm — girish.rajanal

ಉ: ಹೆಂಗಸರಿಗೆ ಸಹಾಯ ಮಾಡುವವರು ಗಂಡಸರು!

girish.rajanal's picture

ನೀವು ಹೇಳಿದ್ದು ನೂರಕ್ಕೆ ನೂರು ನಿಜ ಸರ್‍,

ಗಿರೀಶ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಹೃದಯವಂತಿಕೆ
  • ಭಾವೂಬೀದ್
  • ಒಂದು ದಾರುಣ ಘಟನೆ - ಮನದಾಳದಿಂದ
  • ಮುಂಬೈ ಲೋಕಲ್ ಟ್ರೈನ್
  • ಮುಂಬೈನ ಲೋಕಲ್ ಟ್ರೈನ್
Syndicate content

ಲೇಖಕರು

tvsrinivas41's picture

ಪರಿಚಯ

ಸಾಹಿತ್ಯಾಭಿಲಾಷಿ, ಕವನ ರಚಿಸುವ ಹುಚ್ಚು, ಕೆಲವು ಲೇಖನಗಳನ್ನೂ ಬರೆದಿರುವೆ, ಬರೆಯುತ್ತಿರುವೆ.
ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ ಅಸಿಸ್ಟೆಂಟ್ ಜನರಲ್ ಮ್ಯಾನೆಜರ್ ಆಗಿರುವೆ. ಬೆಂಗಳೂರು ಶಾಖೆಯನ್ನು ೧೯೮೨ ರಲ್ಲಿ ಸೇರಿ ೧೯೮೯ರಲ್ಲಿ ಮುಂಬಯಿಗೆ ಬಂದಿರುವೆ.

ನನ್ನ ಅಂತರ್ಜಾಲ ತಾಣ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಜೋಹದ್ (ನಂದುವಾಲಿ ನದಿ ಪ್ರದೇಶ), ರಾಜಸ್ಥಾನ

(ಚಿತ್ರ: Farhad Contractor.)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಮುಂಬಯಿ ಮುಖಗಳು ಭಾಗ ೧.....
  • ಗುಟ್ಟು - ಸ್ಫೂರ್ತಿ ಸೆಲೆ ೬
  • ಕಣ್ಣೀರು - ಸ್ಫೂರ್ತಿ ಸೆಲೆ ೫
  • ಜೀವನ - ಸ್ಫೂರ್ತಿ ಸೆಲೆ ೪
  • ಸಾಲ - ಸ್ಫೂರ್ತಿ ಸೆಲೆ ೩
  • ಸಂತೋಷ - ಸ್ಫೂರ್ತಿ ಸೆಲೆ ೨
  • ಹಣ - ಸ್ಫೂರ್ತಿ ಸೆಲೆ ೧
  • ಆ ರಾತ್ರಿ...(ನೈಜ ಘಟನೆ ಆಧಾರಿತ ಕಥೆ)
  • ಮನಸ್ಸಿಗೂ ಅಂಗಿ. . ?
  • ನಿನ್ನ ನಗುವಿಗೆ ನನ್ನ ಕನಸನರ್ಪಿಸುವೆ..
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಹಸಿವು - ಮಾಯ್ಸನ ಕಂತೆ ೧೨
    August 8, 2008 - 2:20am
  • anivaasi
    ಉ: ಮನಸ್ಸಿಗೂ ಅಂಗಿ. . ?
    August 8, 2008 - 2:15am
  • anivaasi
    ಉ: ಕ್ರೌರ್ಯ ಮತ್ತು ಬಲಿ
    August 8, 2008 - 2:13am
  • anivaasi
    ಉ: ಕ್ರೌರ್ಯ ಮತ್ತು ಬಲಿ
    August 8, 2008 - 2:06am
  • kalpana
    ಉ: Abroad ಅನ್ನೋ ಮಾಯೆ...
    August 8, 2008 - 12:11am
  • kannada.kanteerava
    ಉ: ಕನ್ನಡ ಮಾತನಾಡದ ಶಾಸಕ
    August 7, 2008 - 11:33pm
  • Rajeshwari
    ಉ: ಸ೦ಪದದಲ್ಲಿ ಜಾಣೆಯರು
    August 7, 2008 - 10:59pm
  • Jayalaxmi.Patil
    ಉ: ಮುಂಬಯಿ ಮುಖಗಳು ಭಾಗ ೧.....
    August 7, 2008 - 10:33pm
  • hamsanandi
    ಉ: ಆ ರಾತ್ರಿ...(ನೈಜ ಘಟನೆ ಆಧಾರಿತ ಕಥೆ)
    August 7, 2008 - 9:56pm
  • shreedevikalasad
    ಉ: ಮನಸ್ಸಿಗೂ ಅಂಗಿ. . ?
    August 7, 2008 - 9:09pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 91 ಅತಿಥಿಗಳು ಆನ್ಲೈನ್ ಇರುವರು.


ದುರ್ಬಲರಿಗೆ ಕ್ಷಮಿಸುವ ಹಕ್ಕಿಲ್ಲ, ಕ್ಷಮಿಸುವ ಶಕ್ತಿ ಮತ್ತು ಹಕ್ಕಿರುವುದು ಬಲಿಷ್ಠರಿಗೆ ಮಾತ್ರ.

— ಮಹಾತ್ಮ ಗಾಂಧಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator