ವರುಣ ಭಟ್
ಬ್ಲಾಗ್ ಪದದ ಅರ್ಥ ಏನು?
ವೇದಿಕೆ ಅಂತ ಇರಬಹುದೇ?
ಏನಾಗಿದೆ ಉತ್ತರ ಭಾರತೀಯರಿಗೆ...
ನನಗೆ ನಿನ್ನೆ ಒಂದು ಇ-ಮೇಲ್ ಬಂತು...
ಓಪನ್ ಮಾಡಿ ನೋಡಿದಾಗ ಗೊತ್ತಾಯ್ತು, ಅದು ಬರಿ ಒಂದು ಮೇಲ್ ಅಲ್ಲ. ಒಂದು ಇ-ಮೇಲ್ ಸರಣಿ. ಒಬ್ಬ ಉತ್ತರ ಭಾರತೀಯ ಬರೆದಿರೋ ಮೇಲ್ ಮತ್ತು ಅದಕ್ಕೆ ತುಂಬ ಜನರ ಪ್ರತಿಕ್ರಿಯೆ ಹಾಗು ಒಬ್ಬ ದಕ್ಷಿಣ ಭಾರತೀಯನ ಜವಾಬು. ಅದನ್ನು ಈ ಲಿಂಕ್ ನಲ್ಲಿ ಓದಿ..
http://varunbhat.wordpress.com/2008/01/18/difference-among-indians/
ಈ ಇ-ಮೇಲ್ ಸರಣಿ ಶುರುವಾಗಿರುವುದು, ಒಬ್ಬ ನಾರ್ಥ್ ಇಂಡಿಯನ್ ಚೆನ್ನೈ ಬಗ್ಗೆ ಬೈದು ಬರೆದಿರುವುದರಿಂದ..
ನನಗೆ ಅರ್ಥ ಆಗದೇ ಇರೋ ವಿಷಯ ಅಂದ್ರೆ, ಈ ನಾರ್ಥ್ ಇಂಡಿಯನ್ಸ್ ಯಾಕೆ ದಕ್ಷಿಣ ಭಾರತವನ್ನು ಇಷ್ಟು ಕೀಳಾಗಿ ನೋಡ್ತಾರೆ ??
ಇಲ್ಲಿ ಬಂದು ಯಾಕೆ ನಾವು ಹಿಂದಿ ಮಾತಾಡ್ಬೇಕು ಅಂತ ಅಪೇಕ್ಷೆ ಪಡ್ತಾರೆ.. ನಾವು ದೆಹಲಿಗೆ ಹೋಗಿ, ಅಲ್ಲಿಯ ಜನಕ್ಕೆ ಕನ್ನಡ ಅಥವ ತಮಿಳು ಮಾತಾಡಿ ಅಂತ ಹೇಳ್ತೀವಾ??
ನಾನು ಉತ್ತರ ಭಾರತೀಯರು ಇಲ್ಲಿ ಬರಬಾರ್ದು ಅಂತ ಹೇಳ್ತಾ ಇಲ್ಲ. ಆದರೆ ಇಲ್ಲಿ ಬರುವವರು ಉತ್ತಮ ಮನಸ್ಸುಳ್ಳ ಭಾರತೀಯರಾಗಿರ ಬೇಕು. ಭಾರತೀಯರಾದ ನಾವೆಲ್ಲ ಒಂದೇ ಅಂತ ಅವರಿಗೆ ತಿಳಿದಿರಬೇಕು.
ನಮ್ಮ ಜನರೇ (ಉತ್ತರ ಭಾರತೀಯರು) ಈ ರೀತಿ ವಿಚಿತ್ರವಾಗಿ ವರ್ತಿಸುವಾಗ, ಬ್ರಿಟಿಷರು ನಮ್ಮನ್ನು(ಭಾರತೀಯರನ್ನು) ಕೀಳಾಗಿ ಕಂಡಿದ್ದರಲ್ಲಿ ಆಶ್ಚರ್ಯವೇ ಇಲ್ಲ.
ಈ ರೀತಿಯ ಕ್ಷುಲ್ಲಕ ವಿಚಾರಗಳು, ದೇಶ ಪ್ರಗತಿಗೆ ಮಾರಕವಾಗುತ್ತವೆ.
-- ವರುಣ ಭಟ್

- varunbhatbm ರವರ ಬ್ಲಾಗ್
- Login or register to post comments
- 448 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಏನಾಗಿದೆ ಉತ್ತರ ಭ್ಹಾರತೀಯರಿಗೆ...
ಬದುಕು ಬರಡಾಗದಿರಲಿ..........
ನಾನೂ ನೋಡಿದ್ದೇನೆ..ಕರ್ನಾಟಕದಲ್ಲಿ ವಾಸಿಸುವ ಬಹು ಪಾಲು ಉತ್ತರದವರು ಕನ್ನಡ ಕಲಿಯುವ ಗೋಜಿಗೆ ಹೋಗುವುದೆ ಇಲ್ಲ..
ಕೇಳಿದರೆ,ಸಿದ್ಧ ಉತ್ತರ:ನಾವು ಮಾತನಾಡೋದು "national language" ಅಂತ!...ಇಂಗ್ಲೀಷಿನಲ್ಲಿ ಮಾತನಾಡೋದು ಅವರು ನಮಗೆ ಮಾಡೊ ದೊಡ್ಡ ಉಪಕಾರ ಅನ್ನೊ ಹಾಗೆ ಅವರ ಧೋರಣೆ.
ಉ: ಏನಾಗಿದೆ ಉತ್ತರ ಭ್ಹಾರತೀಯರಿಗೆ...
ಏನು ಮಾಡೋದು.. ಕನ್ನಡಿಗರ ಸಹನೆ ದೊಡ್ಡದು, ಅದಕ್ಕೆ ಅವರು ಹೀಗೆ ಮಾಡೋದು..
ತಮಿಳರ ಥರ ನಾವು ಬುಧ್ಧಿ ಕಲಿಸಿದ್ರೆ ಹೀಗೆ ಆಗ್ತಾ ಇರಲಿಲ್ಲ..
ಐಟಿಯಲ್ಲಿ ಎಷ್ಟೇ ಮುಂದೆ ಬಂದರೂ ಕೂಡ ಚೆನ್ನೈ ಹಾಗೆ ಇದೆ... ಅಲ್ಲಿನ ಜನ ಏನೂ ಬದಲಾಗಿಲ್ಲ.. ಆದರೆ ಬೆಂಗಳೂರು ಮಾತ್ರ ಹೀಗೆ ಆಗಿರೋದು..
ವರುಣ ಭಟ್
ಉ: ಏನಾಗಿದೆ ಉತ್ತರ ಭ್ಹಾರತೀಯರಿಗೆ...
ಇದ್ರಲ್ಲೇನು ಹೊಸತು?
ಏಕ್ ಚತುರ ನಾರಿ.. ಹಾಡಲ್ಲಿ ನಮ್ಮ ಕರ್ನಾಟಕ ಶಾಸ್ತ್ತೀಯ ಸಂಗೀತವನ್ನು ಗೇಲಿ ಮಾಡಿದಾಗ ನಾವೆಲ್ಲ ಮಲಗಿದ್ವು..!
ಪಾಪಾ ತಮಿಳರು ಹಿಂದಿ ವಿರೋದ ಮಾಡಿ ’ವಡ್ಡ’ರು ಅಸಂಸ್ಕೃತರಾದರು..
ಅದೇ ತಮಿಳನಾಡಿನಿಂದ ಓಡಿಬಂದ ತಮಿಳು/ತೆಲುಗು ಮೂಲ ಸಂಸ್ಕೃತದ ಪಂಡಿತರೇ ನಮ್ಮ ಕನ್ನಡದ ಸಂಸ್ಕೃತೀಕರಣದಲ್ಲಿ ನಿರತಾಗಿದ್ದು.. ವಿಷವನ್ನು ಪಾಯಸದಂತೆ ತಿಂನಿಸ್ತಾ ಇರೋದು, ನಮ್ಮಲ್ಲಿ ಎಸ್ಟು ಮಂದಿಗೆ ಗೊತ್ತು?
ಉ: ಏನಾಗಿದೆ ಉತ್ತರ ಭ್ಹಾರತೀಯರಿಗೆ...
ಅದೇ ತಮಿಳನಾಡಿನಿಂದ ಓಡಿಬಂದ ತಮಿಳು/ತೆಲುಗು ಮೂಲ ಸಂಸ್ಕೃತದ ಪಂಡಿತರೇ ನಮ್ಮ ಕನ್ನಡದ ಸಂಸ್ಕೃತೀಕರಣದಲ್ಲಿ ನಿರತಾಗಿದ್ದು.. ವಿಷವನ್ನು ಪಾಯಸದಂತೆ ತಿಂನಿಸ್ತಾ ಇರೋದು
ಇದು ನಂಗೆ ಅರ್ಥ ಆಗ್ಲಿಲ್ಲ.... ಏನಿದು.. ಯಾವ ಪಂಡಿತರು??
ಇದರ ಬಗ್ಗೆ ಯಾವುದಾದರೂ ಆರ್ಟಿಕಲ್ ಇದ್ರೆ ಲಿಂಕ್ ಕೊಡಿ..
--ವರುಣ ಭಟ್
ಉ: ಏನಾಗಿದೆ ಉತ್ತರ ಭ್ಹಾರತೀಯರಿಗೆ...
ಕನ್ನಡದ ಬಗ್ಗೆ ಸಿಕ್ಕಾಪಟ್ಟೆ ಹೇಳ್ತಾ ಇರೋರು.. ೪ ಕರ್ನಾಟಕಗಳಾಗಲಿ ಅಂದಿರೋರು...