hpn, ಫೊಟೊ ಮೇಲೆ ಕಟ್ ಆಗಬಾರದಿತ್ತು ಅನ್ನುವುದು ನಿಜ. ನನಗೇ ಹಾಗೆ ಅನ್ನಿಸಿದೆ. ನೀವು ಚಿತ್ರಗಳನ್ನು ಚೆನ್ನಾಗಿ ವಿಮರ್ಶಿಸುತ್ತೀರಿ.
ಮುರಳಿಯವರ ಪ್ರತಿಕ್ರಿಯೆಯ ಬಗ್ಗೆ, ಸ್ವಲ್ಪ ಬರೆಯುವುದು ಇದೆ. ಆದ್ದರಿಂದ ಇದನ್ನು ಹೊಸ ಬ್ಲಾಗ್ ಆಗಿ ಪೋಸ್ಟುತ್ತಿದ್ದೇನೆ.
ಮುಂದುವರೆದ ದೇಶಗಳು ಕಲ್ಮಶವನ್ನು ನಮ್ಮಲ್ಲಿಗೆ ಸಾಗಹಾಕುತ್ತವೆ ಎನ್ನುವುದನ್ನು ನಾನೂ ಕೇಳಿದ್ದೇನೆ. ಸುಧಾದ ಸುದ್ದಿ ಸ್ವಾರಸ್ಯದಲ್ಲಿ ಓದಿದ ನೆನಪು. ತಮಿಳ್ನಾಡಿನಲ್ಲಿ ಪ್ರಪಂಚದಲ್ಲಿಯೇ ಅತಿ ದೊಡ್ಡ ಪಾದರಸ ಆಧಾರಿತ ಥರ್ಮಾಮೀಟರ್ ಕಾರ್ಖಾನೆ ಇದೆಯಂತೆ - ಸಂತೋಷ ಪಡುವ ವಿಷಯವಲ್ಲ - ಏಕೆಂದರೆ, ಮುಂದುವರೆದ ದೇಶಗಳು ಪಾದರಸದ ಉಪಯೋಗವನ್ನು ಬಿಟ್ಟು ಬೇರೇನೋ ಉಪಯೋಗಿಸಿದ ಥರ್ಮಾಮೀಟರ್ ಉತ್ಪಾದಿಸುತ್ತಿವೆ ಮತ್ತು ಅಲ್ಲಿಂದ ಪಾದರಸ (ಇತರ ಮೂಲಗಳಿಂದ ಬಿಸಾಡಲ್ಪಟ್ಟದ್ದು) ನಮ್ಮಲ್ಲಿಗೆ ರಫ್ತಾಗುತ್ತಿದೆ!. ಆದ್ದರಿಂದ ಮುರಳಿಯವರ ಈ ಆರೋಪವನ್ನು ಅಲ್ಲಗಳೆಯಲಾಗದು.
ಆದರೆ, ನನ್ನ ಗೆಳತಿ ರಶ್ಮಿಯ ಪ್ರಾಮಾಣಿಕ ಮತ್ತು ನಿಷ್ಕಲಂಕವಾದ ಹಸುರು ಪ್ರೀತಿಯನ್ನು ನೀವು ಗುರುತಿಸಿಲ್ಲ ಎಂಬುದು ನನಗೆ ಬಹಳ ನೋವು ತಂದಿದೆ. ಕರ್ನಾಟಕದ ಕೊಡಗಿನಲ್ಲಿ ಹುಟ್ಟಿ ಬೆಳೆದು ಈಗ ಹೆಚ್ಚಿನ ಕಲಿಕೆ ಮತ್ತು ಅವಕಾಶಗಳ ನಿಮಿತ್ತ ಅಮೆರಿಕೆಯಲ್ಲಿರುವ ಅವಳಿಗೆ ಎಲ್ಲಿಯೋ ದೂರದ ಅಮೆರಿಕದ ಕಾಡುಗಳಲ್ಲಿ ಗಿಡನೆಡುವುದು ಖಂಡಿತ ಸಂತೃಪ್ತಿ ನೀಡಲಾರದು. ಆದ್ದರಿಂದ ಅವಳು ನನ್ನ ಮೂಲಕ ಗಿಡ ನೆಡುವ ಕಾರ್ಯಕ್ಕೆ ಹೊರಟಿದ್ದಾಳೆಯೇ ಹೊರತು, ಅವಳಿಗೆ ಅಮೆರಿಕ ಮಾಡುವ ತಪ್ಪುಗಳ ಬಗ್ಗೆ ಯಾವುದೇ ಪಶ್ಚಾತ್ತಾಪ ಇಲ್ಲ!. ಏಕೆಂದರೆ ಅವಳು ಭಾರತೀಯಳು.
ಅಲ್ಲದೆ,
"ಅದೂ ಅಲ್ಲದೇ ಇವೆಲ್ಲಾ "ಪಾಶ್ಚಾತ್ತ್ಯ ದೇಶದ ಮನೋಬುದ್ಧಿಯ" ಪಶ್ಚಾತ್ತಾಪದ ಕಾರ್ಯಗಳೇ ಹೊರತು , ದಾರಿ/ದರ್ಶನ ಮೂಡಿಸುವ ಕೆಲಸಗಳಲ್ಲಾ.." -
ಒಳ್ಳೆಯ ವಿಷಯಗಳನ್ನು ನಾವು ಯಾರಿಂದಲಾದರೂ ಕಲಿಯಬಹುದು; ಪಾಶ್ಚಾತ್ಯರು ಪಶ್ಚಾತ್ತಾಪ ಪಟ್ಟು ಯಾವುದಾದರೂ ಒಳ್ಳೆಯ ಕೆಲಸವನ್ನು ಮಾಡಿದರೂ ಸರಿಯೇ - ಅದು ಸರಿಯಾದ ದಾರಿಯೆಂದಾದರೆ ಅನುಸರಣೀಯ.
ಹಾಗೂ,
"ಆಮೇಲೆ ಮರ ಗಿಡ ಬೆಳೆಸೋಕ್ಕೆ "ಡಾಲರ್ " ಸಹಾಯ ಬೇಕಿಲ್ಲಾ ಅ೦ದ್ಕೊ೦ಡಿದ್ದೇನೆ."
ನಾನು ’ಅಮೆರಿಕದವರು ದುಡ್ಡು ಕೊಟ್ಟು ನಾವು ಗಿಡ ಬೆಳೆಸುವ’ ಒಂದು general model of afforestation ಅನ್ನು ಇಲ್ಲಿ advocate ಮಾಡಿಲ್ಲ. ನನ್ನ ಗೆಳತಿ ರಶ್ಮಿ ತನ್ನೂರಿನಲ್ಲಿ ಈ ರೀತಿ ಗಿಡ ಬೆಳೆಸಲು ಬಯಸುತ್ತಾಳೆ ಎಂದಷ್ಟೇ ಹೇಳಿದ್ದೇನೆ.
ಆದರೆ, ಇನ್ಯಾರಾದರೂ ಪ್ರಾಮಾಣಿಕವಾಗಿ ಸದುದ್ದೇಶದಿಂದ ಸಹಾಯ ಮಾಡಲು ಬಂದರೆ ನಾವು ಏಕೆ ಬೇಡ ಎನ್ನಬೇಕು?. ನಮ್ಮ ಸಂಪದದಲ್ಲಿ ’ನಿಮ್ಮ ಸಹಾಯದ ಅಗತ್ಯವಿದೆ’ ಎಂದು ಬರೆದು ಸಂದಾಯವಾದ ಮೊತ್ತವನ್ನು ’ಡಾಲರ್’ ನಲ್ಲಿ ಬರೆದಿದೆ. ಭಾರತೀಯರು ಮಾತ್ರ (ಬಹುಶ: ಕನ್ನಡಿಗರು ಮಾತ್ರ!) ಸಹಾಯ ಮಾಡಬಹುದು ಎಂದು ಬರೆದಿದೆಯೇ?. ಒಳ್ಳೆಯ ಕೆಲಸಕ್ಕೆ ಸಹಾಯ ಎಲ್ಲಿಂದಾದರೂ ಹರಿದು ಬರಲಿ, ನಮಗೇನು?. ನೀವು ಈ ಬಗ್ಗೆ ಸುಮ್ಮನೆ ಮಕ್ಕಳಂತೆ ರೊಚ್ಚಿಗೇಳುತ್ತಿದ್ದೀರಿ.
"ಪ್ರಕೃತಿಗೆ ತನ್ನದೇ ಆದ ಶಕ್ತಿ ಚೈತನ್ಯವಿದೆ - ಗಮನಿಸಿ."
ಇದು ನನಗೆ ಅತ್ಯಂತ ಆತಂಕ ಉಂಟು ಮಾಡಿದ ವಾಕ್ಯ. ನೀವೇನನ್ನುತ್ತೀರಿ?. ಅರಣ್ಯ ನಾಶ ಆಗುತ್ತಾ ಹೋಗಲಿ, ಕೈಕಟ್ಟಿ ಕೂರೋಣ ಅನ್ನುತ್ತೀರೋ?. ಪ್ರಕೃತಿ ತನ್ನಿಂತಾನಾಗಿ ಸರಿಪಡಿಸಿಕೊಳ್ಳ ಬಲ್ಲದು - ಆದರೆ ಅವಳಿಗೆ ತನ್ನದೇ ಆದ ಒಂದು ಮಿತಿ ಇದೆ. ನಿನ್ನೆ London eye ಮೇಲೆ ನಿಂತಿದ್ದೆ, ಕಣ್ಣಿಗೆ ಕಾಣಿವಷ್ಟು ದೂರವೂ ಮಾನವ ನಿರ್ಮಿತ! (ಕಟ್ಟಡಗಳು, ವಾಹನಗಳು ಇತ್ಯಾದಿ). ಈ ಸಂಖ್ಯೆಯಲ್ಲಿ ಇನ್ನಾವ ಪ್ರಾಣಿ/ಪಕ್ಷಿ/ಗಿಡ/ಮರ ಭೂಮಿಯಲ್ಲಿ ಹಬ್ಬಿದೆ?.ಪ್ರಕೃತಿ ತಾನೇ ಇಷ್ಟೆಲ್ಲವನ್ನು ಹೇಗೆ ಸರಿಪಡಿಸಿಕೊಂಡಾಳು?.
ಅಲ್ಲದೆ, ನಿಮ್ಮ ಈ ವಾಕ್ಯ ’ನಾವು active ಆಗಿ ಇವನ್ನೆಲ್ಲ ಸರಿಪಡಿಸಬೇಕಾಗಿಲ್ಲ, ಪ್ರಕೃತಿ ತಾನೇ ಮಾಡಿಯಾಳು’ ಎಂಬರ್ಥ ದಲ್ಲಿದ್ದರೆ ಅದಕ್ಕಿಂತ ಮೊದಲು ನೀವೇ ’ಅ೦ದರೆ ಇಲ್ಲಿಯ ಜನಕ್ಕೆ ಯಾವುದಕ್ಕೂ ಆಸ್ತೆ ಇಲ್ಲಾ...ಎಲ್ಲಕ್ಕೂ ನಿರ್ಲಕ್ಷ್ಯ ಇದಕ್ಕಿನ್ನಾ ಶೋಕದಾಯಕವಾದದ್ದು ಯಾವುದಿದೆ ?’ ನಿರ್ಲಕ್ಷ್ಯ ಸಲ್ಲದು ಎನ್ನುವ ಥರ ಬರೆದಿದ್ದೀರಿ!.
ನಾನಿಷ್ಟೇ ಹೇಳಲು ಬಯಸುತ್ತೇನೆ. ಪರಿಸ್ಥಿತಿ ನಿಧಾನವಾಗಿಯಾದರೂ ನಮ್ಮ ಕೈಮೀರಿ ಹೋಗುತ್ತಿದೆ. ನಮ್ಮ ಪ್ರಕೃತಿಯ ರಕ್ಷಣೆ ನಮ್ಮ ಕೈಯಲ್ಲಿದೆ. ಸಾಧ್ಯವಾದಷ್ಟು ಬೇಗ ಇದನ್ನು ಪ್ರಪಂಚ ಅರ್ಥಮಾಡಿಕೊಳ್ಳಬೇಕಿದೆ.
ತಾವು ಮಾಡದಿದ್ದರೆ ಸರಿ, ಬೇರೆಯವರು ಒಂದು ಒಳ್ಳೆಯ ಕಾರ್ಯ ಮಾಡಿದರೆ ಹೀಗೆಳೆಯುವುದು ಏಕೆ? ಹೇಗೋ ಏನೋ, ರುಪಾಯಿ ಬಲದಿಂದಲೋ, ಡಾಲರ್ ಬಲದಿಂದಲೋ, ಅಂತೂ ಭೂಮಿ ಹಸಿರಾದರೆ ಸಾಕಲ್ವೆ? Anyway, ಈ ಎಲ್ಲ controversy ನಡುವೆ ನನಗೆ ಸಾಲು ಮರದ ತಿಮ್ಮಕ್ಕ ನೆನಪಾದಳು. ಯಾರ ಮೆಚ್ಚುಗೆ, ಟೀಕೆಗೂ care ಮಾಡದೆ ಎಂತಹ ಮಹತ್ಕಾರ್ಯ ಮಾಡಿದ್ದಾಳೆ. ಹಾಗೇನೇ, ನಮಗೆ ಒಳ್ಳೆಯ ಕೆಲಸ ಅಂತ ತೋರಿದ್ದನ್ನು ಮಾಡ್ತಾ ಹೋಗ್ಬೇಕು ಅನ್ಸತ್ತೆ.
ಬಹುಶಃ ಚರ್ಚೆ ಬೇರೆಡೆ ಹೊರಳಿತಾದ್ದರಿಂದ ತೀವ್ರ ಋಣಾತ್ಮಕವೆನಿಸಿರಬಹುದು. ಪಾಶ್ಚಾತ್ಯರ ಬಗ್ಗೆ ಚರ್ಚಿಸುವಾಗ ಬಹುಶಃ ಯಾರೂ ಅನಿವಾಸಿ ಭಾರತೀಯರನ್ನು ಸೇರಿಸಿ ಚರ್ಚಿಸಿರಲಿಕ್ಕಿಲ್ಲ - ಶ್ಯಾಮ ಬರೆದಿದ್ದರಲ್ಲಿ ಒಟ್ಟೂ ನಗರವಾಸಿಗಳು ಎಂದಿದ್ದರೆ ನಾನು ಬರೆದದ್ದು ಪಾಶ್ಚಾತ್ಯರ ಒಟ್ಟು ಚ್ಯಾರಿಟಿ attitude ಬಗ್ಗೆ.
ಆದರೆ ಅಲ್ಲಿದ್ದು ಸ್ವದೇಶದ ಬಗ್ಗೆ, ಭಾಷೆಯ ಬಗ್ಗೆ ಕಾಳಜಿ ಇಟ್ಟುಕೊಂಡು ನಡೆಯುವ ಭಾರತೀಯ ಹೃದಯಗಳ ಕೆಲಸ ಶ್ಲಾಘನೀಯ, ಅನುಕರಣೀಯ.
"ಗಿಡಮರ ಬೆಳೆಸೋದಕ್ಕೆ ಡಾಲರ್ ಸಹಾಯ ಬೇಕಿಲ್ಲ" ಎನ್ನುವುದು ಎರಡು ಅರ್ಥದಲ್ಲಿ ಕೇಳಿಬರುತ್ತದೆ. ನನಗೆ ಮೊದಲು ಓದಿಕೊಂಡಾಗ ಅದರರ್ಥ ಅನಿಸಿದ್ದು ಈ ರೀತಿಯಲ್ಲಿ - ಭಾರತದಲ್ಲಿ ಇನ್ನೂ ಗಿಡ ನೆಡಲು (ಊರುಗಳ ಕಡೆ) ದುಡ್ಡು ತೆಗೆದುಕೊಳ್ಳುವುದು ಅಷ್ಟಾಗಿ ಇಲ್ಲ. ಈ ಸಂದರ್ಭಕ್ಕೆ ಅನ್ವಯಿಸಿ ಡಾಲರ್ ಹಣವಿಲ್ಲದೇ ಗಿಡ ನೆಡಬಹುದು ಎಂಬುದು.
ಮತ್ತೊಂದು ರೀತಿಯಲ್ಲಿ - ಭಾರತದಲ್ಲಿ ಗಿಡ ನೆಡಲು ಎನ್ ಆರ್ ಐ ಗಳ ಸಹಾಯ ಬೇಕಿಲ್ಲ ಎಂಬಂತಿರುವ ಅರ್ಥ - ಇದು ಸ್ವಲ್ಪ radical approach ಆಗಬಹುದು.
ಸಂಪದ ದೇಣಿಗೆ ಪುಟದಲ್ಲಿ ಡಾಲರ್ ಲೆಕ್ಕ ಇರುವುದರ ಹಿಂದೆ ಒಂದು ಬಹುಮುಖ್ಯ ಉದ್ದೇಶವಿದೆ 'ಸಂಪದ'ವನ್ನು host ಮಾಡಿರುವ ಸರ್ವರ್ ಇರುವುದು ಅಮೇರಿಕೆಯಲ್ಲಿ. 'ಸಂಪದ' ಉಳಿಸಿಕೊಂಡು, ನಡೆಸಿಕೊಂಡು ಹೋಗುವುದರಲ್ಲಿ ಪ್ರಮುಖ ಖರ್ಚು ತಗಲುವುದು ಇದರ ಮತ್ತು ಇದರ ಬ್ಯಾಕಪ್ ನ ಬಿಲ್ ಪಾವತಿ ಮಾಡುವುದರಲ್ಲೇ. ಈ ಬಿಲ್ ಅಮೇರಿಕೆಯ ಡಾಲರುಗಳಲ್ಲಿ ಪೇ ಪಾಲ್ ಮೂಲಕ ಪಾವತಿ ಮಾಡುತ್ತೇವಾದ್ದರಿಂದ ಸುಲಭವಾಗಲೆಂದು ಲೆಕ್ಕ ಇರುವುದೂ ಡಾಲರ್ ಲೆಕ್ಕದಲ್ಲೇ.
--
ನನ್ನ ಬ್ಲಾಗ್: ಪರಿವೇಶಣ | PariveshaNa
ವೃತ್ತಿಯಿಂದ ಕಂಪ್ಯೂಟರ್ ಪ್ರೋಗ್ರಾಮ್ಮರ್.
ಪ್ರವೃತ್ತಿಯಿಂದ ಛಾಯಾಚಿತ್ರಗ್ರಾಹಕ, ಪರಿಸರಾಸಕ್ತ.
ಕೃಷಿ ಹಿನ್ನೆಲೆಯಿಂದ ಬಂದವನು ಮತ್ತು ಕೃಷಿಯ ಬಗ್ಗೆ ಒಲವುಳ್ಳವನು. http://www.kaje.in/ (ಸದ್ಯಕ್ಕೆ Mozilla ಬಳಸಿ!)
ಪ್ರತಿಕ್ರಿಯೆಗಳು
ಉ: ರಿಮೋಟ್ ಅರಣ್ಯೀಕರಣ (ಭಾಗ ೨)
ತಾವು ಮಾಡದಿದ್ದರೆ ಸರಿ, ಬೇರೆಯವರು ಒಂದು ಒಳ್ಳೆಯ ಕಾರ್ಯ ಮಾಡಿದರೆ ಹೀಗೆಳೆಯುವುದು ಏಕೆ? ಹೇಗೋ ಏನೋ, ರುಪಾಯಿ ಬಲದಿಂದಲೋ, ಡಾಲರ್ ಬಲದಿಂದಲೋ, ಅಂತೂ ಭೂಮಿ ಹಸಿರಾದರೆ ಸಾಕಲ್ವೆ? Anyway, ಈ ಎಲ್ಲ controversy ನಡುವೆ ನನಗೆ ಸಾಲು ಮರದ ತಿಮ್ಮಕ್ಕ ನೆನಪಾದಳು. ಯಾರ ಮೆಚ್ಚುಗೆ, ಟೀಕೆಗೂ care ಮಾಡದೆ ಎಂತಹ ಮಹತ್ಕಾರ್ಯ ಮಾಡಿದ್ದಾಳೆ. ಹಾಗೇನೇ, ನಮಗೆ ಒಳ್ಳೆಯ ಕೆಲಸ ಅಂತ ತೋರಿದ್ದನ್ನು ಮಾಡ್ತಾ ಹೋಗ್ಬೇಕು ಅನ್ಸತ್ತೆ.
ಉ: ರಿಮೋಟ್ ಅರಣ್ಯೀಕರಣ (ಭಾಗ ೨)
ಬಹುಶಃ ಚರ್ಚೆ ಬೇರೆಡೆ ಹೊರಳಿತಾದ್ದರಿಂದ ತೀವ್ರ ಋಣಾತ್ಮಕವೆನಿಸಿರಬಹುದು. ಪಾಶ್ಚಾತ್ಯರ ಬಗ್ಗೆ ಚರ್ಚಿಸುವಾಗ ಬಹುಶಃ ಯಾರೂ ಅನಿವಾಸಿ ಭಾರತೀಯರನ್ನು ಸೇರಿಸಿ ಚರ್ಚಿಸಿರಲಿಕ್ಕಿಲ್ಲ - ಶ್ಯಾಮ ಬರೆದಿದ್ದರಲ್ಲಿ ಒಟ್ಟೂ ನಗರವಾಸಿಗಳು ಎಂದಿದ್ದರೆ ನಾನು ಬರೆದದ್ದು ಪಾಶ್ಚಾತ್ಯರ ಒಟ್ಟು ಚ್ಯಾರಿಟಿ attitude ಬಗ್ಗೆ.
ಆದರೆ ಅಲ್ಲಿದ್ದು ಸ್ವದೇಶದ ಬಗ್ಗೆ, ಭಾಷೆಯ ಬಗ್ಗೆ ಕಾಳಜಿ ಇಟ್ಟುಕೊಂಡು ನಡೆಯುವ ಭಾರತೀಯ ಹೃದಯಗಳ ಕೆಲಸ ಶ್ಲಾಘನೀಯ, ಅನುಕರಣೀಯ.
"ಗಿಡಮರ ಬೆಳೆಸೋದಕ್ಕೆ ಡಾಲರ್ ಸಹಾಯ ಬೇಕಿಲ್ಲ" ಎನ್ನುವುದು ಎರಡು ಅರ್ಥದಲ್ಲಿ ಕೇಳಿಬರುತ್ತದೆ. ನನಗೆ ಮೊದಲು ಓದಿಕೊಂಡಾಗ ಅದರರ್ಥ ಅನಿಸಿದ್ದು ಈ ರೀತಿಯಲ್ಲಿ - ಭಾರತದಲ್ಲಿ ಇನ್ನೂ ಗಿಡ ನೆಡಲು (ಊರುಗಳ ಕಡೆ) ದುಡ್ಡು ತೆಗೆದುಕೊಳ್ಳುವುದು ಅಷ್ಟಾಗಿ ಇಲ್ಲ. ಈ ಸಂದರ್ಭಕ್ಕೆ ಅನ್ವಯಿಸಿ ಡಾಲರ್ ಹಣವಿಲ್ಲದೇ ಗಿಡ ನೆಡಬಹುದು ಎಂಬುದು.
ಮತ್ತೊಂದು ರೀತಿಯಲ್ಲಿ - ಭಾರತದಲ್ಲಿ ಗಿಡ ನೆಡಲು ಎನ್ ಆರ್ ಐ ಗಳ ಸಹಾಯ ಬೇಕಿಲ್ಲ ಎಂಬಂತಿರುವ ಅರ್ಥ - ಇದು ಸ್ವಲ್ಪ radical approach ಆಗಬಹುದು.
ಸಂಪದ ದೇಣಿಗೆ ಪುಟದಲ್ಲಿ ಡಾಲರ್ ಲೆಕ್ಕ ಇರುವುದರ ಹಿಂದೆ ಒಂದು ಬಹುಮುಖ್ಯ ಉದ್ದೇಶವಿದೆ
'ಸಂಪದ'ವನ್ನು host ಮಾಡಿರುವ ಸರ್ವರ್ ಇರುವುದು ಅಮೇರಿಕೆಯಲ್ಲಿ. 'ಸಂಪದ' ಉಳಿಸಿಕೊಂಡು, ನಡೆಸಿಕೊಂಡು ಹೋಗುವುದರಲ್ಲಿ ಪ್ರಮುಖ ಖರ್ಚು ತಗಲುವುದು ಇದರ ಮತ್ತು ಇದರ ಬ್ಯಾಕಪ್ ನ ಬಿಲ್ ಪಾವತಿ ಮಾಡುವುದರಲ್ಲೇ. ಈ ಬಿಲ್ ಅಮೇರಿಕೆಯ ಡಾಲರುಗಳಲ್ಲಿ ಪೇ ಪಾಲ್ ಮೂಲಕ ಪಾವತಿ ಮಾಡುತ್ತೇವಾದ್ದರಿಂದ ಸುಲಭವಾಗಲೆಂದು ಲೆಕ್ಕ ಇರುವುದೂ ಡಾಲರ್ ಲೆಕ್ಕದಲ್ಲೇ. 
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ರಿಮೋಟ್ ಅರಣ್ಯೀಕರಣ (ಭಾಗ ೨)
OK .. OK ..ಆಯ್ತು ಬಿಡಿ - ನಾನು ನಿಮ್ಮೂರಿಗೆ ಬರ್ತೀನಿ ಒ೦ದೆರಡು ಸಸಿ ನೆಟ್ಟು ..ಒಟ್ಟಿಗೆ ಮಾತಾಡೋಣಾ .... ಯಾಕ೦ದರೆ ಇದು ಬ್ಲಾಗ್ ನಲ್ಲಿ ಚರ್ಚೆ ಮಾಡೋ ಅಷ್ಟು ಸಣ್ಣ ವಿಷಯವಲ್ಲಾ.
ಉ: ರಿಮೋಟ್ ಅರಣ್ಯೀಕರಣ (ಭಾಗ ೨)
ಹೋಗ್ಲಿ ಬಿಡಿ ಯಾರೂ ಬೇಜಾರು ಮಾಡ್ಕೋಬೇಡಿ.
ಜೀವನದಲ್ಲಿ ಇದಕ್ಕಿಂತ ದೊಡ್ಡ ವಿಷಯಗಳಿವೆ, ತಲೆಬಿಸಿ ಮಾಡೋದಕ್ಕೆ.
ಅಂದ ಹಾಗೆ, ನಾನೂ ಕಾಯ್ತಾ ಇದ್ದೇನೆ ಗಿಡ ನೆಡುವ ಮುಂದಿನ ಸೀಸನ್ ಗೆ
ವಸಂತ್ ಕಜೆ