ಭಾರತ ಚಿತ್ತವಪ್ಪಳಿಸುತಿವೆ
ಬೇರೆಯ ನಾಡಿನ ಚಿತ್ತಗಳು
ಬೇರೆಯಾಗುತಿದೆ ಸ್ವ೦ತಿಕೆಯಳಿಯುತ
ನೇರಗಾಣದೀ ಒತ್ತಿನೊಳು.

— ಪು ತಿ ನ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

Vasanth Kaje ರವರ ಬ್ಲಾಗ್

ಮನ್ಸೋರೆಯವರ ಚಿತ್ರ ಪ್ರದರ್ಶನ

ಇವತ್ತು ಮನ್ಸೋರೆ ಕಲಾಪ್ರದರ್ಶನ ಮೆಜೆಸ್ಟಿಕ್ ನಲ್ಲಿ. ರಾತ್ರಿ ೯ ರ ತನಕ ಇದೆ. ಸಾಧ್ಯವಿದ್ದವರು ಹೋಗಿ, ಆಸ್ವಾದಿಸಿ, ಯುವ ಕಲಾವಿದನನ್ನು ನಿಮ್ಮ ಉಪಸ್ಥಿತಿಯ ಮೂಲಕ ಪ್ರೋತ್ಸಾಹಿಸಿ.

ನಾವು ಈಗಷ್ಟೇ ಹೋಗಿ ಬಂದೆವು. ಚಿತ್ರಗಳು ಇಲ್ಲಿವೆ.

ಪಾಡ್ಕಾಸ್ಟ್ : ನೇತ್ರದಾನ - ಹೇಗೆ? ಯಾವಾಗ? ಎಲ್ಲಿ?

ವಿಶ್ವನಾಥ ಭಟ್

ಕಣ್ಣಿಲ್ಲದ ಕಷ್ಟ ಕಣ್ಣಿರುವ ನಮಗೆ ಊಹಿಸುದು ಅಸಾಧ್ಯವೇ. ಚಿಕ್ಕಂದಿನಲ್ಲಿ ನಾವು ದಿನವಿಡೀ ಮೌನವಾಗಿರುವ ಒಂದು ಆಟ(?)ವಾಡುತ್ತಿದ್ದೆವು. ನೀವೊಮ್ಮೆ ಮಾಡಿನೋಡಿದರೆ ಗೊತ್ತಾಗಬಹುದು. ಇಡೀ ದಿನ ಬಿಡಿ, ಒಂದೆರಡು ಘಂಟೆ ಸುಮ್ಮನಿರುವುದು ಭಯಂಕರ ಕಷ್ಟ. ಕಣ್ಣು, ಕಿವಿ, ಮೂಗು, ಬಾಯಿಗಳೆಲ್ಲ ಸರಿಯಾಗಿದ್ದರೆ ಅದರಿಂದ ದೊಡ್ಡ ವರ ಬೇರೊಂದಿಲ್ಲ.
ಹೀಗಿರುವಾಗ, ನಮ್ಮ ನಂತರಕ್ಕೆ ಬೇರೊಬ್ಬರಿಗೆ ನಮ್ಮ ಕಣ್ಣು ಬೆಳಕಾಗಬಹುದಾದರೆ ಅದು ಹೇಗೆ? ಯಾವಾಗ? ತೆಗೆದುಕೊಳ್ಳಬೇಕಾದ ಕ್ರಮಗಳೇನು?
ಮೊನ್ನೆ ಆಕಸ್ಮಿಕವಾಗಿ ನನ್ನ ಸಂಬಂಧಿ ನೇತ್ರತಜ್ನರಾದ ಡಾ|ವಿಶ್ವನಾಥ ಭಟ್ ಕಾನಾವು ಅವರ ಜೊತೆ ನೇತ್ರದಾನದ ಬಗ್ಗೆ ನಾನು ಮತ್ತು ಭಾವ ಪ್ರವೀಣ ಶಂಕರ್ ಚರ್ಚಿಸುತ್ತಿದ್ದೆವು.  ಮುಂದೆ ಓದಿ »

ಪ್ರಿನ್ಸ್ ರಾಮ ವರ್ಮ


ಪ್ರಿನ್ಸ್ ರಾಮ ವರ್ಮ ಸಂಗೀತಾಸಕ್ತರಿಗೆ ಪರಿಚಿತ ಹೆಸರು. ರಾಮವರ್ಮ ಹಾಡುಗಾರಿಕೆ ಮತ್ತು ವೀಣಾ ವಾದನದಲ್ಲಿ ವಿದ್ವಾಂಸರು. ವಿಕಿಪೀಡಿಯ ದಲ್ಲಿ ಹೇಳುವಂತೆ ಅವರು ’ರಾಜ ಮನೆತನದಲ್ಲೊಬ್ಬ ಸಂಗೀತಗಾರ ಮತ್ತು ಸಂಗೀತಲೋಕಕ್ಕೊಬ್ಬ ರಾಜ!’.
 ಮುಂದೆ ಓದಿ »

ಬೆಂಗಳೂರು ಬಸ್ ಸ್ಟ್ಯಾಂಡುಗಳ ಹೊಸ ಮುಖಗಳು


ಬೆಂಗಳೂರಿನ ಸಾರ್ವಜನಿಕ ಬಸ್ ನಿಲ್ದಾಣಗಳ make-over ನಡೆಯುತ್ತಿದೆ ಗಮನಿಸಿದಿರಾ?.
 
ತಲೆಯೊಳಗೆ ವ್ಯಾಪಾರೀ ಮನೋಭಾವ ಬಿಟ್ಟು ಬೇರೇನೂ ಇಲ್ಲದ ಮೂರ್ಖರು ಯಾರೋ ಹೊಸ ವಿನ್ಯಾಸ ಮಾಡಿದ್ದಾರೆ.
 ಮುಂದೆ ಓದಿ »

Syndicate content