ಸ್ತಬ್ಧಗೊಂಡ ಕ್ಷಣಗಳು..

ಈ ತರಹದ experiment ಗಳನ್ನು ಮಾಡಬೇಕೆಂದು ಬಹಳ ಹಿಂದೆಯೇ ಅಂದು ಕೊಂಡಿದ್ದೆ. ಆದರೆ ನನ್ನ ಹಳೆಯ vivitar (non- digital) ನಲ್ಲಿ ಇದನ್ನು ಮಾಡಲು ಕಷ್ಟವಿತ್ತು.
ಡಿಜಿಟಲ್ ಮಾಧ್ಯಮ ಛಾಯಾಗ್ರಾಹಕರಿಗೆ ಪುನರ್ಯತ್ನದ (iterative attempts) ಮತ್ತು ಆಯ್ಕೆಯ ಹೊಸ ಯುಗವನ್ನು ತೆರೆದಿದೆ. ಇದನ್ನು ಹೊಗಳುವವರೂ ಇದ್ದಾರೆ ಮತ್ತು ಜರೆಯುವವರೂ ಇದ್ದಾರೆ. ಮೊದಲಿನಿಂದ ಫಿಲ್ಮ್ ಕ್ಯಾಮೆರ ಉಪಯೋಗಿಸಿಕೊಡಿದ್ದು, ಇತ್ತೀಚೆಗಷ್ತೆ Digi SLR ಗೆ ಶಿಫ್ಟ್ ಆಗಿರುವ professional photographers ಗಳಲ್ಲಿ ಹೆಚ್ಚಿನವರು ಡಿಜಿಟಲ್ ಗಿಂತ ಫಿಲ್ಮ್ ಕ್ಯಾಮೆರವನ್ನು ಹೆಚ್ಚು ಇಷ್ಟ ಪದುತ್ತಾರೆ. ಆದರೆ ಡಿಜಿಟಲ್ ಗಾಳಿಯ ವಿರುದ್ಧ ಕೊಡೆ ಹಿಡಿಯುವುದು ಇಂದಿನ ಮಟ್ಟಿಗೆ ಅಸಾಧ್ಯವೇ ಸರಿ.
ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ.
ವಸಂತ್ ಕಜೆ.

- Vasanth Kaje ರವರ ಬ್ಲಾಗ್
- Login or register to post comments
- 743 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
Re: ಸ್ತಬ್ಧಗೊಂಡ ಕ್ಷಣಗಳು..
ಕಜೆಯವರೇ,
ನಿಮ್ಮ ಈ ಚಿತ್ರ ಬಹು ಸುಂದರ.
Re: ಸ್ತಬ್ಧಗೊಂಡ ಕ್ಷಣಗಳು..
ವಂದನೆಗಳು ರಾಜೇಶ್.
ವಸಂತ್ ಕಜೆ
Re: ಸ್ತಬ್ಧಗೊಂಡ ಕ್ಷಣಗಳು..
ಧನ್ಯವಾದಗಳು ರಾಜೇಶ್.
ವಸಂತ್ ಕಜೆ
Re: ಸ್ತಬ್ಧಗೊಂಡ ಕ್ಷಣಗಳು..
ವಸಂತ್ಅವರೆ,
ನೀವು ತೆಗೆದ ಚಿತ್ರ ತುಂಬಾ ಚೆನ್ನಗಿ ಮೂಡಿಬಂದಿದೆ. ಕೆಲವು ವರುಷಗಳ ಹಿಂದಿನ ಮಾತು, National Geographicನ ಒಂದು documentaryಯಲ್ಲಿ ಇದೇ ತರಹ speed ಮತ್ತು slow photographyಯ ಬಗ್ಗೆ ಬಹಳ ಚೆನ್ನಾಗಿ ತೊರಿಸಿದ್ದರು. ನಿಜ ಹೇಳಬೇಕೆಂದರೆ, ನನಗೆ ಛಾಯಾಚಿತ್ರಗ್ರಹಣದ ಮೇಲೆ ಪ್ರೇಮ ಹುಟ್ಟಿದ್ದು ಅಲ್ಲಿಂದಲೆ. ದಯವಿಟ್ಟು shutter ವೇಗ ಮತ್ತು ಇತರೇ ಮಾಹಿತಿಯನ್ನು ನೀಡಿದರೆ ತುಂಬಾ ಉಪಕಾರವಾಗುತ್ತದೆ.
Re: ಸ್ತಬ್ಧಗೊಂಡ ಕ್ಷಣಗಳು..
ನಮಸ್ತೆ ರೋಹಿತ್,
ಇಂತಹ ಚಿತ್ರಗಳನ್ನು ತೆಗೆಯುವವರು flickr ನಲ್ಲೂ ಒಂದಾಗಿ group ರಚಿಸಿಕೊಂಡಿದ್ದಾರೆ. ಅದ್ಭುತ ಎನಿಸುವಂತ ಚಿತ್ರಗಳು ಅಲ್ಲಿ post ಆಗುತ್ತವೆ. ನಾನು ಇತ್ತೀಚೆಗೆ ನೋಡಿಲ್ಲವಾದ್ದರಿಂದ, ನನಗೆ group ನ ಹೆಸರು ನೆನಪಿಲ್ಲ...
ನಾನು sports mode ನಲ್ಲಿ ಇಟ್ಟಿದ್ದೆ. ISO ಬಹುಶ: ೧೬೦೦ ಇತ್ತು. ಸಹಜವಾಗಿ ಇದರಿಂದ shutter speed ಸುಮಾರು ೧/೧೫೦೦ ನಷ್ಟಾದರೂ ಇದ್ದಿರಬಹುದು. ನಿಮಗೆ ಖಚಿತ ಸಂಖ್ಯೆಗಳನ್ನು ಇನ್ನೊಮ್ಮೆ ನನ್ನ DVD ಯಲ್ಲಿರುವ ಈ ಫೊಟೊವನ್ನು ನೋಡಿ ಹೇಳುತ್ತೇನೆ. ನಿಮ್ಮ ಆಸಕ್ತಿಗೆ ಧನ್ಯವಾದಗಳು.
ವಸಂತ್ ಕಜೆ
ಅಂದ್ರೆ ನೀವ್ ಏಳೋದು -’ಒಂದ್ ನಿಮ್ಸ ಎಲ್ಲ ನಿಂತೊಯ್ತದೆ ಅಂತಾವ” ?
’ಎದೆ ಬಡ್ತ ಒಂದ್ ಚಣ, ನಿಂತೇ ಓಯ್ತು ಅಂತಿಟ್ಗ” ! ರಾಮಾಯಣ್ದಾಗೊ, ಮಾಬಾರ್ತ್ದಾಗೊ ಎಲ್ಲೊ ಒದಿದ್ ನೆಪ್ಪು ಕಣಪೊ. ಇಂತಾದೆ ಮಾತು ಅಲ್ಲು ಬತ್ತದ್ ನೋಡು.
ವಸಂತಣ್ಣೋರೆ, ನೀವೇಳೋದ್ ದಿಟ ಕಣಣ್ಣಾ. ಅದಕ್ಕಲ್ವಾ ಬಣ್ಣದ್ ಚಿಟ್ಟೇ ಅನ್ನೊದು. ಈ ಜಗತ್ನಾಗೆ ಬಣ್ಣ ಇಲ್ಲಾಂತನ್ನು ಏನೈತೆ ಅದ್ರಾಗೆ ಒಸಿ ಯೊಸ್ನೆ ಮಾಡ್ವ ! ಒತ್ತಾರೆ ಆ ನಮ್ ತಂದೆ ಬಂಗಾರ್ದ್ ಕಿರ್ಣಾ ಚೆಲ್ಕೊಂಡ್ ಪರ್ ಪಂಚ್ ದ ಗೂಟ ಒಂಟೋಯ್ತನಲ್ಲ, ಆದರ್ ಸೊಬಗ್ ಯಾವ್ ನಮ್ ನಕ್ಲಿ ಬಣ್ಗಳಲ್ ಐತೆ ನೀವೆ ಏಳಿ ಒಸಿ ? "ಅರ ಕ್ ಸೀರೆ ಉಟ್ಕೊಂಡ್ರು ಬಣ್ಣದ್ ಮಾಟ ಏನಂತೀನಿ". ನಾನ್ ಏಳೋದ್ ದಿಟ ಅಲ್ವ್ರ. ಏನಂತಿರಿ ಸೊಮೆರು ?
ಚಿತ್ರ , ಬಲ್ ಪಾಡಾಗೈತೆ ಕಣಪೊ ! ಇಂಗೆ ಯಾವಾಗಾನ ಮನ್ಸ್ ಬಂದಾಗ್ ಗೀಚ್ರಿ , ನಾಡ್ಗಪ್ಪೊನ್ರಗೆ ಕಳಿಸೊದ್ ಮರ್ತೀರ ಜ್ವಾಕೆ !
Re: ಅಂದ್ರೆ ನೀವ್ ಏಳೋದು -’ಒಂದ್ ನಿಮ್ಸ ಎಲ್ಲ ನಿಂತೊಯ್ತದೆ ಅಂತಾವ” ?
ವೆಂಕಟೇಶ್ ಅವರೆ,
ನಿಮ್ಮ ಗ್ರಾಮೀಣ ಸೊಗಡಿನ ಭಾಷೆಯಲ್ಲಿ ಉತ್ತರಿಸುವುದು ನನಗೆ ಸ್ವಲ್ಪ ಕಷ್ಟವಾಗಬಹುದೇನೊ. ನಾನು ಸರಳ ಕನ್ನಡವನ್ನೇ ಆಯ್ದುಕೊಳ್ಳುತ್ತೇನೆ
ನಿಮ್ಮ ಪ್ರತಿಕ್ರಿಯೆಗೆ ವಂದನೆಗಳು. "ನಾಡ್ಗಪ್ಪೊನ್ರಗೆ" ಅಂದರೆ, ನಾಳಿದ್ದಿನೊಳಗೆ (by day after tomorrow) ಅಂತಲೇ?.
ಇವತ್ತು ಮತ್ತೆ ಬ್ಲಾಗಿಸಲು ಪ್ರಯತ್ನಿಸುತ್ತೇನೆ..
ಪ್ರೀತಿ ಇರಲಿ,
ವಸಂತ್ ಕಜೆ
Re: ಅಂದ್ರೆ ನೀವ್ ಏಳೋದು -’ಒಂದ್ ನಿಮ್ಸ ಎಲ್ಲ ನಿಂತೊಯ್ತದೆ ಅಂತಾವ” ?
"ನಾಡ್ಗಪ್ಪೊನ್ರಗೆ" ಅಂದರೆ, ನಾಳಿದ್ದಿನೊಳಗೆ (by day after tomorrow) ಅಂತಲೇ?.
ಅಲ್ಲ, "ನಾಡ್ಗಪ್ಪೊನ್ರಗೆ" = ನಾಡಿಗಪ್ಪನವರಿಗೆ = ಹರಿಪ್ರಸಾದ್ ನಾಡಿಗ್ ಅವರಿಗೆ = hpn ಅವರಿಗೆ = ಸಂಪದ ಜಾಲಾಧಿಪತಿಗೆ!
Re: ಅಂದ್ರೆ ನೀವ್ ಏಳೋದು -’ಒಂದ್ ನಿಮ್ಸ ಎಲ್ಲ ನಿಂತೊಯ್ತದೆ ಅಂತಾವ” ?
ಓ ಸರಿ, ಸರಿ, ಈಗ ತಿಳಿಯಿತು ಬಿಡಿ.
೨-೩ ಬಾರಿ ಓದಿ ನೋಡಿದೆ. ಆದರೂ ನನ್ನ ಬಡ್ಡು ಮಂಡೆಗೆ ಅದು ಹೊಳೆಯಲಿಲ್ಲ
ವಂದನೆಗಳು ವತ್ಸುಕಕ್ಕ.
ವಸಂತ್ ಕಜೆ
Re: ಅಂದ್ರೆ ನೀವ್ ಏಳೋದು -’ಒಂದ್ ನಿಮ್ಸ ಎಲ್ಲ ನಿಂತೊಯ್ತದೆ ಅಂತಾವ” ?
ನಿಮ್ಮ ಪ್ರಶ್ನೆಗೆ ಶ್ರೀವತ್ಸರವರು ಸರಿಯಾಗಿ ಉತ್ತರಿಸಿದ್ದಾರೆ. ಗ್ರಾಮೀಣ ಸೊಗಡು ಈಗ ಸಿಗ್ತಿಲ್ಲ. ಬರಿ ಆ ಬೆಂಗ್ಳೂರ್ ಭಾಷೆ- ರವಷ್ಟು, ಕೊಂಚ, ಗೋರಿಕಾಯಿ, ಏನಕ್ಕೆ, ಇತ್ಯಾದಿಗಳನ್ನೇ, ಸ್ವಚ್ಛ ಕನ್ನಡ ಅನ್ಕೊಂಡಿದಿವಿ ನಾವು.ಎಲ್ರು ಇದೆ ಕನ್ನಡ ಮಾತಾಡಿದ್ರೆ, ಕನ್ನಡ ನಾಡಿನ ಬೇರೆ ಪ್ರದೇಶಗಳ [ಜಿಲ್ಲೆಗಳ] ಕನ್ನಡದ ಪ್ರಾಕಾರಗಳು ಅವಸಾನದ ಅಂಚಿಗೆ ಸೇರುವ ದಿಗಿಲು ನನಗೆ !
ಆಗಾಗ ನನ್ನ ಹುಟ್ಟಿದೂರಿನ ಜ್ಞಾಪಕ ಬಂದಾಗಲೆಲ್ಲಾ, ನನಗೆ ತಿಳಿಯದಂತೆ ಆ ಗ್ರಾಮ್ಯ ಭಾಷೆ ನನ್ನ ಬಾಯಿನಿಂದ ಹೊರಬೀಳುತ್ತೆ. ಕೆಲವು ತಪ್ಪು ಪ್ರಯೊಗಗಳೂ ನನ್ನಿಂದ ಆಗಿರಬಹುದು. ದಯಮಾಡಿ ಕ್ಷಮಿಸಿ. ನನಗೆ ಪ್ರಿಯವಾದದ್ದು ಬೇರೆಯವರಿಗೂ ಪ್ರಿಯವಾಗಬೇಕಾಗಿಲ್ಲ !
ನಮಸ್ಕಾರಗಳು.
ವೆಂ.
ಸ್ತಬ್ಧವಾಯಿತು ಚಣವು!
ಸ್ತಬ್ಧವಾಯಿತು ಚಣವು!
-----------
ಬಟ್ಟಲಿನ ಬಿಳಿ ಕಟ್ಟೆಯೊಡೆದು
ದಿಟ್ಟತನದಲಿ ಅಲೆಯನೆಬ್ಬಿಸಿ
ಪುಟ್ಟೆದೆಯುಬ್ಬಿಸಿ ಅಬ್ಬರಿಸುವ
ನೋಟಕಿದೋ ಸ್ತಬ್ಧವಾಯಿತು ಚಣವು!
ಹದಿಬದೆಯ ಶಾಪದಲಿ ಕಲ್ಲಾದ
ಕಡಲ ಬಟ್ಟಲಲಿಳಿದ ರವಿಯೋ!
ಸ್ವಾತಿಯಲಿ ಚಿಪ್ಪೊಳಗಿಳಿದು ಕೆಂಪಾದ
ಮುಕ್ತ ಭಾವನೆಗಳ ಕವಿಯೋ!
ತುಟಿಗಿಟ್ಟ ಪಾನೀಯದಲಿ ಬಿದ್ದ
ಸಡಿಲ ಮೂಗುತಿಯ ಹರಳೋ!
ಹಸಿದೊಡಲ ಸೇರಿಸೆ ತಂದ
ಅತಿಬೆಲೆಯ ಹಣ್ಣ ತಿರುಳೋ!
ಚಣವದುವೆ ತೀರಿತ್ತು!
ಕಣವದುವೆ ಜಾರಿತ್ತು!
ಕಣಕಣವ ಚಣಚಣದಿ
ಕವಿಗಣ್ಣು ಹಿಡಿದಿತ್ತು!
-ನಿಮ್ಮ
ಬೆನಕ
ಕನ್ನಡಪುಟ.ಬ್ಲಾಗ್ಸ್ಪಾಟ್.ಕಾಂ.
Re: ಸ್ತಬ್ಧವಾಯಿತು ಚಣವು!
ಅರೆರೆ!!
ಈ ಚಿತ್ರವನ್ನು ನೋಡಿ ಕವನವನ್ನೇ ಬರೆದು ಬಿಟ್ಟಿದ್ದೀರಿ. ಚೆನ್ನಾಗಿದೆ
ವಸಂತ್ ಕಜೆ
Re: ಸ್ತಬ್ಧವಾಯಿತು ಚಣವು!
ಹದಿಬದೆಯ ಶಾಪದಲ್ಲಿ ಕಲ್ಲಾದವರು ಯಾರು?
ಯಾವ ಪುರಾಣಕತೆಗೆ ನಂಟು?
ಮಾರ್ಕಂಡೇಯಪುರಾಣದ ಕಥೆ
ಮಹೇಶರೆ,
ಯಾವ ಪುರಾಣಕತೆಗೆ ನಂಟು?
ನೀವು ಕೇಳಿದ ಮೊದಲ ಪ್ರಶ್ನೆಗೆ ಉತ್ತರ ಕವನದ ಮುಂದಿನ ಸಾಲಿನಲ್ಲೇ ಇದೆ:
ಹದಿಬದೆಯ ಶಾಪದಲಿ ಕಲ್ಲಾದ
ಕಡಲ ಬಟ್ಟಲಲಿಳಿದ "ರವಿ"ಯೋ!
ಇರಲಿ; ಕೌಶಿಕನ ಪತ್ನಿ(ಕೌಶಿಕೀ/ಶೀಲವತೀ/ನಲಯನೀ/ಶಾಂಡಿಲೀ)ಯಿಂದ ಶಾಪಕ್ಕೀಡಾಗಿ ನಿಶ್ಚಲನಾದವನು ಸೂರ್ಯ. ಅನಂತರ ಅನಸೂಯಾದೇವಿಯ ದೆಸೆಯಿಂದ ಪಾರಾದನೆಂದು ಮಾರ್ಕಂಡೇಯಪುರಾಣದ ಕಥೆ ಹೇಳುತ್ತದೆ. ರಾಮಾಯಣದ ಅಯೋಧ್ಯಾಕಾಂಡದಲ್ಲೂ ಈ ಕಥೆಯ ಉಲ್ಲೇಖವಿದೆಯೆಂದು ಓದಿದ ನೆನಪು.
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್ಸ್ಪಾಟ್.ಕಾಂ.
Re: ಮಾರ್ಕಂಡೇಯಪುರಾಣದ ಕಥೆ
ನನ್ನಿ(ನನ್ರಿ)
ಹದಿಬದೆಯ ಶಾಪದಲಿ ಕಲ್ಲಾದ
ಕಡಲ ಬಟ್ಟಲಲಿಳಿದ "ರವಿ"ಯೋ!
ಇಲ್ಲಿ ನಾನು ’ಕಲ್ಲಾದ ಕಡಲ’ ಎಂದು ಓದಿಕೊಂಡು ಕಲ್ಲಾದುದು ಕಡಲು ಅಂದುಕೊಂಡೆನು.
ನಿಮ್ಮ ಪೊಯೆಮ್ ತೆರದಂತೆ, ಹೀಗೆ ಯಾವುದೋ ಒಂದು ರೇರಾದ ಕತೆಯನ್ನು ರೆಪರ್ ಮಾಡಿದ ಪೊಯೆಮ್ನ ಲೈನನ್ನು ಡಿಸಿಪರ್ ಮಾಡೋದು ತುಂಬ ಕಸ್ಟ.
ಇಂತಹ ಪೊಯೆಮನ್ನು ಸರಿಯಾಗಿ ತಿಳಿಯಲು, ಹೆಚ್ಚು ಓದು, ಅರಿವುಬೇಕು.
ಒಂದು ಪುರಾಣಕತೆಯನ್ನು ಹೇಳಿದಕ್ಕೆ ಮರುನನ್ನಿ(ನನ್ರಿ )[thanks agains]
ನಿಮ್ಮ ಪೊಯೆಮ್ ಬಹಳ ನೀಟಾಗಿ ನೈಸಾಗಿದೆ.