ಇದೀಗ ಜಿ-ಟಾಕ್ ನಲ್ಲಿ ಅಮ್ಮ ಹೇಳಿದ ಸುದ್ದಿ. ’ನಮ್ಮ ಬೆಕ್ಕು ಕಾಣೆಯಾಗಿದೆ’.
ಇದಕ್ಕೆ ಎರಡು ಮುಖ್ಯ ಕಾರಣಗಳನ್ನು ಊಹಿಸಲಾಗಿದೆ.
ಪ್ರತೀ ಮೂರು ತಿಂಗಳಿಗೊಮ್ಮೆ ಕನಿಷ್ಟ ೨ ಮರಿಗಳನು ಈಯುವ ಅದು, ತನ್ನ ಕರ್ತವ್ಯವನ್ನು ಮುಂದುವರಿಸಲು ಉನ್ಮುಖವಾಗಿದೆ.
ಆಥವಾ , ನಮ್ಮ ಕೆಲಸಕ್ಕೆ ಬಾರದ ನಾಯಿ ಅದನ್ನು ಹಿಡಿದು ಬಿಟ್ಟಿದೆ. ಇಲ್ಲಿಯವರೆಗೆ ಶವ ಪತ್ತೆಯಾಗಿಲ್ಲ. ಆದ್ದರಿಂದ ಈ ಯೋಚನೆಯನ್ನು ಸದ್ಯಕ್ಕೆ ಅವಾಯ್ಡ್ ಮಾಡಲಾಗುತ್ತಿದೆ.
ನನ್ನಮ್ಮನ ಪ್ರೀತಿಯ ಬೆಕ್ಕಾದ ಅದು, ನೋಡಲು ಮೇಲ್ಕಾಣಿಸಿದಂತೆ ಇದೆ. ಅಂದ ಹಾಗೆ ಅದು ಕಂಡವರಿಗೆ ನಮಸ್ಕಾರ ಮಾಡುವಷ್ಟು ಬುದ್ಧಿವಂತಳಲ್ಲ. ಛಳಿಗಾಲದ ಮುಂಜಾವಿನಲ್ಲಿ ಮುಖ ಒರೆಸಿಕೊಳ್ಳುತ್ತಿದೆ ಅಷ್ಟೆ.
ನಾನು ನಿಮ್ಮಂತೆ ಪ್ರಾಣಿಗಳನ್ನು ಸಾಕಬಾರದೆಂದೇನೂ ನಿರ್ಧಾರ ಮಾಡಿಲ್ಲ. ಚಿಕ್ಕಂದಿನಲ್ಲಿ ನಮ್ಮ ಹಳ್ಳಿಯಲ್ಲಿ ಪ್ರಾಣಿ, ಪಕ್ಷಿಗಳೊಂದಿಗೆ ಬೆಳೆದ ನಾನು, ಈಗಲೂ ಅವನ್ನು ಬೆಳೆಸಲು ಆಸೆಯಿದೆ. ಆದರೆ ನನ್ನ ಆಸೆಗೆ ಈ ಪಟ್ಟಣದ Flatಗಳು ಅವಕಾಶ ಕೊಡುತ್ತಿಲ್ಲ. ನೆರೆಹೊರೆಯವರಿಗೆ ತೊಂದರೆಯಾಗಬಾರದೆಂದು ನಾಯಿ ಬೆಕ್ಕನ್ನು ಸಾಕಲಾಗಲಿಲ್ಲ. ಈಗಲೂ ನನ್ನ ಮುಗುವಿನ ಆಸೆಯನ್ನು ಪೂರೈಸಲಾಗಲ್ಲಿಲ್ಲವಲ್ಲವೆಂಬ ಕೊರಗಿದೆ.
ನಮಗೂ ಹಾಗೇ ಆಯ್ತು. ಶಿವಮೊಗ್ಗದಲ್ಲಿದ್ದಾಗಿನಿಂದ ಜೊತೆಗಿದ್ದ ನಾಯಿಮರಿ ಸೋನಿ, ಬೆಂಗಳೂರು ರೋಡಿನ ಟ್ರಾಫಿಕ್ಕು, ಜನಜಂಗುಳಿ, ಕೊನೆಗೆ (ಗಾರ್ಡನ್ ಇಲ್ಲದ) ಅತಿ ಚಿಕ್ಕ ಮನೆಗೆ ಒಗ್ಗಿಕೊಳ್ಳಲಾಗದೆ ತೀರ ಮಂಕಾಗಿಬಿಟ್ಟಿದ್ದಾಗ ನೋಡಿ ಬೇಸರವಾಗುತ್ತಿತ್ತು. ಕೊನೆಗೊಂದು ದಿನ ಅದರ ದುರ್ಮರಣ. ಅದು ಪುಟ್ಟದಿದ್ದಾಗಿನಿಂದ ನಮ್ಮ ಜೊತೆಗೇ ಇತ್ತು. ಅಪ್ಪ ಅಮ್ಮ ಬಿಕ್ಕಿ ಅತ್ತಿದ್ದರು, ವಾರ ಪೂರ್ತ ಸರಿಯಾಗಿ ನಿದ್ರೆ ಮಾಡದೇ ಕಳೆದಿದ್ದರು.
ಹೀಗಾಗಿ ನಾವೂ ಕೂಡ ನಿಮ್ಮ ಹಾಗೆಯೇ ಯಾವ ಪ್ರಾಣಿಯನ್ನೂ ಸಾಕಬಾರದು ಅಂತ ನಿರ್ಧಾರ ಮಾಡಿಬಿಟ್ಟಿದ್ದೇವೆ.
ಹಂಸಾನಂದಿಯವರೆ, ಅಗಲುವಿಕೆಯ ದು:ಖಕ್ಕಾಗಿ ಪ್ರಾಣಿಗಳನ್ನು ಸಾಕದೆ ಇರುವುದು ಸ್ವಲ್ಪ ನೆಗೆಟಿವ್ ಅಪ್ರೋಚ್ ಅನ್ನಬಹುದೇನೊ. ನಾನು ಹಲವು ಇಂಥ ಅನುಭವಗಳನ್ನು ಪಟ್ಟಿದ್ದೇನೆ. ನಮ್ಮಲ್ಲೊಂದು ಬೆಕ್ಕು ತನ್ನ ಚೊಚ್ಚಲ ಹೆರಿಗೆಯಲ್ಲಿ ಮರಿಗಳಿಗೆ ಹಾಲೂಡಿಸುವ ಗೋಜಿಗೆ ಹೋಗದೆ ತನ್ನ ಪಾಡಿಗೆ ಹೊರಟು ಹೋಯಿತು. ನಾನು, ಅಮ್ಮ, ಹಾಲು ಕುಡಿಸಲು ಕಷ್ಟ ಪಟ್ಟೆವು. ನಮಗೆ ಸಾಧ್ಯವಾಗಲಿಲ್ಲ. ಮರಿಗಳೆಲ್ಲ ತೀರಿ ಹೋದವು. ಕ್ಯಾನ್ಸರ್ ಆದ ನಾಯಿಯನ್ನು ಪ್ರತಿದಿನ ಟ್ರೀಟ್ ಮಾಡಿದ್ದೆ, ವಿಷ ತಿಂದ ನಾಯಿಯನ್ನು ಹೆಚ್ಚು ಕಮ್ಮಿ ಇಡೀ ದಿನ ಟ್ರೀಟ್ ಮಾಡಿದ್ದೆ (ಬದುಕಿಸಲು ಸಾಧ್ಯವಾಯಿತು). ಬಹುಶ: ನೀವನ್ನುವುದು ನಿಜವೇನೊ, ಬದುಕಿಸಿದ ಪ್ರಮಾಣ ಕಡಿಮೆ, ಸಾವನ್ನು ಮುಂದೆ ಹಾಕಿದ್ದೇನಷ್ಟೆ..
ವೃತ್ತಿಯಿಂದ ಕಂಪ್ಯೂಟರ್ ಪ್ರೋಗ್ರಾಮ್ಮರ್.
ಪ್ರವೃತ್ತಿಯಿಂದ ಛಾಯಾಚಿತ್ರಗ್ರಾಹಕ, ಪರಿಸರಾಸಕ್ತ.
ಕೃಷಿ ಹಿನ್ನೆಲೆಯಿಂದ ಬಂದವನು ಮತ್ತು ಕೃಷಿಯ ಬಗ್ಗೆ ಒಲವುಳ್ಳವನು. http://www.kaje.in/ (ಸದ್ಯಕ್ಕೆ Mozilla ಬಳಸಿ!)
ಪ್ರತಿಕ್ರಿಯೆಗಳು
ಉ: ನಮ್ಮ ಬೆಕ್ಕು ಕಾಣೆಯಾಗಿದೆ !!
ಏನು ಹೆಸರಿಟ್ಟಿದ್ದಿರಿ? ನಾಯಿ ಹಿಡಿದಿರಲಿಕ್ಕಿಲ್ಲ ಎಂದು ಹಾರೈಸೋಣ.
ನನ್ನ ಜೊತೆ ಓದಿದ ಸ್ನೇಹಿತನೊಬ್ಬ ಇಂದಿಗೂ ತನ್ನ ಬೆಕ್ಕಿನ ನೆನಪಿಗೆ ತನ್ನ ವೆಬ್ಸೈಟನ್ನೇ ಮುಡುಪಾಗಿಟ್ಟುಬಿಟ್ಟಿದ್ದಾನೆ.
ಉ: ನಮ್ಮ ಬೆಕ್ಕು ಕಾಣೆಯಾಗಿದೆ !!
ನಿಜ ಹೇಳಬೇಕೆಂದರೆ ಅದಕ್ಕೆ ಹೆಸರಿಲ್ಲ. ನಾನು ಯಾವತ್ತೂ ಅದನ್ನು ಹೆಸರು ಹಿಡಿದು ಕರೆಯದಿದ್ದರೂ, ಅದರ ಹೆಸರು 'ಮೃಣಾಲಿನಿ' ಅಂದುಕೊಂಡಿದ್ದೇನೆ.
ನಿಮ್ಮ ಹಾರೈಕೆಗೆ ವಂದನೆಗಳು.
ನಿಮ್ಮ ಸ್ನೇಹಿತನ ಬೆಕ್ಕನ್ನು ನೋಡಿದೆ. ಮುದ್ದಾಗಿದೆ.
ವಸಂತ್.
ಉ: ನಮ್ಮ ಬೆಕ್ಕು ಕಾಣೆಯಾಗಿದೆ !!
ನಿಮ್ಮ ಬೆಕ್ಕು ಮರಳಿ ಸಿಗಲಿ.
ಚಿಕ್ಕಂದಿನಲ್ಲಿ ನಮ್ಮ ಜೊತೆಯಿದ್ದ ಬೆಕ್ಕು, ಅದರ ಮರಿಗಳನ್ನು ಕಳೆದುಕೊಂಡಾಗ ಅದಕ್ಕಾಗುತ್ತಿದ್ದ ದುಃಖ, ಜೊತೆಗೆ ನಮಗಾಗುತ್ತಿದ್ದ ದು:ಖ ಎಲ್ಲ ನೆನಪಿಗೆ ಬಂತು.
ಹಾಗೆಂದೇ, ನಂತರ ಯಾವ ಪ್ರಾಣಿಗಳನ್ನು ಸಾಕಬಾರದೆಂಬ ನಿರ್ಧಾರ ಮಾಡಿದ್ದು, ಇವತ್ತಿಗೂ ಪಾಲಿಸುತ್ತಿದ್ದೇನೆ
-ಹಂಸಾನಂದಿ
ಉ: ನಮ್ಮ ಬೆಕ್ಕು ಕಾಣೆಯಾಗಿದೆ !!
ನಾನು ನಿಮ್ಮಂತೆ ಪ್ರಾಣಿಗಳನ್ನು ಸಾಕಬಾರದೆಂದೇನೂ ನಿರ್ಧಾರ ಮಾಡಿಲ್ಲ. ಚಿಕ್ಕಂದಿನಲ್ಲಿ ನಮ್ಮ ಹಳ್ಳಿಯಲ್ಲಿ ಪ್ರಾಣಿ, ಪಕ್ಷಿಗಳೊಂದಿಗೆ ಬೆಳೆದ ನಾನು, ಈಗಲೂ ಅವನ್ನು ಬೆಳೆಸಲು ಆಸೆಯಿದೆ. ಆದರೆ ನನ್ನ ಆಸೆಗೆ ಈ ಪಟ್ಟಣದ Flatಗಳು ಅವಕಾಶ ಕೊಡುತ್ತಿಲ್ಲ. ನೆರೆಹೊರೆಯವರಿಗೆ ತೊಂದರೆಯಾಗಬಾರದೆಂದು ನಾಯಿ ಬೆಕ್ಕನ್ನು ಸಾಕಲಾಗಲಿಲ್ಲ. ಈಗಲೂ ನನ್ನ ಮುಗುವಿನ ಆಸೆಯನ್ನು ಪೂರೈಸಲಾಗಲ್ಲಿಲ್ಲವಲ್ಲವೆಂಬ ಕೊರಗಿದೆ.
ಉ:
ನಮಗೂ ಹಾಗೇ ಆಯ್ತು. ಶಿವಮೊಗ್ಗದಲ್ಲಿದ್ದಾಗಿನಿಂದ ಜೊತೆಗಿದ್ದ ನಾಯಿಮರಿ ಸೋನಿ, ಬೆಂಗಳೂರು ರೋಡಿನ ಟ್ರಾಫಿಕ್ಕು, ಜನಜಂಗುಳಿ, ಕೊನೆಗೆ (ಗಾರ್ಡನ್ ಇಲ್ಲದ) ಅತಿ ಚಿಕ್ಕ ಮನೆಗೆ ಒಗ್ಗಿಕೊಳ್ಳಲಾಗದೆ ತೀರ ಮಂಕಾಗಿಬಿಟ್ಟಿದ್ದಾಗ ನೋಡಿ ಬೇಸರವಾಗುತ್ತಿತ್ತು. ಕೊನೆಗೊಂದು ದಿನ ಅದರ ದುರ್ಮರಣ.
ಅದು ಪುಟ್ಟದಿದ್ದಾಗಿನಿಂದ ನಮ್ಮ ಜೊತೆಗೇ ಇತ್ತು. ಅಪ್ಪ ಅಮ್ಮ ಬಿಕ್ಕಿ ಅತ್ತಿದ್ದರು, ವಾರ ಪೂರ್ತ ಸರಿಯಾಗಿ ನಿದ್ರೆ ಮಾಡದೇ ಕಳೆದಿದ್ದರು.
ಹೀಗಾಗಿ ನಾವೂ ಕೂಡ ನಿಮ್ಮ ಹಾಗೆಯೇ ಯಾವ ಪ್ರಾಣಿಯನ್ನೂ ಸಾಕಬಾರದು ಅಂತ ನಿರ್ಧಾರ ಮಾಡಿಬಿಟ್ಟಿದ್ದೇವೆ.
ಉ: ನಮ್ಮ ಬೆಕ್ಕು ಕಾಣೆಯಾಗಿದೆ !!
ನಿಮ್ಮ ಬೆಕ್ಕು ನಿಮ್ಮ ಮನೆ ಅಥವ ಕೊಟ್ಟಿಗೆಯ ಅಟ್ಟ ದಲ್ಲಿ ಚಂದದ ಮರಿಗಳೊಂದಿಗೆ ಇರಲಿ ಅಂತ ನನ್ನ ಆಸೆ.
ಉ: ನಮ್ಮ ಬೆಕ್ಕು ಕಾಣೆಯಾಗಿದೆ !!
ನಮ್ಮ ಬೆಕ್ಕಿನ ನೆಮ್ಮದಿಯನ್ನು ಹಾರೈಸಿದವರಿಗೆ ವಂದನೆಗಳು,
ಹಂಸಾನಂದಿಯವರೆ, ಅಗಲುವಿಕೆಯ ದು:ಖಕ್ಕಾಗಿ ಪ್ರಾಣಿಗಳನ್ನು ಸಾಕದೆ ಇರುವುದು ಸ್ವಲ್ಪ ನೆಗೆಟಿವ್ ಅಪ್ರೋಚ್ ಅನ್ನಬಹುದೇನೊ. ನಾನು ಹಲವು ಇಂಥ ಅನುಭವಗಳನ್ನು ಪಟ್ಟಿದ್ದೇನೆ. ನಮ್ಮಲ್ಲೊಂದು ಬೆಕ್ಕು ತನ್ನ ಚೊಚ್ಚಲ ಹೆರಿಗೆಯಲ್ಲಿ ಮರಿಗಳಿಗೆ ಹಾಲೂಡಿಸುವ ಗೋಜಿಗೆ ಹೋಗದೆ ತನ್ನ ಪಾಡಿಗೆ ಹೊರಟು ಹೋಯಿತು. ನಾನು, ಅಮ್ಮ, ಹಾಲು ಕುಡಿಸಲು ಕಷ್ಟ ಪಟ್ಟೆವು. ನಮಗೆ ಸಾಧ್ಯವಾಗಲಿಲ್ಲ. ಮರಿಗಳೆಲ್ಲ ತೀರಿ ಹೋದವು. ಕ್ಯಾನ್ಸರ್ ಆದ ನಾಯಿಯನ್ನು ಪ್ರತಿದಿನ ಟ್ರೀಟ್ ಮಾಡಿದ್ದೆ, ವಿಷ ತಿಂದ ನಾಯಿಯನ್ನು ಹೆಚ್ಚು ಕಮ್ಮಿ ಇಡೀ ದಿನ ಟ್ರೀಟ್ ಮಾಡಿದ್ದೆ (ಬದುಕಿಸಲು ಸಾಧ್ಯವಾಯಿತು). ಬಹುಶ: ನೀವನ್ನುವುದು ನಿಜವೇನೊ, ಬದುಕಿಸಿದ ಪ್ರಮಾಣ ಕಡಿಮೆ, ಸಾವನ್ನು ಮುಂದೆ ಹಾಕಿದ್ದೇನಷ್ಟೆ..
ವಸಂತ್ ಕಜೆ