22
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಭಾವನಾ, ಹಂಗಾಮ, ಜಯಂತ್ ಇತ್ಯಾದಿ

August 1, 2007 - 4:50am
Vasanth Kaje


ಅವಧಿಯಲ್ಲಿ(avadhi.wordpress.com) ಹಂಗಾಮ ಎನ್ನುವ ಪತ್ರಿಕೆಯ ಬಗ್ಗೆ, ಅದು ನಿಂತು ಹೋದುದರ ಬಗ್ಗೆ ಆಗಾಗ್ಗೆ ಪ್ರಸ್ತಾಪ ಆಗುತ್ತಿರುತ್ತದೆ. ಭಾವನಾ ಬರುತ್ತಿದ್ದ ಕಾಲದಲ್ಲಿ ಅದರ ಬಗ್ಗೆ ಮತ್ತೆ ಮತ್ತೆ ಚರ್ಚಿಸುತ್ತಿದ್ದ ನನಗೆ, ನನ್ನ ರಾಜಣ್ಣ ಮಾವನಿಗೆ ಮತ್ತು ನಮ್ಮಂತಹ ಸಾವಿರಾರು ಭಾವನಾಭಿಮಾನಿಗಳಿಗೆ ಹೀಗೆಯೇ ನೀರಿನಿಂದ ತೆಗೆದ ಮೀನಿನಂತೆ ಆಗಿತ್ತು. ಮತ್ತೆ ಮತ್ತೆ ಪುಸ್ತಕದಂಗಡಿಗಳಲ್ಲಿ ಕೇಳುತ್ತಿದ್ದೆವು ಭಾವನಾದ ಬಗ್ಗೆ. ಕೊನೆಗೊಮ್ಮೆ ನಿರಾಶೆ ಹೆಚ್ಚಿ ಹುಬ್ಬಳ್ಳಿಯಲ್ಲಿ ಭಾವನಾದ ಕಛೇರಿಗೆ ಫೋನ್ ಮಾಡಿ, ಕಾಯ್ಕಿಣಿಯವರಿಗಾಗಿ ವಿಚಾರಿಸಿದೆವು. ಅವರು ಈಗ ಅಲ್ಲಿರುವುದಿಲ್ಲ ಎಂದು ತಿಳಿದು ಬಂದ ಮೇಲೆ ಸುಮ್ಮನಾದೆವು. ಆಮೇಲೆ ಕೆಲಸಕ್ಕೆ ಸೇರಿದ ಮೇಲೆ ನಾನೊಮ್ಮೆ ಕಾಯ್ಕಿಣಿಯವರಿಗೆ ಮೈಲ್ ಮಾಡಿ, ಭಾವನಾ ನಿಂತದ್ದೇಕೆ, ಓದುಗರ ಕೊರತೆಯಿಂದಲೋ, ಮ್ಯಾನೇಜ್ ಮೆಂಟ್ ಪ್ರೋತ್ಸಾಹವಿಲ್ಲದೆಯೋ ಎಂದು ವಿಚಾರಿಸಿದೆ. ಕಾಯ್ಕಿಣಿಯವರು ಉತ್ತರಿಸಿ ಓದುಗರ ಕೊರತೆ ಭಾವನಾಕ್ಕೆ ಇರಲೇ ಇಲ್ಲ ಎಂದು ಸ್ಪಷ್ಟಪಡಿಸಿದರು.. ನನ್ನಲ್ಲಿ ಇದೆ ಆ ಮೈಲ್ ಬಹುಶ:..

ಭಾವನಾ ಅದ್ಭುತವಾಗಿತ್ತು. ಸುಮಂಗಲಾ ಬಾದರದಿನ್ನಿ, ರೇಖಾ ಕುಂದಾರು ಮುಂತಾದವರೆಲ್ಲ ಅದರಲ್ಲಿ ಚೆನ್ನಾದ ಕಥೆಗಳನ್ನು ಬರೆಯುತ್ತಿದ್ದರು. ನನ್ನಲ್ಲಿ ಭಾವನಾದ ಹೆಚ್ಚಿನ ಎಲ್ಲ ಪ್ರತಿಗಳೂ ಇವೆ. ಈಗಲೂ ಅದರ ಕೆಲವು ಕತೆಗಳನ್ನು ಓದುತ್ತಿರುತ್ತೇನೆ.. 

ವಸಂತ್ ಕಜೆ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by jaiguruji on
ಭಾವನಾ ನೆನಪಿಸಿದ್ದಕ್ಕೆ ಧನ್ಯವಾದಗಳು, ನನ್ನ ಹತ್ತಿರ ಕೂಡ ಈಗಲೂ ಭಾವನಾದ ಎಲ್ಲ ಸಂಚಿಕೆಗಳು ಇವೆ. ಕೊನೆಯ ಸಂಚಿಕೆ ಮಾತ್ರ ನಾನು ಆ ಕ್ಷಣ ವಿದೇಶದಲ್ಲಿ ಇದ್ದದ್ದರಿಂದ ಸಿಗಲಿಲ್ಲ. ಇಷ್ಟಾಗಿಯೂ ನನ್ನ ಸಹೋದ್ಯೋಗಿಗೆ ಅದನ್ನ ಖರೀದಿಸಿಡಲು ಹೇಳಿದ್ದೆ, ಆದರೆ ಕೊನೆಗೂ ಅದೊಂದು ಸಿಗಲಿಲ್ಲ. ಭಾವನಾದಲ್ಲಿ ಒಂದು ತರದ ಹೊಸತನವಿತ್ತು. ಅಲ್ಲಿ ಬಂದಂತಹ ಜಲವರ್ಣ ಚಿತ್ರಗಳು, ಮುಖಪುಟಗಳು ಒಂದಕ್ಕಿಂತ ಒಂದು ಚೆನ್ನಾಗಿದ್ದವು. ಮುಖ್ಯವಾಗಿ ಲೇಖಕರ ಹಸ್ತಪ್ರತಿಯ ತುಣುಕೊಂದು ಪ್ರಿಂಟಾಗಿರುತ್ತಿತ್ತಲ್ಲ. ಅದು ನನಗೆ ತುಂಬಾ ಹಿಡಿಸಿತ್ತು ! ಈಗ ಮಯೂರ ಭಾವನಾದ ಕೆಲವು ಅಂಶಗಳನ್ನ ಅಳವಡಿಸಿಕೊಂಡಂತೆ ಭಾಸವಾಗುತ್ತದೆ..ನನಗಂತೂ ಹಾಗನಿಸಿದೆ. ಈಗಲೂ ಕೂಡ ಆಗಾಗ ಏಪ್ರಿಲ್ ೨೦೦೧ ರ ಭಾವನಾ ಹುಟ್ಟು ಹಬ್ಬ-ಯುಗಾದಿ ವಿಶೇಷಾಂಕವನ್ನ ತಿರುವಿ ಹಾಕುವೆ. ಅಂಥ ಪತ್ರಿಕೆ ಇನ್ನೊಂದು ಬರಬಾರದೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by jaiguruji on
ನನ್ನ ದುರಾದೃಷ್ಟ, ’ಹಂಗಾಮ’ ನನ್ನ ಕಣ್ಣಿಗೆ ಬೀಳಲೇ ಇಲ್ಲ! ಯಾವಾಗ ಬಂತು? ಯಾವಾಗ ನಿಂತು ಹೋಯಿತು? ಪಾಪ ನಮ್ಮ ಉತ್ತಮ ಲೇಖಕರಿಗೆ ಸರಿಯಾದ ಮಾರ್ಕೆಟಿಂಗ್ ತರಬೇತಿ ನೀಡಬೇಕು ! ಸರಿಯಾದ ಯೋಜನೆ ಇಲ್ಲದೆ ಒಳ್ಳೆಯ ಕೆಲಸಗಳನ್ನ ಅರ್ಧದಲ್ಲಿ ಬಿಟ್ಟು ನಿರಾಶೆ ಪಡಿಸುತ್ತಾರೆ.. :-(
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Vasanth Kaje on
ಜೈಗುರೂಜಿಯವರೆ, ದೇಶ-ಕಾಲ ಅಂತೊಂದು ಪತ್ರಿಕೆ ಇದೆ. ಅದನ್ನು ಓದಲಾಗಿಲ್ಲ. ಸಾಧ್ಯವಾದರೆ ಚಂದಾದಾರರಾಗಿ. ಅದರ ಬಗ್ಗೆ ವಿವರ ನಿಮಗೆ ಶ್ರೀರಾಮ್ ಅವರ ಬ್ಲಾಗ್ ನಲ್ಲಿ ಸಿಗುತ್ತದೆ. kannada-kathe.blogspot.com ವಸಂತ್ ಕಜೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hpn on
deshakaala@gmail.com - ಗೆ ಮೇಯ್ಲ್ ಮಾಡಿ ಕೂಡ ಚಂದಾದಾರರಾಗಬಹುದು. -- ನನ್ನ ಬ್ಲಾಗ್: [:http://www.sampada.n...|ಪರಿವೇಶಣ] | [:http://www.hpnadig.n...|PariveshaNa]
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hpn on
ಹೇಳುವುದು ಸುಲಭ. ನಡೆಸಿಕೊಂಡು ಹೋಗುವುದು ಕಷ್ಟ. ಮಾರ್ಕೆಟಿಂಗ್ ಒಂದೇ ತೊಂದರೆಯಾಗಬೇಕಿಲ್ಲ. ಸಂಪಾದನೆಯ ಕಾರ್ಯಗಳು ಹೆಚ್ಚಿಲ್ಲದ ಸಂಪದವನ್ನೇ ನಡೆಸಿಕೊಂಡು ಹೋಗುವಾಗ ನಿತ್ಯ ತೊಡಕುಗಳು, ತಾಪತ್ರಯಗಳು. ಇನ್ನು ಪತ್ರಿಕೆಯೊಂದನ್ನು ನಡೆಸೋದು ಎಷ್ಟು ಕಷ್ಟವಿರಬಹುದೋ ತಿಳಿಯದು. -- ನನ್ನ ಬ್ಲಾಗ್: [:http://www.sampada.n...|ಪರಿವೇಶಣ] | [:http://www.hpnadig.n...|PariveshaNa]
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.