ಮನದ ನಿನಾದ
ಮನದ ವೀಣೆ ಮೀಟಿದಾಗ ಕೇಳಿಸೋದು...
ಬೀಳ್ಕೊಡುಗೆ...
ಇಂದು ನಮ್ಮ ಕಛೇರಿಯಲ್ಲಿ ಸಹೋದ್ಯೋಗಿಯೊಬ್ಬರಿಗೆ ಕೊನೆಯ ದಿನ, ಅರ್ಚನ ಅಂತ QA ವಿಭಾಗದಲ್ಲಿದ್ದರು, ಅವರಿಗೋಸ್ಕರ ಈ ಕವನ...
ವಾರ ಬಂತಮ್ಮ, ಶುಕ್ರವಾರ ಬಂತಮ್ಮ
ಅರ್ಚನ ನೆನೆಯಮ್ಮ, QA ಅರ್ಚನ ನೆನೆಯಮ್ಮ;
ಸ್ಮರಣೆ ಮಾತ್ರದಿ, war ಪುಟ ಬಂದೆ ಬಿಡುವುದಮ್ಮ, (WAR-Weekly Activity Report)
ವಾರ ಬಂತಮ್ಮ, ಶುಕ್ರವಾರ ಬಂತಮ್ಮ;
ವಾರು ತುಂಬಿಸಮ್ಮ, ಕೆಲಸದ ವಾರು ತುಂಬಿಸಮ್ಮ,
ಮೇಲು ಬರುವುದಮ್ಮ, ಅರ್ಚನ ಮೇಲು ಬರುವುದಮ್ಮ,
ಧ್ಯಾನದಿಂದ ಮರೆತಾಗ ಅಂದು,Inbox ತುಂಬುವಳಮ್ಮ,
ವಾರು ತುಂಬಿಸಮ್ಮ, ಕೆಲಸದ ವಾರು ತುಂಬಿಸಮ್ಮ;
ಬಂದೆ ಬಿಟ್ಟಿತಮ್ಮ, ಹೊರಡೋ ಘಳಿಗೆ ಬಂದೆ ಬಿಟ್ಟಿತಮ್ಮ,
ಹಸನಾಗಿ ಇರಲಮ್ಮ, ಬದುಕು ಹಸನಾಗಿ ಇರಲಮ್ಮ,
ಸ್ಮರಣೆ ಮಾತ್ರದಿ ಕ್ಲೇಶ ಕಳೆದು, ಸದ್ಗತಿ ದೊರೆಯಲಮ್ಮ,
ಬದುಕು ಬೆಳಗಲಮ್ಮ, ಅರ್ಚನ ಬದುಕು ಬೆಳಗಲಮ್ಮ;
----ಅಮರ್

- vbamaranath ರವರ ಬ್ಲಾಗ್
- Login or register to post comments
- 411 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಬೀಳ್ಕೊಡುಗೆ...
ಬೀಳ್ಕೊಡುಗೆಯಾಗಿ ಏನು ಕೊಡುಗೆ ಕೊಟ್ಟಿರಿ?
ಬೀಳ್ಕೊಡುಗೆ ಬೊಂಬಾಟ್ ಪದ!
- ಮಾಯ್ಸ !!
ಉ: ಬೀಳ್ಕೊಡುಗೆ...
ಇದ್ದೇ ಇದೆಯಲ್ಲ, ನಮ್ಮ ಕವನ!
ಅಮರ್
ಉ: ಬೀಳ್ಕೊಡುಗೆ...
ಬೀಳ್ಗೊಡುಗೆಯಾಗಿ ಬೀಳ್ಗವನವೇ ಉಡುಗೊರೆ... ಬೊಂಬಾಟ್!!
- ಮಾಯ್ಸ !!
ಉ: ಬೀಳ್ಕೊಡುಗೆ...
ತು೦ಬಾ ಜಿಪುಣರು ನೀವು . ಸ್ವ೦ತ ಯೋಚನೆ ಮಾಡಿ ಬರೆದಿದ್ದರೆ ನೀವು ಕೊಟ್ಟದ್ದು ಅನ್ನಬಹುದು.
ಇದು ಯಾರದೋ ಮನೆ ಹಣ್ಣೂ ತೆಗೆದು ಜೂಸ್ ಮಾಡಿಸಿ ಕುಡಿಸಿದ ಹಾಗಾಯ್ತು ಕತೆ ...
ಉ: ಬೀಳ್ಕೊಡುಗೆ...
ಹಣ್ಣು ಬೇರೆಯವರ ಮನೆಯದೆಯಾದರೂ, ಜ್ಯೂಸ್ ಮಾಡಿದ ಪರಿಶ್ರಮ ನಮ್ಮದು ತಾನೆ ಮುರಳಿಯವರೆ?
ಹಾಡು ಹಳೆಯದಾದರೇನು ಭಾವ ನವನವೀನ!
---ಅಮರ್
ಉ: ಬೀಳ್ಕೊಡುಗೆ...
ಪ್ರಿಯ ಮುರಳಿ, ನೀವು ತುಂಬಾ ಸರಿಯಾಗಿ ಹೇಳಿದ್ದೀರಿ. ಅಮರನ ನೋಡದೆ ಮಾತಾಡದೆ ಒಂದೇ ಕವನದಲ್ಲಿ ಸರಿಯಾಗಿ ಅರ್ಥ ಮಾಡಿಕೊಂಡಿದ್ದಿರಿ. ಈ ಕವನವನ್ನು ವಿಮರ್ಶೆ ಮಾಡಿದ್ದು ನಾನೆ
(. ನಾನು ಅಮರನ ಸಹೋದ್ಯೋಗಿ. ನಿಮ್ಮ ಅಭಿಪ್ರಾಯಗಳನ್ನು ಹೀಗೇ ಬರೆಯುತ್ತಿರಿ. ನಾನು ಕಂಡಹಾಗೆ ಅಮರನಲ್ಲಿರುವ (ನಿಜವಾದ) ಪ್ರತಿಭೆ ಹೊರಬರಲು ಇನ್ನೂ ಸಮಯವಿದೆ.
ನಿಮ್ಮೆಲ್ಲರ ಇಂಥಹ 'ತಿದ್ದುಪಡಿ' ಕಾರ್ಯಕ್ರಮಗಳಿಂದ ಅಮರ ಆದಷ್ಟು ಬೇಗ ಒಳ್ಳೆಯ ಬರಹಗಾರನಾಗಿ ಕನ್ನಡ ಸಾಹಿತ್ಯಕ್ಕೆ ಕಾಣಿಕೆ ಕೊಡುಂವತಾಗಲಿ. - ಮಹೇಶ್.ಜೆ.