26
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ನಿತ್ಯ ಕನ್ನಡ ಜ್ಯೋತಿ ಬೆಳಗಲಿ...

March 6, 2008 - 7:39pm
vbamaranath
ಬೆಳಗಲಿ ಬೆಳಗಲಿ
ನಿತ್ಯ ಕನ್ನಡ ಜ್ಯೋತಿ ಬೆಳಗಲಿ
ಮೇಲಿನಿಂದ ಮೇಲೆ
ನಿತ್ಯ ಸುಲಲಿತ ಬೆಳೆದು
ಬೆಳಗಲಿ ಬೆಳಗಲಿ
ನಿತ್ಯ ಕನ್ನಡ ಜ್ಯೋತಿ ಬೆಳಗಲಿ

ನಿತ್ಯ ಜ್ಯಾಮ ಕಂಡು
ರೋಡಲಿ ಕಾಲ ಕಳೆದು
ಮನದಿ ನೋವು ಇದ್ದರೂ
ಬೆಳಗಲಿ ಬೆಳಗಲಿ
ನಿತ್ಯ ಕನ್ನಡ ಜ್ಯೋತಿ ಬೆಳಗಲಿ

ಕಾಣದ ಗೆಳೆಯರ ನೆನೆದು
ಕೈಬೆರಳ ಸ್ನೇಹ ಕರೆದು
ಮನಕೆ ಸ್ಫೂರ್ತಿ ಬಂದು
ಬೆಳಗಲಿ ಬೆಳಗಲಿ
ನಿತ್ಯ ಕನ್ನಡ ಜ್ಯೋತಿ ಬೆಳಗಲಿ

ನಿತ್ಯ ಬಾಸು ಬಂದು
ಮುಗಿಯದ ಕೆಲಸ ತಂದು
ಎಲ್ಲೇ ಕಳೆದು ಹೋದರೂ
ಬೆಳಗಲಿ ಬೆಳಗಲಿ
ನಿತ್ಯ ಕನ್ನಡ ಜ್ಯೋತಿ ಬೆಳಗಲಿ

ಯಾವುದೋ ಘಟನೆ ಕಂಡು
ಯಾವುದೋ ಲೋಕದಲಿ ಮಿಂದು
ಏನೇ ಆದರೂ ಮನವು
ಬೆಳಗಲಿ ಬೆಳಗಲಿ
ನಿತ್ಯ ಕನ್ನಡ ಜ್ಯೋತಿ ಬೆಳಗಲಿ

ಕಾಲನ ಪರಿಧಿಯಲ್ಲಿ
ನಲಿವೋ ಕಹಿಯೋ ಬಂದು
ಏನೇ ಅಪ್ಪಿ ನಿಂತರೂ
ಬೆಳಗಲಿ ಬೆಳಗಲಿ
ನಿತ್ಯ ಕನ್ನಡ ಜ್ಯೋತಿ ಬೆಳಗಲಿ

ಯಾವ ಭಾಷೆ ತಿವಿದರೂ
ಯಾರ ಧೂಳು ಸೋಕಿದರೂ
ಕೆಸರಲಿ ಅರಳಿದ ಕಮಲ
ಆಗಲಿ ನಮ್ಮ ಮನವು
ಬೆಳಗಲಿ ಬೆಳಗಲಿ
ನಿತ್ಯ ಕನ್ನಡ ಜ್ಯೋತಿ ಬೆಳಗಲಿ
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by mavipra on
ವಿ.ಬಿ.ಅಮರನಾಥ್ ಅವರು, ಶ್ರಮವಹಿಸಿ ರಚಿಸಿದಿರಿ ನಿಮ್ಮ ಕವನ, ಅದಕೆ ಅನೇಕ ಕನ್ನಡಿಗರ ನಮನ. ಕನ್ನಡ ಪ್ರೇಮಿ ಎನಲು ಸಂಶಯವಿಲ್ಲ ಗಮನಾರ್ಹವಾಗಿಹುದು ಸಾಲುಸಾಲೆಲ್ಲ. ಕನ್ನಡ ಪದ ಸಂಪತ್ತು ನಿಮಗಿಹುದು, ಪದ್ಯ ಪ್ರಾಸಗಳ ಜೋಡಣೆ ನಿಲುಕಿಹುದು. ಕನ್ನಡ ಭಾಷೆಯ ಸಿರಿ ದೊಡ್ಡ ಪ್ರಭುದ್ಧಿ, ನೋಡಿ ಕಿಟ್ಟೆಲ್ ನಿಘಂಟಿನಲಿ ಸಂವೃದ್ಧಿ. ಅಷ್ಟು ಮೇದಾವಿಗೆ ಕಷ್ಟವೆಲ್ಲಿ? ’ರೋಡು’ ಪರನುಡಿಗೆ ಕನ್ನಡ ಮಾತೆಲ್ಲಿ? ಹಾದಿ ರಸ್ತೆ ದಾರಿ ಬೀದಿ ಪಥ ಮಾರ್ಗ, ಸಿಗಲಿಲ್ಲವೆ ಗಮನಕ್ಕೆ ಮಾತುಗಳ ವರ್ಗ? "ಯಾವ ಭಾಷೆ ತಿವಿದರೂ" (ನಿಮ್ಮ ಮಾತು) ಕನ್ನಡ ಕಮಲಗಳು ಅರಳಲಿ ನೂರು; ಬಲವಂತರಿಗೆ ಕುಬ್ಜರ ಬಯ ಅನವಶ್ಯ. ಆದರೂ ಎಚ್ಚರ ತೋರುವುದವರ ದೃಶ್ಯ. ಅಶ್ವಸ್ತರು ವಿಷಕಣ*ದೆದುರು ತೋರಬೇಕು (*ವೈರಸ್) ಅತಿ ಮುನ್ನೆಚ್ಚರಿಕೆಯ ಜಾಗ್ರತೆ ಧರಿಸಬೇಕು. ಪರಮಾತಿಗೆ ಕನ್ನಡ ನುಡಿ ಹುಟ್ಟಿಲ್ಲದಿದ್ದರೆ? ಆದರೆ ಲೇಖಕರನೇಕರು ಕನ್ನಡ ನುಡಿ ಒದ್ದವರು. ಅದಕ್ಕುಂಟು ನೂರಾರು ಉದಾಹರಣೆಗಳು ಎಲ್ಲಾ ಪುಸ್ತಕ ಪತ್ರಿಕೆ ಸಂಪದದೆಡೆಯಲು. ಗಮನಿಸಿ ಗಮನಾರ್ಹ ಕನ್ನಡ ಪ್ರೇಮಿ. ಇದೋ, ಗೌರವದಲಿ ಶಿರಬಾಗಿ ನಮಾಮಿ! - ವಿಜಯಶೀಲ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Pavithra on
ಅಮರನಾಥ್ ಅವರೆ, ನಿಮ್ಮ ಕವನವು ಬಹಳ ಚೆನ್ನಗಿದೆ. ನಿಮ್ಮ ಕನ್ನಡದ ಅಭಿಮಾನ ಹಾಗು ಕನ್ನಡ ಭಾಷೆಯ ಪ್ರೇಮ ಎಲ್ಲರಿಗೂ ಮಾದರಿ. ಪವಿತ್ರ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by vbamaranath on
ಧನ್ಯವಾದಗಳು ಪವಿತ್ರ ಹಾಗೂ ವಿಜಯಶೀಲ ಅವರಿಗೆ... ವಿಜಯಶೀಲ ಅವರೆ...ಕೆಲವೊಂದು ಕಡೆ ಆಂಗ್ಲ ಭಾಷೆ ಬಳಸಿಹುದರ ಉದ್ದೇಶ ಆ ಸಾಲುಗಳಲ್ಲಿ ಅದೆ ಸರಿಹೊಂದುತ್ತೆ ಅಂತ ಆ ಕ್ಷಣ ಅನ್ನಿಸಿದ್ದರಿಂದ... ನೀವು ಹೇಳೋದು ಸರಿ...ಅರಬರೆ ಕನ್ನಡ ಪದ್ಯಕಿಂತ ಸಂಪೂರ್ಣ ಕನ್ನಡ ಪದ್ಯ ಇಲ್ಲಿ ಸಮಂಜಸವಾಗಿರುತ್ತಿತ್ತು... ಹೀಗೆ ಬರೆಯಬಹುದಿತ್ತು... ನಿತ್ಯ ಗಾಡಿ ಹಿಂಡು ಕಂಡು ರಸ್ತೇಲಿ ಅರ್ಧ ದಿನ ಕಳೆದು ಮನದಿ ನೋವು ಇದ್ದರೂ ಬೆಳಗಲಿ ಬೆಳಗಲಿ ನಿತ್ಯ ಕನ್ನಡ ಜ್ಯೋತಿ ಬೆಳಗಲಿ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.