ಚಂಡೀಗಢದ ಮೂಲೆಯಲ್ಲಿ ಕನ್ನಡದ ಸವಿ
ಚಂಡೀಗಢದ ಸೆಕ್ಟರ್ ೪೭-ಡಿ. ಹೋಟೆಲ್ ಹೆಸರು "ಸೌತ್ ರತ್ನಮ್". ಹೊರಗೆ ದೊಡ್ಡದಾದ ತಿರುಪತಿ ವೆಂಕಟೇಶ್ವರನ ಚಿತ್ರ. ಆಂಧ್ರದವರಿರಬೇಕೆಂದುಕೊಂಡೆ. ಒಳ ಹೊಗ್ಗಿ ಕುಳಿತು ಸುತ್ತಲೂ ನೋಡಿದಾಗ ಕಂಡದ್ದು ಚಿಕ್ಕದಾದರೂ ಚೊಕ್ಕದಾದ ಹೋಟೆಲ್. ಸರ್ದಾರ್ಜೀಗಳು ದೋಸೆ, ಇಡ್ಲಿ ಮೆಲ್ಲುವ ದೃಶ್ಯ. ಸ್ವಲ್ಪ ಸಮಯದ ನಂತರ ಸಂಗೀತ ತೇಲಿಬರತೊಡಗಿತು.. "ಮುಂಗಾರು ಮಳೆಯೇ, ಏನು ನಿನ್ನ ಹನಿಗಳ ಲೀಲೆ...!!!" ಇದು ಮೂಡಿ ಬಂದದ್ದು ವರ್ಲ್ಡ್ ಸ್ಪೇಸ್ನ ಕನ್ನಡ ವಾಹಿನಿ ಸ್ಪರ್ಶದಲ್ಲಿ. ಮೈಸೂರು ಮಸಾಲೆ ದೋಸೆ, ವಡೆ ಪಟ್ಟಾಗಿ ಹೊಡೆದು, ಚಹಾ ಮತ್ತು ನೆಸ್ ಕೆಫೆ ಕಾಫಿಯಿಂದ ರುಚಿಗೆಟ್ಟ ಬಾಯಿಗೆ ಅಪ್ಪಟ ಕನ್ನಡ ಫಿಲ್ಟರ್ ಕಾಫಿ ಬಿದ್ದ ಕೂಡಲೆ ಸ್ವರ್ಗಕ್ಕೆ ಮೊರೇ ಗೇಣು..
ಅನಂತರ ವಿಚಾರಿಸಿದಾಗ ತಿಳಿಯಿತು, ಮಾಲೀಕರು ಸುರೇಂದ್ರ ರಾವ್, ಕುಟುಂಬದವರೇ ಸೇರಿ ನಡೆಸುತ್ತಿರುವ ಹೋಟೆಲ್. ಊರು ಕುಂದಾಪುರ. ಇಲ್ಲೆ ಬಂದು ೭-೮ ವರ್ಷಗಳಾಗಿವೆ.
ಊರಿಂದ ಇಷ್ಟು ದೂರದಲ್ಲೂ ಊರ ರುಚಿ ತಿನ್ನಿಸಿದ ಸೌತ್ ರತ್ನಂಗೆ ಜೈ.

- vedumaani ರವರ ಬ್ಲಾಗ್
- Login or register to post comments
- 461 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಚಂಡೀಗಢದ ಮೂಲೆಯಲ್ಲಿ ಕನ್ನಡದ ಸವಿ
ಒಳ್ಳೆಯ ಕಾಫಿ ಸಿಗದ ನಾಡಿನಲ್ಲಿ ಈ ರೀತಿಯ rare ಹೋಟೆಲುಗಳು ಮರುಭೂಮಿಯಲ್ಲಿ ನೀರು ದೊರಕಿದಂತೆ.
ಚಂಡೀಗಢಕ್ಕೆ ಹೋದರೆ ಸೆಕ್ಟರ್ ೪೭-ಡಿ ನೆನಪಿಟ್ಟುಕೊಳ್ಳಬೇಕು.
ಉ: ಚಂಡೀಗಢದ ಮೂಲೆಯಲ್ಲಿ ಕನ್ನಡದ ಸವಿ
ಇದೇ ತೆರನಾದ ಅನುಭವ ನನಗೆ ಆಗ್ರಾದಲ್ಲೂ ಆಗಿತ್ತು.
ಉಡುಪಿ ಹೊಟೆಲ್ ಅಲ್ಲೂ ಒಂದಿದೆ.
ಎಲ್ಲ ಕನ್ನಡಿಗರೇ ತುಂಬಿದ್ದಾರೆ.
ಉ: ಚಂಡೀಗಢದ ಮೂಲೆಯಲ್ಲಿ ಕನ್ನಡದ ಸವಿ
ಬೊಂಬಾಟ್ ಸುದ್ದಿ.
ನಮ್ಮ ಉಡುಪಿ ಕನ್ನಡಿಗರಿಗೆ ಜೈ!
ಉಡುಪಿಯವರನ್ನು ನೋಡಿ ನಾವು ಕಲೀಬೇಕು!