ಕನ್ನಡ ತಾಯಿಗೆ ನಮನ
ಎದ್ದೇಳಿ ಕನ್ನಡಿಗರೆ ಎದ್ದೇಳಿ
ಹರಡಲು ಕರುನಾಡ ಕಂಪನ್ನು
ಹಾಡಲು ಕನ್ನಡದ ಹಾಡನ್ನು
ಭಕ್ತಿ ಕೀರ್ತಿ ಹೊತ್ತು ಮೆರೆವ ನಾಡು ನಮ್ಮ ಕರ್ನಾಟಕ
ಊರುಗಳು ಸಾವಿರಾರು ಭಾವನೆಗಳು ನೂರಾರು
ನಮ್ಮ ಭಾಷೆ ಒಂದೆ ಕನ್ನಡ
ಬನ್ನಿ ಕನ್ನಡಿಗರೆ ಬನ್ನಿ ಕನ್ನಡಕ್ಕಾಗಿ ದುಡಿಯೋಣ ಬನ್ನಿ
ಎಲ್ಲರು ಸೇರಿ ಮೊಳಗಿಸೋಣ ಕರ್ನಾಟಕದ ಕಹಳೆಯನ್ನು
ಒಟ್ಟಾಗಿ ಮೆರೆಸೋಣ ಕರ್ನಾಟಕ ಕೀರ್ತಿಯನ್ನು
ಕೆಂಪೇಗೌಡರು ಕಟ್ಟಿದರು ಬೆಂಗಳೂರು
ರಾಜ ಮಹಾರಾಜರು ಆಳಿದರು ಮೈಸೂರು
ಶಿಲ್ಪಕಲೆಗಳಿಗೆ ಹೆಸರಾದವು ಹಳೇಬೀಡು ಬೇಲೂರು
ಕಾವೇರಿ ಹುಟ್ಟಿ ಹರಿಯುತಿಹಳು ಕೊಡಗಿನಲ್ಲಿ
ಶರಾವತಿ ದುಮ್ಮುಕ್ಕಿ ಹರಿಯುತಿಹಳು ಜೋಗದಲ್ಲಿ
ಶ್ರೇಷ್ಠ ಕವಿಗಳ ಕವಿಸಾರ ಹರಿಯಿತು ಕರ್ನಾಟಕದಲ್ಲಿ
ಬನ್ನಿ ಕನ್ನಡಿಗರೆ ಒಗ್ಗಟ್ಟಾಗಿ ಬನ್ನಿ
ಕನ್ನಡ ನಾಡು ನುಡಿಯ ಉಳಿಸೋಣ ಬನ್ನಿ
ಕನ್ನಡಾಂಬೆಯ ಆಶೀರ್ವಾದ ಪಡೆಯೋಣ ಬನ್ನಿ
-Vರ ( Venkatesha ರಂಗಯ್ಯ )
- veeravenki's blog
- Login or register to post comments
- 344 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS: