ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › venkatesh ರವರ ಬ್ಲಾಗ್

ಎಂಕ್ಟೇಸಪ್ಪನ್ ಕ (ಕಂ)ತೆ ಪುರಾಣ !

"ಒಸ್ ಬ್ಲಾಗ್ " ನಗೆ ಅದೊ ಇದೊ ಅಂತ ಏನಾದ್ರು ಬರ್ಯವ ಅಂದ್ರೆ, ತಲ್ಯಾಗೇನೂ ಒಳ್ಯಂಗೇ ಇಲ್ವಲಪ್ಪ. ಆಗ್ಲಿ ಬಿಡಿ. ಆ ಸಿವಂಗೆ ನನ್ ಮ್ಯಾಗ್ ಇಸ್ವಾಸ ಬರೊತಂಕ ಬರ್ಯಕ್ಕ ಬಿಟ್ಟಾನ. ಮರ್ವಾದೆ ಪ್ರಸ್ನೆ ಅಲ್ಲ್ವ್ರಾ. ಎಂಗಾರಾಗ್ಲಿ. ಎನಾದ್ರು ಗೀಚೊ ಉಚ್ಚು. ಅಂಗೇ ಮನಸ್ನಾಗ್ ಐತೆ. ನೊಡವ. ಜನ ಏನಂತಾರೆ ಅಂತವ !

ಮುನಿಸ್ಕಂಡು ಕಲ್ ಏಟ್ ಮಾತ್ರ ಆಕ್ಬ್ಯೇಡ್ರಪ್ಪೊ !

" ದೀಪಾವಳಿ," ಹಬ್ಬ !

November 10, 2007 - 11:44am — venkatesh

" ದೀಪಾವಳಿ," ಹಬ್ಬ !

ಈ ದೀಪಾವಳಿಯ ಪವಿತ್ರಶುಭ-ದಿನದಂದು ಸಂಪದಿಗರಿಗೆಲ್ಲಾ, ಹಾಗೂ ಕನ್ನಡಿಗರಿಗೆಲ್ಲಾ ಹಾರ್ದಿಕ ಶುಭಾಶಯಗಳು.

ದೀಪಾಲಂಕಾರಗಳಿಂದ, ಮನದ ಕತ್ತಲನ್ನು ಹೊಡೆದೋಡಿಸಿ ಹೊಸ ಬೆಳಕನ್ನು ಆಹ್ವಾನಿಸುವ, ಅದನ್ನು ಆಸ್ವಾದಿಸುವ ಹಬ್ಬ ! ನಮ್ಮಲ್ಲೇ ಆಳವಾಗಿ ಹೂತಿರುವ ಕತ್ತಲೆಗಳಾದ, ಅಜ್ಞಾನ, ಆಲಸ್ಯ, ಅನಾರೋಗ್ಯ, ದಾರಿದ್ರ್ಯ, ನಿರಾಶೆ, ಖಿನ್ನತೆಗಳೆಲ್ಲಾ ಕತ್ತಲಿನ ಅನೇಕಮುಖಗಳು. ದೀಪ ಹಚ್ಚುವ, ಅಥವ ಪ್ರಜ್ವಲನದಿಂದ, ಬೆಳಕನ್ನು ತರುವ ಪ್ರಕ್ರಿಯೆ, ನಮ್ಮ ಜೀವನದಲ್ಲಿ ಎಲ್ಲೋ ಮಂಕಾಗಿ, ಕ್ಷೀಣವಾಗಿ ಕಾಣಿಸಿಕೊಳ್ಳುತ್ತಿರುವ ಜೀವನೋಲ್ಲಾಸದ ಸೆಲೆಯನ್ನು ಮತ್ತೆ ಪ್ರಜ್ವಲಿಸುವಂತೆ ಮಾಡಿ ಕಾರ್ಯೋನ್ಮುಖರಾಗಲು ಪ್ರೇರೆಪಿಸುವ ಸದುದ್ದೇಶವೇ ದೀಪಾವಳಿಯ ಪ್ರಮುಖ ಉದ್ದೇಶ್ಯ. ದೀಪಾವಳಿ ನಮ್ಮೆಲ್ಲರಿಗೂ ವಿಶಿಶ್ಠಸ್ಥಾನದಲ್ಲಿ ಕಾಣಿಸಿಕೊಳ್ಳುತ್ತದೆ. ದೀಪಾವಳಿಯಲ್ಲಿ ಆಚರಣೆಯಲ್ಲಿರುವ ಪ್ರಮುಖ ದಿನಗಳು ಮೂರು.

೧. ನರಕ ಚತುರ್ದಶಿ.

೨. ಅಮಾವಾಸ್ಯೆ.

೩. ಬಲಿಪಾಡ್ಯಮಿ.

ದೀಪಾವಳಿ ಈ ೩ ದಿನಗಳನ್ನೂ ವ್ಯಾಪಿಸಿದೆ. ಅದಲ್ಲದೆ ಅದರ ಸಂದೇಶ ವರ್ಷದ ಇನ್ನುಳಿದ, ೩೬೨ ದಿನಗಳನ್ನು ಸಹಿತ! ನರಕಾಸುರನೆಂಬ ರಾಕ್ಷಸನ ಸಂಹಾರದಿಂದ ಪ್ರಜೆಗಳಿಗೆ, ಅದರಲ್ಲೂ ಬಂದಿಗಳಾಗಿದ್ದ ಸ್ತ್ರೀಯರಿಗೆ, ಬಿಡುಗಡೆಯ ದೀಪವನ್ನು ತೋರಿಸಿದ್ದು, ಶ್ರೀಕೃಷ್ಣ. ಇದು ನಡೆದದ್ದು ನರಕಚತುರ್ದಶಿಯ ದಿನದಂದು. ಅದರ ಮರುದಿನವೇ ಅಮಾವಾಸ್ಯೆ. ಆದಿನ, ಲಕ್ಷ್ಮೀದೇವಿಯ ಪೂಜೆ ಮಾಡಿ, ಶಾಂತಿ, ಸಮೃದ್ಧಿ, ಮತ್ತು ಐಷ್ವರ್ಯಗಳನ್ನು ಕರುಣಿಸೆಂದು ಪ್ರಾರ್ಥಿಸಬೇಕು. ಆಮೇಲೆ ಬರುವುದು, ಪಾಡ್ಯಮಿ- ಬಲಿಪಾಡ್ಯಮಿ. ಬಲಿಚಕ್ರವರ್ತಿ, ಅಹಂಕಾರ ನಾಶವಾಗಿ, ಆತನು ತಾನು ಗಳಿಸಿದ ಭೂಮಿಯನ್ನೆಲ್ಲಾ ವಾಮನನ ರೂಪದಲ್ಲಿದ್ದ, ಶ್ರೀಹರಿಗೆ ಧಾರೆಯೆರೆಯುವ ಮೂಲಕ " ಪ್ರಪತ್ತಿ ಮಾರ್ಗ,"ದ ದರ್ಶನವನ್ನು ಪಡೆದು ಜೀವನ್ಮುಕ್ತನಾಗುತ್ತಾನೆ. ಭಾರತೀಯರೆಲ್ಲಾ ದೇಶದಲ್ಲಿ ಮೇಲೆ ತಿಳಿಸಿದ ೩ ದಿನಗಳನ್ನು, ವಿವಿಧ ಭಾಗಗಳಲ್ಲಿ, ಸಂಭ್ರಮದಿಂದ ಆಚರಿಸುತ್ತಾರೆ. ಅಭ್ಯಂಜನ, ಪೂಜೆ, ಕುಟುಂಬದ ಸದಸ್ಯರೊಡನೆ ಕಲೆತು ಭೋಜನ, ಎಲ್ಲರಿಗು ಜೀವನ ಹಸನಾಗಲೆಂಬ ಆಶಯ, ನಮಗಾಗಿ ದುಡಿಯುವ ಹಸು, ಎತ್ತು, ಎಮ್ಮೆ ಗಳಿಗೆಗೆ ಪೂಜೆ ಸಲ್ಲಿಸುವ ನಮ್ಮ ಕೃತಜ್ಞತೆಯನ್ನು ಸಲ್ಲಿಸುವ ಏರ್ಪಾಡಿದೆ. ಹೊಸದಾಗಿ ಮದುವೆಯಾದ ಯುವ-ದಂಪತಿಗಳಿಗೆ ಶುಭಹಾರೈಸುವ ಕಾರ್ಯವೂ ಅತಿ ಮುಖ್ಯವಾದದ್ದು. ಇವೆಲ್ಲವೂ ದೀಪಾವಳಿಯನ್ನು ಒಂದು ಅವಿಸ್ಮರಣೀಯ ಸಂಕೇತವನ್ನಾಗಿ ಮಾಡಿ ನಮ್ಮ ಬಾಳು ಹಾಗೆಯೇ ಹಚ್ಚ ಹಸಿರಾಗಿರಲು ಪ್ರೇರೇಪಿಸುತ್ತವೆ.

ಕೇರಳ ರಾಜ್ಯದಲ್ಲಿ " ಓನಂ" ದಿನವನ್ನು ಆಚರಿಸಿದಾಗಲೇ ಬಲಿಚಕ್ರವರ್ತಿಯನ್ನು ಅವರು ಆಹ್ವಾನಿಸಿ ಪೂಜಿಸಿರುತ್ತಾರೆ.

  • ಹಬ್ಬ-ಹರಿದಿನ.
~.~
  • venkatesh ರವರ ಬ್ಲಾಗ್
  • Login or register to post comments
  • 400 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಎಲ್ಲರಿಗೂ ವ್ಯಯ ಸಂವತ್ಸರದ 'ದೀಪಾವಳಿ'ಯ ಹಾರ್ದಿಕ ಶುಭಾಷಯಗಳು !
  • ನಮ್ಮ ಸಂಪದೀಯರಿಗೆಲ್ಲಾ ದೀಪಾವಳಿಯ ಹಾರ್ದಿಕ ಶುಭಾಶಯಗಳು.
  • ದೀಪಾವಳಿಗೊಂದು ಕವನ...
  • ದೀಪಾವಳಿ - ಎಲ್ಲರಿಗೆ ಎಲ್ಲಕ್ಕೆ ಶುಭಕೋರಲಿ - ಕೆ.ಎಸ್.ನರಸಿ೦ಹಸ್ವಾಮಿ
  • ದೀಪಾವಳಿ ಹಬ್ಬಕ್ಕೆ, ದೀಪಗಳ ತಯಾರಿಕೆಯಲ್ಲಿ, ಆಸಕ್ತೆ !
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಕಥೆ ಬರೆದದ್ದು ಹೀಗಿತ್ತು
  • ಶಾಸಕರ ರಾಜೀನಾಮೆ ಮತ್ತು ರಾಜಕೀಯ
  • ಪ್ರೀತಿಸಿರೋ...
  • ತನುಮನ
  • ವೈದ್ಯನಾರಾಯಣಕಥೆ
  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಸೋಲಿನ ಪತ್ತೆಗಾಗಿ ಸಂಶೋಧನೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 20 ಅತಿಥಿಗಳು ಆನ್ಲೈನ್ ಇರುವರು.


ಜಗತ್ತಿನಲ್ಲಿ ಗ್ರಹಿಸಲು ಅತ್ಯಂತ ಕಷ್ಟಕರವಾದ ವಿಷಯವೆಂದರೆ ಆದಾಯ ತೆರಿಗೆ!

- ಆಲ್ಬರ್ಟ್ ಐನ್‍ಸ್ಟೈನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator