ಕಿವುಡುತನ ತಪ್ಪೀತೆ ರನ್ನಕುಂಡಲದಿಂದ? |
ತೊವಲು ಜಬ್ಬಲು ಬಿಳದೆ ಮೃಷ್ಟಾನ್ನದಿಂದ? ||
ಭುವಿಯ ಪರಿಣಾಮದಲಿ ಸಿರಿಬಡತನಗಳೊಂದೆ |
ಜವರಾಯ ಸಮವರ್ತಿ -- ಮಂಕುತಿಮ್ಮ ||
ಸಂಪದ ಆರ್ಕೈವಿನಿಂದ
ಲೇಖಕರು
ಇದು ನಮ್ಮ ಮನೆ
ಇದು ನಮ್ಮ ಮನೆ
ನಮ್ಮ ವಡ್ಡರ ಮನೆ
ನಾವು ಹುಟ್ಟಿದ ಮನೆ
ನಾವು ಆಡಿದ ಮನೆ
ಅಪ್ಪ ಅಮ್ಮನೊಡನೆ ಬಾಳಿದ ಮನೆ
ಅಲ್ಲಿಲ್ಲಿ ಗೆದ್ದಲು
ಕುಸಿದ ಗೋಡೆ
ಒಡಕಲು ಓಡು
ಮಳೆಗೆ ಸೋರುವ
ಗಾಳಿಗೆ ಹಾರುವ
ಹಂಚು ಪಕಾಸುಗಳು
ಆದರೂ ನಿಂತಿದೆ ಇನ್ನೂ
ತನ್ನ ಚರಿತ್ರೆಯೊಡನೆ
ಇದು ನಮ್ಮ ಮನೆ
ನಮ್ಮ ವಡ್ಡರ ಮನೆ
ಕೋಣೆ ಕೋಣೆಗು ಜನರು
ಅವರಿಗೆ ಅವರದೇ ಮಾತು
ಆದರೂ ನಾವೆಲ್ಲ ಒಂದೆ
ಕರುಳ ಬಳ್ಳಿಯ ಮುಂದೆ
ಇದು ನಮ್ಮ ಮನೆ
ನಮ್ಮ ನಿಮ್ಮ ಮನೆ
ನಮ್ಮ ಹುಟ್ಟಿಗೆ ಮುಂಚೆ ಇದ್ದ ಮನೆ
ಸಾವಿನ ಬಳಿಕ ಇರುವ ಮನೆ
ಎಲ್ಲದಕ್ಕೂ ಸಾಕ್ಷಿಯಾಗಿ
ಯುಗ ಯುಗಗಳನ್ನೇ ಕಳೆದ ಮನೆ
ನಾಯಿ ಬೆಕ್ಕುಗಳು ದನಕರುಗಳಿಗೆ
ಆಶ್ರಯವಾಗಿತ್ತು ಈ ಮನೆ
ಇದು ನಮ್ಮ ಮನೆ
ನಮ್ಮ ಪೂರ್ವಜರು ಪಾಲಿಸಿದ್ದರೊಂದು ಧರ್ಮ
ಅದರಂತೆ ಅವರ ಕರ್ಮ
ಹಾವು ನಾಗರನಾಗಿ
ಆನೆ ಗಣಪನಾಗಿ
ಹಂದಿ ವರಹನಾಗಿ
ಸಕಲ ಜೀವ ಜಂತುಗಳನ್ನೂ
ರಕ್ಷಿಸುತಿದ್ದ ನಮ್ಮ ಮನೆಯ ಧರ್ಮ
ಅದುವೇ ಸನಾತನ ಧರ್ಮ
ನಮ್ಮ ಮನೆಯದುವೇ ನಮ್ಮ ನಾಡು
ಭಾರತ
ನಮ್ಮ ನುಡಿಯದುವೇ ತಾಯಿ ಭಾಷೆ
ಕನ್ನಡ
ಅಮ್ಮ ಕಲಿಸಿದ ಭಾಷೆ
ಕನಸಲಿ ಕನವರಿಸಿದ ಭಾಷೆ
ಉಳಿಯಲಿ ಬೆಳೆಯಲಿ
ವಿಶ್ವ ಶಾಂತಿಯ ಸಾರಲಿ
- vidyakumargv's blog
- Login or register to post comments
- 217 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version

RSS: