ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › Vijayasarathy ರವರ ಬ್ಲಾಗ್

ಮೀಸಲಾತಿ ಕಕ್ಕುಲಾತಿ - ಬೇಡ ಈ ದುರ್ಗತಿ

May 31, 2006 - 5:46pm — Vijayasarathy

ಹೊತ್ತಿ ಉರಿಯುತ್ತಿರುವ ಮೀಸಲಾತಿಯು ಭಾರತದ ಪ್ರಜಾತಾಂತ್ರಿಕತೆಯ ಕಣ್ಣರೆಪ್ಪೆ ಮುಚ್ಚದಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಕೋಮುಗಲಭೆ, ಜಾತಿಕಲಹ, ಭಾಷೆಕಲಹ ಇವಿಷ್ಟೇ ಕೆಲ ಮಹದ್ವಿಷಯಗಳು ನಮ್ಮ ದೇಶವನ್ನು ಜಾಗೃತಗೊಳಿಸಲು ಸಮರ್ಥವಾಗಿರುವುವು. ಶಿಕ್ಷಣದ ಬಗ್ಗೆ ಕಾಳಜಿ, ಭ್ರಷ್ಟಾಚಾರದ ವಿರುದ್ಧ ಹೋರಾಟ, ಆರ್ಥಿಕ ವ್ಯವಸ್ಥೆಯ ಬಗ್ಗೆ ಅಭಿಪ್ರಾಯ ಇತ್ಯಾದಿ ವಿಷಯಗಳಿಗೆ ಮನಸು, ತಲೆ ಕೆಡಿಸಿಕೊಳ್ಳುವಷ್ಟು ನಮಗೆ ವ್ಯವಧಾನವಿಲ್ಲ. ಜಾತಿ, ಭಾಷೆ, ಧರ್ಮಗಳ ಸತ್ವಗಳನೇ ಉಂಡು ಬೆಳೆದಿರುವ ನಮಗೆ ಆ ವಿಷಯಗಳಲ್ಲಿ ಮಾತ್ರ ಸ್ವಾಭಿಮಾನ ಕೆರಳುತ್ತದೆ. ಭ್ರಷ್ಟಾಚಾರಗಳಲ್ಲಿ ಒಂದಿಲ್ಲೊಂದು ರೀತಿ ನಾವೂ ಪಾಲುದಾರರಾಗಿರುವುದರಿಂದಲೋ ಏನೋ ನಮಗೆ ಅದರ ವಿರುದ್ಧ ಹೋರಾಡಲು ನೈತಿಕತೆ ಅಡ್ಡಬರುತ್ತದೆ. ಆದರೆ ಮೀಸಲಾತಿ, ಕೋಮುಗಲಭೆ, ಜಾತಿಕಲಹಗಳು ಕಾಡ್ಗಿಚ್ಚಿನಂತೆ ಎಲ್ಲೆಡೆ ಆವರಿಸುತ್ತದೆ. ರಾಜಕೀಯ ಪಕ್ಷಗಳು ಇವುಗಳನ್ನು ಉಪಯೋಗಿಸಿ ತಮ್ಮ ತಮ್ಮ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತವೆ.

ನಾನು ನನ್ನ ಬ್ಲಾಗ್‌ನಲ್ಲಿ ಮೀಸಲಾತಿ ವಿಷಯದ ಬಗ್ಗೆ ಬರೆಯುವಾಗ ನನ್ನ ಪೂರ್ವಾಗ್ರಹಗಳು ಮತ್ತು ಜಾತಿಯ ಪ್ರಭಾವವಲಯದಿಂದ ಹೊರಬಂದು ವಿಚಾರ ಮಾಡುವುದು ತುಸು ಕಷ್ಟವೇ ಆಯಿತು. ಮೀಸಲಾತಿಯು ಜಾತಿಯ ಭಾವನಾತ್ಮಕ ಪರಿಧಿಯೊಳಗೇ ಬರುವುದರಿಂದ ಅದರ ಬಗೆಗಿನ ಭಾವೋದ್ರೇಕಗಳು ಉತ್ತುಂಗದಲ್ಲಿರುವುದು ಸಹಜ. ಈ ಮೀಸಲಾತಿ ಪರ-ವಿರೋಧ ಪ್ರತಿಭಟನೆಗಳು ಮೇಲ್ನೋಟಕ್ಕೆ ಕೇವಲ ಅರ್ಹತೆ, ಪ್ರತಿಭೆ ಮೇಲೆ ಆಧಾರಿತವಾಗಿವೆ ಎಂದನಿಸಬಹುದು. ಆದರೆ ವಾಸ್ತವದಲ್ಲಿ ಈ ಪ್ರತಿಭಟನೆಗಳ (ಪರ ಮತ್ತು ವಿರೋಧ) ಹಿಂದೆ ಜಾತಿಯ ಪ್ರಭಾವ ದಟ್ಟವಾಗಿರುತ್ತದೆ.

ಓರ್ವ ವ್ಯಕ್ತಿ ಮೀಸಲಾತಿಯನ್ನು ವಿರೋಧಿಸಿದರೆ, ಅವನಿಗೆ ಹಿಂದುಳಿದವರ ಏಳಿಗೆ ಬಯಸದ ದುರಹಂಕಾರಿ, ಬನಿಯಾ ಎಂಬೆಲ್ಲಾ ಹಣೆಪಟ್ಟಿ ತಗುಲುತ್ತದೆ. ಒಂದು ವೇಳೆ ಮೀಸಲಾತಿಯನ್ನು ಸಮರ್ಥಿಸಿಕೊಂಡರೆ ಅವನು ಸ್ವಂತಕಾಲಿನಲ್ಲಿ ಮೇಲೇರುವಷ್ಟು ಬುದ್ಧಿಶಕ್ತಿ ಇಲ್ಲದ ತಿರುಕ ಎಂದನಿಸಿಕೊಳ್ಳುತ್ತಾನೆ. ಈ ವಿಷಯದ ಬಗ್ಗೆ ಯಾವುದಾದರೂ ಬ್ಲಾಗ್‌ನಲ್ಲಿ ಚರ್ಚೆಯಾದರೆ ಅಲ್ಲಿ ವ್ಯಕ್ತವಾಗುವ ಬಹಳಷ್ಟು ಪ್ರತಿಕ್ರಿಯೆಗಳು ಮತ್ಸರ, ಅಶ್ಲೀಲ, ತುಚ್ಛ ಭಾವನೆಗಳಿಂದ ಕೂಡಿರುವುದನ್ನು ನೀವು ನೋಡಬಹುದು.

ಒಮ್ಮೆ ಒಂದು ವ್ಯವಸ್ಥೆ ರಚಿತವಾಯಿತೆಂದರೆ ಅದನ್ನು ಬಿಟ್ಟು ಹೊರಳಿ ನೋಡಲು ನಮಗೆ ಸಾಧ್ಯವಾಗದು. ಈ ಮೀಸಲಾತಿಯು ಎಷ್ಟು ಪರಿಣಾಮಕಾರಿಯಾಗಿದೆ ಎಂಬುದನ್ನು ನೋಡುವಷ್ಟು ನಮಗೆ ವಿವೇಚನೆ ಇರುವುದಿಲ್ಲ. ಒಂದು ಸಿದ್ಧಾಂತಕ್ಕೆ ಕುರುಡರಾಗಿ ಬದ್ಧರಾಗಿಬಿಡುತ್ತೇವೆ. ನಮ್ಮ ಬದ್ಧತೆಗಳಿಗೆ ಅನುಗುಣವಾಗಿ ಸಿದ್ಧಾಂತಗಳನ್ನು ವಿಚಾರಗಳನ್ನು ಹೆಣೆಯುತ್ತಾ ಹೋಗುತ್ತೇವೆ.

ಎನ್‌ಡಿಟಿವಿ ಚಾನೆಲ್‌ನಲ್ಲಿ ನಡೆದ ಒಂದು ಚರ್ಚೆಯಲ್ಲಿ ಕೇಂದ್ರ ಸಚಿವ ಪಿ. ಚಿದಂಬರಂ ಅವರು ಮೀಸಲಾತಿ ಕುರಿತು ತಮ್ಮ ಅಭಿಪ್ರಾಯ ಮಂಡಿಸಿದ್ದರು. "ಕೇರಳ, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶಗಳಲ್ಲಿ ಈಗಾಗಲೇ ಮೀಸಲಾತಿ ಪದ್ಧತಿಗಳು ರೂಢಿಯಲ್ಲಿದ್ದು ಪರಿಣಾಮಕಾರಿಯಾಗಿವೆ. ಪ್ರಸಕ್ತ ಪರಿಸ್ಥಿತಿಯಲ್ಲಿ ಮೀಸಲಾತಿಗಿಂತ ಉತ್ತಮವಾದ ಸಾಧನ ಬೇರೆ ಯಾವುದೂ ನನಗೆ ಕಂಡಿಲ್ಲ. ನಿಮಗೇನಾದರೂ ಅದು ತೋರಿದರೆ ದಯವಿಟ್ಟು ತಿಳಿಸಿ, ನಾವು ಪರಿಗಣಿಸುತ್ತೇವೆ" ಎಂದು ಚಿದಂಬರಂ ಅವರು ಸ್ಪಷ್ಟಪಡಿಸಿದ್ದರು. ಶಿಕ್ಷಣವು ಅರ್ಹತೆ (ಮೆರಿಟ್) ಆಧಾರಿತವಾಗಿರಬೇಕು ಎನ್ನುವವರು ಕ್ಯಾಪಿಟೇಶನ್ ಶುಲ್ಕದ ಬಗ್ಗೆ ಚಕಾರವೆತ್ತುವುದಿಲ್ಲ ಎಂದೂ ಕೆಲವರು ವಾದಿಸಿದ್ದರು. ಮೀಸಲಾತಿಯಿಂದ ಪ್ರವೇಶ ಗಿಟ್ಟಿಸುವವರಿಗೆ ತಕ್ಕ ಅರ್ಹತೆ ಇದೆ ಎಂದ ಮೇಲೆ ಮೀಸಲಾತಿ ಇಲ್ಲದೆಯೇ ಇತರರಂತೆ ಅವರೂ ಪ್ರಯತ್ನಿಸಬೇಕು ಎಂಬ ಧ್ವನಿಗಳೂ ಕೇಳಿಬಂದಿತ್ತು.

ಶತಮಾನಗಳಿಂದ ಸಮಾಜದ ಕೆಳಸ್ತರಗಳಲ್ಲೇ ಒದ್ದಾಡಿಕೊಂಡು ವಿದ್ಯೆಯ ಗಾಳಿ ಸೋಂಕದೇ ಉಳಿದುಕೊಂಡ ವರ್ಗಗಳಿವೆ. ಅಂಥವರಿಗೆ ಮೇಲೇರಲು ಅವಕಾಶದ ಸಹಾಯಹಸ್ತ ನೀಡುವುದೇ ಮೀಸಲಾತಿಯ ಮೂಲ ಉದ್ದೇಶವಾಗಿದೆ. ಈ ಉದ್ದೇಶವನ್ನು ಸಮರ್ಥವಾಗಿ, ಪರಿಪೂರ್ಣವಾಗಿ ಪೂರೈಸುವ ಏಕೈಕ ಸಾಧನ "ಶಿಕ್ಷಣ" ಎಂಬುದು ಎಲ್ಲರಿಗೂ ತಿಳಿದದ್ದೇ. ಪ್ರತಿಯೊಬ್ಬರಿಗೂ "ಸಮಾನ"ವಾದ ಶಿಕ್ಷಣ, "ಸಮಾನ"ವಾದ ಅವಕಾಶ ಸಿಕ್ಕರೆ ಮೀಸಲಾತಿಯ ರಗಳೆಗಳೇ ಇರುವುದಿಲ್ಲ. ಆದರೆ ಯಾರೂ ಈ "ಶಿಕ್ಷಣ" ಬೇಕು ಎಂದು ಹೋರಾಟ ಮಾಡುವುದಿಲ್ಲ, ಏಕೆಂದರೆ ಅದರಲ್ಲಿ ಜಾತಿ, ಧರ್ಮಗಳಂತಹ ಭಾವೋದ್ರೇಕಗಳಿರುವುದಿಲ್ಲವಲ್ಲ.

ಪ್ರತಿಯೊಬ್ಬರಲ್ಲೂ ಅವನದೇ ವೈಶಿಷ್ಟ್ಯಗಳಿವೆ. ಕಡುಬಡವರು ಅಥವಾ ಸಮಾಜದ ತೀರಾ ಕೆಳಸ್ತರದಲ್ಲಿ ಕೆಲಸ ಮಾಡುವವರಲ್ಲಿ ಇರುವ ಬುದ್ಧಿಶಕ್ತಿ ಯಾವುದೇ ಉನ್ನತ ಹುದ್ದೆಯಲ್ಲಿರುವನಷ್ಟೇ ಸಮಾನವಾಗಿರುತ್ತದೆ. ಇದು ಸುಳ್ಳು ಎಂದು ನಿಮಗನಿಸಿದರೆ ನೀವು ಓರ್ವ ಸಾಮಾನ್ಯ ವ್ಯಕ್ತಿಯಾಗಿ ಸಮಾಜದ ಕೆಳಸ್ತರದಲ್ಲಿ ಕೆಲ ದಿನಗಳನ್ನು ಕಳೆದು ನೋಡಿರಿ. ಸತ್ಯ ನಿಚ್ಚಳವಾಗಿ ಕಣ್ಣಿಗೆ ರಾಚುತ್ತದೆ.

ಸಾಮಾಜಿಕ ವ್ಯವಸ್ಥೆಯ ಲೋಪದಿಂದ ಸೂಕ್ತ ವಾತಾವರಣದ ಕೊರತೆಯಿಂದ ಅಂತಹ ಕೋಟಿಗಟ್ಟಲೆ ಮಾನವಸಂಪನ್ಮೂಲಗಳು ವ್ಯರ್ಥವಾಗಿ ಹೋಗುತ್ತಿವೆ. ಇದೂ ಒಂದು ರೀತಿಯ 'Brain Drain'. ಭಾರತದ ಆರ್ಥಿಕ ವ್ಯವಸ್ಥೆ ಸಬಲಗೊಳ್ಳಬೇಕಾದರೆ ಎಲ್ಲಾ ಮಾನವ ಸಂಪನ್ಮೂಲಗಳು ಸಬಲವಾಗಿರಬೇಕು. ಬೆರಳೆಣಿಕೆ ಮಂದಿಯಿಂದ ಅಭಿವೃದ್ಧಿ ಸಾಧಿಸಲಾಗದು. ಕೆಳ ಸ್ತರದಲ್ಲಿರುವ ಮಂದಿ ಮೇಲೆ ಬರಲು ಸೂಕ್ತ ವಾತಾವರಣ ಮತ್ತು ಅವಕಾಶಗಳಿರಬೇಕು. ಹಾಗೂ ಅಂತಹ ಅಗಾಧ ಮಾನವ ಸಂಪತ್ತುಗಳನ್ನು ಸೂಕ್ತವಾಗಿ ಬಳಸಿಕೊಳ್ಳುವಂತಹ ಆರ್ಥಿಕ ಅಭಿವೃದ್ಧಿ ವ್ಯವಸ್ಥೆ ರಚಿತವಾಗಬೇಕು.

ಆಗಲೇ ಹೇಳಿದ ಹಾಗೆ ಕೆಳಸ್ತರದವರು ಮೇಲೆ ಏರಲು ಇರುವ ಪರಿಣಾಮಕಾರಿ ಸಾಧನವೆಂದರೆ "ಶಿಕ್ಷಣ". ಪ್ರತಿಯೊಬ್ಬರಿಗೂ ಶಿಕ್ಷಣ ತಲುಪಬೇಕು. ಹಾಗೆ ತಲುಪಬೇಕಾದರೆ ಶಿಕ್ಷಣ ಉಚಿತವಿರಬೇಕು. ಶಿಕ್ಷಣದ ಗುಣಮಟ್ಟ ಅತ್ಯುತ್ತಮವಿರಬೇಕು. ಎಲ್ಲಡೆ ಶಿಕ್ಷಣ ಸಮಾನವಾಗಿರಬೇಕು. ಇದರಿಂದ ಗುಣಮಟ್ಟದ ಏರುಪೇರು ತಪ್ಪುತ್ತದೆ. ಎಲ್ಲರಿಗೂ ಸಮಾನ ಅವಕಾಶ ಪ್ರಾಪ್ತವಾಗುತ್ತದೆ.

ಇದು ಕಾಲ್ಪನಿಕ ಅಥವಾ ಅವಾಸ್ತವ ಸಿದ್ಧಾಂತವಲ್ಲ. ಹಲವು ದೇಶಗಳಲ್ಲಿ ಉಚಿತ ಶಿಕ್ಷಣ ಜಾರಿಯಲ್ಲಿದೆ. ಈ ವ್ಯವಸ್ಥೆಗೆ ಅಪಾರ ಹಣ ವ್ಯಯವಾಗುತ್ತದಾದರೂ ಅದು ಭವಿಷ್ಯಕ್ಕೆ ನಾವು ಹಾಕುತ್ತಿರುವ ಬಂಡವಾಳದಂತಾಗುತ್ತದೆ. ಆದರೆ ನಮ್ಮ ರಾಜಕೀಯ ನೇತಾರರಿಗೆ ಇದನ್ನು ಆರಂಭಿಸುವ ಗಂಡೆದೆ ಇದೆಯೇ? ರಾಜಕಾರಣಿಗಳನ್ನು ಬಿಟ್ಟುಬಿಡಿ, ನಮ್ಮನಿಮ್ಮಲ್ಲಿ ಈ ಬಗ್ಗೆ ಆಸಕ್ತಿ ತೋರಿಸುವ (ಹೋರಾಟ ಮಾತು ಬೇರೆ) ಮಂದಿ ಯಾರಾದರೂ ಇದ್ದಾರೆಯೇ? ಆಸಕ್ತಿ ತೋರಿಸುವುದಿಲ್ಲ. ಏಕೆಂದರೆ ಅವರ ಭಾವನೆಗಳನ್ನು ಉದ್ರೇಕಿಸುವ ಶಕ್ತಿ ಇದಕ್ಕಿಲ್ಲ.

~.~
  • Vijayasarathy ರವರ ಬ್ಲಾಗ್
  • Login or register to post comments
  • 660 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 1, 2006 - 3:17am — ಮಹೇಶ ಭೋಗಾದಿ

ಒಳ್ಳೆಯ ಲೇಖನ

ಮಹೇಶ ಭೋಗಾದಿ's picture

ಇಂತಹ ಬರಹವನ್ನು ನಮ್ಮ ಜೊತೆ ಹಂಚಿಕೊಂಡಿದ್ದಕ್ಕೆ ಧನ್ಯವಾದ.

ಇಂತಿ,
ಮಹೇಶ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮೀಸಲಾತಿಯ ಆಚೆಗೆ ನೋಡೋಣ
  • ಸ್ವತಂತ್ರ, ನಿರಂಕುಶಮತಿಗಳನ್ನು ಸೃಷ್ಟಿಸಬೇಕಿರುವ ಶಿಕ್ಷಣ ವ್ಯವಸ್ಥೆ...
  • ಮಂಜಣ್ಣ, ನಾವಿರೋದೆ ಹಿಂಗೆ!
  • ದುಡಿಮೆಗೆ ಗುರಿಯಿರಲಿ - ಸ್ವಾತಂತ್ರ ಹಬ್ಬ ವಿಶೇಷ
  • "ಓದುವ ಸುಖ, ಬರೆಯುವ ಸುಖ....." - ಒಂದು ಚಿಂತನೆಗೆ ಹಚ್ಚುವ ಲೇಖನ
Syndicate content

ಲೇಖಕರು

Vijayasarathy's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಜಗನ್ನಾಥನ ತಬ್ಬಲಿ ಮಕ್ಕಳು
  • ಕನಸಿನ ಕನ್ಯ
  • ’ಹಾಸ್ಯದರಸ’
  • ಸಪ್ತಸ್ವರ-೨, ಮಕ್ಕಳ ಸಂಗೀತ ಗಾನ
  • ಹೊಗೆಯಾಗುಳಿದಿರುವ ನೆನಪುಗಳು
  • ಕವಿತೆಗೆ ಹೆಸರು ಕೊಡಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಗಣೇಶ
    ಉ: ಹೆಂಡತಿ-ಎಂದರೆ ಜೋಕು ಯಾಕೆ ?
    July 6, 2008 - 12:15am
  • ಚೈತನ್ಯ ಎಸ್
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 11:03pm
  • ಚೈತನ್ಯ ಎಸ್
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 10:35pm
  • rameshbalaganchi
    ಉ: ಅಸ್ತಿ ಕಶ್ಚಿತ್ ವಾಗ್ವಿಶೇಷಃ? ಅಥವಾ, ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ....
    July 5, 2008 - 10:32pm
  • ಚೈತನ್ಯ ಎಸ್
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 10:28pm
  • rameshbalaganchi
    ಉ: ಅಸ್ತಿ ಕಶ್ಚಿತ್ ವಾಗ್ವಿಶೇಷಃ? ಅಥವಾ, ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ....
    July 5, 2008 - 10:25pm
  • rameshbalaganchi
    ಉ: ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
    July 5, 2008 - 10:12pm
  • benaka
    ಉ: ಅಸ್ತಿ ಕಶ್ಚಿತ್ ವಾಗ್ವಿಶೇಷಃ? ಅಥವಾ, ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ....
    July 5, 2008 - 10:02pm
  • kishorpatwardhan
    ಉ: ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
    July 5, 2008 - 9:20pm
  • kalpana
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 5, 2008 - 9:15pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 12 ಅತಿಥಿಗಳು ಆನ್ಲೈನ್ ಇರುವರು.


ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು ।
ಕಲ್ಲಾಗು ಕಷ್ಟಗಳ ವಿಧಿ ಮಳೆ ಸುರಿಯೆ ।।
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ ।
ಎಲ್ಲರೊಳಗೊಂದಾಗು -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator