Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › vinayaka ರವರ ಬ್ಲಾಗ್

ಅಕ್ಷರವಿಹಾರ

ಮಲೆನಾಡ ಮಡಿಲಿನಿಂದ ಹೊರಟ ವಾಕಿಂಗು...

ಠಕ್ಕ,ಠಿಕ್ಕ ಮತ್ತು ಸಾಧು...

April 20, 2008 - 1:37pm — vinayaka

ಆವತ್ತು ಇತಿಹಾಸದ ಮೇಷ್ಟ್ರು ಶಾನೇ ಜೋರಾಗಿ ಪಾಠ ವದರುತ್ತಿದ್ದರು. ಅದು ಠಕ್ಕ,ಠಿಕ್ಕ ಮತ್ತು ಸಾಧು ಎಂಬ ಮೂವರು ದೇಶಭಕ್ತರ ಕಥೆಯುಳ್ಳ ಪಾಠ. ಹಾಗಾಗಿಯೇ ಅದನ್ನು ಇತಿಹಾಸದ ಪಠ್ಯದಲ್ಲಿ ಸೇರಿಸಲಾಗಿತ್ತು! ಮೇಷ್ಟ್ರು ಪಾಠ ವದರಲು ಶುರುವಿಟ್ಟರು.
ಠಕ್ಕ,ಠಿಕ್ಕ ಮತ್ತು ಸಾಧು ಮೂವರು ಒಂದು ಕಾಲದಲ್ಲಿ ಆಪ್ತಮಿತ್ರರಾಗಿದ್ದವರು. ದೇಶದ ಕುರಿತಾಗಿಯೇ ಸದಾ ಚಿಂತಿಸುತ್ತಿದ್ದವರು. ಒಟ್ಟಿಗೆ ನಾಲ್ಕಾರು ವರ್ಷ ಕಳೆದರು. ಒಂದಾನೊಂದು ದಿನ ಅವರ ಮೂವರಲ್ಲಿ ಬಿನ್ನಾಭಿಪ್ರಾಯ ಬಂತು. ಇವರು ಮೂವರಿಗೂ ದೇಶಭಕ್ತಿ ಉತ್ಕಟವಾಗಿ ಮೂವರು ಸೇರಿ ಒಂದು ಪತ್ರಿಕೆ ಆರಂಭಿಸಿದರು. ಅದು ದೇಶಕೋಸ್ಕರವೇ. ಅಲ್ಲಿ ಮೂವರಿಗೂ ಮನಸ್ತಾಪ ಬಂದು ಮೂವರು ಬೇರೆ ಬೇರೆಯಾಗುವ ಕಾಲ ಬಂತು. "ಸ್ವದೇಶಿ ಸ್ವಾಭಿಮಾನ’ ಅಂತಾ ಆ ಪತ್ರಿಕೆ ಹೆಸರು. ರಾಷ್ಟ್ರದ ಕುರಿತಾಗಿ ಜಾಗ್ರತಿ ಮೂಡಿಸಲು ಪತ್ರಿಕೆಗಿಂತ ಒಳ್ಳೆ ಮಾಧ್ಯಮ ಬೇರೊಂದಿಲ್ಲ ಅಂತಾ ಆಲೋಚಿಸಿ ಆ ಮೂವರು ಗೆಳೆಯರು ಸ್ಥಾಪಿಸಿದ ಪತ್ರಿಕೆಯದು.
ಪತ್ರಿಕೆಗೆ ಹಣಹೊಂದಿಸೋ ಜವಬ್ದಾರಿ ಸಾಧು ಮೇಲಿತ್ತು.ಪುಟ ತುಂಬಿಸೋದು ಠಿಕ್ಕನ ಕೆಲಸವಾಗಿತ್ತು. ಇನ್ನೂ ಠಕ್ಕ ಮೊದಲೇ ಬೇರೆ ಪತ್ರಿಕೆಯಲ್ಲಿ ಕೆಲಸ ಮಾಡುತಿದ್ದವನಾದ್ದರಿಂದ ಅವ ಲಕ್ಷಾಂತರ ಜನ ಅಭಿಮಾನಿಗಳನ್ನು ಹೊಂದಿದ್ದನಾದ್ದರಿಂದ ಈ ಪುಟುಗೋಸಿ ಪತ್ರಿಕೆಗೆ ಗೆಳೆಯರ ಒತ್ತಾಸೆಗೆ ಆಗೊಮ್ಮೆ ಈಗೊಮ್ಮೆ ಸಲಹೆಕೊಡುತ್ತಿದ್ದ.
ಇವರು ಅಂದುಕೊಂಡಂತೆ ಪತ್ರಿಕೆ ಕ್ಲಿಕ್ ಆಗಲಿಲ್ಲ. ಸಾಧು ಹಣ ಹೊಂದಿಸಿ ಹೊಂದಿಸಿ ಸುಸ್ತಾದ. ಕೊನೆಗೊಂದು ದಿನ ತನಗೆ ಈ ಪತ್ರಿಕೆ ಸಹವಾಸವೇ ಸಾಕು ಅಂತಾ ಅಲ್ಲಿಂದ ಹಿಂದೆ ಸರಿದುಬಿಟ್ಟ. ಆವಾಗಲೇ ಆ ಮೂವರು ಬೇರೆ ಬೇರೆಯಾಗಿದ್ದು. ಠಕ್ಕ,ಠಿಕ್ಕ ತಮ್ಮ ಅಸ್ಥಿತ್ವಕ್ಕಾಗಿ ದೇಶ ಭಕ್ತಿಯ ಲೇಪ ಹಚ್ಚಿಕೊಂಡವರು ಅಂತಾ ಆಮೇಲೆ ನಿಧಾನವಾಗಿ ತಿಳಿಯಲು ಶುರುವಾಯಿತು. ಆದರೆ ಸಾಧು ದೇಶಕ್ಕಾಗಿಯೇ ತನ್ನ ಬದುಕನ್ನು ಮುಡುಪಾಗಿಟ್ಟವ. ಠಕ್ಕ,ಠಿಕ್ಕ ಸಾಧು ಕುರಿತಾಗಿ ಇಲ್ಲ ಸಲ್ಲದ ಅಪಪ್ರಚಾರ ಮಾಡಿದರು. ಸಾಧು ತುಳಿಯಲು ಬೇಕಾದ ಹುನ್ನಾರವನ್ನೆಲ್ಲ ಮಾಡಿದರು. ಠಕ್ಕ ತನ್ನ ಆತ್ಮಾಲಾಪದಲ್ಲಿ ತನ್ನ ದುಸ್ಥಿತಿಗೆ ಪತ್ರಿಕೆಯೇ ಕಾರಣ ಅಂತಾನು ಬರೆದುಕೊಂಡ. ಠಕ್ಕ ಠಿಕ್ಕ ಇಬ್ಬರು ಸಾಧು ಕಾಲೆಳೆಯಲು ಶತಪತ ಪ್ರಯತ್ನ ಮಾಡಿದರು. ಸಾಧು ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ತನ್ನ ಪಾಡಿಗೆ ತನ್ನ ಕರ್ತವ್ಯಮಾಡುತ್ತಾ ಹೋದ ತಾನು ಹೋದಲೆಲ್ಲಾ ತನ್ನ ಆ ಇಬ್ಬರು ಗೆಳೆಯರನ್ನು ಹೊಗಳಿದನೇ ಹೊರತು ತೆಗಳಲಿಲ್ಲ. ಹೀಗೆ ಬದುಕು ಸವೆಸಿದ ಸಾಧು ಕೊನೆಗೊಂದು ದಿನ ಅವರೆಲ್ಲರನ್ನು ಮೀರಿ ಬೆಳೆದ. ಇತಿಹಾಸದ ಪುಟ ಸೇರಿದ ಅಂತಾ ಪಾಠವನ್ನು ಪಟಪಟನೇ ವದರಿದ ಮೇಷ್ಟ್ರು ಮಕ್ಕಳೆ ರಾಷ್ಟ್ರನಾಯಕರ ಬದುಕು ಅಂದ್ರೆ ಹೀಗೆ. ಅವರು ಬೇರೆ ಯಾರಿಗೂ ಉಪದ್ರ ಮಾಡಲ್ಲ. ತಮಗೆ ಉಪದ್ರ ಕೊಟ್ಟವರಿಗೂ ಉಪಕಾರವನ್ನೇ ಮಾಡುತ್ತಾರೆ. ಈ ಪಾಠದಿಂದ ನಿಮಗೇನು ಗೊತ್ತಾಯಿತು ಅಂತಾ ಮಕ್ಕಳನ್ನು ಪ್ರಶ್ನಿಸಿದರು.
ತಲೆಹರಟೆ ಹುಡುಗನೊಬ್ಬ ಎದ್ದುನಿಂತು ಠಕ್ಕ,ಠಿಕ್ಕನಂತೆ ಬದುಕಿದರೂ ಇತಿಹಾಸದ ಪುಟ ಸೇರಬಹುದು ಅನ್ನೋದು ಇವತ್ತು ಗೊತ್ತಾಯಿತು ಸಾರ್ ಅಂದ. ಮೇಷ್ಟ್ರು ಏನನ್ನೋ ಹೇಳಲು ಬಾಯಿ ತೆರೆದರು ಅಷ್ಟೊತ್ತಿಗೆ ಗಂಟೆ ಬಾರಿಸಿತು. ಕೊನೆ ಅವಧಿಯಾದ್ದರಿಂದ ಮೇಷ್ಟ್ರು ಹೇಳಬೇಕಾದನ್ನು ಅಲ್ಲಿಗೆ ನಿಲ್ಲಿಸಿ ಮನೆಯತ್ತ ದುಡು ದುಡು ಓಡಿದರು.

  • ಕಥೆ
Ornamental seperator
  • vinayaka ರವರ ಬ್ಲಾಗ್
  • Login or register to post comments
  • 187 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 1, 2008 - 12:33pm — uniquesupri

ಉ: ಠಕ್ಕ,ಠಿಕ್ಕ ಮತ್ತು ಸಾಧು...

uniquesupri's picture

ಏನಿದು ನಿಮ್ಮ ‘ಗರ್ವ’?!
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪುಸ್ತಕನಿಧಿ-ಸಮವಾಯೋ ಏವ ಸಾಧು-ಹೊಂದಿಕೊಂಡು ಬದುಕುವದು- ಅದೇ ಒಳ್ಳೆಯದು
  • ಭಾಗ್ಯದ ಲಕ್ಷ್ಮಿ ಬಾರಮ್ಮ
  • ಮೋಸದಾಟದ ವಿಷ
  • ನೀರಿಲ್ಲದ ನದಿಯೊಂದಕ್ಕೆ ಹಾರಲು ಹೋಗಿ......
  • ಮುಂದೇನು ...?
Syndicate content

ಲೇಖಕರು

vinayaka's picture

ಪೂರ್ಣ ಹೆಸರು
vinayaka

ಪರಿಚಯ

ಹುಟ್ಟಿದ್ದು ಮಲೆನಾಡಿನಲ್ಲಿ, ಓದಿದ್ದೆಲ್ಲಾ ತುಳುನಾಡಿನಲ್ಲಿ. ಜೀತ ಮಾಡ್ತಾ ಇರೋದು ಬೆಂಗಳೂರೆಂಬ ಅಪ್ಪಟ ಕಾಂಕ್ರೀಟು ಜಂಗಲ್ಲಿನಲ್ಲಿ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಅಕ್ಷರೋದಿ ಸೂತ್ರ
  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
  • ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
  • vikashegde
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 2:37pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 2:30pm
  • madhava_hs
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 2:29pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 2:23pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 2:10pm
  • vikashegde
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 2:00pm
  • harshab
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 1:59pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 1:51pm
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 19 ಅತಿಥಿಗಳು ಆನ್ಲೈನ್ ಇರುವರು.

ಆ ದೇವ ಈ ದೇವ | ಮಾದೇವನೆನಬೇಡ |
ಆ ದೇವರ ದೇವ ಭುವನದ ಪ್ರಾಣಿಗಳಿ - |
ಗಾದವನೆ ದೇವ ಸರ್ವಜ್ಞ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator