ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › vinayaka ರವರ ಬ್ಲಾಗ್

ಅಕ್ಷರವಿಹಾರ

ಮಲೆನಾಡ ಮಡಿಲಿನಿಂದ ಹೊರಟ ವಾಕಿಂಗು...

ಗಾಂಧಿಜೀ ಉಪ್ಪು ಬಿಟ್ಟರೆ, ಅವರು...?!

March 28, 2008 - 6:05pm — vinayaka

ಗಾಂಧಿಜೀ ಒಂದು ಹೊತ್ತು ಉಪವಾಸವಿದ್ದರೆ ಅವರದ್ದು ಒಂದು ದಿನ ಉಪವಾಸ! ಗಾಂಧಿ ನೀರು ಬಿಟ್ಟರೆ ಇವರು ಅನ್ನವನ್ನೂ ಬಿಟ್ಟರೂ! ಗಾಂಧಿ ಉಪ್ಪು ತ್ಯಜಿಸಿದರೆ ಇವರು ಅದರ ಜೊತೆ ಹುಳಿ ಖಾರಗಳನ್ನು ತ್ಯಜಿಸಿದರು!ಹೌದು ಅವರೆಲ್ಲಾ ಪಕ್ಕಾ ಗಾಂಧಿವಾದಿಗಳು! ಸ್ವಾಂತಂತ್ರ್ಯಕೋಸ್ಕರ ಗಾಂಧಿ ಜೊತೆಗೆ ಅಲೆದವರು......ಹೀಗೆ ಗಾಂಧಿವಾದವನ್ನು ಲೇಪಿಸಿಕೊಂಡು ಬದುಕಿದವರ ಕಥೆಯನ್ನು ವಿವರಿಸುವ ಆ ಕಾದಂಬರಿಯ ಹೆಸರು "ನಾವು ಕಟ್ಟಿದ ಸ್ವರ್ಗ" ಅಂತಾ. ಶಿವರಾಮ ಕಾರಂತರ ಆಕರ್ಷಕವಾದೊಂದು ಶೈಲಿಯಲ್ಲಿ ಮೂಡಿಬಂದಿರುವ ಈ ಕಾದಂಬರಿ ಒಂತರಹ ವಿಡಂಬನಾತ್ಮಕ ಕೃತಿ ಅಂತಾನೇ ಹೇಳಬಹುದು!
"ಜನನಿಂ ಜನ್ಮಭುಮಿಶ್ಚ ಸ್ವರ್ಗಾದಪಿ ಗರಿಯಸೆ" ಅನ್ನುವ ಈ ವಾಕ್ಯ ಕಂಡಾಗಲೆಲ್ಲಾ ನನಗೆ ನನ್ನ ಚಂಪಾಲಪುರದ ನೆನಪಾಗತ್ತೆ ಅನ್ನುತ್ತಲೆ ಆರಂಭವಾಗತ್ತೆ ಈ ಕಾದಂಬರಿ. ದೇವೇಂದ್ರಪ್ಪನೆಂಬ ಗಾಂಧಿಜೀಯ ಅನುನಾಯಿ ಅಲ್ಲಲ್ಲ ಅನುಯಾಯಿ ನಿರ್ಮಿಸುವ ಸ್ವರ್ಗವೇ ಆಧುನಿಕ ಚಂಪಲಾಪುರ. ಅದು ಅಂತಿಂತಹ ಸ್ವರ್ಗವಲ್ಲ! ಊರು ಬಿಟ್ಟು ಹೋದವರು ಮರಳಿ ಊರಿಗೆ ಬಂದರೇ ಊರೇ ಗುರುತು ಸಿಗದಂತೆ ನಿರ್ಮಾಣಗೊಂಡಿರುವ ಸ್ವರ್ಗ! ಈ ದೇವೆಂದ್ರಪ್ಪನಾದರೋ ಸ್ವಾತಂತ್ರ್ಯಸಂಗ್ರಾಮದಲ್ಲಿ ಗಾಂಧಿಜೀ ಜೊತೆ ಊರೂರು ಅಲೆದು ಕಾಲು ಸವೆಸಿಕೊಂಡವ! ಗಾಂಧಿ ಉಪ್ಪು ಬಿಟ್ಟಾಗ ಇವ ಖಾರ, ಹುಳಿ, ಸಿಹಿ ಎಲ್ಲವನ್ನೂ ಬಿಟ್ಟು ಕುಳಿತವ. ಅರ್ಥಾತ್ ಅಷ್ಟು ಗಾಂಧಿಜೀಯನ್ನು ಅನುಸರಿಸುತ್ತಿದ್ದವನು.! ಕೊನೆಗೆ ಗಾಂಧಿ ಕನಸಾಗಿದ್ದ ರಾಮರಾಜ್ಯ ನಿರ್ಮಿಸಲಿಕೋಸ್ಕರವೇ ರಾಜಕೀಯಕ್ಕೆ ಧುಮುಕಿ ಮಂತ್ರಿಯಾಗುವವ. ಇವನ ಶಿಷ್ಯ ಮಾದಪ್ಪ ಗೂರೂಜಿ! ಇವ ಅಲ್ಲೆಲ್ಲೋ ಗಾಂಧಿ ಆಶ್ರಮದಲ್ಲಿ ಇದ್ದವನಂತೆ! ದೇವೆಂದ್ರಪ್ಪನ ಜೊತೆ ದೇಶೋದ್ದಾರಕ್ಕೆ ಅಂತಲೇ ಚಂಪಲಾಪುರಕ್ಕೆ ಬಂದವ! ಹೀಗೆ ದೇವೇಂದ್ರಪ್ಪನ ಬದುಕಿನ ಪುಟಗಳನ್ನು ವಿವರಿಸುತ್ತಲೇ ಕಾದಂಬರಿಯ ಪುಟಗಳು ತೆರೆದುಕೊಳ್ಳಲು ಶುರುವಾಗತ್ತೆ.
ಮುಂಬೈನಲ್ಲಿ ನೆಲೆಸಿರುವ ಪತ್ರಕರ್ತ ತನ್ನ ಹುಟ್ಟೂರಿನ ಮೇಲಿನ ಅಭಿಮಾನದಿಂದ, ಹುಟ್ಟೂರಿನಲ್ಲಿ ಅಪ್ಪ, ಅಜ್ಜಂದಿರ ಕಾಲದಿಂದ ಬಂದ ಒಂದು ಹಿಡಿ ಜಾಗವಿರುವುದರಿಂದ ಊರಿಗೆ ಬರುತ್ತಾರೆ. ಗೆಳೆಯ ಶಾಮಣ್ಣನ ಮನೆಯಲ್ಲಿ ತಂಗುತ್ತಾರೆ. ಆ ಮೇಲೆ ಊರಿನ ಚಟುವಟಿಕೆಗಳನ್ನೆಲ್ಲಾ ಗಮನಿಸುತ್ತಾರೆ. ತಮ್ಮ ಜನ್ಮಭುಮಿಯನ್ನು ಈ ಪರಿ ಪರಿವರ್ತಿಸಿದ, ಜಾಡ್ಯವಾಗಿದ್ದ ಊರಿಗೊಂದು ಚೈತನ್ಯ ತುಂಬಿದ ಮಹಾನುಭವರನ್ನು ನೋಡೋ ಆಸೆ ಪತ್ರಕರ್ತರಿಗೆ ಶುರುವಾಗತ್ತೆ. ಅವರ ಇಂಟರ್‌ವ್ಯೂ ಮಾಡಿ ಅವರ ಬಗ್ಗೆ ಒಂದಿಷ್ಟು ಗೀಚುವ ಚಪಲ! ಅಂತೂ ಬೇಗನೇ ಮುಂಬೈಗೆ ಮರಳಬೇಕಾದ ಪತ್ರಕರ್ತರು ತಮ್ಮೆಲ್ಲಾ ಹಳವಂಡಗಳನ್ನು ಬದಿಗೊತ್ತಿ ನವಚಂಪಲಾಪುರ ನಿರ್ಮಾತೃವನ್ನು ಮಾತಾಡಿಸಲು ಹುಟ್ಟುರಲ್ಲೆ ತಂಗಿಬಿಡುತ್ತಾರೆ!ಊರಲ್ಲಿ ನೀಲ ಬಾವುಟದವರ ಚಳುವಳಿ, ಕೇಸರಿ ಬಾವುಟದವರ ಚಳುವಳಿ ಎಲ್ಲವನ್ನೂ ನೋಡುತ್ತಾರೆ! ಭೀಮಪ್ಪನಂತಹ ವರ್ತಕರನ್ನು ಬೇಟಿಯಾಗುತ್ತಾರೆ......ಹೀಗೆ ಸಾಗತ್ತೆ ಕಾದಂಬರಿಯ ಕಥೆ.
ಗಾಂಧಿ ಹೆಸರು ಹೇಳಿಕೊಂಡು ಹಲಾಲುಕೋರಿಕೆ ಮಾಡಿದ ರಾಜಕಾರಣಿಗಳ ಚರಿತ್ರೆ ತೆರೆದಿಡುವ ಕಾದಂಬರಿ ಅದು. ಅದ್ಬುತ ಶೈಲಿ. ನನ್ನ ಮಟ್ಟಿಗೆ ಕೊಂಕು, ಕುಚೋದ್ಯ ಬರಹಗಳನ್ನು ಹೇಗೆ ಬರೆಯಬೇಕೆಂದು ಕಲಿಸಿದ ಕಾದಂಬರಿಯದು. ಯಾಕೋ ಚುನಾವಣೆ ಹರ್ತ ಬರ್ತಾ ಇರೋದು, ರಾಜಕಾರಣಿಗಳು ಬಗೆಬಗೆಯ ಯಾತ್ರೆ ಕೈಗೊಳ್ಳುತ್ತಾ ಇರೋದು ಇದನ್ನೆಲ್ಲಾ ಕಂಡಾಗ ಆ ಕಾದಂಬರಿಯ ನೆನಪಾಯಿತು! ಆವತ್ತು ಕಾರಂತರು ಬರೆದ ಕಾದಂಬರಿ ಇವತ್ತಿಗೂ ಎಷ್ಟು ಪ್ರಸ್ತುತ ಅನ್ನಿಸಿತು. ಈ ಕುರಿತು ಹೆಚ್ಚಿನ ಓದಿಗೆ www. aksharavihaara.wordpress.comಇಲ್ಲಿ ನೋಡಿ

  • ಚಿಂತನ
~.~
  • vinayaka ರವರ ಬ್ಲಾಗ್
  • Login or register to post comments
  • 203 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನೆನಪು
  • ಮಹಾತ್ಮ ಗಾಂಧಿ - ೧೫
  • ಮಹಾತ್ಮ ಗಾಂಧಿ - ೧೩
  • ಮಹಾತ್ಮ ಗಾಂಧಿ - ೭
  • ಮಹಾತ್ಮ ಗಾಂಧಿ - ೧
Syndicate content

ಲೇಖಕರು

vinayaka's picture

ಪೂರ್ಣ ಹೆಸರು
vinayaka

ಪರಿಚಯ

ಹುಟ್ಟಿದ್ದು ಮಲೆನಾಡಿನಲ್ಲಿ, ಓದಿದ್ದೆಲ್ಲಾ ತುಳುನಾಡಿನಲ್ಲಿ. ಜೀತ ಮಾಡ್ತಾ ಇರೋದು ಬೆಂಗಳೂರೆಂಬ ಅಪ್ಪಟ ಕಾಂಕ್ರೀಟು ಜಂಗಲ್ಲಿನಲ್ಲಿ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಚುಕ್ಕಿಗಳಂತ ಹಲ್ಲು
  • ಹಗಲು-ಇರುಳು
  • ನಿನ್ನ ಪೂಜೆಗೆ ಬಂದ ಮಹದೇಸ್ವರಾ
  • ನುಡಿ ಚಿತ್ರ ಬರೆಯಲು ಕಲಿತಿದ್ದು
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೧)
  • ನೆನೆವುದೆನ್ನ ಮನ ಕರ್ನಾಟಕ ದೇಶವಮ್
  • ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
  • ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ
  • ಮೊಬೈಲ್ ಕಥೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • madhava_hs
    ಉ: ನಿನ್ನ ಪೂಜೆಗೆ ಬಂದ ಮಹದೇಸ್ವರಾ
    July 9, 2008 - 6:40pm
  • madhava_hs
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 6:36pm
  • ನೀತಾ
    ಉ: ಹಗಲು-ಇರುಳು
    July 9, 2008 - 6:33pm
  • ಸಂಗನಗೌಡ
    ಉ: ‘ಕಿವಿ’ ಕಡೆ ಗಮನ ಕೊಡಿ; ಇಲ್ಲದಿರೆ ಎಲ್ಲರಿಗೂ ‘ಕೈ’ ಕೊಡಬೇಕು!
    July 9, 2008 - 6:28pm
  • ನೀತಾ
    ಉ: Abroad ಅನ್ನೋ ಮಾಯೆ...
    July 9, 2008 - 6:21pm
  • Deeparavishankar
    ಉ: ಬೈಟೊ ಕಾಫಿ !!! - ೧
    July 9, 2008 - 6:10pm
  • ಸಂಗನಗೌಡ
    ಉ: ಅಬ್ಬಾ!
    July 9, 2008 - 6:01pm
  • yuvapremi
    ಉ: ವರದಕ್ಷಿಣೆ;/ಪ್ರದಕ್ಷಿಣೆ;
    July 9, 2008 - 5:55pm
  • ನೀತಾ
    ಉ: Abroad ಅನ್ನೋ ಮಾಯೆ...
    July 9, 2008 - 5:53pm
  • yuvapremi
    ಉ: ಮುಕ್ತ...ಮುಕ್ತ...ಸಾಹಿತ್ಯ ಬೇಕು...
    July 9, 2008 - 5:46pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 41 ಅತಿಥಿಗಳು ಆನ್ಲೈನ್ ಇರುವರು.


ನಾವು ಸಮಯವನ್ನು ಉಪಕರಣವನ್ನಾಗಿ ಬಳಸಿಕೊಳ್ಳಬೇಕು, ಊರುಗೋಲಾಗಿ ಅಲ್ಲ.

— ಜಾನ್ ಕೆನಡಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator