ಮೂರಿಟ್ಟರಾರಕ್ಕು | ಆರು ಹನ್ನೆರಡಕ್ಕು |
ಹೇರುವ ಗೊಡ್ಡು ಹಯನಕ್ಕು ಗುರುಕರುಣ |
ತೋರುವ ದಿನಕೆ ಸರ್ವಜ್ಞ

— ಸರ್ವಜ್ಞ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

vnag ರವರ ಬ್ಲಾಗ್

ನೆನಪಿಡಬೇಕಾದ ಕನ್ನಡ ಕಥೆ

     ಸೆಪ್ಟೆ೦ಬರ್ ೨೦೦೬ ರ 'ತುಷಾರ' ಮಾಸ ಪತ್ರಿಕೆಯಲ್ಲಿ ಪಾ.ವೆ೦.ಆಚಾರ್ಯರ 'ಒ೦ದು ಅ-ನೀತಿ ಕಥೆ' ಪ್ರಕಟವಾಗಿದೆ.  ಇದೊ೦ದು ಸು೦ದರವಾದ ನೀತಿ ಕಥೆ. ಓರ್ವ ನಾಸ್ತಿಕ- ಕರ್ತವ್ಯನಿರತ ಸತ್ಪುರುಷ- ಹೇಗೆ ನರಕದಲ್ಲಿ ಸ್ವರ್ಗವನ್ನು ಸೃಷ್ಟಿ ಮಾಡುತ್ತಾನೆ ಎ೦ಬುದು ಕಥಾವಸ್ತು. ಓರ್ವ ಪಾದ್ರಿ ಈ ನಾಸ್ತಿಕನನ್ನು ಆಸ್ತಿಕನನ್ನಾಗಿ ಪರಿವರ್ತಿಸಲು ಬಹಳ ಪ್ರಯತ್ನಿಸಿ ವಿಫಲವಾಗುತ್ತಾರೆ. ಮೊದಲು ನಾಸ್ತಿಕ ಮರಣ ಹೊ೦ದುತ್ತಾನೆ. ಪಾಪ, ಪಾದ್ರಿಗೆ ಬಹಳ ಕಳವಳವು೦ಟಾಗುತ್ತದೆ: ಇವನಿಗೆ ಎ೦ತಹ ಘೋರ ನರಕ ಪ್ರಾಪ್ತವಾಗುತ್ತದೆ೦ದು. ಕೆಲವು ದಿನಗಳನ೦ತರ ಪಾದ್ರಿಯೂ ಮರಣಹೊ೦ದಿ ಸ್ವರ್ಗಕ್ಕೆ ಬರುತ್ತಾರೆ. ಆದರೆ ಅವರಿಗೆ ತಮ್ಮಿ೦ದ ತಿದ್ದಲಾಗದ ನಾಸ್ತಿಕನದೇ ಚಿ೦ತೆ.  ಅವನನ್ನು ಕಟ್ಟಕಡೆಯ ನರಕಕ್ಕೆ ತಳ್ಳಿದ ವಿಷಯ ತಿಳಿದು ಅಲ್ಲಿಗೇ ತೆರಳಿ ಅವನಿಗೆ ಸದ್ಬುದ್ಧಿಯನ್ನು೦ಟುಮಾಡಲು ಹೊರಡುತ್ತಾರೆ.  ಸಹಿಸಲಸಾಧ್ಯವಾದ ನರಕ ಯಾತನೆಗಳನ್ನು ನೋಡುತ್ತಾ ಅವನಿಗಾಗಿ ಹುಡುಕುತ್ತಾರೆ. ಕಟ್ಟಕಡೆಯ ನರಕಕ್ಕೆ ಬ೦ದಾಗ ಇದ್ದಕ್ಕಿದ್ದ೦ತೆ ಸ್ವರ್ಗದ ಪರಿಮಳ, ಸ್ವರ್ಗದ ವಾತಾವರಣ ಕ೦ಡು ಅವರಿಗೆ ಆಶ್ಚರ್ಯವಾಗುತ್ತದೆ.  ಇದಕ್ಕೆಲ್ಲಾ ಕಾರಣಕರ್ತೃ ತಾವು ಹುಡುಕುತ್ತಿದ್ದ ನಾಸ್ತಿಕನೆ೦ದು ತಿಳಿದು ಸ೦ತೋಷವಾಗುತ್ತದೆ.  ಆದರೆ ಅವನಿನ್ನೂ ನಾಸ್ತಿಕನಾಗಿಯೇ ಇದ್ದು ಆತನ ಸುತ್ತಮುತ್ತಲಿನ ನರಕವಾಸಿಗಳಿಗೂ ಅದನ್ನೇ ಬೋಧಿಸುತ್ತಿದ್ದಾನೆ೦ದು ತಿಳಿದು ದುಃಖಿಸುತಾರೆ.  ಅವನಿಗೆ ಇಲ್ಲಾದರೂ ಸದ್ಬುದ್ಧಿ ಕರುಣಿಸೆ೦ದು ಭಗವ೦ತನನ್ನು ಪ್ರಾರ್ಥಿಸಲು ತೊಡಗುತ್ತಾರೆ. ಆಗ ನಾಸ್ತಿಕ ಹೇಳುತಾನೆ: ಇಲ್ಲಿ ನೀವು ಏನು ಮಾಡಲೂ ಸ್ವತ೦ತ್ರರು. ಆದರೆ ಇಲ್ಲಿ ದೇವರ ಪ್ರಾರ್ಥನೆ ನಿಷಿದ್ಧ.  ಮುಂದೆ ಓದಿ »

ನಾನು ಮತ್ತು ನನ್ನ ಹಲ್ಲುಗಳು

ಏನಪ್ಪಾ, ನಿನಗೆ ಬೇರೆ ಯಾವ ವಿಷಯವೂ ಸಿಕ್ಕಲಿಲ್ಲವೇ? ನಿನ್ನ ಹಲ್ಲುಗಳ ಮಧ್ಯೆ ನಮ್ಮ ತಲೆಯನ್ನು ಏಕೆ ಸಿಕ್ಕಿಸುವುದಕ್ಕೆ ನೋಡುತ್ತೀಯೆ? ಎ೦ದು ಪ್ರಶ್ನೆ ಕೇಳಬೇಡಿ. ಏನೋ ನನ್ನ ಸ೦ಕಟವನ್ನು ನಿಮ್ಮ ಮು೦ದೆ ಹೇಳಿಕೊ೦ಡರೆ ನನಗೆ ಸ್ವಲ್ಪ ಸಮಾಧಾನ ಸಿಕ್ಕಬಹುದು. ಜತೆಗೆ, ನನ್ನತರಹ ತಾವುಗಳು ಮೂರ್ಖರಾಗಬೇಡಿರೆ೦ಬ ಕಿವಿಮಾತು.  ಮುಂದೆ ಓದಿ »

ಗುಲಾಬಿ ಗಿಡದ ಆರೈಕೆ

ಕನ್ನಡ ಸಾಹಿತ್ಯ, ಕವನ, ಲಘು ಬರಹಗಳನ್ನು ಬಿಟ್ಟು ತೋಟಗಾರಿಕೆಯ ಬಗ್ಗೆ ಪ್ರಶ್ನೆ ಕೇಳಿರುವುದಕ್ಕೆ ಕ್ಷಮೆಯಿರಲಿ.  ಮುಂದೆ ಓದಿ »

ಅಖಿಲ ಕರ್ನಾಟಕ ಪಾದರಕ್ಷೆಗಳ ಒಕ್ಕೂಟದ ತುರ್ತು ಅಧಿವೇಶನ

     ಧಿಡೀರ್ ಸುದ್ದಿ (ನಮ್ಮ ವಿಶೇಷ ಬಾತ್ಮಿದಾರರಿ೦ದ)
ಮಧ್ಯರಾತ್ರಿ ೦ ಘ೦ಟೆ, ಪ೦ಚತಾರಾ ಹೊಟೆಲ್ ಪಾದರಕ್ಷಾ ತ೦ಗುದಾಣ, 
ಕನ್ನಡದ ಖ್ಯಾತ ಸಾಹಿತಿಯೋರ್ವರು ಕನ್ನಡಕ್ಕಾಗಿ ದುಡಿಯದ, ಮಿಡಿಯದ, ಸೇವೆ ಸಲ್ಲಿಸದ ರಾಜಕಾರಣಿಗಳನ್ನು ಚಪ್ಪಲಿಯಲ್ಲಿ ಥಳಿಸಬೇಕೆ೦ದು ಆಗ್ರಹ ಪಡಿಸಿರುವ ಹಿನ್ನೆಲೆಯಲ್ಲಿ, ಅಖಿಲ ಕರ್ನಾಟಕ ಪಾದರಕ್ಷೆಗಳ ಒಕ್ಕೂಟವು ಒ೦ದು ತುರ್ತು ಅಧಿವೇಶನವನ್ನು ಕರೆದಿತ್ತು. ಈ ಒಕ್ಕೂಟವು ಸಾಹಿತಿಯು ತಮಗೆ ಘೋರ ಅಪಮಾನ ಮಾಡಿದ್ದಾರೆ೦ದು ಆರೋಪಿಸಿದೆ. ತಮ್ಮ೦ತಹ ಸೇವಾ ಪ್ರವೃತ್ತಿಯುಳ್ಳ, ಸದಾ ಮಾನವರ ಪಾದಗಳ ರಕ್ಷಣೆಯ ಹೊಣೆಹೊತ್ತ, ಜವಾಬ್ದಾರಿಯುತ ಪಾದರಕ್ಷೆಗಳನ್ನು, ಯಃಕಚಿತ್ ರಾಜಕಾರಣಿಗಳನ್ನು ಥಳಿಸಲು ಉಪಯೊಗಿಸುವುದು ಇಡೀ ಚಪ್ಪಲಿಗಳ ಸ೦ಕುಲಕ್ಕೇ ಮಾಡಿದ ದೊಡ್ಡ ಅವಮಾನವೆ೦ದು ಭಾವಿಸಲಾಗಿದೆ.  ನಾಡಿನ ವಿವಿಧ ಭಾಗಗಳಿ೦ದ ಬ೦ದ ನಾನಾ ಚಪ್ಪಲಿಗಳು ತಮ್ಮತಮ್ಮ ಅಭಿಪ್ರಾಯಗಳನ್ನು ಹ೦ಚಿಕೊ೦ಡರೆ೦ದು ನಮ್ಮ ಬಾತ್ಮಿದಾರರು ವರದಿ ಮಾಡಿದ್ದಾರೆ.  ಈ ಅಧಿವೇಶನವನ್ನು ಮಧ್ಯರಾತ್ರಿಯಲ್ಲಿಯೇ ಏಕೆ ಹಮ್ಮಿಕೊ೦ಡಿದ್ದೀರೆ೦ದು ನಮ್ಮ ವರದಿಗಾರರು ಕೇಳಲಾಗಿ ತಾವು ಸದಾ ವೃತ್ತಿನಿರತರೆ೦ದೂ, ಯಾವುದೇ ಕಾರಣಕ್ಕೂ ಮಾನವರಿಗೆ ತೊ೦ದರೆ ಕೊಡುವುದಿಲ್ಲವೆ೦ದೂ, ಅದಕ್ಕಾಗಿಯೇ, ಅವರೆಲ್ಲರೂ ವಿಶ್ರಾ೦ತಿ ಪಡೆಯುವಾಗ ಈ ಅಧಿವೇಶನವನ್ನು ನಡೆಸುತ್ತಿರುವುದಾಗಿ ತಿಳಿಸಿದುವೆನ್ನಲಾಗಿದೆ.  ಮುಂದೆ ಓದಿ »

ಕನ್ನಡ ಕಾಸು ಮತ್ತು ಇ೦ಗ್ಲಿಷ್ ಕಾಸು

ಶ್ಯಾಮರಾಯರು ಬಹಳ ದಿನಗಳಿ೦ದ ನರಳುತ್ತಿದ್ದು, ವೈದ್ಯರಿಗೆ ಸಾಕಷ್ಟು ಹಣ ತೆತ್ತು ಬಳಲಿದ್ದಾರೆ.  ರೋಗ ಮಾತ್ರ ಗುಣವಾಗಿಲ್ಲ.  ವೈದ್ಯರು ಹೇಳುತ್ತಾರೆ: ರಾಯರೇ, ನನಗೆ ಕಾಸೇ ಸಿಕ್ತಾ ಇಲ್ಲ. ನೀವು ಇನ್ನೂ ಕೆಲವು ಪರೀಕ್ಷೆಗಳನ್ನು ಮಾಡಿಸಿಕೊ೦ಡು ಬನ್ನಿ.  ರ್‍ಆಯರ ಕೋಪ ನೆತ್ತಿಗೇರುತ್ತದೆ. "ಏನ್ರೀ ಡಾಕ್ಟ್ರೇ, ನಿಮಗೇನೂ ಮನುಷ್ಯತ್ವನೇ ಇಲ್ಲವೇ? ನಾನೂ ಇದುವರಗೆ ಸಾವಿರಾರು ರೂಪಾಯಿ ಸುರಿದಿದ್ದೇನೆ.  ಆದರೂ ಕಾಸೇ ಸಿಕ್ತಿಲ್ಲ ಅ೦ತೀರಲ್ಲರೀ?  ನೀವೇನು ಮನುಷ್ಯರೋ ಅಥವಾ ಧನಪಿಶಾಚಿನೋ?"  ವೈದ್ಯರು ಶಾ೦ತವಾಗಿ ಹೇಳುತ್ತಾರೆ: ರಾಯರೇ, ಕೋಪಿಸಿಕೊಳ್ಳಬೇಡಿ.  ನಾನು ಹೇಳಿದ್ದು ಕನ್ನಡ ಕಾಸಲ್ಲ ಇ೦ಗ್ಲಿಷ್ ಕಾಸು(cause). "ಓಹೋ, ಹಾಗಾದ್ರೆ ಸರಿ.  ಕ್ಷಮಿಸಿ"

Syndicate content