ಸಮಸ್ಯೆಗಳು ಅನುಭವವನ್ನು ನೀಡುವ ಪರೀಕ್ಷೆಗಳಷ್ಟೇ!
ಅಲ್ರೀ.. ಬೇಡವಾದದ್ದನ್ನ ತಲೆಗೆ ಹಾಕಿಕೊಂಡು ಯೋಚಿಸಿದರೆ ಚಿಂತೆ ಅಲ್ಲದೆ ಮತ್ತೇನ್ ಬರೋಕೆ ಸಾಧ್ಯ?
ನಿಮಗಾಗಿ ಈ ಇಡೀ ಬದುಕೇ ಕಾದಿದೆ. ನೀವು ಮನಸ್ಸು ಪಟ್ಟರೆ ಕಳೆದುಕೊಂಡಿದ್ದನೆಲ್ಲಾ ಪಡೆಯಬಹುದು, ಮನಶಾಂತಿಯೊಂದನ್ನು ಬಿಟ್ಟು. ದೇವರು ಒಂದು ದಾರಿಯನ್ನು ಕಾಣದ ಹಾಗೆ ಮಾಡಿದ ಅಂತ ಹಾದ್ರೆ, ಮತ್ತೊಂದು ದಾರಿಯಲ್ಲಿ ದೀಪವಿಟ್ಟು ನಿಮ್ಮನ್ನು ಸ್ವಾಗತಿಸುತ್ತಾನೆ. ನಿಮಗಾಗಿಯೇ ಮಾಡಿಟ್ಟ ಆ ಹಾದಿಯು ನಿಮಗೆ ಒಳ್ಳೇದನ್ನೇ ಮಾಡಲು ಕಾಯುತಿರುತ್ತದೆ. ಅಂದ ಮೇಲೆ ಚಿಂತೆ ಯಾಕೆ ಮಾಡ್ತೀರ? ಕೇವಲ ನಿಮ್ಮ ಸೂಕ್ಷ್ಮ ಕಣ್ಗಳಿಂದ ಆ ಹೊಸ ಹಾದಿಯನ್ನು ಹುಡುಕಿ. ಆ ಹುಡುಕಾಟವನ್ನೂ ಮಾಡದಿರೊ ಸೋಮಾರಿತನ ಬೇಡ!
ಶಾಂತಿ, ನೆಮ್ಮದಿ ಎರಡು ಮಾನವನಿಗೆ ಬಹು ಅಮೂಲ್ಯ ಭಾವನೆಗಳು. ಮನುಜನು ಎನೇ ಕೆಲ್ಸ ಮಡಿದ್ರೂ ಕೊನೆಗೆ ಬಯಸೋದು ಇವೆರಡನ್ನೇ ತಾನೆ? ಅವೆರಡೂ ಸಿಗದಾಗ ಅವನು ಚಿಂತೆಯ ಮೆಟ್ಟಿಲೇರುತ್ತಾನೆ, ಚಿತೆಯ ಮೆಟ್ಟಿಲು ಅಲ್ಲೆ ಇಣುಕಿ ನೋಡಲು ಶುರು ಮಾಡುತ್ತದೆ!
ಆದರೆ ಕೆಲವರು ತಿಳಿದುಕೊಳ್ಳದಿರೋ ವಿಷಯವೊಂದಿದೆ - ಈ ಎರಡರ ಮೂಲ ತ್ರುಪ್ತಿಯಲ್ಲಿದೆ. ಯಾವ ಮನುಷ್ಯನಿಗೆ ತ್ರುಪ್ತಿ ಪಡುವ ಮನಸ್ಸಿರುತ್ತದೋ, ಅವನನ್ನು ಶಾಂತಿ, ನೆಮ್ಮದಿಗಳು ತಾನಾಗಿಯೆ ಹುಡುಕಿಕೊಂಡು ಬರುತ್ತವೆ. ಹಾಗೆಂದು ನಾನೇನು ಕಷ್ಟಗಳು ಬಂದಾಗಲೂ ತ್ರುಪ್ತಿ ಪಡಲು ಹೇಳುತ್ತಿಲ್ಲ. ಕಷ್ಟಗಳು ಮನುಷ್ಯನಿಗೆ ಬುದ್ದಿ ಕಲಿಸುವ, ಅನುಭವ ನೀಡುವ ಸತ್ವ ಪರೀಕ್ಷೆಗಳಷ್ಟೆ! ಅವನ್ನು ಎದುರಿಸಲೆಂದೇ ದೇವರು ನಮಗೆ ಇಲ್ಲಿಯವರೆಗೆ ಜೀವನದ ಪಾಠಗಳ್ಳನ್ನು ಹೇಳಿಕೊಟ್ಟಿದ್ದು ಅಲ್ಲವೇ? ಆ ಪಾಠಗಳು ಬೇರೆಯವರಿಂದ ನಮಗಾದ ಅನುಭವಗಳಾಗಿರಬಹುದು ಅಥವ ಬೇರೆಯವರ ಅನುಭವಗಳ ಸಾರವಿರಬಹುದು! ಅವೆಲ್ಲವನ್ನು ಒಟ್ಟಿಗೆ ಸೇರಿಸಿ ಅವುಗಳ ಸಾರವನ್ನು ಅರ್ಥೈಸಿಕೊಂಡಾಗ ನಮ್ಮ ಸಮಸ್ಯೆಗಳು ಹಗುರಾಗಿ ಕಂಡು, ಅವುಗಳ ಪರಿಹಾರದ ದಾರಿ ಗೋಚರಿಸುತ್ತವೆ. ಆದ್ದರಿಂದ ಬೇರೆಯವರ ಕಷ್ಟವಳನ್ನು ಹಗುರಾಗಿ ಕಾಣಬೇಡಿ. ಅವುಗಳಿಂದ ಪಾಠ ಕಲಿಯಿರಿ. ನಿಮ್ಮ ಜೀವನದಲ್ಲಿ ಅವುಗಳ ಸಾರವನ್ನ ಜೀರ್ಣಿಸಿಕೊಳ್ಳಿ.

- vworld4u ರವರ ಬ್ಲಾಗ್
- Login or register to post comments
- 371 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
ಉ: ಸಮಸ್ಯೆಗಳು ಅನುಭವವನ್ನು ನೀಡುವ ಪರೀಕ್ಷೆಗಳಷ್ಟೇ!
ಆದರೆ ಒಂದು ದಾರಿ ಕಾಣದಾಗ ಹತಾಶರಾಗಿ, ಹೊಸ ದಾರಿ ತೆರೆದಿರುವುದನ್ನು ನಾವು ಗಮನಿಸುವುದೇ ಇಲ್ಲ ಎನ್ನುವುದು ವಿಪರ್ಯಾಸ!
*ಅಶೋಕ್
ಉ: ಸಮಸ್ಯೆಗಳು ಅನುಭವವನ್ನು ನೀಡುವ ಪರೀಕ್ಷೆಗಳಷ್ಟೇ!
ಹೌದು. ಅಲ್ಲೇ ಮನುಷ್ಯ ದೇವರಿಗೆ ಬಯ್ಯಲು ಶುರು ಮಾಡೋದು. ಆದ್ರೆ ಅಲ್ಲಿಯವರೆಗೆ ದೇವರು ಅವನಿಗೆ ಕೊಟ್ಟ ಅನುಭವಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳದ್ದು ಅವನ ತಪ್ಪು ಅಂತ ಮರೀತಾನೆ. ಆದ್ದರಿಂದಲೇ ಕಷ್ಟಗಳು ಬೆಟ್ಟದಂತಾಗಿ ಅವನಿಗೆ ತಲೆಭಾರಗಳಾಗಿ, ಚಿಂತೆಗಳ ಸರಮಾಲೆಯನು ಕತ್ತಿಗೆ ಹಾಕಿಕೊಂಡು ಚಿತೆಯ ಹತ್ತಲು ತಯಾರಾಗುತ್ತಾನೆ.
ಉ: ಸಮಸ್ಯೆಗಳು ಅನುಭವವನ್ನು ನೀಡುವ ಪರೀಕ್ಷೆಗಳಷ್ಟೇ!
ಸಾರ್...
ಬೇಜಾರ್ ಮಾಡ್ಕೋಬೇಡಿ...
ದೇವರು ಇದ್ದಾನ, ಇಲ್ವಾ ಎಂದು ಅವರವರಿಗೇ ಅರಿತುಕೊಳ್ಳೋಕೆ ಅನುವು ಇರಬೇಕು ಅಂತ ನನ್ನ ಅನಿಸಿಕೆ.!
ನನಗೆ "ಕೆಲಸ ಮಾಡು, ಅದರ ಫಲ/ ಅದರಿಂದ ಏನಾಗುತ್ತೇ, ಲಾಬ ಎಸ್ಟು, ನಸ್ಟ ಎಸ್ಟು ಅಂತ ಯೋಚನೇ ಮಾಡಬೇಡ" ಅನ್ನೋ ಮಾತಲ್ಲಿ ನಂಬಿಕೆಯಿಲ್ಲ.
ನಮ್ಮ ಎಡರುಗಳಿಗೆ ನಾವೇ ಹೊಣೆ, ಬೇರಾರು ಅಲ್ಲ!
ಹಾಗೇ ನಮ್ಮ ಗೆಲುವುಗಳಿಗೂ ನಾವೇ ಹೊಣೆ, ಬೇರಾರು ಅಲ್ಲ. ಕೆಲ ನೆರವಿರಬೋದು. ಆದರೆ ಅದು co-incidence!
ಒಟ್ಟಿನಲ್ಲಿ "ಮಂತ್ರಗಳನ್ ಪೇಳಿದರೆ ಮಾಂಗಾಯಿಗಳು ಉದರಲ್ಲ" ಅದಕ್ಕೆ ನಾವೇ ಗುರಿಯಿಟ್ಟು ಕಲ್ಲೆಸಯಲೇ ಬೇಕು, ಹಾಗೆ ಆ ಕಲ್ಲು ನಮ್ಮ ತಲೆ ಮೇಲೆ ಬೀಳದಂತೆ ನೋಡ್ಕೋಬೇಕು. ಇಲ್ಲಿ ಮಾಂಗಾಯನ್ನು ನೋಡುವ, ಗುರಿಯಿಡುವ, ಕಲ್ಲೆಸೆಯುವ, ತಪ್ಪಿಸಿಕೊಳ್ಳುವ, ಮಾವು ತಿನ್ನುವ ಎಲ್ಲ ಹೊಣೆ ನಮ್ಮದೇ ಆಗಿರುತ್ತೆ.
- ಮಾಯ್ಸ
ಉ: ಸಮಸ್ಯೆಗಳು ಅನುಭವವನ್ನು ನೀಡುವ ಪರೀಕ್ಷೆಗಳಷ್ಟೇ!
ಕಲ್ಲೆಯೆಸದೆ ಮಾವು ಉದುರಿಸುವ ಇತರ ಮಾರ್ಗಗಳು ಇರುತ್ತವೆ ಅನ್ನುವುದನ್ನು ಮರೆತು ಕಲ್ಲೆಸೆತ ಫಲ ನೀಡಲಿಲ್ಲ ಅಂತ ಹತಾಶೆ ಬೇಡ ಅಲ್ಲವೇ? ದೇವರು ಇದ್ದಾನೋ ಅಲ್ಲವೋ ಅನ್ನುವುದು ಇಲ್ಲಿ ಪ್ರಸ್ತುತವಲ್ಲವೇನೋ?
*ಅಶೋಕ್
ಉ: ಸಮಸ್ಯೆಗಳು ಅನುಭವವನ್ನು ನೀಡುವ ಪರೀಕ್ಷೆಗಳಷ್ಟೇ!
ಅವುದವುದು.. ಒಪ್ದೆ!
- ಮಾಯ್ಸ
ಉ: ಸಮಸ್ಯೆಗಳು ಅನುಭವವನ್ನು ನೀಡುವ ಪರೀಕ್ಷೆಗಳಷ್ಟೇ!
ನಿಮ್ಮ ಭಾವನೆಗಳಿಗೆ ನನಗೆ ಗೌರವವಿದೆ. ಆದ್ರೆ ನೀವು "ನಾಸ್ತಿಕ" ತತ್ವಗಳನ್ನು ನಂಬಿದ್ದೀರ. ನಿಮಗೆ ಪ್ರಪಂಚ ಯಾವುದರ ಮೇಲೆ ನಿಂತಿದೆ ಅಂತ ಗೊತ್ತಿದೆಯ? ನನ್ನ ಪ್ರಕಾರ ಅದು ನಿಂತಿರುವುದು "ನಂಬಿಕೆ"ಯ ಭದ್ರ ಬುನಾದಿಯ ಮೇಲೆ. ನೀವು ನಂಬುವ ಮಹಾನ್ ಙ್ನಾನಿಗಳು, ವಿಙ್ನಾನಿಗಳು ಆ ನಂಬಿಕೆ ಇದ್ದಿದ್ದರಿಂದಲೇ ಅವರ ಶಂಶೋಧನೆಗಳನ್ನು ಜನರಿಗೆ ನಂಬಿಸಿದ್ದು. ನಾಸ್ತಿಕರು ಆಸ್ತಿಕರನ್ನು ಬದಲಿಸಲು ಸಾದ್ಯವಿಲ್ಲ. ಹಾಗೆ ಆಸ್ತಿಕರು ನಾಸ್ತಿಕರನ್ನು ಬದಲಿಸಲು ಸಾದ್ಯವಿಲ್ಲ. ಅವರಿಬ್ಬರಲ್ಲು ಇರುವ ಸಾಮಾನ್ಯ ಗುಣ ಅಂದರೆ "ನಂಬಿಕೆ". ನಾಸ್ತಿಕರು ಅವರನ್ನು ಮಾತ್ರ ನಂಬುತ್ತಾರೆ. ಆಸ್ತಿಕರು ದೇವರನ್ನು ನಂಬುತ್ತಾರೆ. ಆ ನಂಬಿಕೆ ಅವರು ಮಾಡುವ ಕೆಲಸದ ಮೇಲೆ ನಂಬಿಕೆಯನ್ನು ತರುತ್ತದೆ. ಅಂದರೆ ಅವರ ಮೇಲೆ ನಂಬಿಕೆ ತರುತ್ತದೆ. ಅಂದರೆ ಅವರನ್ನು ಗೆಲ್ಲಿಸುತ್ತದೆ. ನಾನಿಲ್ಲಿ ಮೇಲೆ ಬರೆದ ಭಾವನೆಗಳು "ಆಸ್ತಿಕರಿಗಾಗಿ". ನಾಸ್ತಿಕರಿಗೆ ಇವುಗಳು ಇನ್ನು ಸುಲಭ. ಅವರು ಅವರನ್ನು ಎಂದಿಗೂ ನಂಬಬೇಕು. ಅವರ ಮೇಲೆ ಆತ್ಮವಿಶ್ವಾಶವಿರಿಸಿಕೊಳ್ಳಬೇಕು. ನಂಬಿಕೆ ಇದ್ದಷ್ಟು ದಿನ ಅವರು ಗೆಲ್ಲುತ್ತಲೇ ಹೋಗುತ್ತಾರೆ. ಆದರೆ ದೊಡ್ಡ ಸಮಸ್ಯೆ ಅಂದರೆ ಅವರನ್ನು ಅವರೇ ನಂಬಲಾರದ ಪರಿಸ್ಥಿತಿಗೆ ಬಂದಾಗ! ಆಗ ಅವರನ್ನು ಕಾಪಾಡಲು ಯಾರಿಗೂ ಸಾದ್ಯವಿಲ್ಲ. ಆ ವಿಷಯದಲ್ಲಿ "ಆಸ್ತಿಕತೆ" ಮೇಲೆನಿಸಿಕೊಳ್ಳುತ್ತದೆ. ಏಕೆಂದರೆ ಅವರಿಗೆ ತಮ್ಮನು ನಂಬಲಾರದಾಗ ದೇವರಿರುತ್ತಾನೆ. ಅವನ ಮೇಲಿನ ನಂಬಿಕೆ ಅವರಿಗೆ ಒಂದಲ್ಲಾ ಒಂದು ದಿನ ಗೆಲುವಿನ ದಾರಿಯನ್ನು ತೋರುತ್ತದೆ. ಆ ನಂಬಿಕೆಯನ್ನು ಬಲಗೊಳಿಸಲೆಂದೇ ಈ ಬ್ಲಾಗ್. ಇದರಲ್ಲಿ ನಾಸ್ತಿಕರನ್ನು ಅಲ್ಲಗಳೆಯುವ ಉದ್ದೇಶವಿಲ್ಲ. ದೇವರನ್ನು ಬಲವಂತವಾಗಿ ನಂಬಿಸುವ ಉದ್ದೇಶವಂತೂ ನಿಜವಾಗಿಯೂ ಇಲ್ಲ.
ಉ: ಸಮಸ್ಯೆಗಳು ಅನುಭವವನ್ನು ನೀಡುವ ಪರೀಕ್ಷೆಗಳಷ್ಟೇ!
೧) ನಾನು "ನಾನು ನಾಸ್ತಿಕ" ಎಂದು ಹೇಳಿಕೊಂಡಿಲ್ಲ.
೨) ನಾನು ಹೇಳತೊಡಗಿದ್ದು "ಆಸ್ತಿಕ/ನಾಸ್ತಿಕ" ಬಗ್ಗೆ ಅಲ್ಲ.
ನಾನು ಹೇಳಿದ್ದು ಹೇಗೆ
೧) ದೇವರನ್ನು ನಂಬೋದು ಬಿಡೋ ಅವರವರ ಒಳಸಂಗತಿ. ಅದಕ್ಕೆ ಬೇರೆಯವರು ಇಣುಕಬಾರದು.
೨) ತೊಂದರೆಗಳಿಗೆ ದೇವರನ್ನು ಮೊರೆಹೋಗುವುದೇ ಕೊನೆಯನ್ನುವುದು ಸರಿಯಲ್ಲ. ಬದಲಿಗೆ ತೊಂದರೆಯನ್ನು ಮೆಲ್ಲಗೆ ನಾವೇ ನಮ್ಮ ಜಾಣತನದಲ್ಲಿ ಬಿಡಿಸಲು ಮೊಗಸಬೇಕು. ಇದನ್ನು ಬಿಟ್ಟು ನಮ್ಮಲ್ಲಿ ಹಲವರು ತೊಂದರೆ ಬಂತು ಎಂದು ನೇರ "ಅಯ್ಯೋ ದೇವರೇ" ಎಂದು ಓಡುವುದ ಜಾಸ್ತಿ, ಕೈಗೆರೆ ತೋರಿಸುವುದು ಜಾಸ್ತಿ, ಏನೇನೋ ಪೂಜೆ ಮಾಡಿ ದುಡ್ಡು ಹರಿಸುವುದು ಜಾಸ್ತಿ.!
- ಮಾಯ್ಸ