ಆದರ್ಶವನ್ನು ತೀರಾ ಕೆಳಗಿರಿಸುವುದು ಅಪರಾಧ. ಆದರ್ಶವನ್ನೇ ಕೆಳಗಿಳಿಸಿ ಜಯಗಳಿಸುವುದಕ್ಕಿಂತ ಉಚ್ಚ ಆದರ್ಶವನ್ನಿರಿಸಿಕೊಂಡು ಅಸಫಲಗೊಳ್ಳುವುದೇ ಮನುಷ್ಯನಿಗೆ ಶೋಭದಾಯಕ

— ವಿನೋಬಾ ಭಾವೆ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಚುಟುಕು ಬರಹ

ದೀಪದಡಿಯ ಕತ್ತಲಿನಲ್ಲಿ...

2004ರಲ್ಲಿ ಮೊದಲ ಸಲ ’ನಾಗರಹೊಳೆ’ಗೆ ಹೋಗಿಬಂದ ನಂತರ ಎಲ್ಲರೂ ಕೇಳುತ್ತಿದ್ದದ್ದು ಯಾವ ಪ್ರಾಣಿ, ಪಕ್ಷಿ, ಮರ, ಕೀಟ ನೋಡಿ ಗುರುತಿಸಿದಿರಿ ಎಂದು. ನಾನು ಒಂದೊಂದಾಗಿ ಪಟ್ಟಿಮಾಡತೊಡಗಿದೆ. ಆನೆ, ಸೀಳುನಾಯಿ, ಕಾಮಳ್ಳಿ.........ಮತ್ತು ಲೆಕ್ಕವಿಲ್ಲದಷ್ಟು ನಕ್ಷತ್ರಗಳು. ಅರೆ! ಅದರಲ್ಲೇನಿದೆ? ನಕ್ಷತ್ರಗಳನ್ನು ಇಲ್ಲಿಯೂ ನೋಡಬಹುದು ಎಂದು ಕೇಳಿದವರು ನಗುತ್ತಿದ್ದರು. ನಾಗರಹೊಳೆಯ ದಟ್ಟಕಾಡಿನಲ್ಲಿ ಒಂದು ರಾತ್ರಿ ಅರಣ್ಯ ಇಲಾಖೆಯ ವಸತಿಗೃಹದಲ್ಲಿ ಉಳಿದುಕೊಂಡಿದ್ದಾಗ ಸಿಕ್ಕ ಒಂದು ಅಪೂರ್ವ ಅವಕಾಶ. ಆ ರಾತ್ರಿ ತಲೆ ಎತ್ತಿ ನೋಡಿದಾಗ ದಂಗಾಗಿ ಹೋದೆ. ಅಬ್ಬಾ ಅದೆಷ್ಟು ನಕ್ಷತ್ರಗಳು! ಆಕಾಶದ ಇಂಚಿಂಚಿ ಬಿಡದ ಹಾಗೆ ನಕ್ಷತ್ರಗಳೇ ನಕ್ಷತ್ರಗಳು. ನನ್ನ ಜೀವಮಾನದಲ್ಲೇ ಮೊದಲಸಲ ಅಷ್ಟು ನಕ್ಷತ್ರಗಳನ್ನು ನೋಡುತ್ತಿದ್ದೆ.


ನೀವೆಂದಾದರೂ ಅಷ್ಟು ನಕ್ಷತ್ರಗಳನ್ನು ನೋಡಿದ್ದೀರಾ?  ಮುಂದೆ ಓದಿ »

ಚು(ಗು)ಟುಕು

ಅಲೆಮಾರಿ
     ನಿನ್ನೆ ನಾಳೆಗಳ ಚಿಂತೆಯಲಿ
     ಸುಳಿದಾಡುತಿಹ 'ಮನಸು' ಅಲೆಮಾರಿ
     ವರ್ತಮಾನವ ನಿನ್ನೆ ನಾಳೆಗೆ ಮಾರಿದ್ದಕ್ಕೆ
     ಶಪಿಸುತಿದೆ,ಅದೇ ಮನಸ್ಸು ಕಿಡಿಕಾರಿ


ಗೊಂದಲ
    ಯಾವಾಗಲೂ ಹೊಸತನ್ನ
    ಮಾಡಬೇಕೆನ್ನುವ ನನ್ನ ಹಂಬಲ
    ಕರಗಿ ಹೋಗುತ್ತದೆ, ಆದೊಡನೆ
    ಮನಸ್ಸು 'ಚಂಚಲ'.
    ನಿಮಗೇಕೆ? ಈ ಚಂಚಲ
    ಯಾರೆಂದು ತಿಳಿಯುವ ಚಪಲ
    ಆ 'ಚಂಚಲೆ'ಯ ಅರಿಯುವುದೇ ಒಂದು ಗೊಂದಲ.


ಬ್ಯುಟಿ
    ಏ ಬ್ಯುಟಿ .....
    ಈ ಬ್ಯುಟಿ ಕಾಯ್ದುಕೊಳ್ಳಲು
    ನೀ ಮಾಡಲೇ ಬೇಕು ನಿತ್ಯ ಮೇಕಪ್ ಡ್ಯುಟಿ
    ಅದಕ್ಕೆ ಬೇಕು ಕಾಸ್ಮೆಟಿಕ್ಸ್ ಗಳು  ಪುಟ್ಟಿ ಪುಟ್ಟಿ  ಮುಂದೆ ಓದಿ »

ಇಂದೂ ಕಾಡಿದೆ ಅಮ್ಮನ ನೆನಪು!


ಇಂದು ನನ್ನ ಹುಟ್ಟುಹಬ್ಬ. ಕೇಕ್ ಕತ್ತರಿಸುವ ವಯಸ್ಸಲ್ಲ ... ನನಗಾಗಿ ಜನರು ಸಿಹಿ ಹಂಚುವಷ್ಟು ದೊಡ್ಡ ಮನುಷ್ಯನೂ ನಾನಲ್ಲ. ಹೊಟ್ಟೆಪಾಡಿಗಾಗಿ ಹೊರದೇಶದಲ್ಲಿ ನೆಲೆಸಿರುವ ಸೀದಾಸಾದ ಭಾರತೀಯ ನಾನು. ಶವರ್’ನಿಂದ ಧುಮ್ಮಿಕ್ಕುತ್ತ ನೀರು ತಲೆಯ ಮೇಲೆ ಬೀಳುತ್ತಿದ್ದಂತೆ, ಮನಸ್ಸು ನೆನಪುಗಳ ಸಾಗರಕ್ಕೆ ಧುಮುಕಿತು. 

**
ಅಂದೂ, ನನ್ನ ಹುಟ್ಟುಹಬ್ಬದ ದಿನ. 

ಭಾರತದಲ್ಲೀಗ ಸಂಜೆಯ ಸಮಯ. ಬೆಳಗಿನ ಕಾಫೀ ಹೀರುತ್ತ ಕರೆ ಮಾಡಿದೆ. ಅಮ್ಮನ ದನಿ ಮೂಡಿ ಬಂತು. ನನ್ನ ಕರೆಗೇ ಕಾದಿದ್ದರೆಂದು ತಿಳಿದಿತ್ತು. ಲವಲವಿಕೆಯ ದನಿ ಕೇಳಿ ಸಂತಸವಾಯ್ತು. ಫೋನಿನಲ್ಲೇ ಆಶೀರ್ವಾದ ಪಡೆದೆ. ಉಭಯ ಕುಶಲೋಪರಿಯ ಮಾತುಕಥೆಗಳಾದ ಮೇಲೆ ’ಸದ್ಯಕ್ಕೆ ಬರಲು ಆಗುವುದಿಲ್ಲ ಅಲ್ಲವೇ?’ ಎಂದು ಕೇಳಿದರು. 

ಕಳೆದ ವರ್ಷ ಹೋಗಿ ಬಂದಿದ್ದೆ. ಇಲ್ಲಿ ನನ್ನ ಕೆಲಸ ಕಾರ್ಯದ ಬಗ್ಗೆ ಚೆನ್ನಾಗಿ ಅರಿವಿದ್ದ ಅಮ್ಮ, ಸಾಮಾನ್ಯವಾಗಿ ಕೇಳದ ಈ ಪ್ರಶ್ನೆ ಧಿಡೀರನೆ ಇಂದೇಕೆ ಕೇಳಿದರು ಎಂದು ಅರ್ಥವಾಗಲಿಲ್ಲ. ಇಂತಹ ಪ್ರಶ್ನೆಯನ್ನು ನನ್ನಂತೆ ಹೊರದೇಶದಲ್ಲಿ ನೆಲೆಸಿರುವವರೆಲ್ಲರೂ ಒಂದಲ್ಲಾ ಒಂದು ರೀತಿ ಕೇಳಿಯೇ ಇರುತ್ತಾರೆ. ಥಟ್ಟನೆ ಬೇರೇನೂ ಹೇಳಲಾಗದೆ ಇದ್ದುದರಿಂದ "ಪ್ರಯತ್ನ ಪಡುತ್ತೇನೆ" ಎಂದು ಮಾತ್ರ ಹೇಳಲು ಸಾಧ್ಯವಾಯಿತು. "ನೋಡಬೇಕು ಅನ್ನಿಸಿತು ಅದಕ್ಕೇ ಕೇಳಿದೆ. ತೊಂದರೆ ಮಾಡಿಕೊಳ್ಳಬೇಡ" ಅಂದರು.   ಮುಂದೆ ಓದಿ »

ಮೂರು ಘಟನೆಗಳು ... ಹೀಗೆ !

   ಮುಂದೆ ಓದಿ »

ಕನ್ನಡಿಗ ಅಭಿಮನ್ಯು ಮಿಥುನ್ ದ.ಅಫ್ರಿಕ ಸರಣೆಗೆ ಅಯ್ಕೆ...

ರಾಹುಲ್, ಭಾರಧ್ವಜ್ ನಂತರ ಯಾರು...?


ಭಾರತ ಕ್ರಿಕೆಟ್ ಲೋಕದಲ್ಲಿ ಕರ್ನಾಟಕದ ಬಗ್ಗೆ ಮೂಡಿದ ಪ್ರಶ್ನೆ ಇವು. ಅದರೆ ನೆನ್ನೆ (೨೮ ಜನವರಿ) ನೆಡೆದ ದ.ಅಫ್ರಿಕ ಟೆಸ್ಟ್ ಸರಣೆ ಅಯ್ಕೆ ಪ್ರಕ್ರಿಯೆಯಲ್ಲಿ ನಮ್ಮ ಕನ್ನಡದ ಹುಡುಗ, ಬೆಂಗಳೂರಿನ ಪೀಣ್ಯ-ದಾಸರಹಳ್ಳಿ ಯ ಪ್ರತಿಭೆ ಅಭಿಮನ್ಯು ಮಿಥುನ್ ೧೫ ಜನ ಸದಸ್ಯರ ತಂಡದಲ್ಲಿ ಅಯ್ಕೆಯಾಗಿ ಕನ್ನಡಿಗರಿಗೆ ಖುಷಿ ತಂದಿದ್ದಾನೆ. ಕೇವಲ "ಉತ್ತರ ಭಾರತ" ಮಯವಾಗಿದ್ದ ಇತ್ತೀಚಿಗಿನ ಕ್ರಿಕೆಟ್ ಅಯ್ಕೆ ಪ್ರಕ್ರಿಯೆ ನಮ್ಮ "ಕ್ರಿಶ್" ಶ್ರೀಕಂತ್ ರವರು ಬಂದ ಮೇಲೆ ದಕ್ಷಿಣದ ಮೇಲೆ ಕಣ್ಣು ಹಾಯಿಸಲು ಶುರು ಮಾಡಿದೆ. ಅದರ ಪ್ರತಿಫಲವೇ ನಮ್ಮ ಮಿಥುನಿನ ಅಯ್ಕೆ.  ಮುಂದೆ ಓದಿ »

ರಾಮಾಚಾರಿಯನ್ನು ಹಿಂಬಾಲಿಸಿದ ಚಾಮಯ್ಯ ಮೇಷ್ಟ್ರು ....

ಾಚರಿಯನ್ನು ಹಿಂಬಾಲಿಸಿದ ಚಾಮಯ್ಯ ಮೇಷ್ಟ್ರು ....
’ಚಾಮಯ್ಯ ಮೇಷ್ಟ್ರು’ ಎಂದೇ ಖ್ಯಾತರಾದ ಶ್ರೀ.ಕೆ.ಎಸ್.ಅಶ್ವಥ್ ನಮ್ಮನ್ನೆಲ್ಲ ಇಂದು ಅಗಲಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಅನಂತ ಪ್ರಾರ್ಥನೆ. ಚಿತ್ರರಂಗದ ಸಾವಿನ ಸರಪಳಿಗೆ ಮತ್ತೊಂದು ಹಿರಿಯ ಜೀವ ಸೇರ್ಪಡೆಯಾಗಿದ್ದು ವಿಷಾದನೀಯ.

'ಚಾಮಯ್ಯ ಮೇಷ್ಟ್ರು’ ಎಂದೇ ಖ್ಯಾತರಾದ ಶ್ರೀ.ಕೆ.ಎಸ್.ಅಶ್ವಥ್ ನಮ್ಮನ್ನೆಲ್ಲ ಇಂದು ಅಗಲಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಅನಂತ ಪ್ರಾರ್ಥನೆ.

ಚಿತ್ರರಂಗದ ಸಾವಿನ ಸರಪಳಿಗೆ ಮತ್ತೊಂದು ಹಿರಿಯ ಜೀವ ಸೇರ್ಪಡೆಯಾಗಿದ್ದು ವಿಷಾದನೀಯ.

ಫ್ರೆಂಡ್ ಶಿಪ್ ಜಿಹಾದ್

ಒಂದು ಆಶ್ಚರ್ಯಕರವಾದ ಸಂಗತಿ ನಿಮ್ಮ ಹತ್ತಿರ ಹಂಚಿಕೊಳ್ಳಲೇಬೇಕು. ಇದಕ್ಕೆ ಏನೆಂದು ಹೆಸರಿಡುವುದೋ ನನಗೆ ಗೊತ್ತಾಗುತ್ತಿಲ್ಲ, ಇತ್ತೀಚೆಗೆ ಬಂದ ಲವ್ ಜಿಹಾದ್ ಸಮಸ್ತ ಓದುಗರು ಕೇಳಿರಬಹುದು ಹಾಗು ತಲ್ಲಣಗೊಂಡಿರಬಹುದು . ಇದಕ್ಕೆ ಸಂಭಂದಿಸಿದ ಮತ್ತೊಂದು ಸಂಗತಿ ಎಂದರೆ ಫ್ರೆಂಡ್ ಶಿಪ್ ಜಿಹಾದ್ , ಸದ್ಯಕ್ಕೆ ಇದೆ ಸರಿಯಾದ ಪದ ಎಂದು ಅಂಬೋಣವೆ?.

ನಾನು ಕೆಲಸ ಮಾಡುತ್ತಿರುವುದು ವೈಟ್ ಫೀಲ್ಡ್ ಹತ್ತಿರವಿರುವ ಒಂದು ಖಾಸಗಿ ಕಂಪನಿಯೊಂದರಲ್ಲಿ. ಮನೆಗೆ ಕಂಪನಿಯ ಸಾರಿಗೆ ವ್ಯವಸ್ಥೆ ಇರುವುದರಿಂದ ನಮ್ಮ ವಿವಿಧ ಪ್ರಕ್ರಿಯೆಗಳಲ್ಲಿ ಕೆಲಸಮಾಡುವ ಕ್ಯಾಬ್ ಸಹೋದ್ಯೋಗಿಗಳು ಆಯಾ ಪ್ರದೇಶಕ್ಕಿರುವ ಗಾಡಿಯಲ್ಲಿಯೇ ಹೋಗಬೇಕು. ಹಾಗೆ ಹೊಸದಾಗಿ ಸೇರ್ಪಡೆಯಾದವರಲ್ಲಿ ಇಮಾಂ ಶೇಖ್ (ಹೆಸರು ಬದಲಾಯಿಸಲಾಗಿದೆ). ಮೊದ ಮೊದಲು ಸುಮ್ಮನಾಗಿದ್ದ ಅವರು ಕ್ರಮೇಣ ಮಾತಾಡಲು ಶುರುಮಾಡಿದರು, ಮುಂಬೈ ಇಂದ ಇಲ್ಲಿಗೆ ಬಂದು ಬೆಂಗಳೂರಿನಲ್ಲೇ ನೆಲೆಯೂರಿದ್ದಾರಂತೆ. ಮುಂಬೈಯಲ್ಲಿ ಖಾಸಗಿ ವ್ಯವಹಾರದಲ್ಲಿ ಕೈ ಸುಟ್ಟುಕೊಂಡು ಇಲ್ಲಿಗೆ ಬಂದು ನಮ್ಮ ಕಂಪನಿ ಗೆ ಸೇರಿಕೊಂಡರು.  ಮುಂದೆ ಓದಿ »

ಹೊಸ ವರುಷದ ಶುಭಾಶಯಗಳು.

ಸಂಪದದ ಬಂದು ಮಿತ್ರರೆಲ್ಲರಿಗೂ ಹೊಸ ವರುಷದ ಶುಭಾಶಯಗಳು.

ಹೊಸ ವರುಷವು ಎಲ್ಲಾರಿಗೂ ಹರುಷದಾಯಕವಾಗಿರಲೆಂದು ಆ ದೇವರಲ್ಲಿ ಬೇಡುತ್ತೇನೆ.

 

ಕುವೆಂಪುವವರು ಬರೆದ......

ಬಾರಿಸು ಕನ್ನಡ ಡಿಂಡಿಮವ,ಓ ಕರ್ನಾಟಕ ಹೃದಯ ಶಿವ!ಸತ್ತಂತಿಹರನು ಬಡಿದೆಚ್ಚರಿಸು;ಕಚ್ಚಾಡುವರನು ಕೂಡಿಸಿ ಒಲಿಸು.ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು;ಒಟ್ಟಿಗೆ ಬಾಳುವ ತೆರದಲಿ ಹರಸು!ಬಾರಿಸು ಕನ್ನಡ ಡಿಂಡಿಮವ,ಓ ಕರ್ನಾಟಕ ಹೃದಯ ಶಿವ!ಕ್ಷಯಿಸೆ ಶಿವೇತರ ಕೃತಿ ಕೃತಿಯಲ್ಲಿಮೂಡಲಿ ಮಂಗಳ ಮತಿಮತಿಯಲ್ಲಿ;ಕವಿ ಋಷಿ ಸಂತರ ಆದರ್ಶದಲಿಸರ್ವೋದಯವಾಗಲಿ ಸರ್ವರಲಿ!ಬಾರಿಸು ಕನ್ನಡ ಡಿಂಡಿಮವ,ಓ ಕರ್ನಾಟಕ ಹೃದಯ ಶಿವ!

   ಮುಂದೆ ಓದಿ »

Syndicate content