ಅಸಾಧ್ಯವಾದುದನ್ನು ಮಾಡುವುದೊಂದು ಮಜಾ!

— ವಾಲ್ಟ್ ಡಿಸ್ನಿ

ಸಂಪದ ಆರ್ಕೈವಿನಿಂದ

ಭಾಷೆ-ಕನ್ನಡ

ನಮ್ಮ ರಾಜ್ಯದ ಹೆಸರು 'ಕರ್ನಾಟಕ' ಅಂತ ಹೇಗೆ ಬಂತು..?

 


 


ನಮ್ಮ ರಾಜ್ಯದ ಹೆಸರು 'ಕರ್ನಾಟಕ' ಅಂತ ಹೇಗೆ ಬಂತು..?  ಆ ಶಬ್ದದಲ್ಲಿ ' ನಾಟಕ' ಅಂತ ಹೇಗೆ..?  ವಿವರಿಸಿ..

ಕೆಲವೊಬ್ರು...ಕರ್ನಾಟಕ ...ಕರ್ ನಾಟಕ್  ಎಂದು ಹಿಂದಿ ಭಾಷೆಯಲ್ಲಿ ಹಾಸ್ಯ ಮಾಡ್ತಾರೆ..:)

ಕೆಲವೊಮ್ಮೆ ರಾಜಕೀಯದ ಸಮಾಚಾರ ನೋಡುವಾಗ ಹಾಗೆ ಅನ್ನಿಸುವುದು..ನಿಜ..:)) 

 

ಕೇರಳದ ಹೆಸರು ಕೇರಳಮ್ ...  ಬದಲಾವಣೆ ಮಾಡಿದಂತೆ ನಮ್ಮ ರಾಜ್ಯದ ಹೆಸರು ಬದಲಿಸಬೇಕಾಗಿ ಬಂದರೆ ..ಯಾವ ಹೆಸರು ಸೂಕ್ತ ಅಂತ ಅಭಿಪ್ರಾಯ  ..?

ಮಾನ್ಯ ಡಾ ಎಚ್ ಎಸ್ ವಿ ಯವರ ಅಭ್ಯಾಸ ೪ ೧೧.೦೭.೨೦೧೦

ಈ ಸಾರಿಯ ಅಭ್ಯಾಸ ೪ ನಮ್ಮ ಸ್ನೇಹಿತ ಶ್ರೀ ಸುರೇಶ ಶಂಕರ ನಾರಾಯಣ ಅವರ ಮನೆ "ಧಾತ್ರಿ"ಯಲ್ಲಿ, ಬೆಳಗಿನ ಪುಷ್ಕಳ ತಿಂಡಿಯಾದ ಮೇಲೆ ಅವರ ಸುಂದರ ಸುಸಜ್ಜಿತ ಕೆಳಮಹಡಿಯಲ್ಲಿ ಅಭ್ಯಾಸದ ಆರಂಭವಾಯ್ತು







 ಮುಂದೆ ಓದಿ »

ಬ್ರಿಟಿಷ್ ಏರ್ ವೇಸ್ ವಿಮಾನದಲ್ಲಿ ಆದ ಅನುಭವ

ಮೊನ್ನೆ ನನಗೆ ಬ್ರಿಟಿಷ್ ಏರ್ವೇಸ್ ವಿಮಾನದಲ್ಲಿ ಪ್ರಯಾಣ ಮಾಡುವ ಅವಕಾಶ ದೊರಕಿತ್ತು.
ಬನವಾಸಿ ಬಳಗದ ಮಿಂಚೆಗಳಲ್ಲಿ ಓದಿದ್ದಂತೆ ಬೆಂಗಳೂರಿಗೆ ಬಂದು/ಹೋಗುವ ಎಲ್ಲ ಬ್ರಿಟಿಷ್ ಏರ್ವೇಸ್ ವಿಮಾನಗಳಲ್ಲಿ ಕನ್ನಡದಲ್ಲಿ ಪ್ರಕಟಣೆ ಹೊರಡಿಸುವುದು ತಿಳಿದಿತ್ತು.

ಲಂಡನ್ ನಿಂದ ಹೊರಡುವಾಗ ಕನ್ನಡದಲ್ಲಿ ಪ್ರಕಟಣೆ ಹೊರಡಿಸಿದರು..
ಬೇರೆ ದೇಶದ ನೆಲದಲ್ಲಿ ಎಲ್ಲ ಪ್ರಯಾಣಿಕರ ಮುಂದೆ ಕನ್ನಡದಲ್ಲಿ ಪ್ರಕಟಣೆ ಕೇಳುವುದು ನಿಜಕ್ಕೂ ಮನಸ್ಸಿಗೆ ಬಹಳ ಖುಷಿ ಕೊಟ್ಟಿತು.
ನಂತರ ಪ್ರಕಟಣೆ ಮಾಡಿದ ಗಗನಸಖಿಯನ್ನು ಮಾತನಾಡಿಸಿ ಕನ್ನಡದಲ್ಲಿ ಪ್ರಕಟಣೆ ಮಾಡಿದ್ದಕ್ಕೆ ಧನ್ಯವಾದ ಹೇಳಿ ಬಂದೆ.
ಅವನಿಗೆ ಕನ್ನಡದಲ್ಲಿ ಮಾತನಾಡಲು ಬರುವ ಕಾರಣದಿಂದಲೇ ಆ ಕೆಲಸ ಸಿಕ್ಕಿದ್ದು ಎಂದು ತಿಳಿದು ಸಂತೋಷ ಆಯಿತು..
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇರುವ ಎಲ್ಲ ಅಂಗಡಿಗಳ ಸಹಾಯಕರುಗಳಿಗೆ ಕನ್ನಡ ಮಾತನಾಡಲು ಬರುತ್ತದೆ .
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕನ್ನಡಿಗರಿಗೆ ಉದ್ಯೋಗ ಕೊಡಿಸಲು ಕರ್ನಾಟಕ ರಕ್ಷಣಾ ವೇದಿಕೆ ಮಾಡಿದ ಹೋರಾಟಕ್ಕೆ ಮನಸ್ಸಿನಲ್ಲಿ ಧನ್ಯವಾದ ಹೇಳಿ ಊರಿಗೆ ಹೊರಟೆ.

ಗೂಗಲ್ ನ್ಯೂಸ್ ನಲ್ಲಿ ಕನ್ನಡ ಹೆಂಗಪ್ಪ ಬರುತ್ತೆ?

ಗೂಗಲ್ ನ್ಯೂಸ್ ನಲ್ಲಿ ಕನ್ನಡ ನ್ಯೂಸ್ ಇಲ್ಲ ಎನ್ನುವ ಚರ್ಚೆ ಏನ್ ಗುರು ಹಾಗು ಸಂಪದ ದಲ್ಲಿ ನೆಡೆಯುತ್ತಿರುವುದು ನಿಮಗೆ ತಿಳಿದಿರಬಹುದು. ಸಂಪದ ಲೇಖನದಲ್ಲಿ ಓದುಗರಾಗಿ ನಾವು ಯಾವ ರೀತಿ ಇದನ್ನು ಸರಿಪಡಿಸಲು ಸಹಾಯ ಮಾಡಬಹುದು ಎಂದು ಚೆನ್ನಾಗಿ ಮೂಡಿಬಂದಿದೆ.
ಇಂದು ನಾವು ಪ್ರಿಯಾಂಕ್ ರವರು ಸೂಚಿಸಿರುವ ಕೆಲಸಗಳನ್ನು ಮಾಡುವುದರ ಜೊತೆಗೆ ಈ ಸಮಸ್ಯೆಯ ಮೂಲ ಕಾರಣಗಳು ಯಾವುವು ಎಂದು ಯೋಚಿಸಬೇಕಾಗಿದೆ .
1. ನಮ್ಮ ಮನೆಗಳಲ್ಲಿ ಕನ್ನಡ ಪತ್ರಿಕೆ ಹಾಗು ಕನ್ನಡ ಸಾಪ್ತಾಹಿಕಗಳನ್ನು ತರಿಸುವುದು ಅಥವಾ ಓದುವುದು ಕಡಿಮೆ ಆಗಿರಬಹುದೇ?  ಮುಂದೆ ಓದಿ »

ಕನ್ನಡದಲ್ಲಿ ಟೈಪ್ ಮಾಡಬೇಕೆ?

 ಫೇಸ್ ಬುಕ್ ನಲ್ಲಿ ಕನ್ನಡದಲ್ಲಿ ಬರೆಯಬೇಕೆ?

ಜಿ ಮೇಲ್,ಯಾಹೂ ಮೇಲ್ ನಿಂದ ಕನ್ನಡದಲ್ಲಿ ಮಿಂಚೆ ಕಳಿಸಬೇಕೆ?

ಜಿ ಟಾಕ್,ಯಾಹೂ ಮೆಸ್ಸೆಂಜರ್,ಫೇಸ್ ಬುಕ್ ಚಾಟ್ ನಲ್ಲಿ ಗೆಳೆಯರ ಜೊತೆ ಕನ್ನಡದಲ್ಲಿ ಹರಟೆ ಹೊಡೆಯಬೇಕೆ?

ಒಂದು ಒಳ್ಳೆಯ ಲೇಖನಕ್ಕೆ ಕನ್ನಡದಲ್ಲಿ ಪ್ರತಿಕ್ರಿಯೆ ನೀಡಬೇಕೆ?

ಇವುಗಳು ಹಾಗು ಅಂತರ್ಜಾಲ/ಗಣಕಯಂತ್ರದಲ್ಲಿ  ಇನ್ನಷ್ಟು ಕಡೆಗಳಲ್ಲಿ ಕನ್ನಡ ಬಳಸಲು ನಿಮ್ಮೆಲ್ಲರಿಗೆ ಅನುವಾಗುವ ಹಾಗೆ ನಾನು ಕೆಲವು ವಿಧಾನಗಳು,ತಂತ್ರಾಂಶಗಳು ಹಾಗು ವೆಬ್ ತಾಣಗಳನ್ನು ಪಟ್ಟಿ ಮಾಡಿದ್ದೇನೆ.

ನೀವು ಉಪಯೋಗಿಸಲು ಶುರು ಮಾಡಿ..ಮತ್ತು ನಿಮ್ಮ ಗೆಳೆಯರೆಲ್ಲರಿಗೂ ತಿಳಿಸಿ....
 ಮುಂದೆ ಓದಿ »

"ಹಳೇ ಬೇರು ಹೊಸ ಚಿಗುರು" - ಇದೇ ಗುರಿನುಡಿ ಹೊಂದಿದ ಲೇಖನ

"ಸಂಪದ"ದ ಗುರಿನುಡಿ "ಹಳೇ ಬೇರು ಹೊಸ ಚಿಗುರು". ಇದೇ ಗುರಿನುಡಿ ಹೊಂದಿದ ಲೇಖನ ನೋಡಿ ನನಗೆ ಈ ಗುರಿ ನುಡಿ ಆರಿಸಿದವರ ಬಗ್ಗೆ ಹೆಮ್ಮೆ ಅನ್ನಿಸಿತು.

ರಂಗಾಯಣದ ನಿರ್ದೇಶಕ ಲಿಂಗದೇವರು ಹಳೆಮನೆಯವರೊಂದಿಗೆ ಮಾತುಕತೆ: ಗುಡಿಹಳ್ಳಿ ನಾಗಾರಾಜ ಎಂಬ ಲೇಖನ ಜುಲೈ ೧ ರ "ಸುಧಾ" ವಾರಪತ್ರಿಕೆಯಲ್ಲಿ ಪ್ರಕಟವಾಗಿದೆ ಅದನ್ನು <http://sudhaezine.com/pdf/2010/07/01/20100701a_042101001.jpg >ಓದಬಹುದು.

ಫೇಸ್ ಬುಕ್ ಕನ್ನಡ ಗೊಳಿಸಲು ಸಹಕರಿಸಿ....

ನಮಸ್ಕಾರ,
 ನಿಮಗೆಲ್ಲ ತಿಳಿದಿರಬಹುದು 'ಫೇಸ್ ಬುಕ್ ' ಜಾಲತಾಣ ಹೆಚ್ಚು ಜನರನ್ನು ತಲುಪಲು ತನ್ನ ಸೇವೆಯನ್ನು ಜಗತ್ತಿನ 75ಕ್ಕೂ ಹೆಚ್ಚು ಭಾಷೆಗಳಿಗೆ ವಿಸ್ತರಿಸಿದೆ.. ಇದರಲ್ಲಿ ಕನ್ನಡವೂ ಒಂದು.ಭಾಷೆಗಳ ಅನುವಾದವನ್ನು ಫೇಸ್ ಬುಕ್ ತನ್ನ ಬಳಕೆದಾರರಿಂದಲೇ ಮಾಡಿಸುತ್ತಿದೆ.


 ಬಳಕೆದಾರರು ತಮಗೆ ಆಸಕ್ತಿಇರುವ ಭಾಷೆ ಯನ್ನು ಬಳಸಿ 'ಫೇಸ್ ಬುಕ್' ಪಟ್ಟಿ ಮಾಡಿರುವ ಪದಗಳನ್ನು ಅನುವಾದಿಸಬಹುದು ಅಥವಾ ಈಗಾಗಲೇ ಅನುವಾದಗೊಂಡಿರುವ ಪದಗಳ ಬಗ್ಗೆ ತಮ್ಮ ಅಭಿಮತ ತಿಳಿಸಬಹುದು. ಜಾಲತಾಣದ ಒಳಗಿನ ತಂತ್ರಾಂಶ ಈ ಎಲ್ಲ ಅನುವಾದಗಳನ್ನು ಮತ್ತು ಪ್ರತಿಕ್ರಿಯೆಗಳನ್ನು ವಿಮರ್ಶಿಸಿ ಸೂಕ್ತವಾದ ಅನುವಾದವನ್ನು ಆರಿಸುತ್ತದೆ. ಹೀಗೆ ಎಲ್ಲ ಫೇಸ್ ಬುಕ್ ಪದಗಳು ಅನುವಾದಗೊಂಡರೆ 'ಸಂಪೂರ್ಣ ಕನ್ನಡಮಯ ಫೇಸ್ ಬುಕ್'' ರೆಡಿ.  ಮುಂದೆ ಓದಿ »

’ಅತಿಥಿ’-’ಆಮಂತ್ರಿತ’-’ಅಭ್ಯಾಗತ’

  ’ಸಂಪದ’ದಲ್ಲೊಂದುಕಡೆ ಮಿತ್ರ ವೆಂಕಟೇಶಮೂರ್ತಿ ಅವರು ನನ್ನನ್ನು ಈ ಕೆಳಗಿನಂತೆ ಪ್ರಶ್ನಿಸಿದರು:

<ಆಹ್ವಾನ ಪತ್ರಿಕೆಯಲ್ಲಿ "ಅತಿಥಿಗಳು" ಎ೦ದು ಬಳಸುವ ಬಗ್ಗೆ..
"ಅತಿಥಿಗಳು" ಅ೦ದರೆ ಕರೆಯದೇ ಬರುವವರು ಎ೦ಬ ಅರ್ಥ ಬರುವುದಿಲ್ಲವೇ?
"ಅಭ್ಯಾಗತರು" ಎ೦ಬ ಪದದ ಬಳಕೆ ಸರಿಯಲ್ಲವೇ? "ಅತಿಥಿಗಳು" ಅಥವಾ "ಅಭ್ಯಾಗತರು" ಯಾವುದು ಸರಿ?>

  ಅವರ ಈ ಪ್ರಶ್ನೆಯನ್ನು ನಾನು ಗಮನಿಸುವ ಮೊದಲೇ ಮಿತ್ರ-ವಿದ್ವಾಂಸ ನಾ. ಸೋಮೇಶ್ವರ ಅವರು ಗಮನಿಸಿ ಈ ಕೆಳಗಿನಂತೆ ಉತ್ತರಿಸಿದರು:

<ಅತಿಥಿಗಳು = ತಿಥಿಯನ್ನು ನೋಡದೆ ಬರುವವರು; ಮೂಲ ಅರ್ಥ ಹಠಾತ್ತಾಗಿ ಮನೆಗೆ ಬರುವ ಬಂಧುಮಿತ್ರರು; ಈಗ ಈ ಶಬ್ಧದ ಅರ್ಥ ಆಮಂತ್ರಣ ಸಹಿತ ಅಥವ ಆಮಂತ್ರಣ ರಹಿತ ಬರುವ ವ್ಯಕ್ತಿಗಳು ಎಂದು ಹಿಂಜಲಾಗಿದೆ. ವಾಡಿಕೆಯಲ್ಲಿ ‘ಆಮಂತ್ರಣವನ್ನು ಪಡೆದು ಬಂದವರು’ ಎಂಬರ್ಥದಲ್ಲಿಯೇ ಹೆಚ್ಚು ಪ್ರಯೋಗವಾಗುತ್ತಿದೆ.

ಅಭ್ಯಾಗತರು=ಇದರ ಅರ್ಥವನ್ನು ಯಾರೂ ಹಿಂಜಿಲ್ಲ. ಆಮಂತ್ರಣವಿಲ್ಲದೆ ಮನೆಗೆ ಬರುವ ವ್ಯಕ್ತಿ ಎಂಬುದು ಸರಿಯಾದ ಅರ್ಥ.  ಮುಂದೆ ಓದಿ »

ಇಡೀ ಬಾಟ್ಳಿ ಖಾಲಿ



ಒಮ್ಮೆ ಶೀನ ನಮ್ಮ ಮಲೆಯಾಳೀ ಪಂಡಿತರಲ್ಲಿಗೆ ಹೋಗಿದ್ದ.
"ಹೋಯ್ ಪಂಡಿತರೇ ನಂಗೆ ಸಲ್ಪ ತಾಕತ್ ಬಪ್ಪೂಕೆ ಎಂತಾದ್ರೂ ಕೊಡಿ"
ಪಂಡಿತರು ಒಂದ ಬಾಟ್ಲಿ ಚ್ಯವನಪ್ರಾಶ ಕೊಟ್ಟ ದಿನಕ್ಕೆಳ್ಡ ಸಲ ತಕ್ಕಂಬ್ಕ್ ಹೇಳ್ದ್ರ.

ಸಾಯಂಕಾಲ ಅವ್ನ ಮನಿ ಹತ್ರ ಹೋದ್ರೆ "  ಎಲ್ಲಾ ಶೀನ?"
ಅವ್ನ ಮಗ ಅಂದ " ಅವ್ರ ಆಗ್ಲಿಂದ ಬಾವಿಯೊಳ್ಗೆ ಕೂತ್ಕಂಡಿರೇ"
"ಹೌದಾ........ ?
ಇವ್ರ ಬಾವಿಯಗೆ ಇಣ್ಕಿ ಕೇಂಡ್ರ"  ಯಾಕಾ? ಶೀನಾ ಅಲ್ಯಾಕೆ ಕೂಕಂಡದ್ದ್?"
ಎಂತ ರುಚಿ ಇತ್ತ ಮರ್ರಯ್ರೇ ,  ಬಾಟ್ಳಿ ಖಾಲಿಯಾದ್ದೇ ಗೊತ್ತಾಯ್ಲಿಲ್ಲ,
ಆದ್ರೆ ತಿಂದಮ್ಯಾಲೆ ಮೈಯೆಲ್ಲಾ ಎಂತಾ ಉರಿ ಅಂತ್ರೀ
ಅದಕ್ಕೇ  ನೀರಡಿ ಕೂತ್ಕಂಡಿದ್ದೆ!!!!!..
!!!!!!!!!!!!!!!!!!!!!!!!!!!!
ಪಂಡಿತರ ಮಾತ್ ಶುರು ಆಪುದ್ರೊಳ್ಗೇ ಶೀನ
"ಅಲ್ಲ!!!ಹೋಯ್ ಪಂಡಿತರೇ!!! ಹಂಗಾರೆ ಇನ್ನೊಂದ್ ಬಾಟ್ಳಿ ಏಗ್ಳಿಕೆ ಕೊಡ್ತ್ರಿ ??????

ಶೀನ ಶೀನನೇ!!!!

ಅಕ್ಷರ ಕಡಿತಕ್ಕೆ ತಮಿಳು ಮಾದರಿ?

ಈ ವಾರ ಮಾರುಕಟ್ಟೆಗೆ ಬಂದಿರುವ ನನ್ನ " ಕನ್ನಡಕ್ಕೇಕೆ ಶಂಕರ ಬಟ್ಟರ ಕತ್ತರಿ? " ಎಂಬ ಪುಸ್ತಕದ ಕೆಲವು ಭಾಗಗಳು.

ಅಕ್ಷರ ಕಡಿತಕ್ಕೆ ತಮಿಳು ಮಾದರಿ?

ಹಿರಿಯ ಭಾಷಾವಿದ್ವಾಂಸರಾದ ಡಾ. ಡಿ. ಎನ್. ಶಂಕರ ಭಟ್ಟರು ಈಚಿನ ವರ್ಷಗಳಲ್ಲಿ" ಹೊಸ ಕನ್ನಡ"ವನ್ನು ಪ್ರತಿಪಾದಿಸುತ್ತಿದ್ದಾರೆ. ಕನ್ನಡದ ಅಕ್ಷರಗಳನ್ನು ಕಡಿಮೆ ಮಾಡಬೇಕು ಹಾಗೂ ಸಂಸ್ಕೃತದಿಂದ ಬಂದ ಪದಗಳನ್ನು ಬಿಟ್ಟುಬಿಡಬೇಕು ಎನ್ನುವುದು ಅವರ ವಾದದ ಮುಖ್ಯಾಂಶ. ಅವರ ಇತ್ತೀಚಿನ ಪುಸ್ತಕಗಳು ಅವರದೇ ಆದ ಹೊಸ ಕನ್ನಡದಲ್ಲಿ ಬರುತ್ತಿವೆ.

ಪರಂಪರೆ ಮತ್ತು ಸಂಸ್ಕೃತಿಗಳ ಬಗ್ಗೆ ಡಿ.ಎನ್.ಎಸ್. ಬರಹಗಳಲ್ಲಿ ವ್ಯಕ್ತವಾಗುವ ನಿಲುವೇನು ಎಂದು ನೋಡಬೇಕು. ಅವರು ಒಂದೆಡೆ ಸ್ವಾಭಿಮಾನ, ಸ್ವಸಂಸ್ಕೃತಿ ಬಗ್ಗೆ ಮಾತಾಡುತ್ತಾರೆ; ಇನ್ನೊಂದೆಡೆ ವ್ಯಾವಹಾರಿಕ ಪ್ರಯೋಜನಗಳ ಬಗ್ಗೆ ಮಾತಾಡುತ್ತಾರೆ.ಇನ್ನೊಂದೆಡೆ ವರ್ತಮಾನ ಕಾಲವನ್ನೂ ಈಚಿನ ಕೆಲ ಶತಮಾನಗಳ ಇತಿಹಾಸವನ್ನೂ ನಿರಾಕರಿಸುತ್ತಾರೆ.

ತಮಿಳನ್ನು ಅನುಸರಿಸುವುದೇ ಕನ್ನಡದ ಸಂಸ್ಕೃತಿಯನ್ನು ಹಾಗೂ ಸೊಗಡನ್ನು ಉಳಿಸುವ ದಾರಿ ಎಂದು ಡಾ.ಡಿ.ಎನ್.ಎಸ್. ಹೇಳುತ್ತಾರೆ. ಆರ್. ಗಣೇಶ್ ಹೇಳುವಂತೆ , ಈ ಸುಧಾರಣೆಯು " ಒಂದು ಶತಾಬ್ಧಿಗೂ ಮುನ್ನ ತಮಿಳುನಾಡಿನಲ್ಲಿ ವೀರ ತಮಿಳರು ನಡೆಸಿದ ಅವಿಚಾರಿತ ಸುಧಾರಣೆಯ ಸವಕಲು ಅನುಕರಣೆಯೆಂಬುದನ್ನು ಬಲ್ಲವರೆಲ್ಲ ಬಲ್ಲರು.ಇಷ್ಟಾಗಿಯೂ ತಮಿಳು ಜಾಗತಿಕ ಸ್ತರದಲ್ಲಿ ತಾನೊಂದು ಭಾಷೆಯಾಗಿ ಏನನ್ನೂ ಸಾಧಿಸಲಾಗಲಿಲ್ಲ.ತಮಿಳರಿಗೆ ಜೀವಿಕೆಯ ಅನಿವಾರ್ಯತೆಯಿಂದ ವ್ಯವಹಾರಮಾತ್ರಕ್ಕಾಗಿ ಕಲಿಯಬೇಕಾಗಿ ಬರುವ ಇನ್ನಿತರ ಭಾಷೆಗಳನ್ನರಿಯಲೂ ಅದು ಸಹಕಾರಿಯಾಗಿಲ್ಲ." ಕೆ.ವಿ.ತಿರುಮಲೇಶ್ ಅವರು ಕೂಡ ತಮಿಳರ ಈ ಮಾದರಿ ಕನ್ನಡಕ್ಕೆ ಅನುಸರಣಯೋಗ್ಯವಲ್ಲ ಎಂದು ತುಂಬ ಸ್ಪಷ್ಟವಾಗಿಯೇ ಹೇಳಿದ್ದಾರೆ.  ಮುಂದೆ ಓದಿ »

Syndicate content