ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ ।
ಚಿನ್ನದಾತುರಕಿಂತ ಹೆಣ್ಣುಗಂಡೊಲವು ।।
ಮನ್ನಣೆಯ ದಾಹವೀಯೆಲ್ಲಕಂ ತೀಕ್ಷ್ಣತಮ ।
ತಿನ್ನುವುದದಾತ್ಮವನೆ -- ಮಂಕುತಿಮ್ಮ ।।

— -ಡಿ.ವಿ.ಜಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಭಾಷೆ-ಕನ್ನಡ

ಸ್ಲಂನಲ್ಲಿ ಕನ್ನಡ ಲಿನಕ್ಸ್ ಬಿಡುಗಡೆ

ಸ್ಲಂನಲ್ಲಿ  ಕನ್ನಡ ಲಿನಕ್ಸ್ ಬಿಡುಗಡೆ

 ಗೋಡೆಯ ಈಚೆ  ಹೊಸ ಗುರುಪನಪಾಳ್ಯ  ಸ್ಲಂ. ಗೋಡೆಯ ಆಚೆ ಜಗತ್ತಿನ ಅತಿ ದೊಡ್ಡ ಕಂಪ್ಯೂಟರ್ ಕಂಪನಿ - ಐಬಿಎಂ. ಆದರೆ ಕನ್ನಡ ಲಿನಕ್ಸ್ ಸಾಫ್ಟ್ ವೇರ್ ಬಿಡುಗಡೆ  ಈಚೆ ಸ್ಲಂನ ಅಂಬೇಡಕರ ಸಮುದಾಯ ಕಂಪ್ಯೂಟರ್ ಕೇಂದ್ರದಲ್ಲಿ. ಈ ವಿಶಿಷ್ಟ ರೀತಿಯ ಬಿಡುಗಡೆ ಹಮ್ಮಿಕೊಂಡದ್ದು ಕರ್ನಾಟಕ ಸ್ವತಂತ್ರ ತಂತ್ರಾಂಶ  ಆಂದೋಲನದ (ಎಫ್.ಎಸ್.ಎಂ.ಕೆ.) ಸ್ವಯಂಸೇವಕರು. ಈ ವಿಪರ್ಯಾಸದತ್ತ ಗಮನ ಸೆಳೆದವರು ಕನ್ನಡ ಲಿನಕ್ಸ್ ಬಿಡುಗಡೆ ಮಾಡಿ ಮಾತನಾಡಿದ ಹೊಸತು  ಸಂಪಾದಕ ಡಾ. ಜಿ. ರಾಮಕೃಷ್ಣ.  ಮುಂದೆ ಓದಿ »

ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಸಮ್ಮೇಳನ : ಹೇಗಿರಬೇಕು, ಹೇಗಿವೆ?

  ಇಂದಿನಿಂದ ಮೂರು ದಿನಗಳ ಕಾಲ ಗದಗ ನಗರದಲ್ಲಿ ’೭೬ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ’ನಡೆಯಲಿದೆ. ಸಮ್ಮೇಳನದ ಅಧ್ಯಕ್ಷತೆಯ ಅವಕಾಶ ನಾಡೋಜ ಗೀತಾ ನಾಗಭೂಷಣ ಅವರಿಗೆ ಲಭಿಸಿದೆ. ಈ ಸಂದರ್ಭದಲ್ಲಿ, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಸಾಹಿತ್ಯ ಸಮ್ಮೇಳನ ಇವು ಹೇಗಿವೆ, ಹೇಗಿರಬೇಕು ಎಂಬುದನ್ನು ಕುರಿತು ಒಂದು ಮಂಥನ ಈ ಲೇಖನ.
  ಚಂದ್ರಶೇಖರ ಪಾಟೀಲರು (’ಚಂಪಾ’) ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ದಿನಗಳಲ್ಲಿ ಆ ಸಂಸ್ಥೆಯು ’ಕನ್ನಡ ಚಳವಳಿ ಪರಿಷತ್ತು’ ಆಗಿ ವಿಜೃಂಭಿಸಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ನಾಡು-ನುಡಿಗಾಗಿ ಇಂದು ಚಳವಳಿಗಳು ಅನಿವಾರ್ಯವಾಗಿರುವುದು ದಿಟವಾದರೂ, ’ಕಸಾಪ’ದಂಥ ಸಾಹಿತ್ಯ ಸಂಘಟನೆಯ ಅಧ್ಯಕ್ಷರು ಸಾಹಿತ್ಯಕ್ಕಿಂತ ಚಳವಳಿ, ಹೋರಾಟಗಳಿಗೇ ಹೆಚ್ಚು ಆದ್ಯತೆ ನೀಡುತ್ತಿದ್ದಾರೆಂಬ ಅಭಿಪ್ರಾಯ ಕೆಲ ವಲಯಗಳಲ್ಲಿ ಉಂಟಾಗಿ ಅದರಿಂದಾಗಿ ಪರಿಷತ್ತಿನ ಕರ್ತವ್ಯದ ಬಗ್ಗೆಯೇ ಆ ದಿನಗಳಲ್ಲಿ ಹಲವರಲ್ಲಿ ಗೋಜಲು ಸೃಷ್ಟಿಯಾಗಿತ್ತು. ’ಸಾಹಿತ್ಯ ಪರಿಷತ್ತು ಸಾಹಿತ್ಯದ ಕೆಲಸ ಬಿಟ್ಟು ಬೇರೆಲ್ಲ ಕೆಲಸಗಳನ್ನೂ ಮಾಡುತ್ತಿದೆ’ ಎಂಬ ಅಸಮಾಧಾನವೂ ಕೆಲವು ಸಾಹಿತಿಗಳಲ್ಲಿ ಹಾಗೂ ಸಾಹಿತ್ಯಪ್ರೇಮಿಗಳಲ್ಲಿ ಮನೆಮಾಡಿತ್ತು. ’ಕಸಾಪ’ದ ಹೆಸರನ್ನು ’ಕನ್ನಡ ಸಂಸ್ಕೃತಿ ಪರಿಷತ್ತು’ ಎಂದು ಬದಲಾಯಿಸಬೇಕೆಂದು ಎಂ.ಎಂ.ಕಲಬುರ್ಗಿ ಅವರು ಪರಿಷತ್ತಿನದೇ ಸಮಾರಂಭವೊಂದರಲ್ಲಿ ಅರ್ಥಗರ್ಭಿತ ಸಲಹೆ ನೀಡಿದ್ದರು. (ಕೆಲ ಪತ್ರಿಕೆಗಳಲ್ಲಿ ಪ್ರಕಟಗೊಂಡಂತೆ ಅವರು ಇತ್ಯಾತ್ಮಕವಾಗಿ ಆ ರೀತಿ ಸಲಹೆ ಮಾಡಿದ್ದಲ್ಲ. ನೊಂದು ನುಡಿದದ್ದು. ಅಂದು ಅವರೊಡನೆ ವೇದಿಕೆ ಹಂಚಿಕೊಂಡಿದ್ದ ನಾನು ಅವರ ಭಾಷಣವನ್ನು ಸಂಪೂರ್ಣ ಆಲಿಸಿದ್ದೇನೆ.)
  ಸಾಹಿತ್ಯವಲಯದ ಈ ಅಸಮಾಧಾನವನ್ನು ನಿವಾರಿಸುವ ಕೆಲಸವನ್ನು ಪರಿಷತ್ತು ಇಂದು ಮಾಡಬೇಕಾಗಿದೆ. ಸಾಹಿತ್ಯ ಪರಿಚಾರಿಕೆಯೇ ಸಾಹಿತ್ಯ ಪರಿಷತ್‌ನ ಮುಖ್ಯ ಕೆಲಸವಾಗಬೇಕಾಗಿದೆ.  ಮುಂದೆ ಓದಿ »

ರಾಜಕೀಯ


ಸಾಕಾಗಿದೆ ನೋಡಿ ರಾಜಕೀಯ

 ರಾವಣ

 ಜರಾಸ೦ದ

 ಕೀಚಕ

 ಯ

ಮನೆಯಿ೦ದ ಮಠದ ತನಕ
ಸಾಮನ್ಯನಿ೦ದ ಸಾಮ್ರಾಜ್ಯದ ತನಕ
ಮಾಡುವರು ರಾಜಕಾರಣ
ರಾಜರಿಗೆ ಕಾರಣವಿಲ್ಲ
ಕಾರಣವಿದ್ದವರು ರಾಜರಲ್ಲ

ಒಡೆದದ್ದು ರಾಜ್ಯಗಳನ್ನಲ್ಲ
ಜನರ ಮನಸನ್ನು
ಅಡಗಿಸಿದ್ದು ಬಿನ್ನಮತವನ್ನಲ್ಲ
ನ೦ಬಿದವರ ಸನ್ಮತವನ್ನು.

ಹೇಳುವರು ಐಖ್ಯತೆಯ ಗಾನ
ಮುಚ್ಚಿಡುತ್ತಾ ಕಳೆದು ಹೋದ ಮಾನ
ಹೋಗುತ್ತಿದೆ......
ಬತ್ತಲಾಗುತ್ತಿದೆ.......
ಕೊಗಿಕೊ೦ಡರೂ........


ಆದರೇ ಎಲ್ಲರೂ....ಕುರುನೄಪಾಲರು
ಎಲ್ಲರೂ.....ದೄತರಾಷ್ಟ್ರರು
ಅನಿಸುತಿದೆ,
” ಧರ್ಮ ಸ೦ಸ್ಥಾಪನಾರ್ಥಾಯಾ.................”

ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ: ಹಾಗೆಂದರೇನು?

(ಕೆಲವು ತಿಂಗಳ ಕೆಳಗೆ ಮುಂಬಯಿಯ ಕನ್ನಡ ಸಂಸ್ಥೆಯೊಂದರ ಮಾಸಪತ್ರಿಕೆಗಾಗಿ ಬರೆದ ಲೇಖನ)

 2008ರ ಅಕ್ಟೋಬರ್‍ ೩೧ರಂದು ಕೇಂದ್ರದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆಯ ಅಂದಿನ ಸಚಿವೆ, ಅಂಬಿಕಾ ಸೋನಿ ಒಂದು ಅಧಿಕೃತ ಹೇಳಿಕೆಯಲ್ಲಿ ಕನ್ನಡ ಮತ್ತು ತೆಲುಗು ಭಾಷೆಗಳನ್ನು ಕೇಂದ್ರ ಸರಕಾರವು “ಶಾಸ್ತ್ರೀಯ ಭಾಷೆ” ಎಂದು ಪರಿಗಣಿಸಿರುವುದಾಗಿ  ಘೋಷಿಸಿದರು. ಕರ್ನಾಟಕ ಮತ್ತು ಆಂಧ್ರ ಪ್ರದೇಶ ರಾಜ್ಯಗಳು ತಮ್ಮ ತಮ್ಮ ರಾಜ್ಯೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ (ನವೆಂಬರ್‍ ೧) ಈ ಘೋಷಣೆ ಹೊರಬಂದಿತ್ತು. ಇದರೊಂದಿಗೆ ಶಾಸ್ತ್ರೀಯ ಸ್ಥಾನಮಾನಕ್ಕೆ ಒತ್ತಾಯಿಸುತ್ತಿದ್ದ ಕರ್ನಾಟಕ ಮತ್ತು ಆಂಧ್ರದ ಜನತೆಯ ಪ್ರಯತ್ನ ಅಂತೂ ಫಲ ಕೊಟ್ಟಿತು. ಆದರೂ ಅದಕ್ಕೊಂದು ಕೊಕ್ಕೆ ಇತ್ತು .ಕನ್ನಡ ಮತ್ತು ತೆಲುಗು ಭಾಷೆಗಳಿಗೆ ಶಾಸ್ತ್ರೀಯ ಸ್ಥಾನ ನೀಡುವುದರ ವಿರುದ್ಧ ಚೆನ್ನೈ ಉಚ್ಚ ನ್ಯಾಯಾಲಯದಲ್ಲಿ ನಡೆಯುತ್ತಿರುವ ಮೊಕದ್ದಮೆಯ ತೀರ್ಮಾನಕ್ಕೆ ಸರಕಾರದ ಈ ನಿರ್ಣಯ ಬದ್ಧವಾಗಿತ್ತು.

 ಶಾಸ್ತ್ರೀಯ ಭಾಷೆ ಸ್ಥಾನಮಾನ ಎಂಬುದು ನಮ್ಮಲ್ಲಿ ಹೆಚ್ಚು ಹೆಚ್ಚು ಕೇಳಿ ಬಂದಿರುವುದು ಕಳೆದ ಐದು ವರ್ಷಗಳಲ್ಲಿ ಮಾತ್ರ. ಶಾಸ್ತ್ರೀಯ ಭಾಷೆ ಎಂದರೇನು ? ಆದಕ್ಕೇಕೆ ಇಷ್ಟು ಸ್ಥಾನಮಾನ?.  ಮುಂದೆ ಓದಿ »

ಬಳಕೆಗೆ ಬರದ ಮುದ್ರಣ ಪದ್ಧತಿ

`ಕನ್ನಡ ಬಾವುಟ' ಕವಿತೆಯನ್ನು ಕರ್ಣಾಟಕ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ `ಕನ್ನಡ ಬಾವುಟ' (೧೯೩೮) ಕೃತಿಯಲ್ಲಿ ನೋಡಬಹುದು. ಅದರ ಚಿತ್ರವನ್ನು ಇಲ್ಲಿ ಲಗತ್ತಿಸಿದ್ದೇನೆ.

ಮುದ್ರಣ ಹೊಸ ರೀತಿ ಇದೆಯಲ್ಲವೇ? ಈ ಮಾರ್ಪಾಡುಗಳ ಪ್ರಸ್ತಾಪ ಪುಸ್ತಕದ ಮುನ್ನುಡಿಯಲ್ಲಿದೆ. ಈ ಮಾರ್ಪಾಡುಗಳನ್ನು ಬಳಸಿ ಮುದ್ರಿತವಾಗಿರುವ ಉದಾಹರಣೆ ಅದು.

ಕನ್ನಡ ಬರವಣಿಗೆಯಲ್ಲಿ ಈಗಿರುವ ಅಕ್ಷರ ಸಂಯೋಜನೆಯ ಕ್ರಮ ಹಲವು ದೃಷ್ಟಿಯಿಂದ, ಅದರಲ್ಲೂ ಮುದ್ರಣ ದೃಷ್ಟಿಯಿಂದ, ಬಲು ತೊಡಕಾದ್ದುದೆಂದೂ ಯಾವ ರೀತಿಯಿಂದಲಾದರೂ ಕೊಂಚಮಟ್ಟಿಗಾದರೂ ತೊಡಕು ಬಿಡಿಸಿ ಸರಳಮಾಡಬೇಕೆಂದು ಕರ್ಣಾಟಕ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಏರ್ಪಟ್ಟಿದ್ದ ಒಂದು ಸಮಿತಿ ಸೂಚಿಸಿದ್ದ ಮಾರ್ಪಾಡುಗಳು ಮೂರು:(೧) ದೀರ್ಘ ಚಿಹ್ನೆಯನ್ನು ಎಲ್ಲ ಕಡೆಯೂ ಒಂದೇ ಬರೆಯುವುದು (೨) ಒತ್ತಕ್ಷರವನ್ನು ಬಿಡಿಸಿ ಪಕ್ಕದಲ್ಲಿ ಬರೆಯುವುದು (೩) ಎಲ್ಲಾ ಮಹಾಪ್ರಾಣ ಚಿಹ್ನೆಗಳನ್ನೂ ಅಲ್ಪ ಪ್ರಾಣ ಚಿನ್ಹೆಗಳ ಹೊಕ್ಕಳು ಸೀಳಿಯೆ ಮಾಡಿಕೊಳ್ಳುವುದು.

 ಆ ಬದಲಾವಣೆಗಳು ಬಳಕೆಗೆ ಬರಲೇ ಇಲ್ಲ.  ಮುಂದೆ ಓದಿ »

ಪದಜಿಜ್ಞಾಸು ಮಿತ್ರರಿಗಿದೋ ಉತ್ತರ

  ’ಸಂಪದ’ದಲ್ಲಿ ಈಚೆಗೆ ನಾನು ಪ್ರಕಟಿಸಿರುವ ’ಗ್ರಹಚಾರ್ಯ’ ಮತ್ತು ’ತರಕಲಾಂಡಿ ಇತ್ಯಾದಿ’ ಬರಹಗಳಿಗೆ ಪ್ರತಿಕ್ರಿಯೆ ವ್ಯಕ್ತಪಡಿಸುತ್ತ ಕೆಲ ಮಿತ್ರರು ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ, ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಆ ಪ್ರಶ್ನೆಗಳಿಗೆ ಮತ್ತು ಬೇಡಿಕೆಗಳಿಗೆ ಉತ್ತರವಾಗಿ ಈ ಬರಹ.

  ’ಭಾವಜೀವಿ’ ಹರಿಹರಪುರ ಶ್ರೀಧರ ಅವರು ’ಭಾಷಾಜೀವಿ’ಯಾದಾಗ ಅವರಿಗೆ ’ಹೆದರುಪುಕ್ಕಲ’; ’ಬಿಕನಾಸಿ’ ಈ ಪದಗಳು ವಿಚಿತ್ರವಾಗಿ ಕಂಡಿವೆ. ’ಹೆದರುಪುಕ್ಕಲ’ ಎಂದು ಬಳಸಲಾಗುತ್ತಿರುವ ಪದವು ದ್ವಿರುಕ್ತಿಯಲ್ಲವೆ ಎಂಬ ಅನುಮಾನ (ಸಹಜವಾಗಿಯೇ) ಅವರನ್ನು ಕಾಡಿದೆ.
  ’ಹೆದರುಪುಕ್ಕಲ’ ಎಂಬ ಬಳಕೆ ದ್ವಿರುಕ್ತಿ ಹೌದು. ’ಪುಕ್ಕಲು’ ಎಂದರೆ ’ಹೇಡಿತನ; ಅಂಜಿಕೆ; ಹೆದರಿಕೆ’ ಎಂದರ್ಥ. ಆದ್ದರಿಂದ ’ಹೆದರುಪುಕ್ಕಲ’ ಎಂಬುದು ಸಹಜವಾಗಿಯೇ ದ್ವಿರುಕ್ತಿಯಾಗುತ್ತದೆ.  ಮುಂದೆ ಓದಿ »

ಅದು ಪಾದದೆಚ್ಚರ, ಇದು ಪದದೆಚ್ಚರ

  ಹಿಂದೆ ರಾಜಮಹಾರಾಜರ ಕಾಲದಲ್ಲಿ, ಆಸ್ಥಾನಕ್ಕೆ ರಾಜರು ಬರುವಾಗ ಅವರ ಪಕ್ಕದಲ್ಲಿ ಒಬ್ಬ ಸೇವಕ ಇರುತ್ತಿದ್ದ. ಅವನನ್ನು ’ಪಾದದೆಚ್ಚರದವನು’ ಎಂದು ಕರೆಯಲಾಗುತ್ತಿತ್ತು. ನಡೆದು ಬರುವಾಗ ದೊರೆಯು ಯಾವ ಕಾರಣಕ್ಕೂ ಕೆಳಗೆ ದೃಷ್ಟಿ ಹಾಯಿಸದೆ ನೇರ ಎದುರುಗಡೆ ನೋಡುತ್ತಲೇ ನಡೆಯುವುದು ಪದ್ಧತಿಯಾಗಿತ್ತು. ಕೆಳಗೆ ನೋಡಲು ತಲೆತಗ್ಗಿಸುವುದು ರಾಜನ ಘನತೆಗೆ ಕುಂದೆಂದು ಭಾವಿಸಲಾಗುತ್ತಿತ್ತು. ಆಸ್ಥಾನದಲ್ಲಿ ನೆರೆದ ಪ್ರಜೆಗಳೆದುರು ರಾಜನೆಲ್ಲಾದರೂ ಅವನತಮುಖಿಯಾಗುವುದೇ?

  ಹಾಗೆ ರಾಜನು ನೇರ ನೋಡುತ್ತ ನಡೆಯುತ್ತಿದ್ದಾಗ, ಅವನ ಕಾಲಿನ ಬುಡದಲ್ಲಿ ಮೆಟ್ಟಿಲು ಎದುರಾಯಿತೆಂದರೆ ಆಗ ಪಕ್ಕದ ಆ ಸೇವಕ, ’ಪಾದದೆಚ್ಚರ’, ಎಂದೊಮ್ಮೆ ಧ್ವನಿ ಹೊರಡಿಸಿ ದೊರೆಯನ್ನು ಎಚ್ಚರಿಸುತ್ತಿದ್ದ. ಆಗ ದೊರೆಯು ಕೆಳಗೆ ನೋಡದೆಯೇ ಕಾಲಿನಿಂದಲೇ ನೆಲ ಸವರುತ್ತ ಮೆಟ್ಟಿಲನ್ನು ಗುರುತಿಸಿ ಎಚ್ಚರಿಕೆಯಿಂದ ಮುಂದಿನ ಹೆಜ್ಜೆ ಇಡುತ್ತಿದ್ದ. ಇದು ಪಾದದೆಚ್ಚರ.
 ಮುಂದೆ ಓದಿ »

’ತರಕಲಾಂಡಿ’ ಇತ್ಯಾದಿ

  ’ಸಂಪದ’ದಲ್ಲಿ ನಾನು ಪ್ರಕಟಿಸಿರುವ (ಅಪ)ಹಾಸ್ಯಕವನ ’ಗ್ರಹಚಾರ್ಯ’ಕ್ಕೆ ಪ್ರತಿಕ್ರಿಯೆ ನೀಡುತ್ತ, ಮಿತ್ರದ್ವಯರಾದ ಎಚ್.ಎಸ್.ಪ್ರಭಾಕರ ಮತ್ತು ಚೈತನ್ಯ ಭಟ್ ಇವರು ಶಬ್ದಜಿಜ್ಞಾಸೆ ನಡೆಸಿದ್ದಾರೆ. ಎಚ್ಚೆಸ್ಸ್ ಅವರ ’ಥರಕಲಾಂಡಿ’ ಎಂಬ ಪದಪ್ರಯೋಗ ಕಂಡು ಭಟ್ಟರು, ’ಅದು ಥರಕಲಾಂಡಿನೋ? ತಡಕಲಾಂಡಿನೋ?’ ಎಂದು ತಿಳಿಯಬಯಸಿದ್ದಾರೆ. ಭಟ್ಟರ ಪ್ರಶ್ನೆಗೆ ಈ ಶಾಸ್ತ್ರಿಯ ಉತ್ತರ ಇಂತಿದೆ:

  ’ತರಕಲಾಂಡಿ’ ಎಂಬುದು ಸೂಕ್ತ ಪ್ರಯೋಗ. ’ತರಕಲು’ ಎಂದರೆ ’ಒರಟು’ ಎಂದರ್ಥ. ’ತರಕಲಾಂಡಿ’ ಎಂದರೆ ’ಒರಟ’.

  ’ತರ್‍ಕಟ್ಲಾಂಡಿ’ (’ತರ್ಕಟ್ಲಾಂಡಿ’) ಎಂಬ ಪದಪ್ರಯೋಗವೂ ಇದೆ. ’ತರಕಟಾಲು’ ಎಂದರೆ ’ನಿಷ್ಪ್ರಯೋಜಕ’ ಎಂದರ್ಥ. (ಗುಣವಾಚಕವಿದು; ’ಕೆಲಸಕ್ಕೆ ಬಾರದ’ ಎಂಬರ್ಥದಲ್ಲಿ.) ’ತರ್‍ಕಟ್ಲಾಂಡಿ’ ಎಂದರೆ ’ನಿಷ್ಪ್ರಯೋಜಕನಾದಂಥವನು’ (’ಕೆಲಸಕ್ಕೆ ಬಾರದವನು’) ಎಂದು ಅರ್ಥೈಸಬಹುದು.
 ಮುಂದೆ ಓದಿ »

ವಾ ಪೊರ್ಲುಯಾ ನಮ್ಮ ತುಳು ಭಾಷೆ.....

* ನೆನೆಪು *
ಓ ಪೊಣ್ಣೆ...
ನೇರೆಳಾದ್
ಬರ್ಪೆ ಪಂಡ;
ಆಂಡಾ
ನೆನೆಪಾದೆ
ಓರಿಯಾ...


* ಕಾರಣ *
ಯಾನ್ ಮೋಕೆ ಮಲ್ತಿನಾ
ಆ ಪೊಣ್ಣ್
ಯೆನನ್ ಬೊಡ್ಚಿ ಪಂಡಲ್
ಕಾರಣ
ಯಾನ್ ದಾಲಾ ಕೆನ್ದ್ ಜಿಗೆ...


* ದಾಯೆ...? *
ಬೊಡೆದಿನ
ಎದುರು ಉಂತರೆ
ದಾಂತಿನಕುಲು ದಮ್ಮು...
ಪರ್ಪೆರ್
ಬ್ರಾಂಡಿ, ವಿಸ್ಕಿ, ರಮ್ಮು..


* ಅಂತರ *
ಪ್ರಾಯ ಆಯಿನ
ಅಪ್ಪೆ, ಅಮ್ಮೆರ್ ಪಂಡ
ಸಮಸ್ಯೆ...
ಪ್ರಾಯೊಗು ಬತ್ತಿನ
ಪೊಣ್ಣು ಜೊಕುಲು ಪಂಡ
ಸವಾಲ್...?


* ಮರ್ಲ್... *
ಪೊಣ್ಣೆ
ಈ ಎನನ್ ತುನಾಗ
ಯಾನ್ ಕವಿ ಆಯೆ
ಈ ಉಂತುದು ತೆಲ್ಪುನಗಾ
ಯನ್ ಮರ್ಲೆ ಆಯೆ...


 


* ಯೋಚನೆ *
ಸಮುದ್ರದ ನೀರ್ ದ ಅಲೆಕ್ ಲೆನಾ ಲೆಕ್ಕ
ಬತ್ತ ಮನಸ್ಸ್ ಡ್ ಬಗೆ ಬಗೆತ್ತ ಯೋಚನೆ
ಒವು ಸರಿ
ಒವು ತಪ್ಪು
ಪಂಡದ್ ತೆರಿದ್ ನಡೊತೊನೊಡ್ದ
ದುಂಬೆ ಜಾ ರ್ ದ್ ಪೋಯ ಬೇಗನೆ...


 


ರಿಂದ: ವಾಲ್ಪಾಡಿ ಪ್ರಸಾದ್ ಬಿ ಶೆಟ್ಟಿ ಪುಣೆ

ರೇಡಿಯೋ ಗಿರ್ಮಿಟ್ : ಅಂತರ್ಜಾಲದಲ್ಲಿ ಕನ್ನಡ ರೇಡಿಯೋ

ರೇಡಿಯೋ ಗಿರ್ಮಿಟ್ ಒಂದು ವಿಭಿನ್ನವಾದ ಅಂತರ್ಜಾಲ ರೇಡಿಯೋ ಸ್ಟೇಷನ್. ಇದರ ಮುಖ್ಯ ಉದ್ದೇಶ, ಪ್ರಪಂಚದಾದ್ಯಂತ ಹರಡಿರುವ ಕನ್ನಡ ಪ್ರೇಮಿಗಳನ್ನು ಸಂಗೀತದ ಮೂಲಕ ಒಂದು ಗೂಡಿಸುವುದಾಗಿದೆ. ವಾರದ ೭ ದಿನ ೨೪ ಘಂಟೆ ಸಂಗೀತದ ಸುಧೆಯನ್ನು ಹರಿಸುತ್ತಿರುವ ಈ ರೇಡಿಯೋ, ಬೇರೆ ಬೇರೆ ವಿಷಯಗಳಿಗೆ ಸಂಬಧಪಟ್ಟ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳನ್ನೂ ಪ್ರಸ್ತುತ ಪಡಿಸುತ್ತದೆ. ತನ್ನ ಸರಳವಾದ ವೆಬ್ ಪೇಜ್ ಇಂದಾಗಿ ಈಗಾಗಲೇ ೮೦ಕ್ಕೂ ಹೆಚ್ಚ್ಚಿನ ದೇಶಗಳಿಗೆ ತಲುಪಿರುವ ಈ ರೇಡಿಯೋ ಇನ್ನು ಹೆಚ್ಚು ಹೆಚ್ಚು ಪ್ರಸಿದ್ಧಿಯನ್ನು ಪಡೆಯುತ್ತಿದೆ.
ಇದರಲ್ಲಿ ಪ್ರಸಾರವಾಗುತ್ತಿರುವ ಜನಪ್ರೀಯ ಕಾರ್ಯಕ್ರಮಗಳೆಂದರೆ, ಭಾವಗೀತೆಗಳ ಭಾವಸಿಂಚನ, ಹೊಸ ಹಾಡುಗಳ ಗಿರ್ಮಿಟ್ ೧೦ರಿಂದ ೧, ಉತ್ತರ ಕನ್ನಡ ಶೈಲಿಯಲ್ಲಿ ಮಾತನಾಡುವ RJ ನಡೆಸಿ ಕೊಡುವ ಹನಿ ಹನಿ, ಸಾಮಾನ್ಯ ಜ್ಞ್ಯಾನದ ನಿಮಗಿದು ಗೊತ್ತಾ? ಕನ್ನಡ ಚಿತ್ರೋದ್ಯಮದ ಬಗ್ಗೆ ಮಾಹಿತಿ ನೀಡುವ ಚಟಪಟ ಸುದ್ದಿ ಮುಂತಾದವು. ಇಷ್ಟೇ ಅಲ್ಲದೆ ಚಿತ್ರೋದ್ಯಮದ ಹಲವಾರು ಪ್ರಸಿದ್ದ ನಟ ನಟಿಯರ ಸಂದರ್ಶನ ಕೂಡ ಇಲ್ಲಿಕೇಳಬಹುದಾಗಿದೆ.  ಮುಂದೆ ಓದಿ »

Syndicate content