ವಿಮರ್ಶೆ
ಪತ್ರಕರ್ತ
April 30, 2008 - 3:02pm — gururajkodkaniಈ ಬಗ್ಗೆ ಸ೦ಪದದಲ್ಲಿ ಮೊದಲೇ ಒ೦ದು ಲೇಖನ ಪ್ರಕಟವಾಗಿತ್ತು.’ವಿ.ಕ. ಮತ್ತು ಪ್ರತಾಪಸಿ೦ಹ ’ ಎ೦ಬ ಹೆಸರನಡಿಯಲ್ಲಿ ಲೇಖನವೊ೦ದು ಪತ್ರಕರ್ತರೊಬ್ಬರ ಬಗ್ಗೆ ಬರೆದಿದ್ದರು.ನಾನು ಪುನ: ಅದೇ ಪ್ರತಾಪ ಬಗ್ಗೆ ಬರೆಯಬಯಸುತ್ತೇನೆ. ಮುಂದೆ ಓದಿ »

- 8 ಪ್ರತಿಕ್ರಿಯೆಗಳು
- 662 hits
- Email this page



ಕಾರಂತರ ಜೀವಂತ ಪಾತ್ರಗಳು - ೫ (೪)
April 5, 2008 - 8:14am — csomsekraiah( ವಿದ್ಯುತ್ ಪೂರೈಕೆಯ ಕಡಿತದಿಂದ ಅಪೂರ್ಣವಾಗಿದ್ದ ಲೇಖನದ ಉಳಿದ ಭಾಗವನ್ನು ಇಲ್ಲಿ ಸೇರಿಸಿದೆ ) ಮುಂದೆ ಓದಿ »

- Login or register to post comments
- 161 hits
- Email this page



ಕಾರಂತರ ಜೀವಂತ ಪಾತ್ರಗಳು -೫ (೩)
April 5, 2008 - 7:43am — csomsekraiahಇಷ್ಟಲ್ಲದೆ ’ ನಂಬಿದವರ ನಾಕ ನರಕ’ ದ ಎಲ್ಲ ಪಾತ್ರಗಳು ಜೀವದುಂಬಿ ನಿಲ್ಲುತ್ತವೆ .ವಾಗ್ದೇವಿಯ ತಂದೆ - ಬಡತನವೇ ಸಾಕಾರವೆತ್ತಂತಿರುವ ಶಂಕರಯ್ಯ ,ಸತ್ಯಭಾಮೆಯ ತಂದೆ ಸೋಮೇಶ್ವರಯ್ಯ, ಶಂಕರಯ್ಯನ ನೊಂದಸಂಸಾರಕ್ಕೆ ಅನನ್ಯವಾಗಿ ನೆರವಾಗಿ, ಅವನ ಬಡ ಮಕ್ಕಳನ್ನೂ ಮನೆ ತುಂಬಿಸಿಕೊಳ್ಳುವ ಎಂಭತ್ತರ ವೃದ್ದೆ ಸಿಂಗಾರಮ್ಮ , ಅತ್ಯಂತ ವಿಚಾರಶೀಲ ಮನಸ್ಸಿನ ಸತ್ಯಳ ಅಣ್ಣ ರಾಮಕೄಷ್ಣ , ಹೀಗೆ ಒಂದೊಂದೂ ಸಹ ಮರೆಯಲಾಗದ ಮನುಷ್ಯತ್ವದಿಂದ ಮೈದುಂಬಿರುವ ಪಾತ್ರಗಳು . ಇಡೀ ಕಾದಂಬರಿ ಓದುಗನ ಮನಸ್ಸನ್ನೇ ಮೃದುವಾಗಿಸಿ , ಸಂಸ್ಕರಿಸುವ ಗುಣವನ್ನು ಹೊಂದಿದೆ .
’ಧರ್ಮರಾಯನ ಸಂಸಾರ ’ ಹೆಣ್ಣಿನ ಸಂಕಷ್ಟಗಳ ಇನ್ನೊಂದು ರೂಪವನ್ನು ಅನನ್ಯವಾಗಿ ಚಿತ್ರಿಸುತ್ತದೆ .ಇಲ್ಲಿಯೂ ವಿಷಮ ದಾಂಪತ್ಯದ ಪರಿಣಾಮಗಳು ; ಗಂಡಿನ ಪಾಳೇಗಾರಿಕೆಯ ಮನೋಭಾವದಿಂದಾಗಿ ಅಸಹಾಯಕಳಾದ ಹೆಣ್ಣು ಚಿತ್ತವಿಕಾರಕ್ಕೊಳಗಾಗುವುದು , ಮುಂತಾದ ದಾಂಪತ್ಯದ ಸಮಸ್ಯೆಗಳ ಸರಮಾಲೆಯೇ ಇದೆ .
ನಾರಾಯಣ ಹೆಬ್ಬಾರರು ಶ್ರೀಮಂತರು ಮಾತ್ರವಲ್ಲ ನಿಷ್ಟುರ ವ್ಯವಹಾರಿ ,ವ್ಯವಹಾರದ ವಿಷಯದಲ್ಲಿ ಹೆಣ್ಣು ತಲೆಹಾಕುವುದಿರಲಿ ; ಇಣುಕಿ ನೋಡುವುದನ್ನೂ ಸಹಿಸದ ಊಳಿಗಮಾನ್ಯದ ಪಳೆಯುಳಿಕೆ ಅವರು .ಅವರ ಜೀವನದಲ್ಲಿ ಒನಪು ಒಯ್ಯಾರಗಳನ್ನು ತುಂಬಿದ ಚಂದು ಸಹ ಅವರ ನಿಷ್ಟುರತೆಗೆ ಹೆದರಿ ನಡುಗುತ್ತಾಳೆ .ಇನ್ನು ಕೈ ಹಿಡಿದ ಹೆಂಡತಿ ಮಹಾಲಕ್ಷ್ಮಿಯನ್ನು ಕೇಳುವವರಿ ಯಾರು ? ಎಷ್ಟೆಂದರೂ ನಾಲ್ಕು ಗೋಡೆಯ ನಡುವಣ ತೊತ್ತು ತಾನೇ ಕೈ ಹಿಡಿದವಳು . ಇಲ್ಲಿ ಚಂದು ಸಾಮಾನ್ಯ ಬೆಲೆವೆಣ್ಣಲ್ಲ; ಅವಳ ಮನಸ್ಸು ಬಹಳೇ ಎತ್ತರದ್ದು . ಅವಳ ಪಾಲಿಗೆ ಮಹಾಲಕ್ಷ್ಮಿಯಮ್ಮ ಅವಳ ಒಡಹುಟ್ಟಿದಳಿಗಿಂತ ಹೆಚ್ಚು . ಮಹಾಲಕ್ಷ್ಮಿಯಾದರೂ ಚಂದುವಿನ ಅಂತರಂಗವನ್ನು ಸರಿಯಾಗಿ ಗ್ರಹಿಸಿದವಳು . ಆದುದರಿಂದ ಈ ಎರಡು ಹೆಣ್ಣು ಜೀವಗಳ ನಿಷ್ಕಳಂಕ ಸ್ನೇಹ ವಿಶೇಷ ಅನುಭೂತಿಯಿಂದ ಕೂಡಿದುದು . ಮುಂದೆ ಓದಿ »

- Login or register to post comments
- 152 hits
- Email this page



ಕಾರಂತರ ಜೀವಂತ ಪಾತ್ರಗಳು -೫ (೨)
April 4, 2008 - 8:59pm — csomsekraiahಸಾಮಾನ್ಯವಾಗಿ ವಿಭಿನ್ನ ಸನ್ನಿವೇಶಗಳಲ್ಲಿ ಹುಟ್ಟಿ ಬೆಳೆದು ವಿಭಿನ್ನ ಮನಃಸ್ಥಿತಿ , ಅಭಿರುಚಿಗಳನ್ನು ಹೊಂದಿರುವ ಎರಡು ಜೀವಗಳು , ದಾಂಪತ್ಯದ ಕಾರಣಕ್ಕೆ ಹೊಂದಿ ಬಾಳುವುದು ಅನಿವಾರ್ಯವೇ ಆದರೂ , ಪಸ್ಪರ ತ್ಯಾಗ ಅನುರಾಗಗಳಿಂದ ಬಾಳನ್ನು ಅನೇಕರು ಸಹ್ಯಗೊಳಿಸಿಕೊಳ್ಳುತ್ತಾರೆ . ಆದರೆ ಈ ಪುಣ್ಯ ಎಲ್ಲರದೂ ಅಲ್ಲ . ಮುಂದೆ ಓದಿ »

- Login or register to post comments
- 128 hits
- Email this page



ಕಾರಂತರ ಜೀವಂತ ಪಾತ್ರಗಳು -೫ (೧)
April 4, 2008 - 7:34am — csomsekraiah( ಸಂಕಲನ , ಸಂಚಿಕೆ ೩೮ ರಲ್ಲಿ ಪ್ರಕಟವಾದ ಲೇಖನ) ಮುಂದೆ ಓದಿ »

- Login or register to post comments
- 156 hits
- Email this page




RSS: