ಯಾರಾದರೂ ಸಮುದ್ರದಲ್ಲಿ ಇಳಿಯ ಬಯಸಿದರೆ 'ದೋಣಿ ತೆಗೆದುಕೊಂಡು ಹೋಗು' ಎನ್ನುವೆವು. ಇದೇ ಕರ್ಮ ಯೋಗ. ದಂಡೆಯ ಮೇಲೆ ನಿಂತು ನೋಡುವುದು ಸನ್ಯಾಸ. ಇವೆರಡರ ಆನಂದವೂ ಒಂದೇ. ಎರಡರಲ್ಲಿಯೂ ಮನುಷ್ಯ ಮುಳುಗುವುದಿಲ್ಲ. ಸಾಕ್ಷಿಯಂತೆ ಸಮುದ್ರವನ್ನು ನೋಡುತ್ತಾನೆ, ಇದರಲ್ಲೇ ಇರುವುದು ಆನಂದ

— ವಿನೋಬಾ ಭಾವೆ

ಸಂಪದ ಆರ್ಕೈವಿನಿಂದ

ವಿಮರ್ಶೆ

ಚಿಗುರು - ಇತ್ತೀಚೆಗೆ ನಾನು ಓದಿದ ಒಂದು ಒಳ್ಳೆಯ ಕತೆ

ಇತ್ತೀಚೆಗಿನ ಕನ್ನಡ ಲೇಖಕರ ಕೃತಿಗಳನ್ನು ನಾನ್ಯಾಕೋ ಕೆಲಸಮಯದಿಂದ ಓದೇ ಇಲ್ಲ ಎನ್ನುವುದನ್ನು ಪೊಗರಿನಿಂದೇನೂ ಹೇಳುತ್ತಿಲ್ಲ. ಆದರೆ ಹಳೆಯ ಸಾಹಿತಿಗಳ ರಚನೆಗಳಲ್ಲಿ ಓದದೇ ಬಿಟ್ಟುಹೋದವನ್ನು ಆರಿಸುತ್ತಲಿದ್ದ ನಾನು ಇತ್ತೀಚೆಗಿನವರನ್ನು ದೂರವಿಟ್ಟದ್ದಕ್ಕೆ ಗಂಭೀರ ಕಾರಣವೇನೂ ಇಲ್ಲ. ಹೀಗೆಯೇ ‘ಸಪ್ನಾ’ದಲ್ಲಿ ಪುಸ್ತಕಗಳನ್ನು ಹುಡುಕುತ್ತಿದ್ದಾಗ ’ಸುಮಂಗಲಾ ಕತೆಗಳ’ ಪುಸ್ತಕ ‘ಕಾಲಿಟ್ಟಲ್ಲಿ ಕಾಲುದಾರಿ’ ಕಾಣಸಿಕ್ಕಿತು. ನಿಯತಕಾಲಿಕಗಳಲ್ಲಿ ಸುಮಂಗಲಾರವರ ಕೆಲವು ಕತೆಗಳನ್ನು ಆರೇಳು ವರ್ಷಗಳ ಹಿಂದೆ ಓದಿದ್ದೆ; ಮೆಚ್ಚಿದ್ದೆ. ಆ ನೆನಪಿನಲ್ಲಿ ಈ ಪುಸ್ತಕವನ್ನು ಕೈಗೆತ್ತಿಕೊಂಡೆ.


ಪುಸ್ತಕವನ್ನು ಮನೆಗ ತಂದು ಪುಟ ಮಗುಚುತ್ತಿದ್ದು, ‘ಚಿಗುರು’ ಕತೆಯನ್ನು ಓದತೊಡಗಿದೆ. ಓದುತ್ತಿದ್ದಂತೆಯೇ ಹೃನ್ಮನಗಳು ತುಂಬಿ ಬಂದಂತಾಯಿತು. ಮುಗಿಸಿದ ಮೇಲೆ ನನ್ನ ಅನ್ನಿಸಿಕೆಗಳು ತೀವ್ರಗೊಂಡು ಅವನ್ನು ಬರೆಹಕ್ಕಿಳಿಸಲೇಬೇಕು ಎಂದೆನ್ನಿಸಿತು. ಅದನ್ನಿಲ್ಲಿ post ಮಾಡಿದ್ದೇನೆ. ಇದು ಓದುಗನಾಗಿರುವ ನನ್ನ ಅನ್ನಿಸಿಕೆಯಲ್ಲದೆ ವಿಮರ್ಶೆ ಅಲ್ಲ.    ಮುಂದೆ ಓದಿ »

ಅಡುಗೆಯವಳೂ ಆದ ಸರಸ್ವತಿ

 ಸುಮಾರು ಹದಿನಾರನೆಯ ಶತಮಾನದ ಆದಿಭಾಗದಲ್ಲಿ ಜೀವಿಸಿದ್ದ ಮಂಗರಸಕವಿಯನ್ನು ಅಡುಗೆ ಶಾಶ್ತ್ರಕ್ಕೆ ಸಂಬಂಧಪಟ್ಟಂತೆ ಕನ್ನಡದಲ್ಲಿ ಮೊದಲ ಸ್ವತಂತ್ರ ಕೃತಿ ಬರೆದವನು. ಅದುವರೆಗೆ ಕನ್ನಡದಲ್ಲಿ ಬೇರೆ ಇಬ್ಬರು ಮಂಗರಸ ಕವಿಗಳು ಆಗಿ ಹೋಗಿದ್ದರಿಂದ ಈ ಪಾಕಶಾಶ್ತ್ರದ ಮಂಗರಸನನ್ನು ಮೂರನೆಯ ಮಂಗರಸ ಎಂದೇ ಗುರುತಿಸಲಾಗುತ್ತದೆ. ಮೂರನೆಯ ಮಂಗರಸಕವಿಯ ’ಜಯನೃಪಕಾವ್ಯ’, ’ನೇಮಿಜಿನೇಶ ಸಂಗತಿ’, ’ಸಮ್ಯಕ್ತ್ವ ಕೌಮುದಿ’ ಮತ್ತು ’ಸೂಪಶಾಸ್ತ್ರ’ ನಾಲ್ಕೂ ಕಾವ್ಯಗಳಲ್ಲಿ ಸರಸ್ವತಿಯ ಸ್ತುತಿಯಿದೆ.


 


ಪರಬ್ರಹ್ಮಹೃದಯಸರಸಿರುಹೋ


 


ದರದೊಳಗೊಗೆದಾತನ ಸಿರಿಮೊಗದೊಳು


 


ಗರುವಿಕೆದಾಳಿ ನೆಱೆದು ಕೈವಲ್ಯಸತಿಗೆ ಸಹಚರಿಯಾಗಿ


 


ಭರದಿಂ ಭವ್ಯಭುಜಂಗರನವಳೊಳ್


 


ನೆರಪುವ ಕೋವಿದೆ ನರಸುರವಂದಿತೆ


 


ತರುಣೀಮಣಿ ಭಾರತಿ ಮನ್ಮತಿಗೀವುದು ಮಾಂಗಲ್ಯವನು


   ಮುಂದೆ ಓದಿ »

"LOVE" IN BANGALORE

೧) ಈಗಿನ ಕಾಲದ  ಹೈ ಸ್ಕೂಲ್ ಓದುವ ಕೆಲ ವಿದ್ಯಾರ್ಥಿ ಗಳು ಪ್ರೀತಿ ಪ್ರೇಮ ಎಂಬ ಜಾಲದಲ್ಲಿ ಬೀಳ್ತಾರೆ, ಅದು ಅವರಿಗೆ ಒಂದು ಹೊಸ ಅನುಭವ, ಆಗ ಅವರಲ್ಲಿ ಏನೋ ಒಂದು ತರಹದ ಸಂತೋಷ, ಉತ್ಸಾಹ ..  ಒಬ್ಬರನ್ನೋಬರು ತುಂಬಾ ಪ್ರೀತಿಸುತ್ತಾರೆ ಆದ್ರೆ ಅದು ಎಲ್ಲಿಯ ವರೆಗೂ? ಬರೀ ಅವರ ಹೈ ಸ್ಕೂಲ್ ಮುಗಿಯೋ ವರೆಗೂ ಅಷ್ಟೇ. ಆಮೇಲೆ ಕಾಲೇಜು ಹೈಯರ್ ಸ್ಟಡೀಸ್ ಅಂತ ಮುಂದುವರಿತ ಹೋಗ್ತಾರೆ. ಹೈ ಸ್ಕೂಲ್ ಲವ್ ನ ಬ್ರೇಕ್ ಮಾಡೋಕೆ ಅವ್ರ್ಗೆ ಒಂದು ಒಳ್ಳೆಯ  ರೀಸನ್ ಅಂದ್ರೆ "ಆಗ ನಾನು ಇನ್ನು ಚಿಕ್ಕ ಹುಡುಗ/ಹುಡುಗಿ ಆಗಿದ್ದೆ. ಆ ವಯಸಲ್ಲಿ ನನಗೇನು ಅರ್ಥ ಆಗುತ್ತೆ" (ಮೋಸ್ಟ್ ಕಾಮನ್ಲಿ ಯುಸಡ್ ರೀಸನ್) . 

   ಮುಂದೆ ಓದಿ »

ಅಪ್ಪ--ನಾಟಕ

ಅಪ್ಪ  ನಾಟಕದ ಬಗ್ಗೆ ಕುತೂಹಲವಿತ್ತು.ಮೇಲಾಗಿ " ಜೆಪಿ" ಅವರು ಅಭಿನಯಿಸಿದ್ದು, ಚಂಪಾ ಬರೆದಿದ್ದು ಇವೇ ಮುಂತಾಗಿ
ಸಂಗತಿಗಳಿದ್ದವು.ಫೇಸ್ ಬುಕ್ ನಲ್ಲಿ ಅಟೆಂಡ್ ಆಗುವೆ ಎಂದು ಘೋಷಿಸಿದ ಅನೇಕ ಗೆಳೆಯರು ಬರುತ್ತಾರೆ ಭೇಟಿಯಾದೀತು ಎಂಬ ಉಮೇದಿನೊಂದಿಗೆ ಹೋದೆ. ಪ್ರೇಕ್ಷಕ ಪ್ರಭು ಯಾಕೋ ಮುನಿಸಿಕೊಂಡಿದ್ದ..ಕುರ್ಚಿ ಖಾಲಿ
ಇದ್ದವು. ಲೇಖಕರು ಹಾಜರಾಗಿದ್ದರು. ಕೊನೆತನಕ ಇದ್ರು ನಾಟಕ ನೋಡಿದ್ರು.

ಹುಡುಕಾಟವೇ ಪ್ರಧಾನ ವಿಷಯ ನಾಟಕದ್ದು ತನ್ನ  ಅಪ್ಪನ ಬೇರುಹುಡುಕುವ ಹಂಬಲ.ಇಡೀ ನಾಟಕದಲ್ಲಿ ವ್ಯಾಪಿಸಿನಿಲ್ಲುವ ಅವ್ವಳ  ಪಾತ್ರಕ್ಕೆ " ಜೆಪಿ" ಜೀವ ತುಂಬಿದ್ರು. ಭಾವಾವೇಶ ಇಲ್ಲದ ಸಹಜ ಅಭಿನಯ. ಮುಕ್ತದ
ಮಂಗಳತ್ತೆ ಯನ್ನು ಮೀರಿಯೂ ತನ್ನೊಳಗೆ  ಕಲಾವಿದೆ ಸಜೀವವಾಗಿದ್ದಾಳೆ ಎಂದು ತೋರಿಸಿಕೊಟ್ಟರು. ಚೂಟಿಯಿಂದ
ಅಭಿನಯಿಸಿದ ಬಾಲನಟ ನಮ್ಮ ಕಡೆಯ "ಜವಾರಿ ಕನ್ನಡ" ಮಾತಾಡಲು ಸ್ವಲ್ಪ ತಡವರಿಸಿದ ಆದರೆ ಹುಡುಗ
ಚೂಟಿಯಾಗಿದ್ದ.

.ಆದ್ರೂ ಯಾಕೋ ಪ್ರೋತ್ಸಾಹ " ಹೆಜ್ಜೆ" ಯ ಮೊದಲ ಪ್ರಯತ್ನಕ್ಕೆ ಸಾಕಾಗಿಲ್ಲ ಅನಿಸ್ತು  ಮುಂದೆ ಓದಿ »

ಮತದಾನ ಮಾಡುವವರು ಮಾತ್ರ ಪ್ರತಿಕ್ರಿಯಿಸಿ

ಮತದಾನ ಎನ್ನುವುದು ನಮ್ಮಲ್ಲಿನ ಆಂತರಿಕ ಜವಾಬ್ದಾರಿಯನ್ನು ಸಮಾಜಕ್ಕೆ ಎತ್ತಿ ತೋರಿಸುವಂತುಹುದು. ನಮಗೆ ಬೇಕಾದಂತಹ, ಸ್ಪಂದಿಸುವಂತಹ ಪ್ರತಿನಿಧಿಯನ್ನು ಆಯ್ಕೆ ಮಾಡಲು ಸಂವಿಧಾನ ಕೊಟ್ಟಂತಹ ಅವಕಾಶ. ಆದರೆ ಇದನ್ನು ಪ್ರಜ್ಞಾವಂತರು ನಿಭಾಯಿಸುತ್ತಿದ್ದಾರೆಯೇ, ಇಲ್ಲ, ಎನ್ನುವುದಕ್ಕೆ ಬಿಬಿಎಂಪಿ ಚುನಾವಣೆಯೇ ನಮ್ಮ ಕಣ್ಣೆದುರುಗಿನ ಸಾಕ್ಷಿ. ಅದೇ ಗ್ರಾಮ ಮಟ್ಟದಲ್ಲಿ ಇನ್ನೂ ಪ್ರಜಾಪ್ರಭುತ್ವ ಉಳಿದಿದೆ ಎನ್ನಲು ಗ್ರಾ.ಪಂ ಚುನಾವಣೆಯಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾವಣೆಯಾಗಿದ್ದು.  ಮುಂದೆ ಓದಿ »

ವಿರೋಧ ಪಕ್ಷಗಳು ಏನು ಮಾಡುತ್ತಿದೆ

ರಾಜ್ಯ ಸರ್ಕಾರ ತೆಗದುಕೊಂಡಂತಹ ಅನೇಕ ವಿಷಯಗಳು ಚರ್ಚೆಯೇ ಆಗುತ್ತಿಲ್ಲ. ಇವುಗಳು ಜನಪರ ಇದೆಯೋ ಇಲ್ಲವೋ ಎನ್ನುವುದು ಆ ನಂತರದ ವಿಷಯ. ಆದರೆ ಇದೀಗ ನಡೆಯುತ್ತಿರುವ ಅನೇಕ ವಿದ್ಯಮಾನಗಳಿಗೆ ವಿರೋಧ ಪಕ್ಷಗಳು ಸರಿಯಾಗಿ ದನಿಯೆತ್ತದ ಕಾರಣ ಅದು ಅಲ್ಲಿಗೆ ಅಂತ್ಯವಾಗುತ್ತಿದೆ. ಇದರ ಪ್ರತಿಕೂಲ ಪರಿಣಾಮ ನಾಗರಿಕರ ಮೇಲೆ ಆಗುತ್ತಿದೆ. ಎಸ್.ಇ.ಜೆಡ್ ಯೋಜನೆಯಡಿಯಲ್ಲಿ , ಗೃಹ ನಿರ್ಮಾಣದ ಅಡಿಯಲ್ಲಿ ಕೂಷಿ ಭೂಮಿ  ಕಬಳಿಕೆಯಾಗುತ್ತಲೇ ಇದೆ. ಅಲ್ಪ ಮೊತ್ತದ ಹಣ ನೀಡುವ ಮೂಲಕ ರೈತರ ಬಾಯಿ ಮಚ್ಚಿಸಲಾಗುತ್ತಿದೆ. ಇದಕ್ಕೆ ರೈತ ವಿರೋಧ ವ್ಯಕ್ತಪಡಿಸಿದರೆ ಪೊಲೀಸರಿಂದ ಲಾಠಿ ಚಾರ್ಜ್ ಮಾಡಿಸುವಂತಹ ಕಾರ್ಯ, ಇಲ್ಲಾ ಸ್ಥಳೀಯ ಮುಖಂಡರಿಂದ ಹಿಂಸೆ ನೀಡುವಂತಹ ಕಾರ್ಯ ನಡೆಯುತ್ತಲೇ ಇದೆ.  ಮುಂದೆ ಓದಿ »

ಪೃಥ್ವಿ ಎಂಬ ಉತ್ತಮ ಚಿತ್ರ - ವಿಮರ್ಶೆ

ಪೃಥ್ವಿ ಚಿತ್ರ ಉತ್ತಮವಾಗಿದೆ. ಜಿಲ್ಲಾಧಿಕಾರಿಯಾಗಿ ಪುನೀತ್ ರಾಜ್ಕುಮಾರ್ ಅಮೋಘ್ನ ಅಭಿನಯ ನೀಡಿದ್ದಾರೆ. ಸಾಮಾನ್ಯವಾಗಿ ಡ್ಯಾನ್ಸ್, ಫೈಟ್ಸ್ ಗಳಲ್ಲಿ ಹೆಚ್ಚಾಗಿ ಕಾಣುತ್ತಿದ್ದ ಪುನೀತ್, ಈ ಚಿತ್ರದಲ್ಲಿ ಅಭಿನಯಕ್ಕೆ ಹೆಚ್ಚು ಮಹತ್ವ ನೀಡಿದ್ದಾರೆ. ಒಬ್ಬ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ಪೃಥ್ವಿ ಐ.ಎ.ಎಸ್ ಪಾಸ್ ಮಾಡಿ ಜಿಲ್ಲಾಧಿಕಾರಿಯಾಗುತ್ತಾರೆ. ಸರ್ಕಾರ ಇವರನ್ನು ಬಳ್ಳಾರಿಗೆ ನಿಯೋಜಿಸುತ್ತದೆ. ಬಳ್ಳಾರಿಯು ಗಣಿಧಣಿಗಳ ಅಟ್ಟಹಾಸದಲ್ಲಿ ಮೆರೆಯುತ್ತಿದೆ ಎನ್ನುವುದನ್ನು ಮೊದಲು ಕುಲಂಕುಷವಾಗಿ ಅರಿತು. ಒಬ್ಬರಾದ ನಂತರ ಒಬ್ಬರಿಗೆ ನಿಧಾನವಾಗಿ ಕಡಿವಾಣ ಹಾಕುತ್ತಾ ಬರುತ್ತಾರೆ. ಅಧಿಕಾರ ಹಾಗೂ ಹಣವಿರುವ ಗಣಿಧಣಿಗಳು ಇನ್ನಿಲ್ಲದ ಹಿಂಸೆಯನ್ನು ನೀಡುತ್ತಾರೆ. ರೌಡಿ ಪಡೆಗಳಿಂದ ಕೊಲೆ ಮಾಡುವ ಸಂಚೂ ಕೂಡ ನಡೆಯುತ್ತದೆ. ಸರ್ಕಾರದಿಂದ ಕಾರ್ಯಗಳಿಗೆ ಅಡ್ಡಿ ಬರುತ್ತದೆ. ಆದರೂ  ಯಾವುದಕ್ಕೂ ಮಣಿಯದೆ ತನ್ನ ಕಾರ್ಯವನ್ನು ನಿಷ್ಠೆಯಿಂದ ಒಬ್ಬ ಅಧಿಕಾರಿ ನಿರ್ವಹಿಸುತ್ತಾನೆ. ಇದು ಇತರರಿಗೆ ಮಾದರಿಯಾಗಿದೆ ಎನ್ನುವುದನ್ನು ತೋರಿಸುತ್ತದೆ.  ಮುಂದೆ ಓದಿ »

ಎಚೆಸ್ವಿ-ಎಚ್.ಎಸ್.ವೆಂಕಟೇಶ ಮೂರ್ತಿಗಳಿಗೆ ೬೭-ಒಂದು ನುಡಿ ನಮನ

ಎಚೆಸ್ವಿಗೆ ಅರವತ್ತೇಳು-ಅವರಿಗೊಂದು ನಮಸ್ಕಾರ ಮಾಡೇಳು. . . .

 

ಇದೇ ಜೂನ್ ೨೩ಕ್ಕೆ ಅರವತ್ತಾರು ತುಂಬಿ ಅರವತ್ತೇಳಕ್ಕೆ ಕಾಲಿಡುತ್ತಿರುವ ಡಾ.ಎಚ್.ಎಸ್.ವೆಂಕಟೇಶ ಮೂರ್ತಿ (೨೩.೦೬.೧೯೪೪) ನವ್ಯೋತ್ತರ ಕನ್ನಡ ಕಾವ್ಯದ ಮುಖ್ಯ ವಾಹಿನಿಗಳಲ್ಲಿ ಖಂಡಿತವಾಗಿ ಗಮನಿಸಲೇಬೇಕಾದ ಪ್ರಮುಖ ಹೆಸರು. ಅವರ  ಕಾವ್ಯ ಮಾರ್ಗ ಕೇವಲ ತೀವ್ರತೆಯೊಂದನ್ನೇ ಅಲ್ಲದೇ ಪ್ರಮಾಣದ ಕಾರಣದಿಂದಲೂ ಮಹತ್ವದ್ದಾಗಿದೆ. ೧೯೬೮ರಲ್ಲಿ ತಮ್ಮ ಮೊದಲ ಕವನ ಸಂಕಲನ ‘ಪರಿವೃತ್ತ’  ಪ್ರಕಟಿಸಿದ ಅವರು ೨೦೦೮ರಲ್ಲಿ ‘ಉತ್ತರಾಯಣ ಮತ್ತು. . .’ ಸಂಕಲನ ಪ್ರಕಟಿಸಿದಾಗ ಅದು ಅವರ ೬೪ನೇ ಕೃತಿಯಾಗಿತ್ತು, ಅಂದರೆ ಅವರ ಒಟ್ಟೂ ಬರವಣಿಗೆಯ ಗಾತ್ರ ಕನ್ನಡ ಸಾಹಿತ್ಯವನ್ನು ಎಷ್ಟು ಶ್ರೀಮಂತಗೊಳಿಸಿದೆ ಎಂದು ಮನಗಾಣಬಹುದು. ಪರಂಪರೆಯ ಸತ್ವದೊಡನೆ ಸ್ವಂತದ ಅನುಭವಗಳನ್ನು ಅನುಸಂಧಾನ ಮಾಡುತ್ತ ಪ್ರಾಚೀನ ಮತ್ತು ವರ್ತಮಾನಗಳ ಸಹಯೋಗವನ್ನು ಅವರು ಸಾಧಿಸುತ್ತಲೇ ಬಂದಿದ್ದಾರೆ. ನಾಟಕಗಳನ್ನು, ಅನುವಾದಗಳನ್ನು, ಮಕ್ಕಳ ಕಾದಂಬರಿ ಮತ್ತು ವಿಮರ್ಶೆಗಳನ್ನು ಹಾಗೇ ಕವನ ಸಂಕಲನಗಳನ್ನು ಕಾಲದಿಂದ ಕಾಲಕ್ಕೆ ಪ್ರಕಟಿಸುತ್ತ ಬಂದಿರುವ ಎಚೆಸ್ವಿ, ‘ಆ ಮುಖೇನ’ ಎಂಬ ಅಂಕಣಬರಹವನ್ನು ಉದಯವಾಣಿಗೆ ಬರೆಯುತ್ತಿದ್ದುದನ್ನೂ ಮರೆಯುವ ಹಾಗಿಲ್ಲ. ಇತ್ತೀಚೆಗೆ ‘ಅವದಿ’ಯಲ್ಲಿ ಅವರು ಬರೆದುಕೊಳ್ಳುತ್ತಿರುವ ಆತ್ಮಕತೆಯ ಪುಟಗಳು ಅವರ ಜೀವನದ ಹಲವು ವಿವರಗಳನ್ನು ನಮ್ಮ ಮುಂದಿಡುತ್ತಿದೆ. ಜೊತೆಗೇ ‘ಮುಕ್ತ ಮುಕ್ತ’ ಧಾರಾವಾಹಿಯ ಟೈಟ್ಲ್ ಸಾಂಗ್ ಅವರದೇ ಕಾಂಪೊಸಿಷನ್ನು ಎನ್ನುವುದು ಕೂಡ ಇಲ್ಲಿ ಬಹಳ ಮುಖ್ಯ. ಏಕೆಂದರೆ ಕಮರ್ಷಿಯಲ್ ಸೂತ್ರದ ಟೀವಿ ಧಾರಾವಾಹಿಯೊಂದರ ಶೀರ್ಷಿಕೆ ಗೀತೆಗೂ ಸಾಹಿತ್ಯದ ಸ್ಪರ್ಶ ಕೊಟ್ಟು ಅದನ್ನು ಮತ್ತೆ ಮತ್ತೆ ಕೇಳುವಂತೆ ಮಾಡಿರುವ ಮೋಡಿಗಾರರು ಅವರು. ‘ಪರಸ್ಪರ’ಎನ್ನುವ ಬ್ಲಾಗನ್ನು ನಿರ್ವಹಿಸುತ್ತಿರುವ ಅವರು ಹೊಸಕಾಲಮಾನದ ಎಲ್ಲ ಅನುಕೂಲಗಳ ಪ್ರಯೋಜನವನ್ನು ಪಡೆದಿದ್ದಾರೆ. ಮತ್ತೆ ಆ ಕಾರಣಕ್ಕೇ ವರ್ತಮಾನದ ತಲ್ಲಣಗಳನ್ನು ತಕ್ಕಮಟ್ಟಿಗಾದರೂ ಅರಿತು ಹೊಸ ಬರಹಗಾರರಿಗೆ ಮುನ್ನುಡಿ ಬೆನ್ನುಡಿಗಳ ಆಶೀರ್ವಚನವನ್ನೂ ನಡೆಸಿಕೊಡುತ್ತಿದ್ದಾರೆ. ‘ಚಿನ್ನಾರಿ ಮುತ್ತ’ ಚಲನಚಿತ್ರ ಕೂಡ ಅವರ ಕೊಡುಗೆಯೇ. ಭಾಷೆಯ ಲವಲವಿಕೆ, ಜೀವಂತಿಕೆ, ಸಹಜೋಲ್ಲಾಸ, ಚಿತ್ರಕಶಕ್ತಿ, ಲಾಲಿತ್ಯ, ವಸ್ತು ನಿರ್ವಹಣೆಯ ನಾವೀನ್ಯ, ಹೀಗೆ ಅವರ ಕಾವ್ಯೋದ್ಯೋಗವನ್ನು ಬೇರೆ ಬೇರೆ ನೆಲೆಗಳಿಂದ ವಿಷ್ಲೇಷಿಸಬಹುದಾದರೂ, ಅವರು ತಮ್ಮ ಹೊಸ ಸಂಕಲನಗಳ ಮೂಲಕ ಹುಡುಕುತ್ತಿರುವ ಕಾವ್ಯದ ಹಾದಿಯನ್ನು ಗಮನಿಸುವುದೇ ಒಂದು ಸೊಗಸು.

 

ತಮ್ಮ ಇತ್ತೀಚಿನ ಸಂಕಲನ ‘ಉತ್ತರಾಯಣ’ದ ಹಲವು ಕವಿತೆಗಳಲ್ಲಿ ಅವರು ಧ್ಯಾನಿಸಿರುವ ರೀತಿ ಕನ್ನಡ ಕಾವ್ಯ ಪರಂಪರೆಗೆ ಮತ್ತೊಂದು ಮಜಲನ್ನು ಜೋಡಿಸಿದೆ. ಅನೇಕಾನೇಕ ಕೃತಿಗಳನ್ನು ಈವರೆಗೆ ತಂದಿದ್ದರೂ, ಅವರ ಕಾವ್ಯದ ಮೂಲಕೇಂದ್ರ ಯಾವುದೆಂದು ಮೇಲ್ನೋಟಕ್ಕೆ ದಕ್ಕದಿರುವುದೂ ಒಂದು ಹೆಗ್ಗಳಿಕೆಯೇ. ಬರಿಯ ಕನ್ನಡಕ್ಕಷ್ಟೇ ಅಲ್ಲದೆ ವಸಾಹತೋತ್ತರ ಭಾರತೀಯ ಕಾವ್ಯ ಸಂದರ್ಭಕ್ಕೇ ಅವರು ಮಾದರಿಯಾಗಿದ್ದಾರೆ. ಮೂಲಸ್ವರೂಪದ ಅಭಿಜ್ಞಾನದಲ್ಲೇ ಅವರ ಸಾಹಿತ್ಯ ಯಾತ್ರೆ ನಡೆಯುತ್ತಿರುತ್ತದೆ. ಬರಿಯ ಛಂದೋವಿನ್ಯಾಸಗಳಲ್ಲಲ್ಲದೇ ತಾತ್ವಿಕ ಕಾರಣಗಳಿಂದಲೂ ಅವರ ಕಾವ್ಯಕೃಷಿ ಮಹತ್ವದ್ದಾಗಿದೆ. ತಮ್ಮ ಕಾವ್ಯೋದ್ಯೋಗದುದ್ದಕ್ಕೂ ಕಾವ್ಯದ ಸ್ವದೇಶೀಕರಣಕ್ಕೆ ಬದ್ಧರಾಗಿರುವ ಅವರು, ಕಾವ್ಯವನ್ನು ಅಮೂರ್ತದ ಆಗಸದಿಂದ ಮಣ್ಣ ನೆಲಕ್ಕೆ, ತಾತ್ವಿಕತೆಯ ಒಗಟಿನಿಂದ ಅನುಭವದ ನಿಜಕ್ಕೆ, ಕನಸಿನಾದರ್ಶಗಳನ್ನು ಕಥನಕಾವ್ಯದ ಅನುಸರಣದ ಕೆಲಸದಿಂದ ಅರಿವಿನಂಗಳಕ್ಕೆ ತಂದು ನಿಲ್ಲಿಸಿದ್ದಾರೆ. ಹಾಗೆಯೇ ಪುರಾಣದ ಪಾತ್ರಗಳಿಗೆ ಹೊಸ ಪೋಷಾಕು ತೊಡಿಸಿ ಬೆಚ್ಚಿಬೀಳಿಸಿದ್ದಾರೆ. ಶ್ರೀಸಂಸಾರಿ ಮತ್ತು ಆಪ್ತಗೀತೆ ಎಂಬ ಪದ್ಯಗಳಲ್ಲಿ ಅವರು ದೈವತ್ವಕ್ಕೆ ನೀಡಿದ ಮರುವ್ಯಾಖ್ಯಾನ ಕೂಡ ಗಮನೀಯವೇ ಆಗಿದೆ. ‘ಹರಿವ ಇರುವೆ ಕೂಡ ನೋಯದ ಹಾಗೆ, ಪಂಚಮದ ಇಂಚರ ಎಷ್ಟು ಮಾತ್ರಕ್ಕೂ ಒಡೆಯದ ಹಾಗೆ ಕಾಪಿಡಬೇಕೆನ್ನುವುದು’ ಅವರ ಕವಿಮನಸ್ಸಿನ ವೈಚಾರಿಕತೆಯಾಗಿದೆ. ಪೌರಾಣಿಕ ಸ್ಮೃತಿಯ ಮಂಥನದ ಮೂಲಕ ಆಧುನಿಕ ಕಾಲಕ್ಕೂ ಪ್ರಸ್ತುತವಾಗುವ ವೈಚಾರಿಕ ನವನೀತವನ್ನು ಹಂಚುತ್ತಿರುವ ಎಚೆಸ್ವಿ ಆಧುನಿಕ ಮನೋಭೂಮಿಕೆಯಲ್ಲಿರುವ ನಮ್ಮನ್ನೆಲ್ಲ ಪರಂಪರೆಯ ಆಗಸದವಕಾಶಕ್ಕೆ ಜೋಡಿಸಿ ಹೊಸ ಚಿಂತನೆಗಳು ಸಾಧ್ಯವಿದೆಯೆಂದು ಮನಗಾಣಿಸಿದ್ದಾರೆ.  

 

ಎಚೆಸ್ವಿಯವರ ಕವಿತೆಗಳು ಸರಳವಾಗಿವೆಯೆನ್ನಿಸಿದರೂ ಅವು ಓದುಗನಲ್ಲಿ ಉಳಿಸುವ ಪ್ರಶ್ನೆಗಳು ದೊಡ್ಡವು. ಅವುಗಳ ಆಶಯವೂ ದೊಡ್ಡದೇ. ಕಾವ್ಯವೆಂದರೇನೆಂದು ಮತ್ತೆ ಮತ್ತೆ ಆಲೋಚಿಸುವ ಹಾಗೆ ಮಾಡುವ ಅವರ ಕಾವ್ಯಕ್ರಿಯೆಗೆ ಶರಣೆನ್ನಲೇ ಬೇಕಾಗುತ್ತದೆ. ಏಕೆಂದರೆ ವೈಚಾರಿಕತೆಗೆ ಪೂರ್ವ-ಪಶ್ಚಿಮ, ಎಡ-ಬಲ, ಇತ್ಯಾದಿ ಆಕೃತಿಗಳ ಪ್ರತ್ಯೇಕ ಅಸ್ತಿತ್ವವನ್ನೇ ಅವರ ಕಾವ್ಯ ನಿರಾಕರಿಸುತ್ತ ಬಂದಿದೆ. ಅನುಭವದ ಪಾತಳಿಯಲ್ಲೇ ಅರಿವಿನ ಆವಿಷ್ಕಾರ ಆಗಬೇಕೆನ್ನುವುದು ಈ ಕವಿ ಮೊದಲಿಂದಲೂ ಮಂಡಿಸುತ್ತ ಬಂದ ಗಂಧವಾಗಿದೆ, ಮತ್ತು ಅವರ ಕಾವ್ಯದುದ್ದಕ್ಕೂ ಅಂಟಿ ನಿಂತ ಪರಿಮಳವೂ ಅದೇ ಆಗಿದೆ. ಸಹನೌ, ಸೌಗಂಧಿಕಾ, ಮುಂತಾದ ಪದ್ಯಗಳಲ್ಲಿ ಅವರು ಕಟೆದು ನಿಲ್ಲಿಸುವ ಸಾಮಾಜಿಕ ಕಳಕಳಿ ಅವುಗಳನ್ನು ಓದಿಯೇ ಅನುಭವಿಸಬೇಕಾದ ಪಾರಮ್ಯಗಳು. ಸ್ಮೃತಿ ಮತ್ತು ಪುರಾಣಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳುವ ಅವರು ಅವನ್ನು ತಮ್ಮ ಕಾವ್ಯದ ಅಲಂಕರಣಕ್ಕೆ ಬಳಸದೇ ಅವುಗಳ ತಳಹದಿಯಲ್ಲೇ ಹೊಸ ಆಲೋಚನೆಗಳ ಪಟ್ಟಕವನ್ನಾಗಿ ರೂಪಿಸಿ, ವರ್ತಮಾನದ ತಹತಹಿಕೆಗಳಿಗೆ ಉತ್ತರವನ್ನಾಗಿಸಿ ಆಶ್ಚರ್ಯ ಹುಟ್ಟಿಸುತ್ತಾರೆ. ‘ಭೂಮಿಯೂ ಒಂದು ಆಕಾಶ’ ಕವಿತೆಯಲ್ಲಿ ಸಂಬಂಧಗಳ ಅನಿವಾರ್ಯತೆಯನ್ನೂ, ಜೊತೆಗೇ ಅವೆಲ್ಲ ಹೇಗೆ ಅಪ್ರಾಕೃತ ಎಂದೂ ಹೇಳಿದ್ದಾರೆ. ಅಂದರೆ ಪುರಾಣ ಪ್ರತಿಮೆಯ ಮೂಲಕ ಸಮಕಾಲೀನ ತೊಡಕುಗಳನ್ನೂ, (ವಿಮುಕ್ತಿ) ಜೊತೆಗೆ ಸಮಕಾಲೀನ ಬದುಕನ್ನು ಪುರಾಣವಾಗಿಸುವ ಮೂಲಕವೂ (ಹರಿಗೋಲು, ಬಸವ ಪುರಾಣ ಥರದ ಕವಿತೆಗಳು) ಅವರು ಈಗಾಗಲೇ ಕಾವ್ಯಾಸಕ್ತರ ಗಮನವನ್ನೂ ಮನವನ್ನೂ ಸೆಳೆದಿದ್ದಾರೆ. ಕಥನ ಕಲೆ ಕೂಡ ಅವರಿಗೆ ಸಿದ್ಧಿಸಿದ ಕಲೆಯಾಗಿದ್ದರಿಂದಲೇ ಕಥನ ಕವನಗಳಲ್ಲೂ ಅವರ ಮುದ್ರೆ ಇದ್ದೇ ಇದೆ. ‘ಕಂಡದ್ದು’ ಕವಿತೆ ಓದುಗನನ್ನು ಬರಿಯ ಕವಿತೆಯಾಗಿ ಕಾಡದೇ ಅವನ ಸ್ವಂತ ಅನುಭವವಾಗಿಯೇ ಉಳಿದು ಬಿಡುತ್ತದೆ. ಹೀಗೆ ಕಾವ್ಯೋದ್ಯೋಗವೆಂಬ ಮಥನದಿಂದ ತಾತ್ವಿಕತೆಯ ಎಳೆಗಳನ್ನು ನೇಯ್ದು ಬೆಚ್ಚನೆಯ ಅರಿವಿನ ಹೊದಿಕೆಗಳನ್ನು ತಯಾರಿಸಿ ಕೊಡುತ್ತಿರುವ ಎಚೆಸ್ವಿ ಒಂದು ರೀತಿಯಲಿ ಕಬೀರನೇ ಆಗಿದ್ದಾರೆ. ಮಡಿವಂತಿಕೆಯ ಸೋಂಕಿಲ್ಲದ, ಸಾಮಾಜಿಕ ನ್ಯಾಯಕ್ಕೆ ಪರಿತಪಿಸುವ ಅವರೊಳಗಿನ ಕವಿ ಜಾಗತೀಕರಣ ಕಾಲದಲ್ಲೂ ಸ್ವದೇಶೀಕರಣದಲ್ಲಿ ನಿರತನಾಗಿದ್ದಾನೆ. ಸಮಕಾಲೀನ ಸಂದರ್ಭವನ್ನು ಪಾರಂಪರಿಕ ಕಾವ್ಯದೊಂದಿಗೆ ವಾದಿ-ಸಂವಾದಿಗಳ ಸ್ವರೂಪದಲ್ಲಿ ಮುಖಾಮುಖಿಯಾಗಿಸುತ್ತಲೇ ಗೇಯತೆಯನ್ನೂ ಅವರು ಉಳಿಸಿ ಬೆಳೆಸಿದ್ದಾರೆ.  ಮುಂದೆ ಓದಿ »

ಕೃಷಿ ಪದ್ದತಿಯಿಂದಲೂ ಪರಿಸರ ನಾಶ

ಸ್ನೇಹಿತರೆ ಸಂಪದದಲ್ಲಿ ಸಾಕಷ್ಟು ಮಾಹಿತಿಗಳು ಕೃಷಿ ಬಗ್ಗೆ ಇರುವುದನ್ನು ಗಮನಿಸಿದೆ. ಆದರೂ ಪರಿಸರದ ಬಗ್ಗೆ ಇಷ್ಟೆಲ್ಲಾ ಚರ್ಚೆ ನಡೆಯುತ್ತಿರುವಾಗ ಕೃಷಿಯ ಇದೊಂದು ವಿಷಯ ಸೇರಿಸಬೇಕು ಅನ್ನಿಸಿತು.

ಇವತ್ತು ನಾವು ಅರಣ್ಯ ಸಂಪತ್ತು ಹಾಳಾಗುತ್ತಿದೆ. ಗುಡ್ಡ ಬೆಟ್ಟಗಳೆಲ್ಲಾ ಹಾಳಾಗುತ್ತಿದೆ. ಇದು ಮುಂದಿನ ದಿನದ ಪರಿಸರ ನಾಶಕ್ಕೆ ನಾಂದಿ ಎಂದು ಎಲ್ಲರೂ ಚಿಂತಿಸುತ್ತಿದ್ದೇವೆ. ಹಾಗಾದರೆ ಇವತ್ತಿನ ಕೃಷಿ ಚಟುವಟಿಕೆ ಸರಿಯಾಗಿದೆಯಾ ಎನ್ನುವುದರ ಬಗ್ಗೆ ಕೂಡ ಚಿಂತನೆ ನಡೆಸಬೇಕಲ್ಲವೆ.

   ಮುಂದೆ ಓದಿ »

ಕಾನೂನು ಸಲಹೆಗಾರರು ಯಾವಾಗಲೂ ಮುಖ್ಯಮಂತ್ರಿ ಹಿಂದೆ ಮುಂದೆ...

ಯಡಿಯೂರಪ್ಪನವರು ಮುಖ್ಯಮಂತ್ರಿಯಾಗುತ್ತಿದ್ದಂತಯೇ ಮೊದಲು ಮಾಡಿದ ಕಾರ್ಯ ಕಾನೂನು ಸಲಹೆಗಾರರನ್ನಾಗಿ ನೇಮಿಸಿಕೊಂಡಿದ್ದು ಬೆಂಗಳೂರಿನ ಪ್ರಸಿದ್ದ ವಕೀಲರಾದ ಕೆ.ದಿವಾಕರ್ ರವರನ್ನು. ಮತ್ತು ಅಡ್ವೋಕೇಟ್ ಜನರಲ್ ರನ್ನಾಗಿ ಅಶೋಕ್ ಹಾರ್ನಳ್ಳಿಯವರನ್ನು , ಅಶೋಕ್ ಹಾರ್ನಳ್ಳಿ ಯಾವಗಲೋ ಅಂದರೆ ಗಡಿ(ಣಿ) ವಿವಾದ ಅಥವಾ ಹೊಗೆನೆಕಲ್ ವಿವಾದ ಅಥವಾ ನೈಸ್ ವಿವಾದವಿದ್ದಾಗ ಮಾತ್ರ ಮುಖ್ಯಮಂತ್ರಿಯೊಂದಿಗೆ ಅದೂ ಸಭೆಗಳಲ್ಲಿ ಕಾಣ ಸಿಗುತ್ತಾರೆ.

ನಾಳೆ ನಡೆಯುವ ಬಂಡವಾಳ ಹೂಡಿಕೆದಾರರ ಸಮಾವೇಶದ ಸಿದ್ದತೆಯನ್ನು ಯಡಿಯೂರಪ್ಪ ಪರಿಶೀಲಿಸುತ್ತಿರುವುದು. ಟೀ ಷರ್ಟ್ ಹಾಕಿರುವವರು ದಿವಾಕರ್

   ಮುಂದೆ ಓದಿ »

Syndicate content