ಸತ್ಯವೆಂಬುದೆಲ್ಲಿ? ನಿನ್ನಂತರಂಗದೊಳೊ|
ಸುತ್ತ ನೀನನುಭವಿಪ ಬಾಹ್ಯಚಿತ್ರದೊಳೋ ||
ಯುಕ್ತಿಯಿಂದೊಂದನೊಂದಕೆ ತೊಡಿಸಿ ಸರಿನೋಡೆ |
ತತ್ತ್ವದರ್ಶನವಹುದು -- ಮಂಕುತಿಮ್ಮ ||

— ಡಿ.ವಿ.ಜಿ

ಸಂಪದ ಆರ್ಕೈವಿನಿಂದ

ಸಣ್ಣ ಕಥೆ

ಬಿಸಿಲು ಮಳೆ

ಬಿಸಿಲು ಮಳೆ ಬಿದ್ದಿದ್ದರಿ೦ದಲೋ ಎನೋ ಅಕಾಶದಲ್ಲಿ ಕಾಮನ ಬಿಲ್ಲು ಕ೦ಡು ಕಾಣದ೦ದಿತ್ತು. ಅದು ಇಳಿಸ೦ಜೆಯ ಹೊತ್ತು. ಸೂರ್ಯ ಮೋಡದ ಹಿ೦ದಿನಿ೦ದ ಇಣುಕುತ್ತಾ ಮತ್ತೆ ಮರೆಯಾದ. ಕೆ೦ಪು ಮುಗಿಲು ಆಕಾಶವನ್ನು ಆವರಿಸಿದ್ದರಿ೦ದ, ಸ೦ಜೆಯ ಸಮಯವಾಗಿದ್ದರೂ, ದಾರಿಯು ಹೊನ್ನಿನ ಬಣ್ಣ ತೆಳೆಯಿತು. ಇನ್ನು ಕೆಲವು ಸಮಯದಲ್ಲಿ ಕತ್ತಲು ಆವರಿಸುವ೦ತಿತ್ತು. ನೀಲಗಿರಿ ಮರಗಳು ರಸ್ತೆಯ ಇಕ್ಕೆಲಗಳಲ್ಲಿ ಸೊ೦ಪಾಗಿ ಬೆಳೆದಿದ್ದವು. ಮರದ ಎಲೆಗಳೊ೦ದಿಗೆ ಹನಿ ಅಲ್ಲಲ್ಲಿ ಬೀಳುತ್ತಾ, ಸ೦ಜೆಯ ಮಳೆ ಅನುಭವಕ್ಕೆ ಮಣ್ಣಿನ ವಾಸನೆಯನ್ನೂ ಅಲ್ಲಲ್ಲಿ ಹರಡಿದ್ದವು. ಮಳೆ ಜೋರಾಗಿ ಬೀಳುವ ಸೂಚನೆಯೂ ಇರಲಿಲ್ಲ. ಊರು ಹತ್ತಿರವಾಗುತ್ತಿದ್ದ೦ತೆ ಕಾಲು ದಾರಿ ಕವಲೊಡೆಯಿತು. ಜೇಡಿ ಮಣ್ಣಿನ ದಾರಿ ಕಾಲಿಗೆ ಅ೦ಟುತ್ತಿತ್ತು. ಬೆಳ್ಳಕ್ಕಿಗಳು ವಿಹರಿಸುತ್ತ, ತಮ್ಮ ಪಯಣವನ್ನು ಇನ್ನೇನು ಕೊನೆಗೊಳಿಸಿ ಗೂಡಿಗೆ ಹೊರಡಲು ಅನುವಾಗಿದ್ದವು. ಕೊಕ್ಕರೆಗಳ ಗು೦ಪೊ೦ದು ಆಗಸಕ್ಕೆ ತೋರಣ ಕಟ್ಟುವುದಕ್ಕೆ ಪೈಪೋಟಿಯಲ್ಲಿದ್ದ೦ತಿತ್ತು. ದೂರದ ಜಾಲಿಯ ಮರದಲ್ಲಿ ಜೀರು೦ಡೆ ಹುಳುಗಳು ಗುಯ್ಗುಡುತ್ತಿದ್ದವು.  ಮುಂದೆ ಓದಿ »

ನಂದು ಸಾರ್‍ ಆ ಜಾಗ...

                             ನಂದು ಸಾರ್‍ ಆ ಜಾಗ...

 

   ಮುಂದೆ ಓದಿ »

ರಾಮಾಣ್ಯ ನಂತರ ಮಹಾಭಾರತ ಹಾಸ್ಯ ನಾಟಕ

ನೋಡ್ಲಾ ಕೋಮಲ್, ಹೋದ್ ದಪ ನೀವೆಲ್ಲಾ ಸೇರಿ ರಾಮಾಣ್ಯ ನಾಟಕ ಗಬ್ಬು ಎಬ್ಬಿಸಿದರಿ. ಈ ಬಾರಿ ಮಹಾಭಾರತ ನಾಟಕ ಆಡುವಾ, ಭಾಸೆ, ವೇಸ ಎಲ್ಲಾ ಸರಿಯಾಗಿರಬೇಕು. ಆಗ್ಲೇ ಮೇಸ್ಟ್ರುಗೆ ಅಡ್ವಾನ್ಸ್ ಕೊಟ್ಟು ಬಂದೀವ್ನಿ ಅಂದ ಗೌಡಪ್ಪ. ಸರಿ ನಾನೂ ಭೀಮ ಆಯ್ತೀನಿ ಅಂದಾ ಗೌಡಪ್ಪ, ಕೋಮಲಾ ನೀನು ದುರ್ವೋಧನ, ಸುಬ್ಬ ಕಿಸ್ನ, ಕಟ್ಟಿಗೆ ಒಡೆಯೋ ಕಿಸ್ನ ಅರ್ಜುನ, ಗೌಡಪ್ಪನ ಮೊದಲನೆ ಹೆಂಡರು ಲಕ್ಸ್ಮಿನ್ನ ಗಾಂಧಾರಿ, ಹೆಣ್ಣಿನ ತರಾ ಇದ್ದ ರಂಗ ದ್ರೌಪದಿ ಹಿಂಗೆ ಎಲ್ಲಾ ಪಾಲ್ಟು ಸೆಲೆಕ್ಟ್ ಮಾಡಿದ್ದು ಆತು. ನಾಟಕದಾಗೆ ಅರ್ಧಕ್ಕರ್ಧ ಜನ ಗೌಡಪ್ಪನ ಕುಟುಂಬನೇ ಇತ್ತು. ಹಂಗಾಗಿ ಪ್ರಾಕ್ಟೀಸ್ ಮಾಡುವಾಗ ಸುಗರ್ ಲೆಸ್ ಚಾ, ಮುಗ್ಗು ಹೋಗಿದ್ದ ಬಿಸ್ಕತ್ತು ಎಲ್ಲಾ ಫ್ರೀ. ಬಿಸ್ಕತ್ತು ತಿಂದ್ ಮ್ಯಾಕೆ ಬಾಯ್ನಾಗೆಲ್ಲಾ ಬಡ್ಡೆ ಹತ್ತಾವು ಬೆರಳು ಹಾಕಿ ತೊಳಿಸ್ತಿದ್ವು. ಹಲ್ಲಿಗೆ ಬಿಸ್ಕತ್ತು ಅಂಟುಕೊಂಡರೆ ಸರಿಯಾಗಿ ಡೈಲಾಗ್ ಬರಕ್ಕಿಲ್ಲಾ ಅಂತಾ.  ನಾಟಕ ಪ್ರಾಕ್ಟೀಸ್ ಮುಗಿದ್ ಮ್ಯಾಕೆ ರೂಂ ನೋಡಿದ್ರೆ, ಒಂದು ಮಣ ಬೀಡಿ ತುಂಡು ಬಿದ್ದಿರೋದು. ಗೌಡಪ್ಪನ ಹೆಂಡರು ಕೆಮ್ಕತ್ತಾ ಕಸ ಗುಡಿಸೋವು. ಏ ಥೂ ಅಂತಾ.  ಮುಂದೆ ಓದಿ »

ಮರದ ಸ್ಥಾನ ಪಲ್ಲಟ

ನಾನು ನಿರ್ಧರಿಸಿಬಿಟ್ಟಿದ್ದೆ. ರಾತ್ರಿ ಇವರ ಗೊಣಗು ಕೇಳುತ್ತಿದ್ದಂತೆ ಅಂದುಕೊಂಡಿದ್ದೆ


"ಕತ್ತೆಗೇನು ಗೊತ್ತು ಕಸ್ತೂರಿ ಸುವಾಸನೆ"


ಅಷ್ಟಕ್ಕೂ ರಾತ್ರಿ ಅವರಾಡಿದ ರಂಪಕ್ಕೆ ನಾ ಮಾಡಿದ ತಪ್ಪಾದರೂ ಏನಾಗಿತ್ತು


ನಾನು ಚೆನ್ನಾಗಿ ಹಾಡುವುದೆ ತಪ್ಪೇ?   ಇವರೇನು ಸಂಗೀತ ವಿರೋಧಿಗಳೇ?  ಮುಂದೆ ಓದಿ »

ಕ್ರಿಯೆಗೆ ತಕ್ಕ ಪ್ರತಿಕ್ರಿಯೆ......

ಸ್ಯಾನೇ ದಿನ ಆದ್ ಮ್ಯಾಕೆ ನಮ್ಮ ಊರ್ನಾಗೆ ಕುಸ್ತಿ ಪಂದ್ಯ ಮಡಗಿದ್ವಿ.  ನಿಂಗಪ್ಪನ ಚಾ ಅಂಗಡೀಲಿ ಮೀಟಿಂಗ್ ಮಡಗಿದ್ವಿ. ಕೆಟ್ಟ ಒಡೆದೋದ ಹಾಲು ಹಾಗೂ ಚಲ್ಟದ ಟೀಪುಡಿ ಚಾ ಕೊಟ್ಟ. ಲೇ ಕಾಸು ಕೊಡಕ್ಕಿಲ್ವಾ, ಕೊಡೋ ಒಂದು ರೂಪಾಯಿಗೆ ಕೆಟಿ ಹಾಕ್ತೀವ್ನಿ ಬನ್ರಲ್ಲಾ. ಮಾಮೂಲಿ ಗಬ್ಬುನಾಥ ಗೌಡಪ್ಪ, ನೋಡ್ರಲಾ ನಮ್ಮ ಊರ ಮರ್ವಾದೆ ಉಳಿಸಬೇಕು ಅಂತಿದ್ದ. ಅದಕ್ಕೆ ಚಾ ಅಂಗಡಿ ನಿಂಗ ನಾನು ತಯಾರಿ ತಗೋತೀನಿ ಅಂದಾ. ಸುಬ್ಬಾ ಎಂಗೈತೆ ನನ್ನ ಬಾಡಿ ಅಂತಾ ಸಲ್ಟು, ಚೆಡ್ಡಿ ತೆಗೆದು ಗೌಡಪ್ಪನ ಮುಂದೇ ನಿಂತೇ ಬಿಟ್ಟ. ಏ ಥೂ ಬಟ್ಟೆ ಹಾಕಳ್ಳಾ. ನಮ್ಮೂರು ಹೆಣ್ಣು ಐಕ್ಳು, ಇದ್ಯಾವಾ ಕಾಡು ಮನಸ ಅಂತಾ ಹೆದರು ಬಿಟ್ಟಾವು ಅಂದ. ಲೇ ಒಂದ್ ಕಾಲದಾಗೆ ನಾನು ಪೈಲ್ವಾನೆಯಾ ಅಂದಾ ಗೌಡಪ್ಪ.  ಮುಂದೆ ಓದಿ »

ಅರೆ ಅಲ್ಲಾ .......

ನಮ್ಮ ಹಳ್ಳೀಲಿ ಏನೇ ಹಬ್ಬ ಆದ್ರೂ ಜಾತಿ,ಭೇದ ಮರೆತು  ಎಲ್ರೂ ಒಟ್ಟಿಗೆ ಮಾಡ್ತೀವಿ.  ನಾವು ಮಸೀದಿಗೆ ಹೋಯ್ತೀವಿ. ಅವರೂ ನಮ್ಮ ಸಿದ್ದೇಸನ ಗುಡಿಗೆ ಬರ್ತಾರೆ. ನಾವು ನಮಾಜ್ ಮಾಡಿದ್ರೆ, ಅವ್ರು ಅಣ್ಣು ಕಾಯಿ ಮಾಡಿಸ್ತಾರೆ. ಬಹಳ ದಿನದ ಮ್ಯಾಕೆ, ಹಳ್ಳೀಲಿ. ಒಂದು ದೇವರ ನಾಮಗಳ ಕಾರ್ಯಕ್ರಮ ಏರ್ಪಡಿಸೋದು ಅಂತಾ ತೀರ್ಮಾನಿಸಿದ್ವಿ. ನಮ್ಮೂರಿನ ಅಧ್ಯಕ್ಸ ಹಳಸೋದ ಫಲಾವು ವಾಸ್ನೆಯ ಗಬ್ಬುನಾಥ ಗೌಡಪ್ಪನ ಅಧ್ಯಕ್ಸತೆಯಲ್ಲಿ ನಡೀತು.  ಮುಂದೆ ಓದಿ »

ಗುರುವೇ.... ಸಿದ್ದೇಸ

ಸಿದ್ದೇಸ, ನಮ್ಮ ಮನೆ ದೇವರು. ಇವನು ದೇವಸ್ಥಾನ ಇರೋದು ಇಲ್ಲೇ ನಮ್ಮ ಹಳ್ಳಿ ಪಕ್ಕದಾಗೆ. ನಮ್ಮನ್ಯಾಗೆ ಏನೇ ಕಾರ್ಯವಾದರೂ ಮೊದಲು ಸಿದ್ದೇಸನಿಗೆ ತಿಳಿಸೇ ಮುಂದಿನದು. ಹಾಗಂತ ಸತ್ತಾಗ ಏಳಕ್ಕಿಲ್ಲ. ಯಾಕೆಂದರೆ ಟೇಂ ಇರಲ್ಲಾ ನೋಡಿ ಅದಕ್ಕೆ. ಹೀಗೆ ಒಮ್ಮೆ ಸಿದ್ದೇಸನ ಜಾತ್ರೆ, ಮನೆಯವರೆಲ್ಲ ಜಾತ್ರೆಗೆ ವೈನಾಗೆ ಹೋಗಿದ್ವಿ. ಬೆಳಗ್ಗೆ ಬೇಗನೇ ಎದ್ದು, ಊಟ ಕಟ್ಕೊಂಡು ಗಾಡಿಯಲ್ಲಿ ಹೋಗಿದ್ವಿ. ಊರ ಹೊರಗೆ ಗಾಡಿ ನಿಲ್ಸಿ, ಜಾತ್ರೆ ಒಳಗೆ ಹೊಂಟ್ವಿ. ಹಳೇ ದೋಸ್ತಿಗಳೆಲ್ಲಾ ಏನ್ಲಾ ಎಂಗಿದ್ದೀಯಲ್ಲಾ, ಸಂದಾಗಿದೀನ ಕಣ್ರಲ್ಲಾ ಅಂತ ಅಂಗೇ ಮುಂದೆ ಓಯ್ತಾ ಇದ್ವಿ. ಮಗ, ಅಪ್ಪಾ, ಅಪ್ಪಾ ಅಲ್ನೋಡು ಬಲೂನ್, ಸುಮ್ ಬಾರಲಾ, ಮೊದಲು ಸಿದ್ದೇಸನ್ನ ನೋಡವಾ, ಆಮ್ಯಾಕೆ ಏನಿದ್ರು.  ಮುಂದೆ ಓದಿ »

ಪದವೀ'ಧರ'...............................ಹಾಸ್ಯ ಲೇಖನ..

 ಒಮ್ಮೆ ಬಹಳ ಜನಪ್ರಿಯ ವಿಶ್ವವಿದ್ಯಾಲಯ ದಿ೦ದ ಒ೦ದು ಪ್ರಕಟನೆ ಪ್ರಸಾರಗೊ೦ಡಿತು..............

ಅದೇನೆ೦ದರೆ..........

"ನಮ್ಮಲ್ಲಿ Degree certificate ಗಳು ಮಾರಾಟಕ್ಕಿವೆ ಪಡೆಯಲಿಚ್ಹಿಸುವವರು ಸ೦ಪರ್ಕಿಸಿ"

ಅಭ್ಯರ್ಥಿಗಳಿಗೆ ಇರಬೇಕಾದ  ಅಹ್ರತೆಗಳು........

೧. ೧೮ ವರ್ಷ ಮೆಲ್ಪಟ್ಟಿರಬೇಕು.

೨. ಬರುವಾಗಲೆ ಯಾವ ಪದವಿಯ ಸರ್ಟಿಫಿಕೇಟ್ ಬೇಕೆ೦ದು ನಿರ್ಧರಿಸಿರಬೇಕು.

೩. ಬರುವಾಗ ಸರ್ಟಿಫಿಕೇಟ್ ಗೆ ತಗಲುವ ವೆಚ್ಚವನ್ನು ತ೦ದಿರಬೇಕು.

೪. ಮೊದಲು ಬ೦ದವರಿಗೇ ಆದ್ಯತೆ.

೫. ಅನಕ್ಷರಸ್ಠರಿಗೂ ಅವಕಾಶ.....

    ನಮ್ಮಲ್ಲಿ   ಸಿಗುವ ಯಾವುದೆ ಡಿಗ್ರೀ ಗಳಿಗೆ ನೀವು ಯಾವುದೇ ರೀತಿಯ ಪರೀಕ್ಷೆಗಳಿಗೆ ಒಳಪಡುವ ಅವಶ್ಯಕತೆ ಇರುವುದಿಲ್ಲ..  ಮುಂದೆ ಓದಿ »

ಆ ಇನ್ನೊಬ್ಬ ಹೆಂಗಸು

( ಶೆರ್ ವುಡ್ ಆಂಡರ್ಸನ್ ರ `The other woman' ಕತೆಯ ಭಾವಾನುವಾದ)

``ನಾನು ನನ್ನ ಹೆಂಡತಿಯನ್ನು ಪ್ರೀತಿಸುತ್ತೇನೆ.'' ಅನವಶ್ಯಕವಾಗಿ ಆತ ಹೇಳಿದ.  ನಾನೇನು  ಹೆಂಡತಿ ಕುರಿತ ಆತನ ನಿಷ್ಠೆಯನ್ನು ಪ್ರಶ್ನಿಸಿರಲಿಲ್ಲ. ನಾವು ಹತ್ತು ನಿಮಿಷಗಳ ಕಾಲ ಒಟ್ಟಿಗೆ ನಡೆಯುವಾಗ ಆತ ಮತ್ತೆ ಇದನ್ನೇ ಹೇಳಿದ. ನಾನು ಅವನತ್ತ ನೋಡಿದೆ. ಆತ ಮಾತನಾಡಲು ಶುರುಮಾಡಿದ. ಆತ ಹೇಳಿದ ತನ್ನ ಕತೆಯನ್ನೇ ನಾನೀಗ ಬರೆಯುತ್ತಿರುವುದು.

ಈ ಘಟನೆ ಜರುಗಿದ್ದು ಆತ ತನ್ನ ಬದುಕಿನ ಅತ್ಯಂತ ಸಂಭ್ರಮದ ದಿನಗಳನ್ನು ಕಳೆಯುತ್ತಿದ್ದಾಗ.ಆ ಶುಕ್ರವಾರದ ಮಧ್ಯಾನ ಆತ ಮದುವೆಯಾಗಲಿದ್ದ. ಸರಿಯಾಗಿ ಒಂದು ವಾರದ ಹಿಂದೆ, ಇನ್ನೊಂದು ಶುಕ್ರವಾರದಂದು ಆತನಿಗೊಂದು ಟೆಲಿಗ್ರಾಂ ಬಂದಿತ್ತು. ಆತ ಸರಕಾರದ ಹುದ್ದೆಯೊಂದಕ್ಕೆ  ನೇಮಕಗೊಂಡಿದ್ದ. ಇದಲ್ಲದೆ ಆತ ಹೆಮ್ಮೆ ಪಡುವಂತಹ ಮತ್ತೊಂದು ಸಂಗತಿ ನಡೆದಿತ್ತು. ಗುಟ್ಟಾಗಿ ಆತ ಪದ್ಯಗಳನ್ನು ಬರೆಯುತ್ತಿದ್ದ. ಕಳೆದ ವರ್ಷ ಹಲವು  ಪ್ರಕಟವಾಗಿದ್ದವು. ವರ್ಷದ ಅತ್ಯುತ್ತಮ ಕವಿತೆಗೆ ಸಂಸ್ಥೆಯೊಂದು ಕೊಡುತ್ತಿದ್ದ ಬಹುಮಾನ ಆತನಿಗೆ ಬಂದಿತ್ತು. ಈ ಸಾಧನೆಯನ್ನು ಹೊಗಳಿ ನರಗದ ಪತ್ರಿಕೆಗಳಲ್ಲಿ ವರದಿಯೂ ಪ್ರಕಟವಾಗಿತ್ತು. ಒಂದು ಪತ್ರಿಕೆ ಆತನ ಫೊಟೋ ಸಹ ಮುದ್ರಿಸಿತ್ತು.  ಮುಂದೆ ಓದಿ »

ಸುಪ್ಪನಾತಿ ಸುಬ್ಬಿ

ಮಾಗಿಯ ಕಾಲದ ಚಿಗುರು ಮೊಳಕೆಯೊಡೆದು, ಕಾಲ ಕಾಲಕ್ಕೆ ಮಳೆ-ಬೆಳೆ ಆಗುತ್ತಿದ್ದರೂ, ಕೋಗಿಲೆಯು ತಾನು ತನುಮನದಿ೦ದ ಇ೦ಪಿಸುತ್ತಿದ್ದರೂ, ಅಷ್ಟೆ ಏಕೆ? ಹಳ್ಳಿಯು "ಯೊಳುಯೆಡೆ ಸರುಪ"ದ೦ತೆ ಅ೦ಕು ಡೊ೦ಕಾಗಿ ಬೆಳೆದು ಕೇವಲ ಅಲ್ಲೊ೦ದು ಇಲ್ಲೊ೦ದು ಮನೆ ಇದ್ದುದು ಇನ್ನೂರಾಗಿದ್ದರೂ, ಮೇಲ್ಮನೆ ಗೌಡ್ರು ಮಗಳಿಗೆ ಇನ್ನೂ ಮದುವೆ ಆಗದೆ ಇದ್ದುದಕ್ಕೆ ಊರಿನ ಮನುಜ ಕೋಟಿ ಗೌಡಿಕೆಯ ಮನೆತನದ ಬಗ್ಗೆ ಮುನಿಸಿಕೊ೦ಡ೦ತಿತ್ತು. ಅಕ್ಕ-ಪಕ್ಕದ ಮನೆಯವರು ಆಡಿಕೊಳ್ಳುವಷ್ಟು ನಮ್ಮ ಮಗಳಿಗೆ ಇನ್ನೂ ಕ೦ಕಣ ಭಾಗ್ಯ ಕೂಡಿ ಬರಲಿಲ್ಲವಲ್ಲ ಎ೦ದು ಗೌರವ್ವನ ಕಣ್ಣ೦ಚಿ೦ದ ಕಣ್ಣೀರು ಧುಮುಕಲು, ಸುಬ್ಬಿ ತನ್ನ ಕಪ್ಪು-ಬಿಳಿ ಕಣ್ಣಿನಿ೦ದ ವೀಕ್ಷಿಸುತ್ತ ಒಲೆಯ ಮೇಲೆ ಅನ್ನವನ್ನು ಬಸಿದಿಟ್ಟು ನಡುಮನೆಗೆ ಬ೦ದು ಕನ್ನಡಿಯಲ್ಲಿ ತನ್ನ ಮೋರೆಯನ್ನು ದಿಟ್ಟಿಸಿ ಕೆನ್ನೆಯ ಮೇಲಿನ ಮಸಿಯನ್ನು ಒರೆಸಿ, ಮನದಲ್ಲಿ ಗೆಲುವನ್ನು ತ೦ದುಕೊ೦ಡಳು. ಚಿಕ್ಕ೦ದಿನಲ್ಲಿ ಅಪ್ಪ, "ನಿ೦ಗೆ ಏಳೂರ್ ದೇಸುದ್ ರಾಚ್ಕುಮಾರು೦ಗೆ ಲಗ್ನ ಮಾಡ್ತಿನಿ ಮಗ" ಎ೦ದಾಗ ನಾಚಿ ಅವ್ವನನ್ನು ತಬ್ಬಿಕೊ೦ಡಿದ್ದು ನೆನಪಾಗಿ ಮನದ ಪರದೆಯಲ್ಲಿ ಸೊಲುಪ ಬೆಳಕನ್ನು೦ಟುಮಾಡಿತು.  ಮುಂದೆ ಓದಿ »

Syndicate content