ಎನಗಿಂತ ಕಿರಿಯರಿಲ್ಲ, ಶಿವ ಚಕ್ತರಿಗಿಂತ ಹಿರಿಯರಿಲ್ಲ
ನಿಮ್ಮ ಪಾದಸಾಕ್ಷಿ, ಎನ್ನ ಮನಸಾಕ್ಷಿ
ಕೂಡಲಸಂಗಮದೇವಾ ಎನಗಿದೇ ದಿಭ್ಯ.

— ಬಸವಣ್ಣ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಚಿಂತನೆ

ಕಾಲದ ಕನ್ನಡಿ- ಗೋಹತ್ಯೆ-ದೇವನೂರು ಮಹಾದೇವ

ಈದಿನದ ಕನ್ನಡ ಪ್ರಭದಲ್ಲಿ ದೇವನೂರು ಮಹಾದೇವರವರ ಉವಾಚ ಓದಿದೆ.ಅವರು ಹೇಳ್ತಾರೆ,`` ಗೋಹತ್ಯೆ ನಿಷೇಧದ ಹಿ೦ದೆ ನರಹತ್ಯೆ ಅಜೆ೦ಡಾ ಇದೆ``. ಅಲ್ರೀ ನಮ್ಮ ಬುಧ್ಧಿಜೀವಿಗಳಿಗೇನಾಗಿದೆ.ಹಿ೦ದೂಗಳಾಗಿ ನಮ್ಮ ತಾಯಿಯ ಹತ್ಯೆಯನ್ನು ಮಾಡುವವರ ವಿರುಧ್ಢ ಧ್ವನಿ ಎತ್ತಿದ್ರೆ, ಅದನ್ನೂ ಇವರು ಖ೦ಡಿಸುತ್ತಾರೆ. ಈ ಬುಧ್ಢಿಜೀವಿಗಳೆಲ್ಲಾ ಒ೦ದೇ ಥರಾ.ಆ ಅನ೦ತಮೂರ್ತಿ ನೋಡಿದ್ರೆ ಅವರೊ೦ದು ಥರ, ರಾಮದಾಸ್ ನೋಡಿದ್ರೆ ಮತ್ತೊ೦ಥರ.ಈ ಮಹಾದೇವ ನೋಡಿದ್ರೆ ಹರ ಹರಾ! ಅವರು ಕೇಳೊ ಪ್ರಶ್ನೆ ಚೆನ್ನಾಗಿದೆ, ಏನ೦ದ್ರೆ,`` ಗ೦ಜಲದಲ್ಲಿ ಔಷಧ ಇದೆ ಅ೦ದ್ಮೇಲೆ ಮಾ೦ಸದಲ್ಲಿ ಏಕಿಲ್ಲ?`` ಅಲ್ರೀ ಗೋವಿನ ಸಗಣಿ ಉಪಯುಕ್ತ ಸಾವಯವ ಗೊಬ್ಬರ, ಗ೦ಜಲದಲ್ಲಿ ಆಯುರ್ವೇದೀಯ ಔಷಧದ ಗುಣವಿದೆ ಅ೦ತ ಈಗಾಗಲೇ ಸಾಬೀತಾಗಿದೆ.ಗೋಮೂತ್ರ ಕ್ಯಾನ್ಸರ್ ಮಾಗಲು ರಾಮಬಾಣ.ಅದೇ ಯಾವ ಮಾ೦ಸ ತಿ೦ದ್ರೆ ಯಾವ ರೋಗ ವಾಸಿಯಾಗ್ತದೆ? ಸಿ೦ಪಲ್ ಕ್ವಶ್ಚೆನ್ ಅಲ್ವೇನ್ರೀ? ಅದೂ ಅರ್ಥ ಆಗಲ್ಲ ಅ೦ದ್ರೆ, ಅಲ್ರೀ ಮಾ೦ಸ ತಿ೦ದ್ರೆ ಮಿಟಮಿನ್ ಗಳು ಸಿಗುತ್ತೆ, ಅದು ನನಗೂ ಗೊತ್ತು.ಹ೦ಗ೦ಥ ಬರೇ ಮಿಟಮಿನ್ ತಿ೦ದ್ರೆ ರೋಗ ವಾಸಿಯಾಗುತ್ತಾ?  ಮುಂದೆ ಓದಿ »

ವಿಜ್ಞಾನಿ, ಅನುಮಾನ ಮತ್ತು ಅನಿಶ್ಚಿತತೆ:ರಿಚರ್ಡ್ ಫೆಯ್ನ್ ಮನ್ ಚಿಂತನೆ

ರಿಚರ್ಡ್ ಫೆಯ್ನ್ ಮನ್ ರ ವಿಚಾರಗಳನ್ನು ಕನ್ನಡಕ್ಕೆ ತರುವುದರ ಎರಡನೇ ಪ್ರಯತ್ನ (ಮೊದಲೆಯನದು ಇಲ್ಲಿದೆ). ಈ ಯೂ-ಟ್ಯೂಬ್ ವಿಡಿಯೋ ದಲ್ಲಿ ಇರುವ ಮಾತುಕತೆಯನ್ನು ಅನುವಾದಿಸಲು ಪ್ರಯತ್ನ ಮಾಡಿದ್ದೇನೆ. 

ನನಗೆ ಬಹಳ ಇಷ್ಟ ವಾದ ಭಾಗ:

"ನೋಡಿ, ಅನುಮಾನ, ಅನಿಶ್ಚಿತತೆಗಳ, ಗೊತ್ತಿಲ್ಲದಿರುವಿಕೆಗಳ ಜೊತೆ ನಾನು ಬದುಕಬಲ್ಲೆ. ಗೊತ್ತಿಲ್ಲದೇ ಬದುಕುವುದು ತಪ್ಪಾಗಿರಬಹುದಾದ ಉತ್ತರಗಳನ್ನು  ನಂಬಿ ಬದುಕುವುದಕ್ಕಿಂತ ಹೆಚ್ಚು ಆಸಕ್ತಿಕರ ಎಂದು ನನಗೆ ಅನಿಸುತ್ತದೆ. ನನಗೆ ವಿವಿಧ ವಿಷಯಗಳ ಬಗ್ಗೆ ವಿವಿಧ ನಿಖರತೆಯಲ್ಲಿ ಉತ್ತರಗಳು ಗೊತ್ತಿವೆ. ಆದರೆ ನನಗೆ ಗೊತ್ತಿರುವ ವಿಷಯಗಳ ಬಗ್ಗೆ ಕೂಡ ನನಗೆ 'ಇದೇ ಸರಿಯಾದ ಉತ್ತರ' ಎನ್ನುವ ನಂಬಿಕೆ ಇಲ್ಲ. ನನಗೆ ಏನೇನೂ ಗೊತ್ತಿಲ್ಲದೇ ಇರುವ ವಿಷಯಗಳೂ ಬಹಳ ಇವೆ. 'ನಾವು ಇಲ್ಲಿ ಯಾಕೆ ಇದ್ದೇವೆ' ಎನ್ನುವ ಪ್ರಶ್ನೆಯು ಸೂಕ್ತವೆ? ಸೂಕ್ತವಾದರೆ ಆ ಪ್ರಶ್ನೆಯ ಅರ್ಥವೇನು ಎನ್ನುವುದು ಕೂಡ ನನಗೆ ತಿಳಿದಿಲ್ಲ. ಅದರ ಬಗ್ಗೆ ಸ್ವಲ್ಪ ಯೋಚಿಸುತ್ತೇನೆ, ಗೊತ್ತಾಗದಿದ್ದರೆ ಬೇರೆ ಏನನ್ನಾದರೂ ಮಾಡಲು ಹೋಗುತ್ತೇನೆ. ಆದರೆ ನನಗೆ ಅಂತಹ ಪ್ರಶ್ನೆಗಳಿಗೆ ಉತ್ತರ ತಿಳಿಯಲೇ ಬೇಕೆಂಬ ಹಠ ಇಲ್ಲ. ಗೊತ್ತಿಲ್ಲದೇ ಇರುವುದರ ಬಗ್ಗೆ ನನಗೆ ಭಯವಿಲ್ಲ. ಈ ರಹಸ್ಯಮಯವಿಶ್ವ ಬಹುಶಃ ಉದ್ದೇಶರಹಿತವಾದುದು. ಈ ವಿಶ್ವಕ್ಕೆ  ಯಾವುದೇ ಗಹನ ಉದ್ದೇಶವಿಲ್ಲ ಎಂದಾದರೆ ನನಗೆ ಭಯವಿಲ್ಲ."

ಪೂರ್ಣ ಮಾತುಕತೆ:

 ಮುಂದೆ ಓದಿ »

ಯುಗಾದಿ ಎಂಬ ಸಂಸ್ಕೃತಿ

  ಸಂಸ್ಕೃತಿಯೆಂಬುದು ಮನಸ್ಸಿನ ಸಂಸ್ಕಾರಕ್ಕೆ ಸಂಬಂಧಪಟ್ಟದ್ದು. ಸನಾತನ ಕಾಲದಿಂದ ನಡೆದುಬಂದಿರುವ ನಮ್ಮ ಸಂಸ್ಕಾರಸಂಬಂಧಿ ಆಚರಣೆಗಳೇನಿವೆ, ಅವನ್ನು ನಾವು ಬಿಡತಕ್ಕದ್ದಲ್ಲ. ನಂನಮ್ಮ ಪಂಚಾಂಗದನುಸಾರವೇ ಹೊಸ ವರ್ಷದ ಆಚರಣೆ ಮಾಡುವುದೂ ಅಂಥವುಗಳಲ್ಲೊಂದು.
  ವ್ಯವಹಾರದ ಅನುಕೂಲಕ್ಕಾಗಿ ಭಾರತವೂ ಸೇರಿದಂತೆ ವಿಶ್ವದ ಬಹುಪಾಲು ದೇಶಗಳು ಗ್ರೆಗೊರಿಯನ್ ಕ್ಯಾಲೆಂಡರನ್ನು ಅನುಸರಿಸುತ್ತಿವೆ ಹೌದು. ವ್ಯಾವಹಾರಿಕ ಬಳಕೆ ಬೇರೆ, ಸಂಸ್ಕೃತಿ-ಸಂಪ್ರದಾಯ-ಧರ್ಮಾಚರಣೆ ಬೇರೆ. ನಂನಮ್ಮ ಹೊಸ ವರ್ಷದ ಮೊದಲ ದಿನವನ್ನು ನಂನಮ್ಮ ಪಂಚಾಂಗಗಳ ಅನುಸಾರ ಆಚರಿಸುವುದು ಅರ್ಥಪೂರ್ಣ.  ಮುಂದೆ ಓದಿ »

ಭದ್ರತೆ... ಏನು ನಮ್ಮ ಸಿದ್ಧತೆ?

ಇತ್ತೀಚಿಗೆ ಒಂದೇ ಪ್ರಶ್ನೆಯನ್ನು ನಾನು ನನ್ನಲ್ಲೇ ಪದೇ ಪದೇ ಕೇಳಿಕೊಳ್ಳುತ್ತೇನೆ....."ನಾವು ಸುರಕ್ಷಿತವಾಗಿ ಇದೀವಾ?" ಎಂದು. ಈಗ್ಗೆ ಸುಮಾರು ಒಂದು ದಶಕದ ಈಚೆಗೆ ಭದ್ರತೆ, ಸುರಕ್ಷತೆ ಎನ್ನುವುದು ಜೀವನಕ್ಕೆ ಊಟ, ವಸತಿ, ಬಟ್ಟೆಯಷ್ಟೇ ಮುಖ್ಯವಾಗಿದೆ. ಈ ಮುಂಚೆ ಭಯ ಆತಂಕದ ಕಾರಣ ಇದ್ದದ್ದು ಕಳ್ಳರು, ದರೋಡೆಕೋರರು, ಅತ್ಯಾಚಾರಿಗಳಿಂದ. ಆದರೆ ಈಗ ಜಾಗತಿಕ ಹಾಗು ಆಂತರಿಕ ಭಯೋತ್ಪಾದನೆಯಿಂದ ಹೆಚ್ಚುತ್ತಿರುವ ಆತಂಕ, ಸಂಶಯ, ಅಸುರಕ್ಷತೆಯ ಭಾವನೆ, ಅಶಾಂತಿಯ ಕಾರಣದಿಂದಾಗಿ ನಾವು ಮುಂಚಿನಕ್ಕಿಂತಾ ಹೆಚ್ಚು ಜಾಗರೂಕರಾಗಿದ್ದೀವಿ ಹಾಗು ಭದ್ರತೆಯ ಬಗ್ಗೆ ಹೆಚ್ಚು ಕಾಳಜಿ ವಹಿಸಿದ್ದೀವಿ ಹಾಗು ಚಿಂತಿತರಾಗಿದ್ದೀವಿ.


ಪ್ರತೀ ಬಾರಿ ನಾನು ಯಾವುದೇ ನೂರಾರು ಸಾವಿರಾರು ಜನರು ಸೇರುವ ಜಾಗಕ್ಕೆ ಹೋದಾಗ "ಭದ್ರತಾ ತಪಾಸಣೆ" ಎಂಬ ಒಂದು ಹಾಸ್ಯಾಸ್ಪದ ಘಟನೆಗೆ ಒಳಪಡುತ್ತೇನೆ ಹಾಗು ಸಾಕ್ಷಿಯಾಗುತ್ತೇನೆ. ಈ ಭದ್ರತೆ ಎನ್ನುವ ಪದಕ್ಕೆ ನಮ್ಮಲ್ಲಿ ಇನ್ನೂ ಸರಿಯಾದ ವ್ಯಾಖ್ಯಾನ ಹಾಗು ಗಾಂಭೀರ್ಯ ಸಿಕ್ಕಿಲ್ಲ್ಲ.  ಮುಂದೆ ಓದಿ »

ಸರಕಾರದ ಮೇಲೆ ಸಾರ್ವಜನಿಕ ನಿಯಂತ್ರಣ

     ಇತ್ತೀಚಿನ ದಿನಗಳಲ್ಲಿ ಕರ್ನಾಟಕ ಸರಕಾರ ಎರಡು ಪ್ರಮುಖ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಿತ್ತು . ಒಂದು ಹಂಪೆ ಕನ್ನಡ ವಿಶ್ವವಿದ್ಯಾನಿಲಯದ ಜಮೀನು ಪರಭಾರೆ , ಇನ್ನೊಂದು ಅರಣ್ಯ ಪ್ರದೇಶದ ಗಣಿಗಾರಿಕೆ . ಎರಡೂ ತಪ್ಪು ನಿರ್ಧಾರಗಳಿಗೆ ಬಳ್ಳಾರಿಯ ಗಣಿ ಧಣಿಗಳು ಕಾರಣರೆಂಬುವುದು ಬಹಿರಂಗ ಸತ್ಯ . ಕೆಲವೇ ಜನ ತಮ್ಮ ಹಿತಾಸಕ್ತಿಗಳಿಗಾಗಿ ಸರಕಾರಗಳನ್ನು ಬಳಸಿಕೊಂಡು ನಾಡನ್ನು ದೋಚುವುದಾದರೆ ಅಲ್ಲಿ ಪ್ರಜಾಪ್ರಭುತ್ವ ಎನ್ನುವ ಮಾತಿಗೆ ಅರ್ಥ ಉಳಿಯುವುದಿಲ್ಲ . ಉಳಿದ ಜನ ಸ್ತೋಮ ಬರಿಯ ಮೂಕ ಪ್ರೇಕ್ಷಕರಾಗುವುದಾದರೆ ಅದು ಪ್ರಜಾಸತ್ತೆಯ ವ್ಯಂಗ್ಯ . ಇಂದಿನ ಸರಕಾರಗಳು ಅವು ಯಾವುದೇ ಪಕ್ಷದವಿರಲಿ , ನೆಲದ  ಕಾನೂನುಗಳನ್ನೇ ದುರುಪಯೊಗಪಡಿಸಿಕೊಂಡು ಸ್ವಾರ್ಥ ಸಾಧಿಸಲು ಮುಂದಾಗುತ್ತಿರುವುದು, ಸರಕಾರಗಳ ನಾಯಕತ್ವ ವಹಿಸಿದವರ ನೈತಿಕ ದಿವಾಳಿತನಕ್ಕೆ  ಸಾಕ್ಷಿಗಳು .

ದೇವರು ಇದ್ದರೂ ಇಲ್ಲದಿದ್ದರೂ...

  ದೇವರು ಇದ್ದಾನೆ, ಅಥವಾ, ಇಲ್ಲ. ಎರಡರಲ್ಲೊಂದಂತೂ ಸತ್ಯವಾಗಿರಲೇಬೇಕಷ್ಟೆ. ದೇವರು ಇದ್ದಾನೆಂದಾದರೆ, ಸೃಷ್ಟಿಕರ್ತನೂ ಸರ್ವಶಕ್ತನೂ ಆದ ಅವನು ತನ್ನ ಸೃಷ್ಟಿಯೇ ಆದ ಈ ಜಗದ ಜೀವಿಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತಾನೆ. ’ನಮಗೆ ಅನ್ಯಾಯವಾಯಿತು’ ಎಂದು ಮಾನವರಾದ ನಾವು ದುಃಖಿಸಬೇಕಾಗಿಲ್ಲ. ಸ್ವಬುದ್ಧಿಯಿರುವ ನಾವು ಅಪರಾಧವೆಸಗದಿದ್ದರಾಯಿತು, ನಮಗಾವ ಅನ್ಯಾಯವೂ ಆಗದು.
  ದೇವರು ಇಲ್ಲವೆಂದಾದರೆ? ಅರ್ಥಾತ್ ಸೃಷ್ಟಿ-ಸ್ಥಿತಿ-ಲಯ ಇವುಗಳನ್ನು ನಿಯಂತ್ರಿಸುವ ಶಕ್ತಿಯೆಂಬುದು ಅಸ್ತಿತ್ವದಲ್ಲಿಲ್ಲವೆಂದಾದರೆ?
  ಆಗ, ’ನ್ಯಾಯ, ಅನ್ಯಾಯ’ ಎಂಬ ಪದಗಳಿಗೆ ಅರ್ಥವೇ ಇರುವುದಿಲ್ಲ. ಮನುಷ್ಯನೂ ಸೇರಿದಂತೆ ಜಗದ ಜೀವಿಗಳ ಜೀವನಕ್ಕೇ ಅರ್ಥವಿರುವುದಿಲ್ಲ. ಸುಮ್ಮನೆ ನಾವಿಲ್ಲಿಗೆ ಬಂದೆವು, ಹೋಗುತ್ತೇವೆ, ಅಷ್ಟೆ. ಅಂದಮೇಲೆ, ’ನಮಗೆ ಅನ್ಯಾಯವಾಯಿತು’ ಎಂದು ನಾವು ದುಃಖಿಸುವುದರಲ್ಲೂ ಅರ್ಥವಿಲ್ಲ. ಅರ್ಥವಿಲ್ಲದ ಜೀವನಕ್ಕಾಗಿ ಅನ್ಯಾಯವೆಸಗುವುದರಲ್ಲೂ ಅರ್ಥವಿಲ್ಲ. ಏಕೆಂದರೆ, ಸುಖ-ಭೋಗಗಳೂ ಇಲ್ಲಿ ಅರ್ಥಶೂನ್ಯ.  ಮುಂದೆ ಓದಿ »

ಕಾಲ ಮತ್ತು ಅವಕಾಶ


ಇದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ.

ನೀವು ಗಡಿಯಾರವನ್ನು ನೋಡಿದಲ್ಲಿ ಅಲ್ಲಿರುವುದು ಬರೀ ಭೂತ ಮತ್ತು ಭವಿಷ್ಯ. ವರ್ತಮಾನ ಇಲ್ಲವೇ ಇಲ್ಲ. ನಿಮ್ಮ ಗಡಿಯಾರ ಎ೦ದಿಗೂ ವರ್ತಮಾನ ಯಾವುದು ಎ೦ದು ಹೇಳಲಾರದು.. ಹಾಗೆ ಹೇಳಲು ಅದಕ್ಕೆ ಸಾಧ್ಯವೇ ಇಲ್ಲ, ಕಾರಣ, ಹಾಗೆ೦ದು ಹೇಳಿದ ಕ್ಷಣವೇ ಭೂತಕಾಲದ್ದಾಗಿರುತ್ತದೆ. ಅದು ಆಗಲೇ ಗತಕ್ಕೆ ಗತಿಸಿದೆ. ಆದ್ದರಿ೦ದ ಗಡಿಯಾರದ  ಕೈಗಳು ಭೂತದಿ೦ದ ಭವಿಷ್ಯದೆಡೆಗೆ ಚಲಿಸುತ್ತವೆ. ನಿಮ್ಮ ಗಡಿಯಾರದಲ್ಲಿ ವರ್ತಮಾನವಿಲ್ಲ. ವರ್ತಮಾನ, ಕಾಲದ ಭಾಗವಲ್ಲ. ನೀವು ನಿಮ್ಮ ಶಾಲೆಗಳಲ್ಲಿ ಯೂನಿವರ್ಸಿಟಿಗಳಲ್ಲಿ ಕಲಿತಿದ್ದೀರಿ, ವರ್ತಮಾನವು ಸಮಯದ ಒ೦ದು ಭಾಗವೆ೦ದು. ಅದು ಹಾಸ್ಯಾಸ್ಪದ. ವರ್ತಮಾನ ಕಾಲದ ಭಾಗವಲ್ಲ. ನೀವು ಅನೇಕ ಸಾರಿ ಇದನ್ನು ಪುನರಾವರ್ತನೆಯಾಗುವುದನ್ನು ಕೇಳಿದ್ದೀರಿ, ಕಾಲವನ್ನು ಮೂರು ಭಾಗಗಳನ್ನಾಗಿ ವಿ೦ಗಡಿಸಬಹುದು-ಭೂತ, ವರ್ತಮಾನ, ಮತ್ತು ಭವಿಷ್ಯತ್ಕಾಲ. ಅದು ನಿಮ್ಮ ಮನ್ಮಸ್ಸಿನಲ್ಲಿ ಒ೦ದು ಕ೦ಡಿಷನ್ ಆಗಿದೆ. ಇಲ್ಲ. ಸಮಯಕ್ಕೆ ಇರುವುದು ಎರಡೇ ವಿಭಜನೆ. ಭೂತ ಭವಿಷ್ಯ.

ಹಾಗಾದರೆ ವರ್ತಮಾನ ಇರುವುದಾದರೂ ಎಲ್ಲಿ?  ಮುಂದೆ ಓದಿ »

ಆಧ್ಯಾತ್ಮಿಕ ಸತ್ಯ ಮತ್ತು ಅನುಭವವೇದ್ಯ ನಂಬಿಕೆಗಳು

ಜಗತ್ತಿನಲ್ಲಿ ಜನ ಸುಳ್ಳನ್ನು ನಂಬುವಷ್ಷು ಸತ್ಯವನ್ನು ನಂಬುವುದಿಲ್ಲ. ಮೂಢನಂಬಿಕೆಗಳು ಕಂದಾಚಾರಗಳಿಗೆ ಬಲಿಪಶುಗಳಾಗುವ ಜನ ಎಲ್ಲಕಾಲಕ್ಕೂ ಇರುತ್ತಾರೆ. ವಿಜ್ಞಾನ ಇಂದಿನಷ್ಟು ಮುಂದುವರೆಯದಿದ್ದ ಕಾಲದಲ್ಲಿ ಅಂತಹ ಮೂಢನಂಬಿಕೆಗಳು ಹೆಚ್ಚು ಇದ್ದರೇನು! ವ್ಯಷ್ಠಿ ಮತ್ತು ಸಮಷ್ಠಿಯನ್ನು ದೈವಿಕ ಆಧ್ಯಾತ್ಮಿಕ ಶಕ್ತಿಗಳೆ ಆಳುತ್ತಿದ್ದ ಕಾಲವದಾಗಿತ್ತು. ಬ್ರಾಹ್ಮಣರಲ್ಲಿ ಬ್ರಹ್ಮ ತೇಜಸ್ಸು ಕ್ಷತ್ರಿಯರಲ್ಲಿ ಕ್ಷಾತ್ರ ಯೋಧರ ತೇಜಸ್ಸು ಮೆರೆಯುತ್ತಿದ್ದ ಕಾವದು. ಆ ಶಕ್ತಿಯನ್ನು ಅವೆರಡೂ ಗುಂಪಿನವರು ಸ್ವಯಂಕೃತಾಪರಾಧದಿಂದಲೇ ಕಳೆದುಕೊಂಡರು ಎಂಬುದನ್ನು ಇತಿಹಾಸ ಹೇಳುತ್ತದೆ

 ಮುಂದೆ ಓದಿ »

ಹೋಳಿ ಹಬ್ಬ

ಉತ್ತರ ಭಾರತೀಯರು ಮಾತ್ರ ಆಚರಿಸುತ್ತಿದ್ದ ಹೋಳಿ ನಮಗೆಲ್ಲ ಟಿವಿಯಲ್ಲಿ, ಚಲನಚಿತ್ರಗಳಲ್ಲಿ ನೋಡಿ ಗೊತ್ತಿದ್ದ ಹಬ್ಬ. ಆದರೆ ಕಾಲ ಬದಲಾದಂತೆ ಹೋಳಿ ಹಬ್ಬ ರಂಗು ರಂಗಿನಾಟವಾಗಿ ಮಾರ್ಪಟ್ಟು ದಕ್ಷಿಣ ಭಾರತೀಯರನ್ನೂ ಸೆಳೆಯತೊಡಗಿದೆ. ಓಕುಳಿಯಾಡುವ ಮೋಜು, ಫಾಲ್ಗುಣ ಶುಕ್ಲ ಹುಣ್ಣಿಮೆಯ ಈ ದಿನ ವಯೋಬೇಧವಿಲ್ಲದೆ ತೆಂಕಣದಲ್ಲೂ ತನ್ನ ಪ್ರಭಾವ ಬೀರತೊಡಗಿದೆ. ಎದಿರು ಸಿಕ್ಕವರ ಮುಖಕ್ಕೆ ಬಣ್ಣ ಬಳಿಯುವುದು, ಓಕುಳಿಯನ್ನೆರಚುವುದು ಈ ಹಬ್ಬದ ಮೋಜಿನ ಕ್ಷಣಗಳು. ಮೋಜು ಮನರಂಜನೆ ಹೊಸಕಾಲದ, ಹದಿಹರೆಯದವರ ಬಯಕೆಯೂ ಆಗಿರುವುದರಿಂದ ಹೋಳಿ ಈಗ ನಾವೆಲ್ಲರೂ ಒಪ್ಪಿಕೊಂಡ ಅಪ್ಪಿಕೊಂಡ ಹಬ್ಬವಾಗಿಯೂ ಬದಲಾಗಿದೆ. ಒಂದು ರೀತಿಯಲ್ಲಿ ಸಂಸ್ಕೃತಿಪ್ರಸರಣದ ರೀತಿಯಾಗಿಯೂ ನಾವಿದನ್ನು ನೋಡಬೇಕಾಗಿದೆ. ಜೊತೆಗೆ ಮನರಂಜನೆಯ ಸಹಜ ಮಾಧ್ಯಮಗಳಾದ ದೂರದರ್ಶನ ಮತ್ತು ಚಲನಚಿತ್ರಗಳಂತೂ ಹೋಳಿಯನ್ನು ಸಂಭ್ರಮದ ಮೋಜಾಗಿ, ಜನಮಾನಸದ ಆಸೆಯ ಕವಲಿಗೆ ಮತ್ತೊಂದು ಮಜಲನ್ನೂ ಸೇರಿಸಿವೆ.
 ಮುಂದೆ ಓದಿ »

ಕಾಲದ ಕನ್ನಡಿ

navada writes



ಮೊದಲು ಮಾನವ ತನ್ನನ್ನು ಪ್ರೀತಿಸಲು ಅರಿತಾಗ ಪ್ರಪ೦ಚದಲ್ಲಿ ಅಶಾ೦ತಿ ಕೊನೆಗೊಳ್ಳುತ್ತದೆ.ತನ್ನ ಜೀವ ಹಾಗೂ ಶಕ್ತಿಯ  ಬೆಲೆ ಅರಿತ ಯಾರೇ ಆದರೂ ಆತ್ಮಹತ್ಯಾ ಬಾ೦ಬರ್ ಗಳಾಗಲು ಮು೦ದೆ ಬರುವುದಿಲ್ಲ. ಒ೦ದು ಬದುಕಿನ ಬೆಲೆ ಯಾ ಜೀವದ ಬೆಲೆಯನ್ನು ಅರಿಯದ ಮನುಷ್ಯರು ಯಾ ಉಗ್ರಗಾಮಿಗಳು ವಿಶ್ವದೆಲ್ಲೆಲ್ಲೂ ಮಾರಣಹೋಮ ನಡೆಸುತ್ತಿದ್ದಾರೆ.  ಕೇವಲ ಪೂರ್ವಾಗ್ರಹ ಪೀಡಿಕೆಗಳಿ೦ದ,ಅತ್ಯ೦ತ ಕೆಳಸ್ತರದ ಆರ್ಥಿಕ ದುಸ್ಥಿತಿಯಿ೦ದ, ಒಡನಾಟದಿ೦ದ ಮನುಷ್ಯ ಹಾದಿ ತಪ್ಪುತ್ತಾನೆ.ಮನುಷ್ಯ ಕೆಡಲು ಸಾವಿರಾರು ಹಾದಿಗಳಿವೆ.ಆದರೆ ಅ೦ಧಕಾರದಿ೦ದ ಮರಳಿ ಬೆಳಕಿನತ್ತ ಬರಲು ಸಾಧ್ಯವಿಲ್ಲ.
 ಮುಂದೆ ಓದಿ »

Syndicate content