ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ |
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ ||
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ |
ಕೊನೆಯೆಲ್ಲಿ? ಚಿಂತಿಸೆಲೊ -- ಮಂಕುತಿಮ್ಮ ||

— ಡಿ. ವಿ. ಜಿ.

ಸಂಪದ ಆರ್ಕೈವಿನಿಂದ

ಚಿಂತನೆ

ಗೆಳೆಯರೇ ಮರೆತಿರಾ ಆ ಸಂಜೆ ?

ಗೆಳೆಯರೇ ಮರೆತಿರಾ ಆ ಸಂಜೆ ?



ಬಾಳಿನ
ವಿಷಣ್ಣತೆಯ
ಮಾನದಂಡ
ಖಾಲಿಖಾಲಿ
ಬೆಂಚುಗಳು
ಭಣಗುಡುವ
ಏಕಾಂತ
ಗೆಳೆಯರೇ
ಇನ್ನೂ
ನೆನಪಿಗೆ
ಬರುತ್ತಿಲ್ಲವೇ
ಆ ಸಂಜೆಯ
ಸವಿಮಾತಿನ
ವಿಹಾರ
ಕೂಟ
ನಲಿವಾಟ
ನೀವೆಲ್ಲ
ಮರೆತರೂ,
ನಿಮ್ಮೆಲ್ಲರ
ಮತ್ತೊಮ್ಮೆ
ಒಂದಾಗೋ
ಸುದಿನಗಳ
ನಿರೀಕ್ಷೆಯಲ್ಲೇ
ತಾನು ಮಾತ್ರ
ದಿನಾ
ಇಲ್ಲೇ ಎನ್ನುವ
ಮೈಯೆಲ್ಲಾ
ಬೀಳಲು ಬಿಟ್ಟ

ದೊಡ್ಡಾಲ
ಉಧ್ಯಾನ
ಮತ್ತು
ನಾನು




ಪೆಟ್ರೋ ಡಾಲರ್ ಮತ್ತು ಅದರ ಪುರಾಣ

ಗೆಳೆಯರೇ,

ನಮಗೆಲ್ಲ ಈ ಪ್ರಶ್ನೆಗಳಿರಬಹುದು - ಜಗತ್ತಿನ ದೇಶಗಳೆಲ್ಲ ಡಾಲರ್ ಅಂತ ಯಾಕೆ  ಸಾಯುತ್ತವೆ? ಮೊನ್ನೆ ಮೊನ್ನೆ ಅಮೆರಿಕದಲ್ಲಿ (ಹಾಗು ಜಗತ್ತಿನಲ್ಲಿ ) ಆರ್ಥಿಕ ಸಂಕಷ್ಟವಾದಾಗ ಪೆಟ್ರೋಲ್ ಬೆಲೆ ಇಳಿಯುವ ಬದಲು ಏಕೆ $೧೦೦ ವರೆಗೂ ಜಾಸ್ತಿಯಾಯಿತು?  ಆರ್ಥಿಕ ಸಂಕಷ್ಟವಾದಾಗ ಅಮೆರಿಕ ಏಕೆ , ೯೦ರ ದಶಕದಲ್ಲಿ ಭಾರತದಂತೆ ಚಿನ್ನವನ್ನು ಒತ್ತೆ ಇಡಲಿಲ್ಲ ? ಅಮೆರಿಕಾವು ತೈಲಕ್ಕಾಗಿಯೇ (ತನ್ನ ಹತ್ತಿರವೇ ಸಾಕಷ್ಟು ಇದ್ದರು ) ಇರಾಕ್ ಮೇಲೆ ಯುದ್ಧ ಸಾರಿತೆ? ಇದು ನಿಜವೇ?

ಇದಕ್ಕೆಲ್ಲ ಉತ್ತರ ಒಂದೇ - ಪೆಟ್ರೋ ಡಾಲರ್.  ಬನ್ನಿ ಇದರ ಬಗ್ಗೆ ಸ್ವಲ್ಪ ತಿಳಿಯೋಣ.
 ಮುಂದೆ ಓದಿ »

ಮೊಳಗಲಿ ಕನ್ನಡದ ಕೀರ್ತಿ

   ಮೊಳಗಲಿ ಕನ್ನಡದ ಕೀರ್ತಿ 
 
   ಕನ್ನಡ ಅಕ್ಷರದೊಡನೆ ನಾ ಆರಂಭಿಸಿದ್ದ ಒಡನಾಟ
   ನನಗಿಂದು ಮಾಡಿದೆ ಕನ್ನಡ ವ್ಯಾಮೋಹದ ಮಾಟ
 
   ಕನ್ನಡದ ಅಕ್ಷರಗಳಲ್ಲಿ ನಾ ಕಾಣುವೆನು ಅನುರಾಗ
   ಅದಾಗಿ ಹೋಗಿದೆ ಬಿಡಿಸಲಾಗದ ಅನುಬಂಧವೀಗ
 
   ಕನ್ನಡ ಎನಗೆ ನನ್ನೆದೆಯಲ್ಲಿನ ಉಸಿರಿನಷ್ಟೇ ಸರಾಗ
   ಕನ್ನಡಕೆ ಹೃದಯ ಬಡಿತ ಪಡೆದುಕೊಳ್ಳುವುದು ವೇಗ
 
   ಕನ್ನಡ ನನ್ನ ನಾಡಿಗಳಲ್ಲಿ ಹರಿಯುವ ರಕ್ತದಷ್ಟೆ ಸಹಜ
   ಹೃದಯದಲಿ ಶಾಶ್ವತವಾಗಿ ನೆಟ್ಟಿಹೆನು ಕನ್ನಡ ಧ್ವಜ
 
   ಕನ್ನಡ ಅಕ್ಷರಗಳನ್ನು ಓದುವಾಗ ಸಿಗುವ ತಲ್ಲೀನತೆ
   ಹೆಚ್ಚಿಸುವುದು ಓದು ಹಾಗು ಕೆಲಸದಲ್ಲಿನ ಏಕಾಗ್ರತೆ                      &nb  ಮುಂದೆ ಓದಿ »

ಕ್ರಿಕೆಟಿನ ಮೂರ್ಖ ನಿಯಮಗಳು

ಮೊನ್ನೆ ಶ್ರೀಲಂಕಾದಲ್ಲಿ ದಿಲ್ಶನ್ ಎಂಬವನ ಸಮಯಪ್ರಜ್ನೆಯಿಂದ ಸೆಹ್ವಾಗ ನಿಗೆ ಶತಕ ತಪ್ಪಿದ ಸಂಗತಿ ನಿಮ್ಮಲ್ಲಿ ಹಲವರಿಗೆ ನೆನಪಿರಬಹುದು. ಎದುರಾಳಿಗೆ ಅತಿ ಕಡಿಮೆ ರನ್ನು ನೀಡುವುದು ಯಾವುದೇ ಬೌಲರ್ ಮಾಡಬೇಕಾದ ಕೆಲಸ. ಅಂಥ ಅವಕಾಶವನ್ನು ಬಳಸಿಕೊಳ್ಳದಿದ್ದರೆ ಅವನ ಮೇಲೆ ಮ್ಯಚ್ ಫಿಕ್ಸಿಂಗ್ ಆರೋಪ ಹೊರಿಸಬಹುದು. ಉದಾಹರಣೆಗೆ ಸೆಮಿಫೈನಲಿಗೆ ತೇರ್ಗಡೆಯಾಗಲು ರನ್ ಸರಾಸರಿ ಮುಖ್ಯ ಅಂತಿಟ್ತುಕೊಳ್ಳಿ, ಆಗ ನೋಬಾಲ್ ಮೂಲಕ ಕೇವಲ ಒಂದು ರನ್ ಬಿಡುವುದು ತಂಡದ ಹಿತದೃಷ್ಟಿಯಿಂದ ಮುಖ್ಯವೋ ಅಥವಾ ಸರಿಯಾದ ಎಸೆತ ಎಸೆದು ಬೌಂಡರಿಯೋ ಸಿಕ್ಸರೋ ನೀಡುವುದು ಮುಖ್ಯವೋ? ಆಗ ಸರಿಯಾದ ಎಸೆತ ಎ೩ಸೆದರೆ ತಂಡದ ಹಿತ ಬಲಿಕೊಟ್ಟಂತೆ ಆಗುತ್ತೆ. ಉದ್ದೇಶಪೂರ್ವಕವಾಗಿ ನೋಬಾಲ್ ಎಸೆದುದರಿಂದ ರಣದೀವ್ ಅನ್ನುವ ಎಸೆತಗಾರನಿಗೆ ಶಿಕ್ಷೆಯೂ ದಿಲ್ಶನ್ನನಿಗೆ ದಂಡವೂ ಆಯಿತು. ಕ್ರಿಕೆಟಿನ ನಿಯಮವನ್ನು ಬಳಸಿಕೊಂಡುದಕ್ಕೆ ಯಾಕೆ ಶಿಕ್ಷೆ ಕೊಟ್ಟರೋ ಅರ್ಥವಾಗುವುದಿಲ್ಲ. ಶ್ರೀಲಂಕಾದವರೇನೂ ಸಾಚಾ ಅಲ್ಲ ಅಂತ ಎಲ್ಲರಿಗೂ ಗೊತ್ತು ಬಿಡಿ. ಅದಕ್ಕೆ ಮುರಲಿಧರನ್ ಕೈ ನೇರಗೊಳಿಸಿ ಎಸೆಯುವ ಬೌಲಿಂಗ್ ಸಾಕ್ಷಿ. ಅದು ಬಿಡಿ.  ಮುಂದೆ ಓದಿ »

ಅದನ್ನು ಕೆಳಗೆ ಬಿಡಿ



ಒಬ್ಬ ಅಧ್ಯಾಪಕರು ತನ್ನ ಕೈಯ್ಯಲ್ಲೊಂದು ನೀರು ತುಂಬಿದ ಗಾಜಿನ ಲೋಟವೊಂದನ್ನು ಹಿಡಿದು ತನ್ನ ಪಾಠ ಆರಂಭಿಸಿದ್ದರು.
ಈ ಗಾಜಿನ ಲೋಟ ಎಷ್ಟು ಭಾರ ಇರಬಹುದು?
ನೂರು ಗ್ರಾಂ ,  ನೂರೈವತ್ತು..?  ಅಲ್ಲ ಇನ್ನೂರು..!!" ವಿದ್ಯಾರ್ಥಿಗಳಿಂದ ತರಹೇ ವಾರೀ ಉತ್ತರ.
"ಇದನ್ನು ತೂಕ  ಮಾಡುವವರೆಗೆ ನಿಜವಾದ ತೂಕ ಸರಿಯಾಗಿ ನಾನೂ ಹೇಳಲಾರೆ,  ಆದರೆ ನನ್ನ ಪ್ರಶ್ನೆ ಇದಲ್ಲ.."  ಅಧ್ಯಾಪಕರೆಂದರು.  
"ನಾನೀ ಲೋಟವನ್ನು ಕೆಲವು ಸಮಯದವರೆಗೆ ಹೀಗೆ ಹಿಡಿದೇ ಇದ್ದರೆ ಏನಾಗುತ್ತದೆ?"
"ಏನೂ ಆಗಲ್ಲ"  ಎಂದನೊಬ್ಬ ವಿದ್ಯಾರ್ಥಿ
"ಅದು ನಿಜ,  ಆದರೆ, ಹೀಗೇ ಒಂದು ಗಂಟೆ ಹಿಡಿದುಕೊಂಡಿದ್ದರೆ..?"
"ನಿಮಗೆ ಕೈ ನೋವು ಬರಬಹುದು" ಎಂದನು ಮತ್ತೊಬ್ಬ
"ಹೌದು ಸರಿಯಾದ ಉತ್ತರ, ಅದೇ ,ನಾನು ಇದನ್ನು ಒಂದು ದಿನವಿಡೀ ಹಿಡಿದುಕೊಂಡೇ ಇದ್ದರೆ?" ಕೇಳಿದರು ಅಧ್ಯಾಪಕರು.  ಮುಂದೆ ಓದಿ »

ಇವರು ತಪ್ಪಿಸಿಕೊಂಡವರಂತೆ!

ನೆನ್ನೆ ಸಂಜೆ ನಾಲ್ಕರ ಸಮಯದಲ್ಲಿ ಯಾವುದೋ ಕೆಲಸದ ನಿಮಿತ್ತವಾಘಿ ಸ್ನೇಹಿತರೊಂದಿಗೆ, ಮಾಗಡಿ ರಸ್ತೆಯಿಂದ ಯಶವಂತಪುರದ ಕಡೆಗೆ ಆಟೋದಲ್ಲಿ ಹೋಗುತ್ತಿದ್ದೆ. ದಾರಿಯಲ್ಲಿ ಅಲ್ಲಲ್ಲಿ ಕಾಖಿ ಚೆಡ್ಡಿ ಅಂಗಿ ತೊಟ್ಟ ಐದಾರು ಮಂದಿ ದಾರಿಯಲ್ಲಿ ತೂಗಾಡಿಕೊಂಡು ಹೋಗುತ್ತಿದ್ದರು. ಒಂದೆರಡು ಕಡೆ ಒಂದಿಬ್ಬರು ತಿಪ್ಪೆ ಗುಂಡಿ ಕೆದಕುತ್ತಿದ್ದರು. ಅವರೆಲ್ಲಾ ಭಿಕ್ಷುಕರ ಪುನರ್ವಸತಿ ಕೇಂದ್ರದಿಂದ ತಪ್ಪಿಸಿಕೊಂಡು ಬಂದವರು ಎಂಬ ನಮ್ಮ ಮಾತಿಗೆ ಆಟೋ ಡ್ರೈವರ್ ಹೀಗೆ ಹೇಳಿದ. ‘ಸರ್, ಲೋಕದ ಕಣ್ಣಿಗೆ ಅವರು ಅಲ್ಲಿಂದ ತಪ್ಪಿಸಿಕೊಂಡು ಬಂದವರು. ಆದರೆ ಅವರನ್ನು ಅಲ್ಲಿಯವರೇ ಬಟ್ಟು ಕಳುಹಿಸುತ್ತಿದ್ದಾರೆ, ಅಲ್ಲಿ ಸಾಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲಿ ಸಾಯುವ ಬದಲು ಬೇರೆಡೆ ಸಾಯಲಿ ಎಂದು ಸರ್ಕಾರವೇ ಅವರನ್ನು ಅನಧಿಕೃತವಾಗಿ ಬಿಡುಗಡೆ ಮಾಡಿ ತಪ್ಪಿಸಿಕೊಂಡು ಹೋಗುತ್ತಿದ್ದಾರೆ ಎಂದು ಸುದ್ದಿ ಹಬ್ಬಿಸುತ್ತಿದೆ’ ಎಂದ. ನಂತರ ಮಾತನಾಡುತ್ತಾ ಅತ ನೀಡಿದ ಕೆಲವು ಮಾಹಿತಿಗಳು ಗಾಬರಿ ಹುಟ್ಟಿಸುವಂತಿದ್ದವು.


 


   ಮುಂದೆ ಓದಿ »

ಹರಕೊಂಡ್ ತಿನ್ನುವವನನ್ನ ಮುರ್ಕೊಂಡ್ ತಿನ್ನುವುದು

ನಮಸ್ಕಾರ,

ನಮಗೆಲ್ಲ ತಿಳಿದಿದೆ ... ಸಂಸ್ಕೃತ ಒಂದು  ಪ್ರಾಚೀನ, ಪರಿಪೂರ್ಣ ಭಾಷೆ.  ಅದೊಂದು ಜ್ಞಾನ ಭಂಡಾರ.  ಸಂಸ್ಕೃತವನ್ನು ಉಳಿಸಬೇಕು. ಅದರಿಂದ ಜ್ಞಾನವನ್ನು ಪಡೆದು, ನಮ್ಮ ಜೀವನದಲ್ಲಿ, ಇಂದಿನ ವಿಜ್ಞಾನದಲ್ಲಿ, ರಾಜಕೀಯದಲ್ಲಿ, ವೈದ್ಯಕೀಯ ಕ್ಷೇತ್ರದಲ್ಲಿ ಅಳವಡಿಸಿಕೊಳ್ಳಬೇಕು.  ಕೆಲವೊಂದು ಸಂಸ್ಥೆಗಳು ಈ ದಿಸೆಯಲ್ಲಿ ಅದ್ಭುತ ಕೆಲಸ ಮಾಡುತ್ತಿವೆ.  ಇಷ್ಟೇ ಆದರೆ ಸಾಕು. ಎಲ್ಲರಿಗೂ ಪ್ರಯೋಜನವಾಗುತ್ತದೆ.

ಈಗ ಒಂದು ಹೊಸ ಟ್ರೆಂಡ್ ಶುರುವಾಗಿದೆ - ಸಂಸ್ಕೃತ ಗ್ರಾಮಗಳನ್ನು, ಮನೆಗಳನ್ನು ನಿರ್ಮಿಸುವುದು - ಸಾಸನ ಒರಿಸ್ಸಾ, ಜಿಹಿರಿ ಮಧ್ಯಪ್ರದೇಶ , ಮತ್ತೂರು ಕರ್ನಾಟಕ ... (ಇದಕ್ಕೆ ಸಂಸ್ಕೃತ ಭಾರತೀಯಂತಹ ದೊಡ್ಡ ಸಂಸ್ಥೆಗಳು ಹಾಗು ಹಲವಾರು ವ್ಯಕ್ತಿಗಳ ಪ್ರಯತ್ನವಿದೆ).  ಅಂದರೆ ಆ ಗ್ರಾಮಗಳಲ್ಲಿ ಎಲ್ಲರು ಸಂಸ್ಕೃತವನ್ನು ಮಾತನಾಡಲಿಕ್ಕೆ ಬಳಸುತ್ತಾರೆ.
 ಮುಂದೆ ಓದಿ »

ಕರ್ನಾಟಕವನ್ನು ಒಡೆಯೋಣ !!!!!.

            ಅರೆ !! ಇದೇನಪ್ಪ !!! ಈ ಥರ ಹೇಳ್ತಿದ್ದಾರೆ ಅಂತಾ ಆಶ್ಚರ್ಯನಾ ? ಈ ಲೇಖನ ಪೂರ್ತಿ ಓದಿದಮೇಲೆ ನಿಮ್ಮ ಅಭಿಪ್ರಾಯ ಹೇಳಿ. (ದಯವಿಟ್ಟು ಈ ಲೇಖನವನ್ನ ವಾಟಾಳ್ ನಾಗರಾಜ್ ಗೆ ಕೊಡಬೇಡಿ. ನನ್ನ ತಿಥಿ ಮಾಡ್ತಾರೆ.)  ಮುಂದೆ ಓದಿ »

Syndicate content