ಎಲ್ಲರೂ ತಮ್ಮ ತಪ್ಪುಗಳಿಗೆ ಅನುಭವ ಎಂದು ಕರೆಯುತ್ತಾರೆ.

— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಅನುಭವ ಕಥನ

‘ಮಲಬಾರ್ ಪೈಡ್ ಹಾರ್ನ್ ಬಿಲ್’ ಗಳಿಗೂ ಆಗಾಗ ‘ನಶೆ’ ಏರುತ್ತದೆ!

 

ಮಲಬಾರ್ ಪೈಡ್ ಹಾರ್ನ್ ಬಿಲ್ ತಲೆ  ಸುತ್ತಿ ನೆಲಕ್ಕೊರಗಿದಾಗ ಉಪಚರಿಸುತ್ತಿರುವ ಪ್ರೊ. ಗಂಗಾಧರ ಕಲ್ಲೂರ್ ಹಾಗೂ ಪ್ರೊ.  ಆಂಟೋನಿ

 

ಹಾರ್ನ್ ಬಿಲ್ ಹಕ್ಕಿಗೆ ‘ನಶೆ’ ಏರುತ್ತದೆಯೇ?! ಆಗಾಗ ಏರುತ್ತದೆ! ಏರಿದ್ದು ಇಳಿಯುವವರೆಗೆ ಆಗಸಕ್ಕೆ ಲಗ್ಗೆ ಹಾಕಬಲ್ಲ ಈ ಕೌತುಕದ ಪಕ್ಷಿ ಭೂಮಿಗಿಳಿಯುತ್ತದೆ!   ಮುಂದೆ ಓದಿ »

ತಟ್ಟಿ ಹೋಟೆಲ್ ಚಾ

  ಪ್ರವಾಸಹೋದಾಗ ಊರ ಹೊರಗಿನ ಗೂಡಂಗಡಿಯ ಅಥವಾ ತಟ್ಟಿ ಹೋಟೆಲ್‌ನ ಹೊರಗೆ ಮುರುಕು ಬೆಂಚಿನ ತುದಿಯಲ್ಲಿ ಕುಳಿತು ರಸ್ತೆ-ಬಯಲು-ಹೊಲ-ಗುಡ್ಡ ಇತ್ಯಾದಿ ನೋಡುತ್ತ ಬಿಸಿಬಿಸಿ ಚಾ ಗುಟುಕರಿಸುವುದೆಂದರೆ ನನಗೆ ಬಹಳ ಇಷ್ಟ. ಏಕೆಂದರೆ
* ನನ್ನ ಇಷ್ಟದ ಪೇಯವಾದ ಚಹಾವನ್ನು ಭಿನ್ನ ರೀತಿಯಲ್ಲಿ ಆಸ್ವಾದಿಸುವ ಅವಕಾಶ ಅದಾಗಿರುತ್ತದೆ.
* ಪ್ರಕೃತಿಗೆ ಮೈಮನ ಒಡ್ಡಿಕೊಂಡು ಪೇಯಸ್ವಾದ ಮಾಡುವ ಖುಷಿ ಅಲ್ಲಿ ಲಭ್ಯವಾಗಿರುತ್ತದೆ.
* ಪರಿಸರ ಸಂಪೂರ್ಣ ಹೊಸತಾಗಿರುತ್ತದೆ.
* ಸುತ್ತ ಕಾಣುವ ಮುಖಗಳೆಲ್ಲ ಹೊಸ ಮುಖಗಳೇ ಆಗಿರುವುದರಿಂದ ಹೊಸ ಉಲ್ಲಾಸ ಅಲ್ಲಿರುತ್ತದೆ.
* ಬಿಗುಮೊಗದ ಮಾಣಿಯ ಬದಲು ನಗುಮೊಗದ ಮಾಲೀಕ (ಮಾಲಿಕ) ಚಾ ತಂದುಕೊಡುತ್ತಾನೆ.
* ನನ್ನೂರ ಜಂಜಡ, ಮನೆಯ ಜಂಜಡಗಳನ್ನೆಲ್ಲ ಮರೆತು ನಿರಾಳವಾಗಿ ಹನಿಹನಿ ಚಾ ಗುಟುಕರಿಸಲು ಅಲ್ಲಿ ಸಾಧ್ಯವಾಗುತ್ತದೆ.  ಮುಂದೆ ಓದಿ »

ನಾವು ಬಳೆವೆಡಕದ ಜೀವ ಕಿತ್ತಂತೆ ಪರಿಸರ ನಮ್ಮ ಹಲ್ಲು ಕೀಳುವ ಕಾಲ ದೂರವಿಲ್ಲ!

 

ಬಳೆವೆಡಕದ ಹಲ್ಲುಗಳು ಹೀಗಿರುತ್ತವೆ. ಪ್ರೊ. ಗಂಗಾಧರ ಕಲ್ಲೂರ್ ಅವರ ವಿವರಣೆ.

 

"ಪರಿಸರದ ಮಿತಿಯನ್ನು ಮೀರುವುದು ಹಾಗೂ ಅಸಹಜ ಗತಿಯಲ್ಲಿ ಬದಲಾವಣೆ ಹೊಂದುವುದು ಆಧುನಿಕ ಜೀವನ ಪದ್ಧತಿಯನ್ನು ಗುರುತಿಸುವ ಪ್ರಮುಖ ಲಕ್ಷಗಣಗಳು ಎನ್ನಬಹುದು" - ದೇಸಿ ಜೀವನ ಪದ್ಧತಿಯ ಪ್ರತಿಪಾದಕ ಪ್ರಸನ್ನ ಅವರು ಸೂಚ್ಯವಾಗಿ ನಮ್ಮ  ಅದುಮಿದ ಆಸೆಗಳಿಗೆ ಚುಚ್ಚುತ್ತಾರೆ.

ಪರಿಸರ ಪತ್ರಕರ್ತ ನಾಗೇಶ ಹೆಗಡೆ ತಮ್ಮ ಬಹು ಚರ್ಚಿತ ಪುಸ್ತಕ ‘ಸುರಿಹೊಂಡ - ಭರತಖಂಡ’ದಲ್ಲಿ ಹೇಳುವಂತೆ -"ಟೆಕ್ನಾಲಾಜಿ, ನಿಸರ್ಗವನ್ನು ತಿದ್ದಿ ತೀಡಿ ಪೋಷಿಸಿ ಒಲಿಸಿಕೊಳ್ಳುವ ಬದಲು ಬಗ್ಗುಬಡಿದು ಧಮಕಿ ಹಾಕಿ ಒಗ್ಗಿಸಿಕೊಳ್ಳಬೇಕು ಎಂಬ ಪಾಠವನ್ನು ನಮಗೆ ಹೇಳುತ್ತದೆ!".

ಈ ಅಭಿವೃದ್ಧಿಯ ಹಾದಿಯಲ್ಲಿ ಹುಟ್ಟಿಕೊಂಡಿರುವ ಸಮಸ್ಯೆಗಳು ಅಷ್ಟಿಷ್ಟಲ್ಲ. ಇವುಗಳಲ್ಲಿ ಹೆಚ್ಚಿನವು ಪಾಶ್ಚಾತ್ಯ ಅಭಿವೃದ್ಧಿ ಮಾದರಿಗಳಿಂದಲೇ ಸೃಷ್ಟಿಯಾದವು. ಎಗ್ಗಿಲ್ಲದ ನಗರೀಕರಣ, ಕೈಗಾರಿಕೀಕರಣದಿಂದಾಗಿ ವಸತಿ ಸಮಸ್ಯೆ, ಪರಿಸರ ಮಾಲಿನ್ಯ, ಕುಡಿಯುವ ನೀರು - ವಿದ್ಯುತ್ ಅಭಾವ, ಸಂಕೀರ್ಣ ಸಾರಿಗೆ ವ್ಯವಸ್ಥೆ, ಬೃಹತ್ ಯೋಜನೆಗಳಿಂದಾಗಿ ಜನರ ಒಕ್ಕಲೆಬ್ಬಿಸುವಿಕೆ..ಹೀಗೆ ಮುಂದುವರೆದು ಪರಿಸರವನ್ನು ಬಗ್ಗುಬಡಿಯುವ ಹಂತಕ್ಕೆ ನಾವು ಹೋದೆವು. ಆದರೆ ಈ ಭೂಮಿಯ ಮೇಲೆ ಮಾನವನಂತೆ ಇನ್ನುಳಿದ ಜೀವಿಗಳೂ ಇವೆಯಲ್ಲ ಎಂಬ ಸಂಗತಿ ಮರೆಯಿತು. ಸತತ ಒತ್ತುವರಿ ಮಾಡಿ ಅವುಗಳ ಮನೆ ಕಸಿದುಕೊಂಡು ಬಂಗ್ಲೆ ಕಟ್ಟಿಕೊಂಡ ನಮ್ಮನ್ನು ಇಂದು ಅವು ತಮ್ಮ ಹಕ್ಕು ಕೇಳಲು ಬರುತ್ತಿವೆ.  ಮುಂದೆ ಓದಿ »

ಕನ್ನಡ೦ ಕಲ್ಪವೃಕ್ಷ೦

ನಾವೆಲ್ಲಾ ಹೀಗೆ, ಬರವಣಿಗೆಯಲ್ಲಿ ಮಾತ್ರ ತೋರ್ಪಡಿಸುತ್ತೇವಾದರೂ ಕನ್ನಡಕ್ಕಾಗಿ ನಾವು ಮಾಡ ಬೇಕಿರುವುದು ಏನು? ಎ೦ದು ಚಿ೦ತಿಸಿದ್ದೇವೆಯೇ?. ನಿಜ, ಎಲ್ಲಿಯಾದರು ಕನ್ನಡಕ್ಕೆ ಅವಮಾನವಾದರೆ ನಮಗೆ ಸಹಿಸಲಸಾಧ್ಯವಾದ ಕೋಪದ ಜೊತೆ ಸ೦ಕಟವಾಗದೆ ಇರದು. ಏಕೆ ನಮ್ಮ ಭಾಷೆಗೆ ಹೀಗೆ ಆಗುತ್ತೆ ಎ೦ದು ಚಿ೦ತಿಸದೆ ಇರದ ದಿನ ಉ೦ಟೆ. ಕಹಿ ಅನುಭವಗಳು ನಮ್ಮಲ್ಲೇ, ಅದೂ ನಮ್ಮ ನೆಲದಲ್ಲೇ ಆದರೂ ಅದನ್ನು ಕೇಳುವವರು ಬೆರಳಣಿಕೆಯ ಮ೦ದಿ ಮಾತ್ರ. ಕೆಲವರಿಗೆ ಇದು ಹಾಸ್ಯ ಎನಿಸದೆ ಇರದು. ನಾವು ನಮ್ಮ ಭಾಷೆಯ ಬಗ್ಗೆ ಎಷ್ಟು ಗೌರವವಿದೆ ಎ೦ದು ತಿಳಿಯಲು ನಾವು ದಿನನಿತ್ಯ ಬಳಸುವ ಪದಗಳೇ ಸಾಕ್ಷಿ. ಮತ್ತೆ ಸ್ವಾರ್ಥಿಯಾಗಬಯಸುತ್ತೇನೆ, ಅ೦ದರೆ ಕೆಲವು ಕನ್ನಡದ ಬಗ್ಗೆ ಕಹಿ ಅನುಭವವನ್ನು ಹ೦ಚಿಕೊಳ್ಳುತ್ತೇನೆ.

೧. ಹ೦ಪಿಯಲ್ಲಿ  ಮುಂದೆ ಓದಿ »

I.I.T ಮೇಲೆ ಏಕೆ ಎಲ್ಲರ ಹದ್ದಿನ ಕಣ್ಣು?

ಾಲ್ಕು ದಿನಗಳ ಹಿಂದೆ ನಡೆದ ಘಟನೆ ಇದು. ಅಂದು ಬೆಳಿಗ್ಗೆ, ಕ್ಲಾಸ್ ಮುಗಿದ ನಂತರ, ಹಾಸ್ಟಲ್ ಗೆ ಹಿಂತಿರುಗುತ್ತಿದ್ದೆ. ದಾರಿಯಲ್ಲಿ, ಇಬ್ಬರು ಹುಡುಗರು ಮಾತಾಡಿಕೊಳ್ಳುತ್ತಿದ್ದದು ಕಿವಿಗೆ ಬಿತ್ತು. "ನಿನ್ನೆ ಮನೆಯಿಂದ ಫೋನ್ ಬಂದಿತ್ತು. ಕಳೆದ ಸೆಮಿಸ್ಟರ್ ಕೊನೆಯಲ್ಲಿ ನಮ್ಮ ದೋಸಾ(DOSA-Dean Of Student Affairs) ೩೮ ಜನ ಹುಡುಗರನ್ನು ಟರ್ಮಿನೇಟ್ ಮಾಡಿದ ವಿಷಯ ನ್ಯೂಸ್ ನಲ್ಲಿ ಪ್ರಸಾರವಾಯ್ತಂತೆ. ಗಾಬರಿಯಾಗಿ ಫೋನ್ ಮಾಡಿದ್ದರು ಹ್ಹಿ ಹ್ಹಿ" ಎಂದು ಮಾತಾಡಿಕೊಳ್ಳುತ್ತಿದ್ದರು. ಆಗ ನಾನು ನಕ್ಕು ಸುಮ್ಮನಾಗಿಬಿಟ್ಟೆ. 
ಹಾಸ್ಟಲ್ ಗೆ ಬಂದು, ಕಂಪ್ಯೂಟರ್ ಆನ್ ಮಾಡಿ, ಫೇಸ್ ಬುಕ್ ತೆರೆದೆ.(ಇಲ್ಲಿನ ಜನ, ಹಲ್ಲುಜ್ಜುವುದು ಮರೆತರೂ, ಫೇಸ್ ಬುಕ್ ಮರೆಯುವುದಿಲ್ಲ! ಅಷ್ಟರಮಟ್ಟಿಗೆ ಫೇಸ್ ಬುಕ್ ಇಲ್ಲಿ ಜನಪ್ರಿಯ; ಎಲ್ಲರೂ ಕಂಪ್ಯೂಟರ್ ಜತೆಗೇ ಮಲಗಿ ಏಳುವುದು! :D ಬೆಳಿಗ್ಗೆ ಎದ್ದೊಡನೆಯೇ ಕಂಪ್ಯೂಟರ್ ಆನ್ ಮಾಡುವುದು, ರಾತ್ರಿ ಮಲಗುವ ಮುನ್ನ ಆರಿಸುವುದು ಇಲ್ಲಿನ ಜೀವನ ಶೈಲಿ. ಕೆಲವರಂತೂ ಕಂಪ್ಯೂಟರನ್ನು ಆರಿಸುವುದೇ ಇಲ್ಲ! ಸ್ಲೀಪ್ ಮೋಡ್ ನಲ್ಲಿ ಇಟ್ಟು ಮಲಗುತ್ತಾರೆ!). ಗೆಳೆಯನೊಬ್ಬ ಫೇಸ್ ಬುಕ್ ನಲ್ಲಿ ಲಿಂಕ್ ಒಂದನ್ನು ಹಾಕಿದ್ದ. ಏನಿರಬಹುದೆಂದು ನೋಡಿದೆ-<http://khabar.josh18.com/videos/26585/01_2010/iit1510/> (ಇದರಲ್ಲಿ ೫ ಭಾಗಗಳಿವೆ; ತಪ್ಪದೇ ಎಲ್ಲವನ್ನೂ ನೋಡಿ).
ವೀಡಿಯೋ ನೋಡಿ ನನಗೆ ಆಶ್ಚರ್ಯವಾಯಿತು. ವಿಷಯವನ್ನು ಜನರ ದಿಕ್ಕು ತಪ್ಪಿಸಲೆಂದೇ ವರದಿ ಮಾಡಿದಂತಿದೆ. "ಥ್ರೀ ಇಡಿಯಟ್ಸ್ ವಿಚಾರ ತಂದಿದ್ದೇ ತಪ್ಪು; ಆ ೩೮ ಜನರನ್ನು ರಾಂಚೋ ಗೆ ಹೋಲಿಸಿದ್ದು ತೀರಾ ಅತಿಯಾಯಿತು" ಎಂಬ ಅಭಿಪ್ರಾಯಗಳು, ಮೆಸ್ ನಲ್ಲಿ ಹರಟುವಾಗ ಅಲ್ಲಲ್ಲಿ ಕಂಡುಬಂದವು. ಮೊನ್ನೆ(ಜನವರಿ ೨೫) ಸಾಯಂಕಾಲ, ನನ್ನ I.I.T.K ಈಮೇಲ್ ಖಾತೆಗೆ ಒಂದು ಮೇಲ್ ಬಂತು. ಇನಿಸ್ಟಿಟ್ಯೂಟ್ ನಿಂದ ಅಷ್ಟೋಂದು ಜನ ವಿದ್ಯಾರ್ಥಿಗಳನ್ನು ಟರ್ಮಿನೇಟ್ ಮಾಡಿದ ನಿರ್ಧಾರದ ವಿರುದ್ಧ, ಅಂದು ಸಾಯಂಕಾಲ ’ಪೀಸ್ ಫುಲ್ ಕ್ಯಾಂಡಲ್ ಮಾರ್ಚ್’ ಮೂಲಕ ಪ್ರತಿಭಟಿಸಲು ಕರೆ ನೀಡುವ ಈಮೇಲ್ ಅದು. ಅನಧಿಕೃತವಾಗಿ ಎಲ್ಲ ವಿಧ್ಯಾರ್ಥಿಗಳಿಗೂ ಈ ಈಮೇಲ್ ಕಳುಹಿಸಲಾಗಿದೆ ಎಂದು ತಿಳಿಯಿತು. ಆ ಈಮೇಲ್ ಬಂದಿದ್ದು ಒಂದು ಜೀಮೇಲ್ ಖಾತೆಯಿಂದ; IITK ಖಾತೆಯಿಂದಲ್ಲ. ಕುತೂಹಲದಿಂದ ಆ ಜೀಮೇಲ್ ವಿಳಾಸ ಹಿಡಿದು, ಕಳುಹಿಸಿದವನ ಹೆಸರನ್ನು ಪತ್ತೆ ಹಚ್ಚಿದೆ. ’ಕಿಲ್ಕಿಲ್ ಸಚಾನ್’ ಎಂದು ಅವನ ಹೆಸರು. ನಂತರ ತಿಳಿಯಿತು, ಅವನು ನಮ್ಮ ಫಿಸಿಕ್ಸ್ ದಿಪಾರ್ಟ್ಮೆಂಟಿನವನೇ, ಫೈನಲ್ ಇಯರ್ ಎಂ ಎಸ್ಸಿ ಓದುತ್ತಿದ್ದಾನೆ. ಇದು ಅವನ ಕೊನೆಯ ಸೆಮಿಸ್ಟರ್ ಆಗಬೇಕಿತ್ತು, ಆದರೆ, ಅನಾರೋಗ್ಯದ ಕಾರಣ, ಕಳೆದ ಸೆಮಿಸ್ಟರ್ ನಲ್ಲಿ ಒಳ್ಳೆಯ ಪ್ರದರ್ಶನ ತೊರಲಿಲ್ಲ. ಹೀಗಾಗಿ, ಅವನ್ನನ್ನು ಒಂದು ಸೆಮಿಸ್ಟರ್ ಡ್ರ‍ಾಪ್ ಮಾಡಲು ಸೂಚಿಸಿದ್ದಾರೆ ಎಂದು. ಅವನ ಹೆಸರನ್ನು ಗೂಗಲ್ ಮಾಡಿ ನೋಡಿದಾಗ ಆ ೩೮ ಜನರೊಂದಿಗೆ, ಇನ್ನೂ ೩೯ ಜನರನ್ನು, ಒಂದು ಸೆಮಿಸ್ಟರ್ ಡ್ರಾಪ್ ಮಾಡಲು ಸೂಚಿಸಿದ್ದಾರೆ ಎಂದು ತಿಳಿಯಿತು. ಸಂಜೆ ಏನಾಗಬಹುದು ಎಂದು ತುಸು ಕುತೂಹಲದಿಂದ ಕಾದಿದ್ದೆ. ಅದೇ ಸಂಜೆ, ಕ್ಯಾಂಪಸ್ ನಲ್ಲಿ, ”ಹಾಲ್ ವನ್ ಕೀ ಬಾರಾತ್’ ಎಂಬ ಉತ್ಸವ ನಡೆಯುತ್ತಿದ್ದ ಕಾರಣ, ಇವರ ಈ ಪ್ರತಿಭಟನೆ ಕಾಣದಾಗಿ ಹೋಯಿತು. 
ತಮ್ಮ ಮೇಲಿರುವ ಅನುಕಂಪವನ್ನು ವಿದ್ಯಾರ್ಥಿಗಳು ದುರುಪಯೋಗಪಡಿಸಿಕೊಳ್ಳುತ್ತಿದ್ದುದನ್ನು ಆ ವೀಡಿಯೋದಲ್ಲಿ ನೋಡಬಹುದು. ಪ್ರೊಫೆಸರ್ ಗಳಮೇಲೆ, ಸುಳ್ಳು ಆರೋಪಗಳ ಮಳೆಯನ್ನೇ ಸುರಿಸಿದ್ದರಿಂದ, ಇಲ್ಲಿ ಓದುತ್ತಿರುವವರಾರೂ, ಅವರ ಬೆಂಬಲಕ್ಕೆ ಬರಲಾರರು. ಒಳಗಿನವರ ಬೆಂಬಲವಿಲ್ಲದೆ ಇಂತಹ ಪ್ರತಿಭಟನೆಗಳು ಯಶಸ್ವಿಯಾಗಲಾರವು. ನ್ಯೂಸ್ ನವರ ಮುಂದೆ ಪ್ರೊಫೆಸರ್ ಒಬ್ಬರ ಹೆಸರು ಹೇಳಿದ್ದು ತೀರ ತಪ್ಪಾಯಿತು. ಈ ವಿಷಯದಲ್ಲಿ, ವಿದ್ಯಾರ್ಥಿಗಳ ಕಳಪೆ ಪ್ರದರ್ಶನಕ್ಕೆ ರೆಸರ್ವೇಶನ್ ಕೂಡ ಒಂದು ರೀತಿಯಲ್ಲಿ ಕಾರಣ ಎಂಬ ಮಾತು ಕೇಳಿಬಂದಿತ್ತು. ಇದು, ನನ್ನ ಅನುಭವಕ್ಕೂ ಬಂದಿದೆ. ನನ್ನ ಗೆಳೆಯನೊಬ್ಬನ ’ವಿಂಗ್’(ಅಂದರೆ, ಹಾಸ್ಟಲ್ ನ ವಿಂಗ್) ನ ಕಥೆ ಇಲ್ಲಿ ಪ್ರಸ್ತಿತವೆನಿಸುತ್ತದೆ. ಫಸ್ಟ್ ಇಯರಿನಲ್ಲಿ, ಸೀನಿಯರ್ ಗಳ ಒತ್ತಾಯದ ಮೇರೆಗೆ, ಇಲ್ಲಿ, ವಿದ್ಯಾರ್ಥಿಗಳು, ’ವಿಂಗ್ ಫೀಲಿಂಗ್’, ’ಹಾಲ್ ಫೀಲಿಂಗ್’ ಬೆಳೆಸಿಕೊಂಡಿರುತ್ತಾರೆ. ’ಹಾಲ್’ ಅಂದರೆ, ಇಲ್ಲಿನ ಹಾಸ್ಟಲ್ ಗಳು. ’ಹಾಲ್ ಫೀಲಿಂಗ್’ ಅಂದರೆ, ಒಂದು ರೀತಿಯ ’ದೇಶಪ್ರೇಮ’; ’ಹಾಲ್ ಪ್ರೇಮ’ ಎನ್ನಬಹುದು. ಅದೇ ರೀತಿ, ಹಾಸ್ಟಲ್ ನಲ್ಲಿ, ತಮ್ಮ ವಿಂಗ್ ಮೇಲಿನ ಅಭಿಮಾನವನ್ನು, ’ವಿಂಗ್ ಫೀಲಿಂಗ್’ ಎನ್ನುತ್ತಾರೆ(ಇದು ನಿಮಗೆ ಟೂ ಮಚ್ ಎನಿಸಬಹುದು; ನಿಜವೇ, ಇದು ಟೂ ಮಚ್!) ವಾಸ್ತವವಾಗಿ, ಹೆಚ್ಚುನವರಿಗೆ ಈ”ಫೀಲಿಂಗ್’ ಗಳು ಇರುವುದೇ ಇಲ್ಲ! ಎಲ್ಲ ಕೆಲವು ಸೀನಿಯರ್ ಗಳ ಒತ್ತಾಯಕ್ಕೆ. ಒಂದು ವರ್ಷ ಕಳೆಯುವಷ್ಟರಲ್ಲಿ, ಈ ’ಫೀಲಿಂಗ್’ ಗಳು ಯಾರಲ್ಲೂ ಉಳಿದಿರುವುದಿಲ್ಲ. ಆದರೆ, ಎಲ್ಲರಿಗೂ, ತಮ್ಮ ವಿಂಗಿನವರು ಆತ್ಮೀಯ ಗೆಳೆಯರಾಗಿಹೋಗಿರುತ್ತಾರೆ. ಕ್ಲಾಸ್ ಅಟೆಂಡ್ ಮಾಡುವುದೂ ವಿಂಗ್ ಜತೆಗೆ; ಬಂಕ್ ಮಾಡುವುದೂ ವಿಂಗ್ ಜತೆಗೇ!, ಸುತ್ತಾಡಲು ಹೊರಗೆ ಹೋಗುವುದು, ರಾತ್ರಿಯಿಡೀ ಸಿನೆಮಾ ನೋಡುವುದು, ಎಲ್ಲವೂ ವಿಂಗ್ ಮೇಟ್ಸ್ ಜತೆಗೇ. 
ನನ್ನ ಗೆಳೆಯನ ವಿಂಗ್ ನಲ್ಲಿ, ಒಬ್ಬ ರಿಸರ್ವೇಶನ್ ಇಂದ ಬಂದಿದ್ದವನು, ಮೊದಲ ಸೆಮಿಸ್ಟರ್ ಅನ್ನು ಡ್ರ‍ಾಪ್ ಮಾಡಿದ್ದ. ಸೆಮಿಸ್ಟರ್ ನ ಮೊದಲ ದಿನಗಳಲ್ಲಿ, ಇಲ್ಲಿನ ಪಾಠ ತಲೆಬುಡ ಅರ್ಥವಾಗದೆ, "ಕುಚ್ ಸಮಜ್ ಮೆ ನಹೀ ಆ ರಹಾ ಹೈ"(ನನ್ಗೇನೂ ಅರ್ಥವಾಗುತ್ತಿಲ್ಲ) ಎಂದು ಪಲ್ಲವಿ ಹಾಡುತ್ತಾ ಅಲೆದಾಡುತ್ತಿದ್ದ. ಕಡೆಗೆ ಆತ್ಮವಿಶ್ವಾಸ ಕಳೆದುಕೊಂಡು, ಸೆಮಿಸ್ಟರ್ ಡ್ರಾಪ್ ಮಾಡಿದ್ದ. ಎರಡನೆಯ ಸೆಮಿಸ್ಟರ್ ನಲ್ಲಿ, ಸ್ವಲ್ಪ ಆತ್ಮವಿಶ್ವಾಸ ಬೆಳೆಸಿಕೊಂಡು ಹಿಂದಿರುಗಿದ್ದ. ಮೊದಲ ಕ್ಲಾಸ್ ಗೆ, ಎಂದಿನಂತೆ, ವಿಂಗ್ ನೊಡನೆ ಹೊರಟ. ಮೊದಲ ಕ್ಲಾಸ್ ಆದ್ದರಿಂದ, ಪ್ರೊಫೆಸರ್, ಹಳೆಯ ಪಾಠವನ್ನೇ ಪುನರಾವರ್ತನೆಗೊಳಿಸಿದರು. ಹೀಗಾಗಿ, ಅವನ ವಿಂಗ್, ಕೊನೆಯ ಬೆಂಚಿನಲ್ಲಿ ಕುಳಿತು ಹರಟೆ ಹೊಡೆದು, ಮಜಾ ಮಾಡಿದರು. ಅವರೊಂದಿಗೇ ಮಜಾ ಮಾಡಿದ ಆ ಹುಡುಗ, ಕ್ಲಾಸ್ ಮುಗಿದಮೇಲೆ, "ಕ್ಲಾಸ್ ಸಮಜ್ ಮೈ ಆಯಾ?" (ಕ್ಲಾಸ್ ನಲ್ಲಿ ಎನಾದರೂ ಅರ್ಥವಾಯಿತಾ?) ಎಂದು ಸ್ವಲ್ಪ ಭಯದಿಂದ ಗೆಳೆಯರನ್ನು ಕೇಳಿದ. ಆಗ, ಅವರು, "ಇಸ್ ಮೈ ಸಮಜ್ ನೆ ಕಾ ಕ್ಯಾ ಹೈ?" (ಇದರಲ್ಲಿ ಅರ್ಥಮಾಡಿಕೊಳ್ಳಲು ಏನಿದೆ?)ಅಂದು ಬಿಟ್ಟರು...ಅಷ್ಟೇ, ಅವನ ಆತ್ಮವಿಶ್ವಾಸ ಒಡೆದು ಹೋಯಿತು. ಹಾಸ್ಟಲ್ ಗೆ ಹಿಂದಿರುಗಿದವನೇ, ಮನೆಗೆ ಫೊನ್ ಮಾಡಿ, ಮತ್ತೊಂದು ಸೆಮಿಸ್ಟರ್ ಡ್ರ‍ಾಪ್ ಮಾಡಿಬಿಟ್ಟ. ಈಗ, ಅವನು ಕಾಲೇಜ್ ಬಿಟ್ಟು ಹೋದ ಎಂದು ಕೇಳಿದ್ದೆನೆ.  ತೀರಾ ಹೆಚ್ಚು ರಿಸರ್ವೇಶನ್ ಮಾಡುವುದರಿಂದ ಆಗುವ ಅನಾಹುತವಿದು. ಇದೇ ಆತ್ಮವಿಶ್ವಾಸದ ಕೊರತೆಯಿಂದಾಗಿ, ನನ್ನ ಪಕ್ಕದ ರೂಮಿನವ ಆತ್ಮಹತ್ಯೆಗೆ ಪ್ರಯತ್ನಿಸಿದ್ದ. ಅದೃಷ್ಟವಶಾತ್, ಪರಿಸ್ಥಿತಿ ಅಷ್ಟು ಗಂಭೀರವಾಗದೆ, ಈಗ ಆರೋಗ್ಯವಾಗಿದ್ದಾನೆ. ಅವನೂ ಕೂಡ, ರಿಸರ್ವೇಶನ್ ನಿಂದ ಬಂದವನು; ಹಾಗೂ, ಅವನಲ್ಲೂ ಇದೇ ರೀತಿಯ ಮನೊದೌರ್ಬಲ್ಯವಿತ್ತು ಎನ್ನುವುದು ಗಮನಾರ್ಹ.
ಈ ವೀಡಿಯೋ, I.I.T ಬಗೆಗಿನ ಇನ್ನೊಂದು ವಿಚಾರವನ್ನು ಸ್ಪಷ್ಟಪಡಿಸುತ್ತದೆ: I.I.T ಯಲ್ಲಿ, ಎಲ್ಲವೂ ಹೈಫ್. ಮೀಡಿಯಾದವರು, ಸಾಮನ್ಯಜನಗಳು, ಎಲ್ಲರ ಹದ್ದಿನಕಣ್ಣೂ I.I.T ಯ ಮೇಲೆ. ನಾವು ಒಂದು ಒಳ್ಳೆಯಕೆಲಸ ಮಾಡಿದರೆ ಸಾಕು, ಏನೋ ಜಗತ್ತನ್ನೇ ಗೆಲ್ಲುವಂಥಾ ಸಾಧನೆ ಮಾಡಿದ್ದೇವೆ ಅನ್ನುವಂತೆ ಬರೆಯುತ್ತಾರೆ ಈ ಮೀಡಿಯಾದವರು. ನಿಜ ಹೇಳಬೇಕೆಂದರೆ, ಒಂದು ಒಳ್ಳೆಯ ಕೆಲಸ ಬೇಡ, ಕೇವಲ ಒಂದು ಯೋಜನೆ ಸಾಕು, ಮೀಡಿಯಾದವರನ್ನು ಆಕರ್ಷಿಸಲು. ಇಲ್ಲಿ, ವಿದ್ಯಾರ್ಥಿಗಲು ಮಾಡಿಕೊಂಡ ಮ್ಯೂಸಿಕ್ ಕ್ಲಬ್, ಡಾನ್ಸ್ ಕ್ಲಬ್, ಡ್ರ‍ಾಮಾ ಕ್ಲಬ್, ಫೈನ್ ಆರ್ಟ್ಸ್ ಕ್ಲಬ್, ರೋಬೋಟಿಕ್ಸ್ ಕ್ಲಬ್, ಹ್ಯಾಮ್ ಕ್ಲಬ್, ಎಲೆಕ್ಟ್ರಾನಿಕ್ಸ್ ಕ್ಲಬ್, ಗ್ಲೈಡಿಂಗ್ ಕ್ಲಬ್, ಆಸ್ಟ್ರ‍ಾನಮಿ ಕ್ಲಬ್, ಭಕ್ತಿವೇದಾಂತ ಕ್ಲಬ್(!), ಇಂಗ್ಲೀಶ್ ಲಿಟರರಿ ಕ್ಲಬ್, ಹಿಂದೀ ಸಾಹಿತ್ಯ ಸಭಾ, ಇತ್ಯಾದಿ ಇತ್ಯಾದಿ ಇದೆ ಎಂದು ತಿಳಿದು ಉತ್ಸುಕನಾಗಿದ್ದೆ. ಇಲ್ಲಿಗೆ ಬಂದೆಮೇಲೆ ತಿಳಿಯಿತು, ಡ್ರ‍ಾಮಾ, ಮತ್ತು ಮ್ಯೂಸಿಕ್ -ಇವೆರಡೇ, ಗೌರವಾನ್ವಿತವಾಗಿ ಕೆಲಸಮಾಡುತ್ತಿರುವುದು! ನನಗೆ I.I.Tಯ ಹೈಫ್ ನ ಮೊದಲ ಪರಿಚಯವಿದು. ಇದೇ ರೀತಿ, ಈ ವೀಡಿಯೋ. ವಿದ್ಯಾರ್ಥಿಗಳನ್ನು ಟರ್ಮಿನೇಟ್ ಮಾಡುವುದೇನೂ I.I.T K ಗೆ ಹೊಸದಲ್ಲ; ಈ ಮೀಡಿಯಾದವರು ಅನಗತ್ಯವಾಗಿ, ಅದನ್ನು ವಿಜೃಂಬಿಸಿದ್ದಾರೆ. ಅವರು ಹೇಳುವಂತೆ, ಇಲ್ಲಿ ಅಂತಹ ಪ್ರೆಶರ್ ಏನೂ ಇಲ್ಲ; ಪ್ರೊಫೆಸರ್ ಗಳು, ಬಹಳ ಆತ್ಮೀಯವಾಗಿಯೇ ಸಹಕಾರ ನೀಡುತ್ತಾರೆ. ಆ ವೀಡಿಯೋದಲ್ಲಿ ಕಂಡಿದ್ದು, I.I.T ಯ ಮೇಲೆ, ಮೀಡಿಯಾದವರ ಹದ್ದಿನಕಣ್ಣನ್ನು, ವಿದ್ಯಾರ್ಥಿಗಳು ದುರುಪಯೋಗ ಪಡಿಸಿಕೊಂಡದ್ದು. ಅಷ್ಟೋಂದು ಹೈಫ್ ಮಾಡಿದರೆ, ವಿದ್ಯಾರ್ಥಿಗಲಲ್ಲಿ ನೈಸರ್ಗಿಕವಾಗಿ ಬರುವ ಮನೋಭಾವವಿದು; ತಾವು ಮಾಡುವ ಸಣ್ಣ ಸಣ್ಣ ಕೆಲಸಗಳಿಗೂ, ಭರ್ಜರಿ ಪಬ್ಲಿಸಿಟಿ ಕೊಡುವ ಮನೋಭಾವವನ್ನು, ಇಲ್ಲಿನ ಹುಡುಗರು ಈಗಾಗಲೇ ಬೆಳೆಸಿಕೊಳ್ಳುತ್ತಿದ್ದಾರೆ. I.I.T ಎಲ್ಲೂ ಕಾಣದ ಸ್ವರ್ಗವೂ ಅಲ್ಲ; ನರಕವೂ ಅಲ್ಲ. ಇಲ್ಲಿರುವವರೂ ಮನುಷ್ಯರೇ. ದೇಶದ ಉನ್ನತ ಶಿಕ್ಷಣ ಸಂಸ್ಥೆ ಎನ್ನುವುದು ನಿಜ; ಆದರೆ, ಇಷ್ಟೋಂದು ಪಬ್ಲಿಸಿಟಿಯ ಅಗತ್ಯ, ನನಗಂತೂ ಕಾಣುತ್ತಿಲ್ಲ.

ಮೂರ್ನಾಲ್ಕು ದಿನಗಳ ಹಿಂದೆ ನಡೆದ ಘಟನೆ ಇದು. ಅಂದು ಬೆಳಿಗ್ಗೆ, ಕ್ಲಾಸ್ ಮುಗಿದ ನಂತರ, ಹಾಸ್ಟಲ್ ಗೆ ಹಿಂತಿರುಗುತ್ತಿದ್ದೆ. ದಾರಿಯಲ್ಲಿ, ಇಬ್ಬರು ಹುಡುಗರು ಮಾತಾಡಿಕೊಳ್ಳುತ್ತಿದ್ದದು ಕಿವಿಗೆ ಬಿತ್ತು. "ನಿನ್ನೆ ಮನೆಯಿಂದ ಫೋನ್ ಬಂದಿತ್ತು. ಕಳೆದ ಸೆಮಿಸ್ಟರ್ ಕೊನೆಯಲ್ಲಿ ನಮ್ಮ ದೋಸಾ(DOSA-Dean Of Student Affairs) ೩೮ ಜನ ಹುಡುಗರನ್ನು ಟರ್ಮಿನೇಟ್ ಮಾಡಿದ ವಿಷಯ ನ್ಯೂಸ್ ನಲ್ಲಿ ಪ್ರಸಾರವಾಯ್ತಂತೆ. ಗಾಬರಿಯಾಗಿ ಫೋನ್ ಮಾಡಿದ್ದರು ಹ್ಹಿ ಹ್ಹಿ" ಎಂದು ಮಾತಾಡಿಕೊಳ್ಳುತ್ತಿದ್ದರು. ಆಗ ನಾನು ನಕ್ಕು ಸುಮ್ಮನಾಗಿಬಿಟ್ಟೆ. ಹಾಸ್ಟಲ್ ಗೆ ಬಂದು, ಕಂಪ್ಯೂಟರ್ ಆನ್ ಮಾಡಿ, ಫೇಸ್ ಬುಕ್ ತೆರೆದೆ.(ಇಲ್ಲಿನ ಜನ, ಹಲ್ಲುಜ್ಜುವುದು ಮರೆತರೂ, ಫೇಸ್ ಬುಕ್ ಮರೆಯುವುದಿಲ್ಲ! ಅಷ್ಟರಮಟ್ಟಿಗೆ ಫೇಸ್ ಬುಕ್ ಇಲ್ಲಿ ಜನಪ್ರಿಯ; ಎಲ್ಲರೂ ಕಂಪ್ಯೂಟರ್ ಜತೆಗೇ ಮಲಗಿ ಏಳುವುದು! :D ಬೆಳಿಗ್ಗೆ ಎದ್ದೊಡನೆಯೇ ಕಂಪ್ಯೂಟರ್ ಆನ್ ಮಾಡುವುದು, ರಾತ್ರಿ ಮಲಗುವ ಮುನ್ನ ಆರಿಸುವುದು ಇಲ್ಲಿನ ಜೀವನ ಶೈಲಿ. ಕೆಲವರಂತೂ ಕಂಪ್ಯೂಟರನ್ನು ಆರಿಸುವುದೇ ಇಲ್ಲ! ಸ್ಲೀಪ್ ಮೋಡ್ ನಲ್ಲಿ ಇಟ್ಟು ಮಲಗುತ್ತಾರೆ!). ಗೆಳೆಯನೊಬ್ಬ ಫೇಸ್ ಬುಕ್ ನಲ್ಲಿ ಲಿಂಕ್ ಒಂದನ್ನು ಹಾಕಿದ್ದ. ಏನಿರಬಹುದೆಂದು ನೋಡಿದೆ-(http://khabar.josh18...) (ಇದರಲ್ಲಿ ೫ ಭಾಗಗಳಿವೆ; ತಪ್ಪದೇ ಎಲ್ಲವನ್ನೂ ನೋಡಿ).  ಮುಂದೆ ಓದಿ »

ಅಪರಿಚಿತೆ - parcel - ಗ್ರಾಮಸಿಂಹ

ನನ್ನ ಸ್ನೇಹಿತ ಪ್ರವೀಣ್, ಅವನು ಕೆಲಸ ಮಾಡುವ ಹಾಸನದಿಂದ ನನಗಾಗಿ ಒಳ್ಳೆ ಕಾಫಿ ಪುಡಿ, ಯಾಲಕ್ಕಿನ ಅವನ ಅಲ್ಲಿನ ಸ್ನೇಹಿತೆಯೊಡನೆ ಬೆಂಗಳೂರಿಗೆ ಕಳುಹಿಸಿದ್ದ, ಅದನ್ನು ಅವರಿಂದ ಪಡೆಯಲು ನಾನು ಏಳನೇ ಫೇಸ್ ಜೆ ಪಿ ನಗರಕ್ಕೆ ತೆರಳಬೇಕಿತ್ತು, ನನಗೆ ದಾರಿ ಗೊತ್ತಿಲ್ಲದ ಕಾರಣ, ಅವರನ್ನು ಜಯನಗರಕ್ಕೆ ಬರಹೇಳಿ ಅಲ್ಲಿಂದ ಇಬ್ಬರು ಹೊರಟೆವು. ಅಪರಿಚಿತಳಾದ ಹುಡುಗಿ, ಅಪರಿಚಿತವಾದ ಜಾಗ, ಅವರಮನೆ ಇದ್ದದ್ದು ಏಳನೇ ಫೇಸ್ ಜೆ ಪಿ ನಗರದ ಬ್ರಿಗೆಡ್ ಮಿಲೆನಿಯಂ ಬಳಿ ಇರುವ ಗೌರವನಗರದಲ್ಲಿ. ಈ ಮಹಾನಾಗರದ ಆ ಭಾಗಕ್ಕೆ ಹೋಗಿದ್ದೆ ಇಲ್ಲ ನಾನು, ಸರಿ, ದಾರಿ ತೋರುತ್ತ ಬರುತ್ತಿದ್ದ ಅವಳು, ಇಲ್ಲೇ ಎಡಗಡೆ ತಿರ್ಕೊಬೇಕು, ಸ್ವಲ್ಪ ನಿಧಾನವಾಗಿ ಚಲಿಸಿ ಅಂದಳು, ಒಹ್!  ಇಲ್ಲೇ ಮೂಲೆಲೆ ಇರ್ಬೇಕು ಮನೆ ಅನ್ಕೊಂಡೆ, ಆದರೆ ನನಗೆ ಗ್ರಾಮ ಸಿಂಹಗಳ  ಸ್ವಾಗತ ಕಾದಿದೆ ಅಂತ ಗೊತ್ತಿರ್ಲಿಲ್ಲ!  ಇಲ್ಲೇ ಒನ್ ನಿಮಿಷ ನಿಲ್ಸಿ ಕೋಲ್ ತೊಗೋತೀನಿ ಅಂದ್ಲು ಅವಳು! ಅಬ್ಬ ಇದೇನಿದು ಕೋಲು ಗೀಳು ಅನ್ತಿದಾಳೆ? ನಾನ್ ಏನ್ ಮಾಡ್ದೆ ಅನ್ನಿಸ್ತು?  ಮುಂದೆ ಓದಿ »

ಹಂದಿ ಜ್ವರ ತೋರಿಸಿದ ಒಂದು ರಾತ್ರಿ ಭಾಗ ೨

                          ಮಾರ್ಗ ಮಧ್ಯದಲ್ಲಿ ಕ್ಯಾಶ್ ಫಾರ್ಮಸಿಗೆ ಫೋನ್ ಮಾಡಿದೆ. ಅವರು ನಮ್ಮಲ್ಲಿ ಟ್ಯಾಮಿ ಫ್ಲೂ ಮಾತ್ರೆ ಇಲ್ಲ. ನೀವು ರಾಜೀವ್ ಗಾಂಧಿ ಇನ್ಸ್‘ಟಿಟ್ಯೂಟ್ ಗೇ ಹೋಗಬೇಕು ಎಂದರು. ಮಳೆ ಜೋರಾಗಿತ್ತು. ರಾಜೀವ್ ಗಾಂಧಿ ಇನ್ಸ್‘ಟಿಟ್ಯೂಟ್ ತಲುಪಿದೆವು. ರವಿ ಹೊರಗೆ ಕಾದ, ನಾನು ಒಳಗೆ ಹೋದೆ. ದೊಡ್ಡ ಹಾಲ್ ಅಲ್ಲೊಬ್ಬರು ಇಲ್ಲೊಬ್ಬರು ಜನ, ಅಲ್ಲೇ ಒಂದು ರೂಮ್ ಅದರ ಮೇಲೆ ಒಂದು ಹಾಳೆಯಲ್ಲಿ ಸ್ಕೆಚ್ ಪೆನ್ ನಲ್ಲಿ ಸೊಟ್ಟ ಸೊಟ್ಟಗೆ ’H1 N1' ಅಂತ ಬರೆದಿತ್ತು ಅಲ್ಲಿ ಹೋದೆ, ಅದೊಂದು ಹೆಚ್ಚು ಕಮ್ಮಿ ಖಾಲಿ ರೂಮ್ ಒಂದು ಟೇಬಲ್, ಒಂದು ಖುರ್ಚಿ, ಒಂದು ಬೀರು ಮತ್ತು ಆ ಖುರ್ಚಿಯ ಮೇಲೆ ಆಸೀನನಾದ ಅವತ್ತಿನ ಪೇಪರ್ ಓದುತ್ತಾ ಕುಳಿತ ಮಹಾನುಭಾವ..ನಾನು ಅವನನ್ನು ಮಾತಾಡಿಸಿದೆ, ನಿಧಾನವಾಗಿ ಕತ್ತೆತ್ತಿ ನನ್ನ ಮೇಲೆ ದಯೆ ತೋರಿಸಿದ..ಏನು ಎಂಬಂತೆ ಹುಬ್ಬೇರಿಸಿ ಕರುಣೆ ವ್ಯಕ್ತ ಪಡಿಸಿದ.  ಮುಂದೆ ಓದಿ »

Syndicate content