ಯಾರಾದರೂ ಸಮುದ್ರದಲ್ಲಿ ಇಳಿಯ ಬಯಸಿದರೆ 'ದೋಣಿ ತೆಗೆದುಕೊಂಡು ಹೋಗು' ಎನ್ನುವೆವು. ಇದೇ ಕರ್ಮ ಯೋಗ. ದಂಡೆಯ ಮೇಲೆ ನಿಂತು ನೋಡುವುದು ಸನ್ಯಾಸ. ಇವೆರಡರ ಆನಂದವೂ ಒಂದೇ. ಎರಡರಲ್ಲಿಯೂ ಮನುಷ್ಯ ಮುಳುಗುವುದಿಲ್ಲ. ಸಾಕ್ಷಿಯಂತೆ ಸಮುದ್ರವನ್ನು ನೋಡುತ್ತಾನೆ, ಇದರಲ್ಲೇ ಇರುವುದು ಆನಂದ

— ವಿನೋಬಾ ಭಾವೆ

ಸಂಪದ ಆರ್ಕೈವಿನಿಂದ

ಪ್ರವಾಸ ಕಥನ

ಚೈನಾಟೌನ್

ಕೆಲವು ದಿನಗಳ ಹಿಂದೆ ಸ್ಯಾನ್ ಫ್ರಾನ್ಸಿಸ್ಕೋ ನಲ್ಲಿನ ಚೈನಾ ಟೌನ್ ಗೆ ಹೋಗುವ ಅವಕಾಶ ಒದಗಿತು. ಸುಮಾರು ನೂರೈವತ್ತು ವರ್ಷಗಳ ಹಿಂದೇ ಇಲ್ಲಿಗೆ ಬಂದ ಚೀನೀಯರು ಸ್ಯಾನ್ ಫ್ರಾನ್ಸಿಸ್ಕೋ ನಟ್ಟ ನಡುವೆ ಒಂದು ಮಿನಿ ಚೈನಾವನ್ನೇ ಸೃಷ್ಟಿ ಮಾಡಿದ್ದಾರೆ! ಅಲ್ಲಿ ತೆಗೆದ ಕೆಲವು ಚಿತ್ರಗಳನ್ನು ಇಲ್ಲಿ ಹಾಕಿದ್ದೇನೆ.


ಚೈನಾ ಟೌನ್ ನ ಒಂದು ಮುಖ್ಯ ಬೀದಿ - ಗ್ರಾಂಟ್ ರಸ್ತೆಯ ಒಂದು ನೋಟ
 ಮುಂದೆ ಓದಿ »

ಚಾಪೆ, ರಂಗೋಲೆಗಳ ನಡುವಣ ಅವಕಾಶವನ್ನು ಮೈದಾನವನ್ನಾಗಿಸಿಕೊಂಡವರು--ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೩೨

(೯೮)


     ಪ್ರಶ್ನಾಮೂರ್ತಿ ನಟಿಸಿದ, ಎಂದೂ ಸೆಟ್ಟೇರದ, ಪ್ರಶ್ನೆ ಮಾತ್ರ ಮರವೇರಿದ "ಗಾಜಿನ್ಮನೇಲಿ ಟೋಪಿ" ಕಥೆ ಶಾಂತಿನಿಕೇತನದ ಕಲಾಭವನದಲ್ಲಿಯೇ ಜಗತ್ಪ್ರಸಿದ್ಧವಾಗಿತ್ತು, ನಾನಲ್ಲಿ ಇನ್ನೂ ತರಗತಿಯನ್ನು ಸೇರುವ ಮುನ್ನವೇ. ಆದರೆ ಅದರ ಕಾರಣಕರ್ತರು ಯಾರೆಂಬುದು ಇನ್ನೂ ಪ್ರಸಿದ್ಧವಾಗದ್ದರಿಂದ ನನಗಲ್ಲಿ ಸೀಟು ಸಿಕ್ಕಿತೆಂದೇ ನಾನಂದುಕೊಂಡಿದ್ದೆ. ಆದರೆ ಕಲಾಭವನದಲ್ಲಿಯೇ raggingನ ಕಥೆ ನೋಡಿದ ಮೇಲೆ ನಾವೆಲ್ಲ ಎಂಥಹ ಬಚ್ಚಾಗಳು ಎಂದು ತಿಳಿಯಿತು. ಅಲ್ಲಿ ಮ್ಯೂರಲ್ ವಿಭಾಗದ ಉಪನ್ಯಾಸಕರಾಗಿದ್ದ ನಂದುದ (ನಂದುಲಾಲ್ ಮುಖರ್ಜಿ) ಹಾಸ್ಟೆಲಿನ ವಾರ್ಡನ್ ಸಹ ಆಗಿದ್ದರು.


 


     ಒಂದು ಇತಿಮಿತಿ ಮೀರದಂತೆ ರೇಗಿಂಗ್ ಅನ್ನು ವೀಕ್ಷಿಸುತ್ತ ಕುಳಿತುಬಿಡುತ್ತಿದ್ದರು. ಹೊಸದಾಗಿ ಸೇರಿದ ಹುಡುಗರನ್ನು ಹಿರಿಯರು ಒಂದು ನಿರ್ದಿಷ್ಟ ದಿನಾಂಕದ ತನಕ ಗೋಳಲ್ಲಿ ಗೋಳು ಹುಯ್ದುಕೊಳ್ಳುತ್ತಿದ್ದರು. ಎತ್ತರದ, ದುಂಡನೆಯ ಮರದ ಮೇಲಕ್ಕೆ ಕೋಲೊಂದನ್ನು ಎಸೆದು "ಅದನ್ನು ತೆಗೆದುಕೊಂಡು ಬಾ" ಎಂದು ಒಬ್ಬನನ್ನು ಓಡಿಸುತ್ತಿದ್ದರು, "ನನಗೆ ಮರ ಹತ್ತಲು ಬರುವುದಿಲ್ಲ" ಎಂದು ಆತ ಬೇಡಿಕೊಂಡರೂ ಬಿಡದೆ. ಆತನ ಕೈಲಿ ಅಥವ ಕಾಲಿನಲ್ಲಿ ಅಥವ ಕೈಕಾಲುಗಳಲ್ಲಿ ಮರ ಹತ್ತಲು ಆಗದಿದ್ದಲ್ಲಿ ತುಂಬ ಸಣ್ಣದಾದ (HB)ಪೆನ್ಸಿಲ್ ಅನ್ನು ಆತನ ಕೈಗಿತ್ತು ಇನ್ನೂರು ಅಡಿ ಇದ್ದ ಹುಡುಗಿಯರ ಹಾಸ್ಟೆಲ್ಲಿನ ಕಾಂಪೌಂಡಿನಾದ್ಯಂತ, ಮನುಷ್ಯನನ್ನು ಹೊರತುಪಡಿಸಿದ ಪ್ರಾಣಿಯ ’ಭಾವಚಿತ್ರ’ರಚಿಸುವಂತೆ ಪೀಡಿಸುತ್ತಿದ್ದರು! ಇಡೀ ಒಂದು ದಿನ ಕಾಲಾವಕಾಶವನ್ನು ನೀಡುತ್ತಿದ್ದರು. ಊಟದ ಮೆಸ್ಸಿನಿಂದ ಊಟದ ತಟ್ಟೆ ತುಂಬ ಊಟವನ್ನೂ ಆತನಿಗೆ ತಂದು ನೀಡುತ್ತಿದ್ದರು! 


  ಮತ್ತೂ ವಿಶೇಷವೆಂದರೆ ಒಬ್ಬ ಹುಡುಗನಿಗೆ ಸೀನಿಯರ್‍ ಒಬ್ಬ ಏನನ್ನೋ ಹೇಳಿಕೊಟ್ಟು, ಪ್ರಿನ್ಸಿಪಾಲರ ಬಳಿ ಆತನೇ ಕಳುಹಿಸಿದ್ದಃ


"ಕೀ ಹೋಲೋ?" (ಏನ್ಸಮಾಚಾರ?) ಪ್ರಿನ್ಸಿಪಾಲರು ಕೇಳಿದ್ದರು.


"ತುಮಿ ಬೊಕ ಸಾರ್" (ನಾಲಾಯಕ್ ನೀನು) ಎಂದ ಬೆಂಗಾಲಿ ಒಂಚೂರೂ ಬರದ ಬಡ ಮೊದಲ ವರ್ಷದ ವಿದ್ಯಾರ್ಥಿ.


ಸಿಟ್ಟಿಗೆದ್ದರು ಪ್ರಾಂಶುಪಾಲರು...  ಮುಂದೆ ಓದಿ »

ವೀರ ಕಲ್ಲುಕುಟಿಕ

ಮೂಕಾಸುರನನ್ನು ಕೊಂದು ಆತನ ಕೋರಿಕೆಯಂತೆ ಮೂಕಾಂಬಿಕೆಯಾದ ದೇವಿಯ ಸ್ಥಳವಾದ ಕೊಲ್ಲೂರಿನಿಂದ ಸುಮಾರು ನಲವತ್ತು ಕಿಲೋಮೀಟರ್ ದೂರದಲ್ಲಿ ಶಂಕರ ನಾರಾಯಣ ಎನ್ನುವ ಊರಿದೆ. ಹೆಸರೇ ಹೇಳುವಂತೆ ಇದು ಶಿವ ಹಾಗೂ ವಿಷ್ಣು ಇಬ್ಬರನ್ನೂ ಒಂದೇ ಸೂರಿನಡಿ ಆರಾಧಿಸುವ ದೇವಾಲಯವಿರುವ ಜಾಗ. ಈ ದೇವಾಲಯದಲ್ಲಿ ಶಂಕರ ಹಾಗೂ ನಾರಾಯಣರ ವಿಗ್ರಹಗಳು ಅಕ್ಕ ಪಕ್ಕದಲ್ಲಿವೆ. ಕರ್ನಾಟಕದಲ್ಲಿ ವಿಷ್ಣುವಿನ ಆರಾಧಕರು ಹಾಗೂ ಶಿವನ ಆರಾಧಕರ ನಡುವಿದ್ದ ವೈಷಮ್ಯವನ್ನು ಗಮನಿಸಿದರೆ ಈ ದೇವಾಲಯದ ಹಿನ್ನೆಲೆ ಮಹತ್ವದ್ದೇ ಇರಬೇಕು ಅನ್ನಿಸಿತು.ಪುಷ್ಕರಣಿ  ಮುಂದೆ ಓದಿ »

"ಕಪಿ ಅವ್ತಾರ್ದಲ್ಲಿ ಇರೋಕಿಂತ್ಲೂ ಬೋ ಸಂದಾಕ್ ಕಾಣ್ತಿದೀಯ ಮಗ" -- ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೩೧

 

(೯೪)

     ವಾಸ್ತು, ಫೆಂಗ್ ಶೂಯಿ ಪ್ರಕಾರ, ಖಗೋಳವಿಜ್ಞಾನ-ಭವಿಷ್ಯವಾದದ ಪ್ರಕಾರ, ಸಮಸ್ತ ಭೂಮಂಡಲದ ಚರಾಚರಗಳೆಲ್ಲವೂ ಒಟ್ಟಾಗಿ ಸೇರಿ, ಅಂತೂ ಪ್ರಶ್ನಾಮೂರ್ತಿಗೊಂದು ಮೋಕ್ಷ ದೊರಕಿಸಿಕೊಡುವ ದಿನವನ್ನು ದಯಮಾಡಿಸಿತ್ತು. ಎಷ್ಟೋ ದಿನಗಳ ರಿಹರ್ಸಲ್ಲಿನ ನಂತರ ಅಂದು ಮೊದಲ ಧಾರವಾಹಿಯ ನೈಜ ಕ್ಯಾಮರದಲ್ಲಿ, ನೈಜ ಶೂಟಿಂಗ್ ಇಟ್ಟುಕೊಂಡೆವು ಕಬ್ಬನ್ ಪಾರ್ಕಿನಲ್ಲಿ! ಮೊದಲ ಸೀನ್, ಅದೇ, "ಅಕ್ಕಡಾ ಎನ್ನಡಾ ಬೀಚ್ ಮೆ ಲಿಟಲ್ ಕನ್ನಡ"ವನ್ನು ಸಾವಿರ ಸಲ ಬಾಯಿಪಾಠ ಮಾಡಿಕೊಂಡೇ ಪ್ರಶ್ನೆಯು ಬೆಳಗ್ಗಿನಿಂದ ಎಲ್ಲರಿಗೂ ಕಾಲೇಜಿನಲ್ಲಿ ಸಿಹಿ ಹಂಚುತ್ತಿದ್ದ. ತಾಪತ್ರಯವೇ ಬೇಡವೆಂದು ತನ್ನ ಮನೆಯಿಂದಲೇ ತಾಯಿ, ನೆಂಟರಿಸ್ಟರ ಕೈಲಿ ಚೌಚೌಬಾತ್ ಮಾಡಿಸಿಕೊಂಡು ಬಂದಿದ್ದ. ಹತ್ತಿರದ ಊರುಗಳಿಂದ ನೆಂಟರುಗಳೂ ಒಂದಿಬ್ಬರು ಬಂದಿದ್ದರು. ಅವರು ಬಂದುದರ ಪ್ರಯೋಜನ ಪಡೆದುಕೊಳ್ಳುವಂತೆ ಅವರಿಂದಲೇ ಅಡುಗೆ ಮಾಡಿಸಿದ್ದನೀತ! ಎರಡು ಲಾಭವಿತ್ತು ಅದರಲ್ಲಿ. ಸ್ವಂತ ಪಾಕೆಟ್ ಮನಿಯನ್ನು ಮನೆಯಿಂದ ಅಡುಗೆ ಮಾಡಿಸಿಕೊಂಡು ಬರಲು ಖರ್ಚು ಮಾಡಬೇಕಿರಲಿಲ್ಲ.

     ಭಯಂಕರ ಜಿಪುಣನಾದ ಪ್ರಶ್ನೆ ಏನಿಲ್ಲವೆಂದರೂ ಮನೆಯಲ್ಲಿ ಇನ್ನೂರು ರೂಪಾಯಿ ಖರ್ಚು ಮಾಡಿಸಿದ್ದನೆನಿಸುತ್ತದೆ, ಚೌಚೌಬಾತಿಗೆ. ಕ್ಯಾಂಟೀನಿನಲ್ಲಿ ಸಾಲದಲ್ಲೇ ನಮಗೆಲ್ಲ ತಿಂದು ಕುಡಿಸಿದ್ದ ಪ್ರಶ್ನೆಯ ಲೆಕ್ಕವೇ ಸುಮಾರು ಎಪ್ಪತ್ತೈದು ರೂಪಾಯಿ ಆಗಿತ್ತೆನಿಸುತ್ತದೆ, ೧೯೯೦ರ ಏಪ್ರಿಲ್ಲಿನಲ್ಲಿ. ಸಾಲವನ್ನು ಕ್ಯಾಂಟೀನಿನವನಿಗೆ ಪಾವತಿ ಮಾಡುವುದನ್ನು ಪ್ರಶ್ನೆ ಮುಂದೂಡುತ್ತಲೇ ಇದ್ದುದಕ್ಕೆ ಕಾರಣ--ಹಾಗೇ ಸುಮ್ಮನೆ ಆ ಲೆಕ್ಕವು ಮಾಯವಾದೀತು ಅಥವ ಮಾಯವಾಗಲಿ ಎಂದು. ಜಿಪುಣರ ಯೋಚಿಸುವ ಕ್ರಮವಿದು. ಅಥವ ಹೀಗಿರಬಹುದೇನೋಪ್ಪ!

     ಸಂಜೆಯ ಹೊತ್ತು, ಮುಗಿದ ನಂತರ, ದಿನಕ್ಕೆ ಮೊರ್ನಾಲ್ಕು ಗಂಟೆಗಳ ಕಾಲದ ಪಾರ್ಟ್ ಟೈಮ್ ಡಿಸೈನರ್ ಆಗಿ, ತಿಂಗಳಿಗೆ ನಾಲ್ಕುನೂರು ರೂಪಾಯಿ ಸಂಬಳ ಪಡೆಯುತ್ತಿದ್ದ ಪ್ರಶ್ನೆಯು, ಕೆಲಸಕ್ಕೆ ಹೋಗಿ ಅಥವ ಹೋಗದೆ ಅಥವ ಉಂಡೆನಾಮ ತೀಡಿ ಹದಿನೈದು ದಿನವಾಗಿತ್ತು. ಹೆಚ್ಚೂಕಡಿಮೆ ಐನೂರು ರೂಪಾಯಿ ಆತನಿಗಾಗಿ ಯಾರುಯಾರೋ ಖರ್ಚು ಮಾಡಿದಂತಾಗಿತ್ತು, ಕ್ಯಾಮರಾಕ್ಕೆ ಮುಖ ತೋರಿಸುವ ಮುನ್ನವೇ.

     ಅಂದಿನ ವಿಶೇಷವೆಂದರೆ ಸ್ವತಃ ಗೋಪಿ ಚೌಚೌಬಾತನ್ನು ಆಲದ ಎಲೆಯ ಮೇಲೆ ಹಾಕಿ ಹಾಕಿ ಎಲ್ಲರಿಗೂ ಕೊಡುತ್ತಿದ್ದುದು. ಮತ್ತೂ ವಿಶೇಷವೆಂದರೆ ಮೊದಲು ಹುಡುಗಿಯರಿಗೆ ನಂತರ ಹುಡುಗರಿಗೆ ನೀಡುತ್ತಿದ್ದುದು. ಮತ್ತೊಂದು ವಿಶೇಷವೆಂದರೆ, ಹುಡುಗಿಯರಿಗೆ (ಹುಡುಗರಿಗಿಂತಲೂ) ಒಂದಳತೆ ಹೆಚ್ಚು ತಿಂಡಿ ಹಾಕಿಕೊಡುತ್ತಿದ್ದುದು. ಕೊನೆಯ ವಿಶೇಷವೆಂದರೆಃ ಬ್ರಹ್ಮಚಾರಿಯಾದ, ರಾಮಾಯಣ ಖ್ಯಾತಿಯ ಹನುಮಂತನ ವೇಷ ತೊಟ್ಟು ಪ್ರಶ್ನೆ ನಿಂತಿದ್ದುದು. ಆ ಅಪ-ರೂಪದಲ್ಲಿ ಪ್ರಶ್ನೆ ನೇರವಾಗಿ ಅತ್ಯಂತ ಬರಪೀಡಿತವಾದ ಸೊಮಾಲಿಯನ್ ಹನು-ಮ್ಯಾನನಂತೆ ಕಾಣುತ್ತಿದ್ದ. ರವಿವರ್ಮ, ಎಂ.ಟಿ.ವಿ.ಆಚಾರ್ಯ ಮತ್ತು ಎಸ್.ಎಂ.ಪಂಡಿತರು ರಚಿಸಿರುವ ಹನುಮಂತರ ಚಿತ್ರಗಳು ಹತ್ತಾರು ಪ್ಯಾಕ್‍ಗಳುಳ್ಳ ಬಲಭೀಮನಂತಿದ್ದರೆ, ಪ್ರಶ್ನಾಮೂರ್ತಿ ಋಷಿಮುನಿಗಳ ಆಶ್ರಮದಲ್ಲಿ, ಕಾಲಕಾಲಕ್ಕೆ ಉಟತಿಂಡಿಯಿಲ್ಲದೆ ಅಥವ ಕಾಲಾಪಾನಿ ಶಿಕ್ಷೆಗೊಳಗಾಗಿ ಆಕಸ್ಮಿಕವಾಗಿ ತಪ್ಪಿಸಿಕೊಂಡು, ಬದುಕಿಬಂದ ನರಪೇತಲ ಸ್ಟಿಕ್-ಫಿಗರ್ ಆಗಿಯೊ ಕಾಣುತ್ತಿದ್ದ. ಹೊಳೆವ ನೀಲಿ ಚಡ್ಡಿ ತೊಟ್ಟು (ಉಪೇಂದ್ರರ "H20" ಸಿನೆಮದಲ್ಲಿ "ಹೂವೆ ಹೂವೆ" ಎಂದು ಹಾಡುವ ನಾಯಕಿ ಧರಿಸಿರುತ್ತಾಳಲ್ಲ ಅಂತಹದ್ದು), ಮುಖಕ್ಕೆ ಸೋಪನ್ನು ಇಡಲು ಬಳಸುವ ಕೆಂಪನೆ ಬಣ್ಣದ ಪ್ಲಾಸ್ಟಿಕ್ ಹಿಡಿಗೆ ಅತ್ತಿತ್ತ ತೂತುಮಾಡಿ, ದಾರ ಪೋಣಿಸಿ ಉಬ್ಬಿದ ಬಾಯಿಯನ್ನಾಗಿ ಅದನ್ನು ಕಟ್ಟಿಕೊಂಡಿದ್ದ. ಅದರಲ್ಲಿನ ಸೋಪಿನ ಪುಡಿಯನ್ನು ಸರಿಯಾಗಿ ತೊಳೆದಿರಲಿಲ್ಲವೆಂದು ಕಾಣುತ್ತದೆ, ಆದ್ದರಿಂದ ಆಗಾಗ ಸೀನುತ್ತಿದ್ದ. "ಈ ಎಕ್ಸ್-ಟ್ರಾ ಫಿಟ್ಟಿಂಗ್ ಸೋಪಿನ ಬಾಕ್ಸ್ ಎಲ್ಲ ಏಕೆ ಬೇಕಿತ್ತು. ಸಹಜವಾಗಿ ನಿನ್ನ ತದ್ರೂಪವೇ ಹನುಮನಲ್ಲವೆ!" ಎಂದು ಕಾಂಪ್ಲಿಮೆಂಟ್ ಬೇರೆ ನೀಡಿಬಿಟ್ಟಿದ್ದ ಮಾಮ.  ಮುಂದೆ ಓದಿ »

"ಅಕ್ಕಡಾ, ಎನ್ನಡಾ, ಬೀಚ್ ಮೆ ಲಿಟಲ್ ಕನ್ನಡಾ" -- ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೩೦


(೯೧)


     ಪ್ರಶ್ನಾಮೂರ್ತಿ ’?’ ಆಕಾರದಿಂದ ’?/’ ರೂಪಾಂತರಗೊಂಡ ದಿನದ ಎರಡು ದಿನದ ನಂತರ, ಒಂದು ದಿನ ಬೆಳಿಗಿನ ಜಾವ ದೇವಸಂದ್ರದ ನಮ್ಮ ಮನೆಯಲ್ಲಿ ಮಲಗಿದ್ದಾಗ ನನ್ನ ತಾಯಿ ನನ್ನನ್ನು ಏಳಿಸಿದರು. "ಯಾರೋ ಫ್ರೆಂಡ್ ಬಂದಿದಾರೆ ನೋಡೋ" ಎಂದರು. ಬೆಳಿಗ್ಗೆ ಬೆಳಿಗ್ಗೆ ಯಾರೂ ನಮ್ಮ ಮನೆಗೆ ಬರಲಾರರು ಎಂದುಕೊಂಡೇ ಹೊರಬಂದು ನೋಡುತ್ತೇನೆ. ಅಲ್ಲಿ ಗೆಳೆಯ, ಕಾಲೇಜಿನ ಜ್ಯೂನಿಯರ್ ಮಾರಿಷ್ ಪಾಲ್ ನಿಂತಿದ್ದಾನೆ!  ಮುಂದೆ ಓದಿ »

ಬೇಸಿಗೆಯ ಮಂಜು

ಮೌಂಟ್ ಶಾಸ್ತಾ, ಪಕ್ಕದಲ್ಲೇ ಶಾಸ್ತಿನಾ, ಉತ್ತರ ದಿಕ್ಕಿನಿಂದ ನೋಟ




 ಮುಂದೆ ಓದಿ »

Syndicate content