ಆತ್ಮಸಂಯಮದಿಂದ ಕೂಡಿದ ವಿವೇಕ, ವಿನಯದಿಂದ ಕೂಡಿದ ವಿದ್ಯೆ, ಸರಳತೆಯಿಂದ ಕೂಡಿದ ಅಧಿಕಾರ ಇವು ಮಹಾತ್ಮರ ಲಕ್ಷಣ.

— ಹಿತೋಪದೇಶ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಪ್ರವಾಸ ಕಥನ

ನಾವುಕಂಡ ಪುಣೆನಗರ !

ಭಾರತದ ಪ್ರಗತಿಶೀಲ ರಾಜ್ಯಗಳಲ್ಲೊಂದಾದ  ಮಹಾರಾಷ್ಟ್ರದ ಸಾಂಸ್ಕೃತಿಕ ರಾಜಧಾನಿ ಪುಣೆ. ಅದನ್ನು ದಖನ್ ಪ್ರಸ್ತಭೂಮಿಯ ರಾಣಿಯೆಂದು ಕರೆಯುವುದೂ ಉಂಟು. ಪ್ರಕೃತಿದತ್ತವಾದ ಸೌಂದರ್ಯ, ಸಹ್ಯಾದ್ರಿಯ ಪರ್ವತಶ್ರೇಣಿಗಳ ಅಕ್ಕಪಕ್ಕದಲ್ಲಿ ವಿಜೃಂಭಿಸಿ, ಟೆಲ್ಕೊ ನಂತಹ ಬೃಹತ್ ಕಾರ್ಖಾನೆಗಳಿಗೆ ತವರಾದ ಪುಣೆ, ಮಹಾರಾಷ್ಟ್ರದ ಸಾಂಕೃತಿಕ ಹಾಗೂ ವಾಣಿಜ್ಯ ಕೇಂದ್ರಗಳಲ್ಲೊಂದು. ಮುಂಬೈಗಿಂತಲೂ ಅತಿಹೆಚ್ಚು ಔದ್ಯೋಗಿಕ ಹಾಗೂ ಶೈಕ್ಷಣಿಕ ಸಂಸ್ಥೆಗಳನ್ನು ಅದು ಹೊಂದಿದೆ. ಬ್ರಿಟಿಷ್ ಸಾಮ್ರಾಜ್ಯದ ಸಮಯದಲ್ಲಿ ಪ್ರಪ್ರಥಮವಾಗಿ ಸ್ಥಾಪಿಸಿದ ಮಹತ್ವದ ವಿಶ್ವವಿದ್ಯಾಲಯಗಳ ನಗರಗಳಲ್ಲೊಂದಾಗಿದೆ. ಖಡಕ್ ವಾಸ್ಲಾ ದಲ್ಲಿನ ಭಾರಿ ಪ್ರಮಾಣದ ನೀರಿನ ಡ್ಯಾಮ್, ಮತ್ತು ಮಿಲಿಟರಿ ಅಕ್ಯಾಡಮಿಗಳಲ್ಲದೆ, ಕೆಲವು ಚಾರಿತ್ರ್ಯಿಕ ಸನ್ನಿವೇಶಗಳ ಅನುಪಮ ಖಜಾನೆಯಾಗಿದೆ. ಪೇಷ್ವೆಗಳ ವಾಸಸ್ಥಾನ. ಬೃಹತ್ ಐಟಿ ಉದ್ಯಮಗಳ ತವರೂರು. ಪುಣೆಯೊಂದರಿಂದಲೇ ಸುಮಾರು ೧,೦೬೦  ಐ. ಟಿ ವಲಯದ ಪ್ರಶಿಕ್ಷಿತ ತಂತ್ರಜ್ಞರು, ಪ್ರತಿವರ್ಷ ಅಮೆರಿಕಕ್ಕೆ ಲಗ್ಗೆಹಾಕುತ್ತಿದ್ದಾರೆ.  ಮುಂದೆ ಓದಿ »

ಶನಿವಾರದಂದೇ ಕಟ್ಟಿದ ಪುಣೆಯ ಶನಿವಾರ್ ವಾಡ ಕೋಟೆ ಅರಮನೆ !

ನಾವು ಮಾರ್ಚ ತಿಂಗಳ ಮೊದಲವಾರ ಪುಣೆಗೆ ಹೋದಾಗ,  ಕೋಟೆಮತ್ತು ಅರಮನೆಗಳ ದುರಸ್ತಿಕೆಲಸ ನಡೆಯುತ್ತಿತ್ತು.

 

ಶನಿವಾರ್ ವಾಡ ಕೋಟೆ ಒಳಭಾಗದಲ್ಲಿನ ಕಟ್ಟಡದ ಕೆಲವು ಅವಶೇಷಗಳು....

 ಮುಂದೆ ಓದಿ »

ಪುಣೆಯ ಸಮೀಪದಲ್ಲಿರುವ ಶ್ರೀ ವೆಂಕಟೇಶ್ವರ ದೇವಾಲಯ !

ಬಾಲಾಜಿಮಂದಿರಕ್ಕೆ ಸ್ವಾಗತನೀಡುವ ಮಹಾದ್ವಾರ...

ಪುಣೆಯ ಬಳಿಯ ನಾರಾಯಣ್ ಪುರ್ ದ,  ’ಕೇತ್ಕಾವಳೆ” ಎಂಬ ಊರಿನಲ್ಲಿ ತಿರುಪತಿ ಮಹಾಸ್ಥಾನದಲ್ಲಿನ ವೆಂಕಟೇಶ್ವರ ಸ್ವಾಮಿಯನ್ನೇ ಹೋಲುವ ಬಾಲಾಜಿಮಂದಿರವೊಂದು ಭಕ್ತಜನರ ಮನೋಕಾಮನೆಗಳನ್ನು ಈಡೇರಿಸಲು ಸದಾ ಸಿದ್ಧವಾಗಿ ನಿಂತಿದೆ. ಹಾಗೆಯೇ ’ಶಿರ್ ಗಾಂ ’ ನಲ್ಲಿ ”ಶಿರ್ಡಿಯ ಸಾಯಿಬಾಬನ ಮಂದಿರ ’ ದ ಹೋಲಿಕೆಯ ಮತ್ತೊಂದು ದೇವಸ್ಥಾನ ಸ್ಥಾಪನೆಯಾಗಿದೆ.

ಬಾಲಾಜಿ ದೇವಾಲಯದ  ಪೂಜೆ-ಪುನಸ್ಕಾರಗಳ ವೇಳಾಪಟ್ಟಿ (೨೦೧೦ ರ ಮಾರ್ಚ್ ತಿಂಗಳ ಮೊದಲನೆಯವಾರದಂದು ಚಿತ್ರೀಕರಿಸಿದ್ದು)

 ಮುಂದೆ ಓದಿ »

ಮುರುಡೇಶ್ವರ ಮಹಾಕ್ಷೇತ್ರದಲ್ಲಿ ಎಲ್ಲವೂ ಬೃಹತ್ ಪ್ರಮಾಣದ್ದೇ ಅಲ್ಲವೇ ?

ಬೃಹತ್ ಶಿವಮೂರ್ತಿ, ಬೃಹತ್ ರಾಜಗೋಪುರ, ಬೃಹತ್ ಭಗೀರಥ, ಶಿವ-ಗಂಗಾದೇವಿಯರ ವಿಗ್ರಹ, ಮತ್ತೆ ಬೃಹತ್ ಅರಬ್ಬೀಕಡಲ ತೀರ, ಕೊನೆಗೆ ಬೃಹತ್ ಮುರುಡೇಶ್ವರ ದೇವಾಲಯ. ನನಗಂತೂ ಈ ಕ್ಷೇತ್ರಕ್ಕೆ ಬೃಹತ್ ಒಂದು ಅನ್ವರ್ಥನಾಮವೆನ್ನಿಸಿದೆ. ಅದಿಲ್ಲದೆ ಸುಮ್ಮನೆ ಮುರುಡೇಶ್ವರ ಎನ್ನಲಿಕ್ಕೆ ತಾನೇ ಹೇಗೆ ಸಾಧ್ಯ ನೀವೇ ಹೇಳಿ ಅಯ್ಯ ?

ಶ್ರೀ. ಶೆಟ್ಟಿಯವರ ಕಲ್ಪನೆಗಳೆಲ್ಲಾ ಬೃಹತ್ ಪ್ರಮಾಣದ್ದೇ ಆಗಿವೆ. ರಾಜಗೋಪುರ ಮತ್ತು ಶಿವಮೂರ್ತಿಯ ವಿಗ್ರಹ ವಿಶ್ವದಲ್ಲೇ ಅತಿ ಎತ್ತರದ್ದೆಂದು ಉಲ್ಲೇಖಿಸಲ್ಪಟ್ಟಿವೆ. 

ಮಂದಿರದ ಮಂಡಳಿಯ ಪ್ರಮುಖ ಭಕ್ತ-ಶಿಖಾಮಣಿ ಶೆಟ್ಟಿಯವರ ಹೆಸರು ಮುರುಡೇಶ್ವರದಲ್ಲಿ ಅಲ್ಲಿನ ದೈವದಷ್ಟೇ ಜನಪ್ರಿಯ ! ಶೆಟ್ಟಿಯವರ ರೆಸಾರ್ಟ್, ಮತ್ತೆ ಶೆಟ್ಟಿಯವರ ಹೋಟೇಲ್ ಮುಂತಾದವುಗಳು ಅಲ್ಲಿಗೆ ಬರುವ ಪರ್ಯಟಕರಿಗೆ ಎಲ್ಲಾ ಸೌಲಭ್ಯಗಳನ್ನೂ ಒದಗಿಸಲು ಕಂಕಣಬದ್ಧವಾಗಿವೆ. ದೇವಾಲಯದ ಕಡಲ ತೀರದಲ್ಲಿ ನಿಂತು ವೀಕ್ಷಿದರೆ, ನಮಗೆ ಶಿವ, ರಾಜಗೋಪುರ ಮತ್ತು ಮುರುಡೇಶ್ವರ ಮಂದಿರ ಇತ್ಯಾದಿಗಳು ಕಡಲ ಜೊತೆಯಲ್ಲಿ ಕಣ್ಣಿಗೆ ರಂಜಿಸುತ್ತವೆ.  ಮುಂದೆ ಓದಿ »

ಹಟ್ಟಿಅಂಗಡಿ ಸಿದ್ಧಿವಿನಾಯಕ ದೇವಾಲಯ !

ಉಡುಪಿ ಕ್ಷೇತ್ರಕ್ಕೆ ಅಪರೂಪವಾಗಿ ಹೋದನಮಗೆ, ಅಲ್ಲಿನ ಅಕ್ಕ-ಪಕ್ಕದ ದೇವಾಲಯಗಳನ್ನು ನೋಡಿಬರಲು ನಮ್ಮ ಮಗನ ಸಹಕಾರ ಹೆಚ್ಚಾಗಿತ್ತು. ಅವನ ಆದ್ಯತೆಗಳ ಮಧ್ಯದಲ್ಲೂ ಉಡುಪಿ, ಕೊಲ್ಲೂರು, ಹಟ್ಟಿಅಂಗಡಿಗಳ ದೇವಸ್ಥಾನಕ್ಕೆ ನಮ್ಮ ಜೊತೆ ಬಂದಿದ್ದ ! ಗೋಕರ್ಣ, ಮುರುಡೇಶ್ವರ, ವಡಬಾಂಡೇಶ್ವರ, ಪಾಜಕ, ಮತ್ತು ಇಡಗುಂಜಿ ದೇವಸ್ಥಾನಗಳಿಗೆ ಬರಲು ಅವನಿಗೆ ಸಮಯದ ಅಭಾವವಿತ್ತು !  ಮುಂದೆ ಓದಿ »

ಹಿಮದರಾಶಿಯ ಮಡಿಲಲ್ಲಿ ನಿಂತು...... ಹಿಮವದ್ ಗೋಪಾಲಸ್ವಾಮಿ ಬೆಟ್ಟ........

ದ್ವಾಪರದ ಕೃಷ್ಣನ ವೇಣುಗಾನಕ್ಕೆ ಗೋವುಗಳೆಲ್ಲಾ ಅವನ ಸುತ್ತಲು ಬಂದು ಸೇರುತ್ತಿದ್ವಂತೆ. ಇಂದು ಅದೇ ಕೃಷ್ಣ, ಬೆಟ್ಟದ ತುದಿಯಲ್ಲಿ ನಿಂತು ತನ್ನ ಕೊಳಲಿನಿಂದ ಸುಮಧುರ ಗಾನ ಸುಧೆ ಹರಿಸ್ತಿದ್ದಾನೆ, ಪ್ರಕೃತಿ ದೇವತೆ ಅವನ ಸುತ್ತಲು ಅಮೋಘವಾಗಿ ನರ್ತಿಸುತ್ತಿದ್ದಾಳೆ, ಈ ಗಾನ ಮತ್ತು ನೃತ್ಯ ನೋಡಲು ನೀವು ಸೇರಬೇಕಾದ ಸ್ಥಳ: ಹಿಮವದ್ ಗೋಪಾಲ ಸ್ವಾಮಿ ಬೆಟ್ಟ, ಮಾರ್ಗ:ಬೆಂಗಳೂರು-ಮೈಸೂರು-ಗುಂಡ್ಲುಪೇಟೆ-ಅಲ್ಲಿಂದ ಕೇವಲ ೨೨ ಕಿ.ಮೀ. ಬಂಡಿಪುರದಿಂದ ೧೦ ಕಿ,ಮೀ. ಸಮಯ: ಬೆಳಿಗ್ಗೆ: ೭ ರಿಂದ ಸಂಜೆ ೫ (ಇದು ಅರಣ್ಯ ಇಲಾಖೆ ವಿಧಿಸಿರುವ ಸಮಯ) ಪ್ರವೇಶ ಧನ ಕಾರಿನಲ್ಲಾದರೆ ೫೦ ರೂಪಾಯಿ,ಬೈಕಿನಲ್ಲಾದರೆ ೨೫ ರೂಪಾಯಿಗಳು. ಬೆಂಗಳೂರಿನಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಸಹ ಬೆಟ್ಟಕ್ಕೆ ನೇರವಾಗಿ ಬಸ್ಸೊಂದು ಸಂಚರಿಸುತ್ತದೆ.  ಮುಂದೆ ಓದಿ »

ಮಲ್ಪೆಯಲ್ಲಿ ನಾವು ಮಾಡಿದ ದರ್ಶನ, ಬಲರಾಮದೇವರದು !

ಶ್ರೀ ಮಧ್ವಾಚಾರ್ಯರು, ಉಡುಪಿಯಲ್ಲಿ ಶ್ರೀ ಕೃಷ್ಣನ ವಿಗ್ರಹವನ್ನು ಸ್ಥಾಪಿಸಿದಂತೆಯೇ, ಮಲ್ಪೆಯಲ್ಲೂ ಬಲರಾಮದೇವರ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿದ್ದಾರ‍ೆ. ಶ್ರೀಗಳವರ ಕರಕಮಲಗಳಿಂದ ಸ್ಥಾಪಿಸಲ್ಪಟ್ಟ ಈ ಮೂರ್ತಿಯನ್ನು ಸ್ಥಳೀಯರು 'ವಡಬಾಂಡೇಶ್ವರ ಸ್ವಾಮಿ 'ಯೆಂದು ಕರೆಯುತ್ತಾರೆ. ಇದು ತುಳು ಭಾಷೆಯಿಂದ ಬಂದ ಪದವೆಂದು  ಕೆಲವರು ಹೇಳಿದರು.
ನಾವು ಅಲ್ಲಿಗೆ ಹೋದಾಗ, ಅಪರಾನ್ಹ ಮೂರುಗಂಟೆಯಮೇಲಾಗಿತ್ತು.

ಆಚಾರ್ಯ ಶ್ರೀ. ಶ್ರೀ. ಮಧ್ವಾಚಾರ್ಯರ ಹುಟ್ಟೂರಿನ ದರ್ಶನ !

ಉಡುಪಿಯ ಶ್ರೀಕೃಷ್ಣನ ದರ್ಶನದ ಬಳಿಕ, ನಾವು ಹತ್ತಿರದಲ್ಲೇ ಇರುವ ’ಪಾಜಕ ಕ್ಷೇತ್ರ ’ ಕ್ಕೆ ಹೋಗಿಬಂದೆವು. ಇದು ’ಮಲ್ಪೆ ಕಡಲ ತಟ ’ ಕ್ಕೆ ಅತಿ ಸಮೀಪದಲ್ಲಿದೆ. ’ಪರಮಪೂಜ್ಯ ಯತಿವರ್ಯ ಶ್ರೀ. ಮಧ್ವಾಚಾರ್ಯರು ಜನಿಸಿದ ಪುಣ್ಯಭೂಮಿ ’ ಯಿದು. ನಾವು ಹೋದಾಗ ಮದ್ಯಾನ್ಯ, ಊಟಕ್ಕೆ ವ್ಯವಸ್ಥೆಯಾಗುತ್ತಿತ್ತು. ನಾವು ಆಗಲೇ ಉಡುಪಿಯ ಮಠದಲ್ಲಿ ಊಟವನ್ನು ಮಾಡಿ ಪೂರೈಸಿದ್ದೆವು. ಯತಿಯರ್ಯರಿಗೆ ವಂದಿಸಿ, ಅಲ್ಲಿನ ’ಶ್ರೀ ಅನಂತಪದ್ಮನಾಭಮಂದಿರ ’ಕ್ಕೂ ಭೇಟಿಕೊಟ್ಟು, ಸ್ವಲ್ಪಕಾಲ ವಿರಮಿಸಿ ಮುಂದೆ ಸಾಗಿದೆವು. ಬಿಸಿಲಿನ ಧಗೆ ಜೋರಾಗಿತ್ತು. ಇಲ್ಲಿನ ಪ್ರತಿಮಂದಿರಗಳಲ್ಲಿನ ವಿಶೇಷತೆಯೆಂದರೆ, ಸೊಗಸಾದ ರುಚಿಯಾದ ಊಟದ ವ್ಯವಸ್ಥೆ.  

 

ಕೇರಳದ ಶೈಲಿಯ ಹೆಂಚಿನ ಮನೆಯ ವಿನ್ಯಾಸ ನಮಗೆ ತುಂಬಾ ಹಿಡಿಸಿತು....  ಮುಂದೆ ಓದಿ »

Syndicate content