ಪ್ರವಾಸ ಕಥನ
ಗಿರಿಜನರ ನಾಡು ಕೋರಾಪುಟ್
July 5, 2008 - 7:25am — cmariejosephಕೋರಾಪುಟ್ ಎಂಬುದು ಒರಿಸ್ಸಾದ ಪಶ್ಚಿಮದಲ್ಲಿನ ಗುಡ್ಡಗಾಡು ಪರಿಸರದ ಒಂದು ಜಿಲ್ಲೆ. ಬರೀ ಅರಣ್ಯ ಮತ್ತು ಬೆಟ್ಟಗುಡ್ಡಗಳಿಂದ ತುಂಬಿದ ಈ ಪ್ರದೇಶದಲ್ಲಿ ವಾಸಿಸುತ್ತಿರುವವರು ಸಹಜವಾಗಿ ಗುಡ್ಡಗಾಡು ಜನರು. ಭೂಪಟದಲ್ಲಿನ ಗಡಿರೇಖೆಗಳ ಪರಿವೆ ಇಲ್ಲದ ಇವರು ಜಾರ್ಖಂಡ್, ಛತ್ತೀಸ್ಗಡ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರ ಮತ್ತು ಒರಿಸ್ಸಾಗಳಲ್ಲಿ ವ್ಯಾಪಿಸಿರುವ ಬೃಹತ್ ಅರಣ್ಯದಲ್ಲಿ ಬಾಳುವೆ ಮಾಡುತ್ತಿದ್ದಾರೆ. ಮಳೆ ಬಿಸಿಲು ಚಳಿಗೆ ತಕ್ಕಂತೆ ತಾಣಗಳನ್ನು ಬದಲಿಸುತ್ತಾ ಪ್ರಾಣಿಗಳನ್ನು ಬೇಟೆಯಾಡುತ್ತಾ ಇದ್ದಲ್ಲೇ ಏನಾದರೂ ಬೆಳೆದುಕೊಳ್ಳುತ್ತಾ ಅತಿ ಸ್ವತಂತ್ರರಾಗಿ ಬದುಕುವ ಇವರನ್ನು ನಾಡಿಗರು ಆದಿವಾಸಿಗಳೆನ್ನುತ್ತಾರೆ.
ವಿಶಾಖಪಟ್ಟಣದಿಂದ ರಾಯಗಡದವರೆಗಿನ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ ೪೩ರಲ್ಲಿ ಸಾಗುವ ಲಾರಿಗಳು ಕೋರಾಪುಟ್ ಜಿಲ್ಲೆಯ ಸಿಮಿಲಿಗುಡ ಎಂಬ ಊರಿನಲ್ಲಿ ನೀರು ನೆರಳಿಗಾಗಿ ನಿಂತು ಸಾಗುವೆಡೆ ಈ ಆದಿವಾಸಿಗಳ ಸಂತೆ ನೆರೆಯುತ್ತದೆ. ರಾಗಿ, ತರಕಾರಿ, ಉಪ್ಪು, ಎಣ್ಣೆ, ಕಾಳುಕಡಿ, ಬಟ್ಟೆ, ಬಳೆ, ಕತ್ತಿ ಕುಡುಗೋಲು, ಆಡುಕುರಿ ಇವೆಲ್ಲ ಬಿಕರಿಯಾಗುವುದು ಪರಸ್ಪರ ವಿನಿಮಯ ಲೆಕ್ಕದಲ್ಲಿ. ಅರ್ಥಾತ್ ಇಲ್ಲಿ ಹಣದ ವಿನಿಮಯ ಅತಿ ಕಡಮೆ. ಗಂಡಸರು ಬರೀ ಲಂಗೋಟಿಯಲ್ಲಿದ್ದರೆ ಹೆಂಗಸರು ಲಂಗೋಟಿ ಜೊತೆಗೆ ಸೀರೆಯನ್ನು ಮಾಮೂಲಾಗಿ ಉಡದೆ ಶಾಲಿನಂತೆ ಹೊದ್ದುಕೊಳ್ಳುತ್ತಾರೆ. ಮುಂದೆ ಓದಿ »

- Login or register to post comments
- 65 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಲ೦ಡನ್ ಪ್ರವಾಸಕಥನ ಭಾಗ ೯: ಫ್ರೆ೦ಚ್-ಮೇಡ್ ದುರ೦ತದ ಲ೦ಡನ್ ರಸಸ್ವಾಧನೆ
July 4, 2008 - 1:05am — anilkumarದೆವ್ವದ ಬಗ್ಗೆ ಮಾತನಾಡುತ್ತ, ‘ಫಿಶ್ ಅ೦ಡ್ ಚಿಪ್ಸ್’ ಹೋಟೆಲಿನಲ್ಲಿ ತರ್ಕಕ್ಕೆ ನಿಲುಕದ ಹೋಮ್ಸ್ನ ನಡುವಳಿಕೆಯ ನ೦ತರ, ಹೊರಗೆ ನಡೆದಾಡಲು ಅಥವ ಅಲೆದಾಡಲು ಪ್ರಾರ೦ಭಿಸಿದೆವು—ನಾನು ಮತ್ತು ಹೋಮ್ಸ್. ನಮಗೆ ಏನು ಮಾಡಬೇಕೆ೦ದು ತಿಳಿಯದೇ ಹೋದಾಗಲೆಲ್ಲ ನಡೆದಾಡಲು ಪ್ರಾರ೦ಭಿಸಿಬಿಡುತ್ತಿದ್ದೆವು. ಲ೦ಡನ್ನಿನ ಬೀದಿಗಳಿರುವುದಾದರೂ ಮತ್ತ್ಯಾಕೆ? ತಪ್ಪಿಸಿಕೊಳ್ಳುವುದರಲ್ಲೂ ಒ೦ದು ವಿನ್ಯಾಸ ಹೊ೦ದಿಸಿಕೊಡುವ ಸಾಮರ್ಥ್ಯ ಲ೦ಡನ್ನಿನ ಬೀದಿಗಳಿಗಿವೆ. ಅಷ್ಟರಲ್ಲಿ--ಎಷ್ಟರಲ್ಲಿ ಎ೦ದು ಕೇಳಬೇಡಿ, ಬರವಣಿಗೆ ಮಾಡುವಾಗಲೆಲ್ಲ ಪದಗಳೂ ಹೀಗೂ ದಿಕ್ಕಿತಪ್ಪಿ ಅಲೆದಾಡುವುದು ಸಹಜವೇ--ಪಿಕಾಡೆಲಿ ಸರ್ಕಸ್ ಎ೦ಬ ಸ್ಥಳದ ಟ್ಯೂಬ್ ಸ್ಟೇಷನ್ನಿನ ಬಳಿ ಬ೦ದಿದ್ದೆವು. ರೋಮನ್ನರು ಲ೦ಡೇನಿಯಮ್ ಎ೦ಬ ಲ೦ಡನ್ ನಗರಕ್ಕೆ ೫೦ ಕ್ರಿ.ಶಕದಷ್ಟು ಹಿ೦ದೆಯೇ--ಅಥವ ತಡವಾಗಿ--ನೀಡಿದ ಪಕ್ಕಾ ರೋಮನ್ ಶೈಲಿಯ ವಾಸ್ತು ಆ ಅರೆ-ಚ೦ದ್ರಾಕಾರದ ಚೌಕ.
“ಇಲ್ಲಿ ಸಾಮೊಹಿಕವಾಗಿ ಕೈದಿಗಳನ್ನು ನೇಣುಹಾಕುತ್ತಿದ್ದರು. ಅದನ್ನು ನೋಡಲು ಜನ ಅಕ್ಕಪಕ್ಕದ ಮನೆಗಳ ಮಹಡಿಗಳ ಮೇಲೆ ಕಾಸು ಕೊಟ್ಟು ಜಾಗ ರಿಸರ್ವ್ ಮಾಡುತ್ತಿದ್ದರು. ಥಿಯೊಡೊರ್ ಗೆರಿಕಾಲ್ಟ್ ಎ೦ಬ ಫ್ರೆ೦ಚ್ ಕಲಾವಿದ ಗೊತ್ತಿರಬಹುದು ನಿನಗೆ. ಆತ ಇಲ್ಲಿದ್ದಾಗ ಅನೇಕರನ್ನು ನೇಣು-ಹಾಕುವ ಪ್ರಸ೦ಗಗಳನ್ನು ನೋಡಿದ್ದಾನೆ” ಎ೦ದ ಹೋಮ್ಸ್. ಮುಂದೆ ಓದಿ »

- ೧ ಪ್ರತಿಕ್ರಿಯೆ
- 206 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ರೂಪ್ ಕುಂಡ್: ಅಸ್ಥಿಪಂಜರಗಳ ಸರೋವರ
June 27, 2008 - 6:38pm — keerthi2kiranಜಮ್ಮು ಕಾಶ್ಮೀರದಿಂದ ಅಸ್ಸಾಮಿನವರೆಗೂ ಭಾರತದ ಮಹಾಗೋಡೆಯಾಗಿ ನಿಂತಿದೆ ಹಿಮಾಲಯ. ಹಿಮಾಲಯದ ಮಡಿಲಲ್ಲಿ ಅನೇಕ ನಿಗೂಢ ಸಂಗತಿಗಳನ್ನು, ಸ್ಥಳಗಳನ್ನು ಕಾಣಬಹುದು. ಇಂತಹ ಒಂದು ಸ್ಥಳ ರೂಪ್ಕುಂಡ್. ಉತ್ತರಾಂಚಲ ರಾಜ್ಯದ ಚಮೋಲಿ ಜಿಲ್ಲೆಯಲ್ಲಿ ಜನಜೀವನವೇ ಇಲ್ಲದ ಎತ್ತರದ ಹಿಮಾಲಯದ ಪರ್ವತಗಳ ನಡುವೆ ೭೦೦೦ಮೀ ಎತ್ತರದ ತ್ರಿಶೂಲ್ ಪರ್ವತದ ಮಡಿಲಲ್ಲಿರುವ ಚಿಕ್ಕ ಕೆರೆ ರೂಪ್ಕುಂಡ್.

- 4 ಪ್ರತಿಕ್ರಿಯೆಗಳು
- 246 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಲ೦ಡನ್ ಪ್ರವಾಸಕಥನ ಭಾಗ೮: ಮಾಯಾಜಾಲವೆ೦ಬ ಮಾಯೆ
June 4, 2008 - 6:33pm — anilkumarಸತ್ತವರ ದೃಷ್ಟಿಯಲ್ಲಿ ಬದುಕಿರುವವರು ಭೂತ ದೈಯ್ಯಗಳೇ! ಬದುಕುಳಿದವರಿಗೆ ಸತ್ತವರ ಬಗ್ಗೆ ಎಷ್ಟು ಭಯವಿದೆಯೋ ಅದಕ್ಕಿ೦ತಲೂ ಸಾವಿರಪಟ್ಟು ಬದುಕಿರುವವರ ಬಗ್ಗೆ ಸತ್ತವರಿಗಿದೆ ಭೀತಿ. ಬೇಕಾದರೆ ಸತ್ತವರನ್ನು ಕೇಳಿ ನೋಡಿ. ಅದಕ್ಕೇ ನೋಡಿ ಬದುಕಿರುವವರು ಆಗಾಗ ಸತ್ತವರನ್ನು-- ಸತ್ತವರು ಸತ್ತಾದ ನ೦ತರ--’ನೋಡುವುದು೦ಟು’. ಆದರೆ ಸತ್ತವರು ಎಲ್ಲಾದರೂ ಬದುಕಿರುವವರನ್ನು ನೋಡಿರುವುದಕ್ಕೆ ಸಾಕ್ಷಿ ಇದೆಯೇ? ಹಾಗೆ ಬದುಕಿರುವವರನ್ನು ಸತ್ತವರು ಕ೦ಡು ಬದುಕುಳಿದಿರುವ ಉದಾಹರಣೆ ಇದೆಯೇ?! ಬೇಕಾದರೆ ಸತ್ತವರನ್ನೇ ಕೇಳಿನೋಡಿ, ಗು೦ಡಿಗೆ ಮತ್ತು ಲಕ್ ಇದ್ದರೆ.
ಸತ್ತವರು ಬದುಕಿರುವವರನ್ನು ನೋಡಿ ಬದುಕಿ ಉಳಿದದ್ದಿಲ್ಲ. ಆದರೆ ಬದುಕಿರುವವರು ಸತ್ತವರನ್ನು ಕ೦ಡು ಸತ್ತೇ ಹೋದದ್ದು೦ಟು. ತಮ್ಮ ನೆಚ್ಚಿನ ತಾರೆಯರನ್ನು ಜೀವ೦ತವಾಗಿ, ಎದಿರುಬದುರಾಗಿ ಕ೦ಡಾಗ ಅಭಿಮಾನಿಗಳಿಗೆ ಆಗುವ ಅನುಭವ ಇ೦ತಹದ್ದೇ.ಇದು ಹೇಗೆ೦ದರೆ ಪಾಶ್ಚಾತ್ಯರು ಏಷ್ಯನ್ ಕಲೆಯ ಪ್ರಭಾವದಿ೦ದ ಕಲಾಕೃತಿಗಳನ್ನು ರಚಿಸಿದರೆ ಅದನ್ನು ಜಾಣತನದ ’ಅಪ್ರೊಪ್ರಿಯೇಷನ್’ ಎನ್ನುತ್ತೇವೆ—ಸಮಕಾಲೀನ ಕಲಾವಿಮರ್ಶೆಯ ಭಾಷೆಯಲ್ಲಿ. ಈ ಪದಗಳ ಬಳಕೆಯನ್ನೂ ’ಪೋಸ್ಟ್-ಕಲೋನಿಯಲ್ ಸ್ಟಡೀಸ್’””’ ಎನ್ನುತ್ತೇವೆ, ಸಮಕಾಲೀನ ಕಲಾವಿಮರ್ಶೆಯ ಭಾಷೆಯಲ್ಲಿ! ಅದೇ ಏಷ್ಯನ್ನರು ಪಾಶ್ಚಾತ್ಯ ಕಲಾ ಪ್ರಭಾವ ಹೊ೦ದಿದಲ್ಲಿ ಒ೦ದರ್ಥದ ಮು೦ದುವರೆದ ಗುಲಾಮಗಿರಿ, ಎಗ್ಸೊಟಿಸಿಸ೦ ಎ೦ದು ಆಗಿಬಿಡುತ್ತದೆ. ಈ ಅರ್ಥದಲ್ಲಿ ಸತ್ತವರು ವಸಾಹತುಶಾಹಿಗಳು, ಬದುಕಿರುವವರು ವಸಾಹತೀಕೃತರು. ಸಾವಿನ ವಿಷಯದಲ್ಲಿ ಮಾತ್ರ ವಸಾಹತುಶಾಹಿಗಳು ಎ೦ದಿಗೂ ವಸಾಹತೀಕೃತರಾಗಲಾರರು!
“ಮಿ.ಹೋಮ್ಸ್, ದೆವ್ವಗಳನ್ನು ನ೦ಬುತ್ತೀಯ?” ಎ೦ದು ಕೇಳಿದ್ದೆ ಒಮ್ಮೆ.
“ಈ ಪ್ರಶ್ನೆಗೆ ನಾನು ಉತ್ತರಿಸುವ ಮುನ್ನ, ಇದಕ್ಕೆ ಸ೦ಬ೦ಧಿಸಿದ ಇನ್ನಿತರ ಪ್ರಶ್ನೆಗಳನ್ನು ಒಮ್ಮೆಲೆ ಕೇಳಿಬಿಡು” ಎ೦ದಿದ್ದನಾತ. ಮುಂದೆ ಓದಿ »

- Login or register to post comments
- 176 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS: