ಶಾಂತ ಮನಸ್ಸಿನಿಂದ ಕಾಯುವವನಿಗೆ ಹಿಪ್ಪುನೇರಳೆಯ ಎಲೆಯೂ ಕೂಡ ರೇಶಿಮೆಯಾಗುತ್ತದೆ.

— ಚೀನೀ ಗಾದೆ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಜನಪದ ಸಾಹಿತ್ಯ

Secular ಕ್ರಿಸ್ಮಸ್ ಗೀತಿಕೆಗಳು ( ಖ್ಯರಒಲ್ಗಳು )

ಈ ಕ್ರಿಸ್ಮಸ್ ನಾನು ಯುರೋಪಲ್ಲಿ ಕಳೆದೆನು. ನಾನಿರುವ ಸ್ವೀಡನ್ ದೇಶದಲ್ಲಿ ಹೆಚ್ಚಿನ ಮಂದಿ ತಮ್ಮ ಧಾರ್ಮಿಕಶ್ರದ್ಧೆಯ ಬಗ್ಗೆ "Secular, Agonistic, Humanistic" ಎಂದು ಕರೆದುಕೊಳ್ಳುವರು. ಅಂದರೆ "ನಮ್ಮನ್ನೆಲ್ಲ, ಈ  ಜಗತ್ತೆನ್ನಲ್ಲ ಸೃಷ್ಟಿಸಿದ ಶಕ್ತಿಯಲ್ಲಿ ನಂಬಿಕೆ ಇದೆ. ಆದರೆ ಆ ಶಕ್ತಿಯನ್ನು ಈಗಿರುವ ಒಂದು ಧರ್ಮ, ರಿಲಿಜನ್ ಯಿಂದ ವರ್ಣನೆ-ಮಾಡಲು ಆಗದು" ಎಂದು. ಹಾಗೂ ಮಿಕ್ಕ ಹೆಚ್ಚಿನ ಮಂದಿ "ಜಗಚ್ಚೃಷ್ಟಿಗೆ ಒಂದು ಮೂಲ ಶಕ್ತಿಯಿದೆ" ಎಂಬುದರ ನಿರಾಕರಣವಾದಿಗಳು.  ಮುಂದೆ ಓದಿ »

ಆಧುನಿಕ ಜೀವನದ ಪರಿಪಕ್ವತೆಗೆ ಬೇಕಾದ ಪರಿಕರಗಳು ಜಾನಪದ ಗೀತೆಗಳಲ್ಲಿ ಹೇರಳವಾಗಿವೆ

ಸಾಮಾನ್ಯ ಜೀವನದಲ್ಲಿ ಕಾಣುವಂತಹ ಹಿಗ್ಗು ಶಿಷ್ಟ ಜೀವನದಲ್ಲಿ ಕಾಣುವುದು ಕಷ್ಟ. ಬಾಹ್ಯ ಜಗತ್ತಿನ ಚಿಂತೆಯಿಂದ ಮುಕ್ತವಾಗಿ, ಜೀವನದ ಪ್ರತಿಯೊಂದು ಕ್ಷಣಗಳನ್ನು ನಮ್ಮದೇ ಆದ ನಿಯಮಿತ ಲೋಕದಲ್ಲಿ ಕಳೆಯುದು ಒಂದು ಅಪೂರ್ವ ಆನಂದವೇ ಸರಿ. ನಗರದಿಂದ ಸ್ವಲ್ಪ ದೂರ ಹೋಗಿ ಅಲ್ಲಿನ ಜನಜೀವನದಲ್ಲಿ ಬೆರೆತು, ಅದರ ಅಂತರಾಳಕ್ಕಿಳಿದಾಗ ಸಾಮಾನ್ಯ ಜೀವನದ ಮಹತ್ತರ ಅನುಭವ, ಯಾವುದೋ ಒಂದು ಹೊಸ ಅನ್ವೇಷಣೆ ತಂದಷ್ಟು ಖುಷಿ ತರುತ್ತದೆ. "ಕುಬೇರನ ಸಂಪತ್ತಾಗಲಿ, ದೇವೇಂದ್ರನ ಭೋಗವೈಭವವಾಗಲಿ, ಧುರ್ಯೋಧನನ ಅಧಿಕಾರವಾಗಲಿ, ನಿಶ್ಚಿಂತೆಯಿಂದ ಕೂಡಿದ ಜೀವನಕ್ಕೆ ಸರಿಸಾಟಿಯಾಗಲಾರದು." ಜೀವನದ ಪ್ರತಿಯೊಂದು ಘಟನೆಯನ್ನು ತೀವ್ರವಾಗಿ ಅನುಭವಿಸುವುದು, ಪ್ರತಿಕ್ರಿಯಿಸುವುದು ಸಾಮಾನ್ಯ ಗ್ರಾಮ್ಯ ಜೀವನದ ವಿಶಿಷ್ಟ ಲಕ್ಷಣ. ಆ ತೀವ್ರವಾದ ಅನುಭವ, ಪ್ರತಿಕ್ರಿಯೆಗಳು ಬಂದಷ್ಟೇ ತೀವ್ರವಾಗಿ ಇಳಿದುಹೋಗುತ್ತವೆ. ಅಂತಹ ಅನುಭವಗಳು, ಭಾವನೆಗಳು, ಆಶೆ-ಆಭಿರುಚಿಗಳು, ಸಾಮಾಜಿಕ ಕಟ್ಟು-ಕಟ್ಟಳೆಗಳು, ಜೀವನದ ಶಾಶ್ವತವಾದ ಮೌಲ್ಯಗಳು ನಮ್ಮ ಜನಪದ ಗೀತೆಗಳಲ್ಲಿ ತೆಕ್ಕೆ ತೆಕ್ಕೆಯಾಗಿ ಸಿಗುತ್ತವೆ.

ಗಾದೆಗಳು : ಬೀದಿಯಲ್ಲೇ ಹುಟ್ಟಿದರೂ, ತೋರಿಸುವುದು ರಾಜಮಾರ್ಗ!

"ಶ್ರೀಮಂತರಿಗೆ ಕೊಡುವ ಗೌರವ ಬಡವರಿಗೆ ಯಾರೂ ಎಂದೂ ತೋರಿಸುವುದಿಲ್ಲ, ತೋರಿಸಬೇಕೆಂಬ ಕಾನೂನೇನು ಇಲ್ಲ. ರಾಮೇಗೌಡ್ರು ಬಂದ್ರೆ ಜಮಖಾನೆ ಹಾಸಿ ಉಪಚರಿಸುವ ಜನ, ದಿನಗೂಲಿ ಮಾಡುವ ’ರಾಮ್ಯಾ’ ಬಂದರೆ ತೋರಿಸುವುದಿಲ್ಲ. ಹಣ ಇದ್ರೆ ಎಲ್ರು ನಮ್ಮವ್ರು ತಮ್ಮವ್ರು ಅಂತಾರೆ. ಗುಣ ಒಂದೇ ಇದ್ರೆ ಸಾಲ್ದು, ಸ್ವಲ್ಪ ಹಣ ಸಹ ಬೇಕು ಮರ್ಯಾದೆ ಗಿಟ್ಟಿಸಿಕೊಳ್ಳೋಕೆ. ಹಣ, ಐಶ್ವರ್ಯ ಇದ್ದವನೇ ದೊಡ್ಡವನು, ಇಲ್ಲದಿದ್ರೆ ದೇವರೇ ಗತಿ." ಇಷ್ಟೆಲ್ಲಾ ಉದ್ದುದ್ದಾದ ಅರ್ಥ ಬಿಡಿಬಿಡಿಸಿ ಹೇಳೊ ಬದಲು,

"ದೊಡ್ಡವರು ಬಂದ್ರೆ ಒದರಿ ಹಾಸ್ತೀವಿ
ಬಡವರು ಬಂದ್ರೆ ಬಾಗ್ಲಲ್ ನಿಲ್ಲಿಸ್ತೀವಿ"

ಅಂದ್ರೆ ಎಷ್ಟು ಚನ್ನ? [ಒದರಿ = ಕೂಗಿ]. ಇದೇ ಗಾದೆ(Proverb)ಗಿರುವ ಶಕ್ತಿ.  "ಮಾಡಿದ್ದುಣ್ಣೊ ಮಹರಾಯ", "ಹಾಸಿಗೆ ಇದ್ದಷ್ಟು ಕಾಲು ಚಾಚು", "ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ", "ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ", ಎಂಬ ಅನೇಕ ಗಾದೆಗಳು ಜೀವನಾನುಭವವನ್ನು, ಅತ್ಯಂತ ಸಂಕ್ಷಿಪ್ತವಾಗಿ, ವಿವೇಕಪೂರ್ಣವಾಗಿ, ಪರಿಣಾಮಕಾರಿಯಾಗಿ ಹೇಳಬಲ್ಲವು.  "ಗಾದೆಗಳು ಅನುಭವದ ಸಾಂದ್ರತೆಗೆ, ವಸ್ತುವೈವಿಧ್ಯತೆಗೆ, ಸಂಸ್ಕೃತಿ ಸಂಪನ್ನತೆಗೆ, ವಿಚಾರ ವೈಭವಕ್ಕೆ ಹೆಸರಾದುವು." ಯಾವುದೇ ಜನಾಂಗದ ಆತ್ಮಚರಿತ್ರೆ, ತಕ್ಕಮಟ್ಟಿಗೆ ಬಾಹ್ಯಚರಿತ್ರೆ ಕೂಡ ಆ ಜನಾಂಗದ ಗಾದೆಗಳಲ್ಲಿ ಗೋಚರಿಸುತ್ತದೆ. ಉಪ್ಪು ಊಟಕ್ಕೆ ಹೇಗೆ ಅಗತ್ಯವೋ ಹಾಗೆ ಗಾದೆ ಮಾತಿಗೆ ಅವಶ್ಯಕ. ಗಾದೆಗಳಿಲ್ಲದ ದೇಶವಿಲ್ಲ, ಗಾದೆಗಳಿಂದ ದೂರವಾದ ಭಾಷೆಯಿಲ್ಲ. ಗಾದೆಗಳನ್ನು ಬಳಸದ ಮನುಷ್ಯನಿಲ್ಲ.  ಮುಂದೆ ಓದಿ »

ಬಿದಿರಮ್ಮ ತಾಯಿ ಕೇಳೆ

ಮೈಸೂರು ದಾರಿಯಲ್ಲಿರುವ ಜನಪದ ಲೋಕ ಕಿವಿಗೆ ಬಿದ್ದ ಹೆಸರು ಮಾತ್ರ ಆಗಿತ್ತು. ಭಾನುವಾರ ರಾಮನಗರಕ್ಕೆಂದು ಸ್ನೇಹಿತರೊಂದಿಗೆ ಹೋದಾಗ ಅದರ ಝಲಕ್ ನೋಡಲು ಸಿಕ್ಕಿದ್ದು. ಅಲ್ಲಿಯ ಫೋಟೋಗಳು ಸುಮಾರಿದ್ದವು. ಅದನ್ನೆಲ್ಲ ಮೆಲುಕು ಹಾಕುವ ಮೊದಲು ಕೆಳಗಿನ ಫೋಟೋ ಹಾಗು ಅದರಲ್ಲಿರುವ ಹಾಡು ಎಲ್ಲರೊಂದಿಗೂ ಹಂಚಿಕೊಳ್ಳುವ ಮನಸ್ಸಾಯಿತು.

(ಬಿದಿರನ್ನು ಕುರಿತ ಜನಪದ ಗೀತೆ)

ಪುಣ್ಯಕೋಟಿ ಎಂಬ ಗೋವಿನ ಹಾಡು

ಧರಣಿ ಮಂಡಲ ಮಧ್ಯದೊಳಗೆ
ಮೆರೆಯುವುದೈವತ್ತಾರು ದೇಶದಿ
ಇರುವ ಕಾಳಿಂಗನೆಂಬ ಗೊಲ್ಲನು
ಪರಿಯ ನಾನೆಂತು ಪೇಳ್ವೆನು.

ಗಿರಿಗಳೆಡೆಯಲಿ ಅಡವಿ ನಡುವೆ
ತುರುವ ದೊಡ್ಡಿಯ ಮಾಡಿಕೋಂಡು
ಮೆರೆವ ಕಾಳಿಂಗನೆಂಬ ಗೊಲ್ಲನ
ಸಿರಿಯ ನಾನೆಂತು ಪೇಳ್ವೆನು.

ಗೊಲ್ಲದೊಡ್ಡಿಯೊಳಿರುವ ಹಸುಗಳು
ಎಲ್ಲ ಬೆಟ್ಟದ ಮೇಲೆ ಮೇಯುತ
ಹುಲ್ಲನೊಳ್ಳೆಯ ನೀರ ಕುಡಿಯುತ
ಅಲ್ಲಿ ಮೆರೆದುವರಣ್ಯದಿ.  ಮುಂದೆ ಓದಿ »

ಸಿಡಿಜಾತ್ರೆ -ಒಂದು ಜಾನಪದ ಹಬ್ಬ

ಸಿಡಿ

ಮಾರ್ಚ್ ೨೧ ಕ್ಕೆ ನಮ್ಮೂರಿನಲ್ಲಿ ಸಿಡಿ ಜಾತ್ರೆ. ಹಾಸನ ಜಿಲ್ಲೆಯ ಹೊಳೇನರಸೀಪುರ ದ ಸಮೀಪ ಹರಿಹರಪುರ ನನ್ನ ಊರು. ಸಿಡಿ ಚಿತ್ರವನ್ನು ನೋಡಿದ ಮೇಲೆ ಅದರ ಬಗ್ಗೆ ಒಂದಿಷ್ಟು ತಿಳಿದುಕೊಳ್ಳ ಬೇಕೆಂಬ ಕುತೂಹಲ ಯಾರಿಗಾದರೂ ಇದ್ದೀತು. ಅದಕ್ಕಾಗಿ ಒಂದಿಷ್ಟು ಮಾಹಿತಿ ಇಲ್ಲಿದೆ.
ದಂತಕಥೆ:  ಮುಂದೆ ಓದಿ »

ಕೆಂಡ-ಕೊಂಡ

ಕೆಂಡದ ಮೇಲೆ ನಡಿಗೆ

ಚಿತ್ರವನ್ನು ನೋಡಿದಿರಾ?  ಮುಂದೆ ಓದಿ »

ಜನಪದರ ಸೃಷ್ಟಿ: ಮಕ್ಕಳ ಹುಣ್ಣಿಮೆ.(ತುಳುನಾಡ ಜೋಕುಲೆ ಪರ್ಬ)

ಅನಾದಿಕಾಲದಿಂದಲೂ ಮಾನವನಿಗೆ ಸಾವಿನ ಭಯವು ಪೀಡಿಸುತ್ತಾ ಬಂದಿದೆ. ಸಾವು ಇಲ್ಲದ ಮನೆಯಿಂದ ಸಾಸಿವೆ ತರಲು ಸಾಧ್ಯವಿಲ್ಲವಂತೆ. ಆತ್ಮೀಯರ ಅಗಲುವಿಕೆಯ ಶೂನ್ಯವನ್ನು ತುಂಬಲು ವರ್ಷದಲ್ಲಿ ಹಲವು ಆಚರಣೆಗಳು ಇವೆ. ಗತಿಸಿದ ಹಿರಿಯರ ಸದ್ಗತಿಗಾಗಿ ಎಲ್ಲಾ ಧರ್ಮಗಳು ಒಂದಲ್ಲ ಒಂದು ದಿನಗಳನ್ನು ಆಯ್ಕೆ ಮಾಡಿವೆ.  ಮುಂದೆ ಓದಿ »

ದೀಪಾವಳಿಯಲ್ಲಿ ಉತ್ತರ ಕರ್ನಾಟಕದಲ್ಲಿ ಆಚರಿಸುವ ವಿಶೇಷ ಆಚರಣೆ ನೋಡಿ, ಇದೇ 'ಹಟ್ಟಿ ಹಬ್ಬ!'

ಉತ್ತರ ಕರ್ನಾಟಕದಲ್ಲಿ ದೀಪಾವಳಿ ಹಬ್ಬಕ್ಕೆ 'ಹಟ್ಟಿ ಹಬ್ಬ' ಎಂದೂ ಕರೆಯುತ್ತಾರೆ. ಈ ಸಂದರ್ಭದಲ್ಲಿ 'ಹಟ್ಟೆವ್ವನ ಪೂಜೆ' ಎಂಬ ವಿಶಿಷ್ಟ ಆಚರಣೆ ಇರುತ್ತದೆ. ದೀಪಾವಳಿ ಅಮಾವಾಸ್ಯೆಯ ಮರುದಿನ ಪಾಡ್ಯದಂದು ಜರಗುತ್ತದೆ ಈ ಹಟ್ಟಿ ಹಬ್ಬ.  ಮುಂದೆ ಓದಿ »

ದೀಪಾವಳಿಯಲ್ಲಿ ಮರ ಹಾಕುವುದು: ತುಳುನಾಡ ವಿಶೇಷ ಆಚರಣೆ

ದೀಪಾವಳಿ ಹಬ್ವವನ್ನು ಮಾತ್ರ ಜನ ಹಬ್ಬ (ಪರ್ಬ)ಎಂದು ಕರೆಯುವುದು. ಅದರಲ್ಲಿ ಬಲಿ ಪಾಡ್ಯಮಿಯು ಜನಪದರ ಪ್ರಮುಖ ಆಚರಣೆ. ಅಮಾವಾಸ್ಯೆ ಮರುದಿನ ಪಾಡ್ಯದಂದು ಮನೆಯ ಮುಖ್ಯಸ್ಥನು ಪಕ್ಕದ ಕಾಡಿಗೆ ಹೋಗಿ ಹಾಲೆ ಮರದ ಕವಲಿರುವ ಕಂಬವನ್ನು ಕಡಿದು ತಂದು ನೆಟ್ಟು ಅಲಂಕರಿಸುವುದನ್ನೆ ಮರ ಹಾಕುವುದು ಎನ್ನುತ್ತಾರೆ. ಇದು ಹೆಚ್ಚಾಗಿ ಕೃಷಿಪ್ರಧಾನ ಜನಾಂಗದಲ್ಲಿ ಮಾತ್ರ ಕಂಡು ಬರುತ್ತದೆ. ಸಂಜೆಯಾಗುತ್ತಲೆ ಕೆಲವರು ಒಂದೇ ಮರ ಹಾಕಿದರೆ ಇನ್ನು ಕೆಲವರು ಮೂರು ಕವಲಿರುವ ಮರ ಹಾಕುತ್ತಾರೆ. ಅದರಲ್ಲಿ ಒಂದಾದರೂ ಹಾಲೆಮರ (ಸಪ್ತಪರ್ಣ)ಇರಬೇಕು. ಉಳಿದದ್ದು ಶೇರೆಮರವಾದರೂ ನಡೆಯುತ್ತದೆ. ತುಳಸಿ ಕಟ್ಟೆಯ ಬಳಿ ಮರ ನೆಟ್ಟು ಅದಕ್ಕೆ ಬಾಳೆ ದಿಂದಿನ ಅಂಕಣ ಹಾಕುತ್ತಾರೆ. ಹಿಂದಿನ ದಿನಗಳಲ್ಲಿ ಮರ ಕಡಿದರೆ ಆಗುವುದಿಲ್ಲ. ಅದೇ ದಿವಸ ಕಡಿದು ತರಬೇಕು. ಇದು ಹೆಚ್ಚಾಗಿ ಪುತ್ತೂರು, ಬೆಳ್ತಂಗಡಿ ತಾಲೂಕಿನ ಗ್ರಾಮಗಳಲ್ಲಿ ದೇವಸ್ಥಾನದಲ್ಲಿ ಅಮಾವಾಸ್ಯೆಯಂದು ಮರ ಹಾಕಿದರೆ ಊರಿನಲ್ಲಿ ಮರುದಿನ ಹಾಕುತ್ತಾರೆ. ಈ ಆಚರಣೆಯ ಬಳಿಕವೇ ಭೂತಾರಾಧನೆ ಶುರು. ಪತ್ತನಾಜೆಯಂದು ಭೂತಸ್ಥಾನಗಳಲ್ಲಿ ಹಾಕಿದ ಬಾಗಿಲು ದೀಪಾವಳಿ ಬಳಿಕವೇ ತೆರೆಯುತ್ತಾರೆ. ಮರ ಹಾಕಲು ಶುದ್ಧಾಚಾರ ಅಗತ್ಯ. ಸೂತಕ ಬಂದರೆ ಹಬ್ಬವನ್ನು ಮುಂದಿನ ಹುಣ್ಣಿಮೆಗೆ ಆಚರಿಸಲಾಗುವುದು.  ಮುಂದೆ ಓದಿ »

Syndicate content