ಎಲ್ಲ ಬಲ್ಲವರಿಲ್ಲ | ಬಲ್ಲವರು ಬಹಳಿಲ್ಲ
ಬಲ್ಲಿದರು ಇದ್ದು ಬಲವಿಲ್ಲ ಸಾಹಿತ್ಯ |
ವೆಲ್ಲವರಿಗಿಲ್ಲ ಸರ್ವಜ್ಞ |

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಕಥಾ ಮಾಲಿಕೆ

ಸಣ್ಣ ಕಥೆ



ಬೂಮರಾಂಗ್-೧  

ತನ್ನೆರಡೂ ಕಾಲುಗಳನ್ನು ಮೇಜಿನಮೇಲಿಂದ ಕೆಳಗೆ ಬಿಸುಟ ಬೀರಪ್ಪ, ಕಾರಣವಿಲ್ಲದೇ ಎದ್ದು ಕುಳಿತ .ಮುಂಗೈಗೆ ಕಟ್ಟಿದ ಕೈಗಡಿಯಾರವನ್ನೊಮ್ಮೆ ನೋಡಿಕೊಂಡ, ಮುಂದಿನ ರೈಲು  ಬರಲು ಇನ್ನೂ ಎರಡು ಘಂಟೆಯಿದ್ದು, ಅಲ್ಲಿಯವರೆಗೆ ಮಾಡಲು ಕೆಲಸವಿಲ್ಲವಲ್ಲ ಎಂದುಕೊಳ್ಳುತ್ತಾ ತನ್ನ ರೂಮಿನಿಂದ ಹೊರಬಂದ. ಕಾಕನ ಹೋಟೆಲ್ಲಿನಲ್ಲಿ ಒಂದು ಚಾ ಕುಡಿದು ಟೈಮ್ ಪಾಸ್ ಮಾಡಲೆಂದು.ಇವತ್ತು ತನಗೇನೂ ಲಾಭವೇ ಆಗಿರಲಿಲ್ಲ, ನಿನ್ನೆ ಮೊನ್ನೆಯ ಮೇಲಿನ ಕಮಾಯಿ ತುಂಬಾನೇ ಜಾಸ್ತಿಯಿತ್ತು. ಅದೇಖುಷಿಯಲ್ಲಿದ್ದ ಬೀರಪ್ಪ ಇವತ್ತು ಅಂತಹದ್ದೇನೂ ಆಗಿರಲಿಲ್ಲ,ಕಣ್ಣ ಮುಂದೆ ಇಬ್ಬರು ಸಣಕಲರು ನಿಂತು ಕೊಂಡಿದ್ದರು.ಏನೂ ಅಂತಹಾ ಒಳ್ಳೆಯ ನಿದ್ದೆಯಿ ಂದ ಎಬ್ಬಿಸಿದರಲ್ಲಾ ಎನ್ನುವ ಬೇಸರ ಬೀರಪ್ಪನ ಕಂಗಳಲ್ಲಿ. ಆದರೂ ತೋರ್ಪಡಿಸದೇ "ಯಾಕ್ರೋ ಏನಾಯ್ತು!! ಒಂದೇ ಸಮ ಬಡ್ಕೊಳ್ತೀರಲ್ಲಾ, ಯಾರಾದರೂ ಸತ್ತರೇನೂ? ಎಂದ."ಸಾರ್, ಇಲ್ನೋಡೀ ಸಾರ್ ನಮ್ಮ ಹ್ಯತ್ತಿರ ಒಳ್ಳೆಯ ಅಕ್ಕಿ ಇದೆ ಸಾರ್ ಬೇಕಾ ನಿಮಗೆ?" ಕೇಳಿದ ಅವರಲ್ಲೊಬ್ಬಾತ.
 ಮುಂದೆ ಓದಿ »

ಮಿನ್ನಿ ಕಾಲಂ: ಬೇತಾಳ ಕಥಾ ೨ - ವಿಕ್ರಮನ ಉತ್ತರಗಳು!

ಬ್ರೌಸ್ ಮಾಡಿ ಮಾಡಿ ದಣಿದ ವಿಕ್ರಮಾದಿತ್ಯನು, ಇದೆಂಥ ವಿಶಾಲ ಜಗತ್ತಪ್ಪ ಗುರುವೇ! ಎಷ್ಟೊಂದು ಇನ್ಪುಟ್ ಗಳು, ಎಷ್ಟು ಇನ್ಫೋಗಳು. ಒಂದೊಂದು ಪುಟಗೋಸಿ ಶಬ್ದಗಳಿಗೆ ಎಷ್ಟೊಂದು ಸರ್ಚ್ ರಿಸಲ್ಟ್ ಗಳು. ಒಂದೊಂದು ಡಿಬೇಟ್ ಗೆ ಎಷ್ಟೊಂದು ನಮೂನೆ ವ್ಯೂ ಪಾಯಿಂಟ್ಗಳು. ಅಲ್ಲ, ಜಗತ್ತೆಲ್ಲ ಬ್ಲಾಕ್ ಅಂಡ್ ವೈಟ್ ಆಗಿದ್ದಾಗಲೇ ಚೆನ್ನಾಗಿತ್ತಪ್ಪ! ಇದು ಸರಿ, ಇದು ತಪ್ಪು. ಅಷ್ಟೇ. ಝೀರೋ ಅಥವಾ ಒಂದು. ಮಧ್ಯೆ ಫಜಿ ಲಾಜಿಕ್ ನ ಕೊಂಪ್ಲಿಕೇಶನ್ ನ ಅವಾಂತರವಿರಲಿಲ್ಲ ಎಂದುಕೊಂಡನು.
 ಮುಂದೆ ಓದಿ »

ಹೀಗೊಂದು ಪತ್ರ!

ವಿವಿಧ ವೃತ್ತಿಗಳ, ಮನೋವೃತ್ತಿಗಳ ಜನರ ಸ್ಥಾಯಿ ಹಾಗೂ ಸಂಚಾರಿ ಭಾವನೆಗಳನ್ನು ಕಲ್ಪಿಸಿಕೊಳ್ಳುವ, ಅವನ್ನು ಅಕ್ಷರಕ್ಕಿಳಿಸುವ ಪ್ರಯತ್ನವಾಗಿ ನಾವು ನಡೆಸುತ್ತಿದ್ದ ಸಣ್ಣ ಪತ್ರಿಕೆ `ಕಲರವ'ದಲ್ಲಿ `ಹೀಗೆಂದು ಪತ್ರ' ಎಂಬ ಅಂಕಣವನ್ನು ಬರೆಯುತ್ತಿದ್ದೆ. ರಾಜಕಾರಣಿ, ಪೊಲೀಸ್ ಪೇದೆ, ಹೆಣ್ಣು ಭ್ರೂಣ... ಹೀಗೆ ಕಲ್ಪನೆಗೆ ನಿಲುಕಿದ ವ್ಯಕ್ತಿಗಳು, ವಸ್ತುಗಳು, ಶಕ್ತಿಗಳು ತಮಗೆ ಹೇಳಲಿರುವುದನ್ನು ಪತ್ರ ಮುಖೇನ ತಿಳಿಸುವ ಶೈಲಿಯಲ್ಲಿರುತ್ತಿತ್ತು ಆ ಅಂಕಣ.

ಹಿಂದಿನ  ಸಂಚಿಕೆಗಳ ಮೇಲೆ ಕಣ್ಣಾಡಿಸುವಾಗ  ಗಮನ ಸೆಳೆದವು. ಸಂಪದದಲ್ಲಿ ಅವನ್ನು ಪ್ರಕಟಿಸಬೇಕು ಎಂಬ ಮನಸ್ಸಾಯಿತು. ಮೊದಲ ಪತ್ರ ರಾಜಕಾರಣಿಯೊಬ್ಬ ಬರೆದದ್ದು.


ನಾವಾಗಲೇ ಕೆಸರಲ್ಲಿ ಹೂತು ಹೋಗಿದ್ದೀವಿ...

 ಮುಂದೆ ಓದಿ »

ಮಿನ್ನಿ ಕಾಲಂ: ಬೇತಾಳ ಕಥಾ ೨

"ನಿನ್ನ ರಾಜ್ಯಾಡಳಿತದಲ್ಲಿ ನೀನು ಗೂಗಲ್ ನ್ನು ಒಂದಲ್ಲಾ ಒಂದು ರೀತಿ ಉಪಯೋಗಿಸಿಯೇ ಇರುತ್ತೀಯ! ಅದಕ್ಕೆ ಸಂಬಂಧಿಸಿದ ಒಂದು ಕಥೆ ಹೇಳುವವನಿದ್ದೇನೆ ಇಂದು. ಇಂಟರೆಸ್ಟಿಂಗ್ ಇದೆ ಮಾರಾಯಾ, ಬೇಗಾ ಬಾ. ಎಲ್ಲಿ ಹೋದೆಯಪ್ಪಾ, ಎಲ್ಲಿ ಹಾಳಾಗಿ ಹೋದೆಯೋ ಮಹಾರಾಜ, ಎಲ್ಲೂ ಕಾಣಿಸುತ್ತಲೇ ಇಲ್ಲವಲ್ಲಪ್ಪಾ ?" ಎಂದು ಬೇತಾಳವು ಒಂದು ಕೂಗು ಹಾಕಿತು.    ಮುಂದೆ ಓದಿ »

ಮಿನ್ನಿ ಕಾಲಂ: ಬೇತಾಳ ಕಥಾ ೧- ವಿಕ್ರಮನ ಉತ್ತರಗಳು!

"ಬೇತಾಳವೇ! ಸುಮ್ಮನೆ ನಿದ್ದೆ ಬರುವಂಥ ಕಥೆಯೊಂದನ್ನು ಹೇಳಿ, ಪ್ರಶ್ನೆಗಳನ್ನಾದರೂ ಮೀನಿಂಗ್ ಫುಲ್ ಆಗಿ ಕೇಳುವೆಯೇನೋ ಎಂದು ಕೊಂಡೆ, ಆದರೆ, ನೀನೋ ನಿನ್ನ ಬೇತಾಳ ತಲೆಯೋ, ಬೇತಾಳವೇ ಮೆಚ್ಚಬೇಕು!" ಎಂದು ಉದ್ಘರಿಸುತ್ತ ರಾಜಾ ವಿಕ್ರಮಾದಿತ್ಯನು, ಒಂದು ಕ್ಷಣ ಸುಮ್ಮನಾದನು.

"ಕೇಳಿಲ್ಲಿ ಬೇತಾಳವೇ, ನನಗೆ ಒಂದು ಸಂದೇಹ ಬಂದಿದೆ. ಈಗ ಹೇಗಿದ್ದರೂ ನಾನು ನನ್ನ ಮೌನ ಮುರಿದಾಗಿದೆ. ನಿನ್ನ ಪ್ರಶ್ನೆಗಳಿಗೆ ನನಗೆ ಸರಿ ಕಂಡ ಉತ್ತರಗಳನ್ನು ನಾನು ಹೇಳುವೆ, ಅದಕ್ಕಿಂತ ಮೊದಲು ನನಗೆ ಬಂದ ಸಂದೇಹಗಳನ್ನೂ ನಾನು ಕೇಳುವೆ, ಅದಕ್ಕೆಉತ್ತರವು ನಿನಗೆ ತಿಳಿದೂ ನೀನು ಹೇಳದೆ ಇದ್ದರೆ ನಿನ್ನ ತಲೆಯೂ ಎರಡು ಹೋಳಾದೀತು, ಹುಷಾರ್! " ಎಂದು ಹೇಳುತ್ತಾನೆ. ಅಲ್ಲ, ಸಾಯಲಿಕ್ಕೆ ತಲೆ ಎರಡು ಹೋಳು ಆದರೇನು, ಅಥವಾ ಸಾವಿರ ಆದರೇನು, ಪಾಪ ಬೇತಾಳಕ್ಕೆ ಬಯಲೋಜಿ ವೀಕ್ ಎಂದುಕೊಳ್ಳುತ್ತ ಸುಮ್ಮನಿರುತ್ತಾನೆ. ಅಲ್ಲದೆ, ಇಷ್ಟಾಗಿ ಇದು ಬೇತಾಳ, ಇದಕ್ಕೆ ಸಾಯುವ ಭಯವು ಇರಲು ಸಾಧ್ಯವೇ ಎನ್ನುವ ಫಿಲಾಸೋಫಿಕಲ್ ಥಿಂಕಿಂಗ್ ಮೋಡ್ ಗೆ ಒಂದು ಕ್ಷಣ ಬೀಳುತ್ತಾನೆ.

ಮಿನ್ನಿ ಕಾಲಂ: ಬೇತಾಳ ಕಥಾ ೧

ಎಂದಿನಂತೆ ಬೇತಾಳವನ್ನು ಹೆಗಲಿಗೆ ಏರಿಸಿಕೊಂಡ ವಿಕ್ರಮನು ದಾರಿಯನ್ನು ಸವೆಸುತ್ತಿರಲಾಗಿ, ಬೇತಾಳವು,
" ಮಹಾರಾಜಾ, ದಾರಿ ಖರ್ಚಿಗಾಗಿ ಬಟಾಣಿಯನ್ನಗಲಿ, ಹುರಿದ ಗೋಡಂಬಿಯನ್ನಾಗಲಿ ತಂದಿದ್ದೀಯಾ?" ಎಂದು ಕೇಳಿತು.

ಮೌನ ಮುರಿಯಲು ಈ ಬೇತಾಳವು ಪಡುತ್ತಿರುವ ಶ್ರಮವನ್ನು ಕಂಡು ನಕ್ಕ ರಾಜನು, ಇಲ್ಲ ಎಂದು ನಕಾರವಾಗಿ ತಲೆಯಲ್ಲಾಡಿಸುತ್ತ, ಮನಸ್ಸಿನಲ್ಲಿಯೇ ಛೆ, ಹುರಿದ ಗೋಡಂಬಿ ತರಬಹುದಿತ್ತಲ್ಲವೇ ಎಂದು ನೆನೆದು ಬಾಯಲ್ಲಿ ಜೊಲ್ಲು ಸುರಿಸ ಹತ್ತಿದನು. ರಾಜನ ಬಾಯಲ್ಲಿ ಸುರಿಯುತ್ತಿರುವ ಜೊಲ್ಲು ನೋಡಿದ ಬೇತಾಳವು, ಇಡ್ಲಿ ಸಂಬಾರನ್ನೂ, ಮಜ್ಜಿಗೆ ಹುಳಿ ಅಂಬೋಡೆ ಯನ್ನೂ, ವಿದ್ಯಾರ್ಥಿ ಭವನದ ಮಸಾಲ ದೋಸೆಯನ್ನೂ, ಬ್ರಾಹ್ಮಣರ ಕಾಫಿ ಬಾರಿನ ಕಾಫಿಯನ್ನೂ ಒಂದರ ನಂತರ ಒಂದರಂತೆ ಹೇಳುತ್ತಾ ರುಚಿಯನ್ನು ವರ್ಣಿಸುತ್ತ, ರಾಜನ ಬಾಯಲ್ಲಿ ಸುರಿಯುತ್ತಿರುವ ಜೊಲ್ಲಿನ ರೇಟ್ ಆಫ್ ಇನ್ಕ್ರೀಸ್ ನ್ನು ಲೆಕ್ಕ ಹಾಕುತ್ತಿತ್ತು. ಇದನ್ನು ಗಮನಿಸಿದ ರಾಜನು, ಒಹ್, ನಾನು ಇಷ್ಟೊಂದು ಜೊಲ್ಲು ಸುರಿಸಿದರೆ ಬೇಗ ಬಾಯಿ ಒಣಗಿ ಹೋಗುತ್ತದೆ ಎಂದರಿತು, ಬೇಗ ಬೇಗ ಹೆಜ್ಜೆ ಹಾಕಿದನು.  ಮುಂದೆ ಓದಿ »

ಗೂಳೂರಿನ ಮುಸ್ಸಂಜೆಯ ಕಥಾ ಪ್ರಸಂಗ...೧

(ಇದೊಂದು ನೈಜ ಘಟನೆಯನ್ನಾಧರಿಸಿದ ಕಥೆ. ಸುಮಾರು ಅರವತ್ತೈದು ವರ್ಷಗಳ ಹಿಂದೆ ನನ್ನ ತಂದೆಯ ಹುಟ್ಟೂರಾದ ಗೂಳೂರೆಂಬ ಒಂದು ಪುಟ್ಟ ಹಳ್ಳಿಯಲ್ಲಿ ನಡೆದಿತ್ತಂತೆ. ತಮ್ಮ ಜೀವನದ ಸ್ವಾರಸ್ಯ ಅನುಭವಗಳನ್ನು ಅತಿ ರೋಚಕವಾಗಿಯೇ ನಮ್ಮಲ್ಲಿ ಹಂಚಿಕೊಳ್ಳುತ್ತಿದ್ದರು ನಮ್ಮ ತಂದೆ. ಅವರ ವಿಚಿತ್ರ-ವಿಶಿಷ್ಟ ಅನುಭವಗಳನ್ನು ಕೇಳಿ ಪುಳಕಿತನಾಗಿದ್ದು ಅದೆಷ್ಟು ಬಾರಿಯೋ.! ನನ್ನ ಬಾಲ್ಯದಲ್ಲಿ ನನಗೆ ತುಂಬಾ ಪ್ರಭಾವ ಬೀರಿದ್ದ ಈ ಘಟನೆಯನ್ನು ಕಥೆಯ ರೂಪದಲ್ಲಿ ತರಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಅಷ್ಟೇ....)  ಮುಂದೆ ಓದಿ »

ಅಲ್ಲಿ ಪರ್ವತ ಪವಡಿಸಿತು - ೧

ಬಿಸಿಲು ಬೆಚ್ಚಗೆ ಮೈಮೇಲೆ ಬೀಳುತ್ತಿತ್ತು. ಆಕಾಶದಲ್ಲಿ ಸಾಲು ಸಾಲಾಗಿ ಮೋಡಗಳು. ಗಾಳಿ ಹೌದೋ ಅಲ್ಲವೋ ಅನ್ನೋ ಹಾಗೆ ಬೀಸ್ತಾ ಇತ್ತು. ಅಚ್ಯುತ ಆಗತಾನೇ ಊರಿಗೆ ಕಾಲಿಡ್ತಾ ಇದ್ದ. ತುಂಬಾ ಊರು ತಿರುಗಿದ್ದನಾದರೂ ಈ ಊರಿನ ಬೆಳಗು ಅವನಿಗೆ ಹಿಡಿಸಿತು.

ಊರು ಶುರುವಾಗ್ತಾ ಇದ್ದ ಹಾಗೇ ಅರಳಿಮರ ಇತ್ತು. ಕಟ್ಟೆ ಕೂಡ ಇತ್ತು. ಅಲೆಮಾರಿಗೆ ಯಾವ ಹಂಗು, ಅಲ್ಲೇ ಕುಳಿತ. ಹಾಗೇ ಮುಂಜಾನೆಯ ಸೊಬಗನ್ನು ಸವಿಯಲು ಶುರು ಮಾಡಿದ.

ಕುಳಿತಲ್ಲಿಂದಲೇ ತಲೆ ಮೇಲಕ್ಕೆತ್ತಿದ. ಎದುರಿಗೇ ಅದೆಷ್ಟೂ ಎತ್ತರಕ್ಕೆ ಪರ್ವತವೊಂದು ಹಬ್ಬಿತ್ತು. ದಟ್ಟವಾಗಿ ಬೆಳೆದ ಮರಗಳು. ಹೆಸರೇ ಗೊತ್ತಿಲ್ಲದ ಪಕ್ಷಿಗಳು. ಮರದಿಂದ ಮರಕ್ಕೆ ಹಾರಿ ಕೂತ್ಕೊಳ್ತಿದ್ದ ಬೆಳ್ಳಕ್ಕಿಗಳು. ತುಂಬಾ ಸೊಗಸಾಗಿದೆ ಅಂತ ಯೋಚಿಸುವಷ್ಟರಲ್ಲೇ ಇದ್ದಕ್ಕಿದ್ದಂತೆ ಮಂಗಗಳು ಅಸಾಧ್ಯ ದನಿಯಲ್ಲಿ ಕೂಗತೊಡಗಿದವು.
 ಮುಂದೆ ಓದಿ »

Syndicate content