ಜ್ಞಾನವಾಹಿನಿ
ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
May 9, 2008 - 4:38pm — ಗಣೇಶ ಸಿನೆಮಾ ನಟನಟಿಯರು ಏನೇ ಪ್ರಚಾರ ಮಾಡಲಿ,
ಪೆಪ್ಸಿ, ಕೊಕಾಕೋಲ, ಗೊರಟಿಲ್ಲದ ಮಾವಿನ ಜ್ಯೂಸ್ ಎಲ್ಲಾ
ಪುನರ್ಪುಳಿ (ಕೋಕಂ) ಜ್ಯೂಸ್ನ ಎದುರಿಗೆ ಬಚ್ಚಾಗಳು.
ಎಂಥಾ ಕಲರ್-ಕೆಂಪು ಕೆಂಪು.. ನ್ಯಾಚುರಲ್ ಬಣ್ಣ.
ಹುಳಿ-ಸಿಹಿ ರುಚಿ, ಹೊಟ್ಟೆ,ತಲೆ,ಮೈಗೆ ತಂಪು ತಂಪು.
ಇದರಲ್ಲಿ ಉತ್ಪ್ರೇಕ್ಷೆ ಏನೂ ಇಲ್ಲ.
೨೦ ರಿಂದ ೩೦ ಅಡಿ ಎತ್ತರ ಬೆಳೆಯುವ ಕೋಕಂ ಮರ ದ.ಭಾರತದ ಕೊಂಕಣ,ಗೋವಾ ಭಾಗದಲ್ಲಿ ಹೆಚ್ಚಾಗಿ ಕಂಡುಬರುವುದು.
ಸಿಪ್ಪೆ ಕೆಂಪು ಬಣ್ಣದಿದ್ದು ಒಳಗಿನ ಹಣ್ಣು ಸಿಹಿ-ಹುಳಿ ರುಚಿ.
ಬೀಜ ೫-೭ ಇರುವುದು. ಮುಂದೆ ಓದಿ »

- 12 ಪ್ರತಿಕ್ರಿಯೆಗಳು
- 438 hits
- Email this page



ಚಂದಮಾಮನಿಗೆ ಅರವತ್ತು......
May 9, 2008 - 3:11pm — Nagendra.trasiಬಹುತೇಕ ಮಂದಿ ಚಂದಮಾಮದಲ್ಲಿನ ವಿಕ್ರಮ ಮತ್ತು ಬೇತಾಳ, ನೀತಿ ಕಥೆಗಳನ್ನು ಓದಿಯೇ ಆಡುಗೂಲಜ್ಜಿಯ ಕಥೆಯೆಡೆಗೊಂದು ಮೋಹ ಬೆಳೆಸಿಕೊಂಡಿರುವುದು. ಆ ಕಾಲಕ್ಕೆ ನಮಗೆ ಚಂದಮಾಮ, ಬಾಲಮಿತ್ರ ನಮ್ಮ ಬಾಲ್ಯದ ಸಂಗಾತಿಯಾಗಿದ್ದವು. ನಾವೆಲ್ಲ ಓದುತ್ತಾ, ಓದುತ್ತಾ ಬೆಳೆದ ಚಂದಮಾಮನಿಗೆ ಈಗ 60ರ ಸಂಭ್ರಮ.. ಅಬ್ಬಾ ಚಂದಮಾಮಕ್ಕೆ ಅರವತ್ತು ವರ್ಷಗಳು ತುಂಬಿತೆಂದರೆ, ನಮ್ಮ ಕಣ್ಣುಗಳೇ ಇಷ್ಟಗಲ ತೆರೆದುಕೊಳ್ಳುತ್ತದೆ.
ಇತ್ತೀಚೆಗಷ್ಟೇ ಮುಂಬೈಯಲ್ಲಿ ಚಂದಮಾಮದ 60ನೇ (61ವರ್ಷ) ವರ್ಷದ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿದ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡ, ನಾನು ಚಿಕ್ಕವನಿದ್ದಾಗ ಪಾಶ್ಚಾತ್ಯ ಕಾಮಿಕ್ಸ್ನೆಡೆಗೆ ಮೋಹಿತನಾಗಿದ್ದೆ. ಆದರೆ ನನ್ನ ಪೋಷಕರು ನನಗೆ ಚಂದಮಾಮದ ರುಚಿ ಹತ್ತಿಸಿದ ಮೇಲೆ ನನಗೆ ಬಾಲ್ಯದಲ್ಲಿ ಅದೇ ನನ್ನ ಸಂಗಾತಿಯಾಗಿತ್ತು. ಆದರೆ ಈಗ ನನಗೆ ಸಮಯದ ಒತ್ತಡ ಇರುವುದರಿಂದ ಓದಲಾಗುತ್ತಿಲ್ಲ, ಆದರೂ ಚಂದಮಾಮವನ್ನ ನನ್ನ ಮೊಮ್ಮಕ್ಕಳಿಗೆ ಪರಿಚಯಿಸುತ್ತೇನೆ ಎಂದು ಹೆಮ್ಮೆಯಿಂದ ಹೇಳಿದ್ದರು. ಮುಂದೆ ಓದಿ »

- ೧ ಪ್ರತಿಕ್ರಿಯೆ
- 237 hits
- Email this page



ಅನನ್ಯ ಅಲ್ಲಮ ೭
April 24, 2008 - 9:40pm — csomsekraiahಅಲ್ಲಮನ ಬಾಲ್ಯ ಕಾಲದ ಸಾಮಾಜಿಕ ಜೀವನ ಅಸ್ಥಿರತೆಯ ಬೀಡು . ಊರೂರುಗಳಲ್ಲಿ ಪಾಳೆಯಪಟ್ಟುಗಳು ತಲೆಯೆತ್ತಿ ಅವರೆಲ್ಲಾ ಸ್ಥಳೀಯ ರಾಜರುಗಳೇ ಆಗಿದ್ದರು . ಪುರಾಣಗಳಲ್ಲಿ ಯಾವ ಊರುಗಳನ್ನು ತೆಗೆದುಕೊಂಡರೂ ಅಲ್ಲಿಗೊಬ್ಬ ರಾಜ ! ಮುಂದೆ ಓದಿ »

- 4 ಪ್ರತಿಕ್ರಿಯೆಗಳು
- 260 hits
- Email this page



ಅಮ್ಮಜಿಖಷೆಸ್ಸ ಖನಮ ಒಜಿ
April 24, 2008 - 6:50pm — rameshbalaganchiಇದೊಂದು ಸೀಕ್ರೆಟ್ ಭಾಷೆ
ನಮ್ಮ ಮತ್ತು ನಮ್ಮ ಸಂಬಂಧಿಕ್ರ ಮನೆಗ್ಳಲ್ಲಿ ಸಮಯ-ಸಂದರ್ಭಾನುಸಾರ ಭಾಳ ಬಳ್ಕೆ ಆಗತ್ತೆ. ಇದಕ್ಕೆ ಮಿತಾಕ್ಷರ ಅಂತ ಯಾರು ಹೆಸರು ಕೊಟ್ರೋ ತಿಳೀದು. ಇದು ಅಕ್ಷರಗ್ಳನ್ನ ಕಡ್ಮೆ ಮಾಡಲ್ಲ. ವಿಜ್ಞಾನೇಶ್ವರನ 'ಮಿತಾಕ್ಷರ ಸಂಹಿತೆಗೂ' ಇದಕ್ಕೂ 'ಇಮಾಂ ಸಾಬಿ-ಗೋಕುಲಾಷ್ಟಮಿ' ಸಂಬಂಧ. ಮುಂದೆ ಓದಿ »

- 26 ಪ್ರತಿಕ್ರಿಯೆಗಳು
- 489 hits
- Email this page



ಯಾಕೆ 'ನೋ' ಅಂದ್ರಿ ಡಾಕ್ಟ್ರೆ?
April 23, 2008 - 11:06pm — ಗಣೇಶ೨೬ ಮಾರ್ಚ್೨೦೦೮ರ ಪತ್ರಿಕಾ ವರದಿ-
ಒಂದು ಚೂರು ರಾಗಿರೊಟ್ಟಿ, ಮತ್ತೊಂದು ಚೂರು ಜೇನುತುಪ್ಪದ ರುಚಿ ನೋಡಿದ ರಾಹುಲ್ ಬೆಟ್ಟದ ಗೆಣಸಿಗೆ ಕೈ ಹಾಕಿದರಾದರೂ ಪಕ್ಕದಲ್ಲೇ ಇದ್ದ ಅವರ ವೈದ್ಯರು ‘ನೋ’ ಎಂದರು.
‘ನೋ’ ಅಂದ್ರು ಯಾಕೆ? ಮುಂದೆ ಓದಿ »

- 2 ಪ್ರತಿಕ್ರಿಯೆಗಳು
- 303 hits
- Email this page




RSS: