ವನ್ಯಮೃಗಗಳ ನಡುವೆ ಗೋವು ಬಂದೇನಿಹುದು? ।
ಪಣ್ಯವೀಧಿಯಲಿ ತಾತ್ವಿಕನಿಗೇನಿಹದು? ।।
ಅನ್ಯಾಯದುನ್ಮತ್ತ ಕೋಲಾಹಲದ ಲೋಕ ।
ಪುಣ್ಯವನು ಚಿಂತಿಪುದೆ? -- ಮಂಕುತಿಮ್ಮ ।।

— ಡಿ.ವಿ.ಜಿ.

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಜ್ಞಾನವಾಹಿನಿ

ಮಲೇರಿಯಾ ಸೊಳ್ಳೆಗಳಿಗೆ ಬಿಯರ್ 'ಸೇವಕರು' ಇಷ್ಟವಂತೆ!

ಅಪರೂಪಕ್ಕೆ ಬೆಳಿಗ್ಗೆ ಬೇಗ ಎದ್ದು, ಅಂತರ್ಜಾಲದಲ್ಲಿ ಏನನ್ನೋ ಓದಬೇಕೆಂದು ಹುಡುಕುತ್ತಿದ್ದಾಗ, ಅದು ಹೇಗೋ ಬಿಯರ್ ಸೇವನೆ ಮತ್ತು ಮಲೇರಿಯಾ ಸೊಳ್ಳೆಗಳ ಕುರಿತು  ಸಂಶೋಧನಾ ಲೇಖನ ಕಣ್ಣಿಗೆ ಬಿತ್ತು.

(ಅಂದ ಹಾಗೇ, 'ಕಣ್ಣಿಗೆ ಬಿತ್ತು' ಎನ್ನುತ್ತಲೇ, ಜೋಕೊಂದು ನೆನಪಾಯಿತು. ಹೇಳಿಬಿಡುತ್ತೇನೆ. 

ಒಬ್ಬ: ನಿನ್ನೆ, ನನ್ನ ಹೆಂಡತಿ ಕಣ್ಣಿಗೆ ಕಸ ಬಿದ್ದಿತ್ತು. ವೈದ್ಯರ ಶುಲ್ಕಕ್ಕೆ ನೂರು ರೂಪಾಯಿ ಖರ್ಚಾಯಿತು.

ಇನ್ನೊಬ್ಬ: ಅದಾದರೂ ಪರವಾಗಿಲ್ಲ. ನಿನ್ನೆ, ನನ್ನ ಹೆಂಡತಿ ಕಣ್ಣಿಗೆ ಒಂದು ರೇಷ್ಮೆ ಸೀರೆ ಬಿತ್ತು. ಖರೀದಿಸಲು ನಾಲ್ಕೂವರೆ ಸಾವಿರ ರೂಪಾಯಿ ಖರ್ಚಾಯಿತು.)  ಮುಂದೆ ಓದಿ »

ಮೂರ್ ಖ

ಮೂರ್ಖಂಗೆ ಬುದ್ಧಿಯನು ನೂರ್ಕಾಲ ಪೇಳಿದರೆ
ಗೋರ್ಕಲ್ಲಮೇಲೆ ಮಳೆಗರೆದರಾ ಕಲ್ಲು
ನೀರ್ಕೊಳ್ಳಲಹುದೆ ಸರ್ವಜ್ಞ

*೦*

ಮೂರ್ಖಾ ನ ದ್ರಷ್ಟವ್ಯಾ ದ್ರಷ್ಟವ್ಯಾಶ್ಚೇ-
ನ್ನತೈಸ್ತು ಸಹ ತಿಷ್ಠೇತ್
ಯದಿ ತಿಷ್ಠೇನ್ನ ಕಥಯೇದ್ಯದಿ ಕಥಯೇ-
ನ್ಮೂರ್ಖವತ್ಕಥಯೇತ್
(ಸುಭಾಷಿತಸುಧಾನಿಧಿ)

ಮೂರ್ಖರನ್ನು ಕಾಣಲು ಹೋಗಬಾರದು; ಕಂಡರೂ ಅವರೊಡನೆ ಇರಬಾರದು; ಹಾಗೊಮ್ಮೆ ಇದ್ದರೂ ಅವರೊಡನೆ ಮಾತಾಡಬಾರದು; ಹಾಗೇನಾದರೂ ಮಾತಾಡಿದರೆ ಮೂರ್ಖನಂತೆಯೇ ಮಾತಾಡಬೇಕು.

-೦-

ಮೂರ್ಖರಿಗೆ ಹೇಳುವವ ಶತಮೂರ್ಖ ತಾನು
ಬುದ್ಧಿವಂತರಿಗೆ ತಾ ಹೇಳಬೇಕೇನು?
ಖಗದ ಉಡ್ಡಾಣ ಬಲ
ಖದ್ಯೋತನಾ ಬೆಳಕು
ಖನಿಜಸಂಪದ ಮೌಲ್ಯ
ಖರೆ ಎಂದಿಗೂನೂ
(ಎಚ್. ಆನಂದರಾಮ ಶಾಸ್ತ್ರೀ)

ವಿಕಾಸಕ್ಕೆ ನಾನಾ ಕವಲುಗಳು

ವಿಕಾಸವಾದದ ಕುರಿತು ಬರೆದ ಲೇಖನದಡಿಯಲ್ಲಿ ತುಂಬಾ ಒಳ್ಳೆಯ ಚರ್ಚೆ ನಡೆಯಿತು. 

ಅದರ ನೆಪದಲ್ಲಿ ಇತ್ತೀಚೆಗೆ ಬಿಡುಗಡೆಯಾದ ರಿಚರ್ಡ್ ಡಾಕಿನ್ಸ್ ರ ಪುಸ್ತಕ The Greatest Show on Earth ಕುರಿತು ಗೂಗಲಿಸಿದೆ. ಡಾಕಿನ್ಸ್ ತಮ್ಮ ಪುಸ್ತಕದ ಬಗ್ಗೆ ಮಾತನಾಡಿರುವ ಕೆಲವು ವಿಡಿಯೋ ಸಿಕ್ಕವು. ಆ ಪುಸ್ತಕವನ್ನು ಅವಕಾಶವಾದಾಗ ಕೊಂಡು ಓದಬೇಕು. ಮನುಷ್ಯನ ಅದೆಷ್ಟೋ ಜಿಜ್ಞಾಸೆಗಳಿಗೆ, ಜಗತ್ತು ಯಾಕೆ ಹೀಗೆ, ಜೀವಿಗಳೇಕೆ ಹೀಗೆ, ನಿಸರ್ಗ ಏಕೆ ಹೀಗೆ ಎನ್ನುವ ಪ್ರಶ್ನೆಗಳಿಗೆ ತಣಿಸುವ ಉತ್ತರ ಕೊಡಬಲ್ಲ ಸಾಮರ್ಥ್ಯ ವಿಕಾಸವಾದಕ್ಕಿದೆ.

   ಮುಂದೆ ಓದಿ »

ಹಿಮಾಲಯ

ಭಾರತ ದೇಶದ ಉತ್ತರ ದಿಕ್ಕಿನಲ್ಲಿ ಹಿಮಾಲಯವೆಂಬ ಪರ್ವತ ಚಕ್ರವರ್ತಿಯು ಪ್ರಪಂಚದಲ್ಲಿ ಅತ್ಯಂತ ಎತ್ತರವಾಗಿಯೂ, ಪೂರ್ವ ಪಶ್ಚಿಮ ಸಮುದ್ರಗಳನ್ನು ಆವರಿಸಿ ಭೂಮಿಯ ಅಳತೆಗೋಲಿನಂತೆ ಶೋಭಿಸುತ್ತಲಿದೆ. ಮಹಾಕವಿ ಕಾಳಿದಾಸರು ಇದನ್ನು ದೇವತಾತ್ಮ ಎಂದು ವರ್ಣಿಸಿದ್ದಾರೆ. ಈ ಪರ್ವತವು ತನ್ನ ಒಡಲಲ್ಲಿ ಅನೇಕ ಅನರ್ಘ್ಯ ರತ್ನಗಳನ್ನು ಮತ್ತು ಅಮೂಲ್ಯ ಔಷದೀಯ ವಸ್ತುಗಳನ್ನು ತುಂಬಿಕೊಂಡು ರತ್ನಾಕರ ಎಂಬ ಹೆಸರನ್ನು ಸಾಧಕಪಡಿಸಿಕೊಂಡಿದೆ.

ಹಿಮಾಲಯದಲ್ಲಿ ವಿಶೇಷವಾಗಿ ಚಮರಿ ಮೃಗ ಎಂಬ ಪ್ರಾಣಿಸಂಕುಲವು ವಾಸವಾಗಿದ್ದು ಅವುಗಳು ಚಂದ್ರಕಿರಣದಂತಿರುವ ತನ್ನ ಬಾಲದಿಂದ ಪರ್ವತರಾಜನಾದ ಹಿಮಾಲಯಕ್ಕೆ ಚಾಮರಸೇವೆಯನ್ನು ನಡೆಸುತ್ತವೆ. ಹಿಮಾಲಯದಲ್ಲಿ ಮಾನಸ ಮೊದಲಾದ ಸರೋವರದಲ್ಲಿ ಅರಳುವ ಕಮಲವು ಸೂರ್ಯೋದಯಕ್ಕಿಂತ ಮೊದಲೇ ಸಪ್ತರ್ಷಿಗಳಿಂದ ಕೂಡಿದೆ.  ಮುಂದೆ ಓದಿ »

ಮೊಬೈಲ್ ಫೋನುಗಳ 'ಸ್ಮಾರ್ಟ್' ಲೋಕ

ಆಂಡ್ರಾಯ್ಡ್

(ಈ ಲೇಖನದ ಪರಿಷ್ಕೃತ ಆವೃತ್ತಿ ಫೆಬ್ರವರಿ ೧೭, ೨೦೧೦ರ 'ಪ್ರಜಾವಾಣಿ' ವಾಣಿಜ್ಯ ಪುರವಣಿಯಲ್ಲಿ ಪ್ರಕಟವಾಗಿದೆ)

ಮೊಬೈಲ್ ಫೋನು ಜನಜೀವನದ ಪ್ರಮುಖ ಅಂಗವಾಗಿ ವರ್ಷಗಳೇ ಕಳೆದಿವೆ. ಈಗ ಮೊಬೈಲ್ ಇಟ್ಟುಕೊಳ್ಳದವರು ಸಿಕ್ಕರೆ ಎಲ್ಲರೂ ವಿಸ್ಮಯದಿಂದ ಕಣ್ಣರಳಿಸುವ ಕಾಲ. ಎಲ್ಲರಲ್ಲೂ ಒಂದಲ್ಲ ಒಂದು ರೀತಿಯ ಹ್ಯಾಂಡ್ ಸೆಟ್ಟು ಇದ್ದೇ ಇರುತ್ತದೆ. ಸ್ವಲ್ಪ ಹೆಚ್ಚು ಬೆಲೆಯ ಮೊಬೈಲ್ ಕೊಂಡರೆ ಎಫ್ ಎಂ ರೇಡಿಯೋ, ಕ್ಯಾಮೆರಾ, ಮ್ಯೂಸಿಕ್ ಪ್ಲೇಯರ್ - ಇವೆಲ್ಲ ಸವಲತ್ತುಗಳೂ ಮೊಬೈಲ್ ಒಳಗೇ ಲಭ್ಯ. ಆದರೆ ತಂತ್ರಜ್ಞಾನ ನಿತ್ಯ ಬೆಳೆಯುತ್ತಲೇ ಬಂದಿದೆ. ಕರೆಗಳನ್ನು ಮಾಡಲು ಬಳಸಲಾಗುವ ಮೊಬೈಲು ಉಳಿದಂತೆ ಸಮಯ ನೋಡಲು ಅಥವ ಕ್ಯಾಲ್ಕುಲೇಟರ್ ಬಳಸಲು ಮಾತ್ರ ಉಪಯೋಗವಾಗುತ್ತಿತ್ತು. ಆದರೆ ಕ್ರಮೇಣ ಎಫ್ ಎಂ ರೇಡಿಯೋ, ಮ್ಯೂಸಿಕ್ ಪ್ಲೇಯರ್ ಮತ್ತು ಕ್ಯಾಮೆರ ಹೊತ್ತು ತಂದಿತು. ಈಗ ಪುಟ್ಟ ಕಂಪ್ಯೂಟರುಗಳಂತಿರುವ 'ಸ್ಮಾರ್ಟ್' ಫೋನುಗಳ ಕಾಲ.

ಅಂಗೈ ಮೇಲೆ ಪುಟ್ಟ ಕಂಪ್ಯೂಟರ್
ಒಂದು ಕಂಪ್ಯೂಟರ್ ಮಾಡಬಹುದಾದ ಎಲ್ಲ ಕೆಲಸವನ್ನೂ ಮಾಡಬಲ್ಲ ಮೊಬೈಲ್ ಉಪಕರಣಗಳು ಈಗ ಮಾರುಕಟ್ಟೆಯಲ್ಲಿವೆ. ಈ ಉಪಕರಣಗಳಿಗೆ ನಿಮ್ಮ ಮನೆಯ ಹಳೆಯ ಡೆಸ್ಕ್ಟಾಪ್ ಕಂಪ್ಯೂಟರಿನಷ್ಟೇ ಶಕ್ತಿಯುಳ್ಳ ಪ್ರಾಸೆಸರ್ (Processor) ಕೂಡ ಇದ್ದೀತು. ಜೊತೆಗೆ ಇತ್ತೀಚೆಗೆ ಹೆಚ್ಚು ಜನಪ್ರಿಯವಾಗುತ್ತಿರುವ ಜಿ ಪಿ ಎಸ್ (ಗ್ಲೋಬಲ್ ಪೊಸಿಶನಿಂಗ್ ಸಿಸ್ಟಮ್) ಉಪಕರಣ ಇದ್ದೇ ಇರುತ್ತದೆ. ಮೊಬೈಲ್ ನೆಟ್ವರ್ಕ್ ಮೂಲಕ ಇಂಟರ್ನೆಟ್, ಅದರೊಂದಿಗೆ ಇ-ಮೇಯ್ಲ್, ಮ್ಯಾಪ್ಸ್ ಹಾಗು ಇನ್ನೂ ಹಲವು ಸವಲತ್ತುಗಳು ಜೊತೆಜೊತೆಗೇ.  ಮುಂದೆ ಓದಿ »

Syndicate content