ಹೊಗೆ-ಎಂಜಿನ್ ಪೋಪೊಪೆಡೆ,
ಹಿಟ್ಲರ್ ಪಡೆ ಹಾಕಿದರೂ ಮಟ್ಟ.
ಧೃತಿಗೆಡದೆ ಹೊಗೆಯುಗುಳುತಿದೆ
ಚರ್ಚಿಲನ ಚುಟ್ಟ.

— ಬಿಳಿಗಿರಿ

ಪ್ರಚಲಿತ

ಅಧಿಕಾರಸ್ಥ ಜನಗಳ ಬದುಕು....

 ನಮ್ಮಂತೆ ದೇಹ, ಹೃದಯ ಮತ್ತು ಸೀಮಿತ ಶಕ್ತಿ ಇರುವ  ಒಬ್ಬ ರಾಜಕೀಯ ನಾಯಕ.  ಉದಾಹರಣೆಗೆ ಯಡಿಯೂರಪ್ಪ ಅನ್ನಿ.( ಇದಕ್ಕೆ ಬಿ.ಜೆ.ಪಿ ಜನ ದಯವಿಟ್ಟು ಸಿಟ್ಟಾಗಬಾರದು. ಯಾವುದೇ ಪಕ್ಷದ ಆಡಳಿತದವರನ್ನೂ ಕಲ್ಪಿಸಿಕೊಳ್ಳಲು ತೊಂದರೆಇಲ್ಲ) ಇವರಿಗೆ ಅದು ಹೇಗೆ ಅಷ್ಟು ಚೈತನ್ಯ ಇರುತ್ತದೆ ಎಂದು ಆಶ್ಚರ್ಯವಾಗುತ್ತದೆ. ಬೆಳೆಗಿನಿಂದಲೇ ಜನರ ಒಡನಾಟ. ಏಕಾಂತತೆಯೇ ಇಲ್ಲ. ತಡರಾತ್ರಿಯ ವರೆಗೂ ನಿರಂತರ ಚಟುವಟಿಕೆ. ಇಲ್ಲಿ ಆಡಳಿತ, ಸಮಸ್ಯೆಗಳ ನಿರ್ವಹಣೆ, ನಿರ್ದೇಶನ, ಕಲ್ಯಾಣದ ಕನಸುಗಾರಿಕೆ, ರಾಜಕೀಯ ತಂತ್ರ - ಕುತಂತ್ರ ಎಲ್ಲವನ್ನೂ ನಿಭಾಯಿಸಬೇಕು. ಸಲಹೆಗಾರರ, ಸಹವರ್ತಿಗಳ ಮಾತನ್ನು ಆಲಿಸಿ ಸೂಕ್ತವಾದ್ದನ್ನು ಆರಿಸಿಕೊಳ್ಳಬೇಕು. ಎಲ್ಲರಮೇಲೆ ಕಣ್ಣಿಟ್ಟಿರಬೇಕು. ೬೦-೭೦ ರ ಆಸುಪಾಸಿನ ಇಂಥ ರಾಜಕೀಯ ವ್ಯಕ್ತಿಗಳಿಗೆ ಅದೆಂಥಾ ಶಕ್ತಿಬೇಕು !!!

   ಮುಂದೆ ಓದಿ »

ಗಾವೋ ವಿಶ್ವಸ್ಯ ಮಾತರಾ: ( ಹಸು ವಿಶ್ವಕ್ಕೆ ತಾಯಿ ) .....

"ಹಸು"   ನಮ್ಮ  ತಾಯಿ ಇದ್ದ೦ತೆ .....ಇದನ್ನು ಪ್ರತಿಯೊಬ್ಬರೂ ಒಪ್ಪಲೇಬೇಕು ಏಕೆ೦ದರೆ,  ಮುಂದೆ ಓದಿ »

ಪಠ್ಯಪುಸ್ತಕಗಳು ಬಾಡಿಗೆಗೆ!

ಪಠ್ಯಪುಸ್ತಕಗಳು ಬಾಡಿಗೆಗೆ!

   ಮುಂದೆ ಓದಿ »

ಕಾಲದಕನ್ನಡಿ: ಕಳೆದು ಹೋದ ಘನತೆ ಕುಲಪತಿಗಳದ್ದಲ್ಲ! ರಾಜ್ಯಪಾಲರ ಮರ್ಯಾದೆ!!

ಕರ್ನಾಟಕ ರಾಜ್ಯಪಾಲರಾದ ಭಾರಧ್ವಾಜರಲ್ಲಿ ತಾಳ್ಮೆ ಕೊರತೆ,ಹಾಗೂ ಪ್ರತಿಯೊ೦ದು ವಿಚಾರಗಳಲ್ಲೂ ಪ್ರಸ್ತುತ ರಾಜ್ಯ ಸರ್ಕಾರದೊ೦ದಿಗೆ ಸ೦ಘರ್ಷದ ಹಾದಿಯನ್ನು ಮಾತ್ರವೇ ಅನುಸರಿಸುತ್ತಿರುವುದು ಸ್ಪಷ್ಟವಾಗ್ತಾ ಇದೆ.ಹಿ೦ದಿನಿ೦ದ ಅ೦ದರೆ ಸೋಮಣ್ಣನವರನ್ನು ಭಾ.ಜಾ.ಪಾ. ಖೋಟಾದಿ೦ದ ಮೇಲ್ಮನೆಗೆ ಕಳುಹಿಸುವುದರಿ೦ದ ಹಿಡಿದು, ರೆಡ್ಡಿಗಳ ಅಕ್ರಮ ಗಣಿ ಲೂಟಿಯ ಪ್ರಕರಣ (ಈ ವಿಚಾರದಲ್ಲಿ ಇವರ ನಡೆ ಪ್ರಶ್ನಾತೀತವೇನೂ ಅಲ್ಲ-ಅದರಲ್ಲೂ ಒ೦ದು ಪಕ್ಷಪಾತತನವನ್ನು ಪ್ರದರ್ಶಿಸಿದ್ದಾರೆ! ಇದನ್ನು ಲೇಖನದ ಮು೦ದಿನ ಸಾಲುಗಳಲ್ಲಿ ವಿವರಿಸಿದ್ದೇನೆ),ಗೋಹತ್ಯಾ ನಿಷೇಧದ ಕಾನೂನನ್ನು ರಾಷ್ಟಪತಿಯವರ ಅವಗಾಹ ನೆಗೆ ಕಳುಹಿಸಿದ ವಿಚಾರ,ಸ್ವಾತ೦ತ್ರ್ಯ ದಿನಾಚರಣೆಯ ಅ೦ಗವಾಗಿ ಸನ್ನಡತೆಯ ಆಧಾರದ ಮೇಲೆ ಬಿಡುಗಡೆಗೊಳಿಸುವ ಕೈದಿಗಳ ಪಟ್ಟಿಗೆ ಅಸಮ್ಮತಿ ಸೂಚಿಸಿದ್ದು, ಹಾಗೂ ಮೊನ್ನಿನ ಮೈಸೂರು ಕುಲಪತಿಗಳೊ೦ದಿಗಿನ ವಾಗ್ವಾದದ ವಿಚಾರ! ಈಗ ಕಾಲದಕನ್ನಡಿ ಬಿ೦ಬಿಸ ಹೊರಟಿದ್ದು ರಾಜ್ಯಪಾಲರು ಹಾಗೂ ಕುಲಪತಿಗಳ ವಾಗ್ವಾದದ ಘಟನೆಯನ್ನು!  ಮುಂದೆ ಓದಿ »

ನೆಲೆನಾಡಿಗಾಗಿ - ನೃತ್ಯ ಮಿಲನ!

ಮೊದಲಿಗೆ ಒಂದು ವಿವಾದಾತ್ಮಕ ಪ್ರಶ್ನೆ:  ಬೆಂಗಳೂರಿನಲ್ಲಿ ತಮಿಳರು ಒಂದು charity  ಕಾರ್ಯಕ್ರಮ ಮಾಡ್ತಾರೆ. ಅದರ ಸಂಗ್ರಹಣೆಯೆಲ್ಲಾ ತಮಿಳು ನಾಡಿನ ಶಾಲೆಗಳಿಗೆ ಹೋಗುತ್ತದೆ. ಇದು ಸರಿಯೇ, ತಪ್ಪೇ?

 

ಅವರು ಹುಟ್ಟಿ ಬೆಳೆದ ಊರಿನ ಬಗ್ಗೆ ಅವರಿಗೆ ಅಭಿಮಾನ ಇರುವುದು ಸಹಜ. ಆದರೆ ತಮ್ಮ ಇಂದಿನ ಅನ್ನವನ್ನು ನೀಡುತ್ತಿರುವ ಕನ್ನಡ ನಾಡಿನ ಶಾಲೆಗಳಲ್ಲೂ ಓದುತ್ತಿರುವ ಬಡ ಮಕ್ಕಳ ಕಷ್ಟಕ್ಕೂ ಅವರು ಒಂಚೂರು ನೆರವಾದಲ್ಲಿ ಒಳ್ಳೆಯದಲ್ಲವೇ? ಇದೇ ಯೋಚನಾಲಹರಿಯಲ್ಲಿದ್ದ ನನಗೆ ಇತ್ತೀಚೆಗೆ ಕೇಳಿದ ಪದ "ನೆಲೆನಾಡು" ಬಹಳ ಹಿಡಿಸಿತು.

 

ಉತ್ತರ ಕ್ಯಾಲಿಫ಼ೋರ್ನಿಯಾ ಕನ್ನಡ ಕೂಟ ತಾಯ್ನಾಡಿಗಾಗಿ ಬಹಳ ಶ್ರಮಿಸಿದೆ. ದೂರದೇಶದಲ್ಲಿ ಕನ್ನಡದ ಕಂಪನ್ನು ಪಸರಿಸುತ್ತಾ, ಕನ್ನಡದ ಕಲಾವಿದರು, ಸಾಹಿತಿಗಳನ್ನು ಈ ದೇಶಕ್ಕೆ ಪರಿಚಯಿಸುತ್ತಲೇ, ಆ ಮೂಲಕ ಸಂಗ್ರಹವಾದ ಧನವನ್ನು ಭಾರತದ, ಕರ್ನಾಟಕದ ಸಂಸ್ಥೆಗಳಿಗೆ ಸಹಾಯ ಮಾಡಲು ಬಳಸಿದೆ. ಆದರೆ ಇಲ್ಲಿನ ಕನ್ನಡಿಗರು ತಮ್ಮ ನೆಲೆನಾಡಿಗೆ ಕೂಡ ಸಹಾಯ ಮಾಡಬೇಕೆಂಬ ಉದ್ದೇದಿಂದ ಹಮ್ಮಿಕೊಂಡ ಕಾರ್ಯಕ್ರಮ - ನೃತ್ಯ ಮಿಲನ.  ಮುಂದೆ ಓದಿ »

ಸಾರಿಗೆ ಇಲಾಖೆಗೆ ಹಣ - ಜನರ ಜೇಬು ಭಣ ಭಣ!!

 

ಮಾನ್ಯ ಸಾರಿಗೆ ಸಚಿವರಿಗೆ ನಮಸ್ಕಾರಗಳು.  ಮುಂದೆ ಓದಿ »

ಕಾಲದಕನ್ನಡಿ: ನ೦ಬಲಸಾಧ್ಯ!ಗೋವುಗಳೂ ಮಾ೦ಸಾಹಾರಿಗಳಾಗುತ್ತಿವೆಯೇ? !!


 


ಇದು ಮಾರ್ಚ್ ೮,೨೦೦೭ ರಲ್ಲಿ ನಡೆದ ಘಟನೆಯಾದರೂ, ಪ್ರಸ್ತುತಕ್ಕೂ ಚರ್ಚಿತ ವಿಚಾರವೇ! ಇದು ಪಶ್ಚಿಮ ಬ೦ಗಾಳದ ರಾಜಧಾನಿ ಕಲಕತ್ತೆಯಿ೦ದ ೧೪೫ ಕಿ.ಮೀ.ದೂರದ ಚ೦ಡೀಪುರ ದಲ್ಲಿ ನಡೆದ ಒ೦ದು ಘಟನೆ. “ಮೂಲೋಯ್“ ಎ೦ಬ ಹೆಸರಿನ ರೈತ ಹಾಗೂ ಅವನ ಒ೦ದು ವರ್ಷ ವಯಸ್ಸಿನ ಹಸುವಿನ ಕರು ಇದ್ದಕ್ಕಿದ್ದ೦ತೆ ಸ್ಥಳೀಯವಾಗಿ ಅತ್ಯ೦ತ ಪ್ರಸಿಧ್ಧರಾಗಿದ್ದು, ಅವರನ್ನು ನೋಡಲು ಪ್ರತಿದಿನವೂ ರಾಜ್ಯದ ಮೂಲೆಮೂಲೆಗಳಿ೦ದ ನೂರಾರು ವೀಕ್ಷಕರು ಚ೦ಡೀಪುರದ ಅವನ ಫಾರ್ಮ್ ಹೌಸ್ ಗೆ ಆಗಮಿಸುತ್ತಿದ್ದಲೇ ಇದ್ದಾರೆ.ಏಕೆ?ಅದರ ಕಾರಣ ತು೦ಬಾ ಕುತೂಹಲಕಾರಿಯಾಗಿದೆ ಹಾಗೂ ಅದರಿ೦ದ ಅನೇಕ ಸ೦ಶಯಗಳೂ ಮನಸ್ಸಿನಲ್ಲಿ ಏಳಲಾರ೦ಭಿಸಿವೆ!  ಮುಂದೆ ಓದಿ »

ಏಕಕಾಲದಲ್ಲಿ ಎರಡು ಜಿಮೇಲ್ ಖಾತೆಗಳಿಗೆ ಲಾಗಿನ್ ಆಗಬಹುದೇ?

ಏಕಕಾಲದಲ್ಲಿ ಎರಡು ಜಿಮೇಲ್ ಖಾತೆಗಳಿಗೆ ಲಾಗಿನ್ ಆಗಬಹುದೇ?  ಮುಂದೆ ಓದಿ »

"ಐ-ಸುಧಾ" - ಒಂದು ಐ-ಫೋನ್ ಅಪ್ಲಿಕೇಶನ್

ಗೆಳೆಯರೆ,

ಸುಧಾ ಮ್ಯಾಗಝೀನ್ ನಿಮಗೆಲ್ಲ ತಿಳಿದಿರಬಹುದು. ಈ ನನ್ನ ನೆಚ್ಚಿನ ಸುಧಾ ಮ್ಯಾಗಝೀನಿಗೋಸ್ಕರ ಐ-ಸುಧಾ ಎನ್ನುವಂತಹ ಒಂದು ಐ-ಫೋನ್ ಅಪ್ಲಿಕೇಶನ್ ಅನ್ನು ಬರೆದಿದ್ದೇನೆ. ಇಂದಿನಿಂದ ಅದು, Apple App Store ನಿಂದ ಲಭ್ಯವಾಗಲಿದೆ.

 

ಇದರ ಪ್ರಯೋಜನಗಳು ಇಂತಿವೆ


೧. ಯಾವುದೇ ತಾಂತ್ರಿಕ ಅಡಚಣೆಗಳೂ ನಿಮ್ಮನ್ನು ಕಾಡವು. 

೨. ಪ್ರಸ್ತುತ ವಾರದಿಂದ ಹಿಡಿದು ಹಿಂದಿನ ಮೂರು ವರ್ಷಗಳ ತನಕದ ಸುಧಾವನ್ನು ಯಾವುದೇ ಅಡೆತಡೆಗಳಿಲ್ಲದೆ ಸುಲಭವಾಗಿ ಓದಬಹುದು.

೩. ಪುಟಗಳ ನಾವಿಗೇಶನ್ ಅನ್ನು ಸುಲಭವಾಗಿ, ಸ್ಕ್ರಬಿಂಗ್ ಮೂಲಕ ಮಾಡಬಹುದು. ಬಲದಿಂದ ಎಡಕ್ಕೆ ಸ್ಕ್ರಬಿಂಗ್ ಮಾಡಿದರೆ ಮುಂದಿನ ಪುಟ ಮತ್ತು ಎಡದಿಂದ ಬಲಕ್ಕೆ ಸ್ಕ್ರಬಿಂಗ್ ಮಾಡಿದರೆ ಹಿಂದಿನ ಪುಟ ಲೋಡ್ ಆಗುವುದು.  ಮುಂದೆ ಓದಿ »

Syndicate content