ಪ್ರಚಲಿತ
ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
May 9, 2008 - 7:46pm — D.S.NAGABHUSHANAಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
ಗಿರೀಶ್ ಕಾರ್ನಾಡರು ತಮ್ಮ `ತಲೆದಂಡ' ನಾಟಕದ ಮುನ್ನುಡಿಯಲ್ಲಿ ನೋಯುವ ಹಲ್ಲಿನ ಕಡೆ ನಾಲಗೆ ಪದೇ ಪದೇ ಹೊರಳುವಂತೆ ಕನ್ನಡ ಪ್ರಜ್ಞೆ ಪದೇ ಪದೇ 12ನೇ ಶತಮಾನದ ಕಲ್ಯಾಣ ಕ್ರಾಂತಿಯ ಕಡೆ ಹೊರಳುವ ಕಡೆಗೆ ನಮ್ಮ ಗಮನ ಸೆಳೆದಿದ್ದಾರೆ. ಈ ಮಾತನ್ನು ಆನಂತರ ನಮ್ಮ ಅನೇಕ ಸಂಸ್ಕೃತಿ ಚಿಂತಕರು ಮತ್ತು ಲೇಖಕರು ತಮ್ಮ ಸಾಹಿತ್ಯ - ಸಂಸ್ಕೃತಿ ಚಿಂತನೆಗಳ ಮಧ್ಯೆ ಪ್ರಸ್ತಾಪಿಸಿದ್ದಾರೆ. ಆದರೆ ಇವರೆಲ್ಲ ಕಾರ್ನಾಡರ ಈ ಮಾತನ್ನು ಕನ್ನಡ ಸಂಸ್ಕೃತಿಯಲ್ಲಿ ಕಲ್ಯಾಣ ಕ್ರಾಂತಿಯ ಮಹತ್ವವನ್ನು ಸೂಚಿಸಲಷ್ಟೇ ಬಳಸಿರುವಂತೆ ತೋರುತ್ತದೆಯೇ ಹೊರತು, ಆ ಮಾತಿನಲ್ಲಿರುವ `ನೋಯುವ ಹಲ್ಲು' ಎಂಬ ಪದಪುಂಜದ ಕಡೆ ಗಮನ ಕೊಟ್ಟಂತೆ ತೋರುವುದಿಲ್ಲ. ಅವರು ಹಾಗೆ ಗಮನ ಕೊಟ್ಟಿದ್ದರೆ `ತಲೆದಂಡ' ನಾಟಕವೂ ಸೇರಿದಂತೆ ಕಲ್ಯಾಣ ಕ್ರಾಂತಿ ಕುರಿತು ಆಧುನಿಕ ಕನ್ನಡ ಸಾಹಿತ್ಯದಲ್ಲಿ ಮೂಡಿರುವ ಸೃಜನ ಮತ್ತು ಸೃಜನೇತರ ಕೃತಿಗಳ ಬಗ್ಗೆ ಈಗ ಬಂದಿರುವ ಕೇವಲ `ಚಿಂತನಶೀಲ' ಬರಹಗಳ ಜೊತೆ ಜೊತೆಗೇ `ಕ್ರಿಯಾಶೀಲ' ಬರವಣಿಗೆಯೂ ಹೊಮ್ಮಿರುತ್ತಿತ್ತೇನೋ! ಅಂದರೆ ಕನ್ನಡ ಸಮಾಜದಲ್ಲಿ ಒಂದು ನಿರ್ಣಾಯಕ ಸಾಮಾಜಿಕ ಬದಲಾವಣೆಗೆ - ತಮಿಳ್ನಾಡಿನಲ್ಲಿ ಆದಂತೆ - ಇಂಬುಕೊಡುವ ಒಂದು ಪ್ರಬುದ್ಧ ಸಾಹಿತ್ಯಕ, ಸಾಂಸ್ಕೃತಿಕ ಸಂವಾದ ಕನ್ನಡ ಸಾಹಿತ್ಯದ ಚೈತನ್ಯದ ಶಕ್ತಿಯಾಗಿರುತ್ತಿತ್ತೇನೋ...
ಇಂತಹ ಸಂವಾದ ಕನ್ನಡ ಸಾಹಿತ್ಯದಲ್ಲಿ ನಡೆದಿಲ್ಲ ಎಂದಲ್ಲ. ಆದರೆ ಅದು ಕನ್ನಡ ಸಾಹಿತ್ಯದ ಚೈತನ್ಯಶಕ್ತಿ (driving force) ಆಗಿಲ್ಲ. ಕುವೆಂಪು ಅವರ `ಮಲೆಗಳಲ್ಲಿ ಮದುಮಗಳು'ವನ್ನೂ, ಭೈರಪ್ಪನವರ `ಆವರಣ'ವನ್ನೂ ಒಟ್ಟಿಗೇ ಶ್ರೇಷ್ಠ ಕೃತಿಗಳು ಎಂದು `ಪ್ರಾಮಾಣಿಕ'ವಾಗಿ ಗುರುತಿಸುವ, ಚರ್ಚಿಸುವ, ಸಮರ್ಥಿಸುವ ಒಂದು ದೊಡ್ಡ ಸಾಂಸ್ಕೃತಿಕ ಧಾರೆಯೇ ಇಂದು ಕನ್ನಡ ಸಾಹಿತ್ಯ ಸಂಕಥನದ ಮಧ್ಯೆ ಜೀವಂತವಿದೆ! ನಾನು ಹೇಳುತ್ತಿರುವುದು ಈ ಅಸಾಂಗತ್ಯದ ಬಗ್ಗೆ; ಇದು ಸೂಚಿಸುವ ಸಾಹಿತ್ಯದ ಲೋಕಾಭಿರಾಮೀಕರಣದ ಹಿಂದಿರುವ ಸಾಂಸ್ಕೃತಿಕ ದೃಷ್ಟಿ ಕೇಂದ್ರದ ಪ್ರಕ್ಷೇಪದ ಬಗ್ಗೆ - ಕನ್ನಡ ಸಾಹಿತ್ಯ ಕಲ್ಯಾಣ ಕ್ರಾಂತಿಯಿಂದ ಸ್ಫೂರ್ತಿ ಪಡೆದು, ಒಂದು ದೊಡ್ಡ ಸಾಮಾಜಿಕ ಕ್ರಾಂತಿಗೆ ಕಾರಣವಾಗಿರಬೇಕಿತ್ತು ಎಂದಲ್ಲ. ನಿಜ, ಕಲ್ಯಾಣ ಕ್ರಾಂತಿ ಈಗಲೂ ಕನ್ನಡ ಸಂವೇದನೆಯ ಹೃದಯ ಸ್ಥಾನದಲ್ಲಿದೆ. ಆದರೆ ಒಂದು ಒಣ ಹೆಮ್ಮೆಯ ವಿಷಯವಾಗಿ. ಕನ್ನಡ ಸಮಾಜ - ಅದರ ರಾಜಕಾರಣ, ಭಾಷೆ, ಸಂವೇದನೆ ಎಲ್ಲವೂ ಒಟ್ಟಿಗೆ ಏರಿದ್ದ ಹೊಸ ಎತ್ತರಗಳ ದ್ಯೋತಕವಾಗಿ ಅದನ್ನು ನೋಡುತ್ತೇವೆ. ಆದರೆ ಅದು ಕಾರ್ನಾಡರು ಹೇಳುವ ಹಾಗೆ `ನೋಯುವ ಹಲ್ಲು' ಕೂಡಾ ಆಗಿದೆಯಲ್ಲವೇ? ಅಂದರೆ ಕಲ್ಯಾಣ ಕ್ರಾಂತಿಯ ನೆನಪು ಆ ಹೊಸ ಎತ್ತರಗಳನ್ನು ಕನ್ನಡ ಸಮಾಜ, ರಾಜಕಾರಣ, ಸಂವೇದನೆ ಮತ್ತು ಭಾಷೆಗಳು ಬೀಜರೂಪಿಯಾಗಿ ಉಳಿಸಿಕೊಳ್ಳಲಾಗದೇ ಹೋದ ವೇದನೆಯಾಗಿ ನಮ್ಮನ್ನು ಕಾಡಬೇಕಲ್ಲವೆ? ಆದರೆ ಇಂದು ಹಾಗೆ ಅದು ನಮ್ಮನ್ನು ಕಾಡುತ್ತಿದೆಯೇ! ಮುಂದೆ ಓದಿ »

- 7 ಪ್ರತಿಕ್ರಿಯೆಗಳು
- 542 hits
- Email this page



ಅಂತಿಮ ಸಂಸ್ಕಾರ:ಹೊಸ ವಿಧಾನ
May 12, 2008 - 11:43am — ASHOKKUMAR(ಇ-ಲೋಕ-74)(12/5/2008 ) ಮುಂದೆ ಓದಿ »

- Login or register to post comments
- 107 hits
- Email this page



ಪ್ರತ್ಯಕ್ಷ ನೋಡಿದರೂ...
May 12, 2008 - 12:34am — hpn... ಪ್ರಮಾಣಿಸಿ ನೋಡು" - ಈ ಗಾದೆಯ ಪರಿಚಯ ನಮ್ಮೆಲ್ಲರಿಗೂ ಇದ್ದೇ ಇರತ್ತೆ. ಮಗುವನ್ನು ಹಾವಿನಿಂದ ಉಳಿಸಿದ್ದಲ್ಲದೇ ಮನೆಯೊಡತಿಯ ಅಚಾತುರ್ಯದ ಪೆಟ್ಟನ್ನೂ ತಾನೇ ತಿಂದು ಸಾಯುವ ಮುಂಗಸಿ ಕಥೆ ಶಾಲೆಯಲ್ಲಿದ್ದಾಗ ಹಲವರು ಓದಿರಬಹುದು. ಅದಿಲ್ಲದಿದ್ದರೆ "ನೋಡಿದ್ದೂ ಸುಳ್ಳಾಗಬಹುದು, ಕೇಳಿದ್ದೂ ಸುಳ್ಳಾಗಬಹುದು" ಹಾಡಂತೂ ಕೇಳಿಯೇ ಇರುತ್ತೇವೆ.
ಕೇಳಿದ್ದೇವೆ, ಸರಿ. ಆದರೆ ಇದೆಲ್ಲಾ ಯಾಕಿವತ್ತು? ಮುಂದೆ ಓದಿ »

- 13 ಪ್ರತಿಕ್ರಿಯೆಗಳು
- 539 hits
- Email this page



ನಶಿಸುತ್ತಿರುವ ಶಬ್ದ ಬಳಕೆ
May 11, 2008 - 4:28pm — Shivakumar.Revadiನಮ್ಮ ಪೀಳಿಗೆಯಲ್ಲಿ ಯತೆಚ್ಚವಾಗಿ ಬಳಕೆಯಲ್ಲಿದ್ದ ಎಷ್ಟೊ ಶಬ್ದಗಳು ಇಂದು ತುಂಬಾ ವಿರಳವಾಗಿ ಬಳಕೆಯಲ್ಲಿವೆ ಅಥವಾ ಗ್ರಾಂಥಿಕ ರೂಪ ಪಡೆದಿವೆ, ಹಳ್ಳಿಯ ಜನಪದರೂ ಕೂಡ ದೂರದರ್ಶನದ ಪ್ರಭಾವದಿಂದ ಈ ಶಬ್ದಗಳನ್ನು ಗ್ರಾಂಥಿಕ ರೂಪದಲ್ಲಿ ಬಳಸುತ್ತಿದ್ದಾರೆ. ಮುಂದಿನ ಪೀಳಿಗೆ ಈ ಶಬ್ದ ಸಂಪತ್ತಿನಿಂದ ವಂಚಿತವಾಗುತ್ತೆನೊ ಎಂಬ ಆತಂಕ.
ನನ್ನ ನೆನಪಿನಿಂದ ಹೊರಬಿದ್ದ ಕೆಲ ಶಬ್ದಗಳನ್ನು ಪಟ್ಟಿ ಮಾಡಿದ್ದೇನೆ.
೧. ಚಕ್ಕಡಿ
೨. ಹಗೆ (ಧಾನ್ಯ ತುಂಬುವದು)
೩. ಅಗಸಿ ಬಾಗಲಾ
೪. ಬಂಕ/ಚಾವಡಿ
೫. ತತ್ರಾಣಿ
೬. ಹರನಾಳಗಿ
೭. ಜೂಲಾ (ಎತ್ತಿಗೆ ತೊಡಿಸೊ ಕಸೂತಿಮಾಡಿದ ಬಟ್ಟೆ)
೮. ಬೊಲ ಬಗರಿ
೯. ಶ್ಯಾವಗಿ ಮಣಿ ಮುಂದೆ ಓದಿ »

- ೧ ಪ್ರತಿಕ್ರಿಯೆ
- 288 hits
- Email this page



ಎಚ್ಚರ! ಡ್ಯೂಪ್ಲಿಕೇಟ್ Volvo ಸೇವೆ ಲಭ್ಯವಿದೆ
May 10, 2008 - 8:56am — omshivaprakash
- ೧ ಪ್ರತಿಕ್ರಿಯೆ
- 454 hits
- Email this page




RSS: