ಎಲ್ಲ ಬಲ್ಲವರಿಲ್ಲ | ಬಲ್ಲವರು ಬಹಳಿಲ್ಲ
ಬಲ್ಲಿದರು ಇದ್ದು ಬಲವಿಲ್ಲ ಸಾಹಿತ್ಯ |
ವೆಲ್ಲವರಿಗಿಲ್ಲ ಸರ್ವಜ್ಞ |

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಪ್ರಚಲಿತ

ಮೊದಲ ಪ್ರಯತ್ನದ ತೊಡರುಗಳು

Krushi Sampada 5th Editionಸಾವಯವ ಕೃಷಿ ಬಯಸುವ ಚಿಂತಕರ ಸಮುದಾಯಕ್ಕೂ ಸ್ವತಂತ್ರ ತಂತ್ರಾಂಶಕ್ಕೂ ಸ್ವಾಭಾವಿಕ ಸಂಬಂಧವಿದೆ. ಹೇಗೆ? ಎಲ್ಲವನ್ನೂ ತನ್ನ ಮುಷ್ಠಿಯಲ್ಲಿಟ್ಟುಕೊಳ್ಳಲು ಬಯಸುವ ಮಲ್ಟಿನ್ಯಾಶನಲ್ಲುಗಳ ಕಬಂಧಬಾಹುವಿನಿಂದ ಹೊರಬರುವ ಪ್ರಯತ್ನಗಳು ಇವೆರಡೂ. ಅಚ್ಚರಿಯೆಂದರೆ ಮಲ್ಟಿನ್ಯಾಶನಲ್ಲುಗಳು ಹಣದ ಹೊಳೆ ಸುರಿಸಿ ನಡೆಸಿದ ಸಂಶೋಧನೆಗಳಿಗಿಂತ ಹೆಚ್ಚಿನ ಸಹಾಯವಿಲ್ಲದೆ ಪ್ರಾರಂಭವಾದ ಸಮುದಾಯ ಪ್ರಯತ್ನಗಳು ಹಲವು ಸಂದರ್ಭಗಳಲ್ಲಿ ಈಗ ಉತ್ತಮ ಪ್ರಯತ್ನಗಳೆನಿಸಿಕೊಳ್ಳುತ್ತಿರುವುದು!

ತಂತ್ರಜ್ಞಾನ ಜಗತ್ತಿನಲ್ಲೂ ಅಷ್ಟೇ. ಸ್ವತಂತ್ರ ತಂತ್ರಾಂಶ ಯೋಜನೆಗಳು ಇಂದು (ತಂತ್ರಾಂಶ ತಜ್ಞರ) ಸಮುದಾಯ ಪ್ರಯತ್ನಗಳಿಂದಲೇ ಬೆಳೆಯುತ್ತ ಬಂದಿದೆ. ಅಷ್ಟೇ ಅಲ್ಲ, ಜಗತ್ತಿನ ದೊಡ್ಡ ದೊಡ್ಡ ಕಂಪೆನಿಗಳು ಹಣದ ಹೊಳೆ ಹರಿಸಿ ಮಾಡಲು ಸಾಧ್ಯವಾಗದ ಕೆಲಸಗಳು ಇಲ್ಲಿ ಹಲವು ಸಂದರ್ಭಗಳಲ್ಲಿ ಸಾಧ್ಯವಾಗುತ್ತಿದೆ. ಜಗತ್ತಿನಾದ್ಯಂತ ಪ್ರಮುಖ ಯೋಜನೆಗಳಲ್ಲಿ ಈ ತಂತ್ರಾಂಶಗಳು ಬಳಕೆಯಾಗುತ್ತಿವೆ.

ಸ್ವತಂತ್ರ ತಂತ್ರಾಂಶಗಳಾದ  ಗ್ನು/ಲಿನಕ್ಸ್, ಇಂಕ್ ಸ್ಕೇಪ್ ಬಳಸಿ ಉತ್ತಮ ಆಧುನಿಕ ವ್ಯವಸ್ಥೆ ಕನ್ನಡ - ಯೂನಿಕೋಡ್ ನಲ್ಲಿ ಮೊದಲ ಬಾರಿಗೆ ಕೃಷಿ ಸಂಪದವನ್ನು ತಂದಿದ್ದೇವೆ. ಪುಟ್ಟ ಮಗು ಮೊದಲ ಹೆಜ್ಜೆ ಇಡುತ್ತಿರುವಂತೆ ಈ ಯತ್ನ. ನಿಮ್ಮೆಲ್ಲರ ಪ್ರೋತ್ಸಾಹ ಈ ಪ್ರಯತ್ನಕ್ಕೆ ಬೇಕು. ಈ ಸಂಚಿಕೆಯ ಹಲವೆಡೆ ಯೂನಿಕೋಡ್ ಬಳಕೆಯಲ್ಲಾದ ತೊಡರುಗಳು ನಿಮಗೆ ಕಾಣಸಿಗುವುದು.  ಮುಂದೆ ಓದಿ »

ಹುಸೇನರ ಚಿತ್ರಕ(ಕೊ)ಲೆ, ಅಭಿವ್ಯಕ್ತಿ ಸ್ವಾತಂತ್ರ್ಯ ಇತ್ಯಾದಿ

          ನವ್ಯ ಚಿತ್ರಕಲೆ, modern art ಬಗ್ಗೆ ಒಂದು ತಮಾಷೆಯ ಮಾತಿದೆ. ಒಂದು ನವ್ಯ ಚಿತ್ರ ತಯಾರಾಗುವ ಹಂತದಲ್ಲಿದ್ದಾಗ ಇಬ್ಬರು ಆ ಚಿತ್ರವನ್ನು ಅರ್ಥಮಾಡಿಕೊಳ್ಳಬಲ್ಲರು. ಒಬ್ಬ ಚಿತ್ರಬರೆಯುತ್ತಿರುವ ಕಲಾವಿದ. ಇನ್ನೊಬ್ಬ ಸರ್ವಶಕ್ತ, omnipotent ದೇವರು. ಆದರೆ ಆ ಚಿತ್ರ ಪೂರ್ಣಗೊಂಡಮೇಲೆ ಒಬ್ಬ ಮಾತ್ರ ಅದನ್ನು ಅರ್ಥಮಾಡಿಕೊಳ್ಳಬಲ್ಲ, ದೇವರು!! ಕೆಲವು ಚಿತ್ರಬ್ರಹ್ಮರ ಕೃತಿಗಳನ್ನು ನೋಡಿದರೆ ದೇವರ ಸಾಮರ್ಥ್ಯದ ಬಗ್ಗೆಯೂ ಸಂಶಯ ಹುಟ್ಟಿದರೆ ಆಶ್ಚರ್ಯ ಪಡಬೇಕಾದದ್ದೇನಿಲ್ಲ. ಇರಲಿ,  ಮುಂದೆ ಓದಿ »

ಹುಸೇನರ ಚಿತ್ರಕ(ಕೊ)ಲೆ, ಅಭಿವ್ಯಕ್ತಿ ಸ್ವಾತಂತ್ರ್ಯ ಇತ್ಯಾದಿ

          ನವ್ಯ ಚಿತ್ರಕಲೆ, modern art ಬಗ್ಗೆ ಒಂದು ತಮಾಷೆಯ ಮಾತಿದೆ. ಒಂದು ನವ್ಯ ಚಿತ್ರ ತಯಾರಾಗುವ ಹಂತದಲ್ಲಿದ್ದಾಗ ಇಬ್ಬರು ಆ ಚಿತ್ರವನ್ನು ಅರ್ಥಮಾಡಿಕೊಳ್ಳಬಲ್ಲರು. ಒಬ್ಬ ಚಿತ್ರಬರೆಯುತ್ತಿರುವ ಕಲಾವಿದ. ಇನ್ನೊಬ್ಬ ಸರ್ವಶಕ್ತ, omnipotent ದೇವರು. ಆದರೆ ಆ ಚಿತ್ರ ಪೂರ್ಣಗೊಂಡಮೇಲೆ ಒಬ್ಬ ಮಾತ್ರ ಅದನ್ನು ಅರ್ಥಮಾಡಿಕೊಳ್ಳಬಲ್ಲ, ದೇವರು!! ಕೆಲವು ಚಿತ್ರಬ್ರಹ್ಮರ ಕೃತಿಗಳನ್ನು ನೋಡಿದರೆ ದೇವರ ಸಾಮರ್ಥ್ಯದ ಬಗ್ಗೆಯೂ ಸಂಶಯ ಹುಟ್ಟಿದರೆ ಆಶ್ಚರ್ಯ ಪಡಬೇಕಾದದ್ದೇನಿಲ್ಲ. ಇರಲಿ,  ಮುಂದೆ ಓದಿ »

ಶಾರ್ಟ್ ಹ್ಯಾಂಡ್ ನ ಬಾಲಕ ಚಂದ್ರಶೇಖರ್

                           ಶೀಘ್ರಲಿಪಿ ಎಂದರೇನೆಂದೇ ಬಹುತೇಕ ಜನರಿಗೆ ತಿಳಿದಿರುವುದಿಲ್ಲ. ವಿದ್ಯಾರ್ಥಿಗಳಿಗಂತೂ ಅದು ಹೊಸ ಶಬ್ದ. ಇಂಗ್ಲೀಷ್‌ನಲ್ಲಿ ಇದನ್ನು ಶಾರ್ಟಹ್ಯಾಂಡ ಎಂದು ಕರೆಯುತ್ತಾರೆ. ಮೌಖಿಕವಾಗಿ ಹೇಳುವುದನ್ನು ಶೀಘ್ರವಾಗಿ ಲಿಪಿ ರೂಪದಲ್ಲಿ ಬರೆದುಕೊಂಡು, ಅದನ್ನು ಮತ್ತೆ ಬರಹ ರೂಪದಲ್ಲಿಳಿಸುವುದೇ ಶೀಘ್ರಲಿಪಿ. ಇದನ್ನು ಬರೆದುಕೊಳ್ಳುವುದಕ್ಕೆಂದೇ ಒಂದು ಲಿಪಿಯಿದೆ. ಇದನ್ನು ಕಲಿಯುವುದು ಕಷ್ಟವಾದ್ದರಿಂದ ರಾಜ್ಯದಲ್ಲಿ ಶೀಘ್ರಲಿಪಿ ಕಲಿತವರ ಸಂಖ್ಯೆ ವಿರಳ. ವಿಶೇಷವೆಂದರೆ ಇತ್ತೀಚಿನ ವಿದ್ಯಾರ್ಥಿಗಳಿಗೆ ಶೀಘ್ರಲಿಪಿಗೆ ಎಷ್ಟೊಂದು ಬೇಡಿಕೆಯಿದೆಯೆಂಬುದೇ ತಿಳಿದಿಲ್ಲ. ಶೀಘ್ರಲಿಪಿ ಕಲಿತವರಿಗೆ ಉದ್ಯೋಗ ಖಾಯಂ ಎಂಬುದೂ ಬಹಳ ಜನ ಪಾಲಕರಿಗೂ ಗೊತ್ತಿಲ್ಲ. ಇತ್ತೀಚೆಗೆ ನ್ಯಾಯಾಂಗ ಇಲಾಖೆಗೆ ಶೀಘ್ರಲಿಪಿ ಹುದ್ದೆಗೆ ಅರ್ಜಿ ಕರೆಯಲಾಗಿತ್ತು.  ಮುಂದೆ ಓದಿ »

ಮಹಿಳಾ ಮೀಸಲಾತಿ ನಿರರ್ಥಕವೇ?

  ಇಂದಲ್ಲ ನಾಳೆ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ವಿಧೇಯಕಕ್ಕೆ ಅಂಗೀಕಾರ ದೊರಕುವುದು ನಿಶ್ಚಿತ. ಆದರೆ ಈ ಮೀಸಲಾತಿಯು ನ್ಯಾಯಬದ್ಧವಾಗಿ ಬಳಕೆಯಾಗುತ್ತದೆಯೆಂಬ ಗ್ಯಾರಂಟಿ ಮಾತ್ರ ಇಲ್ಲ. ಬೃಹತ್ ಬೆಂಗಳೂರು ಮಹಾನಗರಪಾಲಿಕೆಯ ಸೀಟುಗಳ ಪುನರ್ವರ್ಗೀಕರಣದಿಂದಾಗಿ ಸಾಮಾನ್ಯ ವರ್ಗದ ಕೆಲವು ಸೀಟುಗಳು ಮಹಿಳೆಯರಿಗೆ ಮೀಸಲಾದವಷ್ಟೆ. ಆ ಸೀಟುಗಳಿಗೆ ವಿವಿಧ ಪಕ್ಷಗಳಿಂದ ಈ ಮೊದಲು ಸ್ಪರ್ಧಿಸಲಿದ್ದ ಪುರುಷರೇನಿದ್ದರಲ್ಲಾ, ಅವರ ಪತ್ನಿಯರೇ ಇದೀಗ ಆಯಾ ಪಕ್ಷಗಳ ಮಹಿಳಾ ಅಭ್ಯರ್ಥಿಗಳಾಗಿ ಸ್ಪರ್ಧಿಸುತ್ತಿದ್ದಾರೆ! ಬಹುತೇಕ ಸ್ಥಾನಗಳ ಕಥೆ ಇದೇ ಆಗಿದೆ. ಮೂರನೇ ಒಂದು ಭಾಗದಷ್ಟು ಮಹಿಳಾ ಮೀಸಲಾತಿ ಜಾರಿಗೆ ಬಂದಮೇಲೆ ಲೋಕಸಭಾ ಚುನಾವಣೆಯಲ್ಲಿ ಆಗುವುದೂ ಇದೇ ಕಥೆ.  ಮುಂದೆ ಓದಿ »

ಅಂತರ್ಜಾಲ-ಟಿವಿ ಬೆಸೆಯುವ ಯತ್ನ

ಅಂತರ್ಜಾಲ-ಟಿವಿ ಬೆಸೆಯುವ ಯತ್ನ
ಅಂತರ್ಜಾಲವನ್ನು ಟಿವಿಯ ಮೂಲಕವೂ ಲಭ್ಯವಾಗಿಸಿ,ಅಂತರ್ಜಾಲ ಬಳಕೆಯನ್ನು ಕುಟುಂಬದ ಸದಸ್ಯರೆಲ್ಲ ಜತೆ ಅನುಭವಿಸಲು ಅವಕಾಶ ನೀಡುವ ಯತ್ನಗಳು ಹೆಚ್ಚುತ್ತಿವೆ.ಸಾಮಾಜಿಕ ನೆಟ್ವರ್ಕಿಂಗ್ ಅಂತರ್ಜಾಲ ತಾಣಗಳಾದ ಫೇಸ್‌ಬುಕ್,ಅರ್ಕುಟ್,ಫ್ಲಿಕರ್ ಮುಂತಾದ ತಾಣಗಳಲ್ಲಿ ಜನರು ತಮ್ಮ ಚಿತ್ರಗಳನ್ನು ತಮ್ಮ ಮಿತ್ರರ ಜತೆ ಹಂಚಿಕೊಳ್ಳುತ್ತಾರೆ.ಟಿವಿಯ ಮೂಲಕವೂ ಜನರು ಈ ತಾಣಗಳನ್ನು ಪ್ರವೇಶಿಸಿ,ಚಿತ್ರಗಳನ್ನು ನೋಡಿ ಆನಂದಿಸಲು ಅವಕಾಶವೀಯಲು ವೆರಿಜೋನ್ ಕಂಪೆನಿಯ ಟಿವಿಯಲ್ಲಿ ಸಾಧ್ಯ.ಅದಲ್ಲದೆ ಜನರು ತಾವು ನೋಡುತ್ತಿರುವ ಟಿವಿ ಕಾರ್ಯಕ್ರಮಗಳ ಬಗ್ಗೆ ಪ್ರತಿಕ್ರಿಯೆಯನ್ನು ಈ ತಾಣಗಳಲ್ಲಿ ವ್ಯಕ್ತಪಡಿಸಿದರೆ,ಅದನ್ನು ಟಿವಿಯ ಮೂಲಕವೂ ನೋಡಬಹುದು.ಸ್ಯಾಮ್‌ಸಂಗ್ ಕಂಪೆನಿಯ ಎಲ್ ಇ ಡಿ ಹೈಡೆಫಿನಿಶನ್ ಟಿವಿಗಳಲ್ಲಿ,ಸ್ಕೈಪ್ ತಂತ್ರಾಂಶವನ್ನು ಅಳವಡಿಸಲಾಗಿದೆ.ಹಾಗಾಗಿ ಸ್ಕೈಪ್ ಬಳಕೆದಾರರು,ಟಿವಿಯ ಮೂಲಕ ಅಂತರ್ಜಾಲ ಫೋನ್ ಕರೆಗಳನ್ನು ಮಾಡಲು ಅವಕಾಶ ಸಿಗುತ್ತದೆ.ಇನ್ನೆರಡು ತಿಂಗಳಲ್ಲಿ ಇಂತಹ ಟಿವಿಗಳು ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.  ಮುಂದೆ ಓದಿ »

ವೈಯಕ್ತಿಕ ದ್ವೇಷ ಅಸೂಯೆ ವ್ಯಂಗ್ಯಗಳ ನಡುವೆ ಕಳೆದು ಹೋಗುವ ವಾಸ್ತವಾಂಶಗಳು

ಮಾರ್ಚ್ ೧ ಪ್ರಜಾವಾಣಿ ದಿನಪತ್ರಿಕೆಯ ವಾಚಕರವಾಣಿಯಲ್ಲಿ ಡಾ.ಸಿ.ಪಿಕೆ.ಯವರು ‘ಗೋಹತ್ಯೆ ನಿಷೇದ ಮತ್ತು ಕುವೆಂಪು’ ಎಂಬ ಪತ್ರದಲ್ಲಿ ಕುವೆಂಪು ಅವರ ಲೇಖನದ (ತ್ರಿಕಾಲ ಸಾಹಿತ್ಯ - ಸಕಾಲ ಸಾಹಿತ್ಯ: ಕುವೆಂಪು ಸಮಗ್ರ ಸಾಹಿತ್ಯ ಸಂಪುಟ - ೨, ಹಂಪಿಕನ್ನಡ ವಿಶ್ವವಿದ್ಯಾಲಯ ಪ್ರಕಟಣೆ, ೨೦೦೪. ಪುಟ ೨೬೮-೩೭೪) ಕೆಲವು ಭಾಗಗಳನ್ನು ಉದಾಹರಿಸಿ ಒಂದಷ್ಟು ಸತ್ಯಾಂಶಗಳನ್ನು ತೆರೆದಿಟ್ಟರು.


ಇಲ್ಲಿ ಕುವೆಂಪು ಹೇಳಿರುವ ವಿಷಯದ ಸತ್ಯಾಸತ್ಯತೆ ಮುಖ್ಯವಾಗಬೇಕೆ ಹೊರತು, ಕುವೆಂಪು ಅವರ ವೈಯಕ್ತಿಕ ಬದುಕಾಗಲೀ ವಿಚಾರವಾಗಲೀ ಚರ್ಚೆಯಾಗಬೇಕಿಲ್ಲ ಎಂಬುದನ್ನು ಸಹೃದಯರೆಲ್ಲರೂ ಒಪ್ಪುತ್ತಾರೆ ಎಂಬುದು ನನ್ನ ಅಭಿಪ್ರಾಯ.


ಆದರೆ ಆಗಿದ್ದೇನು?  ಮುಂದೆ ಓದಿ »

ಆಕೆಗೆ ಥ್ಯಾಂಕ್ಸ್ ಹೇಳಿ...ಅಷ್ಟು ಸಾಕು..

ಟಾಮ್್ಬಾಯ್ ಅಂದ್ರೆ ನಿಮಗೆ ಗೊತ್ತು ತಾನೆ? ಗೊತ್ತಿಲ್ಲದಿದ್ದರೆ 'ಕುಚ್ ಕುಚ್ ಹೋತಾ ಹೈ' ಚಿತ್ರದಲ್ಲಿ ಅಂಜಲಿ (ಕಾಜೋಲ್) ಕಥಾಪಾತ್ರವನ್ನು ಒಮ್ಮೆ ನೆನಪಿಸಿಕೊಳ್ಳಿ. ಹುಡುಗಿಯಾಗಿದ್ದರೂ ಹುಡುಗನಿಂತಿರುವ ಚೆಲ್ಲಾಟದ ಹುಡುಗಿ. ಅಂದ್ರೆ 'ಟಾಮ್್ಬಾಯ್್'. ಗಂಡಿನ ತರಾನೇ ವೇಷ ಭೂಷಣ...ಕೂದಲು ಟ್ರಿಮ್ ಮಾಡಿಸಿ, ಜೀನ್ಸ್ ,ಟೀ ಶರ್ಟ್ ಹಾಕಿ ಥೇಟ್ ಹುಡುಗನ ಥರಾನೇ, ಕೆಲವೊಮ್ಮೆ ಹುಡುಗನೋ ಹುಡುಗಿಯೋ ಎಂದು ಸಂಶಯ ಬರುವಷ್ಟರ ಮಟ್ಟಿಗೆ ಡ್ರೆಸ್ ಮಾಡುವ ಹುಡುಗಿಯರನ್ನು 'ಟಾಮ್್ಬಾಯ್್' ಅಂತಾ ಕರೆಯುವುದು ರೂಢಿ. ಕೇವಲ ಹುಡುಗನ ತರಾ ಡ್ರೆಸ್ ಮಾಡುವುದು ಮಾತ್ರವಲ್ಲದೆ ಹುಡುಗರು ಮಾಡುವ ಎಲ್ಲಾ ಸ್ಟಂಟ್್ಗಳನ್ನು ಮಾಡುವ ಮೂಲಕವೂ ಓರ್ವ ಹುಡುಗಿ 'ಹುಡುಗ'ಅಂತಾ ಕರೆಸಿಕೊಳ್ಳುತ್ತಾಳೆ. ನೀನು ನನಗೆ ಮಗಳಾಗಿದ್ದರೂ, ನಮ್ಮ ಪಾಲಿನ 'ಮಗ' ನೀನೇ ಎಂದು ಹೆತ್ತವರು ತಮ್ಮ ಮಗಳಿಗೆ ಹೇಳಿದರೆ ಅವಳಿಗೆ ಸಂತೋಷವಾಗುತ್ತದೆ. ಆದರೆ ಓರ್ವ ಗಂಡಸಿಗೆ ನೀನು 'ಹೆಣ್ಣಿನಂತೆ' ಅಂತಾ ಹೇಳಿ ನೋಡಿ. ಅವನಿಗೆ ಬೇಜಾರಾಗುತ್ತೆ. ಹೆಣ್ಣು ಅಂದರೆ ಅಬಲೆ, ಮೃದು ಮನಸ್ಸಿನವಳು ಅವಳಿಗೆ ತನ್ನನ್ನು ಹೋಲಿಸುವುದೇ?  ಮುಂದೆ ಓದಿ »

ರಾಜಕೀಯದ ಇ೦ದಿನ ಪರಿಸ್ಥಿತಿ....................................

ಇ೦ದಿನ ರಾಜಕೀಯ ವ್ಯವಸ್ಥೆಯ ಬಗ್ಗೆ ಸುಮಾರು ೩ ದಶಕಗಲ ಹಿ೦ದೆ ಹಿ ಮ ನಾಗಯ್ಯ ಅವರು ಬರೆದ ಈ ಅರ್ಥಪೂರ್ಣ ಕೆಳಗಿರುವ ಚುಟುಕ ಇ೦ದಿಗೂ ನಮ್ಮ ರಾಜಕೀಯ ವ್ಯವಸ್ಠೆ ಯನ್ನು ಪ್ರತಿಬಿ೦ಬಿಸುತ್ತದೆ......

ಮತ್ತು ನಮ್ಮ ರಾಜಕಾರಣಿಗಳು ಅದನ್ನು ಕಾರ್ಯರೂಪಕ್ಕೆ ತರಲು ಹಗಲಿರುಳು ಶ್ರಮಿಸುತ್ತಿದ್ದಾರೆ ಅನ್ನಿಸುತ್ತಿಲ್ಲವೆ...??????.........!!!!!!!!

 

ರಾಜಕಾರಣವೆಲ್ಲ ಮೊಸಗಾರಿಕೆಯಾಯ್ತು !

ಸೊಜಿಗದ ಜನಕೆಲ್ಲ ಭೋಗ ಜೀವನವಾಯ್ತು !!

ಮೊಜುಗಾರಿಕೆಯದರ ಜೀವಳವಾಗಿತ್ತು 

ಜೂಜುಕಟ್ಟೆಯದಾಯ್ತು -ಸರ್ವೆಶ್ವರ.

                                   ---ಹಿ ಮ ನಾಗಯ್ಯ

ವಿವಾದ ಸೃಷ್ಟಿಸದಿದ್ದರೆ ತೀವ್ರ ಪ್ರತಿಭಟನೆ :ಬೆದರಿಕೆ

ಮಾಧ್ಯಮದವರು ತಮ್ಮ ಧರ್ಮ ಮರೆಯುತ್ತಿರುವುದರ ವಿರುದ್ಧ ಆಕ್ರೋಶ

ಬೆಂಗಳೂರು, ಮಾ ೩: ಕಳೆದ ಕೆಲವು ವರ್ಷಗಳಿಂದ ರಾಜ್ಯದ ಹಾಗೂ ದೇಶದ ಮಾಧ್ಯಮಗಳಲ್ಲಿ ಜನರ ಭಾವನೆ ಕೆರಳಿಸುವ ವರದಿಗಳು ಪ್ರಕಟವಾಗಿಲ್ಲದಿರುವುದನ್ನು ಖಂಡಿಸಿ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ನಡೆಸುವುದಾಗಿ ಅಖಿಲ ಭಾರತ  ಅಬ್ಬೇಪಾರಿಗಳ ಪರಿಷತ್ (ABAP) ರಾಜ್ಯಾಧ್ಯಕ್ಷ ಮುಸ್ತಫಾ ಠಾಕರೋಲಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.

ರಸ್ತೆಯ ಮಧ್ಯದಲ್ಲಿ ಲಾರಿ ಟೈರಿಗೆ ಬೆಂಕಿ ಹಾಕುವುದರ ಮೂಲಕ ಸುದ್ದಿಗೋಷ್ಟಿ ಉದ್ಘಾಟಿಸಿದ ಮುಸ್ತಫಾ ಮಾಧ್ಯಮಗಳಿಗೆ ಜನರ ಭಾವನೆಗಳ ಬಗ್ಗೆ ಕಾಳಜಿಯಿಲ್ಲ ಎಂದು  ಮುಂದೆ ಓದಿ »

Syndicate content