ನಮಗಾದ ಆಘಾತಗಳನ್ನು ಮತ್ತು ಗಾಯಗಳನ್ನು ತಿರಸ್ಕರಿಸಿದರೆ, ಅವು ತಾವಾಗಿಯೇ ಮಾಯವಾಗುತ್ತವೆ.

— ಮಾರ್ಕಸ್ ಅರಿಲಿಯಸ್, ಗ್ರೀಕರ ದಂಡನಾಯಕ.

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಪುಸ್ತಕ ವಿಮರ್ಶೆ

ಕನ್ನಡದ 100 ಶ್ರೇಷ್ಠ ಸಾಹಿತ್ಯ ಕೃತಿಗಳು

ಕನ್ನಡ ಪಾಕ್ಷಿಕ ’ದ ಸ೦ಡೇ ಇ೦ಡಿಯನ್’ ಪಟ್ಟಿ ಮಾಡಿರುವ ಕನ್ನಡದ 100 ಶ್ರೇಷ್ಠ ಸಾಹಿತ್ಯ ಕೃತಿಗಳ ಪಟ್ಟಿ ಇಲ್ಲಿದೆ. ಈ ಬಾರಿಯ ಕನ್ನಡ ಸಾಹಿತ್ಯ ಸಮ್ಮೇಳನದ ವಿಶೇಷಾ೦ಕದಲ್ಲಿಯ ’ಓದಿನ ಪ್ರೀತಿಗೆ 100 ಹೊತ್ತಗೆ’ ಲೇಖನದಲ್ಲಿ ಕನ್ನಡದಲ್ಲಿ ಪ್ರಕಟವಾಗಿರುವ 100 ಶ್ರೇಷ್ಠ ಪುಸ್ತಕಗಳ ಕಿರು ಪರಿಚಯವಿದೆ.

 

ನನ್ನ ಮದುವೆಗೆ ಬನ್ನಿ

ಪ್ರಿಯರೇ. ನಾನು ಹಲವು ದಿನದಿಂದ ಕೆಲಸದ ಒತ್ತಡದಿಂದ ಸಂಪದದಿಂದ ದೂರವಿದ್ದೆ ಈ ನನ್ನ ಮದುವೆಯ ಆಮಂತ್ರಣದೊಂದಿಗೆ ನಿಮ್ಮೊಂದಿಗೆ ಬೆರೆಯಲು ಬಂದಿದ್ದೇನೆ


"ಜೀವನದ ಪ್ರೀತಿಯನ್ನು ಹಂಚಿಕೊಂಡು,


ಬದುಕಿನ ಹಸಿರು ಉಳಿಸಿಕೊಳ್ಳಲು,


ಸಮಾನ, ಸಹಬಾಳ್ವೆ ಬೆಳಸಿಕೊಳ್ಳಲು,


ಬಾಳ ವನದಲ್ಲಿ ಸಂಭ್ರಮದ ತಂಗಾಳಿಯಾಗಿ,


ಬರುತಿಹ ನನ್ನ ಬಾಳ ಸಂಗಾತಿ ಮಮತಳೊಂದಿಗೆ


ನಾನು ಮದುವೆ ಎಂಬ ಬಂಧನಕ್ಕೆ


ಸಪ್ತಪದಿ ತುಳಿದು ಅಡಿ ಇಡಲು ನಿಮ್ಮ- ಹಾರೈಕೆಗಾಗಿ


ಕಾದಿರುವೆ, ಬನ್ನಿ ನಮ್ಮಿಬ್ಬರನ್ನು ಹರಸಿ ಹಾರೈಸಿ


                                      ನಿಮ್ಮ ಪ್ರೀತಿಯವ  ಮುಂದೆ ಓದಿ »

ಪುಸ್ತಕಗಳ ಬಿಡುಗಡೆ ಸಮಾರಂಭ....

ನಿನ್ನೆ ೩೧ನೇ ಜನವರಿಯಂದು ಶ್ರೀ ನಾಗೇಶ ಹೆಗಡೆಯವರ ಆರು ಪುಸ್ತಕಗಳ ಬಿಡುಗಡೆ ಸಮಾರಂಭ ನಡೆಯಿತು.  ಅದರಲ್ಲಿ ಮೂರು ಪುಸ್ತಕಗಳು ’ಪ್ರತಿದಿನ ಪರಿಸರ ದಿನ’, ’ಇರುವುದೊಂದೇ ಭೂಮಿ’ ಮತ್ತು ’ಸುರಿಹೊಂಡ ಭರತ ಖಂಡ’ ಅಂಕಿತ ಪ್ರಕಾಶನದಿಂದ ಮರು ಮುದ್ರಣಗೊಂಡವು.  ಹೊಸದಾದ ಮೂರು ಪುಸ್ತಕಗಳು "ಅಭಿವೃದ್ಧಿಯ ಅಂಧಯುಗ", "ಟಿಪ್ಪು ಖಡ್ಗದ ನ್ಯಾನೋ ಕಾರ್ಬನ್" ಮತ್ತು "ಕೊಪೇನ್ ಹೇಗನ್ ಋತು ಸಂಹಾರ" ಭೂಮಿ ಬುಕ್ಸ್ ಪ್ರಕಾಶನದ ಮೊಟ್ಟ ಮೊದಲ ಪುಸ್ತಕಗಳು..  ಮುಂದೆ ಓದಿ »

ಪಂಪ ಮಹಾಕವಿಯ "ಆದಿ ಪುರಾಣ"ದ PDF ಬೇಕಾಗಿದೆ. ಸಂಪದ ಬಳಗದಲ್ಲಿ ಯಾರಿಗಾದರೂ ಸಹಾಯ ಮಾಡಲಾಗುತ್ತದೆಯೇ?

ಸ್ನೇಹಿತರೆ,

ಪ್ರೊಫೆಸರ್ ಅಶ್ವತ್ಥನಾರಾಯಣ ಹಾಗೂ ಅವರ ಶ್ರೀಮತಿ ಈಗ ನಮ್ಮ (Columbia, Maryland)  ಊರಿಗೆ ಬಂದಿದ್ದಾರೆ.  ನಮ್ಮ ಮನೆಯಲ್ಲಿ ಜನವರಿ ೨ನೆ ತಾರೀಖು  ಅವರಿಬ್ಬರೊಂದಿಗೆ   'ಸಾಹಿತ್ಯ-ಸಂವಾದ'  ಆಯೋಜಿಸಿದ್ದೀವಿ. ಸಂವಾದದ ಒಂದು ವಿಷಯ ಪಂಪ ಮಹಾಕವಿಯ 'ಆದಿ ಪುರಾಣ'.   ಇದರ Tiff ಆವೃತ್ತಿ DLI ನಲ್ಲಿ ಇದೆಯಾದರೂ linux ಇಲ್ಲದ ಕಾರಣ ನನಗೆ ಅದನ್ನು PDF ಗೆ ಬದಲಾಯಿಸಲು ಸಾಧ್ಯವಾಗ್ತಿಲ್ಲ.  ಇದರಲ್ಲಿನ ಕೆಲವು ಪದ್ಯಗಳನ್ನು ಪ್ರಿಂಟ್ ಮಾಡಿ ಸಂವಾದಿಗರಿಗೆ ಹಂಚುವ ಯೋಚನೆ ಇದೆ. ನಿಮ್ಮಲ್ಲಿ ಯಾರಿಗಾದರೂ ಇದನ್ನು pdf ಮಾಡಿ ಗೂಗಲ್ ಡಾಕ್ಸ್ ಗೆ ಹಾಕಿ ನನಗೆ ಅದರ access ಕಳಿಸಲು ಸಾಧ್ಯವೇ? 


ನನ್ನ ಮಿಂಚಂಚೆ : banavathi at hotmail.com
ಧನ್ಯವಾದಗಳು

 ಶಾಮಲ

ತಮಿಳು ತಲೆಗಳ ನಡುವೆ!

ಬಿ.ಜಿ.ಎಲ್.ಸ್ವಾಮಿಯರ"ತಮಿಳು ತಲೆಗಳ ನಡುವೆ’ ತಮಿಳರ ಭಾಷಾದುರಭಿಮಾನದ ಬಗ್ಗೆ ವಿವರಿಸುವ ರೀತಿ

ಅನನ್ಯವಾದದ್ದು. ಇದರಲ್ಲಿ ಬರುವ ಸ್ವಾರಸ್ಯಕರ ಸಂಗತಿಗಳು, ಸಂಭಾಷಣೆಗಳು ನಗೆಯುಕ್ಕಿಸುತ್ತವೆ.

ಒಂದೊಂದು ಅಧ್ಯಾಯಕ್ಕಿರುವ ಹೆಸರುಗಳೇ ಕುತೂಹಲಕರವಾಗಿದ್ದು ಓದುಗರನ್ನು ಸೆಳೆಯುತ್ತದೆ.

(ಉ.ದಾ-ಮಂಗಮಾಯಕಲೆ)

ತಮಿಳರ ಉಚ್ಚಾರಣಾ ಶೈಲಿ, ಸೀಮಿತ ಅಕ್ಷರಗಳಿಂದುಂಟಾಗುವ ಪ್ರಮಾದಗಳನ್ನು ಚೆನ್ನಾಗಿ ವಿವರಿಸಿದ್ದಾರೆ.

ತಮಿಳಿನಲ್ಲೇ ಎಲ್ಲದರ ಮೂಲವನ್ನು ಹುಡುಕುವ ಮತ್ತು ಅದರ ಪ್ರಾಚೀನತೆಯ ಕುರಿತಾದ ತಮಿಳರ ಭ್ರಮೆಗಳನ್ನು ಸ್ವಾಮಿಯವರು ಸಾಧಾರವಾಗಿ ನಮ್ಮೆದುರು ತೆರೆದಿಡುತ್ತಾರೆ.

ವೀರ ತಮಿಳರು ವಿಶ್ವವಿದ್ಯಾಲಯಗಳಲ್ಲಿ ಸುಲಭವಾಗಿ p.h.d ಪಡೆಯುವ ರೀತಿ ಅದರ ವಿಷಯಗಳು

ಎಲ್ಲ  ಬಹಳ ಚೆನ್ನಾಗಿದ್ದು ಒಮ್ಮೆ ಹಿಡಿದರೆ ಪೂರ್ತಿ ಓದಿ ಮುಗಿಸುವಂತಹ ಹೊತ್ತಗೆ.

ಕನ್ನಡಿಗರೆಲ್ಲರೂ ಓದಬೇಕಾದ ಪುಸ್ತಕ. ತಮಿಳರಿಗೆ ಹೋಲಿಸಿದರೆ ನಮಗೆ ಭಾಷಾಭಿಮಾನವೇ

ಇಲ್ಲವೇನೋ ಅನ್ನಿಸುತ್ತೆ!



"ಗುರ್ತ" ಹಿಡಿದ ಜೋಶಿಯವರು

ವಾ ಬರಿ ತೂಂಡಲಾ ಅಂಚಿಂಚಿ
ಮೂಡಾಯಿ ಪಡ್ಡಾಯಿ ಆದ್
ಬಡಕಾಯಿ ತೆಂಕಾಯಿ
ಮಾತ ಕೋಡಿಡ್‌ಲ
ಬೊಲ್ಪಿಜ್ಜಿ ಉಲ್ಲಾಸ ಇಜ್ಜಿ
ಪುರ್ಕಾಸ್ ಮಾಯಕ
ಮರಕ್ಕುಲು ಮಾತ ಮರಕಟ್ಟದ್ ಕುತ್ತ
ದುಂಪೋವರ್ಲತ್ತ್ ಉಂತರ್ಲತ್ತ್
ಮಿತ್ತ್‌ದ ತಿರ್ತ್ ಆತ್ಂಡ್
ತಿರ್ತಿಪ್ಪೊಡಾಯಿನ ಮಿತ್ತ್ ಕುಲ್ಲುದುಂಡು
ಎಲಕತೆನೆ!
ಭವುಶ್ಯ ಆಯೆ ಬರ್ಯೆರೆ ದುಂಬು
ಒರ ಇಂಚ ಮಾತ
ಉಪ್ರಾಟಿ ಆಪುಂಡಾ ದಾನ್ನ!  ಮುಂದೆ ಓದಿ »

ಚ.ಹ.ರಘುನಾಥರ 'ರಾಗಿಮುದ್ದೆ'-ದೇಸೀತನದ ಘಮಲಿಗೆ ಆಧುನಿಕತೆಯ ಬಡಿವಾರದ ಬೆಡಗು

ದೇಸೀತನದ ಘಮಲಿಗೆ ಆಧುನಿಕತೆಯ ಬಡಿವಾರ

ಚ. ಹ. ರಘುನಾಥರ ಬಿಡಿ ಬರಹಗಳನ್ನು ಓದಿದಾಗೆಲ್ಲಾ ಅವರೊಬ್ಬ ಸಾಹಿತ್ಯದ ವಿನಮ್ರ ವಿದ್ಯಾರ್ಥಿಯೆಂದು ಮತ್ತೆ ಮತ್ತೆ ಮನದಟ್ಟಾಗುತ್ತದೆ. ಸೂಕ್ಷ್ಮ ಮನಸ್ಸಿನ ಅಂತರ್ಮುಖೀ ವ್ಯಕ್ತಿತ್ವವೊಂದು ಸುತ್ತಣ ವಿವರಗಳನ್ನು, ಘಟನೆಗಳನ್ನು ಗಮನಿಸಿದ, ಗ್ರಹಿಸಿದ ಮತ್ತವುಗಳನ್ನು ಅತಿ ವಿಶಿಷ್ಟತೆಯಿಂದ ಬರಹಗಳನ್ನಾಗಿಸುವ ಕಲೆ ಅವರಿಗೆ ಸಿದ್ಧಿಸಿದೆ. ಈಗಾಗಲೇ ಕವಿಯಾಗಿ, ಕಥೆಗಾರನಾಗಿ ಹೊಸ ಪೀಳಿಗೆಯ ಲೇಖಕರ ನಡುವೆ ತಮ್ಮದೇ ಛಾಪನ್ನಿರಿಸಿಕೊಂಡಿರುವ ರಘುನಾಥರ ಪ್ರಬಂಧ ಸಂಕಲನ " ರಾಗಿಮುದ್ದೆ" ದೇಸೀತನದ ಘಮಲನ್ನು ನೆನಪಿಸುತ್ತಲೇ ಆಧುನಿಕ ಬಡಿವಾರಗಳನ್ನು ಅಣಕಿಸುತ್ತದೆ, ವಿಮರ್ಶಿಸುತ್ತದೆ.

ಆತ್ಮೀಯತೆಯಿಂದ ನೇರವಾಗಿ ಸಹಜವಾಗಿ ಸಂಕೋಚಗಳಿಲ್ಲದೆ ತಮಗನಿಸಿದ್ದನ್ನು ದಿಟವಾಗಿ ಹೇಳುವುದು ಈ ಎಲ್ಲಾ ಪ್ರಬಂಧಗಳ ಮೂಲ ಗುಣ. ಗ್ರಾಮೀಣ ಬದುಕನ್ನು ಚಿತ್ರಿಸುತ್ತಲೇ ನಗರ ಜೀವನದ ತಲ್ಲಣಗಳನ್ನು ತೆರೆದಿಡುವ ರಘುನಾಥರ ಶೈಲಿ ಪ್ರಿಯವಾಗುತ್ತದೆ. ಸೂಕ್ಷ್ಮ ಮನಸ್ಸೊಂದು ಬದುಕನ್ನು ಅರಿಯುವ ಪ್ರಯತ್ನ ಇಲ್ಲಿನ ಪ್ರಬಂಧಗಳಲ್ಲಿ ಢಾಳಾಗಿದೆ. ಲೇಖಕನ ಸ್ವಂತ ಅನುಭವದ ಸ್ಪರ್ಶ ಈರೀತಿಯ ಬರಹಗಳಲ್ಲಿಲ್ಲದೇ ಹೋದಲ್ಲಿ ಅವು ಹೈಸ್ಕೂಲಿನ ಚರ್ಚಾಸ್ಪರ್ಧೆಯ ಭಾಷಣಗಳಾಗಿಬಿಡುತ್ತವೆ ಎನ್ನುವ ಅರಿವು ಅವರಿಗೆ ಗೊತ್ತಿದೆ. ಹಾಗಾಗಿಯೆ "ಅಧರಂ ಮಧುರಂ" ನಂತಹ ಕಾಮನ್ ಹ್ಯಾಂಗೋವರ್‌ನಲ್ಲಿ ಮಿಡಿಯುತ್ತಲೇ ಅಮೆಝಾನ್ ಕಾಡುಗಳಲ್ಲೂ ಹಲ್ಲು ತೊಳೆಸಿಕೊಳ್ಳಬಲ್ಲರು! ಮುಂಜಾನೆಯ "ಯಾತ್ರೆ" ಯ ಚಿತ್ರಗಳನ್ನು ಕಣ್ಮುಂದೆ ನಿಲ್ಲಿಸಬಲ್ಲಂತೆಯೇ ಚಂದಿರನನ್ನು ಕಂಬ ಕಂಬಗಳಿಗೆ ನೇಣು ಹಾಕಬಲ್ಲರು. ಜಾತ್ರೆಯ ಕಾಮನಬಿಲ್ಲು ಬಿಡಿಸಿಡುತ್ತಲೇ ಗುಬ್ಬಿಗಳಿಗೆ ಮನೆಯನ್ನೂ ಕಟ್ಟಿಕೊಡಬಲ್ಲವರು-ಚ.ಹ.ರಘುನಾಧ.  ಮುಂದೆ ಓದಿ »

'ಯೇಗ್ದಾಗೆಲ್ಲಾ ಐತೆ' --ನೆಚ್ಚು ಮೂಡಿದ ಬಗೆ

'ಬೆಳಗೆರೆ ಕೃಷ್ಣಶಾಸ್ತ್ರಿ'ಗಳು ಬರೆದಿರುವ ಅವರ ಸ್ವಾನುಭವದ ಒಂದು ಕಥನ- 'ಯೇಗ್ದಾಗೆಲ್ಲಾ ಐತೆ'. 'ಮುಕುಂದೂರು ಸ್ವಾಮಿ'ಗಳ ನಿತ್ಯ ಜೀವನದ ತಂತುಗಳನ್ನು ತಮ್ಮ ಅನುಭವಗಳೊಂದಿಗೆ ಹೇಳುತ್ತಾ ಹೋಗುವ ರೀತಿ ನಿಜಕ್ಕೂ ಅಪ್ಯಾಯಮಾನವಾದುದು. ಕನ್ನಡ ಆಧ್ಯಾತ್ಮಿಕ ರಂಗದಲ್ಲಿ ತಮ್ಮದೇ ಆದ ಸ್ಥಾನವನ್ನು ಹೊಂದಿರುವ ಕೃಷ್ಣಶಾಸ್ತ್ರಿಗಳು ಪ್ರಸ್ತುತ ಬರಹದಲ್ಲಿ ಯಾವುದೋ ಒಂದು ಅರಿಯದ ಲೋಕಕ್ಕೆ ನಮ್ಮನ್ನು ಕರೆದುಕೊಂಡುಹೋಗುತ್ತಾರೆ. ಈ ಅನುಭವವನ್ನು ಪಡೆಯಲೋಸುಗವಾದರೂ ಪ್ರತಿಯೊಬ್ಬರೂ ಇದನ್ನು ಓದಲೇಬೇಕಿದೆ.

ನಾನು 'ಅಶಿಸ್ತಿನಿಂದ ಬದುಕಿರಿ ಆರೋಗ್ಯವಾಗಿರಿ' ಎಂಬ ಪುಸ್ತಕವನ್ನು ಓದುವಾಗ ಕೃಷ್ಣಶಾಸ್ತ್ರಿಗಳ 'ಯೇಗ್ದಾಗೆಲ್ಲಾ ಐತೆ' ಪುಸ್ತಕದ ಬಗೆಗೆ ಉಲ್ಲೇಖವಿದುದ್ದನು ಕಂಡು ಮನೆಯಲ್ಲಿಯೇ ಇದ್ದೂ ನಾನಿನ್ನು ಓದದಿದ್ದ ಪುಸ್ತಕದ ಬಗೆಗೆ ಗಮನ ಹರಿಯಿತು.ಮುಂಜಾನೆ ಓದಲು ಕುಳಿತವಳಿಗೆ ಅದನ್ನು ಓದಿ ಮುಗಿಸುವವರೆಗೂ ಯಾವುದೇ ವಿಷಯದ ಮೇಲೂ ಗಮನವಿಲ್ಲದ್ದಂತು ನಿಜ. ನನ್ನ ಕೈಲಿದ್ದದ್ದು 2007ರಲ್ಲಿ 7ನೆಯ ಮುದ್ರಣವನ್ನು ಕಂಡಿದ್ದ ಪುಸ್ತಕ. 1994ರಿಂದ 2007ರ ಅಂತರದಲ್ಲಿ 7 ಮುದ್ರಣಗಳನ್ನು ಕಂಡಿರುವ ಇದರ ಪ್ರಾಮುಖ್ಯವನ್ನು ನಾವು ಓದಿಯೇ ಅರಿಯಬೇಕು.  ಮುಂದೆ ಓದಿ »

Syndicate content