ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ

ಉ: Brahmins for Dummies

July 26, 2007 - 5:42pm — kpbolumbu

ಉ: Brahmins for Dummies

kpbolumbu's picture

"ನಾನು ಯಾವ ಪ್ರಶ್ನೆಯನ್ನೂ ಕೇಳಿಲ್ಲ ಸ್ವಾಮಿ." 'ಯಾವುದರ ಪ್ರಯೋಜನ' ಎಂಬ ಪ್ರಶ್ನೆಯನ್ನು ತಾವು ಕೇಳಿದ್ದೀರಿ.
ತಮಗೆ ಆ ಲಿಂಕ್ ಮುಖ್ಯವಾಗಿರಲಿಲ್ಲ, ಆದರೆ ಅಲ್ಲಿ ಇರುವ ವಿಚಾರಗಳನ್ನು ನೋಡಿದರೆ.....ತಮ್ಮ ಕಾಣ್ಕೆಗೆ (ಒಬ್ಸರ್ವೇಷನ್) ಸಂಬಂಧಪಟ್ಟವುಗಳೇ ಆಗಿವೆ.
೧."ಇವತ್ತಿನ ಸಮಾಜದ ಎಲ್ಲ ದುಷ್ಟತನ, ದೌರ್ಜನ್ಯ, ಶ್ರೇಣೀಕೃತ ವ್ಯವಸ್ಥೆಗೆ ಬ್ರಾಹ್ಮಣರೇ ಕಾರಣ! ಶತಶತಮಾನಗಳಿಂದ ಬ್ರಾಹ್ಮಣರು ನಮ್ಮನ್ನು ಶೋಷಿಸುತ್ತ ಬಂದಿದ್ದಾರೆ.. ’ ಅಂದರು. ಕೇಳಿಸಿಕೊಂಡವರು ಚಪ್ಪಾಳೆ ಹೊಡೆದರು. "
೨."ಬ್ರಾಹ್ಮಣ ಮತ್ತು ಬ್ರಾಹ್ಮಣ್ಯಗಳೆರಡೂ ನಮ್ಮ ಕ್ರಾಂತಿಕಾರಿಗಳ ಕಣ್ಣಿಗೆ ಎಲ್ಲ ಶತಮಾನಗಳಲ್ಲೂ ಅಪಾಯಕಾರಿಗಳಾಗಿ, ಶೋಷಣೆ ಮಾಡುವವರಾಗಿ, ಯಾವತ್ತೂ ಕೈಗೆ ಸಿಕ್ಕರೂ ಒದೆಯ ಬೇಕಾದವರಾಗಿ ಕಾಣಿಸಿದರು."-ರವಿ ಬೆಳಗೆರೆ

"ಬ್ರಾಹ್ಮಣರು ಜಾತಿ ಪದ್ಧತಿಯನ್ನು ನಿರ್ಮಿಸಿದರೆಂದು ಇತಿಹಾಸ ಸಮಾಜಶಾಸ್ತ್ರಗಳಲ್ಲಿ ನಿರಕ್ಷರಿಗಳಾದವರು ಮಾತ್ರ ನಂಬಬಹುದು. ಜಾತಿಗಳು ನಿರ್ಮಾಣವಾದದ್ದು ಐತಿಹಾಸಿಕ ಒತ್ತಡಗಳಿಂದ; ಭಾರತದ ವಿಶಿಷ್ಟ ಭೌಗೋಲಿಕ ಪರಿಸರದಿಂದಾಗಿ ಅದು ಗಟ್ಟಿಯಾಯಿತು. ಯೂರೋಪ್ ಅಥವಾ ಪಶ್ಚಿಮ ಏಶಿಯಾದಲ್ಲಿ ಎದ್ದಂಥ ಜನಾಂಗಗಳ ಒತ್ತಡ, ದಂಡಯಾತ್ರೆಗಳು ಇಲ್ಲಿ ಎದ್ದು ನಿಂತ ನೀರಿನ ಕಟ್ಟೆಯೊಡೆದು ಬಿಡಲಿಲ್ಲವಾಗಿ ಅದು ಸ್ಥಿರವಾಯಿತು. ರೋಮನ್ ಇತಿಹಾಸದಲ್ಲಿ ಆಢ್ಯರಿಗೂ ಪ್ಲೆಬ್(ಸಾಮಾನ್ಯ) ರಿಗೂ ಗಂಭೀರ ಕಲಹಗಳಾದಂತೆ ಇಲ್ಲಿ ಮೇಲ್ಜಾತಿಗಳವರಿಗೂ ಶೂದ್ರರಿಗೂ ಹೋರಾಟವಾಗಲಿಲ್ಲ. ಇದಕ್ಕೆಲ್ಲಾ ಬ್ರಾಹ್ಮಣರು ಕಾರಣವೆಂದು ಹೇಳುವುದಾದರೆ ಬ್ರಾಹ್ಮಣರು ಅತಿಮಾನುಷ ಬುದ್ಧಿಬಲದಿಂದ ಸಾವಿರಾರು ವರ್ಷಗಳಿಗಾಗಿ ಯಶಸ್ವಿ ಯೋಜನೆ ಹಾಕಿದರೆಂದು ಒಪ್ಪಬೇಕಾಗುತ್ತದೆ. ಅಂಥ ಅತಿಮಾನುಷ ಬುದ್ಧಿಶಕ್ತಿ ಬ್ರಾಹ್ಮಣರಿಗಿತ್ತೆಂದು ಯಾರೂ ನಂಬುವಂತಿಲ್ಲ. ನಿಜವಾಗಿ ನಡೆದದ್ದೆಂದರೆ ಶತಮಾನಗಳ ಕಾಲ ನಡೆದು ಬಂದ ಸಂಪ್ರದಾಯಕ್ಕೆ ಬ್ರಾಹ್ಮಣ ಶಾಸ್ತ್ರಕಾರರು ಶಾಸ್ತ್ರಮುದ್ರೆ ಒತ್ತಿದರಷ್ಟೇ. ಆಗಿನ ಎಲ್ಲಾ ಅರ್ಥವಂತ ವರ್ಗಗಳಿಗೂ ಅದು ಅನುಕೂಲವಿದ್ದುದರಿಂದ ಈ ಶಾಸ್ತ್ರಮುದ್ರೆ ಒತ್ತಲು ಸಾಧ್ಯವಾಯಿತೆಂದು ತೋರುತ್ತದೆ. ಪೌರೋಹಿತ್ಯದಿಂದ ಜೀವಿಸುವ ವರ್ಗಕ್ಕೆ ಯಜಮಾನ ಜಾತಿಗಳ ಬೆಂಬಲವಿಲ್ಲದಿದ್ದರೆ ಇದು ಆಗುತ್ತಲೂ ಇರಲಿಲ್ಲ."-ಪಾವೆಂ.

"ಅವರ ಯೋಚನೆಗಳು ಇಲ್ಲಿ ಪ್ರಸ್ತುತವಲ್ಲ." ನೀವು ಬರೆದಿರುವ ವಿಚಾರಗಳ ಹಿನ್ನೆಲೆಯಲ್ಲಿ ಕಂಡಿತ ಅವು ಪ್ರಸ್ತುತವೇ ಆಗಿವೆ. ('ಖಂಡಿತ'ವಲ್ಲ, ಅದರ ಅರ್ಥ ತುಂಡರಿಸಲ್ಪಟ್ಟ ಎಂದು. 'ಖಂಡಿತ'ವಲ್ಲವೇ ಎಂಬ ಸಂದೇಹ ಕೆಲವರಿಗಾದರೂ ಬರಬಹುದು) ಯಾಕೆಂದರೆ "ಈ ದೇಶದಲ್ಲಿ ಜಾತಿ ಪದ್ಧತಿಯನ್ನು ಎತ್ತಿ ಹಿಡಿದವರು ಬ್ರಾಹ್ಮಣರು ಮಾತ್ರ ಎಂಬ ರೀತಿಯಲ್ಲಿ ನಮ್ಮ ಇತಿಹಾಸವನ್ನು ಬರೆಯಲಾಗುತ್ತಿದೆ..."ಎನ್ನುತ್ತಾರೆ. ತಮ್ಮ ಲೇಖನದಲ್ಲೂ "ಹಿಂದೆ ಜಾತಿ ಪದ್ಧತಿಯನ್ನು ನಿಯಂತ್ರಿಸುವ ಬಲವಿದ್ದಾಗ ನಾವು ಮಿಕ್ಕವರನ್ನು, ಅವರ ಯೋಚನಾಲಹರಿಯನ್ನು ನಮ್ಮ ಹತೋಟಿಯಲ್ಲಿಟ್ಟುಕೊಂಡಿದ್ದೆವಂತೆ. ಕ್ಷತ್ರಿಯರಂತಲ್ಲದಿದ್ದರೂ, ತಕ್ಕಮಟ್ಟಿಗೆ ಕ್ರೌರ್ಯವನ್ನು ಪ್ರದರ್ಶಿಸುವ, ಇತರರಿಂದ ನಮ್ಮ ಕೆಲಸವನ್ನು ಮಾಡಿಸಿಕೊಳ್ಳುವ ಯುಕ್ತಿ ನಮಗಿತ್ತಂತೆ...." ಎಂದಿದ್ದೀರಿ.factಗಳ ಬಗ್ಗೆ ಬರೆಯುವಾಗ ".... for Dummies" ಸೀರೀಸಿನ ಪುಸ್ತಕಗಳಲ್ಲಿ ನಂಬಿಕೆಯ ಆಧಾರದಲ್ಲಿ ಬರೆಯುತ್ತಾರೋ?

ಕೆಲವು ವರ್ಷಗಳ ಹಿಂದೆ 'ನೆಗ್ಗಿಲು ಎಂದರೇನು' ಎಂಬ ವಿಚಾರವಾಗಿ ವಿವಾದವೆದ್ದಿತ್ತಂತೆ. ಆಗ ಯಾರೋ 'ನೆಗ್ಗಿಲು ಎಂದರೆ ಬ್ರಾಹ್ಮಣರು' ಎಂದಿದ್ದರಂತೆ. ಅಲ್ಲ, ಅದೊಂದು ಜಾತಿಯ ಮುಳ್ಳು ಎಂಬ ಪಂಡಿತರ ಉತ್ತರಕ್ಕೆ 'ಅದನ್ನೇ ನಾನೂ ಹೇಳಿದ್ದು,ನೆಗ್ಗಿಲು ಮುಳ್ಳೆಂದರೆ ಬ್ರಾಹ್ಮಣರು' ಎಂದು ವಾದಿಸುತ್ತಿದ್ದರಂತೆ. 'ನೆಗ್ಗಿಲು ಎಂದರೇನು' ಎಂಬ ಪ್ರಶ್ನೆಯನ್ನು ಎತ್ತಿದವರು ಯಾರು ಮತ್ತು ಇದಕ್ಕೆ ಉತ್ತರಿಸಿದವರು ಯಾರು ಎಂಬ ಬಗ್ಗೆ ನನಗೆ ಮಾಹಿತಿ ಸಿಗಲಿಲ್ಲ. ಅವರೂ ತಮ್ಮ ವಾದವನ್ನು ಬ್ರಾಹ್ಮಣ್ಯದ ಬಗ್ಗೆ ವಿಶಿಷ್ಟ ವ್ಯಾಖ್ಯಾನವೆಂದು ಕರೆದಿರಬಹುದಾದ ಸಾಧ್ಯತೆಗಳಿವೆ.

ನಿಮಗೆ "ಬ್ರಾಹ್ಮಣರ ಒಗ್ಗಟ್ಟು" ಒಂದು ಆದರ್ಶವೋ ಅಲ್ಲವೋ ಎಂಬ ಬಗ್ಗೆ ಮತ್ತು ಅದರ ಬಗ್ಗೆ ನನ್ನ ಉತ್ಸಾಹದ ಬಗ್ಗೆ....
ನೀವು 'ನಾನೊಬ್ಬ ಬ್ರಾಹ್ಮಣ' ಎನ್ನುತ್ತೀರಿ, ಹಾಗಿದ್ದ ಮೇಲೆ ಬ್ರಾಹ್ಮಣರಲ್ಲಿ ಒಗ್ಗಟ್ಟಿನ ಕೊರತೆಯನ್ನು ನೀಗಿಸುವ/ಸುಧಾರಿಸುವ ಬಗ್ಗೆ ನಿಮ್ಮ ಸಲಹೆಗಳನ್ನೂ ಹೇಳಬೇಕಾಗುತ್ತದೆ.ಸಮಸ್ಯೆಯನ್ನು ಗುರುತಿಸುವವರಿಗೆ ಅದಕ್ಕೆ ಪರಿಹಾರ ಸೂಚಿಸುವ ಹೊಣೆಗಾರಿಕೆಯಿಲ್ಲವೇ...

"ಸಮಾಜದಲ್ಲಿ ಯಾವುದೇ ಚರ್ಚೆ, ವಾದವಿವಾದ ನಡೆದರೂ, ಗೆಲ್ಲುವುದು/ಸೋಲುವುದು ಬ್ರಾಹ್ಮಣನೇ. ಖ್ಯಾತನೋ ಕುಖ್ಯಾತನೋ.. ಅವ ಬ್ರಾಹ್ಮಣನಾಗಿದ್ದರೆ ನಮಗೆ ನೆಮ್ಮದಿ."
ಬಂಜಗೆರೆ ವಿವಾದದಲ್ಲಿ ವಿವಾದದ ಕೇಂದ್ರಬಿಂದುವಾಗಿದ್ದುದು ಬಸವಣ್ಣ ಬ್ರಾಹ್ಮಣನೋ ಅಲ್ಲವೋ ಎಂಬುದಲ್ಲ, ಅವರು ವಾಮಾಚಾರದ ಮೂಲಕ ಹುಟ್ಟಿದರು ಎಂದಿರುವುದು.

ಇಲ್ಲಿ ನಾನು ಹೇಳಬೇಕಾಗಿದ್ದುದು:
೧.ನನ್ನ ಅಭಿಪ್ರಾಯದಲ್ಲಿ ವೇದ ಮಂತ್ರಗಳು ನಿರ್ದಿಷ್ಟ ಅರ್ಥದಲ್ಲೇ ರಚನೆಗೊಂಡಿವೆ, ಆದರೆ ಅವು(ಪರಸ್ಪರ ವಿರುದ್ಧ ಸಂದರ್ಭಗಳಲ್ಲಿ ಬಳಸಿಕೊಳ್ಳುವಿಕೆ) ವ್ಯಕ್ತಿಗಳ ವೈರುಧ್ಯವನ್ನು ಸೂಚಿಸಬೇಕೇ ಹೊರತು ವೇದಗಳ ವೈರುಧ್ಯವನ್ನಲ್ಲ.
ಉದಾ: "ಆನೋ ಭದ್ರಾ: ಕ್ರತವೋ ಯಂತು ವಿಶ್ವತ:".
ಈ ಋಗ್ವೇದ ಮಂತ್ರಕ್ಕೆ ನಾನು ತಿಳಿದಂತೆ ಒಂದೇ ಅರ್ಥವಿದೆ, ಅದು " ಒಳ್ಳೆಯ ವಿಚಾರಗಳು ಜಗತ್ತಿನ ಎಲ್ಲೆಡೆಯಿಂದ ನಮ್ಮತ್ತ ಬರಲಿ" ಎಂಬುದಾಗಿದೆ.'ಒಳ್ಳೆಯ ವಿಚಾರ' ಯಾವುದು ಎಂದು ಕೇಳುವುದಾದರೆ ಅದು ವ್ಯಕ್ತಿಗಳಲ್ಲಿರುವ ಭಿನ್ನಾಭಿಪ್ರಾಯಗಳನ್ನು ಸೂಚಿಸುತ್ತದೆ.
ಇರಲಿ, ತಮಗೆ ತಿಳಿದಿರುವ ಶ್ಲೇಷಾರ್ಥವನ್ನು ಸೂಚಿಸುವ ಯಾವುದಾದರೂ ಒಂದು ವೇದಮಂತ್ರದ ಉದಾಹರಣೆ ಕೊಡಿ. ಇಷ್ಟಕ್ಕೂ ವೇದಗಳು ಬ್ರಾಹ್ಮಣರ ಆಸ್ತಿಯಲ್ಲ, ಎಲ್ಲ ಭಾರತೀಯರಿಗೂ ಸೇರಿದ್ದು. ತಮಗೂ ತಿಳಿದಿರುವಂತೆ ಇಂದಿನ ದಿನಗಳಲ್ಲಿ ವೇದಾಧ್ಯಯನವನ್ನು ಮಾಡಲು ಬ್ರಾಹ್ಮಣನಾಗಿ ಹುಟ್ಟಬೇಕಾಗಿಲ್ಲ.
೨.ಹೀಗೆ ಬ್ರಾಹ್ಮಣರನ್ನು generalize ಮಾಡುವ ಧಾಟಿಯ ಲೇಖನವನ್ನು ಬರೆಯುವ ಹಲವರು ಹಿಂದೆ ಆಗಿಹೋದ ಅನಾಚಾರಗಳ ಯಾರಾದರೂ ಕುರಿತಾಗಿ ಬರೆದರೆ ಅವರದ್ದು 'ದ್ವೇಷ ಪೂರಿತ ಮನಸ್ಸು' ಎನ್ನುತ್ತಾರೆ.
೩."ಈ ವ್ಯವಸ್ಥೆಯಿಂದ ಬ್ರಾಹ್ಮಣರು ಇತರರನ್ನು ಶೋಷಿಸಿ ತಾವು ಲಾಭ ಮಾಡಿಕೊಂಡರೆಂಬುದೂ ಸರಿಯಲ್ಲ." -ಪಾವೆಂ.
ದಕ್ಷಿಣಕನ್ನಡದಲ್ಲಿ ಹವ್ಯಕರು ಬಂಟ ಭೂಮಾಲಿಕರ ಒಕ್ಕಲುಗಳಾಗಿಯೂ ಜೀವಿಸುತ್ತಿದ್ದ ಉದಾಹರಣೆಗಳಿವೆ.
೪.“ಬ್ರಾಹ್ಮಣರಿಗೆ ಆಸ್ತಿ ಕಡಿಮೆ ಇತ್ತು ಮತ್ತು ಸುಧಾರಣೆಗಳ ನಂತರ ಇನ್ನೂ ಕಡಿಮೆಯಾಯಿತು.” ಎಂಬ ಅಂಶ ದಶಕಗಳ ಹಿಂದೆಯೇ ಬೆಳಕಿಗೆ ಬಂದಿದೆ. ಇದು ನನ್ನ ಅಭಿಪ್ರಾಯವಲ್ಲ, ಯೋಚಿಸಿ ನೋಡಿದರೆ ಯಾರಿಗೂ ಹೊಳೆಯುವುದು.ಶ್ರೀ ಪಾ.ವೆಂ. ಆಚಾರ್ಯರು ತಮ್ಮ ಲೇಖನದಲ್ಲೂ ಬರೆದಿದ್ದಾರೆ.
೫.ನೀವು ನೀಡಿರುವ ವ್ಯಾಖ್ಯಾನಗಳು ನಿರ್ದಿಷ್ಟವಾದೊಂದು ವಿಚಾರಧಾರೆಯನ್ನು ತಮ್ಮದಾಗಿಸಿಕೊಂಡ ಲೇಖಕರ ಸಾಮಾನ್ಯ ಶೈಲಿಯಾಗಿದೆ.
೬,"ಬ್ರಾಹ್ಮಣರ ಔನ್ನತ್ಯಕ್ಕೆ ಹಾಗು ಮೇಲಿರುವ ಹಲವು ವಿಚಾರಗಳಿಗೆ ................................. ಎಲ್ಲರೂ ಉದಾಹರಣೆಯೇ. ಅದನ್ನು ನಾನು ನಿರಾಕರಿಸುವುದಿಲ್ಲ.." ಇದನ್ನೇ __________ಎಂದು ಕರೆದೆನು. ಆ ಪದದ ಬಳಕೆ ನಿಮಗೂ ಹಿಡಿಸುವುದಿಲ್ಲ.
__________________________________________________________

ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣ ಪ್ರಕಾಶ ಬೊಳುಂಬು

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
Brahmins for Dummies By: ಶ್ಯಾಮ ಕಶ್ಯಪ (35 replies) July 18, 2007 - 5:20pm
  • ಉ: Brahmins for Dummies By: ರಘುನಂದನ (Jul 27 2007 - 11:12pm)
    • ಉ: Brahmins for Dummies By: kpbolumbu (Jul 28 2007 - 4:41pm)
  • ಉ: Brahmins for Dummies By: obba.oduga (Jul 20 2007 - 10:01pm)
    • ಉ: Brahmins for Dummies By: kpbolumbu (Jul 24 2007 - 4:42pm)
      • ಉ: Brahmins for Dummies By: ಶ್ಯಾಮ ಕಶ್ಯಪ (Jul 24 2007 - 6:42pm)
        • ಉ: Brahmins for Dummies By: kpbolumbu (Jul 26 2007 - 5:42pm)
          • ಉ: Brahmins for Dummies By: Sunil Jayaprakash (Jul 26 2007 - 7:00pm)
            • ಉ: Brahmins for Dummies By: mahesha (Jul 27 2007 - 1:59pm)
              • ಉ: Brahmins for Dummies By: kpbolumbu (Jul 27 2007 - 4:07pm)
                • ಉ: Brahmins for Dummies By: mahesha (Jul 27 2007 - 4:36pm)
            • ಉ: By: kpbolumbu (Jul 27 2007 - 1:35pm)
            • ಉ: Brahmins for Dummies By: mahesha (Jul 26 2007 - 8:28pm)
              • ಉ: Brahmins for Dummies By: Sunil Jayaprakash (Jul 26 2007 - 11:03pm)
                • ಉ: Brahmins for Dummies By: mahesha (Jul 27 2007 - 9:50am)
                  • ಉ: Brahmins for Dummies By: mahesha (Jul 27 2007 - 10:27am)
  • ಉ: Brahmins for Dummies By: Sunil Jayaprakash (Jul 19 2007 - 11:56am)
    • ಉ: Brahmins for Dummies By: ಶ್ಯಾಮ ಕಶ್ಯಪ (Jul 19 2007 - 3:25pm)
    • ಉ: Brahmins for Dummies By: kpbolumbu (Jul 19 2007 - 1:03pm)
      • ಉ: Brahmins for Dummies By: ಶ್ಯಾಮ ಕಶ್ಯಪ (Jul 19 2007 - 3:21pm)
        • ಉ: Brahmins for Dummies By: kpbolumbu (Jul 20 2007 - 4:07pm)
          • ಉ: Brahmins for Dummies By: ಶ್ಯಾಮ ಕಶ್ಯಪ (Jul 20 2007 - 6:14pm)
          • ಉ: Brahmins for Dummies By: mahesha (Jul 20 2007 - 4:33pm)
            • ಉ: Brahmins for Dummies By: mahesha (Jul 20 2007 - 4:39pm)
            • ಉ: Brahmins for Dummies By: kpbolumbu (Jul 20 2007 - 4:36pm)
              • ಉ: Brahmins for Dummies By: mahesha (Jul 20 2007 - 11:07pm)
  • ಉ: Brahmins for Dummies By: prapancha (Jul 19 2007 - 10:37am)
    • ಉ: Brahmins for Dummies By: mahesha (Jul 19 2007 - 11:38am)
      • ಉ: Brahmins for Dummies By: prapancha (Jul 19 2007 - 11:52am)
        • ಉ: Brahmins for Dummies By: mahesha (Jul 19 2007 - 12:02pm)
          • ಉ: Brahmins for Dummies By: obba.oduga (Jul 20 2007 - 10:09pm)
          • ಉ: Brahmins for Dummies By: prapancha (Jul 19 2007 - 12:09pm)
  • ಉ: Brahmins for Dummies By: muralihr (Jul 19 2007 - 12:10am)
    • ಉ: Brahmins for Dummies By: mahesha (Jul 19 2007 - 12:39am)
      • ಉ: Brahmins for Dummies By: hamsanandi (Jul 19 2007 - 1:34am)
  • ಉ: Brahmins for Dummies By: mahesha (Jul 18 2007 - 7:49pm)

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ಏಕೆ ಕರ್ನಾಟಕದೆಡೆಗೆ ತಾತ್ಸಾರ
    August 22, 2008 - 9:49am
  • uniquesupri
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 9:40am
  • Sunil Jayaprakash
    ಉ: ಅನುಭವ, ಅನುಭಾವ, ಅನುಭೂತಿ?
    August 22, 2008 - 9:33am
  • uniquesupri
    ಉ: ಎಲ್ಲ ತುಸುಹೊತ್ತು...
    August 22, 2008 - 9:22am
  • uniquesupri
    ಉ: ಯಾವ ಬೆಳಕಲ್ಲಿ ಮರೆಯಾದನೋ ಕೃಷ್ಣ!
    August 22, 2008 - 9:18am
  • savithasr
    ಉ: ಲಾಲಿ
    August 22, 2008 - 9:16am
  • Sunil Jayaprakash
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 9:14am
  • uniquesupri
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 9:12am
  • mahesha
    ಉ: ಅನುಭವ, ಅನುಭಾವ, ಅನುಭೂತಿ?
    August 22, 2008 - 8:56am
  • Sunil Jayaprakash
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 8:48am
ಇನ್ನಷ್ಟು


ಹಸಿವು ಒಂದು ರೋಗ ಎಂದು ತಿಳಿದುಕೋ. ಭಿಕ್ಷೆ ದೊರಕಿದುದನ್ನು ಔಷಢ ಎಂದು ಸೇವಿಸು. ಸಿಹಿಯನ್ನು ಬೇಡದಿರು. ದೊರೆತುದುದನ್ನು ಸೇವಿಸು. ರೋಗಕ್ಕೆ ಎಷ್ಟು ಪ್ರಮಾಣದ ಔಷಧ ಬೇಕೋ ಅಷ್ಟೇ ಆಹಾರ ಸೇವಿಸು. ಹೆಚ್ಚಲ್ಲ ಕಡಿಮೆಯಲ್ಲ.

— ಶಂಕರಾಚಾರ್ಯರು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator