ಉ: ನಾಡ ನುಡಿಯ ಮೇಲೆ ಪಿರುತಿ ಖಂಡಿತಾ ಇರಲಿ....
- ಉ: ನಾಡ ನುಡಿಯ ಮೇಲೆ ಪಿರುತಿ ಖಂಡಿತಾ ಇರಲಿ.... By: mahesha (Jul 28 2007 - 10:14pm)
- ಉ: ನಾಡ ನುಡಿಯ ಮೇಲೆ ಪಿರುತಿ ಖಂಡಿತಾ ಇರಲಿ.... By: mahesha (Jul 28 2007 - 11:15pm)
- ಉ: ನಾಡ ನುಡಿಯ ಮೇಲೆ ಪಿರುತಿ ಖಂಡಿತಾ ಇರಲಿ.... By: Aram (Jul 29 2007 - 12:27am)
- ಉ: ನಾಡ ನುಡಿಯ ಮೇಲೆ ಪಿರುತಿ ಖಂಡಿತಾ ಇರಲಿ.... By: mahesha (Jul 29 2007 - 1:51am)
- ಉ: ನಾಡ ನುಡಿಯ ಮೇಲೆ ಪಿರುತಿ ಖಂಡಿತಾ ಇರಲಿ.... By: Aram (Jul 29 2007 - 12:27am)
- ಉ: ನಾಡ ನುಡಿಯ ಮೇಲೆ ಪಿರುತಿ ಖಂಡಿತಾ ಇರಲಿ.... By: mahesha (Jul 28 2007 - 11:15pm)
- ಉ: ನಾಡ ನುಡಿಯ ಮೇಲೆ ಪಿರುತಿ ಖಂಡಿತಾ ಇರಲಿ.... By: ವೈಭವ (Jul 28 2007 - 8:55pm)

RSS:
ಉ: ನಾಡ ನುಡಿಯ ಮೇಲೆ ಪಿರುತಿ ಖಂಡಿತಾ ಇರಲಿ....
"...ಆಂಡಯ್ಯನ ಅಚ್ಹ ಕನ್ನಡದ "ಕಬ್ಬಿಗರ ಕಾವ" "ಸುದ್ದ" ಕನ್ನಡದ ಮೊದಲನೇಯ ಹಾಗೂ ಕೊನೆಯ (?) ಬರಹ..."
ಅಲ್ಲ. ಕೊಳಂಬೆ ಪುಟ್ಟಣೇಗೌಡರು(ಕಾಲೂರ ಚೆಲುವೆ, ತಿಳಿಗನ್ನಡ ನುಡಿವಣಿಗಳು, ಅಚ್ಚಗನ್ನಡ ನುಡಿಗಂಟು) , ಮುಳಿಯ ತಿಮ್ಮಪ್ಪಯ್ಯನವ್ರು(ಸೊಬಗಿನ ಬಳ್ಳಿ) ಅಚ್ಚ-ಕನ್ನಡದಲ್ಲಿ ಬರೆದಿದ್ದಾರೆ. ಕನ್ನಡದ ಹಲವು ಗಾದೆಗಳು, ವಚನಗಳು, ದಾಸರಪದಗಳು ಇವುಗಳಲ್ಲಿ ಅಚ್ಚ-ಕನ್ನಡ ಪದಗಳು ಅತ್ವ ಕನ್ನಡ ಸೊಗಡಿಗೆ ಹೊಂದುವ ಒರೆ/ಪದಗಳು ಹೆಚ್ಚು. ಅದರಿಂದಲೇ ಇಂದಿಗೂ ಕೂಡ ಇವು ಮಂದಿ ನಾಲಿಗೆಯಲ್ಲಿ ನಲಿಯುತ್ತಿವೆ.
ಇನ್ನು ಏಟೋಂದು ಮಂದಿ ಬರೆದಿರಬಹುದು. ಹುಡುಕಬೇಕು.
"....ಮಾನ್ಯ GC (ಗಿರೀಶ ಚಂದ್ರ?) ರು ಈ ಪುಟಗಳಲ್ಲಿ ಇಂದು ಹೇಳಿದ ಹಾಗೆ ಭಾಷೆಯೊಂದು ಸಮೃದ್ಧವಾಗಿ ಬೆಳೆಯುವುದು ಅದು ಬೇರೆ ಭಾಷೆಗಳಿಂದ ಶಬ್ದಗಳನ್ನು ಎಗ್ಗಿಲ್ಲದೇ ಎತ್ತಿಕೊಳ್ಳುವುದರಿಂದ ಹಾಗೂ ಆ ಭಾಷೆಯನ್ನಾಡುವವರ ಅಪಾರವಾದ ಚಟುವಟಿಕೆ, ಅನುಭವ (wealth of different activities) ಗಳಿಂದ...."
"....ನಮ್ಮ ರಾಷ್ಟ್ರಕವಿಗಳ ಬರಹಗಳಲ್ಲಿ ಬರುವ ಪದಗಳನ್ನೆಲ್ಲ ಎಣಿಸಿದರೆ, ಅವುಗಳಲ್ಲಿ ಅಚ್ಚಕನ್ನಡಪದಗಳೆಷ್ಟು, ಸಂಸ್ಕ್ರತಪದಗಳೆಷ್ಟು?
ರಾಷ್ಟ್ರಕವಿ ಎಂದೇ ಏಕನ್ನಬೇಕು, ನಾಡಕಬ್ಬಿಗ ಎಂದು ಏಕನ್ನುತ್ತಿಲ್ಲ?...."
ಹೌದು ನಾಡಕಬ್ಬಿಗ ಅನ್ನಬೇಕು ಅದೇ ಸರಿ. ಕನ್ನಡಿಗರ ಅತೀ ಸಕ್ಕದ ಬಗೆಗಿನ ಒಲವಿಂದ ಹೀಗಾಗಿದೆ. ಇದರಿಂದ ಕನ್ನಡ ತನ್ನ ಸೊಗಡನ್ನು ಕಳೆದುಕೊಳ್ಳುತ್ತಿದೆ. ಮಾತು ಹಲವು ಮಂದಿಗೆ ಕನ್ನಡ ಕಬ್ಬಿಣದ ಕಡಲೆಯಾಗುತ್ತದೆ.
ದಿಟ. ಆದರೆ ಬೇರೆ ನುಡಿಗಳಿಂದ ಒರೆಗಳನ್ನು/ಪದಗಳನ್ನು ತೆಗೆದುಕೊಳ್ಳುವಾಗ ನಮ್ಮ ನಾಲಿಗೆಗೆ, ಬುಡಕಟ್ಟಿಗೆ/nativity ಹೊಂದಿಕೊಳ್ಳುವಂತೆ ಮಾರ್ಪಾಟು ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಆ ನುಡಿ ಅಳಿಯುವುದು ನಿಜ.
ಮಾದರಿ : bus - ಬಸ್ಸು, car- ಕಾರು, ಬ್ರಹ್ಮ-ಬೊಮ್ಮ, ಪಶು-ಹಸು .....ಹೀಗೆ
ಇನ್ನೊಂದು ದಿಟವಾದ ಮಾತು:- ನಮ್ಮ ನಾಡಿನ ೯೦% ಮಂದಿ ಮಾತಾಡುವಾಗ ಆಯ ಬುಡಕಟ್ಟಿನ ಮಾತೇ(ಅಚ್ಚ-ಕನ್ನಡ) ಹೆಚ್ಚಿರುತ್ತದೆ. ಮಾತಿನ ಕನ್ನಡದಲ್ಲಿ ಸಕ್ಕದ(ಸಂಸ್ಕ್ರುತ) ಕಡಿಮೆ. ಬರಹ ಕನ್ನಡದಲ್ಲಿ ಸಕ್ಕದ ಹೆಚ್ಚು.
ಹೆಚ್ಚಿನ ಅರಿವಿಗೆ ಡಿ.ಎನ್.ಶಂಕರಬಟ್ಟರ ಹೊತ್ತಿಗೆಗಳನ್ನು ಓದಿರಿ.
ಕೊಸರು : ಮುಳಿಯ ತಿಮ್ಮಪ್ಪಯ್ಯನವರು ಹೇಳಿದಹಾಗೆ 'ರಟ್ಟ' 'ರಾಷ್ಟ್ರ' ವಾಗಿದಿಯಂತೆ.
ಮಾದರಿ: ರಾಷ್ಟ್ರಕೂಟರು ಮೊದಲು 'ರಟ್ಟಕೂಟ', 'ರಟ್ಟಕೂಡಲ್' ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದರು.