ಉ: ನಾಡ ನುಡಿಯ ಮೇಲೆ ಪಿರುತಿ ಖಂಡಿತಾ ಇರಲಿ....
- ಉ: ನಾಡ ನುಡಿಯ ಮೇಲೆ ಪಿರುತಿ ಖಂಡಿತಾ ಇರಲಿ.... By: mahesha (Jul 28 2007 - 10:14pm)
- ಉ: ನಾಡ ನುಡಿಯ ಮೇಲೆ ಪಿರುತಿ ಖಂಡಿತಾ ಇರಲಿ.... By: mahesha (Jul 28 2007 - 11:15pm)
- ಉ: ನಾಡ ನುಡಿಯ ಮೇಲೆ ಪಿರುತಿ ಖಂಡಿತಾ ಇರಲಿ.... By: Aram (Jul 29 2007 - 12:27am)
- ಉ: ನಾಡ ನುಡಿಯ ಮೇಲೆ ಪಿರುತಿ ಖಂಡಿತಾ ಇರಲಿ.... By: mahesha (Jul 29 2007 - 1:51am)
- ಉ: ನಾಡ ನುಡಿಯ ಮೇಲೆ ಪಿರುತಿ ಖಂಡಿತಾ ಇರಲಿ.... By: Aram (Jul 29 2007 - 12:27am)
- ಉ: ನಾಡ ನುಡಿಯ ಮೇಲೆ ಪಿರುತಿ ಖಂಡಿತಾ ಇರಲಿ.... By: mahesha (Jul 28 2007 - 11:15pm)
- ಉ: ನಾಡ ನುಡಿಯ ಮೇಲೆ ಪಿರುತಿ ಖಂಡಿತಾ ಇರಲಿ.... By: ವೈಭವ (Jul 28 2007 - 8:55pm)



RSS:
ಉ: ನಾಡ ನುಡಿಯ ಮೇಲೆ ಪಿರುತಿ ಖಂಡಿತಾ ಇರಲಿ....
ನೀವು ಹೇಳಿದ್ದರಲ್ಲಿ ಹೆಚ್ಚಿನವು ಈ ಸಂಗತಿಗೆ ಯಾವ ಕೊಡುಗೆ ನೀಡಲ್ಲ. ಅದಕ್ಕೆ ಅವನ್ನು ಕೆದಕಿದರೇ ಎಲ್ಲೆಲ್ಲೋ ಮಾತು ಹೋಗುವುದು.
ಇಲ್ಲಿ ಯಾರೂ ( ನಾನು+ವೈಬವ) ತೆಗಳಿಲ್ಲ.!
ಆದರೆ ಖಂಡನೆ ಇದೆ, ಅದಕ್ಕೆ ಓಸುಗರಗಳು ಹೇಳಾಗಿದೆ.
ಆಂಡಯ್ಯ/ಅಂಡಯ್ಯ ಹೆಸರು ಬಗ್ಗೆ ಅರಿಮೆಗೆ -> http://dli.iiit.ac.in/cgi-bin/Browse/scripts/use_scripts/advnew/aui/book... ಹೊತ್ತಗೆಯಲ್ಲಿ ಪುಟ ೧೯/೨೦. DLI ಅಲ್ಲಿ 23/24.
ಗಮನಿಸಿರಿ ನಾನು "ಆಂಡಯ್ಯ" ಇದು ತಪ್ಪು ಎಂದಿಲ್ಲ!!
ಇಲ್ಲಿ "ಮುದ್ರಾರಾಕ್ಷಸ"ದ ಒತ್ತು ಬರೀ ಸಂಸ್ಕೃತ ಓದಿದವರಿಗೆ ಅರಿಯುವುದು. ಇದೂ ಕೂಡ ಒಂದು ಬಗೆಯ sanskritized ಕನ್ನಡ. ಮಾದರಿ ಕೊಟ್ಟರೂ, ಹೋಲಿಕೆ ಕೊಟ್ಟರೂ, ಇಲ್ಲವೇ ಒರೆಗಳ ಕೂಟೇ ಆಟವಾಡಿದರೂ ಅದು ಸಂಸ್ಕೃತಕ್ಕೆ ಒಯ್ಯಬೇಕು.
ಇಲ್ವೇ ನಿಮಗೆ ’ಮುದ್ರಾರಾಕ್ಷಸ’ ಏನೆಂದು ಗೊತ್ತಿಲ್ಲದೇ, ಯಾರೋ ಹೇಳಿದನ್ನ ಇಲ್ಲಿ ಹೇಳಿರುವಿರಿ.!!
ಇದಕ್ಕೆ ಇನ್ನು ಕೆಲವು ಮಾದರಿಗಳು ಕನ್ನಡದಲ್ಲಿ,
=>"ಆಹಾ ಕಾಳಿದಾಸನಂತಹ ಬರಹ"( ಅಂದರೆ ಕಾಳಿದಾಸನೆಂಬವನು ಮೇಲ್ಮಟ್ಟದ ಕಬ್ಬಿಗ, ಆದರೆ ಅವನು ಸಂಸ್ಕೃತದ ಕಬ್ಬಿಗ ). ಗಮನಿಸಿರಿ, ನಾವು ಹೆಚ್ಚೆಚ್ಚು ಸಂಸ್ಕೃತದ ಕಬ್ಬಗಳ ಹೆಸರನ್ನು, ಸಂಸ್ಕೃತದ ಕಬ್ಬಿಗ ಹೆಸರನ್ನು ಹೇಳಿ ಸಂಸ್ಕೃತಬಲ್ಲೆವಂತು ತೋರಿಸಿಕೊಳ್ಳೋದು!
ಅಲ್ಲಿ ಕಟು ಏನು? ನಾನು ನೇರವಾಗಿ ಹೇಳಿದ್ದೀನಿ! ನನಗೆ ಕಸ್ಟ ಆಯಿತು ಎಂದು ನಿಮಗೆ ಹೇಗೆ ತಿಳಿಯಿತು?
ಒಂದು ಗೊತ್ತು "ಕಷ್ಟ ತೆಗೆದುಕೋ" ಎಂದು ಹೀಗೆ ಹೇಳೋದು ಕನ್ನಡದೋರಲ್ಲ, ಹಿಂದಿಯವರು.( ಇದು ನಿಮಗೆ ಗೊತ್ತಿದ ಅಂತ ಅಂದುಕೊಳ್ಳೋಣ )
ಬರೀ ಸಂಸ್ಕೃತದ ಪದಗಳನ್ನು ಬಳಸಿದಕ್ಕೆ ಅದರಲ್ಲಿ ಗಟ್ಟಿತನ ಬರಲ್ಲ. ನನಗೆ ಅನ್ನಿಸಿದ್ದು ನೀವು ಏಸೋ ಸಂಸ್ಕೃತ ಪದಗಳನ್ನ ಬರೀ ಸಿಂಗಾರಕ್ಕೆ ಬಳಸಿದ್ದೀರಿ ಅಂತ ನನ್ನ ಅನಿಸಿಕೆ. ಈ ಮಾತು ನಿಮ್ಮ
ಈ ಮಾತಿನ ಹಿಂದೆ ದಿಟವಾದ ಅನಿಸಿದೆ ಎಂದು ಸಲಿಗೆಯಿಂದ ಹೇಳಿದ್ದು. ಇಲ್ಲಿ ಅಪ್ಪಣೆಯನ್ನು ಕೇಳವುದು ಬೇಕಿರಲಿಲ್ಲ.
ಒಹೋ, ಹಾಗೋ, ಸರಿ, ಹಾಗಾದರೆ ಇಂತಹ ಇಕ್ಕಟಿನ ಸಂಗತಿಗಳ ಬಗ್ಗೆ ತುಸು ಉಂಕು ನಡೆಸಿ ಬರೆಯಬೇಕು. ಸುಮ್ನೆ ತೇಲಿಸಿ ಬಿಡಲು ಇವೆಲ್ಲ ಹಗೂರವಾದವಲ್ಲ. ನಮ್ಮಂತೆ ಹಲವರ ತಾಯ್ನುಡಿ ಮಾತು. ನಮ್ಮ ತಾಯ್ನುಡಿಯ ಯಾವ ಸಂಗತಿಯೂ ಹಗೂರವಲ್ಲ.
ಹಿಡಿತಕ್ಕೆ ಬರೆಯಲು ಬೇಕಾದ ಅನಿತ್ತು ಸರಕಿದೆ.
ನಾನು ನಿಮ್ಮ ಮೇಲೆ ದಾಳಿಯಿಟ್ಟಂತೆ ಎರಗಿದ್ದೇನೆ ಎಂದು ಅನ್ನಿಸಿದರೆ, ಹಾಗೆ ಅಂದುಕೊಳ್ಳಬೇಡಿರಿ. ನನಗೆ ಸುಮ್ಮಸುಮ್ಮನೇ ಟೊಳ್ಳುಟೊಳ್ಳಾಗಿ "ಹೀಗೆ ಕನ್ನಡದಲ್ಲಿ ಒರೆಗಳೇ ಇಲ್ಲ, ಕನ್ನಡ practical ಅಲ್ಲ. ಅದಕ್ಕೆ ನಮ್ಮ ಕನ್ನಡದ ’ಸಮೃದ್ಧಿ’ಗೆ, ಬೇರೆ ಯಾವುದೋ ನುಡಿಯ ಬಳಿ ತಿರುಪೆ ಎತ್ತಬೇಕು, ಅದರಿಂದ ಒರೆ ಎರವಲು ಪಡೆಯಬೇಕು" ಅನ್ನೋದು, ನಮ್ಮ ಗಟ್ಟಿ ಮತ್ತು ಒರೆಸಿರಿ, ಕಬ್ಬಸಿರಿಯಿಂದ ತುಂಬಿ ತುಳುಕುತ್ತಿರುವ ಕನ್ನಡದ ಕಳೆಗುಂದಿಸುವ ಕೆಲಸವೆನಿಸುವುದು. ಮೊದಲೇ ಹೇಳಿದಂತೆ ಇದು ನಮ್ಮ ತಾಯ್ನುಡಿಯ ಹೆಮ್ಮೆಯ ಸಂಗತಿ, ಇದು ನಯ/ಸೂಕ್ಷ.
ಮತ್ತೆ ಹೇಳುವೆನು, ನಾವು ನಿಮ್ಮನ್ನು ತೆಗಳಿಲ್ಲ!
ಆದರೆ ನೀವು ಅಂಡಯ್ಯನ ’ಕಬ್ಬಿಗರ ಕಾವ’ವನ್ನು ಮತ್ತು ಬೇರೆ ಅಚ್ಚ-ಕನ್ನಡ ಕಬ್ಬಗಳನ್ನು ಹಗೂರವಾಗಿ ಕಂಡು, ಕೀಳುಗಾಣಿಸಿದಂತೆ ಮಾಡಿದ್ದೀರಿ ಎಂದು ನಮಗೆ ಅನ್ನಿಸಿದಂತೂ ದಿಟ.!!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !