ಉ: ಅಜ್ಞಾನದ ಪರೀಕ್ಷೆಯಲ್ಲ, ನನಗಾದ ದಿಗ್ಭ್ರಮೆ
- ಉ: ವಚನ ಚಿಂತನ: ಈ ವಚನವನ್ನು ಅರ್ಥಮಾಡಿಕೊಳ್ಳುವುದು ಹೇಗೆ? By: ಸಂಗನಗೌಡ (May 21 2008 - 5:48pm)
- ಉ: ವಚನ ಚಿಂತನ: ಈ ವಚನವನ್ನು ಅರ್ಥಮಾಡಿಕೊಳ್ಳುವುದು ಹೇಗೆ? By: kannadakanda (May 21 2008 - 3:04pm)
- ಉ: ವಚನ ಚಿಂತನ: ಈ ವಚನವನ್ನು ಅರ್ಥಮಾಡಿಕೊಳ್ಳುವುದು ಹೇಗೆ? By: sushil (May 12 2008 - 1:19pm)
- ಬಹುಶ: By: muralihr (Dec 24 2005 - 10:19am)
- ಹೆಚ್ಚಿನ ಪ್ರೇಮ By: tvsrinivas41 (Dec 23 2005 - 9:08pm)
- ಅಜ್ಞಾನದ ಪರೀಕ್ಷೆಯಲ್ಲ, ನನಗಾದ ದಿಗ್ಭ್ರಮೆ By: olnswamy (Dec 23 2005 - 10:31pm)
- ಕೆಲವೊಮ್ಮೆ ಹಾಗೆ By: tvsrinivas41 (Dec 24 2005 - 9:34am)
- ಅಜ್ಞಾನದ ಪರೀಕ್ಷೆಯಲ್ಲ, ನನಗಾದ ದಿಗ್ಭ್ರಮೆ By: olnswamy (Dec 23 2005 - 10:31pm)

RSS:
ಕೆಲವೊಮ್ಮೆ ಹಾಗೆ
ಕೆಲವೊಮ್ಮೆ ಹಾಗೆ ಆಗುವುದಂತೆ. ಎಷ್ಟೇ ಆಗಲಿ ಬಸವಣ್ಣನವರು ಕೂಡಲಸಂಗಮನ ಭಕ್ತರು. ಅವನ ಮೇಲಿನ ಅತೀವ ಪ್ರೇಮದಿಂದ ಹೀಗಂದಿರಬಹುದು.
ಕಾಲೇಜಿನಲ್ಲಿದ್ದಾಗ ಒಮ್ಮೆ (ಬಹುಶ: ೧೯೭೯ರಲ್ಲಿ), ಒಂದು ಪುಸ್ತಕ ಓದುತ್ತಿದ್ದೆ. ಅದರಲ್ಲಿ ತಿಳಿಸಿದಂತೆ,
ಮಹಾಭಾರತದಲ್ಲಿ ಅರ್ಜುನ ಕರ್ಣರ ವಾಗ್ಯುದ್ಧದಲ್ಲಿ ಅರ್ಜುನ ಕರ್ಣನನ್ನು ಕುಮಾರಿಯ ಮಗ ಎಂದು ಸಂಬೋಧಿಸುತ್ತಾನೆ. ಇವನಿಗೆ ಹೇಗೆ ಗೊತ್ತಿತ್ತು ಎಂಬ ಯೋಚನೆ ನನ್ನನ್ನು ಕಾಡಹತ್ತಿತು.
ನಾನು ಸಂಸ್ಕೃತದ ವಿದ್ಯಾರ್ಥಿ ಆಗಿದ್ದೆ. ನನ್ನ ಗುರುಗಳಾದ ಶ್ರೀ ಅನಂತರಂಗಾಚಾರ್ಯರನ್ನು ಕೇಳಿದೆ. ಅವರು ಕನ್ನಡದ ಬಗ್ಗೆ ಅಷ್ಟಾಗಿ ತಮಗೆ ತಿಳಿಯದೆಂದು ಕೇಶವಭಟ್ಟರನ್ನು ಕೇಳಿದರು. ಅವರು ಹೇಳಿದ್ದಿಷ್ಟೇ. ಬರಹಗಾರರು ಕೆಲವೊಮ್ಮೆ ಪೂರ್ವಾಗ್ರಹ ಪೀಡಿತರಾಗಿರುತ್ತಾರೆ. ಮನಸ್ಸಿನಲ್ಲಿ ಮುಂದಾಗುವುದು ಅಚ್ಚಳಿಯದೇ ಕುಳಿತಿದ್ದು, ತಿಳಿಯದಂತೆ ಇಂತಹ ಪದಗಳು ಬರುವ ಸಾಧ್ಯತೆ ಇದೆ. ಇದನ್ನು ತಪ್ಪು ಎಂದು ತಿಳಿಯಬೇಡ, ಎಂದಿದ್ದರು.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net