ಉ: ಕನ್ನಡದ ಅಳಿವು-ಉಳಿವು
- ಉ: ಕನ್ನಡದ ಅಳಿವು-ಉಳಿವು By: ವೈಭವ (Aug 29 2007 - 12:02pm)
- ಉ: ಕನ್ನಡದ ಅಳಿವು-ಉಳಿವು By: ಸಂಗನಗೌಡ (Aug 28 2007 - 11:26pm)
- ಉ: ಕನ್ನಡದ ಅಳಿವು-ಉಳಿವು By: createam (Aug 29 2007 - 9:19am)
- ಉ: ಕನ್ನಡದ ಅಳಿವು-ಉಳಿವು By: ಸಂಗನಗೌಡ (Aug 30 2007 - 12:23pm)
- ಉ: ಕನ್ನಡದ ಅಳಿವು-ಉಳಿವು By: mahesha (Aug 30 2007 - 1:06pm)
- ಉ: ಕನ್ನಡದ ಅಳಿವು-ಉಳಿವು By: Khavi (Aug 30 2007 - 1:42pm)
- ಉ: ಕನ್ನಡದ ಅಳಿವು-ಉಳಿವು By: hamsanandi (Aug 30 2007 - 9:53pm)
- ಉ: ಕನ್ನಡದ ಅಳಿವು-ಉಳಿವು By: mahesha (Aug 30 2007 - 10:09pm)
- ಉ: ಕನ್ನಡದ ಅಳಿವು-ಉಳಿವು By: mahesha (Aug 30 2007 - 2:23pm)
- ಉ: ಕನ್ನಡದ ಅಳಿವು-ಉಳಿವು By: ಶ್ರೀನಿವಾಸ ವೀ. ಬ೦ಗೋಡಿ (Aug 30 2007 - 1:53pm)
- ಉ: ಕನ್ನಡದ ಅಳಿವು-ಉಳಿವು By: mahesha (Aug 30 2007 - 2:22pm)
- ಉ: ಕನ್ನಡದ ಅಳಿವು-ಉಳಿವು By: hamsanandi (Aug 30 2007 - 9:53pm)
- ಉ: ಕನ್ನಡದ ಅಳಿವು-ಉಳಿವು By: Khavi (Aug 30 2007 - 1:42pm)
- ಉ: ಕನ್ನಡದ ಅಳಿವು-ಉಳಿವು By: mahesha (Aug 30 2007 - 1:06pm)
- ಉ: ಕನ್ನಡದ ಅಳಿವು-ಉಳಿವು By: gc (Aug 29 2007 - 9:41am)
- ಉ: ಕನ್ನಡದ ಅಳಿವು-ಉಳಿವು By: mahesha (Aug 29 2007 - 9:28am)
- ಉ: ಕನ್ನಡದ ಅಳಿವು-ಉಳಿವು By: ಸಂಗನಗೌಡ (Aug 30 2007 - 12:23pm)
- ಉ: ಕನ್ನಡದ ಅಳಿವು-ಉಳಿವು By: createam (Aug 29 2007 - 9:19am)
- ಉ: ಕನ್ನಡದ ಅಳಿವು-ಉಳಿವು By: mahesha (Aug 28 2007 - 10:47pm)


RSS:
ಉ: ಕನ್ನಡದ ಅಳಿವು-ಉಳಿವು
ಸಂಗನ!
ಕನ್ನಡದ ಅಳಿವು-ಉಳಿವು ಇರೋದು... ಸುಸಂಸ್ಕೃತರಿಂದಲ್ಲ, ಶಿಷ್ಟರಿಂದಲ್ಲ. ಕನ್ನಡದ ಉಳಿಯೋದು ನಮ್ಮ ಹಳ್ಳಿಗಾಡಿನ, ಬೆಟ್ಟಗಾಡಿನ ಮಂದಿಯಿಂದಲೇ. ನಾವು ಇಂದು ಹೊಟ್ಟೆಹೊರೆಯಕ್ಕೆ ಈ ಹೊಳಲಿಗೆ ಬಂದಿರಬೋದು, ಆದ್ರೆ ನಾವು ಈ ಸೋಗಿನ ಸುಸಂಸ್ಕೃತರಾಗಬೇಕಿಲ್ಲವಲ್ಲ.
ನಮ್ಮ ಕನ್ನಡವೇ ಸವಿಗನ್ನಡ. ನಮಗೆ ಐತೆ, ಅವೆ, ಮಾಡಕ್ಕಿಲ್ಲ ಇವೇ ಬೇಕು, ಅಂತ ನಾವು ನಮ್ ನಮ್ ಕನ್ನಡವನ್ನು ಆಡಿಕೊಂಡು ಇದ್ರೆ, ಕನ್ನಡ ಉಳಿತಯ್ತೆ. ಯಾವ ಸರಕಾರದ ಹೆಸರಹಲಗೆಯಲ್ಲಿ ಕನ್ನಡ ಐತೆ? ದಿಟವಾಗಿ ಇವೊತ್ತು ಕನ್ನಡ ಇರೋದೇ ಮಂದಿ ಬಾಯಲ್ಲಿ ಹೊರತು ಸರಕಾರದಿಂದ ಕನ್ನಡ ಉಳಿತಯ್ತೆ ಅನ್ನೋದು ದೊಡ್ಡ ಮರಳು.
ನಮ್ ಹಳ್ಳಿ ಮಂದಿ ಎಲ್ಲವನ್ನು ಬರೀ ಕನ್ನಡದಲ್ಲೇ ಹೇಳ್ತಾರಲ್ಲ, ಅವರಿಗೆ ಯಾರಪ್ಪ ಹೇಳಿಕೊಟ್ರೂ ಆ ಜಾಣತನವಾ? ಈ ಹೊಳಲೊರಿಗೇ ಇಂಗ್ಲೀಸು ಸಕ್ಕದ ಇಲ್ದೇ ಮಾತಾಡಕ್ಕೇ ಆಗಕ್ಕಿಲ್ವಂತೆ. ಅದನ್ನೆ ದೊಡ್ಡಸ್ತಿಕೆ ಅಂತ ಸೋಗು ಹೊಡೆದುಕೊಂಡು ತಿರ್ಗ್ತಾರೆ, ಇವರೇ ಎಲ್ಲಾ ಟೀವಿ, ಸಿನಿಮ, ಬರಹದಾಗೂ ಮೆರೆಯೋರು. ಆದ್ರೆ ಕೆಲವು ಬರಹಗಾರರು ಬರೀ ಕನ್ನಡವನ್ನೇ ಹಚ್ಚಾಯ ಬಳಸಿ ಚಂದವಾಗೇ ಬರೆದವ್ರೆ, ಮಾದರಿಯಾಗಿ ಶಿ.ರಾ.ಕಾರಂತರು... ಬರೀ ಕನ್ನಡದಲ್ಲೇ ಎಲ್ಲ ಬರೆಯಕ್ಕೆ ಆಯ್ತದೆ, ಯಾಕೆ ಆಗಕ್ಕಿಲ್ಲ. ಈ ಬೆಂಗಳೂರೊರಿಗೆ ಹಂಗೆ ಬರೆಯಕ್ಕೆ ಬರಕ್ಕಿಲ್ಲ, ತಮ್ಮ ಅರಿವಿನ ಕೊರೆತೆಯಿಂದ, ಕನ್ನಡದಲ್ಲೇ ಕೊರೆತೆ ಐತೆ ಅಂತಾರೆ.
ಮೊನ್ನೆ ನಮ್ ಮನೆಯಾಗೇ ಒಂದು ಸೀಡಿ ತಂದಿದ್ರು, "ಕನ್ನಡ ಶಿಷ್ಟ ಜಾನಪದ ಹಾಡುಗಳು" ಅಂತ. ಅದರಾಗೆ ಈ ಬೀಮನಮಾಸೆ, ಗವರೀ ಹಬ್ಬ, ಮಂಗಳಗವರೀ ರೊತ, ಈ ಹಬ್ಬಗಳಲ್ಲಿ ಹಾರ್ಬರ ಹೆಂಗಸರು ಹೇಳೋ ಹಾಡುಗಳವು. ಇದರ ಹೆಸರನ್ನು ನೋಡಿ ಕೆಂಡಕೆಂಡ ಆದ ನನ್ ಚಿಕ್ಕಪ್ಪನ ಮಗ "ಲೋ ಮಾಯ್ಸ, ನೋಡಿ ಈ ನನ್ ಮಕ್ಳು ಈ ಹಾಡುಗಳನ್ನ ಶಿಷ್ಟ ಜಾನಪದ ಅಂದ್ರೆ, ಮಿಕ್ಕವು ಏನು ಶಿಷ್ಟವಲ್ಲದ ಅಶಿಷ್ಟವೇ?" ಅಂದ ಉರಿತಿದ್ದ.... ನಾನು ಅವನಿಗೆ "ನೋಡಲಾ, ಅದು ಹಂಗೇಯ, ಅದಕ್ಕೆಲ್ಲ ಸುಮ್ನೆ ತಲೆಗೆಡಿಸ್ಕೋ ಬಾರ್ದು, ಈ ಹಾಡುಗಳನ್ನು ಬೇಕಾದ್ರೆ ಪರಮಶಿಷ್ಟಜಾನಪದ ಅಂದುಕೊಳ್ಳಿ, ಆದ್ರೆ ಇದನ್ನ ಕೇಳೋರು ಏಟ್ ಮಂದಿ ಅವ್ರೆ, ಯಾವಾಗ್ಲೂ ನಮ್ ಚಲ್ಲಿದರೋ ಮಲ್ಲೀಗೆಯಾ, ನಿಂಬೇಯ ಬನದ ಮ್ಯಾಗಣ, ಈ ಹಾಡೇ ನಡೆಯೋದು. ಸುಮ್ನೆ ಬೆರಳೆಣಿಕೆಯಸ್ಟು ಮಂದಿ ತಮ್ದೇ ಶಿಷ್ಟ, ತಮ್ದೇ ದೊಡ್ದು, ಅಂದ್ರೆ, ಅಂದಕೊಳ್ಳಿ, ಬ ಬಾ. ಅವ್ರು ಅಂದ್ರು ಅಂತ ಅದು ದಿಟವಾಯ್ತದ?" ಅಂದು ತಣ್ಣಗೆ ಮಾಡ್ದೆಂ.
ಮಾಸ್ತಿಯವರ ಗೌಡರ ಮಲ್ಲೀ ಓದ್ತಾ ಇವ್ನಿ.. ಅಚ್ಚಗನ್ನಡದ ನೆಲದ ನರುಗಂಪಿನ ಇಂಪಿದೆ.